Homeಕರ್ನಾಟಕನಾನು ಗೌರಿ ಪೋಲ್, ವಿಕೃತರಿಗೆ ಸೋಲು : ಸಾವನ್ನು ಸಂಭ್ರಮಿಸುವುದು ತಪ್ಪೆಂದವರು 70%, ಸರಿಯೆಂದವರು 30%

ನಾನು ಗೌರಿ ಪೋಲ್, ವಿಕೃತರಿಗೆ ಸೋಲು : ಸಾವನ್ನು ಸಂಭ್ರಮಿಸುವುದು ತಪ್ಪೆಂದವರು 70%, ಸರಿಯೆಂದವರು 30%

- Advertisement -
- Advertisement -

| ನಾನುಗೌರಿ ಡೆಸ್ಕ್ |

ಕನ್ನಡದ ಮೇರು ಲೇಖಕ, ನಾಟಕಕಾರ, ಜೀವಪರ ಹೋರಾಟಗಾರ ಗಿರೀಶ್ ಕಾರ್ನಾಡ್‍ರವರ ನಿಧನದ ನಂತರ ಲಕ್ಷಾಂತರ ಜನ ಕಂಬನಿ ಮಿಡಿದಿದ್ದರು. ಚಳವಳಿ ಮತ್ತು ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆಯನ್ನು ಸ್ಮರಿಸಿದ್ದರು. ನೋವಿನ ಭಾವಪೂರ್ಣ ವಿದಾಯವನ್ನು ಸಲ್ಲಿಸಿದ್ದರು. ಜೊತೆಗೇನೆ ಹಲವು ವಿಕೃತ ಮನಸ್ಸಿನವರು, ಒಂದು ಪಕ್ಷಕ್ಕೆ ಸೇರಿದವರು ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಾವನ್ನು ಸಂಭ್ರಮಿಸಿ ಪೋಸ್ಟ್ ಸಹ ಹಾಕಿದ್ದರು. ಇದರ ಕುರಿತಾಗಿ ಸಾಕಷ್ಟು ಸುದ್ದಿಯಾಗಿತ್ತು.

ಇದರಿಂದ ನಾನುಗೌರಿ.ಕಾಂ ವತಿಯಿಂದ ಜನರ ಮನಸ್ಥಿತಿ ಅರ್ಥ ಮಾಡಿಕೊಳ್ಳು ನಾನುಗೌರಿ ಫೇಸ್‍ಬುಕ್ ಪುಟದಲ್ಲಿ ಒಂದು ಪೋಲ್ ಕ್ರಿಯೇಟ್ ಮಾಡಲಾಗಿತ್ತು. “ಸಾವನ್ನು ಸಂಭ್ರಮಿಸುವುದು ಭಾರತೀಯ ಸಂಸ್ಕøತಿಯೇ? ವೋಟ್ ಮಾಡಿ, ಕಾಮೆಂಟ್ ಮಾಡಿ. ಷೇರ್ ಸಹ ಮಾಡಬಹುದು” ಎಂದು ಪೋಲ್ ನಲ್ಲಿ ಬರೆದು 1. ಹೌದು 2. ಖಂಡಿತಾ ಅಲ್ಲ ಎಂಬ ಎರಡು ಆಯ್ಕೆಗಳನ್ನು ನೀಡಲಾಗಿತ್ತು.

ಸಾವನ್ನು ಸಂಭ್ರಮಿಸುವುದು ಭಾರತೀಯ ಸಂಸ್ಕೃತಿಯೇ? ವೋಟ್ ಮಾಡಿ, ಕಾಮೆಂಟ್ ಮಾಡಿ. ಷೇರ್ ಸಹಾ ಮಾಡಬಹುದು.

