Homeಮುಖಪುಟಪ್ಯಾರಲಲ್ ಸಿನೆಮಾ V/S ಕಮರ್ಷಿಯಲ್ ಸಿನಿಮಾ ಸಿನಿಮಾ ಎಂಬ ಹುಸಿ ವೈರುಧ್ಯ

ಪ್ಯಾರಲಲ್ ಸಿನೆಮಾ V/S ಕಮರ್ಷಿಯಲ್ ಸಿನಿಮಾ ಸಿನಿಮಾ ಎಂಬ ಹುಸಿ ವೈರುಧ್ಯ

- Advertisement -
- Advertisement -

| ರಾಜಶೇಖರ್ ಅಕ್ಕಿ |

ಸಿನಿಯಾನ ಅಂಕಣ ಶುರುವಾದ ನಂತರ ಕೆಲವು ಪ್ರಶ್ನೆಗಳು ಬಂದಿವೆ. ಅವುಗಳಲ್ಲಿ ಒಂದೆರಡನ್ನು ಉತ್ತರಿಸುವ ಪ್ರಯತ್ನ ಮಾಡುವೆ.

ಸಿನೆಮಾದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಅಂಶ ಯಾವುದು? ಕಥೆಯೇ, ಚಿತ್ರಕಥೆಯೇ, ಸಂಭಾಷಣೆಯೇ, ನಾಯಕ ನಾಯಕಿಯೇ, ನಟರೇ, ಹಾಡುಗಳೆ ಇತ್ಯಾದಿಗಳಲ್ಲಿ ಯಾವುದು ಒಂದು ಸಿನೆಮಾದ ಯಶಸ್ಸನ್ನು ನಿರ್ಧರಿಸುತ್ತದೆ?

ಪ್ಯಾರಲಲ್ ಸಿನೆಮಾ ಮತ್ತು ಕಮರ್ಷಿಯಲ್ ಸಿನೆಮಾಗಳ ವ್ಯತ್ಯಾಸವೇನು? ಹಿಂದಿಯಲ್ಲಿ ಅನೇಕ ಪ್ಯಾರಲೆಲ್ ಸಿನೆಮಾಗಳು ಬರುತ್ತಿವೆ, ಯಶಸ್ಸೂ ಗಳಿಸುತ್ತಿವೆ, ಕನ್ನಡದಲ್ಲಿ ಏಕೆ ಆಗುತ್ತಿಲ್ಲ?

