Homeರಾಜಕೀಯಕರಾವಳಿ ಪೊಲಿಟಿಕ್ಸ್: ಬಿಜೆಪಿಯಲ್ಲಿ ಬಂಟರ ದರ್ಬಾರ್, ಬಿಲ್ಲವರು ಬರ್ಬಾದ್!!

ಕರಾವಳಿ ಪೊಲಿಟಿಕ್ಸ್: ಬಿಜೆಪಿಯಲ್ಲಿ ಬಂಟರ ದರ್ಬಾರ್, ಬಿಲ್ಲವರು ಬರ್ಬಾದ್!!

- Advertisement -
- Advertisement -
ನಹುಷ |
ಅವಿಭಜಿತ ದಕ್ಷಿಣ ಕನ್ನಡದ ಬಿಜೆಪಿ ಬಲಾಢ್ಯ ಬಂಟರ ಮತ್ತು  ಬೂಟಾಟಿಕೆಯ  ಬ್ರಾಹ್ಮಣರ ಪ್ರೈವೇಟ್  ಲಿಮಿಟೆಡ್ ಎಂಬುದನ್ನು  ಮುಗಿದ ಅಸೆಂಬ್ಲಿ ಚುನಾವಣೆ  ನಿಸ್ಸಂಶಯವಾಗಿ  ಸಾಬೀತುಮಾಡಿದೆ!  ಬಹುಸಂಖ್ಯಾತ ಬಿಲ್ಲವರು  ಮತ್ತು ಮೊಗವೀರ, ಕೊಟ್ಟಾರಿ,  ಕುಲಾಲ, ದೇವಾಡಿಗ,  ಕೋಟೆ ಕ್ಷತ್ರಿಯ, ಗಾಣಿಗ,  ಗಟ್ಟಿ,  ನಲಿಕೆ,  ಮರಾಠಿ….. ಮುಂತಾದ ಸಣ್ಣ-ಪುಟ್ಟ ಜಾತಿಯ  ಮುಗ್ಧ ಶೂದ್ರರನ್ನು ಹಿಂದೂತ್ವದ ರಕ್ತಪಿಪಾಸು ಘನಘೋರ ಯುದ್ಧಕ್ಕೆ ಕಾಲಾಳುಗಳಂತೆ ಬಳಸಿ ಬಲಿಹಾಕುವ ಸಂಘ ಪರಿವಾರದ ಹಿಂದೂತ್ವದ  ಸೂತ್ರಧಾರರು ಅಧಿಕಾರ,  ಸುಖ, ಸೌಭಾಗ್ಯಗಳನ್ನು  ಜನಿವಾರಿಗಳಿಗೆ, ಪಾಳೆಗಾರಿ ಬಂಟರ ತುಂಟರಿಗಷ್ಟೇ  ಸೀಮಿತ ಮಾಡಿಕೊಂಡಿದ್ದಾರೆ.
ಕರಾವಳಿಯಲ್ಲಿ ಸರಿಸುಮಾರು ಶೇ.24ರಷ್ಟು ಮುಸ್ಲಿಮರಿದ್ದಾರೆ. ಅವರಷ್ಟೇ ಬಿಲ್ಲವರಿದ್ದಾರೆ. ಈ  ಬಿಲ್ಲವರ ಜತೆ ಇತರ  ಹಿಂದುಳಿದ  ಜನಾಂಗದ ಸಣ್ಣಸಣ್ಣ ಜಾತಿಗಳನ್ನು  ಸೇರಿಸಿದರೆ ಶೇಕಡಾ ಹತ್ತರಷ್ಟಿರುವ  ಬಂಟರು  ಮತ್ತು ಅದಕ್ಕಿಂತ ಕಡಿಮೆ ಇರುವ  ಬ್ರಾಹ್ಮಣರು ಯಾವ ಲೆಕ್ಕಕ್ಕೂ  ಇಲ್ಲ. ಆದರೆ ತೋಳ್ಬಲದ  ಬಂಟರು ಮತ್ತು ತಾಂತ್ರಿಕ ವಿಪ್ರರು ಹಿಂದುಳಿದ  ವರ್ಗದವರನ್ನ  “ಮಂಗ”  ಮಾಡಿ ಬಿಜೆಪಿಯಲ್ಲಿ ಬೆಣ್ಣೆಯನ್ನು ತಿನ್ನುತ್ತಿದ್ದಾರೆ.  ಕರಾವಳಿಗೆ ಹಿಂದೂತ್ವದ ಅಮಲೇರಿರುವುದು ಕರಾರುವಾಕ್ಕಾಗಿ  ಗ್ರಹಿಸಿದ್ದ ಸಂಸದ  ನಳಿನ್ ಕುಮಾರ್ ಕುಟೀಲು  ಎಂಬ  ಬೆಂಕಿ ನವಾಬ  ಮತ್ತು  ವಿಶ್ವ ಬಂಟರ   ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಲಾಡಿ ಸೇರಿಕೊಂಡು  ಸ್ವ-ಜಾತಿಯ ಹೆಚ್ಚು ಕ್ಯಾಂಡಿಡೇಟ್‍ಗಳನ್ನು ಬಿಜೆಪಿಯಿಂದ  ಅಖಾಡಕ್ಕೆ  ಇಳಿಸುವಂತೆ  ಷಡ್ಯಂತ್ರ ಹೆಣೆದಿದ್ದರು.  