Homeಮುಖಪುಟ"ಸೈಂಟಿಫಿಕ್ ಪೆಪ್ಪರಮಿಂಟ್" ಅಂದ್ರೆ ಏನು, ಹೇಗಿರುತ್ತೆ ಗೊತ್ತಾ?

“ಸೈಂಟಿಫಿಕ್ ಪೆಪ್ಪರಮಿಂಟ್” ಅಂದ್ರೆ ಏನು, ಹೇಗಿರುತ್ತೆ ಗೊತ್ತಾ?

- Advertisement -
- Advertisement -

ಹೊಸ ಶಿಕ್ಷಣ ನೀತಿಯ ಹಿನ್ನೆಲೆಯಲ್ಲಿ ಕೇಂದ್ರದ ಸಾಂಸ್ಕೃತಿಕ ವಕ್ತಾರರನ್ನು ಸಂದರ್ಶಿಸಲಾಯಿತು. ಈ ದೇಶದ ಮುಂದಿನ ಐವತ್ತು ವರ್ಷಗಳ ಶಿಕ್ಷಣ, ಸಾಂಸ್ಕೃತಿಕ ನಡೆ ಕುರಿತ ಕಾಣ್ಕೆಯನ್ನು ವಕ್ತಾರರು ಹಂಚಿಕೊಂಡರು.

ಅದರ ಆಯ್ದ ಭಾಗವನ್ನು ಇಲ್ಲಿ ಪ್ರಕಟಿಸಲಾಗಿದೆ.

ನಾನು: ಹೊಸ ಶಿಕ್ಷಣ ನೀತಿಯ ಒತ್ತು ಏನು?

ಸಾಂಸ್ಕೃತಿಕ ವಕ್ತಾರ: ನೋಡಿ ಕಳೆದ ಎಪ್ಪತ್ತು ವರ್ಷಗಳಲ್ಲಿ ನಮ್ಮ ಸಂಸ್ಕೃತಿಯನ್ನು ನಾಶಮಾಡುವ ಕೆಲಸವನ್ನು ನೆಹರೂ ಮತ್ತು ಎಡಚರು ಮಾಡಿದ್ದಾರೆ . ನಾವು ಅದನ್ನು ತಿದ್ದಿ ಭಾರತದ ಭವ್ಯ ಸಂಸ್ಕೃತಿಯನ್ನು ಸ್ಥಾಪಿಸಬೇಕಾಗಿದೆ. ಭಾರತ ವಿಶ್ವಗುರುವಾಗಲು ಇದು ಬುನಾದಿ.

ನಾನು: ಇದನ್ನು ಹೇಗೆ ಸಾಧಿಸಲಾಗುತ್ತದೆ?

ಸಾಂವ: ಈಗ ನೋಡಿ ಮೊನ್ನೆ ಗ್ರಹಣ ಆಯಿತು. ಎಡಚರು ಇದನ್ನು ಖಗೋಳ ಶಾಸ್ತ್ರೀಯ ಘಟನೆ ಅನ್ನುತ್ತಾರೆ. ಆದರೆ ನಮ್ಮ ಹಳ್ಳಿಹಳ್ಳಿಗಳಲ್ಲೂ ಇದನ್ನು ಸಾವಿರಾರು ವರ್ಷಗಳಿಂದ ಗಮನಿಸಿದ್ದಾರೆ. ಇದರ ಪರಿಣಾಮಗಳನ್ನು ನಿವಾರಿಸಲು ಪರಿಹಾರ ಕ್ರಮ ಮಾಡುತ್ತಾರೆ. ಹಾಗಿದ್ದರೆ ಅವರು ಅಜ್ಞಾನಿಗಳೇ? ಉದಾ: ಗ್ರಹಣ ಕಾಲದಲ್ಲಿ ವಿಕಿರಣ ಪರಿಣಾಮ ಆಗುತ್ತೆ. ಅದಕ್ಕೇ ಮಕ್ಕಳನ್ನು ತಿಪ್ಪೆಯಲ್ಲಿ ಹುಗಿದಿಡುವ ಸಂಪ್ರದಾಯ ಇದೆ. ಯಾಕೆ ಹೇಳಿ? ಗೋವಿನ ಸೆಗಣಿಗೆ ವಿಕಿರಣವನ್ನು ತಡೆಯುವ ಶಕ್ತಿ ಇದೆ.

