Homeರಾಜಕೀಯ‘ನನಗೆ ಗುಂಡಿಟ್ಟಿದ್ದಕ್ಕೆ ನಾನು ಆತನನ್ನು ಕ್ಷಮಿಸಬಲ್ಲೆ. ಆದರೆ.......'

‘ನನಗೆ ಗುಂಡಿಟ್ಟಿದ್ದಕ್ಕೆ ನಾನು ಆತನನ್ನು ಕ್ಷಮಿಸಬಲ್ಲೆ. ಆದರೆ…….’

- Advertisement -
- Advertisement -

 

‘ಪರಶುರಾಮ ವಾಘ್ಮರೆ ನನ್ನನ್ನು ಕೊಂದ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಅತ್ಯಂತ ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂದು ಬಯಸುತ್ತೇನೆ. ಕೊಂದದ್ದು ಆತನೋ ಅಲ್ಲವೋ ಎಂಬ ಸಾಕ್ಷಿಯನ್ನು ಕೊಲೆಗೀಡಾದ ವ್ಯಕ್ತಿ ಹೇಳಲಾಗದು. ಹಾಗಾಗಿ ನನಗೆ ಗೊತ್ತಿರುವ ಸತ್ಯವನ್ನು ನಾನು ಹೇಳಲೂಬಾರದು. ತನಿಖೆ ನಡೆದು ಅದರಲ್ಲಿ ಸತ್ಯ ಹೊರಗೆ ಬರಲಿ. ಆದರೆ, ನಾನು ಕೆಲವು ಮಾತುಗಳನ್ನು ಹೇಳಲೇಬೇಕು. ಇಂದು ಆತನ ತಾಯಿ ರೋದಿಸುತ್ತಿರುತ್ತಾರೆ. ಮಗ ಏನು ಮಾಡಿರಬಹುದು ಎಂಬ ಕುರಿತು ಆಕೆಗೆ ಮಾಹಿತಿಯೂ ಇಲ್ಲದಿರಬಹುದು. ಅಂತಹ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಯಾವ ತಾಯಿಗೂ ಬರದಿರಲಿ ಎಂದು ನಾವು ಆಶಿಸಿದರೆ ಮಾತ್ರ ಇದು ಸರಿ ಹೋಗುವ ಖಾಯಿಲೆಯಲ್ಲ. ಬದಲಿಗೆ, ಸತ್ಯವನ್ನು ಸೂಕ್ತವಾದ ರೀತಿಯಲ್ಲಿ ವಿಶ್ಲೇಷಿಸಿ, ಕೊಲ್ಲುವ ಮನಸ್ಥಿತಿಯನ್ನು ಹುಟ್ಟು ಹಾಕುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಂಡು, ಆ ಜಾಗದಲ್ಲಿ ಪ್ರೀತಿಯನ್ನು ಬಿತ್ತಿದರೆ ಮಾತ್ರ ನಾವು ದೇಶವನ್ನು ಸುಭದ್ರವಾಗಿ ಕಟ್ಟಬಲ್ಲೆವು.

ಹಾಗಾಗಿಯೇ ನಾನೊಂದು ಮಾತನ್ನು ಇಲ್ಲಿ ಹೇಳಲೇಬೇಕು. ನನಗೆ ಗುಂಡಿಟ್ಟಿದ್ದಕ್ಕೆ ಆತನನ್ನು ನಾನು ಕ್ಷಮಿಸಬಲ್ಲೆ. ಆದರೆ, 2012ರ ಹೊಸ ವರ್ಷದ ಮುಂಜಾವಿನಲ್ಲಿ ಸಿಂಧಗಿಯಲ್ಲಿ ಈ 

ಪರಶುರಾಮ ವಾಘ್ಮರೆ ಮತ್ತು ಆತನ ಇತರ ಆರು ಸಂಗಡಿಗರು ಪಾಕಿಸ್ತಾನದ ಧ್ವಜವನ್ನು ಹಾರಿಸಿ, ಅದನ್ನು ಇನ್ನೊಂದು ಕೋಮಿನ ವಿರುದ್ಧ ಬಳಸಲು ಯತ್ನಿಸಿದರಲ್ಲಾ… ಅದನ್ನು ನಾನು ಕ್ಷಮಿಸಲಾರೆ.’

