Homeಅಂಕಣಗಳು'ಭಾರತ್ ಸೇವಕ್’ ಸಮಾಜ ಮತ್ತು ನಾನು

‘ಭಾರತ್ ಸೇವಕ್’ ಸಮಾಜ ಮತ್ತು ನಾನು

- Advertisement -
- Advertisement -

1952ರಲ್ಲಿ ನಾನು ಭಾರತ ಸೇವಕ ಸಮಾಜದ ಸಂಚಾಲಕನಾದೆ. ಭಾರತ ಸೇವಕ ಸಮಾಜ ಜವಾಹರ ಲಾಲರ ಕನಸಿನ ಕೂಸು. ಭಾರತ ಸೇವಕ ಸಮಾಜ ಬಡವರ, ದಲಿತರ, ಶೋಷಣೆಗೊಳಗಾದವರ ಸಲುವಾಗಿ ಕೆಲಸ ಮಾಡುವ ಸೇವಾ ಸಂಸ್ಥೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿರುವ ನುರಿತ ಸಮಾಜ ಸೇವಕರು ತಮ್ಮದೇ ರೀತಿಯಲ್ಲಿ ಪ್ರಯೋಗಾರ್ಥವಾಗಿ ಸಮಾಜದ ಉಪೇಕ್ಷೆಗೊಳಗಾದವರ ಒಳಿತಿಗಾಗಿ ಪ್ರಯೋಗಗಳನ್ನು ನಡೆಸತಕ್ಕ ಜವಾಬ್ದಾರಿ ಸಂಚಾಲಕರ ಮೇಲಿತ್ತು. ಇವರು ಕೈಗೊಂಡ ಪ್ರಯೋಗಗಳು ಪೂರ್ಣ ಫಲ ನೀಡಿದರೆ ಅಂತಹ ಪ್ರಯೋಗಗಳನ್ನು ಪೈಲಟ್ ಪ್ರಾಜೆಕ್ಟ್ ಎಂದು ಭಾರತ ಸರ್ಕಾರ ಅಂಗೀಕರಿಸಿ ಆ ಪ್ರಯೋಗಗಳನ್ನು ದೇಶಾದ್ಯಂತ ಜಾರಿಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳುತ್ತಿತ್ತು. ಭಾರತ ಸೇವಕ ಸಮಾಜ ಪರಿಣಾಮಕಾರಿಯಾಗಿ ಪ್ರಯೋಗಗಳನ್ನು ಕೊಡಬೇಕೆಂಬುದು ಸರ್ಕಾರದ ಆಶಯವಾಗಿತ್ತು. ಪ್ರಧಾನಿ ಜವಹರಲಾಲ್ ನೆಹರುರವರು ಭಾರತ ಸೇವಕ ಸಮಾಜದ ರಾಷ್ಟ್ರಾಧ್ಯಕ್ಷರಾಗಿದ್ದರು. ಸಚಿವ ಗುಲ್ಚಾರಿಲಾಲ್ ನಂದ ಅದರ ಕಾರ್ಯಾಧ್ಯಕ್ಷರಾಗಿದ್ದರು.