ಒಂದು  ಹಂತದಲ್ಲಿ ನಳಿನ್, “ಗುರು” ಕಲ್ಲಡ್ಕ ಭಟ್ಟರಿಗೇ ರೋಪು ಹಾಕಿ  ಜಾತಿಬಂಧುಗಳಿಗೆ ಟಿಕೆಟ್ ಕೊಡಿಸಲು ಹಾರಾಡಿದ್ದರು.  ಬೆಚ್ಚಿಬಿದ್ದ ಕಲ್ಲಡ್ಕ ಕಟೀಲ್‍ಗೆ ಶರಣಾಗಿ ಹೋಗಿದ್ದರು.
ಕಲ್ಲಡ್ಕ ಭಟ್

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ  12  ಸಾಮಾನ್ಯ ಕ್ಷೇತ್ರಗಳ ಪೈಕಿ ಆರರಲ್ಲಿ ಬಂಟರ ಬಹಾದ್ದೂರರಿಗೆ ಟಿಕೆಟ್ ಕೊಡಿಸಲು  ನಳಿನ್-ಮಾಲಾಡಿ ರೈ  ಯಶಸ್ವಿಯಾದರು. ಬೈಂದೂರಲ್ಲಿ  ಸುಕುಮಾರ  ಶಟ್ಟಿ,  ಕುಂದಾಪುರದಲ್ಲಿ ಹಾಲಾಡಿ  ಶ್ರೀನಿವಾಸ್  ಶೆಟ್ಟಿ,  ಸುರತ್ಕಲ್‍ನಲ್ಲಿ ಡಾ|| ಭರತ್  ಶೆಟ್ಟಿ, ಉಳ್ಳಾಲದಲ್ಲಿ  ಸಂತೋಷ  ಶೆಟ್ಟಿ,   ಬಂಟ್ವಾಳದಲ್ಲಿ ರಾಜೇಶ್ ನಾಯ್ಕ್, ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ ಎಂಬ  ಲಾಟ್‍ಪೂಟ್  ಬಂಟರಿಗೆ  ಬಿಜೆಪಿ ಹೈಕಮಾಂಡ್ ಕಲ್ಲಡ್ಕ ಭಟ್ಟರಿಗೆ ಟಿಕೆಟ್ ಕೊಡಬೇಕಾಗಿ ಬಂತು! 23  ಹಿಂದೂಗಳನ್ನು  ಸಾಬರು ಕಾಂಗ್ರೆಸ್‍ನ  ಸಿದ್ದು  ಸರಕಾರದ  ಸಹಕಾರದಲ್ಲಿ ಕೊಂದು ಹಾಕಿದರೆಂಬ ನಳಿನ್, ಅನಂತ್‍ಕುಮಾರ್ ಹೆಗಡೆ, ಶೋಭಾ, ಕಲ್ಲಡ್ಕ ಮತ್ತವರ ಬಾಸ್‍ಗಳಾದ ಆದಿತ್ಯನಾಥ,  ಅಮಿತ್ ಶಾಗಳ  ಬೊಬ್ಬೆಗೆ ಕರಾವಳಿಯ  ಬಿಲ್ಲವ  ಮತ್ತಿತರ ಹಿಂದುಳಿದ ವರ್ಗದ ಜನರು ಬ್ರೈನ್‍ವಾಶ್ ಆಗಿದ್ದು ಆರರಲ್ಲಿ ಐದು ಬಂಟರು  ಸಾರಾಸಗಟಾಗಿ  ಶಾಸಕರಾಗಲು  ನೆರವಾಯ್ತು.  ಇದನ್ನು ಮೊದಲೇ ಅಂದಾಜಿಸಿದ್ದ  ನಳಿನ್ ಮತ್ತು ಮಾಲಾಡಿಗುತ್ತು ರೈ,  ಈಗ  ಕರಾವಳಿ ಬಿಜೆಪಿಯಲ್ಲಿ ಬಂಟರ ಸಾಮ್ರಾಜ್ಯ  ಸ್ಥಾಪಿಸಿ ಅಟ್ಟಹಾಸಗೈಯ್ಯುತ್ತಿದ್ದಾರೆ.

