Homeಅಂಕಣಗಳುಎಲೆಮರೆವಿದೇಶದಲ್ಲಿ ತೊಗಲುಗೊಂಬೆಯಾಟ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ ಕಿಳ್ಯೇಕ್ಯಾತರ ಭೀಮವ್ವ!

ವಿದೇಶದಲ್ಲಿ ತೊಗಲುಗೊಂಬೆಯಾಟ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ ಕಿಳ್ಯೇಕ್ಯಾತರ ಭೀಮವ್ವ!

ಭೀಮವ್ವ ಈಗಲೂ ಇನ್ನೂರು ವರ್ಷದ ಹಳೆಯ ತೊಗಲುಗೊಂಬೆಗಳನ್ನು ಸಂರಕ್ಷಿಸಿದ್ದಾರೆ. ರಾಮಾಯಣ, ಮಹಾಭಾರತ ಕುರಿತ ಪ್ರಸಂಗಗಳನ್ನು ಭೀಮವ್ವ ನೆನಪಿನಿಂದ ಈಗಲೂ ಹಾಡುತ್ತಾರೆ. ಗೊಂಬೆಗಳ ಲಯಕ್ಕೆ ತಕ್ಕ ಹಾಗೆ ಹಾಡಿಕೆಯನ್ನು ಹೊಂದಿಸಬೇಕು. ಇದೊಂದು ಸೂಕ್ಷ್ಮವಾಗ ಕಲೆ. ಇಂತಹ ಕಲೆಯ ಎಲ್ಲಾ ವಿಭಾಗಗಳಲ್ಲೂ ಭೀಮವ್ವನಿಗೆ ಪ್ರಾವಿಣ್ಯತೆಯಿದೆ.

- Advertisement -
- Advertisement -

ಎಲೆಮರೆ-42

  • ಅರುಣ್‌ ಜೋಳದ ಕೂಡ್ಲಿಗಿ

ಕೊಪ್ಪಳದ ಮಿತ್ರ ಮಂಜುನಾಥ ಗೊಂಡಬಾಳ ತಮ್ಮ ‘ಬದಲಾವಣೆ’ ಪತ್ರಿಕೆಯಲ್ಲಿ ‘ದೇಶ ವಿದೇಶಗಳಲ್ಲಿ ತೊಗಲುಗೊಂಬೆ ಪ್ರದರ್ಶಿಸಿದ ಮಹಾನ್ ಕಲಾವಿದೆ’ ಎನ್ನುವ ಶೀರ್ಷಿಕೆಯಲ್ಲಿ 103 ವರ್ಷದ ಹಿರಿಯಜ್ಜಿ ಭೀಮವ್ವನ ಬಗ್ಗೆ ಪರಿಚಯಿಸಿದ್ದರು. ಕುತೂಹಲದಿಂದ ಅಜ್ಜಿಯ ಬಗ್ಗೆ ಮತ್ತಷ್ಟು ತಿಳಿದುಕೊಂಡೆ. ಈಚೆಗೆ ಜಾನಪದ ಅಕಾಡೆಮಿ ಅಧ್ಯಕ್ಷೆಯಾದ ಮಂಜಮ್ಮ ಜೋಗತಿಯವರು 2020 ರ ‘ಜಾನಪದ ಶ್ರೀ’ ಪ್ರಶಸ್ತಿಗೆ ಭೀಮವ್ವನನ್ನು ಆಯ್ಕೆ ಮಾಡಿದ್ದು ಖುಷಿಕೊಟ್ಟಿತು. ಗಂಡುಪಾರಮ್ಯದ ಕಲೆಗಳಲ್ಲಿ ಹೆಣ್ಣುಮಕ್ಕಳು ತಮ್ಮದೇ ಛಾಪು ಮೂಡಿಸುವುದು ಜನಪದ ಕಲೆಗಳಲ್ಲಿ ವಿರಳ. ತೆರೆ ಮರೆಯಲ್ಲಿರುವುದೇ ಹೆಚ್ಚು. ಕಿಳ್ಳೇಕ್ಯಾತ ಸಮುದಾಯದ ತೊಗಲುಗೊಂಬೆ ಕಲೆ ಏಕವ್ಯಕ್ತಿ ಪ್ರದರ್ಶಿಸುವ ಕಲೆಯಲ್ಲ. ಈ ಕಲೆಗೆ ಇಡೀ ಕುಟುಂಬವೇ ಪಾಲ್ಗೊಳ್ಳಬೇಕು. ಹಾಗಾಗಿ ಮಹಿಳೆಯರು ಚಿಕ್ಕ ಮಕ್ಕಳು ಕೂಡ ತೊಗಲುಗೊಂಬೆಯಾಟದಲ್ಲಿ ಪಾಲ್ಗೊಳ್ಳುತ್ತಾರೆ. ಈ ಕಾರಣದಿಂದಾಗಿ ವಿಶೇಷವಾಗಿ ಈ ಕಲೆಯಲ್ಲಿ ಮಹಿಳೆಯರು ಕಾಣಸಿಗುತ್ತಾರೆ.

