Homeಅಂಕಣಗಳುದೇವೇಗೌಡ್ರು ಯಾವ ಜನಾಂಗನೂ ದ್ವೇಷ ಮಾಡಲ್ಲ

ದೇವೇಗೌಡ್ರು ಯಾವ ಜನಾಂಗನೂ ದ್ವೇಷ ಮಾಡಲ್ಲ

ಅದೊಂದು ಹಿರಿಯರು ಒಪ್ಪಿದ ಮದುವೆ. ಯಾಕೆಂದರೆ ಮನೆ ನಡೆದುಕೊಂಡು ಹೋಗಬೇಕು. ವಂಶಾಭಿವೃದ್ಧಿಯಾಗಬೇಕು. ಆ ವಂಶ ಊರಲ್ಲೆಲ್ಲಾ ಹರಡಬೇಕು.

- Advertisement -
- Advertisement -

ಅದೊಂದು ಹಿರಿಯರು ಒಪ್ಪಿದ ಮದುವೆ. ಯಾಕೆಂದರೆ ಮನೆ ನಡೆದುಕೊಂಡು ಹೋಗಬೇಕು. ವಂಶಾಭಿವೃದ್ಧಿಯಾಗಬೇಕು. ಆ ವಂಶ ಊರಲ್ಲೆಲ್ಲಾ ಹರಡಬೇಕು. ಕುಟುಂಬದ ವೈರಿಗಳು ನಿರ್ನಾಮವಾಗಬೇಕು. ಊರು ಅಭಿವೃದ್ಧಿಯಾಗಬೇಕು. ಇತ್ಯಾದಿ ಆಶಯಗಳೊಂದಿಗೆ ನಡೆದುಹೋದ ಬಲವಂತದ ಮದುವೆ. ಆದರೂ ಏಗಬೇಕಿದೆ. ಒಂದುವೇಳೆ ವಿಚ್ಛೇದನವಾದರೆ, ಅದನ್ನೆ ಕಾಯುತ್ತ ಕುಳಿತ ವೈರಿಪಡೆ, ಬೇಕಾದಷ್ಟು ಧನಕನಕ ವಸ್ತುಗಳನ್ನು ಕೊಟ್ಟು ಹುಡುಗಿ ಹೇಗಾದರೂ ಇರಲಿ ಆರಿಸಿಕೊಂಡು ಹೋಗಿ ಮದುವೆ ಮಾಡಿಕೊಳ್ಳಲು ತುದಿಗಾಲ ಮೇಲೆ ನಿಂತಿದೆ. ಇಂತಹ ಅಪಾಯದ ಸನ್ನಿವೇಶವರಿತ ವಧುವಿನ ತಂದೆಯ ಪಾಡು ಹೇಳತೀರದು. ಇಂತದೊಂದು ಕುಟುಂಬದ ಸ್ಥಿತಿ ಕರ್ನಾಟಕದ ರಾಜಕಾರಣವನ್ನೇ ಹೋಲುತ್ತಿದೆಯಂತಲ್ಲಾ. ಈ ನಡುವೆ ವಧುವಿನ ಕಡೆಯ ಕುರುಬರ ಪೈಕಿಯ ಯಜಮಾನನೊಬ್ಬ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯುತ್ತಿರುವ ತೀರ್ಮಾನ ಕೇಳಿ ಫೋನ್ ಮಾಡಬೇಕೆನಿಸಿತಲ್ಲಾ. ತಡ ಮಾಡದೆ ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್: … ನಿನಗ್ಯಾರಿದ್ದರೇನು ಸುಖವಿಲ್ಲಾ ಪ್ರಭುವೆ. ದಾರಿ ಸುಖವಿಲ್ಲ… ಬಾಯಾರಿತು ಎಂದು ದಳದ ಬಾವಿಗೆ ಪೋದೆ.
“ಹಲೋ ಯಾರೂ”
“ನಾನೂ ಸರ್ ಯಾಹೂ”
“ಏನಪ್ಪ ಯಾಹೂ”
“ಚೆನ್ನಾಗಿದ್ದೀರಾ ಸರ್”
“ಏನೋ ಹಿಂಗಿದೀನಿ”
“ದಳದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ರಂತಲ್ಲ ಸಾರ್”
“ಜವಾಬ್ದಾರಿ ಸಾಕು ಅನ್ನುಸ್ತು ಕೊಟ್ಟೆ”
“ಜವಾಬ್ದಾರಿ ಏನಿತ್ತು ಸಾರ್ ಅಲ್ಲಿ”
“ಒಂದು ಪಾರ್ಟಿ ಅಧ್ಯಕ್ಷ ಅಂದಮೇಲೆ ಜವಾಬ್ದಾರಿ ಇರಲ್ವೆ”