ಎರಡನೇ ಪ್ರಶ್ನೆಯನ್ನೇ ಮೊದಲು ಎತ್ತಿಕೊಳ್ಳುವ. ಹೌದು ಕೆಲ ದಶಕಗಳ ಹಿಂದೆ ಪ್ಯಾರಲಲ್ ಸಿನೆಮಾ ಮತ್ತು ಕಮರ್ಷಿಯಲ್ ಸಿನೆಮಾ ಎನ್ನುವ ಬೇರೆ ಬೇರೆ ಹೊನಲುಗಳಿದ್ದದ್ದು ನಿಜ. 60ರ ಮತ್ತು 70ರ ದಶಕಗಳಲ್ಲಿ ರಾಜೇಶ್ ಖನ್ನಾ ಸೂಪರ್‍ಸ್ಟಾರ್ ಆಗಿ ಮೆರೆದು, 70ರ ದಶಕದಲ್ಲಿ ಆ್ಯಂಗ್ರಿ ಯಂಗ್‍ಮ್ಯಾನ್ ಅಮಿತಾಭ್ ಬಚ್ಚನ್ ಎರಡನೆಯ ಮತ್ತು ಭಾರತೀಯ ಚಿತ್ರರಂಗದ ಕೊನೆಯ ಸೂಪರ್‍ಸ್ಟಾರ್ ಆಗಿ ಒಂದಾದಮೇಲೆ ಒಂದು ಹಿಟ್ ಚಿತ್ರಗಳನ್ನು ನೀಡುತ್ತಿದ್ದಾಗಿನ ಸಮಯ ಮತ್ತು ಆಗಿನ ಸಾಮಾಜಿಕ ಪರಿಸ್ಥಿತಿಗಳು ವಿಶಿಷ್ಟವಾಗಿದ್ದವು (ಇದರ ಬಗ್ಗೆ ಅನೇಕ ಅಧ್ಯಯನಗಳಾಗಿವೆ.) ಅದಾದನಂತರ ಬಂದ 80ರ ದಶಕವನ್ನು ಹಿಂದಿ ಚಿತ್ರರಂಗದ ಅತ್ಯಂತ ಕೆಟ್ಟ ದಶಕವೆಂದೇ ಕರೆಯಲಾಗುತ್ತದೆ. ಆ ಸಮಯದಲ್ಲಿಯೇ ಫಾರ್ಮುಲಾ ಸಿನೆಮಾ ಎನ್ನುವ ಪದ ಚಾಲ್ತಿಯಲ್ಲಿ ಬಂತು. ಸಿನೆಮಾ ಅಂದರೆ ಒಂದು ಊಟದ ಥಾಲಿ ಇದ್ದಂತೆ, ರೊಟ್ಟಿ ಅನ್ನ ಪಲ್ಯದಂತಹ ಸಾತ್ವಿಕ ಪದಾರ್ಥದೊಂದಿಗೆ ಉಪ್ಪಿನಕಾಯಿಯಂತಹ ಪದಾರ್ಥಗಳೂ ಇರಬೇಕು ಎನ್ನುವ ಮೂರ್ಖ ಅಸಂಬದ್ಧ ಮಾತುಗಳೂ ಕೇಳಿಬಂದವು. ಆ ಫಾರ್ಮುಲಾಗಳಿಗೆ ಅನುಗುಣವಾಗಿಯೇ ಹಾಡುಗಳು ಫೈಟ್‍ಗಳು, ಪ್ಯಾಥೋ ಎಮೋಷನ್‍ಗಳು, ಹೀರೋನ ಬಾಲ್ಯವಿರುವ, ಉದ್ರೇಕಕಾರೀ ದೃಶ್ಯಗಳನ್ನು ಒಳಗೊಂಡ ಅನೇಕ ಚಿತ್ರಗಳು ಬಂದವು. ಅದರಲ್ಲಿ ಹೆಚ್ಚಿನವು ಕೆಟ್ಟ ಚಿತ್ರಗಳಾಗಿದ್ದವು ಎಂದರೆ ಬಹುತೇಕರು ಆಕ್ಷೇಪಿಸಲಾರರು. ಆ ಸಮಯದಲ್ಲಿ ಇಂಥ ಚಿತ್ರಗಳನ್ನು ನೋಡಿ ಬೇಸತ್ತು, ತಮ್ಮಲ್ಲಿಯ ಕಥೆಗಳನ್ನು ಹೇಳಬೇಕೆನ್ನುವ ತುಡಿತ ಇರುವ ನಿರ್ದೇಶಕರು ಈ ಪ್ಯಾರಲಲ್ ಸಿನೆಮಾದ ಪಯಣವನ್ನು ಶುರುಮಾಡಿದರು. ಅಂದಹಾಗೆ, ಈ ‘ಪ್ಯಾರಲಲ್ ಸಿನೆಮಾ’ ಎನ್ನುವ ಪದ ನನ್ನನ್ನೂ ಒಳಗೊಂಡಂತೆ ಯಾವ ನಿರ್ದೇಶಕನಿಗೂ ಇಷ್ಟ ಇಲ್ಲ. 1975ರಲ್ಲಿ ಸ್ಥಾಪಿತವಾದ ನ್ಯಾಷನಲ್ ಫಿಲ್ಮ್ ಡೆವಲಪ್‍ಮೆಂಟ್ ಕಾರ್ಪೊರೇಷನ್ NFDC ಇದರಲ್ಲಿ ಪ್ರಮುಖ ಪಾತ್ರ ವಹಿಸಿತು (ಇನ್ನೂ ಕೆಲಸ ಮಾಡುತ್ತಿದೆ). ಶ್ಯಾಮ್ ಬೆನಗಲ್, ಅಡೂರ್ ಗೋಪಾಲಕೃಷ್ಣ, ಸುಧೀರ್ ಮಿಶ್ರ, ಮಣಿ ಕೌಲ್, ಎಮ್ ಎಸ್ ಸತ್ಯು, ಬಾಸು ಚಟರ್ಜಿ ಮತ್ತು ಗಿರೀಶ್ ಕಾಸರವಳ್ಳಿಯಂತಹ ಅನೇಕರು ಹಲವಾರು ಉತ್ಕೃಷ್ಠ ಸಿನೆಮಾಗಳನ್ನು ನೀಡಿದರು.