Naanu Gauri यांनी वर पोस्ट केले सोमवार, १० जून, २०१९

ಪೋಲ್ ಆರಂಭವಾದ ಕೆಲವೇ ಕ್ಷಣಗಳಲ್ಲಿ ನೂರಾರು ಜನ ಓಟ್ ಮಾಡಿ ಖಂಡಿತಾ ಅಲ್ಲ ಎಂಬುದಕ್ಕೆ ಮತ ಹಾಕಿದ್ದರು. ಅಷ್ಟರಲ್ಲಿ ಕ್ರಿಸ್ಟೋಫರ್ ಚಕ್ರವರ್ತಿ ಹೆಸರಿನ ಮೋದಿಯವರು ಫ್ರೊಫೈಲ್ ಹಾಕಿದ್ದ ಫೇಕ್ ಅಕೌಂಟ್‍ನಿಂದ ಒಬ್ಬರು “ನೀವ್ಯಾರು ಈ ಜನ್ಮದಲ್ಲಿ ಪೋಲ್ ಗೆಲ್ಲೋಕೆ ಆಗೋದಿಲ್ಲ.. ಕಿಲ ಕಿಲ,,, ನಾವ್ ಬಿಡಕಿಲ್ಲ ಎಂದು ಕಮೆಂಟ್” ಮಾಡಿದರು. ಅಷ್ಟು ಮಾತ್ರವಲ್ಲದೇ ಪೋಲ್‍ನ ಲಿಂಕ್ ಕಾಪಿ ಮಾಡಿ ಬಲಪಂಥೀಯ ಗ್ರೂಪುಗಳಲ್ಲಿ ಷೇರ್ ಮಾಡಿ ಬಂದು ಇಲ್ಲಿ ವೋಟ್ ಮತ್ತು ಕಮೆಂಟ್ ಮಾಡುವಂತೆ ಮಾಡಿದರು. ಆಗ ಪೋಲ್ ನಲ್ಲಿ 76%ಜನ ಸಾವಿನ ಸಂಭ್ರಮ ಖಂಡಿತ ತಪ್ಪೆಂದರೆ 24% ಜನ ಸರಿ ಎಂದು ಸಮರ್ಥಿಸಿಕೊಂಡಿದ್ದರು.

ಪೋಲ್ ಡಿಲೀಟ್ ಮಾಡಿದ್ರೆ ಕಾರ್ನಾಡ್ ಪ್ರೇತಾತ್ಮನಾಗಿ ನಿನ್ನ ಮನೇಲಿ ಅಲಿತಾನೇ ಹುಷಾರ್ ಎಂದು ಕಮೆಂಟ್ ಮಾಡಿದರು. ಬೆಳಿಗ್ಗೆ ಒಳಗೆ ಈ ಪೋಲ್ ಉಡೀಸ್ ಮಾಡ್ತೀವಿ ನೋಡಿ ಎಂದು ಚಾಲೆಂಜ್ ಸಹ ಹಾಕಿದರು. ಅಂದರೆ ಅವರ ಕಡೆಯವರೆಲ್ಲಾ ಬಂದು ಸಾವನ್ನು ಸಂಭ್ರಮಿಸುವುದು ಸರಿ ಎಂದು ಕಮೆಂಟ್ ಮತ್ತು ವೋಟ್ ಮಾಡುತ್ತಾರೆ ಎಂಬ ಅತೀ ಆತ್ಮವಿಶ್ವಾಸ ಅವರದು. ಅದಾದ ಸ್ವಲ್ಪ ಹೊತ್ತಿನಲ್ಲೇ ನೂರಾರು ಜನ ಬಲಪಂಥೀಯರು ಪೋಲ್‍ಗೆ ಲಗ್ಗೆ ಇಟ್ಟರು. ವೋಟ್ ಮಾಡಿ ಕೆಟ್ಟ ಕೊಳಕಾಗಿ, ಅಶ್ಲೀಲವಾಗಿ ಬೈಗುಳಗಳ ಮಳೆ ಸುರಿಸಿದರು.

