Homeಅಂಕಣಗಳುಆಘಾತವಾಣಿ | `ಜೈಲೊಳಗೆ ಸ್ವೋಭುನಕ್ಕೆ ರೆಡಿ ಮಾಡಿ, ಆಮ್ಯಾಲೆ ನನ್ನ ಅರೆಸ್ಟ್ ಮಾಡ್ರುಲಾ’

ಆಘಾತವಾಣಿ | `ಜೈಲೊಳಗೆ ಸ್ವೋಭುನಕ್ಕೆ ರೆಡಿ ಮಾಡಿ, ಆಮ್ಯಾಲೆ ನನ್ನ ಅರೆಸ್ಟ್ ಮಾಡ್ರುಲಾ’

- Advertisement -
- Advertisement -
  • ಅಟ್ಯಾಕ್ ಹನ್ಮಂತ |

ನಮಸ್ಕಾರ ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ಅಟ್ಯಾಕ್ ಹನ್ಮಂತ.

ಕಣ್ಣಿಗೆ ಏನೇ ಕಂಡರೂ ಅದನ್ನು ಉದ್ಘಾಟನೆ ಮಾಡಿ ಪೋಟೋ ತಗೊಳ್ತೀನಿ ಅಂತ ಓಡೋಡಿ ಬರುವ ಮಾನ್ಯ ಪ್ರದ್ರಾನ ಮಂತ್ರಿ ‘ಪಕೋಡಪ್ಪ ಕುಂಡಾಲೇಂದ್ರ’ ಅವರು ಇತ್ತೀಚೆಗೆ ಒಂದು ವಿಶೇಷ ಉದ್ಘಾಟನೆಯಿಂದಾಗಿ ಮತ್ತೆ ಸುದ್ದಿಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಇವರುಗಳು ಕಳೆದ ತಮ್ಮ ಅಧಿಕಾರಾವಧಿಯಲ್ಲಿ ದೆಹಲಿಗೆ ಹೊಂದಿಕೊಂಡಂತೆ ನೂರಾರು ಕಿಲೋಮೀಟರ್‍ಗಳ ಎಕ್ಸ್‍ಪ್ರೆಸ್ ಹೈವೇ ನಿರ್ಮಿಸಿದ್ದರು. ಅದನ್ನು ತಮ್ಮ ವೈಯಕ್ತಿಕ ಪ್ರಚಾರಕ್ಕೆ ಬಳಸಿಕೊಳ್ಳುವ ಪ್ರತಿಭೆಯ ಕೊರತೆಯಿಂದಾಗಿ ಹಾಲಿ ವಿಫಲ ರಾಜಕಾರಣಿಗಳಾಗಿದ್ದಾರೆ. ಆದರೆ ಪಕೋಡೇಂದ್ರನ ಬಹುಮುಖ ಪ್ರತಿಭೆಗೆ ಮತ್ತೊಂದು ತಾಜಾ ನಿದರ್ಶನ ಇದೀ ವರದಿಯಾಗಿದೆ.. ದೆಹಲಿಯಿಂದ ಮೀರತ್ ನಡುವೆ ಜುಜುಬಿ 9 ಕಿಲೋಮೀಟರ್ ಎಕ್ಸ್‍ಪ್ರೆಸ್ ಹೈವೇಯನ್ನು ನಿರ್ಮಿಸಿ ‘ನಾನೇ ಮಾಡಿದ್ದು, ನಾನೇ ನಾನೇ..’ ಎಂದು ಕೂಗಾಡಿ ಕಿರುಚಾಡಿ ಫೋಟೋ ತಗೆಸಿ ಪ್ರಚಾರ ಮಾಡಿ ಕೊಂಡಿದ್ದಾರೆ. ಇಂಥದೊಂದು ಚಿಲ್ಲರೆ ಸುದ್ದಿಗಾಗಿಯೇ ಕಾದು ಕುಳಿತಿದ್ದ ಮೀಡಿಯಾಗಳು ಮಂತ್ರಕ್ಕಿಂತ ಉಗುಳನ್ನೇ ಹೆಚ್ಚಾಗಿ ಖರ್ಚುಮಾಡಿ ತಮ್ಮ ಖಾಲಿತಲೆಯನ್ನು ಪ್ರದರ್ಶನಕ್ಕಿಟ್ಟಿರುವುದು ವರದಿಯಾಗಿದೆ. ಈ ಸುದ್ದಿಯಿಂದ ಉತ್ತೇಜಿತನಾದ ಜಡೇಮಾಯಸಂದ್ರದ ಹಾಸ್ಯನಟ ಗಜ್ಜೇಶ್ ಅವರು, ತಮ್ಮ ‘ಮನೆಯ ಶೌಚಾಲಯಕ್ಕೆ ಹಾಕಿಸಿರೋ ಹೊಸ ಟೈಲ್ಸ್‍ಗಳು ಮತ್ತು ತಮ್ಮೂರಿನಲ್ಲಿ ಹೊಸದಾಗಿ ಹಾಕಿರುವ ರಸ್ತೆಉಬ್ಬುಗಳನ್ನು ಉದ್ಘಾಟಿಸಲು ಕ್ಯಾಮೆರಾ ಸಮೇತ ತಾವು ಬರಲೇಬೇಕೆಂದು’ ಪ್ರದಾನಮಂತ್ರಿ ‘ಪಕೋಡೇಂದ್ರ’ ಅವರನ್ನು ಬೇಡಿಕೊಂಡಿದ್ದಾರೆಂದು ವರದಿಯಾಗಿದೆ.