ಗೌರಿ ಲಂಕೇಶರು ಪತ್ರಿಕೆಯ ಸಂಪಾದಕೀಯವನ್ನು ಬರೆಯಲು ಸಾಧ್ಯವಿದ್ದಿದ್ದರೆ ಈ ರೀತಿ ಬರೆಯುತ್ತಿದ್ದರು ಎನಿಸುತ್ತದೆ.

ನೆನಪಿರಲಿ, ಅಂದು ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿದ್ದದ್ದು ಬಿಜೆಪಿ ಸರ್ಕಾರ. ಹಾಗಾಗಿ ಸುಳ್ಳು ಕೇಸು ಹಾಕಿದರು ಎಂದು ಹೇಳಲಾಗದು. ತನಿಖೆ ನಡೆಸಿದ ಪೊಲೀಸರು ಘಟನೆ ನಡೆದ ಮೂರು ದಿನಗಳಲ್ಲಿ 6ಜನರನ್ನು ಬಂಧಿಸಿದರು ಮತ್ತು ನಂತರ ಇನ್ನೂ ಒಬ್ಬ ವ್ಯಕ್ತಿಯನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಿದರು. ಇವರೆಲ್ಲರೂ ಪಾಕಿಸ್ತಾನದ ಧ್ವಜವನ್ನು ಹಾರಿಸಿದವರು ಮತ್ತು ಇವರು ಶ್ರೀರಾಮಸೇನೆಗೆ ಸೇರಿದವರು ಎಂದು ಹೇಳಿದರು. ಪಾಕಿಸ್ತಾನದ ಧ್ವಜ ಹಾರಿಸಿ, ಅದನ್ನು ಇನ್ನೊಂದು ಕೋಮಿನ ಜನರ ತಲೆಗೆ ಕಟ್ಟಲು ಇವರು ಯೋಜಿಸಿದ್ದರು. ಮರುದಿನವೇ ಸಿಂಧಗಿ ಬಂದ್‍ಗೆ ಕರೆಕೊಟ್ಟು ಪ್ರತಿಭಟನೆಯಲ್ಲಿ ಇವರೂ ಭಾಗಿಯಾಗಿದ್ದರು!

 

ಇದೇ ಅತ್ಯಂತ ಅಪಾಯಕಾರಿಯಾದ ಮತ್ತು ಆಘಾತಕಾರಿಯಾದ ಸಂಗತಿಯಾಗಿದೆ. ಆದರೆ ಇದಕ್ಕಿಂತ ಅಪಾಯಕಾರಿಯಾದ ಇನ್ನೊಂದು ಸಂಗತಿಯೂ ಇದೆ. ಅದೇನೆಂದರೆ, ಈ ಬಂಧನದ ನಂತರ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪತ್ರಿಕಾಗೋಷ್ಠಿ ನಡೆಸಿ, ಈ ರೀತಿ ಬಾವುಟ ಹಾರಿಸಿದವರು ಶ್ರೀರಾಮಸೇನೆಯವರಲ್ಲ, ಆರೆಸ್ಸೆಸ್‍ನವರು ಎಂದು ಹೇಳಿದರು. ‘ಇವರು ಆರೆಸ್ಸೆಸ್‍ಗೆ ಸೇರಿದವರು ಎಂಬುದಕ್ಕೆ ನನ್ನಲ್ಲಿ ಪುರಾವೆ ಇದೆ. ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದವರು ಆರೆಸ್ಸೆಸ್ ಹೆಸರು ಬರದಂತೆ ನೋಡಿಕೊಳ್ಳಲು ಶ್ರೀರಾಮಸೇನೆಯ ತಲೆಗೆ ಕಟ್ಟುತ್ತಿದ್ದಾರೆ’ ಎಂಬುದು ಅವರ ಆರೋಪವಾಗಿತ್ತು. ಶ್ರೀರಾಮಸೇನೆಯ ಮುಖಂಡರು ಸದರಿ ಆರೋಪಿಗಳು ಆರೆಸ್ಸೆಸ್‍ನವರು ಎಂದು ತೋರಿಸುವ ಚಿತ್ರಗಳನ್ನೂ ಬಿಡುಗಡೆ ಮಾಡಿದರು!!