ಟಿಕೆಟ್  ಹಂಚಿಕೆಯಾದಾಗ  ಬಿಜೆಪಿಯ ಬಿಲ್ಲವ  ಮುಂದಾಳುಗಳು  ಬೇಸರ ಮಾಡಿಕೊಂಡಿದ್ದರು.  ಇದು ಬಿಜೆಪಿಗೆ ಉಲ್ಟಾ  ಹೊಡೆದು ಕಾಂಗ್ರೆಸ್‍ಗೆ  ಅನುಕೂಲ  ಮಾಡಿಕೊಡುತ್ತದೆಂದು  ರಾಜಕೀಯ  ಪಂಡಿತರು ತರ್ಕ  ಮಾಡಿದ್ದರು.  ದುರಂತವೆಂದರೆ  ಜನವಾರಿಗಳ  ಮತ್ತು  ಬಂಟರ  ನಳಿನ್‍ನ  ಹಿಂದೂತ್ವದ  ಹೋರಾಟದಲ್ಲಿ ಹೆಚ್ಚು  ಹಾನಿಗೊಳಗಾಗಿದ್ದಲ್ಲದೇ  ಜೀವಬಲಿ ಕೊಡಬೇಕಾಗಿ ಬಂದಿದ್ದ  ಬಿಲ್ಲವರಿಗೆ ತಮಗಾದ ಅನ್ಯಾಯ, ಮೋಸ, ವಂಚನೆ ಅರ್ಥವೇ ಆಗಲಿಲ್ಲ. ಹೆಚ್ಚಿನ ಬಿಲ್ಲವರು ಸಂಘ  ಸರದಾರರ  ಹುಸಿ  ಹಿಂದೂತ್ವದ ಮಾತುಗಾರಿಕೆಗೆ ಮರುಳಾಗಿ ಪರಂಪರಾಗತ ಬಂಟರ ಭೂಪರಿಗೆ ಕಣ್ಮುಚ್ಚಿ ಓಟು ಒತ್ತಿದ್ದಾರೆ.  ಕಾರ್ಕಳದಲ್ಲಿ  ಗೆದ್ದ  ಬಾಬಾಬುಡನ್‍ಗಿರಿ-ದತ್ತಪೀಠ  ಭಾನ್ಗಡಿಯ ಬೈಪ್ರಾಡಕ್ಟು ಸುನೀಲ್ ಕುಮಾರ್ ಎಂಬ ಅರೆಬಿಲ್ಲವ-ಅರೆಬ್ರಾಹ್ಮಣ ಒಬ್ಬನೇ ಬಿಜಿಪಿಯ ಘೋಷಿತ  ಬಿಲ್ಲವ ಶಾಸಕ ಇಡೀ ಅವಿಭಜಿತ ದಕ್ಷಿಣ ಕನ್ನಡಕ್ಕೆ!! ಬಿಜಿಪಿ ಟಿಕೇಟ್ ದಯಪಾಲಿಸಿದ್ದ ಏಕೈಕ ಬಿಲ್ಲವ ಸುನೀಲ್‍ಕುಮಾರ.