ಅಷ್ಟು ಮಾತ್ರವಲ್ಲದೇ ತಮ್ಮ ಯಾವು ಯಾವುದೋ ಫೇಸ್‍ಬುಕ್ ಪೇಜ್‍ನಲ್ಲಿ, ಗ್ರೂಪ್‍ನಲ್ಲಿ ಮತ್ತು ವಾಟ್ಸಾಪ್ ಗುಂಪುಗಳಿಗೆ ಪೋಲ್‍ನ ಲಿಂಕ್ ಹಾಕಿ ಬಂದು ವೋಟ್ ಮಾಡಲು ಮತ್ತು ಕೆಟ್ಟದಾಗಿ ಕಮೆಂಟ್ ಮಾಡಲು ಕರೆ ನೀಡಿದ್ದರು. ಆದರೆ ಒಂದು ದಿನದ ಪೋಲ್ ಮುಗಿದಾಗ ಅವರ ಬಯಕೆ ಸ್ವಲ್ಪ ಮಾತ್ರವೇ ಈಡೇರಿತ್ತು. ಅಂಕಿ ಸಂಖ್ಯೆಗಳ ಆಧಾರದಲ್ಲಿ ಅವರಿಗೆ ನಿಚ್ಚಳ ಸೋಲಾಗಿತ್ತು. ಪೋಲ್ ನಲ್ಲಿ 14810ಜನ ಒಟ್ಟು ವೋಟ್ ಮಾಡಿದ್ದು 70%ಜನ ಸಾವಿನ ಸಂಭ್ರಮ ಖಂಡಿತ ತಪ್ಪೆಂದರೆ 30% ಜನ ಮಾತ್ರ ಸರಿ ಎಂದು ಸಮರ್ಥಿಸಿಕೊಂಡಿದ್ದರು.

ಅಂದರೆ ಇಂದಿಗೂ 70% ಅಂದರೆ ಪೋಲ್ ಪ್ರಕಾರ 10367 ಜನ ಸಾವಿನ ಸಂಭ್ರಮವನ್ನು ವಿರೋಧಿಸಿ ಜೀವಪರತೆ ಮೆರೆದಿದ್ದಾರೆ. ಇದು ಭರವಸೆಯ ಸಂಗತಿ. ಈ ಸಮಾಜವನ್ನು ಒಂದಷ್ಟು ಸಹನೀಯಗೊಳಿಸಬಹುದೆಂಬ ಆಶಯಕ್ಕೆ ಇದು ವಿಶ್ವಾಸ ಕೊಡುವ ಸಂಗತಿಯಾಗುತ್ತದೆ. ಅಂದರೆ ಸಜ್ಜನರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿಯೇ ಇದ್ದಾರೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ. ಹೊಸದೊಂದನ್ನು ಕಟ್ಟುವ, ಮಾನವೀಯತೆಯನ್ನು, ಬಹುತ್ವವನ್ನು ಕಾಪಾಡಬೇಕೆಂದು ಶ್ರಮಿಸುವವರಿಗೆ ಇದು ಆಶಾದಾಯಕ ಸಂಗತಿ.

ಆದರೆ ಎಚ್ಚರಿಕೆಯ ಸಂಗತಿಯೆಂದರೆ 30%ಜನ ವೋಟ್ ಮಾಡಿರುವ 4443 ಜನ ಸಾವನ್ನು ಸಂಭ್ರಮಿಸಿದ್ದಾರೆ, ವಿಕೃತತೆ ಮೆರೆದಿದ್ದಾರೆ. ಕೆಟ್ಟದಾಗಿ ಬೈಯ್ಯುವ ಮನಸ್ಥಿತಿ ರೂಢಿಸಿಕೊಂಡಿದ್ದಾರೆ. ಇದು ಸಹ ಕಡಿಮೆ ಸಂಖ್ಯೆಯೇನಲ್ಲ. ಇವರು ಹೀಗೇಕಾದರೂ ಎಂಬುದರ ಕುರಿತು ಯೋಚಿಸಬೇಕಿದೆ. ಏಕೆಂದರೆ ಯಾವ ಧರ್ಮವೂ ಸಹ ಸಾವನ್ನು ಸಂಭ್ರಮಿಸು ಎಂದು ಹೇಳಿಕೊಡುವುದಿಲ್ಲವಲ್ಲ?