ಅನೇಕರು ಪ್ಯಾರಲಲ್ ಸಿನೆಮಾ ಎಂದರೆ ಬೋರು ಹೊಡೆಸುವ, ಮಂದಗತಿಯ, ಹೆಚ್ಚಿನ ಬೆಳಕಿರದ ಸಿನೆಮಾಗಳು ಎಂತಲೇ ಭಾವಿಸಿದ್ದಾರೆ. ಇದು ಸತ್ಯಕ್ಕೆ ದೂರ. ಹೌದು ಅನೇಕ ಪ್ಯಾರಲಲ್ ಸಿನೆಮಾಗಳು ಹಾಗಿದ್ದಿರಬಹುದು ಆದರೆ ಕಮರ್ಷಿಯಲ್ ಸಿನೆಮಾದ ಬ್ರ್ಯಾಕೆಟ್‍ನಲ್ಲಿ ಬರುವ ಸಿನೆಮಾಗಳೂ ಬೋರು ಹೊಡೆಸುವ ಸಿನೆಮಾಗಳು ಆಗಿದ್ದವು. ಪ್ಯಾರಲಲ್ ಸಿನೆಮಾ ಎನ್ನುವ ಹೆಚ್ಚಿನ ಸಿನೆಮಾಗಳು ಖಂಡಿತವಾಗಿಯೂ ಸಿನಿಮೀಯ ಅಂಶಗಳನ್ನು ಹೊಂದಿದ್ದವು. ಕಥೆಯನ್ನು ಹೇಳುವ ತಂತ್ರಗಾರಿಕೆಯೊಂದಿಗೆ ಹಲವಾರು ನಿರ್ದೇಶಕರು ಆಟವಾಡಿದರು. ಗಟ್ಟಿಯಾದ ನಿರೂಪಣೆಯೊಂದಿಗೆ ಆಯಾ ಚಿತ್ರಗಳ ಛಾಯಾಗ್ರಹಣ, ಅಭಿನಯ, ಹಿನ್ನೆಲೆ ಸಂಗೀತ ಇವೆಲ್ಲವುಗಳೊಂದಿಗೂ ಪ್ರಯೋಗಗಳನ್ನು ಮಾಡಲಾಯಿತು. ಅನೇಕ ಕಾದಂಬರಿ ಮತ್ತು ಸಣ್ಣಕಥೆಗಳನ್ನು ಆಧರಿಸಿ ಗ್ರಾಮೀಣ ಮತ್ತು ನಗರ ಪ್ರದೇಶದ ಕಥೆಗಳನ್ನು ಹೆಣೆದರು. ಹಾಡು ಫೈಟ್‍ಗಳೇ ಮನೋರಂಜನೆ ಎಂದುಕೊಂಡವರಿಗೆ ಬಹುಶಃ ಬೋರ್ ಹೊಡೆಸಿರಬಹುದು. ಆದರೆ ಹಾಡು ಫೈಟ್‍ಗಳೇ ಬೋರು ಹೊಡೆಸುವುದಕ್ಕೆ ಕಾರಣವಾಗಬಲ್ಲವು ಎನ್ನುವ ಅಂಶ ಮರೆಯಬಾರದು.

ಕಮರ್ಷಿಯಲ್ ಸಿನೆಮಾ ಮತ್ತು ಪ್ಯಾರಲಲ್ ಸಿನೆಮಾ ಎಂದು ಸಿನೆಮಾಗಳನ್ನು ಪ್ರತ್ಯೇಕಿಸುವುದೇ ತಪ್ಪು ಎನ್ನುವ ಒಮ್ಮತಕ್ಕೆ ಇತ್ತೀಚಿಗೆ ಎಲ್ಲರೂ ಬಂದಿದ್ದಾರೆ. ಕಮರ್ಷಿಯಲ್ ಎನ್ನುವ ಸಿನೆಮಾಗಳಲ್ಲೂ ಅನೇಕ ಅತ್ಯುತ್ತಮ ಸಿನೆಮಾಗಳು ಬಂದವು ಎನ್ನುವುದನ್ನು ಮರೆಯಬಾರದು ಹಾಗೂ ಹೆಚ್ಚಿನ ಕಮರ್ಷಿಯಲ್ ಸಿನೆಮಾಗಳನ್ನೂ ಜನರು ನೋಡುವುದಿಲ್ಲ ಎನ್ನುವುದನ್ನೂ ಗಮನಿಸಬೇಕು.