* * * *

ದೇಶದ ಬ್ಯಾಂಕ್‍ಗಳಲ್ಲಿ ಬೇಕಾಬಿಟ್ಟಿ ಸಾಲ ಮಾಡಿ ದೇಶ ಬಿಟ್ಟು ಓಡಿಹೋಗಲು ಸನ್ಮಾನ್ಯ ‘ಕುಂಡಾಲೇಂದ್ರ’ ಅವರು ಶುರು ಮಾಡಿರುವ ‘ಕುಣ್ಕೊಂಡ್ ಬನ್ನಿ ದೋಚ್ಕೊಂಡ್ ಓಡಿ’ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ 33 ಮಂದಿ ಕಾರ್ಪೊರೇಟ್ ಕಳ್ಳರು ತಾವು ಸಾಲ ಪಡೆದ ಬ್ಯಾಂಕುಗಳ ತಲೆಯನ್ನು ನುಣ್ಣಗೆ ಬೋಳಿಸಿ ದೇಶ ಬಿಟ್ಟು ಓಡಿ ಹೋಗಿರುವುದು ಹಳೆಯ ವಿಷಯ. ಈಗ ಈ ಯೋಜನೆಯಡಿಯಲ್ಲಿ ದೇಶಬಿಟ್ಟ ಮೊದಲಿಗರಾದ ಮಲ್ಯಪ್ಪನವರನ್ನು ಲಂಡನ್‍ನಿಂದ ವಾಪಸ್ಸು ಕಳಿಸಲು ಕುಂಡಾಲೇಂದ್ರ ಬ್ರಿಟನ್ ಸರ್ಕಾರವನ್ನು ಅಂಗಲಾಚಿ ಕೇಳಿಕೊಂಡಿದ್ದರು. ಇದಕ್ಕೆ ಮಲ್ಯಪ್ಪನವರು “ಇಂಡಿಯಾ ದೇಸುದ ಜೈಲ್‍ಗುಳಲ್ಲಿ ಸೊಳ್ಳೆಕಾಟ ಜ್ಯಾಸ್ತಿ, ನಿಂಬೆ ಶರ್ಬತ್ತಿನಷ್ಟು ಗಟ್ಟಿ ಸಾಂಬಾರ್ ಮಾಡ್ತಾರೆ, ಆಲೂಗಡ್ಡೆ ಪಲ್ಯುದ ಬದ್ಲು ಬೂಸ್ಟು ಹಿಡಿದ ಹಪ್ಪಳ ಕೊಡ್ತಾರೆ. ನಾನು ಇಂಥಾ ಇಂಡಿಯಾ ಜೈಲ್‍ಗುಳಿಗೆ ಹ್ವೋಗಲ್ಲ, ಮೊದ್ಲು ಆ ದೇಸುದ ಜೈಲುಗಳಲ್ಲಿ ಸಿಮ್ಮಿಂಗ್ ಫೂಲ್ ಕಟ್ಟುಸಿ, ತ್ರಿಬಲ್ ಬೆಡ್ರೂಂ ಜೈಲುಕ್ವಾಣೆಯೊಳಗೆ ನನ್ನ ಹೊಸ ಹೆಂಡ್ತಿ ಜ್ವತೆ ಶೋಭನ ಮಾಡ್ಕ್ಯನಕ್ಕೆ ಕುರ್ಲಾನ್ ಹಾಸಿಗೆ ವ್ಯವಸ್ಥೆ ಮಾಡಿ ಮುಗಿದ ಮ್ಯಾಲೆ ಬೇಕಾದ್ರೆ ನನ್ನುನ್ನ ಅರೆಸ್ಟು ಮಾಡಿ” ಎಂದು ಉತ್ತರಿಸಿದ್ದಾರಂತೆ. ಈ ಸಂಬಂಧ ಕುರ್ಲಾನ್ ಹಾಸಿಗೆಯ ಮೇಲೆ ಚೆಲ್ಲಲು ಮಲ್ಲಿಗೆಹೂವುಗಳ ಪೂರೈಕೆದಾರರರಿಗೆ ಕುಂಡಾಲೇಂದ್ರ ಟೆಂಡರ್ ಕರೆಯುತ್ತಾರಾ ಎಂದು ಜನರು ಕುಂಡೆ ಬಡಕೊಂಡು ನಗುತ್ತಿದ್ದಾರೆ ಎಂದು ವರದಿಯಾಗಿದೆ.