“ನಾನು ತಿಳಕಂಡಂಗೆ ಸಾರ್, ಜನತಾದಳದ ಜವಾಬ್ದಾರಿ ಅಂದ್ರೆ, ಬೆಳಿಗ್ಗೆ ತಿಂಡಿ ತಿನ್ನುವಾಗ ದೇವೇಗೌಡ್ರು ಕುಮಾರಣ್ಣ ರೇವಣ್ಣ ಆಡಿದ ಮಾತುಗಳು ನಿಮಗೆ ತಲುಪ್ತವೆ, ಅವನ್ನ ಕೇಳಿಸಿಗಂಡು ಸುಮ್ಮನಾಗದು ಅಲವೆ ಸಾರ್”
“ಅದು ನಿಮ್ಮ ಊಹೆ”

“ಆಮೇಲೆ ಅಡುಗೆ ಮನೆಯಿಂದ ಚೆನ್ನಮ್ಮ ಅದೇನೇನೊ ಹೇಳ್ತಾರೆ. ಮತ್ತೆ ಭವಾನಿ ಹೇಳಿದ್ದ ರೇವಣ್ಣ ತಂದಿರತನೆ. ಈ ತರ ಮಾತು ಕತೆ ಪಾರ್ಟಿ ಅಧ್ಯಕ್ಷನಿಗೆ ತಲುಪಬಹುದು ಅಥವಾ ತಲುಪದೆಯೂ ಇರಬಹುದು. ಇಂತಹ ಪಾರ್ಟಿಯ ಅಧ್ಯಕ್ಷನಾದವನು ಅಸಾಮಾನ್ಯ ತಾಳ್ಮೆ, ಮುಜುಗರ ಸಹಿಸಿಕೊಳೊ ಶಕ್ತಿ ಪಡೆದಿರಬೇಕು ಅಲ್ವ ಸಾರ್”
“ನೀವು ಹೇಳ್ತಕಂತ ಯಾವುದೇ ಸನ್ನಿವೇಶನ ನಾನು ಎದುರಿಸಿಲ್ಲ”

“ಪಂಚಾಯ್ತಿ ಚುನಾವಣೇಲಿ ಸ್ವಜಾತಿಗೊಂದು ಟಿಕೆಟ್ ಕೊಡಲಿಕ್ಕಾಗದ ಪಾರ್ಟಿ ಅಧ್ಯಕ್ಷಗಿರಿ ಇನ್ನೆಂತದಿರಬೇಕು ಸಾರ್”
“ನನ್ನ ರಾಜೀನಾಮೆ ಅವನ್ನೆಲ್ಲಾ ಒಳಗೊಂಡಿದೆ”

“ಒಳ್ಳೆ ಕೆಲಸ ಮಾಡಿದ್ರಿ. ಸಾಮಾನ್ಯವಾಗಿ ದೇವೇಗೌಡ್ರು ಪಾರ್ಟಿ ಅಧ್ಯಕ್ಷನ್ನ ಅವನ ಅನುಪಸ್ಥಿತೀಲಿ ಬದ್ಲಾಯಿಸ್ತಾರೆ. ಆದ್ರೆ ನೀವೇ ರಾಜೀನಾಮೆ ಕೊಟ್ಟಿದ್ದು ಒಳ್ಳೆದು. ಸಾರ್”
“ನೋಡಿ ಯಾಹೂ, ಕಾಲಕ್ಕೆ ನಾವು ಅಂಟಿಕೊಂಡು ಕೂತ್ಗಬಾರ್ದು. ಕಾಲ ಬದಲಾವಣೆ ಬಯಸಿದಾಗ ನಾವು ಬದಲಾಗಬೇಕು”

“ನಿಜ ಸಾರ್, ಆ ಸಿದ್ದರಾಮಯ್ಯನ್ನ ಹಿಡಕಂಡೋಗಿ ಕಾಂಗೈ ಸೇರಿಸಿದ್ರಿ. ನೀವು ಬಂದು ದಳದ ಅಧ್ಯಕ್ಷರಾದ್ರಿ. ಏನಾಶ್ಚರ್ಯ ಅಲವಾ”
‘‘ಅದಕ್ಕೆ ರಾಜಕಾರಣ ಅನ್ನದು”

