Homeಕರ್ನಾಟಕಹೆಬ್ಬಾರ್ ಹಿಕಮತ್ತಿನ ಹಕೀಕತ್!!

ಹೆಬ್ಬಾರ್ ಹಿಕಮತ್ತಿನ ಹಕೀಕತ್!!

- Advertisement -
- Advertisement -

| ನಹುಷ |

ಉತ್ತರ ಕನ್ನಡದ ರಾಜಕಾರಣದ ರಂಗು ಬದಲಾಗುತ್ತಿದೆ. ಕಾರಣವಿಷ್ಟೆ ಆಪರೇಷನ್ ಕಮಲಕ್ಕೆ ಬಿಕರಿಗೊಂಡು ರಾಜೀನಾಮೆ ಕೊಟ್ಟಿರುವ ಯಲ್ಲಾಪುರ-ಮುಂಡಗೋಡ ಶಾಸಕ ಶಿವರಾಮ ಹೆಬ್ಬಾರ್ ಒಬ್ಬರೇ ಅಲ್ಲದೆ ಮಿನಿಸ್ಟರ್ ಆರ್.ವಿ.ದೇಶ್‍ಪಾಂಡೆಯೂ ಬಿಜೆಪಿ ಸೆಳೆತಕ್ಕೆ ಸಿಲುಕಿದ್ದಾರೆಂಬ ಸುದ್ದಿ ದೊಡ್ಡ ಚರ್ಚೆಗೀಡಾಗಿ ಹೋಗಿದೆ. ಮಜಾ ಎಂದರೆ, ಕಾಂಗ್ರೆಸಲ್ಲಿದ್ದರೆ ತನ್ನ ಆಸೆಗೆಲ್ಲ ದೇಶಪಾಂಡೆ ಕಲ್ಲು ಹಾಕುತ್ತಾರೆಂಬ ಸಿಟ್ಟಿಂದ ಬಿಜೆಪಿ ಪಾಳೆಯಕ್ಕೆ ಎಂಟ್ರಿ ಹೊಡೆದಿದ್ದ ಹೆಬ್ಬಾರ್ ಅದೇ ಹಿತಶತ್ರು ದೇಶಪಾಂಡೆ ತನ್ನ ಬೆನ್ನಟ್ಟಿ ಬರುತ್ತಿರುವುದು ಕೇಳಿ ಬೆಚ್ಚಿಬಿದ್ದಿದ್ದಾರೆ!!

ಕಾಂಗ್ರೆಸ್‍ನಿಂದಲೇ ಸ್ಪರ್ಧಿಸಿ ಏದುಸಿರು ಬಿಡುತ್ತಲೇ ಗೆಲ್ಲುತ್ತಿದ್ದಂತೆಯೇ ಹೆಬ್ಬಾರ್, ದೇಶಪಾಂಡೆಗೆ ಸೆಡ್ಡು ಹೊಡೆದು ಮಂತ್ರಿಗಿರಿಗೆ ಲಾಬಿ ಮಾಡಿದರು. ಮತ್ತೊಂದೆಡೆ ಬಿಜೆಪಿಯವರಿಂದ ಆಪರೇಷನ್ ಮಾಡಿಸಿಕೊಳ್ಳಲು ಪ್ರಯತ್ನಿಸಿದರು. ಯಡ್ಡಿ ಮಗ ಹೆಬ್ಬಾರ್ ಹೆಂಡತಿಯೊಂದಿಗೆ ಲೇವಾದೇವಿ ವ್ಯವಹಾರಕ್ಕಿಳಿದ ಆಡಿಯೋ ಕೂಡ ಆಗ ಹೊರಬಂದಿತ್ತು. ಹೆಬ್ಬಾರ್ ಪರಿವಾರ ಮಾನ ಹರಾಜಾದರೂ ಇದೇ ಸಾಹಸ ಎಂಬಂತೆ ಬೀಗಿದರು. ಮಂತ್ರಿಗಿರಿಗಾಗಿ ಕಾಂಗ್ರೆಸ್ ಹೈಕಮಾಂಡನ್ನು ಬ್ಲಾಕ್‍ಮೇಲ್ ಮಾಡುತ್ತಲೇ ಇದ್ದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷತೆ ಕೊಟ್ಟರೂ ಬೇಡವೆನ್ನಲಿಲ್ಲ ಈ ಆಸೆಬುರುಕ!!