* * * *

ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಕೆಟ್ಟು ಕುಲಗೆಟ್ಟಿರುವ ಇವಿಎಂಗಳನ್ನು ಬಳಸಲಾಗಿದೆಯೆಂದು ಚುನಾವಣಾ ಅಭ್ಯರ್ಥಿಗಳು ಎಲೆಕ್ಷನ್ ಕಮಿಷನ್ನಿಗೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಉತ್ತರಿಸಿರುವ ಚುನಾವಣಾ ಆಯೋಗವು `ಆ ಸ್ಥಳಗಳಲ್ಲಿ ಟೆಂಪ್ರೇಚರ್ರು ಶ್ಯಾನೆ ಹೆಚ್ಚಾಗಿಹ್ವೋಗಿ ನಂ ಇವಿಎಂ ಮೆಷೀನುಗಳ ತಲೆಕೆಟ್ಟು, ಇದ್ದುಕ್ಕಿದ್ದಂತೆ ಹುಚ್ಚ್‍ನಾಯಿ ಕಚ್ಚುದಂಗೆ ಬಿಜೆಪಿಗೆ ವೋಟು ಹಾಕ್ತಾ ಕುಂತವೆ‘ ಎಂದೂ ವಿವರಣೆ ಕೊಟ್ಟಿದೆ. ವಾತಾವರಣದ ಉಷ್ಣಾಂಶ ಹೆಚ್ಚಾಗಿ ಮೊಬೈಲ್‍ಗಳು ಕೆಟ್ಟಿಲ್ಲ, ಕಂಪ್ಯೂಟರ್‍ಗಳು ಕೆಟ್ಟಿಲ್ಲ, ಟಿವಿ, ಮಿಕ್ಸಿ, ಟೇಪ್‍ರೆಕಾರ್ಡರಿನಂಥ ಎಲೆಕ್ಟ್ರಾನಿಕ್ ವಸ್ತುಗಳೂ ಕೆಟ್ಟ ಉದಾಹರಣೆಯಿಲ್ಲ. ಹೀಗಿರುವಾಗ ಇವಿಎಂಗಳು ಮಾತ್ರ ಉಷ್ಣಾಂಶಕ್ಕೆ ಹೆದರಿ ಯಾಕೆ ಉಚ್ಚೆ ಹುಯ್ದುಕೊಳ್ಳುತ್ತಿವೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ. ಇವನ್ನು ತಯಾರಿಸಿದ್ದು ಸರ್ಕಾರದ ಎಲೆಕ್ಟ್ರಾನಿಕ್ ಎಂಜಿನಿಯರ್‍ಗಳೋ ಅಥವ ಹಳೇಸೀಸ ಖಾಲಿ ಬಾಟ್ಲು ವ್ಯಾಪಾರಿಗಳೋ ಎಂದು ಜನರು ತಲೆ ಕೆರೆದುಕೊಳ್ಳುತ್ತಿದ್ದಾರೆ.