ಮೈಸೂರು ಸಂಸ್ಥಾನದ ಘಟಕಕ್ಕೆ ಸಂಚಾಲಕನಾದ ಮೇಲೆ ನಾನು ಎರಡು ಕೊಳಗೇರಿಗಳನ್ನು ಆಯ್ಕೆ ಮಾಡಿಕೊಂಡು ಪ್ರಯೋಗ ಮಾಡತೊಡಗಿದೆ. ಅವುಗಳೆಂದರೆ ಬೆಂಗಳೂರು ವಿಜಯ ಕಾಲೇಜ್ ಹಿಂಭಾಗದಲ್ಲಿರುವ ದಾಸರ ಕಾಲೋನಿ ಹಾಗೂ ಮೈಸೂರು ರಸ್ತೆಯಲ್ಲಿರುವ ವಾಲ್ಮೀಕಿ ನಗರ. ಜಯನಗರದ ದಾಸರ ಕಾಲೋನಿ ಬಹಳ ಹಳೆಯ ಕೊಳೆಗೇರಿ. ಅಲ್ಲಿನ ನಿವಾಸಿಗಳು ಬ್ರಿಟಿಷ್ ಸೈನ್ಯದ ಕುದುರೆಗಳನ್ನು ತೊಳೆಯುವ ಕೆಲಸ ಮಾಡುತ್ತಿದ್ದರು. ಅವರದು 23 ಗುಡಿಸಲುಗಳು ಇದ್ದವು. ಆ ಕೊಳೆಗೇರಿಯ ಸ್ವಚ್ಛತಾ ಕಾರ್ಯವನ್ನು ಮೊದಲು ಕೈಗೆತ್ತಿಕೊಳ್ಳಲಾಯಿತು. ಈ ಕೆಲಸದಲ್ಲಿ ಸ್ವಯಂಸೇವಕರಾಗಿ ಆಗ ವಿದ್ಯಾರ್ಥಿಗಳಾಗಿದ್ದ ಎಂ.ಆರ್.ದೊರೆಸ್ವಾಮಿ, ಮುಂದೆ ಶಾಸಕರಾದ ವಕೀಲ ಸುಬ್ಬಾರೆಡ್ಡಿ ಮುಂತಾದವರು ತೊಡಗಿಸಿಕೊಳ್ಳುತ್ತಿದ್ದರು. ಜಯನಗರ ಆ ಹೊತ್ತಿಗೆ ಉತ್ತಮ ಬಡಾವಣೆಯಾಗಿ ರೂಪಿತವಾಗಿತ್ತು. ಉನ್ನತಾಧಿಕಾರಿಗಳು, ಪ್ರತಿಷ್ಟಿತ ವ್ಯಕ್ತಿಗಳು ಸುಸಜ್ಜಿತ ಮನೆಗಳನ್ನು ಕಟ್ಟಿಕೊಂಡಿದ್ದರು. ಅವರಿಗೆ ಈ ಕೊಳೆಗೇರಿ ಅಲ್ಲಿರುವುದು ಸರಿಕಾಣಲಿಲ್ಲ. ದಾಸರ ಕಾಲೋನಿ ಖಾಲಿಮಾಡಿಸಿ, ಅಲ್ಲಿದ್ದವರನ್ನು ಓಡಿಸಿಬಿಡುವ ಪ್ರಯತ್ನದಲ್ಲಿದ್ದರು. ಈ ಕೊಳೆಗೇರಿ ನಿವಾಸಿಗಳನ್ನು ಅಲ್ಲಿಯೇ ಉಳಿಸಿ ಅವರ ಜೀವನ ಶೈಲಿ ಬದಲಾಯಿಸಲಿಕ್ಕಾಗಿ ಗುಡಿಸಲುಗಳನ್ನು ತೆಗೆದು ಮನೆಗಳನ್ನು ಕಟ್ಟಿಸಿಕೊಡುವ ತೀರ್ಮಾನ ತೆಗೆದುಕೊಂಡೆ. ಬೆಂಗಳೂರು ನಗರಾಭಿವೃದ್ಧಿ ಸಮಿತಿಗೆ ಆಗ ದೀನದಯಾಳು ನಾಯ್ಡು ಛೇರ್‍ಮನ್ ಆಗಿದ್ದರು. ಅವರು ಬೆಂಗಳೂರು ನಗರ ಮೇಯರ್ ಆಗಿದ್ದವರು. ಅವರು ವಿದ್ಯಾರ್ಥಿ ದೆಸೆಯಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಮನೆವಾಸವನ್ನೂ ಅನುಭವಿಸಿದ್ದರು.
