Homeನ್ಯಾಯ ಪಥನೇರಳೆ ಹಣ್ಣಿನ ಮರವೂ, ನರೇಂದ್ರ ಮೋದಿಯವರೂ?...ಡಿ.ಉಮಾಪತಿ

ನೇರಳೆ ಹಣ್ಣಿನ ಮರವೂ, ನರೇಂದ್ರ ಮೋದಿಯವರೂ?…ಡಿ.ಉಮಾಪತಿ

- Advertisement -
- Advertisement -

1960ರಲ್ಲಿ ಪ್ರಸಿದ್ಧ ಕತೆಗಾರ ಕೃಷ್ಣಚಂದರ್ ಅವರು ಬರೆದ ಹಿಂದೀ ಕತೆಯೊಂದರಲ್ಲಿ ಇಂದಿನ ಸರ್ಕಾರದ ಟೀಕೆ ಇದೆ ಎಂದು ಆಕ್ಷೇಪಿಸಿ ಆ ಕತೆಯನ್ನು ಮೊನ್ನೆ ಮೊನ್ನೆ ಹತ್ತನೆಯ ತರಗತಿಯ ಪಠ್ಯಕ್ರಮದಿಂದ ತೆಗೆದು ಹಾಕಲಾಗಿದೆ.

ಪ್ರಸಿದ್ಧ ಹಿಂದೀ ಲೇಖಕ ಕೃಷ್ಣ ಚಂದರ್ ಅವರ ‘ಜಾಮೂನ್ ಕಾ ಪೇಡ್’ (ನೇರಳೆ ಮರ) ಎಂಬ ವಿಡಂಬನಾತ್ಮಕ ಲಘು ಕತೆಯನ್ನು ಕೇಂದ್ರ ಸರ್ಕಾರ ಐಸಿಎಸ್‍ಇ ಹತ್ತನೆಯ ತರಗತಿ ಶಾಲಾ ಪಠ್ಯದಿಂದ ತೆಗೆದುಹಾಕಿದೆ. 2015ರಲ್ಲಿ ಈ ಕತೆ ಪಠ್ಯಕ್ರಮಕ್ಕೆ ಸೇರಿತ್ತು.

ಸರ್ಕಾರೀ ಸಚಿವಾಲಯದ ಮುಂದಿನ ಹಸಿರು ಅವರಣದ ನೇರಳೆ ಮರವೊಂದು ಬಿದ್ದು ಅದರ ಅಡಿಗೆ ಸಿಕ್ಕಿಹಾಕಿಕೊಂಡ ವ್ಯಕ್ತಿಯೊಬ್ಬನ ಕತೆಯಿದು. ಮುಂಜಾನೆ ಮಾಲಿಯ ಗಮನಕ್ಕೆ ಬರುವ ಈ ಸಂಗತಿ ಸರ್ಕಾರಿ ಕರ್ಮಚಾರಿಗಳು ಮತ್ತು ಅಧಿಕಾರಿಗಳಿಗೆ ತಿಳಿಯುತ್ತದೆ. ಆದರೆ ಅವರೆಲ್ಲ ಈ ವ್ಯಕ್ತಿಯನ್ನು ಹಿಡಿದೆತ್ತಿ ಪಾರು ಮಾಡುವುದಿಲ್ಲ. ಬದಲಾಗಿ ಹೊಣೆಯನ್ನು ಮತ್ತೊಬ್ಬರಿಗೆ ಹೊರಿಸಿ ತಾವು ಪಾರಾಗುವ ವ್ಯಂಗ್ಯವಿದು.

