Homeಕರ್ನಾಟಕ`ಅರಮನೆಯಲ್ಲಿ ಕುಳಿತರೆ ಆಮ್ಲಜನಕ ಸಿಗದು' - ಸಿಎಂಗೆ ಶಾಸಕ ಎಚ್. ಕೆ. ಪಾಟೀಲ್ ಮುಖಾಮುಖಿ ಕ್ಲಾಸ್!

`ಅರಮನೆಯಲ್ಲಿ ಕುಳಿತರೆ ಆಮ್ಲಜನಕ ಸಿಗದು’ – ಸಿಎಂಗೆ ಶಾಸಕ ಎಚ್. ಕೆ. ಪಾಟೀಲ್ ಮುಖಾಮುಖಿ ಕ್ಲಾಸ್!

- Advertisement -
- Advertisement -

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜೆಡಿಎಸ್‌ನ ಕುಮಾರಸ್ವಾಮಿ ಕೊರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ದಿನವೂ ರಾಜ್ಯ ಸರ್ಕಾರವನ್ನು ಎಚ್ಚರಿಸುತ್ತ ಬಂದಿದ್ದಾರೆ. ಇನ್ನೊಂದು ಕಡೆ ಅಸಂಖ್ಯಾತ ಸಾಮಾಜಿಕ ಸಂಘಟನೆಗಳು ಪ್ರತಿನಿತ್ಯ ಕೋವಿಡ್ ಸಂತ್ರಸ್ತರು ಮತ್ತು ಕುಟುಂಬಗಳಿಗೆ ನೆರವು ನೀಡುತ್ತಿವೆ. ಜೊತೆಗೇ ಪ್ರತಿದಿನ ಹಲವು ನಿರ್ಣಾಯಕ ಪ್ರಶ್ನೆಗಳನ್ನು ಕೇಳುತ್ತಿವೆ. ಆದರೆ, ದುರುದ್ದೇಶದಲ್ಲಿ ಬಿಬಿಎಂಪಿ ಕೋವಿಡ್ ರೂಮ್ ಹೊಕ್ಕ ಸಂಸದ ತೇಜಸ್ವಿ ಸೂರ್ಯ ಮತ್ತು ಪಟಾಲಂನ ಮಾತು ಕೇಳಿ ಸರ್ಕಾರ ಕ್ರಮ ಜರುಗಿಸಿದೆ.

ಆದರೆ ಯಾವುದೋ ಗೊಂದಲದಲ್ಲಿರುವ, ಅಸಹಾಯಕತೆಯಲ್ಲಿರುವಂತೆ ಕಾಣುವ ಸಿಎಂ ಯಡಿಯೂರಪ್ಪ ಏನನ್ನೂ ಸ್ಪಷ್ಟವಾಗಿ ಹೇಳುತ್ತಿಲ್ಲ.

ನಿನ್ನೆ ಬುಧವಾರ, ಆಕ್ಸಿಜನ್ ಪಡೆದುಕೊಳ್ಳುವ ಬಗೆಯನ್ನು ನೇರ ಯಡಿಯೂರಪ್ಪರಿಗೆ ವಿವರಿಸಿರುವ, ಅದಕ್ಕೆ ಅಗತ್ಯವಾದ ವೈಜ್ಞಾನಿಕ ಮತ್ತು ಕಾರ್ಯಸಾಧ್ಯವಾದ ವಿವರಗಳನ್ನು ನೀಡಿ ಬಂದಿರುವ ಮಾಜಿ ಸಚಿವ, ಗದಗಿನ ಹಾಲಿ ಶಾಸಕ ಎಚ್.ಕೆ ಪಾಟೀಲರಿಗೆ, ‘ನೀವು ಆಕ್ಸಿಜನ್ ಕುರಿತು ವಿವರಿಸುವಾಗ ಸಿಎಂ ಸಾಹೇಬರ ಭಾವ, ಮನಸ್ಥಿತಿ ಹೇಗಿತ್ತು?’ ಎಂದು ನಾನುಗೌರಿ.ಕಾಂ ಪ್ರಶ್ನೆ ಮಾಡಿತು.