ನಿಮಗೆ ಇನ್ನೂ ಒಂದು ಮಾತು ಹೇಳಬೇಕು. ಇದಾದ ನಂತರ ಅಂದು ಮಾಜಿ ಮುಖ್ಯಮಂತ್ರಿಗಳಾಗಿದ್ದ, ಇಂದು ಮುಖ್ಯಮಂತ್ರಿಗಳಾಗಿರುವ ಶ್ರೀ ಎಚ್.ಡಿ.ಕುಮಾರಸ್ವಾಮಿಯವರು ಖಚಿತ ಮಾತುಗಳಲ್ಲಿ ಇದನ್ನು ಪುಷ್ಟೀಕರಿಸಿದ್ದರು. ಅದೇ ಸಂದರ್ಭದಲ್ಲಿ ನಿಧನರಾಗಿದ್ದ ಮಾಜಿ ಮುಖ್ಯಮಂತ್ರಿ ಶ್ರೀ ಎಸ್.ಬಂಗಾರಪ್ಪನವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದರು. ‘ಈ ಕೃತ್ಯವನ್ನು ಆರೆಸ್ಸೆಸ್‍ನವರು ಮಾಡಿರುವ ಕುರಿತು ನನಗೆ ಮಾಹಿತಿಯಿದೆ. ಕೋಮು ದಳ್ಳುರಿ ಹಚ್ಚಲು ಇಂತಹ ಕೀಳುಮಟ್ಟದ ಕೃತ್ಯಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್‍ನವರು ಇಳಿದಿರುವುದು ಖಂಡನೀಯ’ ಎಂದು ಹೇಳಿದ್ದರು.

ಸ್ನೇಹಿತರೇ,

ಗೌರಿಯವರನ್ನು ಗುಂಡಿಟ್ಟು ಕೊಂದದ್ದು – ಯಾವುದೇ ಮನುಷ್ಯರನ್ನು ಯಾರೇ ಕೊಲ್ಲುವುದು – ಅತ್ಯಂತ ಅಮಾನವೀಯವಾದ ಕೃತ್ಯ. ಅದನ್ನು ಖಂಡಿಸಬೇಕು; ನೆಲದ ಕಾನೂನಿನ ಪ್ರಕಾರ ತನಿಖೆ,ವಿಚಾರಣೆ ನಡೆದು ಶಿಕ್ಷೆಗೂ ಒಳಪಡಿಸಬೇಕು. ಆದರೆ, ತಾವೇ ಒಂದು ಕೃತ್ಯವನ್ನು ಮಾಡಿ, ಆ ಕೃತ್ಯವನ್ನು ಇನ್ನೊಂದು ಸಮುದಾಯದ ಮೇಲೆ ಹಾಕಿ, ಅವರನ್ನು ಬಂಧಿಸಿ ಎಂದು ಪ್ರತಿಭಟನೆ ಮಾಡಿ ದಳ್ಳುರಿ ಹಚ್ಚಲು ನೋಡುವುದಿದೆಯಲ್ಲಾ ಅದು ಕೊಲೆಗಿಂತ ಕಡಿಮೆಯಾದುದಲ್ಲ ಮತ್ತು ಇಂತಹದರ ಮೂಲಕ ಒಂದು ದೇಶವನ್ನೇ ದುರ್ಬಲಗೊಳಿಸುತ್ತಾ ಹೋಗುತ್ತಾರೆ. ಸುಳ್ಳಿನ ಮೇಲೆ ಸುಳ್ಳನ್ನು ಹೇಳಿ ಅದನ್ನೇ ಸತ್ಯವನ್ನಾಗಿಸುತ್ತಾ ಹೋಗುವುದರ ಕುರಿತು ದೇಶಪ್ರೇಮಿಗಳೆಲ್ಲರೂ ಅರಿತುಕೊಳ್ಳುವ ಸಂದರ್ಭ ಬಂದಿದೆ.

ಸ್ವತಃ ಆರೆಸ್ಸೆಸ್‍ನಲ್ಲಿದ್ದ, ಇಂದಿಗೂ ಆರೆಸ್ಸೆಸ್ ಪ್ರತಿಪಾದಿಸುತ್ತಿರುವ ದ್ವೇಷದ ರಾಜಕಾರಣವನ್ನೇ ಉಸಿರಾಗಿಸಿಕೊಂಡಿರುವ ಪ್ರಮೋದ್ ಮುತಾಲಿಕ್ ‘ಪಾಕಿಸ್ತಾನದ ಧ್ವಜ ಹಾರಿಸಿದವರು ಆರೆಸ್ಸೆಸ್‍ನವರೇ. ನನ್ನ ಹತ್ತಿರ ಸಾಕ್ಷಿಗಳಿವೆ’ ಎಂದಾಗಲೂ ಬಿಜೆಪಿ ಸರ್ಕಾರವು ಆ ತನಿಖೆಯನ್ನು ನಡೆಸಲಿಲ್ಲವೇಕೆ? ಅಂದು ಇದೇ ಮಾತುಗಳನ್ನು ಆಡಿದ ಶ್ರೀ ಎಚ್.ಡಿ.ಕುಮಾರಸ್ವಾಮಿಯವರು ಇಂದು ಮುಖ್ಯಮಂತ್ರಿಗಳಾಗಿದ್ದಾರೆ. ಇಂದಾದರೂ ಆ ತನಿಖೆ ನಡೆಯಬೇಕು ಎಂದು ನಾವು ಬಯಸುತ್ತೇವೆ.