1914-1977ರ ಅವಧಿಯಲ್ಲಿ ಜೀವಿಸಿದ್ದ ಕೃಷ್ಣ ಚಂದರ್ ಅವರು ಈ ಕತೆಯನ್ನು ಬರೆದದ್ದು 1960ರಲ್ಲಿ. ಕೆಲ ಸರ್ಕಾರಿ ಅಧಿಕಾರಿಗಳು ಈ ಕತೆಯಲ್ಲಿ ಹಾಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆಯನ್ನು ಕಂಡರಂತೆ. ಹೀಗಾಗಿ ಕತೆಗೆ ಅರ್ಧಚಂದ್ರ ಪ್ರಯೋಗ ಆಗಿದೆ. 2020 ಮತ್ತು 2021ರ ಐ.ಸಿ.ಎಸ್.ಇ. ಪರೀಕ್ಷೆಗಳಲ್ಲಿ ಈ ಕತೆಯ ಕುರಿತು ಯಾವುದೇ ಪ್ರಶ್ನೆಗಳನ್ನು ಕೇಳಲಾಗುವುದಿಲ್ಲ ಎಂದು ನೋಟಿಸೊಂದರಲ್ಲಿ ತಿಳಿಯಪಡಿಸಲಾಗಿದೆ.
ಹತ್ತನೆಯ ತರಗತಿಯ ಶಾಲಾ ಮಕ್ಕಳು ಓದುವಂತಹ ಕತೆಯಲ್ಲ ಇದು ಎಂಬ ವಿವರಣೆಯನ್ನು ನೀಡಿರುವ ಐಸಿಎಸ್‍ಇ, ಯಾಕೆ ಏನು ಎಂಬ ಯಾವುದೇ ಸಮಜಾಯಿಷಿ ನೀಡಿಲ್ಲ.