ಇದನ್ನೂ ಓದಿ: ‘ಬೆಡ್‌ ಬ್ಲಾಕ್‌’ ವಿವಾದ: ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಬರೆದ ಭಾವನಾತ್ಮಕ ಪತ್ರ

‘ಒಂಥರಾ ಅಸಹಾಕತೆಯಿದೆ, ಇನ್ನೊಂದು ಕಡೆ ಒಳ ರಾಜಕಾರಣದ ಒತ್ತಡವಿದೆ. ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಬಗ್ಗೆ ಅವರಲ್ಲಿ ವಿವರವಾದ ಮಾಹಿತಿ ಇಲ್ಲ’ ಎಂದು ಪಾಟೀಲ್ ಹೇಳಿದರು.

‘ಸಂಗ್ರಹಣೆ ಸಮಸ್ಯೆ ಇದೆ, ಸಾಗಾಣಿಕೆ ಸಮಸ್ಯೆ ಇದೆ ಎಂದು ಮುಖ್ಯಮಂತ್ರಿ ಹೇಳುತ್ತ ಹೋದರು. ಇದು ಅವರ ಅಜ್ಞಾನವೋ ಅಥವಾ ಟೆನ್ಸನ್ನೋ? ಇಲ್ಲಾ ಈ ತಜ್ಞರ ಸಮಿತಿ ಆಕ್ಸಿಜನ್ ಕುರಿತ ವಾಸ್ತವವನ್ನು ಅವರಿಗೆ ತಿಳಿಸಲಿಲ್ಲವೋ? ’ಅರಮನೆಯಲ್ಲಿ ಕುಳಿತರೆ ಆಮ್ಲಜನಕ ಸಿಗದು’ ಎಂಬುದನ್ನು ಅವರಿಗೆ ಹೇಳಿದೆ. ವಿಧಾನಸೌಧದ ಮೂರನೇ ಮಹಡಿ ಮೇಲೆ ನಿಂತು ನೋಡಿದರೆ ಅಲ್ಲಿಂದಲೇ ಆಕ್ಸಿಜನ್ ಸಂಗ್ರಹಿಸಬಹುದಾದ ಮೂರು ಸ್ಥಳಗಳು ಗೋಚರಿಸುತ್ತವೆ ಎಂಬುದನ್ನೂ ಸಿಎಂ ಅವರಿಗೆ ಹೇಳಿದ್ದೇನೆ.

ಆದರೆ, ಒಟ್ಟಿನಲ್ಲಿ ಈ ಸರ್ಕಾರಕ್ಕೆ ಮೊದಲನೆದಾಗಿ, ರಾಜಕೀಯ ಇಚ್ಛಾಶಕ್ತಿಯಿಲ್ಲ. ಎರಡನೇದಾಗಿ, ಈ ಸರ್ಕಾರದ ಬಳಿ ಸುಸೂತ್ರ ಯೋಜನೆಗಳಿಲ್ಲ, ಸಚಿವರ ನಡುವೆ ಸಮನ್ವತೆಯೇ ಇಲ್ಲ. ಮೂರನೇದಾಗಿ, ಅವರ ಪಕ್ಷದ ಆಂತರಿಕ ಭಿನ್ನಮತವನ್ನು ಈ ಬಿಕ್ಕಟ್ಟಿನ ಸಮಯದಲ್ಲೂ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಹೀನ ಕೆಲಸ ನಡೆದಿದೆ’ ಎಂದರು

ಯಡಿಯೂರಪ್ಪನವರಿಗೆ ಹೇಳಿದ್ದನ್ನು ಅವರು ಲಿಖಿತ ರೂಪದ ಮನವಿಯಲ್ಲೂ ಹೇಳಿದರು. ಯಡಿಯೂರಪ್ಪ ಮನೆಯ ಹೊರಗಡೆ ಮಾಧ್ಯಮಗಳ ಮುಂದೆ ಎಲ್ಲವನ್ನೂ ತಿಳಿಸಿದರು. ’ಅರಮನೆಯಲ್ಲಿ ಕುಳಿತರೆ ಆಮ್ಲಜನಕ ಸಿಗದು’ ಎಂದೂ ಹೇಳಿದರು. ಆದರೆ ತೇಜಸ್ವಿ ಸೂರ್ಯ ಎಂಬ ಪಲಾಯನವಾದಿ, ಕುತಂತ್ರಿ ಸಂಸದನ ಹಿಂದೆ ಸುತ್ತುತ್ತಿದ್ದ ಮಾಧ್ಯಮಗಳಿಗೆ ಎಚ್. ಕೆ. ಪಾಟೀಲ್ ಹೇಳಿದ್ದು ಮುಖ್ಯ ಅನಿಸಲೇ ಇಲ್ಲ.