ಪಾಕಿಸ್ತಾನದ ಧ್ವಜ ಹಾರಿಸಿದ ಕೇಸಿನಲ್ಲಿ ಸಿಕ್ಕಿ ಹಾಕಿಕೊಂಡವರು ಶ್ರೀರಾಮಸೇನೆಯವರಲ್ಲ, ಆರೆಸ್ಸೆಸ್‍ನವರು ಮತ್ತು ಇದನ್ನು ಬಿಜೆಪಿ ಮುಚ್ಚಿ ಹಾಕುತ್ತಿದೆ ಎಂದು ಬಹಿರಂಗವಾಗಿ, ಆರೆಸ್ಸೆಸ್‍ನ ಸಹವರ್ತಿಯೇ ಹೇಳಿದಾಗ ಬಿಜೆಪಿಯವರು ಮಾತೇ ಆಡಿರಲಿಲ್ಲ. ಇಂದೂ ಅವರು ಸುಮ್ಮನಿರಬಹುದು. ಆದರೆ ಪ್ರಜಾತಂತ್ರದಲ್ಲಿ, ಸತ್ಯದಲ್ಲಿ ನಂಬಿಕೆಯಿರುವ ಯಾರೂ ಸುಮ್ಮನಿರಬಾರದು. ಈ ಪ್ರಶ್ನೆಗಳನ್ನು ಕೇಳುತ್ತಿರಲೇಬೇಕು.

ಕೆಲವು ಘಟನೆಗಳು ನಡೆದಾಗ ಮಾಧ್ಯಮಗಳು ಅದರ ಒಳಹೊಕ್ಕು ನೋಡುವ ಕೆಲಸ ಮಾಡುತ್ತಾರೆ. ತುಂಬಾ ಒಳಹೊಕ್ಕು ನೋಡುವ ಅಗತ್ಯವಿಲ್ಲ. ಮೇಲೆ ಹೇಳಲಾದ ಸಂಗತಿಗಳು ಸೂರ್ಯಸ್ಪಷ್ಟವಾಗಿ ಕೇವಲ 6 ವರ್ಷಗಳ ಕೆಳಗೆ ಈ ರಾಜ್ಯದಲ್ಲೇ ನಡೆದಂಥವಾಗಿವೆ. ಇವು ಸುದ್ದಿಯಾಗದಿದ್ದರೆ, ಮಾಧ್ಯಮಗಳು ಏಕಪಕ್ಷೀಯವಾಗಿವೆ ಎಂದು ಅರ್ಥ. ಗೌರಿಯವರ ಕೊಲೆ ನಡೆದಾಗ ಕೆಲವು ಸಂಘಟನೆಗಳನ್ನೇ ಗುರಿ ಮಾಡಿ ಏಕೆ ಮಾತಾಡಲಾಗುತ್ತಿದೆ ಎಂದು ಕೆಲವರು ಕೇಳಿದ್ದರು. ಮೇಲಿನ ಎಲ್ಲಾ ಪುರಾವೆಗಳು ಆ ಸಂಘಟನೆಗಳತ್ತಲೇ ಬೆರಳು ತೋರಿಸುತ್ತಿವೆ. ಈಗಲಾದರೂ ಅವರೆಲ್ಲರೂ ಆ ಸಂಘಟನೆಗಳನ್ನು ಪ್ರಶ್ನಿಸುವ ಧೈರ್ಯ ಮತ್ತು ನಿಯತ್ತು ತೋರಿಸುತ್ತಾರೆಯೇ?