ರಾತ್ರಿ ಬೀಸಿದ ಭಾರೀ ಬಿರುಗಾಳಿಯ ಕಾರಣ ಸಚಿವಾಲಯದ ಹುಲ್ಲುಹಾಸಿನ ನೇರಳೆ ಮರವೊಂದು ನೆಲಕ್ಕುರುಳುತ್ತದೆ. ಪ್ರಸಿದ್ಧ ಕವಿಯೊಬ್ಬನು ಅದರ ಕೆಳಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ. ಮುಂಜಾನೆ ಈ ಸಂಗತಿಯನ್ನು ಗಮನಿಸುವ ಮಾಲಿ ಧಾವಿಸಿ ಹೋಗಿ ಚಪರಾಸಿಗೆ ತಿಳಿಸುತ್ತಾನೆ. ಚಪರಾಸಿ ಗುಮಾಸ್ತನ ಬಳಿ ತೆರಳುತ್ತಾನೆ. ಗುಮಾಸ್ತ ಸೂಪರಿಂಟಿಂಡೆಂಟ್ ಬಳಿಗೆ ಧಾವಿಸುತ್ತಾನೆ. ತುಸು ಹೊತ್ತಿನ ನಂತರ ಮರದ ಕೆಳಗೆ ಸಿಕ್ಕಿಹಾಕಿಕೊಂಡ ವ್ಯಕ್ತಿಯ ಸುತ್ತಮುತ್ತ ಗುಂಪು ಜಮಾಯಿಸುತ್ತದೆ. ಮರ ಬಿಡುತ್ತಿದ್ದ ರಸಭರಿತ ನೇರಳೆ ಹಣ್ಣಿನ ಚರ್ಚೆ ನಡೆಯುತ್ತದೆ. ಇನ್ನಷ್ಟು ಮಾಲಿಗಳು, ಚಪರಾಸಿಗಳು ಹಾಗೂ ಗುಮಾಸ್ತರೆಲ್ಲ ಕೈ ಹಾಕಿದರೆ ಮರದಡಿಯ ವ್ಯಕ್ತಿಯನ್ನು ಹೊರಗೆಳೆಯಬಹುದು ಎನ್ನುತ್ತಾನೆ ಮಾಲಿ. ಮಾಲಿ ಹೇಳುವುದು ಸರಿಯೆಂದು ಬಹಳಷ್ಟು ಮಂದಿ ಮರವನ್ನು ಸರಿಸಲು ಮುಂದಾಗುತ್ತಾರೆ. ನಿಲ್ಲಿ, ನಾನು ಅಂಡರ್ ಸೆಕ್ರೆಟರಿ ಅವರನ್ನು ಕೇಳಬೇಕು ಎನ್ನುತ್ತಾನೆ ಸೂಪರಿಂಟಿಂಡೆಂಟ್. ಅಂಡರ್ ಸೆಕ್ರೆಟರಿಯು ಡೆಪ್ಯೂಟಿ ಸೆಕ್ರೆಟರಿ ಬಳಿ ಹೋಗುತ್ತಾನೆ. ಡೆಪ್ಯೂಟಿ ಸೆಕ್ರೆಟರಿ ಜಾಯಿಂಟ್ ಸೆಕ್ರೆಟರಿ ಮುಂದೆ ಹಾಜರಾಗುತ್ತಾನೆ. ಜಾಯಿಂಟ್ ಸೆಕ್ರೆಟರಿಯು ಚೀಫ್ ಸೆಕ್ರೆಟರಿ ಬಳಿಗೆ ತೆರಳುತ್ತಾನೆ. ಚೀಫ್ ಸೆಕ್ರೆಟರಿಯು ಜಾಯಿಂಟ್ ಸೆಕ್ರೆಟರಿಗೆ ಏನೋ ಹೇಳುತ್ತಾನೆ. ಜಾಯಿಂಟ್ ಸೆಕ್ರೆಟರಿ ಡೆಪ್ಯೂಟಿ ಸೆಕ್ರೆಟರಿಗೆ, ಡೆಪ್ಯೂಟಿಯು ಅಂಡರ್ ಸೆಕ್ರೆಟರಿಗೆ ಅದನ್ನು ಹೇಳುತ್ತಾನೆ. ಕಡತ ಕಾಲ್ಚೆಂಡಾಗುತ್ತದೆ. ಅರ್ಧ ದಿನ ಕಳೆದೇ ಹೋಗಿರುತ್ತದೆ. ಊಟದ ವಿರಾಮ. ಮರದ ಬಳಿ ಸೇರಿದ ಗುಂಪು ಪುನಃ ವ್ಯಕ್ತಿಯನ್ನು ಪಾರು ಮಾಡಲು ತಾನೇ ಮುಂದಾಗುತ್ತದೆ. ಅಷ್ಟರಲ್ಲಿ ಸೂಪರಿಂಟಿಂಡೆಂಟ್ ಕಡತ ಹಿಡಿದು ಓಡಿಬರುತ್ತಾನೆ. ಈ ಮರವನ್ನು ನಾವಾಗಿಯೇ ಸರಿಸುವಂತಿಲ್ಲ. ನಾವು ವಾಣಿಜ್ಯ ಇಲಾಖೆಯವರು. ಮರ ಕೃಷಿ ಇಲಾಖೆಯಡಿ ಬರುತ್ತದೆ. ಕಡತದ ಮೇಲೆ ತುರ್ತು ಎಂದು ಬರೆದು ಕೃಷಿ ಇಲಾಖೆಗೆ ಕಳಿಸುತ್ತೇನೆ. ಅಲ್ಲಿಂದ ಜವಾಬು ಬರುತ್ತಲೇ ಮರವನ್ನು ಸರಿಸೋಣ ಎಂದು ಜನರನ್ನು ತಡೆಯುತ್ತಾನೆ. ಮರವನ್ನು ಸರಿಸುವ ಜವಾಬ್ದಾರಿ ನಿಮ್ಮದೇ ಎಂದು ವಾಣಿಜ್ಯ ಮತ್ತು ಕೃಷಿ ಇಲಾಖೆ ಪರಸ್ಪರ ದೂಷಿಸುತ್ತವೆ.