ಇದನ್ನೂ ಓದಿ: ತೇಜಸ್ವಿ ಸೂರ್ಯ, ನಿಮ್ಮ ಮೆದುಳಲ್ಲಿರುವ ಕೋಮು ವೈರಸ್‌ ಕೊರೊನಾಗಿಂತಲೂ ಅಪಾಯಕಾರಿ, ಚಿಕಿತ್ಸೆ ಪಡ್ಕೊಳ್ಳಿ: ಸಿದ್ದರಾಮಯ್ಯ

ತೇಜಸ್ವಿ ಸೂರ್ಯನಂತೆ ಎಲ್ಲಿಗೋ ಎಚ್. ಕೆ. ಪಾಟೀಲ್ ನುಗ್ಗಲಿಲ್ಲ, ಅವರು ದೇಶದ ಹಲವು ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್‌ಗಳು ಮತ್ತು ನೀತಿ ನಿರೂಪಕರನ್ನು ಮಾತನಾಡಿಸಿ ಈ ಮನವಿ ತಯಾರಿಸಿದರು.
ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಪ್ರೊ. ಭ್ರಮರ್ ಮುಖರ್ಜಿಯನ್ನು ಉಲ್ಲೇಖಿಸಿದ ಅವರು, ಮೇ ಮಧ್ಯದ ಹೊತ್ತಿಗೆ, 8-15 ಲಕ್ಷ ದೈನಿಕ ಪಾಸಿಟಿವ್ ಪ್ರಕರಣಗಳು ಮತ್ತು ಸುಮಾರು 4,500 ಸಾವುಗಳು ಸಂಭವಿಸಬಹುದು ಎಂದು ಯಡಿಯೂರಪ್ಪನವರಿಗೆ ಹೇಳಿದ್ದಾರೆ.

ಬಳ್ಳಾರಿ, ಕೊಪ್ಪಳ ಮತ್ತು ರಾಜ್ಯಗಳ ವಿವಿಧ ಭಾಗಗಳಲ್ಲಿ ದಿನವೂ ಉತ್ಪಾದನೆಯಾಗುವ ಆಮ್ಲಜನಕ ಪ್ರಮಾಣವನ್ನು ಮತ್ತು ಆ ಸ್ಥಾವರಗಳ ಒಟ್ಟು ಸಾಮರ್ಥ್ಯದ ಮಾಹಿತಿಯನ್ನು ಕೆಮಿಕಲ್ ಇಂಜಿನಿಯರ್ ಡಾ. ಅರುಣ್ ಪಾಟೀಲ್ ಮತ್ತು ಕೆಲವು ಸಣ್ಣ ಉದ್ಯಮಿಗಳ ಮೂಲಕ ಪಡೆದು, ನಿಖರ ಮಾಹಿತಿ ಒದಗಿಸಿರುವ ಎಚ್.ಕೆ.ಪಾಟೀಲರು, ಈ ಸ್ಥಾವರಗಳಿಂದ ಗರಿಷ್ಠ ಉತ್ಪಾದನೆ ಹೇಗೆ ಮಾಡಬಹುದು ಎಂಬುದನ್ನು ವಿಜ್ಞಾನಿಗಳು, ಇಂಜಿನಿಯರ್‌ಗಳ ಉಲ್ಲೇಖಗಳೊಂದಿಗೆ ವಿವರಿಸಿದ್ದಾರೆ.

’ಸಂಗ್ರಹಣೆ ಮತ್ತು ಸಾಗಾಣಿಕೆ ಕಷ್ಟವಾಗಿದೆ’ ಎಂಬ ಯಡಿಯೂರಪ್ಪನವರ ಅಪ್ರಬುದ್ಧ ಅಸಹಾಯಕತೆಗೂ, ಶಾಸಕ ಪಾಟೀಲ್ ಪರಿಹಾರ ಸೂಚಿಸಿದ್ದಾರೆ. ರಾಜ್ಯದಲ್ಲಿ 17 ಲಕ್ಷ ಲೀಟರ್ ದ್ರವ ಆಮ್ಲಜನಕ ಶೇಖರಿಸುವ ಸಾಮರ್ಥ್ಯವಿದೆ ಎಂಬುದನ್ನು ಸಿಎಂಗೆ ವಿವರಿಸಿದ ಅವರು, ಯಾವ ಯಾವ ಪಾಯಿಂಟ್‌ಗಳಲ್ಲಿ ಶೇಖರಣೆ ಮಾಡಬಹುದೆಂಬ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: ಕೋವಿಡ್ ಎರಡನೆ ಅಲೆಯ ಸುನಾಮಿ; ಸಕಾರಾತ್ಮಕವಾಗಿ ಮುನ್ನಡೆಯಬೇಕು, ಸರಕಾರಾತ್ಮಕವಾಗಿಯಲ್ಲ