ಪುತ್ತೂರಿನಲ್ಲಿ  ಬಿಜಿಪಿ ಅಭ್ಯರ್ಥಿಯಾಗಿದ್ದ  ಸಂಜೀವ್ ಮಡಂದೂರ್ ಎಂಬಾತ ಕೇಂದ್ರದ  ನಾಮಕಾವಸ್ಥೆ ಮಂತ್ರಿ ಸದಾನಂದಗೌಡರ ಹತ್ತಿರತ್ತಿರದ ಸಂಬಂಧಿ ಬಂಟ-ಗೌಡ ಕೋಟಾದ ಕ್ಯಾಂಡಿಡೇಟ್. ಹೀಗಾಗಿ ಬರೋಬ್ಬರಿ ಏಳು ಮಂದಿಗೆ ಬಂಟರ  ಲಾಬಿಯಿಂದಾಗಿ ಟಿಕೆಟ್ ಸಿಕ್ಕಿತ್ತು. ಮಡಂದೂರುಗೆ ಸದಾನಂದಗೌಡರಿಗಿಂತ ಸಂಸದ ನಳೀನ್ ಎಂದರೆ ಹೆಚ್ಚು ನಿಷ್ಠೆ. ಬಂಟ-ಗೌಡ ಕೋಟಾದಲ್ಲಿ ಕಮಲ ಹಿಡಿದುಕೊಂಡು ಅಖಾಡಕ್ಕೆ ಇಳಿದವರಲ್ಲಿ ಉಳ್ಳಾಲದ ಸಂತೋಷ ಶೆಟ್ಟಿ ಒಬ್ಬನ ಬಿಟ್ಟರೆ ಉಳಿದವರೆಲ್ಲರೂ   ಕೇಸರಿ ಶಾಸಕರಾಗಿದ್ದಾರೆ. ಬಂಟರ ಕ್ಯಾಂಡಿಡೇಟುಗಳನ್ನು ಗೆಲ್ಲಿಸಿಕೊಳ್ಳಲು ಸಂಸದ ನಳಿನ್  ಮತ್ತು ವಿಶ್ವ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ  ವiಲಾಡಿ ತುಂಬ  ವ್ಯವಸ್ಥಿತ-ರಹಸ್ಯ ಕಾರ್ಯಾಚರಣೆಗೆ  ಇಳಿದಿದ್ದರು. ಹಿಂದುಳಿದ ವರ್ಗದ ಬಿಲ್ಲವರು  ಮತ್ತು ಇತರೆ ಅಮಾಯಕ ಜಾತಿ ಜನಗಳಿಗೆ  ಟೋಪಿ ಏರಿಸಿ ಸ್ವಜಾತಿ ಹುರಿಯಾಳುಗಳ  ಎಂಎಲ್‍ಎ ಮಾಡಿಕೊಳ್ಳಲು ಬಂಟರಿಗೆ ಜಾತಿ ದುರಭಿಮಾನದ ಬೂಸ್ಟ್ ಕುಡಿಸಿ ಪ್ರಚೋದಿಸಿದರು.