“ಅಂದ್ರೆ ರಾಜಕಾರಣದಲ್ಲಿ ಏನಾದ್ರು ಆಗಬವುದ?”
“ನೀವೇ ನೋಡಿದ್ರಲ್ಲ, ನಿಮ್ಮಪ್ಪನಾಣೆ ಮುಖ್ಯಮಂತ್ರಿ ಆಗಲ್ಲ ಅಂತ ಬೆಳಿಗ್ಗೆ ಕುಮಾರಸ್ವಾಮಿಗೆ ಹೇಳಿದ ಸಿದ್ದರಾಮಯ್ಯ, ಮಧ್ಯಾಹ್ನ ಒಂದು ಗಂಟೆಗೆ ಬಂದು ನಿಮ್ಮಪ್ಪನಾಣೆ ನೀನೆ ಮುಖ್ಯಮಂತ್ರಿ ಆಗು ಬಾ ಅಂದಿರೋದು. ಇಂತದ್ದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ನಡೆದಿರಲಿಲ್ಲ”

“ಇದನ್ನ ಅವಮಾನಕರ ನಡವಳಿಕೆ ಅಂತೀರಾ”
“ಇಲ್ಲ ಹಾಗನ್ನಲ್ಲ. ಮತೀಯ ಶಕ್ತಿಗೆ ಅವಕಾಶ ಕೊಡಬಾರ್ದು ಅನ್ನೊ ತೀರ್ಮಾನಕ್ಕೆ ತಲೆಬಾಗಿದ್ದು ಅಂತ ಭಾವುಸ್ತೀನಿ. ಆದ್ರೆ ಅಹಂಕಾರದ ಮಾತು ಯಾರಿಗೂ ಒಳ್ಳೆದಲ್ಲ”

“ಸಿದ್ದರಾಮಯ್ಯನಿಗೆ ಅಹಂಕಾರ ಇದೆ ಅಂತೀರಾ?”
“ಅಹಂಕಾರದ ಮೂರ್ತಿರೂಪ ಆತ”

“ಅದು ಅಹಂಕಾರದ ತರದ ವ್ಯಕ್ತಿರೂಪವಂತಲ್ಲಾ”
“ಹಾಗೇನೂ ಇಲ್ಲ. ಉಪಕಾರ ಸ್ಮರಣೆ ಇಲ್ಲದ ಧಿಮಾಕಿನ ಮನ್ಸ ಆತ. ಮನುಷ್ಯನಿಗೆ ತಪ್ಪು ತಿದ್ದಿಕಳೊ ಒಳನೋಟ, ಅಹಂಕಾರಕ್ಕೆ ಅವಕಾಶ ಕೊಡದ ವ್ಯಕ್ತಿತ್ವ ಇರಬೇಕು”

“ನೀವು ಒಂದು ಕಾಲದ ಸಿದ್ದು ಅಭಿಮಾನಿ. ಅವರಿಗಾದ ಅವಮಾನಾನ ನೀವು ಸಹಿಸುತಿರಲಿಲ್ಲ. ಸಿದ್ದುನ ಯಾರಾದ್ರು ಟೀಕೆ ಮಾಡಿದ್ರೆ ನೀವು ಪ್ರತಿಕ್ರಿಯಿಸ್ತಿದ್ರಿ. ಇದು ನಿಮ್ಮ ತಪ್ಪೊ ಸಿದ್ದರಾಮಯ್ಯರ್ ತಪ್ಪೊ ಹೇಳಿ”
“ನನ್ನದೇ ತಪ್ಪು”

“ಈ ತಪ್ಪಿನಲ್ಲಿ ಮತೀಯ ಅಂಶ ಇದೆ ಅಲ್ವ”
“ಇರಬವುದು”

“ಇರಬವುದೇನು, ಇದೆ ಸಾರ್. ನಮ್ಮ ಜನಾಂಗದ ಲೀಡ್ರು, ಅವನನ್ನ ಯಾರೂ ಟೀಕೆ ಮಾಡಬಾರ್ದು ಬೈಯ್ಯಬಾರ್ದು ಅಂತ ಭಾವಿಸಿದ್ದ ಮನಸ್ಸಿನ ಕಣ್ಣು ತೆರಿಸಿದಾನಲ್ಲ ಸಿದ್ದರಾಮಯ್ಯ”
“ಇರಬವುದು”