ಮರುದಿನವೂ ಕಡತ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ, ಒಬ್ಬ ಅಧಿಕಾರಿಯಿಂದ ಮತ್ತೊಬ್ಬ ಅಧಿಕಾರಿಗೆ ಸುತ್ತಾಡುತ್ತಲೇ ಇರುತ್ತದೆ. ಹಣ್ಣು ಬಿಡುವ ಮರವಾದ ಕಾರಣ ತೋಟಗಾರಿಕೆ ಇಲಾಖೆಗೆ ಹೊತ್ತು ಹಾಕುವ ಹೊತ್ತಿಗೆ ಸಂಜೆಯಾಗಿರುತ್ತದೆ. ಜನ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಮರವನ್ನು ಕತ್ತರಿಸುವ ಪರಿಸ್ಥಿತಿಯನ್ನು ತಡೆಯಲು ಸುತ್ತ ಪೆÇಲೀಸ್ ಕಾವಲು ಹಾಕಲಾಗಿರುತ್ತದೆ. ಮರದಡಿ ಸಿಕ್ಕಿ ಹಾಕಿಕೊಂಡ ವ್ಯಕ್ತಿಯ ಕುರಿತು ದಯೆ ತೋರುವ ಪೆÇಲೀಸ್ ಪೇದೆಯೊಬ್ಬ, ಆತನಿಗೆ ಉಣ್ಣಿಸಲು ಮಾಲಿಗೆ ಅನುಮತಿ ನೀಡುತ್ತಾನೆ. ನಿಮ್ಮ ಕಡತ ಸಂಚರಿಸುತ್ತಿದೆ. ನಾಳೆ ತೀರ್ಮಾನ ಆಗುವ ವಿಶ್ವಾಸ ಇದೆ ಎಂದು ಮಾಲಿ ಮರದಡಿಯ ವ್ಯಕ್ತಿಗೆ ತಿಳಿಸುತ್ತಾನೆ. ಮೂರನೆಯ ದಿನ ತೋಟಗಾರಿಕೆ ಇಲಾಖೆಯಿಂದ ಕಡತ ವಾಪಸು ಬರುತ್ತದೆ. ಫಲ ಬಿಡುವ ಮರವನ್ನು ಕಡಿಯಲಾಗದು ಎಂದಿರುತ್ತದೆ.

ಆದರೆ ವ್ಯಕ್ತಿಯನ್ನು ಪಾರು ಮಾಡಲು ಯಾರೂ ಮುಂದಾಗುವುದಿಲ್ಲ. ಅತ್ತ ಇತ್ತ ಜಗ್ಗಾಡುವ ಈ ಸಂಗತಿ ನಾಲ್ಕು ದಿನಗಳ ನಂತರ ಮುಖ್ಯಕಾರ್ಯದರ್ಶಿಯವರ ಮೇಜನ್ನು ತಲುಪುತ್ತದೆ. ಆ ನಂತರವೂ ಜವಾಬ್ದಾರಿಯನ್ನು ಒಂದು ಸರ್ಕಾರಿ ಇಲಾಖೆಯು ಮತ್ತೊಂದು ಸರ್ಕಾರಿ ಇಲಾಖೆಗೆ ದಾಟಿಸಿ ಕೈ ತೊಳೆದುಕೊಳ್ಳುವ ಪ್ರಯತ್ನಗಳು ನಡೆದಿರುತ್ತವೆ. ಕೃಷಿವನ ಇಲಾಖೆಯಿಂದ ಸಂಸ್ಕೃತಿ ಇಲಾಖೆಗೆ ತಲುಪುತ್ತದೆ. ಮರದ ಕೆಳಗೆ ಸಿಕ್ಕಿಹಾಕಿಕೊಂಡಿರುವ ವ್ಯಕ್ತಿ ಒಬ್ಬ ಪ್ರಸಿದ್ಧ ಕವಿಯಾಗಿದ್ದ ಕಾರಣ ವಿಷಯ ಸಂಸ್ಕೃತಿ ಇಲಾಖೆಗೆ ರವಾನೆಯಾಗಿರುತ್ತದೆ.