ಸಾಗಾಣಿಕೆ ಸಮಸ್ಯೆ ಕುರಿತು ತಜ್ಞರೊಂದಿಗೆ ಮಾತನಾಡಿರುವ ಅವರು, ನೈಟ್ರೋಜನ್ ಟ್ಯಾಂಕರುಗಳ ವಾಲ್ವ್ ಚೇಂಜ್ ಮಾಡಿ, ಅದಕ್ಕೆ ಕಾಪರ್ (ಸತುವಿನ) ವಾಲ್ವ್ ಹಾಕಿದರೆ ಸಮಸ್ಯೆ ಬಗೆಹರಿದಂತೆ. ಇದು ಎರಡು ದಿನದ ಕೆಲಸ ಎಂದಿದ್ದಾರೆ.

ನಾನುಗೌರಿ.ಕಾಂ ಜೊತೆ ಈ ವಿಷಯವಾಗಿ ಮಾತನಾಡಿದ ಅವರು, “ನಮ್ಮ ವಾಯುಸೇನೆಯ ವಿಮಾನಗಳನ್ಮು ಯಾವುದೋ ಕಾರಣಕ್ಕೆ ಮನರಂಜನೆಗೆ ಹಾರಿಸುತ್ತದೆ ಕೇಂದ್ರ ಸರ್ಕಾರ. ಈಗ ರಾಜ್ಯ ಸರ್ಕಾರವು, ಕೇಂದ್ರ ಮತ್ತು ಮೋದಿಯವರಿಗೆ ವಾಯುದಳದ ವಿಮಾನ ಒದಗಿಸಲು ಒತ್ತಡ ಹಾಕಬೇಕು. ದುಬಾರಿ ಸೇನಾ ವಿಮಾನಗಳು ಮೇಲಿನಿಂದ ಹೂ ಚೆಲ್ಲುವುದಕ್ಕಲ್ಲ, ಜನರು ಸಾಯುತ್ತಿರುವಾಗ ಅವನ್ನು ಆಕ್ಸಿಜನ್ ಪೂರೈಕೆಗೆ ಬಳಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿಯ ತೋರಣಘಟ್ಟ ವಿಮಾನ ನಿಲ್ದಾಣದಿಂದ ದ್ರವ ಆಮ್ಲಜನಕದ ಟ್ಯಾಂಕರ್‌ಗಳನ್ನು ಏರ್ ಕಾರ್ಗೊದಲ್ಲಿ ಕಳಿಸಿದರೆ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ ತಲುಪಲು ಒಂದು ತಾಸೂ ಹಿಡಿಯುವುದಿಲ್ಲ. ನಂತರ ಮಾರತ್‌ಹಳ್ಳಿಯ ಸಂಗ್ರಾಹಾರ ಮತ್ತು ಐಐಎಸ್‌ಸಿಯ ಯು. ಅರ್. ರಾವ್ ಸಂಗ್ರಹಾರಕ್ಕೆ ಕಳಿಸುವುದೇನೂ ಸಮಸ್ಯೆ ಅಲ್ಲ ಎಂದರು.

ಇದನ್ನೂ ಓದಿ: ಬೆಂಬಲಿಗರನ್ನು ಸೆಳೆಯಲು ‘ಪಾಕಿಸ್ತಾನಿ’ ಯುವತಿಯ ಫೋಟೊ ಬಳಸುತ್ತಿರುವ BJP ಐಟಿ ಸೆಲ್!