ಈ ಪೋಲ್ ನಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಒಟ್ಟು 259 ಜನ ಕಮೆಂಟ್ ಮಾಡಿದ್ದಾರೆ. ಅದರಲ್ಲಿ ಬೆರಳೆಣಿಕೆಯ ಮಂದಿ ಮಾತ್ರ ಸಾವನ್ನು ಸಂಭ್ರಮಿಸುವುದು ಸರಿಯಲ್ಲ ಎಂಬ ಕಾಳಜಿ ತೋರಿಸಿದ್ದಾರೆ. ಇನ್ನುಳಿದಂತೆ ಎಲ್ಲವೂ ಬಲಪಂಥೀಯರ ಕಮೆಂಟ್ ಗಳೇ ಆಗಿದ್ದು ತೀರಾ ಕೊಳಕು ಭಾಷೆಯನ್ನು ಪ್ರಯೋಗಿಸಿ ಹೀಗಳೆದಿದ್ದಾರೆ. ಇದು ಹೇಗೆ ಸಾಧ್ಯ? ವೋಟ್ ಮಾಡಿರುವವರು 70%ಜನ ಸಾವಿನ ಸಂಭ್ರಮ ಸರಿಯಲ್ಲ ಎಂದರೆ ಕಮೆಂಟ್ ಮಾಡಿರುವ 90%ಗೂ ಹೆಚ್ಚು ಜನ ಸರಿ ಎಂದು ವಿಕೃತತೆ ಅನುಭವಿಸಿದ್ದಾರೆ.

ಅಂದರೆ ಸಜ್ಜನರು ಮೌನವಾಗಿದ್ದರೆ ದುರ್ಜನರು ಜೋರಾಗಿಯೇ ಸದ್ದು ಮಾಡುತ್ತಿದ್ದಾರೆ. ಒಳ್ಳೆಯ ಮನಸ್ಥಿತಿಯವರು ವೋಟ್ ಮಾಡಿ ಮುಂದೆ ಹೋಗಿದ್ದಾರೆ. ಅಲ್ಲಿ ಬಲಪಂಥೀಯರೊಡನೆ ಕಮೆಂಟ್ ಮಾಡುವುದಕ್ಕೆ ಇಳಿದಿಲ್ಲ. ಇದರಿಂದ ಪ್ರಯೋಜನ ಸಹ ಇಲ್ಲ ಅನ್ನಿಸಿರಬೇಕು. ಇನ್ನು ಕೆಲವರಿಗೆ ಅಷ್ಟು ಸಮಯವಿರಲ್ಲಿಕ್ಕಿಲ್ಲ. ಆದರೆ ಅಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿರುವ ಅರ್ಧಕ್ಕಿಂತ ಹೆಚ್ಚು ಫೇಕ್ ಅಕೌಂಟ್‍ಗಳೆ ಆಗಿವೆ. ಉಳಿದವರ ಕೆಲಸ ಸಹ ಸದಾ ಫೇಸ್ ಬುಕ್ ವಾಟ್ಸಾಪ್ ನಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು, ಈ ರೀತಿ ಕೆಟ್ಟದಾಗಿ ಕಮೆಂಟ್ ಮಾಡುವುದೇ ಆಗಿದೆ.

ಒಟ್ಟಿನಲ್ಲಿ ಸಾಮಾಜಿಕ ಬದಲಾವಣೆ ಬಯಸುವವರಿಗೆ ಈ ಪೋಲ್ ಹೊಸದಾಗಿ ಜನಪರವಾಗಿ, ಜೀವಪರವಾಗಿ ಏನನ್ನಾದರೂ ಮಾಡುವುದಾದರೆ ಇನ್ನು ಇರುವ ಅವಕಾಶವನ್ನು ತೋರಿಸುತ್ತದೆ. ಜೊತೆಗೇನೆ ಜನರ ಮನಸ್ಥಿತಿ ನಿಧಾನವಾಗಿ ವಿಷಮಯವಾಗುತ್ತಿರುವುದನ್ನು, ಕೆಲವರು ಈಗಾಗಲೇ ವಿಕೃತರಾಗಿರುವುದನ್ನು ತೋರಿಸುತ್ತಲೇ ಎಚ್ಚರಿಕೆ ನೀಡುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ರೈತರ ವಿಚಾರದಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಆದರೆ.., ಸಂಯುಕ್ತ ಹೋರಾಟ ಸಮಿತಿಯ ಎಚ್ಚರಿಕೆಯ ಮಾತು