ಕೇವಲ ಒಂದು ಸಾವಿರದ ನಾಲ್ಕುನೂರು ಮತಗಳಂತರದಿಂದ ಬಚಾವಾಗಿರುವ ಹೆಬ್ಬಾರ್‍ಗೆ ಮತ್ತೆ ಅದೇ ಕಾಂಗ್ರೆಸ್‍ನಿಂದ ಗೆಲ್ಲುತ್ತೇನೆಂಬ ಧೈರ್ಯ ಉಳಿದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಬಳ್ಳಾರಿಯ ಕಬ್ಬಿಣದ ಅದಿರು ಕದ್ದು ವಿದೇಶಕ್ಕೆ ರಪ್ತು ಮಾಡಿದ ಕೇಸಲ್ಲಿ ಸಿಬಿಐ ವಿಚಾರಣೆ ಎದುರಿಸುತ್ತಿರುವ ಹೆಬ್ಬಾರ್ ಹಾಗೂ ಆತನ ಕುಲೋದ್ಧಾರಕ ವಿವೇಕ್ ಹೆಬ್ಬಾರ್ ಆ ಕುಣಿಕೆಯಿಂದ ಪಾರಾಗಲು ಬಲಾಢ್ಯ ಬಿಜೆಪಿ ಸೇರುವುದು ಅನಿವಾರ್ಯವಾಗಿದೆ. ಒಂದು ಕಾಲದಲ್ಲಿ ಪ್ರಾಥಮಿಕ ಶಿಕ್ಷಣವೂ ಮುಗಿಸಲಾಗದೆ ಲಾರಿ ಡ್ರೈವರಿಕೆ ಮಾಡಿಕೊಂಡಿದ್ದ ಹೆಬ್ಬಾರ್ ಇವತ್ತು ಕೋಟಿ-ಕೋಟಿ ತೂಗುವ ಅದಿರು ಉದ್ಯಮಿಯಾಗಿ, ರಾಜ್ಯ ಸರ್ಕಾರವನ್ನೇ ಉರುಳಿಸುವ ಪ್ರಭಲ ಶಾಸಕ ಸಾಹೇಬನಾಗಿ ಬೆಳೆದಿರುವುದು ಪ್ರಜಾಪ್ರಭುತ್ವದ ದುರಂತವೇ ಸರಿ!

ಹೆಬ್ಬಾರ್‍ಗೆ ಬಿಜೆಪಿ “ಸಂಸ್ಕೃತಿ” ಹೊಸತೇನೂ ಅಲ್ಲ. 1990ರ ದಶಕದ ಅಂತ್ಯದಲ್ಲಿ ಆತ ಜಿಲ್ಲಾ ಬಿಜೆಪಿ ಅಧ್ಯಕ್ಷತೆ ನಿಭಾಯಿಸಿದ್ದ. ಆದರೆ ಬಿಜೆಪಿಯಲ್ಲಿ ಆತನಿಗೆ ಕಾಗೇರಿ ಮಾಣಿ, ಅನಂತ್ಮಾಣಿ ಜತೆ ಏಗಲಾಗಲಿಲ್ಲ. ಸಂಸದ ಅನಂತ್ಮಾಣಿ ಶಿರಸಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲೇ ಈ ಹೆಬ್ಬಾರ್‍ಗೆ ಅಂದು ಕೆನ್‍ಕೆನ್ನೆಗೆ ಬಾರಿಸಿದ್ದ. ತಾನು ಬಿಜೆಪಿಯಲ್ಲಿನ್ನೂ ಬಚಾವಾಗಲಾರೆನೆಂದು ಅರಿತ ಹೆಬ್ಬಾರ್ ಕಾಂಗ್ರೆಸ್‍ನ ಪವರ್‍ಫುಲ್ ನಾಯಕಿಯಾಗಿದ್ದ ಮ್ಯಾಗಿಯ ಸೆರಗು ಹಿಡಿದು ಕಾಂಗ್ರೆಸ್‍ಗೆ ನುಸುಳಿದ್ದ. ಬಂದವನೇ ಡಬಲ್‍ಗೇಮ್ ಶುರುಹಚ್ಚಿಕೊಂಡಿದ್ದ. ಹಗಲು ಮ್ಯಾಗಿ ಬಿಡಾರದಲ್ಲಿದ್ದರೆ ರಾತ್ರಿ ದೇಶ್‍ಪಾಂಡೆ ಕ್ಯಾಂಪಿನಲ್ಲಿ ಕಾಣಿಸುತ್ತಿದ್ದ. ಇದರಿಂದ ಕೆರಳಿದ ದೇಶಪಾಂಡೆ ಆತನ ಬಾಲ ಕಟ್ ಮಾಡಲು ಮುಂದಾದರು. ಮ್ಯಾಗಿ ಕಾಂಗ್ರೆಸಲ್ಲಿ ಕಾವು ಕಳಕೊಳ್ಳುತ್ತಿದ್ದಂತೆಯೇ ಹೆಬ್ಬಾರ್ ದೇಶಪಾಂಡೆಗೆ ಆಹಾರವಾಗಿ ಹೋದ!!
ಕಳೆದ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಹೆಬ್ಬಾರ್ ಎದುರು ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ.ಎಸ್.ಪಾಟೀಲ್ ತಲೆ ಕಂಡರೆ ಸಂಸದ ಮಾಣಿಗೆ ಆಗದು. ಹಾಗಾಗಿ ಆತ ಹಳೆ ವೈರತ್ವ ಮರೆತು ಸ್ವ-ಜಾತಿಯ ಹೆಬ್ಬಾರ್‍ಗೆ ಸಹಕರಿಸಿದ್ದ. ಈ ಹವ್ಯಕ ಹಿತಾಸಕ್ತಿಯ ರಾಜಕಾರಣದಲ್ಲಿ ಸ್ವರ್ಣವಲ್ಲಿ ಸ್ವಾಮಿಯ “ಮಂತ್ರಾಕ್ಷತೆ”ಯೂ ಕೆಲಸ ಮಾಡಿತ್ತು.