“ಅವುರಂಗೆ ಮಾಡಿದ್ರಿಂದ ನೀವು ದಳಕ್ಕೆ ಬಂದು ಲೀಡರಾದ್ರಿ, ಶಾಸಕರಾದ್ರಿ, ಅಧ್ಯಕ್ಷರಾದ್ರಿ”
“ನಿಜ ನನ್ನ ರಾಜಕೀಯದ ಅಂತ್ಯ, ನಿರಾಶೆಗೊಳ್ಳೊತರ ಇಲ್ಲ. ಮಾಜೀ ಪ್ರಧಾನಿಯ ಪಾರ್ಟಿಗೆ ಅಧ್ಯಕ್ಷನಾದದ್ದು ಸಾಮಾನ್ಯ ಸಂಗತಿಯಲ್ಲ”

“ಈಗಲಾದ್ರು ದೇವೇಗೌಡ್ರಿಗೆ ಕುರುಬರನ್ನ ಕಂಡ್ರೆ ಅವ್ಯಕ್ತ ಅಕ್ಕರೆ ಇದೆ ಅನ್ನದನ್ನ ಒಪ್ಪಿಗತಿರಾ”
“ನೋಡಿ ಯಾಹು, ದೇವೇಗೌಡ್ರಿಗೆ ಯಾವ ಜನಾಂಗ ಕಂಡ್ರೂ ದ್ವೇಷ ಇಲ್ಲ. ರಾಜಕಾರಣದ ಕಾರಣಕ್ಕೆ ಅಂತ ಆಪಾದನೆಗಳಿಗೆ ಗುರಿಯಾಗ್ತಾರೆ”

“ಹೌದ ಸಾರ್”
“ನೋಡಿ, ಅವುರು ಬ್ರಾಹ್ಮಣ ವಿರೋಧಿ ಅಂತಾರೆ, ಅದೂ ಕೂಡ ಸುಳ್ಳು. ಲಿಂಗಾಯತರ ಬೊಮ್ಮಾಯಿ ಅಂದ್ರೆ ಅವರಿಗೆ ಪಂಚಪ್ರಾಣ. ದಲಿತರ ಡಾ.ತಿಪ್ಪೇಸ್ವಾಮಿನ ಪಾರ್ಟಿ ಪ್ರೆಸಿಡೆಂಟ್ ಮಾಡಿದ್ರು. ಲಿಂಗಾಯಿತರ ತಿಪ್ಪಣ್ಣನ್ನ ಅಧ್ಯಕ್ಷನ್ನ ಮಾಡಿದ್ರು. ಆ ನಂತರ ಕುರುಬರ ಸಿದ್ದರಾಮಯ್ಯನ್ನ ಅಧ್ಯಕ್ಷನನ್ನಾಗಿ ಮಾಡಿ ಫೈನಾನ್ಸ್ ಮಿನಿಷ್ಟ್ರು ಮಾಡಿದ್ರು. ಈಗ ನನ್ನ ಮಾಡಿದಾರೆ”

“ಅದೇ ಸಾರ್ ನಾನೇಳಿದ್ದೂ, ಕುರುಬರನ್ನ ಮುಂದೆ ತಂದಂಗೆ ಒಕ್ಕಲಿಗರನ್ನ ತರಲಿಲ್ಲ. ಒಕ್ಕಲಿಗರನ್ನೆಲ್ಲಾ ಮುಗಿಸಿ ಅಲ್ಲಿಗೆ ತಮ್ಮ ಕುಟುಂಬವನ್ನ ನಾಟಿ ಮಾಡ್ತಾ ಬಂದ್ರು. ಇದನ್ನ ಒಪ್ಪಿಗಳ್ತಿರಾ”
“ಒಕ್ಕಲಿಗ ನಾಯಕರನ್ನ ತುಳುದ್ರು ಪರ್ಯಾಯವಾಗಿ ಒಕ್ಕಲಿಗ ಲೀಡರನ್ನ ಬೆಳಸಿದಾರೆ”

“ಅದೆಲ್ಲಾ ಅಂಗಿರ್ಲಿ. ಲೋಕಸಭಾ ಚುನಾವಣೇಲಿ ಜನ ಸಮ್ಮಿಶ್ರ ಸರ್ಕಾರದ ವಿರುದ್ಧ ಓಟು ಕೊಟ್ಟಿರೋದನ್ನ ಒಪ್ಪಿಗಳ್ತೀರಾ”