ಬಿಜಿಪಿ ಟಿಕೆಟ್ ಘೋಷಣೆ ಮಾಡುತ್ತಿದ್ದಂತೆಯೇ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ  ಒಂದು ವಾಟ್ಸಪ್ ಪ್ರಕಟಣೆ ರವಾನಿಸಿದ್ದರು. ಸ್ವಜಾತಿ ಬಂಟರ   ವಲಯದಲ್ಲಿ ಹರಿದಾಡಿದ ಆ ಸಂದೇಶ “ಬಂಟತ್ವ” ಕೆರಳಿಸುವ ಒಕ್ಕಣೆಯಿಂದ ಕೂಡಿದೆ. ತಾನು ಮತ್ತು ಸಂಸದ ನಳಿನ್ ಸರದಾರ ಸೇರಿಕೊಂಡು ಬರೋಬ್ಬರಿ ಆರು ಬಂಟರು ಬಿಜೆಪಿ  ಟಿಕೆಟ್ ಪಡೆಯುವಂತೆ ಮಾಡಿದ್ದೇವೆ. ಈಗ ಇವರೆಲ್ಲರನ್ನ ಗೆಲ್ಲಿಸಿಕೊಳ್ಳುವ ಸವಾಲು  ಬಂಟರ ಮೇಲಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಬಂಟರ ಮತ್ತು ಬ್ರಾಹ್ಮಣರ ನಾಡಾಗಿದ್ದು ಅದನ್ನ ಉಳಿಸಿಕೊಳ್ಳಲು ಆರೂ ಬಂಟರ ಆಯ್ಕೆಗೆ ಬಂಟರು  ಭಿನ್ನಾಭಿಪ್ರಾಯ ಮರೆತು ಬಿಜೆಪಿಗೆ ಮತ ಹಾಕುವ ಮತ್ತು ಹಾಕಿಸುವ ಕೆಲಸ  ಮಾಡಬೇಕಾಗಿದೆ. ಈ ತಂತ್ರಗಾರಿಕೆ ಹಿಂದುಳಿದ ವರ್ಗದವರಿಗೆ ತಿಳಿಯದಂತೆ ಗೌಪ್ಯವಾಗಿ ಕಾರ್ಯಾಚರಣೆ ಮಾಡಬೇಕೆಂದು ಮಲಾಡಿಗುತ್ತಾ ರೈ ಸಂದೇಶ ಕಳಿಸಿದ್ದರು.
ಬಿಜೆಪಿಯ ಆರೂ ಬಂಟ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಸ್ವಜಾತಿ ಬಾಂಧವರಿಗೆ  ಬಂಟರ ಸಂಘದ ಅಧ್ಯಕ್ಷ  ಮಲಾಡಿಗುತ್ತಾ ರೈ  ಪ್ರಚೋದಿಸಿರುವುದರ ಹಿಂದಿನ    ಮರ್ಮ ಕತೂಹಲಕಾರಿಯಾಗಿದೆ. ಸದರಿ ಆರು ಬಂಟರು ಗೆದ್ದರಷ್ಟೇ ಮುಂಬರುವ ಲೋಕಸಭಾ ಎಲೆಕ್ಷನ್‍ನಲ್ಲಿ ಉಡುಪಿ-ಚಿಕ್ಕಮಗಳೂರು ಮತ್ತು ಮಂಗಳೂರು ಪಾರ್ಲಿಮೆಂಟ್ ಕ್ಷೇತ್ರದಲ್ಲಿ  ಬಂಟರ ಜಯಪ್ರಕಾಶ್ ಹೆಗಡೆ ಹಾಗೂ ನಳಿನ್ ಕುಮಾರ್ ಕಟೀಲ್‍ಗೆ ಟಿಕೆಟ್ ಸುಲಭವಾಗಿ ದಕ್ಕುತ್ತದೆ ಎಂಬುದು ಮಲಾಡಿಗುತ್ತ ರೈ ಲೆಕ್ಕಾಚಾರ. ಆಗ ಮಾತ್ರ  ಬಂಟರ ಹಿತಾಸಕ್ತಿಯ ರಕ್ಷಣೆ ಸಾಧ್ಯವೆಂಬ ಭಾವನೆ ಬಂಟರಲ್ಲಿ ಬಿತ್ತಲು ರೈ ಮಸಲತ್ತು ಮಾಡಿದ್ದಾನೆ. ಇದರ ಹಿಂದೆ ನಳಿನ್‍ನ ಕುಟಿಲತೆ ಅಡಗಿದೆ ಎಂಬುದು ಕಟ್ಟರ್ ಚೆಡ್ಡಿಗಳೇ ಈಗ ಪಿಸುಗುಡುತ್ತಿದ್ದಾರೆ. ನಳಿನ್‍ನ ಕಂಡರೆ  ಮೂಗುಮುರಿಯುವ ಕಲ್ಲಡ್ಕ ಕಮಾಂಡ್ ಕೂಡ ಈಗ ಬಂಟರ ಅಧ್ಯಕ್ಷನ “ವಾಟ್ಸ್‍ಆಪ್ ಆಂದೋಲನ”ದ ರೂವಾರಿ ನಳಿನ್  ಎಂದೇ ಕಂಡವರ ಮುಂದೆ ಬಡಬಡಿಸುತ್ತಿದೆ.