’ಆದರೆ ರಾಜಕೀಯ ಇಚ್ಛಾಶಕ್ತಿಯೇ ಇಲ್ಲದ, ಇಂತಹ ದುರಂತದ ಸಮಯದಲ್ಲೂ ಕೇಂದ್ರ ಸರ್ಕಾರದ ಮುಂದೆ ಹಕ್ಕು ಮಂಡಿಸದ ರಾಜ್ಯ ಸರ್ಕಾರ ನಿರ್ಜೀವವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

`ನೀವು ವಿರೋಧ ಪಕ್ಷದವರಾಗಿ ಇಂತಹ ಪಾಸಿಟಿವ್ ಸಲಹೆ ನೀಡ್ತಾ ಇದ್ದೀರಾ…ಹೈಕೋರ್ಟ್ ಕೂಡ ಕೇಂದ್ರಕ್ಕೆ ರಾಜ್ಯದ ಪಾಲಿನ ಆಕ್ಸಿಜನ್ ಒದಗಿಸಿ ಎಂದು ತರಾಟೆಗೆ ತೆಗೆದುಕೊಂಡಿದೆ.. ಆದರೆ ನಮ್ಮ 25 ಬಿಜೆಪಿ ಸಂಸದರು ಧ್ವನಿ ಎತ್ತಾನೇ ಇಲ್ವಲ್ಲ?’ ಎಂಬ ಪ್ರಶ್ನೆಗೆ ಉತ್ತರಿಸಿದ ಎಚ್ ಕೆ ಪಾಟೀಲ್, `ಈ ಬಗ್ಗೆ ಏನು ಹೇಳಬೇಕೋ ತಿಳಿಯದಾಗಿದೆ. ಅವರ (ಬಿಜೆಪಿ) ಭಾಷೆಯಲ್ಲಿ ಬಯ್ಯೋದೊಂದೇ ಬಾಕಿ ಉಳಿದಿದೆ’ ಎಂದರು.

ದಿಢೀರನೆ ಬಂದು ಕಲ್ಲು ತೂರಿ ಪರಾರಿ ಆಗಿರುವ ಸಂಸದ ತೇಜಸ್ವಿ ಸೂರ್ಯ ಅವರ ಬಗ್ಗೆ ಕೇಳಿದಾಗ, “ಇಂತಹ ನೀಚರನ್ನು ಇಟ್ಟುಕೊಂಡು ಕೋವಿಡ್ ನಿಯಂತ್ರಣ ಸಾಧ್ಯವೇ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅವರ ಮನವಿಯನ್ನು ಅಂದರೆ ಯಡಿಯೂರಪ್ಪನವರಿಗೆ ಅವರು ಹೇಳಿದ್ದನ್ನು ಇಲ್ಲಿ ಹಾಕಿದ್ದೇವೆ, ಓದಿ..

ಇದನ್ನೂ ಓದಿ: ‘ಬೆನ್ನೆಲುಬಿಲ್ಲದ ಮೋದಿ’ ‘ಡೈಪರ್‌ ಸೂರ್ಯ ಎಕ್ಸ್‌ಪೋಸ್ಡ್’- ಟ್ವಿಟರ್‌ನಲ್ಲಿ BJP ವಿರೋಧಿ ಹವಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಗೇಂದ್ರ ರಾಜೀನಾಮೆ: ಬಡಿಗೆ ಕೊಟ್ಟು ಹೊಡೆಸಿಕೊಂಡಂತಾಯ್ತು ಕಾಂಗ್ರೆಸ್ ಪರಿಸ್ಥಿತಿ

2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದಕ್ಕಿದ 136 ಸ್ಥಾನಗಳ ಅಭೂತಪೂರ್ವ ಬಹುಮತಕ್ಕೆ ಪ್ರಮುಖ ಕಾರಣ '40% ಸರ್ಕಾರ' ಮತ್ತು 'ಪೇ ಸಿಎಂ' ಅಭಿಯಾನಗಳು. ಬಿಜೆಪಿಯ ಭ್ರಷ್ಟಾಚಾರವನ್ನು ಅಸ್ತ್ರವಾಗಿಸಿಕೊಂಡು ಆಡಳಿತ ಹಿಡಿದ ಕಾಂಗ್ರೆಸ್‌ಗೆ,...

SIR ಕುತಂತ್ರ: 43.81 ಲಕ್ಷ ಜನರ ಮನೆ ಬಾಗಿಲಿಗೆ ನೋಟಿಸ್‌ ಬಿಸಿ, ಪೌರತ್ವ ಸಾಬೀತುಪಡಿಸಲು ನಾಗರಿಕರು ಅಲೆಯಬೇಕೇ ?