ತೊಂಭತ್ತರ ದಶಕದಲ್ಲಿ ಟಿವಿಯ ಆಗಮನ, ಎನ್‍ಎಫ್‍ಡಿಸಿಯೊಂದಿಗೆ ಆದ ಸಮಸ್ಯೆಗಳು ಹಾಗೂ ಸ್ವತಃ ನಿರ್ದೇಶಕರ ಸಮಸ್ಯೆಗಳಿಂದಾಗಿ ಪ್ಯಾರಲಲ್ ಸಿನೆಮಾ ಎನ್ನುವ ಪ್ರಕ್ರಿಯೆ ಕೊನೆಗೊಳ್ಳುತ್ತ್ತಾ ಬಂತು.

ಆದರೆ ಈ ವರ್ಷಗಳಲ್ಲಿ ಅನೇಕ ಪ್ಯಾರಲಲ್ ಸಿನೆಮಾಗಳು ಬಂದಿವೆ ಹಾಗೂ ಯಶಸ್ಸನ್ನೂ ಕಂಡಿವೆ, ಕನ್ನಡದಲ್ಲಿ ಏಕೆ ಅಂತಹ ಸಿನೆಮಾಗಳು ಬರುತ್ತಿಲ್ಲ ಎನ್ನುವ ಪ್ರಶ್ನೆ ಬಂತು. ನಾನೂ ಆ ಚಿತ್ರಗಳಿಗೆ ಉದಾಹರಣೆಗಳನ್ನು ಕೇಳಿದಾಗ ಮುಲ್ಕ್, ತಲ್ವಾರ್ ಅಲಿಗಢ, ವಿಕಿ ಡೋನರ್ ಪಿಂಕ್, ಪೀಕು ಹಾಗೂ ಇಂತಹ ಉದಾಹರಣೆಗಳನ್ನು ನೀಡಿದರು. ನಾನು ಪ್ಯಾರಲಲ್ ಸಿನೆಮಾ ಎನ್ನುವ ಪದದ ಬಳಕೆಗೆ ಆಕ್ಷೇಪಿಸಿದಾಗ ‘ಬ್ರಿಜ್ ಸಿನೆಮಾ’ ಎನ್ನುವ ಮತ್ತೊಂದು ಪದ ಬಳಸಿದರು, ಅದಕ್ಕೆ ಕಾರಣ ಕೇಳಿದಾಗ ಆ ಚಿತ್ರಗಳಲ್ಲಿ ಹಾಡುಗಳಿರುವುದಿಲ್ಲ, ಫೈಟ್‍ಗಳೂ ಇರುವುದಿಲ್ಲ, ಕ್ಯಾಬರೆ ಇರುವುದಿಲ್ಲ ಎಂದು ಹೇಳಿದರು.

ಇವುಗಳೇ ಮೊದಲ ಪ್ರಶ್ನೆಗೆ ಎಡೆಮಾಡಿಕೊಡುತ್ತವೆ. ಒಂದು ಚಿತ್ರ ಯಶಸ್ಸಿಗೆ ಮೂಲ ಕಾರಣಗಳೇನು? ಕಥೆ, ಚಿತ್ರಕಥೆ, ಸಂಭಾಷಣೆ, ಅಭಿನಯ, ಸಂಗೀತ, ಛಾಯಾಗ್ರಹಣ ಇವೆಲ್ಲವುಗಳನ್ನೂ ಪ್ರತ್ಯೇಕಿಸಿ ನೋಡಬಾರದೆಂದು ನನ್ನ ಅನಿಸಿಕೆ. ಒಂದು ಯಶಸ್ವೀ ಚಿತ್ರವು ಈ ಎಲ್ಲ ಅಂಶಗಳನ್ನೂ ಒಳಗೊಂಡು ಸಮಗ್ರವಾಗಿ ಕೆಲಸ ಮಾಡಿರುತ್ತದೆ. ಖಂಡಿತವಾಗಿಯೂ ಚಿತ್ರದ ಸ್ಟ್ರಕ್ಚರ್ ಆ ಚಿತ್ರಕ್ಕೆ ಭದ್ರ ಅಡಿಪಾಯ ಹಾಕುತ್ತದೆ. ಆ ಅಡಿಪಾಯ ಗಟ್ಟಿಯಿದ್ದು ಮಿಕ್ಕ ಎಲ್ಲ ಅಂಶಗಳೂ ಸರಿಯಾಗಿದ್ದಾಗ ಚಿತ್ರ ಗೆಲ್ಲುವುದು ಖಚಿತ. ಆಗ ಆ ಚಿತ್ರಗಳಲ್ಲಿ ಹಾಡು ಫೈಟ್ ಕ್ಯಾಬರೆ ಇವೆಯೇ ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ. ಮನರಂಜನೆಗೆ ಹಾಡು ಫೈಟ್‍ಗಳು ಮಾನದಂಡವೂ ಅಲ್ಲ.