ಗೌರಿ ಲಂಕೇಶರು ಈ ನಾಡಿನ ಎಲ್ಲ ಬಗೆಯ ಜನಸಾಮಾನ್ಯರ ಸಂಕಷ್ಟಗಳಿಗೆ ಬರಹದಲ್ಲೂ, ಬದುಕಿನಲ್ಲೂ ಮಿಡಿದಂತಹ ದಿಟ್ಟ ಮಹಿಳೆ ಮತ್ತು ಪತ್ರಕರ್ತೆ. ಸತ್ಯವನ್ನು ನಿಷ್ಠುರವಾಗಿ ಬಯಲಿಗೆಳೆಯಬೇಕು ಮತ್ತು ಅದನ್ನು ಎಷ್ಟೇ ಬಲಿಷ್ಠರಾಗಿದ್ದರೂ ಅವರೆದುರು ಅದನ್ನು ಹೇಳಬೇಕು ಎಂಬುದು ಅವರ ಧ್ಯೇಯವಾಗಿತ್ತು. ಮೇಲೆ ಹೇಳಲಾಗಿರುವ ಸಂಘಟನೆಗಳು ಜನಸಾಮಾನ್ಯರ ಯಾವ ದಿನನಿತ್ಯದ ಸಮಸ್ಯೆಗೂ ಸ್ಪಂದಿಸದೇ, ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾಗ ಅದನ್ನೂ ಅವರು ಬಯಲಿಗೆಳೆಯುವ ಕೆಲಸ ಮಾಡಿದ್ದರು. ಇಂತಹವರನ್ನು ಬಿಟ್ಟರೆ ಮತ್ಯಾರೂ ಗೌರಿಯವರ ಶತ್ರುಗಳಾಗಿರಲಿಲ್ಲ. ಹಾಗಿದ್ದರೂ ತನಿಖೆಯನ್ನು ದಿಕ್ಕುತಪ್ಪಿಸುವ ಕೆಲಸವನ್ನು ಹಲವು ಶಕ್ತಿಗಳು ಪದೇ ಪದೇ ಮಾಡಿದ್ದರು. ಇದೀಗ ಪೊಲೀಸರು ತನಿಖೆಯನ್ನು ಮುಗಿಸಿ, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಇರಿಸಿದ್ದಾರೆ. ಈಗ ಮಾಡಬೇಕಿರುವ ಕೆಲಸವೇನೆಂದರೆ, ಯಾರು ಈ ವ್ಯಕ್ತಿಗಳ ತಲೆಯಲ್ಲಿ ದ್ವೇಷವನ್ನೂ, ಕೊಲೆ ಮಾಡುವ ಮನಸ್ಥಿತಿಯನ್ನು ತುಂಬಿದರೋ ಅವರತ್ತ ಗಮನ ಹರಿಸಬೇಕು. ಅಂತಹ ಸಂಘಟನೆಗಳ ಮೇಲೂ ಕ್ರಮವಾಗಬೇಕು; ಪ್ರಮುಖ ವ್ಯಕ್ತಿಗಳ ಮೇಲೂ ಕ್ರಮವಾಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲರೂ ಜೊತೆಗೂಡಿ ಶ್ರಮಿಸೋಣ.

(ಅಂದು ಕನ್ನಡ ಪತ್ರಿಕೆಗಳು, ಇಂಗ್ಲಿಷ್ ಪತ್ರಿಕೆಗಳು, ವೆಬ್ ಪೋರ್ಟಲ್‍ಗಳು ಮಾತ್ರವಲ್ಲಾ ಬಿಬಿಸಿ ಸಹಾ ಇದನ್ನು ಸುದ್ದಿ ಮಾಡಿದ್ದವು. ಅವುಗಳ ಲಿಂಕ್‍ಗಳನ್ನು ಈ ಕೆಳಗೆ ಕೊಡಲಾಗಿದೆ. ಆಸಕ್ತರು ಓದಿಕೊಳ್ಳಬಹುದು.)

http://www.thehindu.com/news/national/pakistani-flag-hoisting-was-a-hindutva-plot-to-foment-strife-police-say/article2790960.ece

https://www.bbc.com/news/world-asia-india-16424473

http://www.daijiworld.com/news/newsDisplay.aspx?newsID=126614

https://timesofindia.indiatimes.com/city/hubballi/Accused-youths-dont-belong-to-Sene-Mutalik/articleshow/11394349.cms

https://www.indiatoday.in/mail-today/story/sri-ram-sene-activists-pakistani-flag-88639-2012-01-06

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...