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಬಲವಂತವಾಗಿ ಯಾವುದೇ ರೈತರ ಭೂಮಿ ಕಿತ್ತುಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳುತ್ತಿರುವುದು ಕೇವಲ ಮಾತಿನ ಜಾಣ್ಮೆಯಷ್ಟೇ. ಬಿಡದಿ ಭಾಗದ ಮೂರು ಗ್ರಾಮಗಳಿಗೆ ಹೊರಡಿಸಲಾಗಿರುವ ಭೂಸ್ವಾಧೀನದ ಅಂತಿಮ ಅಧಿಸೂಚನೆಯನ್ನು ಸಂಪೂರ್ಣವಾಗಿ...

“8.5 ಕೆಜಿ ತೂಕ ಇಳಿಸಿಕೊಂಡ ಸೋನಮ್ ವಾಂಗ್‌ಚುಕ್ ಜೀವಕ್ಕೆ ಅಪಾಯ: ಬಲವಂತ ಆಹಾರ ನೀಡುವಂತೆ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್”

ದೇಶದ ಶೈಕ್ಷಣಿಕ ವ್ಯವಸ್ಥೆಯ ಭವಿಷ್ಯವನ್ನು ಗಾಳಿಗೆ ತೂರಿರುವ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಸಾಲು ಸಾಲು ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪ್ರಖ್ಯಾತ ಹವಾಮಾನ ಮತ್ತು...

ಇನ್‌ಸ್ಟಾಮಾರ್ಟ್‌ನಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್: ಬೆಂಗಳೂರಿನಲ್ಲಿ ಹೊಸ ಸೇವೆ ಆರಂಭ!

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ 'ಇನ್‌ಸ್ಟಾಮಾರ್ಟ್' (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್...

ಬಿಡದಿ ರೈತರ ಹೋರಾಟಕ್ಕೆ ಜಯ: ಬಲವಂತವಾಗಿ ಒಬ್ಬೇ ಒಬ್ಬ ರೈತರ ಜಮೀನನ್ನೂ ಪಡೆಯಲ್ಲ ಸಿಎಂ ಡಿ.ಕೆ.ಶಿವಕುಮಾರ್

"ಬಿಡದಿ ಸ್ಮಾರ್ಟ್ ಸಿಟಿ/ಟೌನ್ ಶಿಪ್ ಯೋಜನೆಯ ಹೆಸರಿನಲ್ಲಿ ಬಲವಂತವಾಗಿ ಒಬ್ಬೇ ಒಬ್ಬ ರೈತರ ಅಥವಾ ರೈತ ಮಹಿಳೆಯರ ಜಮೀನನ್ನು ನಮ್ಮ ಸರ್ಕಾರ ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ," ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ಬಿಡದಿ ಟೌನ್‌ಶಿಪ್...

ಪಶ್ಚಿಮ ಬಂಗಾಳ: TMC ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿಗೆ ವಿಪಕ್ಷ ಸ್ಥಾನ ನೀಡಿದ್ದಕ್ಕೆ ನ್ಯಾಯಾಧೀಶರ ತೀವ್ರ ಆಕ್ಷೇಪ

ತೃಣಮೂಲ ಕಾಂಗ್ರೆಸ್‌ನ ಬಂಡಾಯ ಬಣದ ಮುಖ್ಯಸ್ಥ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುವಲ್ಲಿ ಸ್ಪೀಕರ್ ರತೀಂದ್ರ ಬೋಸ್ ತೋರಿರುವ "ತರಾತುರಿ"ಯನ್ನು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ...