ಕೊಪ್ಪಳದ ಇರಕಲ್ಲಗಡಾದ ಹನುಮಟ್ಟಿಯ ಸಂಜೀವಪ್ಪ ಹೊಳೆಯಮ್ಮರ ಮಗಳಾದ ಭೀಮವ್ವ, ಕೊಪ್ಪಳದಿಂದ 22 ಕಿ.ಮೀ ದೂರದ ಮೊರನಾಳದ ತೊಗಲುಗೊಂಬೆಯಾಟದಲ್ಲಿ ಆಗಲೆ ಪ್ರಸಿದ್ಧಿ ಪಡೆದಿದ್ದ ದೊಡ್ಡಬಾಳಪ್ಪ ಅವರನ್ನು ಮದುವೆಯಾಗುತ್ತಾರೆ. ತವರು ಮನೆಯಲ್ಲಿಯೂ ಭೀಮವ್ವ ತೊಗಲುಗೊಂಬೆ ಕಲೆಯನ್ನು ಬಾಲ್ಯದಿಂದಲೇ ಕಲಿತಿದ್ದರಿಂದ ಬಾಳಪ್ಪನ ಜತೆಗಿನ ಬಾಳುವೆಯಲ್ಲಿ ತೊಗಲುಗೊಂಬೆ ಕಲೆಯನ್ನು ಭೀಮವ್ವ ಮತ್ತಷ್ಟು ತನ್ಮಯತೆಯಿಂದ ಕಲಿಯುತ್ತಾಳೆ. ಇದರಿಂದ ಬಾಳಪ್ಪನ ತೊಗಲುಗೊಂಬೆಯಾಟದಲ್ಲಿ ಭೀಮವ್ವ ತನ್ನದೇ ಪಾತ್ರ ವಹಿಸುತ್ತಾಳೆ. ಹೀಗೆ ನಡೆದ ಜೀವನದಲ್ಲಿ ವಿರೂಪಾಕ್ಷಪ್ಪ, ಯಂಕಪ್ಪ, ಹಾಗೂ ಕೇಶಪ್ಪ ಮೂವರು ಮಕ್ಕಳಾಗುತ್ತಾರೆ. ಈ ಮೂವರೂ ತೊಗಲುಗೊಂಬೆಯಾಟ ಕಲಿಯುತ್ತಾರೆ. ಸೊಸೆಯಂದಿರೂ ತೊಗಲುಗೊಂಬೆಯಾಟದಲ್ಲಿ ತೊಡಗಿಕೊಳ್ಳುತ್ತಾರೆ. ಇದೀಗ ಅಜ್ಜಿಯ ಮೊಮ್ಮಕ್ಕಳಾದ ಶಿವಪ್ಪ, ಶಿವರಾಜ, ವಸಂತಕುಮಾರ್, ಪಾಂಡುರಂಗ, ರಮೇಶ್ ಹಾಗೂ ಪರುಶುರಾಮ ಎಲ್ಲರೂ ಗೊಂಬೆಯಾಟದಲ್ಲಿ ಪ್ರಾವಿಣ್ಯತೆ ಪಡೆದಿದ್ದಾರೆ. ಇದೀಗ ಮರಿ ಮೊಮ್ಮಕ್ಕಳನ್ನು ಪಡೆದ ಭೀಮಜ್ಜಿಯ ಮನೆಯಲ್ಲಿ ನಾಲ್ಕು ತಲೆಮಾರಿನ ಕಲಾವಿದರಿದ್ದಾರೆ.