ಸಂಸ್ಕೃತಿ ಇಲಾಖೆಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡುತ್ತಾನೆ. ಮರದ ಕೆಳಗೆ ಸಿಕ್ಕಿ ಹಾಕಿಕೊಂಡಿರುವ ಪ್ರಸಿದ್ಧ ಕವಿಗೆ ಪ್ರಶಸ್ತಿ ಗಳಿಸಿಕೊಟ್ಟಿದ್ದ ಪುಸ್ತಕವನ್ನು ಹೊಗಳುತ್ತಾನೆ. ಮತ್ತು ಕವಿಯನ್ನು ಪಾರು ಮಾಡುವುದು ತನ್ನ ಕೆಲಸ ಅಲ್ಲವೆಂದು ಖುದ್ದು ಕವಿಗೇ ಹೇಳುತ್ತಾನೆ. ಆ ನಂತರ ಕವಿ ಮರದ ಕೆಳಗೆ ಸಿಕ್ಕಿಹಾಕಿಕೊಂಡಿರುವ ಕಡತ ಆರೋಗ್ಯ ಇಲಾಖೆಯನ್ನು ತಲುಪುತ್ತದೆ. ಈ ಇಲಾಖೆ ಕಡತವನ್ನು ವಿದೇಶ ಮಂತ್ರಾಲಯಕ್ಕೆ ಸಾಗ ಹಾಕುತ್ತದೆ. ಈ ನೇರಳೆ ಮರವನ್ನು ನೆರೆಯ ದೇಶದ ಪ್ರಧಾನಮಂತ್ರಿ ಇಲ್ಲಿಗೆ ಬಂದಾಗ ನೆಟ್ಟಿದ್ದೇ ಅದಕ್ಕೆ ಕಾರಣ.

ಈ ಮರವನ್ನು ಕತ್ತರಿಸಲು ವಿದೇಶೀ ಮಂತ್ರಾಲಯ ಒಪ್ಪುವುದಿಲ್ಲ. ನೆರೆಯ ದೇಶದ ಪ್ರಧಾನಿ ನೆಟ್ಟಿದ್ದ ಈ ಮರವನ್ನು ಕಡಿದರೆ ಉಭಯ ದೇಶಗಳ ನಡುವಣ ಸೌಹಾರ್ದ ಸಂಬಂಧ ಕೆಟ್ಟು ಹೋಗಬಹುದು ಎನ್ನುತ್ತದೆ. ಕಡೆಗೆ ಈ ವಿಷಯ ಪ್ರಧಾನಮಂತ್ರಿಯವರ ಸನ್ನಿಧಾನಕ್ಕೆ ಬರುತ್ತದೆ. ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮರವನ್ನು ಕತ್ತರಿಸಲು ಒಪ್ಪಿಗೆ ನೀಡುತ್ತಾರೆ. ಈ ಆದೇಶದ ಕಡತವನ್ನು ಖುದ್ದು ಸೂಪರಿಂಟಿಂಡೆಂಟ್ ನೇರಳೆ ಮರದಡಿ ಸಿಕ್ಕಿ ಹಾಕಿಕೊಂಡಿದ್ದ ಕವಿಯ ಬಳಿಗೆ ಬರುತ್ತಾನೆ. ನೋಡಪ್ಪಾ, ಪ್ರಧಾನಿ ಎಲ್ಲ ಅಂತಾರಾಷ್ಟ್ರೀಯ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡು ಮರ ಕತ್ತರಿಸಲು ಅನುಮತಿ ಕೊಟ್ಟಿದ್ದಾರೆ, ನಾಳೆ ಈ ಮರವನ್ನು ಕತ್ತರಿಸಿ ನಿನ್ನನ್ನು ಬಚಾವು ಮಾಡಲಾಗುವುದು ಎಂದು ಕೂಗಿ ಹೇಳುತ್ತಾನೆ. ಬಳಿ ಬಂದು ಅವನ ಭುಜ ಅಲುಗಿಸಿ ಮತ್ತೆ ಹೇಳುತ್ತಾನೆ. ಆದರೆ ಕವಿಯ ಕೈ ತಣ್ಣಗಾಗಿರುತ್ತದೆ. ಕಣ್ಣು ಗುಡ್ಡೆಗಳ ಬೆಳಕು ಆರಿರುತ್ತದೆ. ಇರುವೆಗಳ ದೊಡ್ಡ ಸಾಲೊಂದು ಆತನ ಬಾಯಿಯೊಳಕ್ಕೆ ಹೊಗುತ್ತಿರುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...