ಅವರ ಮುಖಾಂತರ ದಾಸರ ಕಾಲೋನಿಯ ಗುಡಿಸಲುಗಳನ್ನು ತೆರವುಗೊಳಿಸಿ ಅಲ್ಲಿ ಮನೆಗಳನ್ನು ಕಟ್ಡಿಕೊಡಲು ವಿನಂತಿ ಮಾಡಿಕೊಂಡೆ. ದೀನ ದಯಾಳು ನಾಯ್ಡು ಈ ನನ್ನ ಸಲಹೆಗೆ ಒಪ್ಪಿದರು. ದಾಸರ ಕಾಲೋನಿ ವಾಸಿಗಳು ತಾವೇ ಗುಡಿಸಲುಗಳನ್ನು ತೆಗೆದು ಜಾಗ ಖಾಲಿ ಮಾಡಿಕೊಟ್ಟರು. 23 ಮನೆಗಳನ್ನು ಕಟ್ಟಲಾಯಿತು. ಪ್ರತಿ ಮನೆಗೂ ಒಂದು ಮಲಗುವ ಕೋಣೆ, ಒಂದು ಹಜಾರೆ, ಒಂದು ಅಡುಗೆ ಕೋಣೆಯನ್ನೊಳಗೊಂಡ ಮನೆಗಳು ತಯಾರಾದವು. ಆ ಮನೆಗಳನ್ನು ಕಟ್ಟಿ ಇಲ್ಲಿಗೆ 50 ವರ್ಷಗಳಾಗಿವೆ. ಈಗ ದಾಸರ ಕಾಲೋನಿಯ ಮಕ್ಕಳೆಲ್ಲ ಓದಿ ಮುಂದಕ್ಕೆ ಬಂದಿದ್ದಾರೆ. ಅನೇಕರು ಫ್ಯಾಕ್ಟರಿಗಳಲ್ಲಿ, ಖಾಸಗಿ ಉದ್ಯಮಿಗಳ ಬಳಿ ಕೆಲಸ ಮಾಡುತ್ತಾರೆ. ದಾಸರ ಕಾಲೋನಿಯ ಜನರಿಗೆ ಒಂದು ರೀತಿಯಲ್ಲಿ ಶಾಪವಿಮೋಚನೆ ಆಗಿದೆ. ಕೊಳಗೇರಿಯನ್ನು ಕಾಲಿ ಮಾಡಿಸಲು ತುದಿಗಾಲಲ್ಲಿ ನಿಂತಿದ್ದ ಸಭ್ಯಸ್ಥರಿಗೂ ಅಲ್ಪಸ್ವಲ್ಪ ಸಮಾಧಾನವಾಗಿರಬಹುದು.
ವಾಲ್ಮೀಕಿ ನಗರ ಒಂದು ಹರಿಜನ ಕಾಲೋನಿ. ಸಂಪಂಗಿರಾಮ ನಗರದ ಕಡೆ ಇದ್ದ ಜನರನ್ನು ಬೆಂಗಳೂರು ಬೆಳೆದಂತೆ ದೂಡುತ್ತಾ ಮೈಸೂರು ರೋಡಿಗೆ ತಂದು ದಬ್ಬಿದ್ದರು. ಇಲ್ಲಿನ ಬಹುತೇಕರು ಬೂಟು, ಚಪ್ಪಲಿ ತಯಾರಿಸುವುದರಲ್ಲಿ ಪರಿಣಿತರಿದ್ದರು. ಆ ಏರಿಯಾದಲ್ಲಿ ಒಂದು ಚಪ್ಪಲಿ ಉದ್ಯಮವನ್ನು ನೊಂದಾವಣೆ ಮಾಡಿಸಿ, ಒಂದು ಕಾರ್ಯಾಗಾರ ಕಟ್ಟಿಸಿದೆ. ಕೇಂದ್ರ ಸರ್ಕಾರದ ಸಣ್ಣ ಕೈಗಾರಿಕೆಗಳ ನಿಗಮದಿಂದ 2 ಲಕ್ಷ ರೂಪಾಯಿ ಸಹಾಯಧನ ದೊರಕಿತು. 40 ಜನರನ್ನು ಕೆಲಸಕ್ಕೆ ತೆಗೆದುಕೊಂಡು ಅವರಿಗೆ ಬೇರೆಯವರು ಕೊಡುವುದಕ್ಕಿಂತ ಹೆಚ್ಚಿಗೆ ಮಜೂರಿ ಕೊಡಲಾಯಿತು. ಬಂದ ಕಾಸಿನಿಂದ ಹೋಲ್‍ಸೇಲ್‍ದರದಲ್ಲಿ ಚರ್ಮವನ್ನು ಖರೀದಿಸಲಾಯಿತು. ಕೆಲವು ಯಂತ್ರ ಸಾಮಗ್ರಿಗಳನ್ನೂ ಕೊಳ್ಳಲಾಯಿತು. ಅವರು ತಯಾರಿಸುವ ಬೂಟ್‍ಗೆ ‘ಭಾರತ್ ಸೇವಕ್’ ಎಂದು ನಾಮಕರಣ ಮಾಡಲಾಯಿತು. ಕೆಲಸ ಬಿರುಸಿನಿಂದ ನಡೆಯಿತು. ಶೂ ಅಂಗಡಿಯವರು ಬೂಟು ಚಪ್ಪಲಿಗಳನ್ನು ಹೋಲ್‍ಸೇಲ್ ದರದಲ್ಲಿ ಕೊಂಡುಕೊಳ್ಳುತ್ತಿದ್ದರು.