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಇದೀಗ ಲಕ್ಷಾಂತರ ನಾಗರಿಕರನ್ನು ಅತಂತ್ರ ಸ್ಥಿತಿಗೆ ತಳ್ಳಿದೆ.ಚುನಾವಣಾ ಆಯೋಗವು ರಾಜ್ಯದಲ್ಲಿದ್ದ ಒಟ್ಟು 5.54 ಕೋಟಿ ಮತದಾರರ ಪೈಕಿ ಸುಮಾರು 1.08...

ದಿಮಾಗಿ ನಕ್ಸಲ್: ರೈತ, ವಿದ್ಯಾರ್ಥಿ ಹೋರಾಟಗಳೂ ದೇಶದ್ರೋಹವೇ? RSS ಪತ್ರಿಕೆಯ ವಿವಾದಾತ್ಮಕ ಪ್ರತಿಪಾದನೆ

ಶಿಕ್ಷಣ, ಆರೋಗ್ಯ ಮತ್ತು ಒಟ್ಟಾರೆ ಅಭಿವೃದ್ಧಿ ಮಾದರಿಗೆ ತೀವ್ರ ಸ್ವರೂಪದ ಸುಧಾರಣೆಗಳ ಅಗತ್ಯವಿದೆ. ಆದರೆ ಈ ಸಮಸ್ಯೆಗಳು ಕಳೆದ ಹನ್ನೆರಡು ವರ್ಷಗಳಲ್ಲಿ ಹುಟ್ಟಿಕೊಂಡಿದ್ದಲ್ಲ ಅಥವಾ ಬಿಜೆಪಿ ಆಡಳಿತವಿರುವ ರಾಜ್ಯಗಳಿಗಷ್ಟೇ ಸೀಮಿತವಾಗಿಲ್ಲ. ಹಿಂದುತ್ವವನ್ನು ದಮನಕಾರಿ...

ಅಹಮದಾಬಾದ್‌ನಲ್ಲಿ ಪುಸ್ತಕ ಓದುಗರ ಮೇಲೆ ಭಜರಂಗದಳ ದೌರ್ಜನ್ಯ: ಮಲಾಲಾ, ಆನ್ ಫ್ರಾಂಕ್ ಕೃತಿಗಳಿಗೆ ವಿರೋಧಿಸಿ ಬೆದರಿಕೆ!

ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಾಹಿತ್ಯಾಭಿಮಾನಿಗಳ ಮೇಲೆ ಭಜರಂಗದಳ ಕಾರ್ಯಕರ್ತರು ಭೀಕರ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ನಗರದ ಸಾರ್ವಜನಿಕ ಉದ್ಯಾನವನವೊಂದರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಮಲಾಲಾ ಯೂಸಫ್‌ಜೈ ಹಾಗೂ ವಿಶ್ವಪ್ರಸಿದ್ಧ ಲೇಖಕಿ ಆನ್...

ಉಮರ್ ಖಾಲಿದ್ – ಶಾರ್ಜೀಲ್ ಇಮಾಮ್ ಜಾಮೀನಿಗೆ ದೆಹಲಿ ಪೊಲೀಸರ ವಿರೋಧ

2020ರ ಈಶಾನ್ಯ ದೆಹಲಿ ಕೋಮು ಗಲಭೆಯ ಹಿಂದಿನ ಪ್ರಮುಖ ಸಂಚುಕೋರರು ಎಂದು ಆರೋಪಿಸಿರುವ ದೆಹಲಿ ಪೊಲೀಸರು, ಕಾರಾಗೃಹದಲ್ಲಿರುವ ವಿದ್ಯಾರ್ಥಿ ಕಾರ್ಯಕರ್ತರಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳನ್ನು ದೆಹಲಿ...

‘ಆರ್‌ಎಸ್‌ಎಸ್-ಬಿಜೆಪಿಯ ರಕ್ತನಾಳಗಳಲ್ಲಿ ತಾರತಮ್ಯ ಹರಿಯುತ್ತಿದೆ’: ಖರ್ಗೆ ರ್ಯಾಲಿ ಸ್ಥಳದ ‘ಶುದ್ಧೀಕರಣ’ ಸಮರ್ಥಿಸಿಕೊಂಡ ಉತ್ತರಾಖಂಡ ಬಿಜೆಪಿ ರಾಜ್ಯಾಧ್ಯಕ್ಷನ ವಿರುದ್ಧ ಕಾಂಗ್ರೆಸ್ ಕಿಡಿ

ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆಯ ನಂತರ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದ ಸ್ಥಳೀಯ ‘ಶುದ್ಧೀಕರಣ’ ಸಮಾರಂಭದ ಸುತ್ತಲಿನ ರಾಜಕೀಯ ವಿವಾದವು ತೀವ್ರ ಸ್ವರೂಪ...