ನಾನು: ಅಂದರೆ?

ಸಾಂ ವ: ಅಂದರೆ ನಾವು ಈ ಬಗ್ಗೆ ವಿಶೇಷ ಸಂಶೋಧನೆಗೆ ಅನುದಾನ ನೀಡುತ್ತೇವೆ. ಮಾತ್ರವಲ್ಲ ಮುಂದಿನ ವರ್ಷಗಳಲ್ಲಿ ಗ್ರಹಣ ಕಾಲದಲ್ಲಿ ಅಂಗನವಾಡಿ ಮತ್ತು ಶಾಲಾಮಕ್ಕಳನ್ನು ಶಾಲಾ ಆವರಣದಲ್ಲೇ ತಿಪ್ಪೆಯಲ್ಲಿ ಹೂತಿಡುವ ಬೃಹತ್ ರಾಷ್ಟ್ರೀಯ ಕಾರ್ಯಕ್ರಮವನ್ನು ಚಾಲೂ ಮಾಡಲಾಗುವುದು. ವಿದೇಶಗಳಲ್ಲೂ ಇದರ ವೈಜ್ಞಾನಿಕ ಮಹತ್ವವನ್ನು ಸಾರಲೂ ವಿದೇಶದಲ್ಲಿರುವ ಭಾರತೀಯ ಮಕ್ಕಳನ್ನು ಬಳಸಿ ಅಲ್ಲಿ ಪ್ರಾತ್ಯಕ್ಷಿಕೆ ಮಾಡಿ ವಿದೇಶಗಳಲ್ಲೂ ನಮ್ಮ ಆಚರಣೆಯ ಮಹತ್ವವನ್ನು ಪ್ರಚುರಪಡಿಸಲಾಗುವುದು.

ನಾನು : ಮತ್ತೆ ಈ ದರ್ಭೆಗೆ ವಿಶೇಷ ಮಹತ್ವ ಇದೆ ಎಂದು ಹೇಳ್ತಿದ್ರು..

ಸಾಂವ: ದರ್ಭೆ? ಅದು ಜಗತ್ತಿನಲ್ಲೇ ವಿಶೇಷ. ಅದರ ಒಂದು ತುಂಡು ಹಾಕಿದರೂ ವಿಕಿರಣ ತಾಗೋದಿಲ್ಲ. ಅಷ್ಟೇಕೆ, ನಾವೀಗ ದರ್ಭೇಯನ್ನೇ ಉಪಯೋಗಿಸಿ ಬೆನ್ನಟ್ಟುವ ಕ್ಷಿಪಣಿ ತಯಾರು ಮಾಡುವ ತಂತ್ರಜ್ಞಾನದ ಸಂಶೋಧನೆ ಆರಂಭಿಸಿದ್ದೇವೆ

ನಾನು: ಅದು ಹೇಗೆ?

ಸಾಂವ: ಅಯ್ಯೋ, ರಾಮಾಯಣದಲ್ಲಿ ಶ್ರೀರಾಮ ದೇವರು ದರ್ಭೆಗೆ ಮಂತ್ರ ಆವಾಹನೆ ಮಾಡಿ ಕಾಕಾಸುರನನ್ನು ಬೆನ್ನಟ್ಟಲಿಲ್ಲವೇ? ಹಾಗೇ ಶತ್ರು ಕ್ಷಿಪಣಿ/ ವಿಮಾನದ ಶಾಖವನ್ನೇ ಬೆನ್ನು ಹತ್ತಿ ಅದನ್ನು ನಾಶ ಮಾಡೋದು. ದರ್ಭೆ ಸಣ್ಣಕ್ಕೆ ಇರುವ ಕಾರಣ ಅದು ರಾಡಾರಿನಲ್ಲೂ ಕಾಣಿಸೋದಿಲ್ಲ. ಅದಕ್ಕೆ ಆಗ್ನೇಯಾಸ್ತ, ಬ್ರಹ್ಮಾಸ್ತ್ರದಂಥಾ ಮಂತ್ರವನ್ನು ಆವಾಹಿಸಲು ವಿಶೇಷ ವಿಪ್ರ ಪುರೋಹಿತರನ್ನು ಸೈನ್ಯ ನಿಯೋಜಿಸಲಿದೆ.