ಈ ಮಧ್ಯೆ ಒಂದು ಸಮಸ್ಯೆ ಎದುರಾಯಿತು. ಶನಿವಾರ ಕಾರ್ಮಿಕರಿಗೆ ವಾರದ ಬಟವಾಡೆ ಮಾಡಿದರೆ ಅವರು ಸೋಮವಾರ, ಮಂಗಳವಾರ ಕೆಲಸಕ್ಕೆ ಗೈರುಹಾಜರಾಗುತ್ತಿದ್ದರು. ಪಡೆದ ಹಣದ ಬಹುಭಾಗ ಅವರ ಕುಡಿತಕ್ಕೆ ಹೋಗುತ್ತಿತ್ತು. ಇದನ್ನು ಗಮನಿಸಿ ಕೆಲಸಗಾರರಿಗೆ ಶನಿವಾರ 15ರೂ ಕೊಡುವುದು, ಉಳಿದ ಹಣಕ್ಕೆ ಅವರ ಮನೆಗೆ ಬೇಕಾದಷ್ಟು ರೇಷನ್, ಅಕ್ಕಿ, ರಾಗಿ, ನುಚ್ಚು ಹಾಗೂ ಇತರ ಪರಿಗಳನ್ನು ಹೋಲ್‍ಸೇಲ್‍ನಲ್ಲಿ ಕೊಂಡು ತಂದು ಅವರ ಮನೆಗಳಿಗೆ ತಂದು ಹಾಕುವುದೆಂದು ನಿರ್ಧರಿಸಿದೆವು. ಈ ಏರ್ಪಾಡಿನಿಂದ ಅವರ ಮನೆಮಂದಿಗೆ ಊಟ ಸಿಗೋದು ಖಾತ್ರಿಯಾಯ್ತು. ಕೆಲಸಗಾರರು ತಪ್ಪಿಸಿಕೊಳ್ಳದೆ ಪ್ರತಿದಿನವೂ ಕೆಲಸಕ್ಕೆ ಬರುವಂತಾಯಿತು. ಆಗಾಗ ನಾವು ಅವರ ಮನೆಗಳಿಗೆ ಹೋಗಿ ಕೊಡಿಸಿದ್ದ ರೇಷನ್ ಇದೆಯೋ, ಇಲ್ಲ ಮಾರಿಹಾಕಿಬಿಟ್ಟಿದ್ದಾರೆಯೋ ಎಂದು ತನಿಖೆ ನಡೆಸುತ್ತಿದ್ದೆವು.
ಇದಲ್ಲದೆ ಕೊಳಚೆಯಿಂದ ಕೂಡಿದ್ದ ಈ ಸ್ಲಂ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳಲು ಅಲ್ಲಿಯ ಯುವಕರ ತಂಡವೊಂದನ್ನು ರಚಿಸಿದೆ. ಸಣ್ಣ ಮಕ್ಕಳಿಗಾಗಿ ಒಂದು ಕ್ರಷ್, 3 ರಿಂದ 5 ವರ್ಷದ ಮಕ್ಕಳಿಗೆ ಒಂದು ನರ್ಸರಿ ಸ್ಥಾಪಿಸಲಾಯಿತು. ಈ ಮಕ್ಕಳಿಗೆಲ್ಲಾ ಹಾಲು, ಹಣ್ಣಿನ ರಸ ಹಂಚುವ ವ್ಯವಸ್ಥೆಯಾಯಿತು. ಕೇರಿಯ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕೆಂದು ಒತ್ತಾಯ ತಂದ ಕಾರಣದಿಂದಾಗಿ ಎಲ್ಲಾ ಮಕ್ಕಳಿಗೂ ಶಿಕ್ಷಣ ದೊರಕಿತು. ಸ್ಲಂನಲ್ಲಿ ಜಗಳವಾದರೆ ಇದನ್ನು ಪರಿಹರಿಸಲು ಊರಿನ ಯಜಮಾನರ ತಂಡವಿತ್ತು. ಇವರು ವಿಚಾರಣೆ ನಡೆಸಿ ಎರಡೂ ಬಣದವರಿಗೂ ಜುಲ್ಮಾನೆ ಹಾಕಿ ಬಂದ ಹಣವನ್ನು ಕುಡಿಯಲು ಬಳಸುತ್ತಿದ್ದರು. ಅದನ್ನೂ ತಪ್ಪಿಸಿ, ಊರಿನ ಎಲ್ಲರ ಸಭೆ ಕರೆದು ಅವರೆದುರಿನಲ್ಲಿ ವ್ಯಾಜ್ಯಗಳನ್ನು ಪರಿಹರಿಸಲು ಆರಂಭಮಾಡಿದೆ. ಕಾಲಕ್ರಮೇಣ ಜಗಳ, ಕದನಗಳು ನಿಂತುಹೋದವು.