ಸೊರಕೆ

ಬಿಜೆಪಿ ಬಿಡಾರದಲ್ಲಿ ಹರಿದಾಡುತ್ತಿರುವ ಮತ್ತೊಂದು ಚರ್ಚೆಯ ಪ್ರಕಾರ ಇದು  ನಳಿನನ್ನು ಹಣಿಯಲು ಬ್ರಾಹ್ಮಣೋತ್ತಮರ್ಯಾರೋ ಮಾಡಿದ ಕಿತಾಪತಿ. ಬಿಲ್ಲವರು ತಿರುಗಿಬಿದ್ದು ಬಂಟ ಕ್ಯಾಂಡಿಡೇಟ್‍ಗಳನ್ನೆಲ್ಲಾ ಸೋಲಿಸಿದರೆ ನಳಿನ್ ಬಿಜೆಪಿಯಲ್ಲಿ ಕಿಮ್ಮತ್ತು ಕಳೆದುಕೊಳ್ಳುತ್ತಾರೆ. ಆಗ ಮತ್ತೆ ಕಲ್ಲಡ್ಕ ಭಟ್ಟರದೇ ಏಕಮೇವಾದ್ವಿತೀಯ ದರ್ಬಾರು  ಸ್ಥಾಪಿತವಾಗುತ್ತದೆಂದು ಬಂಟರ ಸಂಘದ ಅಧ್ಯಕ್ಷನ ಹೆಸರಿನಲ್ಲಿ ಇಂಥದೊಂದು  ಸಂದೇಶ ರವಾನಿಸಲಾಗಿದೆಯಂತೆ. “ದಕ್ಷಿಣ ಕನ್ನಡ  ಮತ್ತು ಉಡುಪಿಯು  ಬಂಟರ-ಬ್ರಾಹ್ಮಣರ ನಾಡು” ಎಂಬ ವಾಕ್ಯ ಮಲಾಡಿಗುತ್ತು ರೈನ ಸಂದೇಶದಲ್ಲಿರುವುದು ಬ್ರಾಹ್ಮಣರ ಭೂಪನ ಕುಚೋದ್ಯದ ಅನುಮಾನ ಹುಟ್ಟುಹಾಕಿದೆ.

ಇದೆಲ್ಲಾ ಬಿಜೆಪಿಯ ಒಳಸುಳಿ ರಾಜಕಾರಣ ಏನೇಇರಲಿ, ಸಂಘಪರಿವಾರದ  ಬ್ರಾಹ್ಮಣರ-ಬಲಾಢ್ಯ ಬಂಟರ ಷಡ್ಯಂತ್ರಕ್ಕೆ ಬಲಿಬೀಳುತ್ತಿರುವ ಬಿಲ್ಲವರಿಗೆ ಬುದ್ಧಿ ಬರುವುದು ಎಂದು? ಹುಸಿ ಹಿಂದೂತ್ವಕ್ಕೆ ಮರುಳಾಗಿ ಬಿಲ್ಲವರು ತಮ್ಮವರ ಆಹುತಿ ಕೊಡುತ್ತಾ  ಬಿಜೆಪಿಗೆ ಬೆಂಬಲಿಸುತ್ತಾ ಹೋದರೆ ಮೇಲುವರ್ಗದ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತಲೇ ಇರುತ್ತದೆ. ಇದು ಬಿಲ್ಲವರ ಸ್ವಾಮಿಗೆ, ಜನಾರ್ದನ  ಪೂಜಾರಿ,  ವಿನಯ್ ಕುಮಾರ್ ಸೊರಕೆ,  ಶ್ರೀನಿವಾಸ್  ಪೂಜಾರಿ,  ರುಕ್ಮಯ್ಯ ಪೂಜಾರಿಯಂತ ಬಿಲ್ಲವರ   ಭೂಪರಿಗೆ, ಬಿಲ್ಲವರ ಸಂಘದ ಸರದಾರರಿಗೆಲ್ಲಾ ಅರ್ಥವಾಗೋದು ಯಾವಾಗ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...