* * * *

ರೈತರ ಸಾಲ ಮನ್ನಾ ಮಾಡದಿದ್ರೆ ನಾವು ಕರ್ನಾಟಕ ಬಂದ್ ಮಾಡ್ತೀವಿ’ ಅಂತ ತಮ್ಮದೇ ತೊಡೆಯನ್ನು ತಟ್ಟಿಕೊಂಡು ಹೇಳಿದ ಧಡಿಯೂರಪ್ಪನವರು ನಂತರ ಕೈ ಪಕ್ಷವು ಕೋರ್ಟ್‍ಗೆ ಹೋಗಿ ಕೇಸಾಕ್ತೀವಿ ಎಂದು ಹೆದರಿಸಿದ ಮೇಲೆ.. ನಾನಂಗೆ ಹೇಳೇ ಇಲ್ಲ, ಮೋಸ್ಟ್ ಲಿ ನನ್ನ ಆತ್ಮ ದೇಹದಿಂದ ಪುಸುಕ್ ಅಂತ ಹೊರಬಂದು.. ಡೈಲಾಗ್ ಹೊಡೆದು ದಬುಕ್ ಅಂತ ಒಳಕ್ಕೆ ಹೋಗಿರಬೇಕು ಎಂದು ಪ್ಲೇಟ್ ಚೇಂಜ್ ಮಾಡಿಬಿಟ್ಟಿದ್ದರು. ಈ ಅವಾಂತರಗಳನ್ನು ಕಣ್ಣಾರೆ ಕಂಡ ಕರ್ನಾಟಕದ ಜನ ಬಂದನ್ನೇ ಬಂದ್ ಮಾಡಿ ಧಡಿಯೂರಪ್ಪನಿಗೆ ಮಣ್ಣುಮುಕ್ಕಿಸಿದ್ದಾರೆ. ಈ ಸಂದರ್ಭದಲ್ಲಿ ಮೈಸೂರಿನಲ್ಲಿ ವಿಶೇಷ ಚೇತನ ಮಾನಸಿಕ ಅಸ್ವಸ್ಥ ಪ್ರಪಾತ ಸಿಮ್ಮನನ್ನು ಅರೆಸ್ಟ್ ಮಾಡಿರುವ ಪೊಲೀಸರು.. ಸಿಮ್ಮನ ಎರಡೂ ಕಾಲುಗಳಿಗೆ ಹಗ್ಗ ಕಟ್ಟಿ, ಬಾಯಿಗೆ ಗೋಣಿಚೀಲ ತುರುಕಿ, ಎರಡೂ ಕಣ್ಣಿಗೆ ಪತಂಜಲಿ ಖಾರದಪುಡಿ ಎರಚಿ, ಫ್ಯಾನಿಗೆ ನೇತುಹಾಕಿ ನಾಯಿಗೆ ಹೊಡೆದಂತೆ ಇನ್ನೂ ಹೊಡೆದಿಲ್ಲವೆಂದು ವರದಿಯಾಗಿದೆ.