ಸ್ಲಂನಲ್ಲಿ ಕೊಳೆತ ಹಣ್ಣುಗಳು, ಕೊಳೆತ ತರಕಾರಿಗಳನ್ನು ಮಾರಲಾಗುತ್ತಿತ್ತು. ಅವನ್ನು ತಪ್ಪಿಸಿ, ತಾಜಾ ಹಣ್ಣು ತರಕಾರಿಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಲಾಯಿತು. ಹೀಗೆ ನನಗೆ ಸಾಮಾಜಿಕ ಜವಾಬ್ದಾರಿಗಳು ಹೆಚ್ಚುತ್ತಿದ್ದಂತೆ, ಹಣಕಾಸಿನ ವಹಿವಾಟು ನೋಡಿಕೊಳ್ಳಲು ಮ್ಯಾಸ್ಕರ್‍ನಾಸ್ ಎಂಬ ಸಜ್ಜನರನ್ನು ವಿನಂತಿಸಿಕೊಂಡೆ. ಅವರು ಚಾಮರಾಜಪೇಟೆಯಿಂದ ಅಸೆಂಬ್ಲಿ ಸದಸ್ಯರಾಗಿದ್ದವರು. ಎಲ್ಲವೂ ಸುಗಮವಾಗಿ ನಡೆಯಲು ಈ ಏರ್ಪಾಟು ನೆರವಿಗೆ ಬಂದಿತು.
ಇದೆಲ್ಲಾ ನಡೆದು 50 ವರ್ಷಗಳಾಗಿವೆ. ದುಶ್ಚಟಗಳು ಗಣನೀಯವಾಗಿ ಇಳಿಮುಖವಾಗಿದ್ದವು. ಈಗ ವಾಲ್ಮೀಕಿ ನಗರದ ನಿವಾಸಿಗಳು ಆರ್ಥಿಕವಾಗಿ ಸುಧಾರಿಸಿದ್ದಾರೆ. ಕಲಿತ ಯುವಕ-ಯುವತಿಯರ ಸಂಖ್ಯೆ ಗಣನೀಯವಾಗಿದೆ. ಡಿಪ್ಲೊಮಾ, ಡಿಗ್ರಿಗಳನ್ನು ಪಡೆದಿದ್ದಾರೆ. ಅಂದು ನಾನು ಮಾಡಿದ ಸೇವೆ ಒಳ್ಳೆಯ ಫಲವನ್ನು ಕೊಟ್ಟಿದೆ ಎಂಬ ಸಮಾಧಾನ ನನಗಿದೆ.
ಸ್ವಾರ್ಥ ಫಲಾಪೇಕ್ಷೆಯಿಲ್ಲದೆ ಸಮಾಜಮುಖಿಯಾಗಿ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡರೆ ಸಮಾಜದಿಂದ ಉತ್ತಮ ಸ್ಪಂದನೆ ಸಿಗುತ್ತದೆ ಎಂಬುದಕ್ಕೆ ಇವು ನಿದರ್ಶನ ಎನ್ನಬಹುದು. ರಚನಾತ್ಮಕ ಧೋರಣೆಯಿಂದ, ಸೇವಾ ಭಾವದಿಂದ ಕಾರ್ಯೋನ್ಮುಖರಾಗುವ ಯುವಕ-ಯುವತಿಯರ ಅವಶ್ಯಕತೆ ಹಿಂದಿಗಿಂತಲೂ ಇಂದು ಹೆಚ್ಚಾಗಿಯೇ ಇದೆ. ಇದು ನಿಜವಾದ ಅರ್ಥದಲ್ಲಿ ರಾಷ್ಟ್ರ ನಿರ್ಮಾಣದ ಕಾರ್ಯ ಎಂಬುದನ್ನು ಇಂದಿನ ಪೀಳಿಗೆ ಮನಗಾಣುತ್ತದೆ ಎಂಬ ಆಶಾಭಾವ ನನ್ನದು.

 

– ಹೆಚ್.ಎಸ್.ದೊರೆಸಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....