ಕೇರಳ: ತಪ್ಪು ಪ್ರಕರಣದಲ್ಲಿ ಪೊಲೀಸರಿಂದ ಚಿತ್ರಹಿಂಸೆ: 29 ವರ್ಷದ ಮುಸ್ಲಿಂ ಯುವಕ ಸಾವು: ಕುಟುಂಬಕ್ಕಿದ್ದ ಒಂದೇ ಆಧಾರ ಕಳೆದುಕೊಂಡ ಪೋಷಕರು

ತಪ್ಪು ಗ್ರಹಿಕೆಯಿಂದ ಪೊಲೀಸ್ ಕಸ್ಟಡಿಗೆ ಪಡೆದ 29 ವರ್ಷದ ಮುಸ್ಲಿಂ ಯುವಕನೋರ್ವ, ಪೊಲೀಸರ ಕಠೋರ ಕಸ್ಟಡಿ ಚಿತ್ರಹಿಂಸೆಯಿಂದಾಗಿ ಪಕ್ಕೆಲುಬು ಮುರಿತಕ್ಕೊಳಗಾಗಿ, ಶ್ವಾಸಕೋಶದ ಸೋಂಕು ತೀವ್ರಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅಮಾನವೀಯ ಹಾಗೂ ಆಘಾತಕಾರಿ...

ಮಾಧ್ಯಮ ತನಿಖಾ ವರದಿಗೆ ಹೆದರಿ ₹ 99 ಲಕ್ಷ ಸಬ್ಸಿಡಿ ವಾಪಸ್ ಮಾಡಿದ ಕೇಂದ್ರ BJP ಸಚಿವ

ತಮ್ಮದೇ ಸಚಿವಾಲಯದ ಯೋಜನೆಯಡಿ ಬರೋಬ್ಬರಿ 99 ಲಕ್ಷ ರೂಪಾಯಿ ಸರ್ಕಾರಿ ಸಬ್ಸಿಡಿ ಪಡೆದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಭಾಗೀರಥ್ ಚೌಧರಿ, ಕೊನೆಗೂ ಆ...

ಕಾಮನ್‌ವೆಲ್ತ್ ಕ್ರೀಡಾಕೂಟ: ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಶರ್ಮಿಳಾ ಧನ್ಖರ್

ಎರಡು ವರ್ಷವಿದ್ದಾಗ ಪೋಲಿಯೊದಿಂದ ಅಂಗವಿಕಲಳಾಗಿ, ಬಾಲ್ಯದಲ್ಲಿ ದೌರ್ಜನ್ಯಕ್ಕೊಳಗಾದ, ವಿವಾಹದ ಆಘಾತದಿಂದ ಬದುಕುಳಿದ ಮಹಿಳೆ ಶರ್ಮಿಳಾ ಧನ್ಖರ್, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಪ್ಯಾರಾ-ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗ್ಲ್ಯಾಸ್ಗೋದಲ್ಲಿ...

ಬಿಹಾರ: ವಿದ್ಯಾರ್ಥಿಗಳ ವಿರುದ್ಧ ಎಕೆ-47 ರೈಫಲ್ ಬಳಕೆ: ಗುಂಡು ಹಾರಿಸಲು ಆದೇಶಿಸಿದವರ ವಿರುದ್ಧ ತನಿಖೆಗೆ ಮನೋಜ್ ಝಾ ಆಗ್ರಹ; ಸುಪ್ರೀಂ ಮೆಟ್ಟಿಲೇರಿದ ಪ್ರಕರಣ

ನೀಟ್ (NEET) ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪವನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಎಕೆ-47 ರೈಫಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್...

ಧರ್ಮೇಂದ್ರ ಪ್ರಧಾನ್ ಖಾತೆ ಬದಲಾವಣೆ ಪ್ರಸ್ತಾವನೆ ತಿರಸ್ಕರಿಸಿದ್ದ ಸಿಜೆಪಿ: ವರದಿ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಜುಲೈ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಕೇಂದ್ರ ಸರ್ಕಾರವು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)...

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...