ಜನರು ಕಲಾತ್ಮಕ ಚಿತ್ರಗಳನ್ನು ನೋಡಲಿಚ್ಛಿಸುವುದಿಲ್ಲ, ಬರೀ ಹಾಡು ಫೈಟ್‍ಗಳ ಚಿತ್ರಗಳೇ ಅವರಿಗೆ ಇಷ್ಟ ಎಂದು ಕೆಲವರು ವಾದಿಸುವವರಿದ್ದಾರೆ; ಅದು ಸತ್ಯವೋ ಸುಳ್ಳೋ ಗೊತ್ತಿಲ್ಲ. ಕೆಲದಿನಗಳ ಹಿಂದೆ ಇಂಥದ್ದೇ ಚರ್ಚೆ ನಡೆದಾಗ ನನ್ನ ಸ್ನೇಹಿತರೊಬ್ಬರು ಇತರರಿಗೆ ಚಾಲೆಂಜ್ ಮಾಡಿದರು. ಕಳೆದ ಒಂದು ದಶಕದಲ್ಲಿ ಯಶಸ್ಸು ಕಾಣದ ಒಂದು ಶ್ರೇಷ್ಠ ಚಿತ್ರವನ್ನು ಹೆಸರಿಸಿ, ಆಗ ನಾನು ಪ್ರೇಕ್ಷಕರ ಮನಸ್ಥಿತಿಯ ಬಗ್ಗೆ ನೀವು ಹೇಳುವುದನ್ನು ಒಪ್ಪಿಕೊಳ್ಳುತ್ತೇನೆ ಎಂದರು. ಅಲ್ಲಿದ್ದ ಯಾರಿಗೂ ಸುಲಭವಾದ ಉತ್ತರ ಸಿಗಲಿಲ್ಲ. ಕಲಾತ್ಮಕ ಚಿತ್ರದ ಪರಿಧಿಯಲ್ಲಿ ಬರುವ ಹಲವಾರು ಚಿತ್ರಗಳ ಹೆಸರು ಕೇಳಿಬಂದವು ಆದರೆ ಅವೆಲ್ಲವೂ ಕಳಪೆ ಚಿತ್ರಗಳು ಎನ್ನುವುದನ್ನು ಯಾರೂ ನಿರಾಕರಿಸಲಾಗಲಿಲ್ಲ. ಹಾಗಾಗಿ ನಿಷ್ಕರ್ಷವಿಷ್ಟೆ; ಕಲಾತ್ಮಕ, ಪ್ಯಾರಲಲ್, ಬ್ರಿಜ್ ಸಿನೆಮಾ, ಕ್ರಾಸ್‍ಓವರ್ ಸಿನೆಮಾ, ಅವಾರ್ಡ್ ಸಿನೆಮಾ ಹಾಗೂ ಕಮರ್ಷಿಯಲ್ ಸಿನೆಮಾ, ಇವೆಲ್ಲವೂ ಹುಸಿ ಕಪ್ಪುಬಿಳುಪುಗಳು (false binaries). ಒಳ್ಳೇ ಚಿತ್ರ ಗೆದ್ದೇ ಗೆಲ್ಲುವುದು, ಸಿನೆಮಾ ರಚನೆಯ ಕಲೆ ಮತ್ತು ವಿಜ್ಞಾನವನ್ನು ಅರಿಯುವ. ಇಲ್ಲಿಯೂ ಮತ್ತೇ ಶ್ರೇಷ್ಠ ಸಿನೆಮಾಗಳನ್ನು ಮಾಡುವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...