ಈ ಅಜ್ಜಿಗೆ ಈಗ ನೂರಮೂರು ವರ್ಷ. ಶತಕ ಪೂರೈಸಿದ ಅಜ್ಜಿ ಈಗಲೂ ಖಡಕ್ ಆಗಿ ಮಾತನಾಡುತ್ತಾರೆ. ತಾನು ಬಾಳಪ್ಪನ ತಂಡದ ಭಾಗವಾಗಿ ವಿದೇಶದಲ್ಲಿ ತೊಗಲುಗೊಂಬೆಯಾಟ ಆಡಿಸಿದ್ದನ್ನು ಬೆರಗಿನಿಂದ ಕಣ್ಮುಂದೆ ಕಟ್ಟುವಂತೆ ವಿವರಿಸುತ್ತಾರೆ. 1992 ರಲ್ಲಿ ದೆಹಲಿಯಲ್ಲಿ ಸಂಗೀತ ಮತ್ತು ನಾಟಕ ಅಕಾಡೆಮಿಯವರಿಂದ ಅಂತರಾಷ್ಟ್ರೀಯ ಪೊಪೆಟ್ರಿ ಫೆಸ್ಟಿವೆಲ್ ನಡೆಯುತ್ತದೆ. ಈ ಸಂದರ್ಭದಲ್ಲಿ ಅತ್ಯುತ್ತಮ ಮತ್ತು ಪ್ರಾಚೀನ ಬೊಂಬೆಗಳಿರುವ ತಂಡಗಳನ್ನು ಕಳಿಸಲು ಜಾನಪದ ಮತ್ತು ಯಕ್ಷಗಾನ ಅಕಾಡೆಮಿಗೆ ಪತ್ರ ಬರುತ್ತದೆ. ಆಗ ರಿಜಿಸ್ಟ್ರಾರ್ ಆಗಿದ್ದ ಹಿ.ಚಿ.ಬೋರಲಿಂಗಯ್ಯ ಅವರು ಮೊರನಾಳದ ದೊಡ್ಡ ಬಾಳಪ್ಪ ಅವರ ತಂಡವನ್ನು ಆಯ್ಕೆ ಮಾಡಿ, ದೆಹಲಿಗೆ ಕರೆದುಕೊಂಡು ಹೋಗುತ್ತಾರೆ. ಈ ಫೆಸ್ಟಿವೆಲ್‍ಗೆ ಬಂದ ಯುರೋಪಿನ ಪ್ರಾನ್ಸ್ ದೇಶದ ಕಲ್ಚರ್ ಡುಮ್ಯಾಂಡೆ ಎನ್ನುವ ಸಂಸ್ಥೆಯವರು ದೊಡ್ಡ ಬಾಳಪ್ಪ ಅವರ ತಂಡವನ್ನು ಆಯ್ಕೆ ಮಾಡುತ್ತಾರೆ. ಆಗ ಪ್ರೊ.ಹಿ.ಚಿ.ಬೋರಲಿಂಗಯ್ಯ ಮತ್ತು ಮಂಗಳೂರಿನ ಉಪಧ್ಯಾಯ ಅವರು ದೊಡ್ಡಬಾಳಪ್ಪ ಅವರ ತಂಡವನ್ನು ಕರೆದುಕೊಂಡು ಹೋಗುತ್ತಾರೆ. ಯುರೋಪಿನ ಇಟಲಿ, ಪ್ರಾನ್ಸ್, ನೆದರ್ ಲ್ಯಾಂಡ್ಸ್ ಮೂರು ದೇಶಗಳಲ್ಲಿ ಬಾಳಪ್ಪನ ತಂಡ ಪ್ರದರ್ಶನ ಕೊಡುತ್ತದೆ.

ಈ ಯುರೋಪ್‍ನ ಪ್ರವಾಸದ ನಂತರ ಕೇಂದ್ರ ಸಂಸ್ಕೃತಿ ಇಲಾಖೆಯವರು ಇರಾನಿನ ತೆಹ್ರಾನ್ ನಲ್ಲಿ ನಡೆಯುವ ಅಂತರಾಷ್ಟ್ರೀಯ ಪೊಪೆಟ್ ಥಿಯೇಟರ್ ಫೆಸ್ಟಿವೆಲ್‍ಗೆ ದೊಡ್ಡ ಬಾಳಪ್ಪನವರ ತಂಡವನ್ನೆ ಆಯ್ಕೆ ಮಾಡುತ್ತಾರೆ. ಈ ಎಲ್ಲಾ ಪ್ರವಾಸದಲ್ಲಿ ಭೀಮವ್ವ ಹಾಡುಗಾರ್ತಿಯಾಗಿ ದೊಡ್ಡಬಾಳಪ್ಪನ ಜೊತೆ ಇರುತ್ತಾರೆ. ಪ್ರೊ.ಹಿ.ಚಿ. ಬೋರಲಿಂಗಯ್ಯ ಅವರು `ದೊಡ್ಡಬಾಳಪ್ಪ ಬಹಳ ಪ್ರತಿಭಾವಂತ ಕಲಾವಿದ. ತುಂಬಾ ಪ್ರಾಚೀನವಾದ ತೊಗಲು ಗೊಂಬೆಗಳನ್ನು ಸಂರಕ್ಷಿಸಿದ್ದರು. ಬಾಳಪ್ಪನ ಹೆಂಡತಿ ಭೀಮವ್ವನಿಗೆ ಒಳ್ಳೆಯ ಕಂಠವಿತ್ತು, ಅದ್ಭುತವಾಗಿ ಹಾಡುತ್ತಿದ್ದರು, ಇವರ ತಂಡವನ್ನು ಯೂರೋಪ್ ಮತ್ತು ಇರಾನ್‍ಗೆ ಕರೆದುಕೊಂಡು ಹೋಗಿ ಬಂದದ್ದಕ್ಕೆ ಖುಷಿ ಇದೆ’ ಎನ್ನುತ್ತಾರೆ. ಹೀಗೆ ಕೊಪ್ಪಳ ಸಮೀಪದ ಹಳ್ಳಿಯೊಂದರ ಭೀಮವ್ವ ವಿದೇಶಗಳಲ್ಲಿ ತೊಗಲುಗೊಂಬೆ ಕಲೆಯನ್ನು ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.

ಭೀಮವ್ವ ಈಗಲೂ ಇನ್ನೂರು ವರ್ಷದ ಹಳೆಯ ತೊಗಲುಗೊಂಬೆಗಳನ್ನು ಸಂರಕ್ಷಿಸಿದ್ದಾರೆ. ರಾಮಾಯಣ, ಮಹಾಭಾರತ ಕುರಿತ ಪ್ರಸಂಗಗಳನ್ನು ಭೀಮವ್ವ ನೆನಪಿನಿಂದ ಈಗಲೂ ಹಾಡುತ್ತಾರೆ. ಗೊಂಬೆಗಳ ಲಯಕ್ಕೆ ತಕ್ಕ ಹಾಗೆ ಹಾಡಿಕೆಯನ್ನು ಹೊಂದಿಸಬೇಕು. ಇದೊಂದು ಸೂಕ್ಷ್ಮವಾಗ ಕಲೆ. ಇಂತಹ ಕಲೆಯ ಎಲ್ಲಾ ವಿಭಾಗಗಳಲ್ಲೂ ಭೀಮವ್ವನಿಗೆ ಪ್ರಾವಿಣ್ಯತೆಯಿದೆ. ತೊಗಲುಗೊಂಬೆ ತಯಾರಿಕೆ, ಅದಕ್ಕೆ ಬೇಕಾದ ಸ್ಥಳೀಯ ಪರಿಕರಗಳನ್ನು ಬಳಸಿ ಬಣ್ಣಗಾರಿಕೆ ಮಾಡುವುದು, ತೊಗಲುಗೊಂಬೆ ಮಾಡಲು ಜಿಂಕೆ ಚರ್ಮವನ್ನು ಹದ ಮಾಡುವುದು, ಹೀಗೆ ತೊಗಲು ಗೊಂಬೆ ತಯಾರಿಕೆಗೆ ಬೇಕಾದ ದೇಸಿ ತಿಳಿವು ಅಜ್ಜಿಗಿದೆ. ಅದನ್ನು ಮಕ್ಕಳು ಮೊಮ್ಮಕ್ಕಳಿಗೂ ಕಲಿಸಿಕೊಟ್ಟಿದ್ದಾರೆ. ಇದೀಗ ಜಿಂಕೆಯ ಚರ್ಮದ ಕೊರತೆಯಿಂದಲೋ, ಅತಿಯಾದ ಶ್ರಮ ಮತ್ತು ಕೌಶಲ್ಯ ಬೇಡುವುದರಿಂದಲೋ ಅಜ್ಜಿಯ ಮೊಮ್ಮಕ್ಕಳು ಹೊಸ ತೊಗಲುಗೊಂಬೆಗಳನ್ನು ಮಾಡುವಲ್ಲಿ ಹಿಂದೆ ಸರಿದಿದ್ದಾರೆ. ತಮಗೆ ಹೊಸ ಗೊಂಬೆಗಳು ಬೇಕಾದರೆ ಆಂದ್ರದ ಅನಂತಪುರ, ಧರ್ಮಾವರಂ, ಹಿಂದೂಪುರ ಮೊದಲಾದ ಕಡೆಗಳಿಗೆ ಹೋಗಿ ದುಬಾರಿ ಬೆಲೆಕೊಟ್ಟು ತರುತ್ತಾರೆ. ಹೀಗಾಗಿ ಈ ಕುಟುಂಬ ತೊಗಲುಗೊಂಬೆಯ ತಯಾರಿಕೆಯ ಸ್ವಾಯತ್ತತೆಯಿಂದ ಇದೀಗ ಪರಾವಲಂಬಿಯಾಗಿದೆ.