ರಾಮಕೃಷ್ಣ ಹೆಗಡೆ ಕಾಲದಿಂದ ನಿರಂತರವಾಗಿ ಒಂದಿಲ್ಲೊಂದು ಅಧಿಕಾರ ಅನುಭವಿಸುತ್ತಿರುವ ದೇಶಪಾಂಡೆ ಈಗ ಹಣ್ಣಾಗಿದ್ದಾರೆ. ಈ ಮುದಿ ಕಾಲದಲ್ಲಿ ಎರಡು ಆಸೆ ಆತನಲ್ಲಿದೆ. ಒಂದು ತಾನು ಮುಖ್ಯಮಂತ್ರಿ ಆಗಬೇಕೆಂಬುದು. ಮತ್ತೊಂದು, ತನ್ನ ಸುಪುತ್ರ ಪ್ರಶಾಂತನನ್ನು ಎಂಪಿ ಅಥವಾ ಎಮ್ಮೆಲ್ಲೆ ಮಾಡಬೇಕೆಂಬುದು. ಬಿಜೆಪಿ ಸೇರಿದರೆ ಸಿಎಂ ಆಗುವುದು ಕಷ್ಟ. ಹಾಗೆಯೇ ಕಾಂಗ್ರೆಸಲ್ಲುಳಿದರೆ ಮಗನ ಭವಿಷ್ಯಕ್ಕೆ ಮಾರಕ. ಹೀಗಾಗಿ ದೇಶಪಾಂಡೆ ಎರಡು ದೋಣಿಯ ಮೇಲೆ ಕಾಲಿಟ್ಟು ಹೊಯ್ದಾಡುತ್ತಿದ್ದಾರೆ. ಈಗೀಗ ಕಾಂಗ್ರೆಸಲ್ಲೂ ದೇಶಪಾಂಡೆಗೆ ಅಂಥ ಪ್ರಾಮುಖ್ಯತೆ ಸಿಗುತ್ತಿಲ್ಲ. ಆದರೂ ತಾನೇನಾದರೂ ರಾಜಿ ಅಭ್ಯರ್ಥಿಯಾಗಿ ಸಮ್ಮಿಶ್ರದ ಸಿಎಂ ಆಗಬಹುದೆಂಬ ಯೋಚನೆಯಿಂದ ದೇಶಪಾಂಡೆ ಗಡಿಬಿಡಿಗೆ ಬಿದ್ದಿದ್ದಾರೆ. ದೇವೇಗೌಡರ ಮನೆಗೆ ಹೋಗಿ ಗಂಟೆಗಟ್ಟಲೆ ಮಾತಾಡುತ್ತಿದ್ದಾರೆ. ಅತ್ತ ಕಾಂಗ್ರೆಸ್ ಹೈಕಮಾಂಡ್‍ಗೆ ತನ್ನನ್ನು ಸಿಎಂ ಕ್ಯಾಂಡಿಡೇಟ್ ಮಾಡಿದರೆ ಓಡಿಹೋಗಿರುವ ಶಾಸಕರಲ್ಲಿ ಕೆಲವರನ್ನಾದರೂ ಖರೀದಿಸಿ ತರುತ್ತೇನೆಂದು ಭರವಸೆ ಕೊಡುತ್ತಿದ್ದಾರೆ.
ಈ ನೈಚ್ಯಾನುಸಂಧಾನದಲ್ಲಿ ಸೋತರೆ ದೇಶಪಾಂಡೆಗೆ ಮಗನ ಭವಿಷ್ಯ ಮುಖ್ಯವಾಗುತ್ತಿದೆ. ಅಂದರೆ ಆತ ಬಿಜೆಪಿ ಪಾಲಾಗುವುದು ಪಕ್ಕಾ. ಅಮಿತ್ ಶಾ ಈಚೆಗೆ ಗೋವಾಕ್ಕೆ ಬಂದಾಗ ದೇಶಪಾಂಡೆ ರಹಸ್ಯವಾಗಿ ಸಂಧಿಸಿ ಬಂದಿದ್ದಾರೆ. ಸಮ್ಮಿಶ್ರ ಸರ್ಕಾರ ಪತನವಾಗುತ್ತಲೇ ಆತ ಬಿಜೆಪಿಗೆ ಅಧಿಕೃತವಾಗಿ ಪ್ರವೇಶ ಪಡೆಯುತ್ತಾರೆ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಮಂತ್ರಿಯಾಗುವ ಯೋಗದ ದೇಶಪಾಂಡೆ ಈ ಬಾರಿ ಬಿಜೆಪಿಯಲ್ಲಿ ಮಂತ್ರಿಗಿರಿ ಕೇಳುತ್ತಿಲ್ಲ. ಬದಲಿಗೆ ತನ್ನ ಮಗ ಪ್ರಶಾಂತನಿಗೆ ಎಂಪಿ ಅಥವಾ ಹಳಿಯಾಳದ ಎಮ್ಮೆಲ್ಲೆ ಟಿಕೆಟ್ ಕೇಸರಿ ಪಕ್ಷದಿಂದ ಬಯಸುತ್ತಿದ್ದಾರೆ. ಹಳಿಯಾಳದಲ್ಲಿ ಬಗಲಲ್ಲಿರುವವ ದುಷ್ಮನ್-ಎಮ್ಮೆಲ್ಲೆ ಎಸ್.ಎಲ್.ಘೋಟನೇಕರ್ ತಿರುಗಿ ಬಿದ್ದರೆ ಬಿಜೆಪಿಯಿಂದಲೂ ತನ್ನ ಮಗ ಗೆಲುವು ಕಷ್ಟವೆಂಬ ಲೆಕ್ಕಾಚಾರವೂ ಆತ ಹಾಕಿದ್ದಾರೆ. ಬಹುಸಂಖ್ಯಾತ ಮರಾಠ ಸಮಾಜದ ಘೋಟನೇಕರ್ ತನ್ನ ಮಗನನ್ನು ಹಳಿಯಾಳದ ಭಾವಿ ಎಮ್ಮೆಲ್ಲೆ ಎಂದೇ ದೃಢವಾಗಿ ನಂಬಿದ್ದಾರೆ. ಹೀಗಾಗಿ ದೇಶಪಾಂಡೆ ತನ್ನ ಬೀಗ, ಪ್ರಶಾಂತನಿಗೆ ಹೆಣ್ಣುಕೊಟ್ಟು ಮಾವ ಮುಂಬೈನ ಪ್ರಭಾವಿ ರಾಜಕಾರಣಿ ಪ್ರಫುಲ್ ಪಟೇಲ್ ಬಲವೂ ಸೇರಿಸಿಕೊಂಡು ಮಗನಿಗೆ ಎಂಪಿ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.
ದೇಶಪಾಂಡೆ ಬಿಜೆಪಿ ಸೇರಿದರೆ ಏನಾಗುತ್ತದೆ? ಆತನ ಮಗನ ಭವಿಷ್ಯ ಬೆಳಗುತ್ತದೆ. ಶಿವರಾಮ ಹೆಬ್ಬಾರನ ಗ್ರಹಚಾರ ಮತ್ತೆ ಕೆಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...