ಯುಜಿಸಿಇಟಿ ಸೀಟು ರದ್ದುಗೊಳಿಸಲು ರೂ.5,000 ಶುಲ್ಕ; ಕೆಇಎ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಯುಜಿಸಿಇಟಿ 2026ರ ಎರಡನೇ ಹಂತದ ಕೌನ್ಸಿಲಿಂಗ್‌ನಲ್ಲಿ ಹಂಚಿಕೆಯಾದ ಸೀಟುಗಳನ್ನು ರದ್ದುಗೊಳಿಸಲು ಇಚ್ಛಿಸುವ ಅಭ್ಯರ್ಥಿಗಳಿಗೆ ರೂ.5,000 ದಂಡ ವಿಧಿಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿರ್ಧಾರವನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಮಲ್ಲೇಶ್ವರದಲ್ಲಿರುವ ಕೆಇಎ...

162 ವರ್ಷಗಳ ಇತಿಹಾಸದಲ್ಲೇ ಪ್ರಥಮ: ಬಾಂಬೆ ಹೈಕೋರ್ಟ್ ವಕೀಲರ ಸಂಘಕ್ಕೆ ಮಹಿಳಾ ಅಧ್ಯಕ್ಷೆ! 

ಮುಂಬೈ: ಭಾರತೀಯ ನ್ಯಾಯಾಂಗ ರಂಗದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮತ್ತು ಕ್ರಾಂತಿಕಾರಿ ನಿರ್ಧಾರವೊಂದನ್ನು ಬಾಂಬೆ ಹೈಕೋರ್ಟ್‌ನ ಪ್ರತಿಷ್ಠಿತ ವಕೀಲರ ಸಂಘಟನೆಯಾದ 'ಅಸೋಸಿಯೇಷನ್‌ ಆಫ್‌ ಅಡ್ವೊಕೇಟ್ಸ್‌ ಆಫ್‌ ವೆಸ್ಟರ್ನ್ ಇಂಡಿಯಾ' (AAWI) ಕೈಗೊಂಡಿದೆ ಎಂದು...

ಫ್ರೀಡಂ ಪಾರ್ಕ್‌: ಧರಣಿಗೆ 1 ಲಕ್ಷ ರೂ. ಶುಲ್ಕ? ಜಿಬಿಎ ನಡೆಗೆ ಹೋರಾಟಗಾರರ ಆಕ್ರೋಶ

ಬೆಂಗಳೂರಿನ ಐತಿಹಾಸಿಕ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಾಗೂ ಧರಣಿ ನಡೆಸಲು ದಿನಕ್ಕೆ 1 ಲಕ್ಷ ರೂ. ಶುಲ್ಕ ಮತ್ತು 10,000 ರೂ. ಮುಂಗಡ ಠೇವಣಿ ವಿಧಿಸಲಾಗುತ್ತಿದೆ ಎಂಬ ಸುದ್ದಿ ಸಾರ್ವಜನಿಕ ಹಾಗೂ ಹೋರಾಟಗಾರರ...

ಅಧಿಕಾರದಲ್ಲಿರುವವರ ವಿರುದ್ಧ ಮಾತನಾಡುವ ಭಯವನ್ನು ನೀಟ್ ಚಳವಳಿ ಹೋಗಲಾಡಿಸಿದೆ: ನೇಹಾ ಬೋರಾ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ 'ಜೆನ್ ಜಿ' ಚಳವಳಿಯು ಜನರಲ್ಲಿದ್ದ ಭಯವನ್ನು ಹೋಗಲಾಡಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹಾಗೂ ಆರ್‌ಎಸ್‌ಎಸ್‌ನವರು ವಿದ್ಯಾರ್ಥಿ ಮತ್ತು ಯುವಜನರನ್ನು ತಲುಪುವಂತೆ ಮಾಡಿದೆ ಎಂದು ಆಲ್...