ದೇಶದ ಹಲವೆಡೆ, ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಭೀಮವ್ವ ತೊಗಲುಗೊಂಬೆ ಕಲೆಯನ್ನು ಪ್ರದರ್ಶಿಸಿದ್ದಾರೆ. ಇದೀಗ ಮನೆಯಲ್ಲಿ ಮಕ್ಕಳು, ಮೊಮ್ಮಕ್ಕಳು ಕಲಾತಂಡಗಳಾಗಿ ದೇಶ, ರಾಜ್ಯದ ವಿವಿಧ ಭಾಗಗಳಲ್ಲಿ ತೊಗಲುಗೊಂಬೆ ಕಲೆಯನ್ನು ಪ್ರದರ್ಶಿಸುವ ಮೂಲಕ ಕಲೆಯನ್ನು ಜೀವಂತಗೊಳಿಸಿದ್ದಾರೆ. 2004 ರಲ್ಲಿ ಜಾನಪದ ಯಕ್ಷಗಾನ ಅಕಾಡೆಮಿಯು ಭೀಮವ್ವನಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. 2014 ರಲ್ಲಿ ಭೀಮವ್ವನ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದೆ. 2010 ರಲ್ಲಿ ಡಿಸೆಂಬರ್ 1 ರಿಂದ 5 ರ ತನಕ ರಾಷ್ಟ್ರೀಯ ಸಂಗೀತ ನಾಟಕ ಅಕಾಡೆಮಿ ಬೆಂಗಳೂರಿನಲ್ಲಿ ಆಯೋಜಿಸಿದ `ತೊಗಲುಗೊಂಬೆ ಪರಂಪರೆ’ ಕಾರ್ಯಕ್ರಮದಲ್ಲಿ ಈ ಕುಟುಂಬದ ನಾಲ್ಕೈದು ಜನ ಪ್ರತ್ಯೇಕ ತೊಗಲುಗೊಂಬೆ ಪ್ರಸಂಗಗಳನ್ನು ಪ್ರದರ್ಶನ ಮಾಡಿ ಗಮನ ಸೆಳೆದಿದ್ದರು. ಭೀಮವ್ವನ ದೇಶಿ ತಿಳಿವನ್ನು ಸಂಗ್ರಹಿಸುವ ಅಗತ್ಯವಿದೆ. ನೂರಾ ಮೂರು ವರ್ಷದ ಅಜ್ಜಿಯ ಆರೋಗ್ಯ ಚೆನ್ನಾಗಿರಲಿ, ಮತ್ತಷ್ಟು ಪ್ರದರ್ಶನ ನೀಡುವ ಚೈತನ್ಯ ಹೆಚ್ಚಲಿ ಎಂದು ಪತ್ರಿಕೆ ಆಶಿಸುತ್ತದೆ.


ಇದನ್ನು ಓದಿ: ಜೇನುಕುರುಬರ ಒಳಿತಾಗಿ ದುಡಿವ ಗಟ್ಟಿಗಿತ್ತಿ ಜಾನಕಮ್ಮ.. ಎಲೆಮರೆ-4

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...