“ಮೋದಿ ಅಲೆ”
“ಮೋದಿದೂ ಇಲ್ಲ ಯಂತದೂ ಇಲ್ಲ. ಒಂದೊರ್ಸದಿಂದ ದಳದೋರು ಕಾಂಗ್ರೆಸ್‍ನೋರು ಆಡ್ತಾಯಿರೊ ಜಗಳ ನಿಲ್ಸಕ್ಕೆ ಸೋಲ್ಸಿದ್ರು”

“ಥೂತ್ತೇರಿ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತರ ನ್ಯಾಯಕ್ಕೆ ಹೊಸ ಅಡ್ಡಿಯಾಗಲಿದೆಯೇ ‘ಸಾರ್ವಜನಿಕ ವೀಕ್ಷಣೆ’ ನಿಯಮ? ಪರಿಶಿಷ್ಟರನ್ನು ಆತಂಕಕ್ಕೆ ತಳ್ಳಿದ ಸುಪ್ರೀಂ ತೀರ್ಪು

ಸಾರ್ವಜನಿಕರು ನೋಡದ ಜಾಗದಲ್ಲಿ, ಅಂದರೆ ಯಾರೂ ನೋಡದ ಜಾಗದಲ್ಲಿ ಜಾತಿ ನಿಂದನೆ ಅಥವಾ ಅವಮಾನ ನಡೆದರೆ, ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಅಪರಾಧ...

ಪಶ್ಚಿಮ ಬಂಗಾಳ: “ಇದು ಬುಲ್ಡೋಜರ್ ರಾಜ್ಯವಲ್ಲ”: ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಗುರುವಾರ ವಕೀಲರ ನಿಲುವಂಗಿಯನ್ನು ಧರಿಸಿ ಕಲ್ಕತ್ತಾ ಹೈಕೋರ್ಟ್‌ಗೆ ಬಂದ ಅವರು ವಿಧಾನಸಭಾ...

ದಾವಣಗೆರೆ ಉಪ ಚುನಾವಣೆ ಅಡ್ಡ ಪರಿಣಾಮ: ಮುಸ್ಲಿಮ್ ಮುಖಂಡರ ಮೇಲೆ ಖರ್ಗೆ-ಡಿಕೆಶಿ ಶಿಸ್ತು ಪ್ರಹಾರ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ರಾಜಕಾರಣ!!

ದಾವಣಗೆರೆ ದಕ್ಷಿಣ ಉಪ ಚುನಾವಣೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನ ಗದ್ದುಗೆ ಗುದ್ದಾಟಕ್ಕೆ ರೋಚಕ ಆಯಾಮ ನೀಡಿಬಿಟ್ಟಿದೆ. ಅಹಿಂದ ಸಮುದಾಯವೇ ಬಹುಜನರಾಗಿರುವ ದಾವಣಗೆರೆ ದಕ್ಷಿಣ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ಯಾಯವಾಗಿ ಆ ವರ್ಗದ ಅರ್ಹರೊಬ್ಬರಿಗೆ...

ನೀಟ್ ವಿವಾದ: ಪ್ರಶ್ನೆ ಪತ್ರಿಕೆ ಸೋರಿಕೆ ಜೊತೆಗೆ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ

ರಾಜಸ್ಥಾನದಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ (ಸಿಬಿಐ) ತನಿಖೆ ವೇಗ ಪಡೆದುಕೊಂಡಿದೆ. ದೇಶದಾದ್ಯಂತ ಹಲವು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ...

ಎಸ್‌ಐಆರ್‌ನಲ್ಲಿ ಮತದಾನದ ಹಕ್ಕು ಹೋಯ್ತು..ಈಗ ಸರ್ಕಾರಿ ಸೌಲಭ್ಯದ ಸರದಿ..ಮುಂದೆ ನಾಗರಿಕತ್ವ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುವುದು ಚುನಾವಣಾ ಆಯೋಗ ಭಾರತದ ಕೋಟ್ಯಾಂತರ ನಾಗರಿಕ ಅಮೂಲ್ಯವಾದ ಮತದಾನದ ಹಕ್ಕನ್ನು ಕಿತ್ತುಕೊಂಡ ಒಂದು ವ್ಯವಸ್ಥಿತ ಸಂಚು ಎನ್ನಬಹುದು. ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು,...

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...