* * * *

ನಮ್ಮ ಪ್ರದ್ರಾನಮಂತ್ರಿ ಕುಂಡಾಲೇಂದ್ರ ವಿಶ್ವಬ್ಯಾಂಕಿನಿಂದ ನಯಾಪೈಸ ಸಾಲ ತೆಗೆದುಕೊಳ್ಳದೆ ಸರ್ಕಾರ ನಡೆಸುತ್ತಿದ್ದಾನೆಂದು ಮೋತಿಭಕ್ತರು ಊರಲ್ಲೆಲ್ಲ ಪುಂಗಿ ಊದುತ್ತಿರುವ ವರದಿಗಳು ವ್ಯಾಪಕವಾಗಿ ಕೇಳಿಬಂದಿವೆ. ಕೈಯಲ್ಲಿ ಪೊರಕೆ ಹಿಡಿದು, ಮುಖಕ್ಕೆ ಮೂರು ಇಂಚು ಮೇಕಪ್ಪು ರುಬ್ಬಿಕೊಂಡು ಟೊಯ್ಯಟೊಯ್ಯ ಎಂದು ಕಸಗುಡಿಸುವ ಡ್ರಾಮಾ ಮಾಡುತ್ತಿದ್ದ ಮೋತಿಜೀ, ಈ ಬಿಕನಾಸಿ ನಾಟಕವನ್ನು ಪತ್ರಿಕೆಗಳಲ್ಲಿ ಪ್ರಚಾರ ಮಾಡಲೂ ಸಹ ವಿಶ್ವಬ್ಯಾಂಕಿನಿಂದ ತಿರುಪೆ ಸಾಲ ತಂದಿದ್ದಾನೆಂದು ವಿಶ್ವಬ್ಯಾಂಕ್ ಮೂಲಗಳು ತಿಳಿಸಿವೆ. ಇಂಥಹ ಹಸಿಸುಳ್ಳುಗಳನ್ನೇ ಹೇಳುತ್ತ ತಿರುಗುತ್ತಿರುವ ಮೋತಿಜಿ ಮತ್ತು ಮೋತಿಭಕ್ತರನ್ನು ಜನರು ಅಟ್ಟಾಡಿಸಿಕೊಂಡು ಬಟ್ಟೆ ಹರಿದುಹೋಗುವಂತೆ ಬಡಿದು ನೆಲಕ್ಕೆ ಹಾಕಿ ತುಳಿಯಲು ಪ್ರಯತ್ನ ನಡೆಸಿರುವ ಘಟನೆ ಇನ್ನೂ ವರದಿಯಾಗಿಲ್ಲ.

* * * *

ಉತ್ತರಪ್ರದೇಶದ ಕಬ್ಬು ಬೆಳೆಯುವ ರೈತರಿಗೆ ಕೊಡಬೇಕಾದ 13 ಸಾವಿರ ಕೋಟಿ ಖರೀದಿ ಹಣವನ್ನು ಕೊಡದೆ ಮುಂಡಾ ಮೋಚಿರುವ ಜೋಗಿ ಪ್ಯಾದೇನಾತನ ಸರ್ಕಾರವು ಈ ಬಗ್ಗೆ ಪ್ರದ್ರಾನಮಂತ್ರಿಗೆ ಹಣಬಿಡುಗಡೆಗೆ ಕೇಳಿದಾಗ.. ಕುಂಡಾಲೇಂದ್ರನು..’ ಏನೂ ಹೆದರಬ್ಯಾಡ.. ಪಾಕಿಸ್ತಾನದಿಂದ ಸಕ್ಕರೆ ತರಿಸಿಕೊಂಡು ಉತ್ತರಪ್ರದೇಶದ ರೈತರ ಕಣ್ಣಿಗೆ ಮಣ್ಣುಸುಣ್ಣ ಎರಡನ್ನೂ ಮಿಕ್ಸ್ ಮಾಡಿ ಎರಚೋಣ’ಎಂದು ಭರವಸೆ ಕೊಟ್ಟಿದ್ದಾನೆ ಎಂದು ದೆಹಲಿಯಿಂದ ವರದಿ ಬಂದಿದೆ. ಅದರಂತೆ ಪಾಕಿಸ್ತಾನದಿಂದ 2 ಲಕ್ಷ ಟನ್ ಸಕ್ಕರೆ ಆಮದು ಮಾಡಿಕೊಂಡು ಉತ್ತರಪ್ರದೇಶದ ಕಬ್ಬುಬೆಳೆಗಾರರಿಗೆ ಈ ಅಲ್ಲಣ್ಣ-ಮಲ್ಲಣ್ಣ ಅಲಕ್ ಬುಲಕ್ ಜೋಡಿಯು ನಾಮ ಎಳೆದಿದೆ ಎಂದು ತಿಳಿದುಬಂದಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ಸಿಗೋಣ. ಬೈ ಟೇಕ್ ಕೇರ್..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...