ಎರಡು ವರ್ಷಗಳಲ್ಲಿ 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ; ಇವರಲ್ಲಿ 193 ಮಂದಿ ವಿದೇಶಿಯರೆಂದು ಘೋಷಿತರು: ಅಸ್ಸಾಂ ಸರ್ಕಾರ

ಗುವಾಹಟಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಗಡೀಪಾರು, ಗಡಿಯಿಂದ ಆಚೆಗೆ ತಳ್ಳುವಿಕೆ (ಪುಶ್‌ಬ್ಯಾಕ್) ಅಥವಾ ಉಚ್ಚಾಟನೆ ಪ್ರಕ್ರಿಯೆಯ ಮೂಲಕ ಒಟ್ಟು 1,679 ಜನರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದೆ ಎಂದು ಅಸ್ಸಾಂ ಸರ್ಕಾರ ರಾಜ್ಯ ವಿಧಾನಸಭೆಗೆ...

17 ದಿನ, 9 ಕೆಜಿ ತೂಕ ಇಳಿಕೆ, ಸೋನಮ್ ವಾಂಗ್‌ಚುಕ್ ಆರೋಗ್ಯ ಸ್ಥಿತಿ ಗಂಭೀರ: ಉಪವಾಸ ಕೈಬಿಡುವಂತೆ ಅಖಿಲೇಶ್-ಕೇಜ್ರಿವಾಲ್ ಮನವಿ

ದೇಶದ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಸರಣಿ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್...

ಎನ್‌ಸಿಪಿಯ ಎರಡೂ ಬಣಗಳಲ್ಲೂ ಬಿರುಸಿನ ಬೆಳವಣಿಗೆ : ಬಿಜೆಪಿ ತೆಕ್ಕೆಗೆ ಮತ್ತೊಂದು ಪಕ್ಷ?

ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಎರಡೂ ಬಣಗಳ ಮುಖ್ಯ ನಾಯಕರು ಮಂಗಳವಾರ (ಜು.14) ರಾತ್ರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ಸಭೆಯು ಶರದ್ ಪವಾರ್ ಅವರ...

ಮೋದಿಯ ಮೌನವನ್ನು ಪ್ರಶ್ನಿಸುವ ರಾಹುಲ್ ಗಾಂಧಿ, ಸಾರ್ವಜನಿಕ ಹಿತಾಸಕ್ತಿಯ ಈ ವಿಷಯಗಳಲ್ಲಿ ತಾವೇಕೆ ಮೌನ?

ಪ್ರಧಾನಿ ಮೋದಿಯವರದ್ದು ಜಾಣ ಮೌನ ಎಂದು ಈಗಾಗಲೇ ಈ ದೇಶದ ಜನಕ್ಕೆ ಮನವರಿಕೆಯಾಗಿದೆ. ಕಳೆದ 14ವರ್ಷದಲ್ಲಿ ಒಂದೇ ಒಂದು ಪ್ರೆಸ್ ಮೀಟ್‌ಅನ್ನು ಅಡ್ರೆಸ್ ಮಾಡದೆ ಇರುವವರ ಬಗ್ಗೆ ಜನ ಹೆಚ್ಚಿನದ್ದೇನನ್ನು ನಿರೀಕ್ಷಿಸಲಾರರು, ಆದರೆ...

ಹೊಸ ಮತದಾರರ ಫಾರಂ 6ಕ್ಕೆ ಪೋಷಕರ ಎಸ್‌ಐಆರ್ ಕಡ್ಡಾಯಗೊಳಿಸಿದ ಚು. ಆಯೋಗ : ಸಂಪೂರ್ಣ ಕಾನೂನುಬಾಹಿರ ಎಂದ ಸಂಸದ ಜಾನ್ ಬ್ರಿಟ್ಟಾಸ್

ಹೊಸ ಮತದಾರರನ್ನು ನೋಂದಾಯಿಸಲು ಬಳಸುವ ತನ್ನ ಆನ್‌ಲೈನ್ ಅರ್ಜಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಹೊಸ ವಿಭಾಗವನ್ನು ಸೇರಿಸುವ ಮೂಲಕ ಚುನಾವಣಾ ಆಯೋಗವು (ಇಸಿ) "ಸಂಪೂರ್ಣವಾಗಿ ಕಾನೂನು ಅಧಿಕಾರವಿಲ್ಲದೆ ಕಾರ್ಯನಿರ್ವಹಿಸಿದೆ" ಎಂದು...