ನಾನು: ಅದ್ಭುತ. ಇದನ್ನು ಜಗತ್ತಿಗೆ ಹೇಳಬೇಕು!!

ಸಾಂವ: ( ನಕ್ಕು) ನೋಡಿ.. ಇದು ಡಿಫೆನ್ಸ್ ಸೀಕ್ರೆಟ್. ಇದನ್ನು ನಾವು ಯಾರಿಗೂ ಹೇಳೋದಿಲ್ಲ ಹ್ಹ.. ಹ್ಹಾ..

ನಾನು: ಅದ್ಭುತ.. ಇನ್ನು ಇಂಥಾ ಎಷ್ಟು ಯೋಜನೆಗಳಿದಾವೆ?

ಸಾಂವ: ತುಂಬಾ ಇದೆ. ಆದರೆ ಕೆಲವನ್ನು ನಾವು ಗುಪ್ತವಾಗಿ ಮಾಡಬೇಕಿದೆ. ಉದಾ: ನಾವು ಈಗಾಗಲೇ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಮೆದುಳು ಮತ್ತು ಹೃದಯವನ್ನು ಬದಲಾಯಿಸುವ ಶಸ್ತ್ರಚಿಕಿತ್ಸೆಯನ್ನು ಗುಂಪು ಗುಂಪಿಗೆ ಮಾಡಿದ್ದೇವೆ. ಇದರಲ್ಲಿ ಮೆದುಳನ್ನು ಮೆತ್ತಗೆ ಮಾಡಿ ವಿಧೇಯತೆಯನ್ನು ಮುದ್ರಿಸುವುದನ್ನು ಮಾಡಲಾಗುತ್ತದೆ. ಇನ್ನು ಹೃದಯದ್ದು ಸ್ವಲ್ಪ ಬೇರೆ. ಅದು ಮೃದು ಇದ್ದರೆ ಕಷ್ಟ. ಅದಕ್ಕೇ ಕೆಲವು ಮೂಲಿಕೆ ಬಳಸಿ ಅದು ಕಲ್ಲಾಗುವ ತರ ಮಾಡುವುದು. ರಕ್ತಪರಿಚಲನೆ ಬಿಟ್ಟು ಬೇರೆ ಭಾವನೆಗಳ ಕೆಲಸ ಹೃದಯಕ್ಕೆ ಇರೋದು ವೇಸ್ಟ್ .

ನಾನು: ಅದ್ಭುತ.. ಇದು ಯಾವಾಗ ಚಾಲೂ ಆಗುತ್ತೆ?

ಸಾಂವ: ಚಾಲೂ? ಎಲ್ಲಿದ್ದೀರಿ ನೀವು..? ಈಗ ನಮ್ಮ ಪರವಾಗಿ ಮಾತಾಡಿ, ಬೀದಿಗಿಳಿದು ಗಲಾಟೆ ಮಾಡೋರು ಯಾರು ಅಂದ್ಕೊಂಡ್ರಿ? ಅದು ಈಗಾಗಲೇ ಲಕ್ಷಾಂತರ ಮಂದಿಗೆ ಮಾಡಿಯಾಗಿದೆ..

ನಾನು: ಅದ್ಭುತ: ಈ ಒಟ್ಟಾರೆ ನೀತಿಗೆ ಏನೆಂದು ಕರೆಯಲಾಗುತ್ತೆ?

ಸಾಂವ: ನೋಡಿ ನೆಹರೂ ಇದನ್ನು ಸೈಂಟಿಫಿಕ್ ಟೆಂಪರಮೆಂಟ್ ಅಂತ ಕರಿತಿದ್ರು. ಎಂಥಾ ಟೆಂಪರ್? ಅದಕ್ಕೇ ನಾವಿದನ್ನು ಪೆಪ್ಪರಮಿಂಟ್.. ಸೈಂಟಿಫಿಕ್ ಪೆಪ್ಪರಮಿಂಟ್ ಎಂದು ಕರೆಯುತ್ತೇವೆ. ಪೆಪ್ಪರಮಿಂಟ್ ಅಂದ್ರೇನು? ಗೊತ್ತಲ್ಲ. ಮಕ್ಕಳಿಗೆ ಇಷ್ಟ. ಅದಕ್ಕೇ ಈ ಯೋಜನೆಗೆ ಆ ಹೆಸರು

ನಾನು: ಸೂಪರ್ ಸಾರ್… ಅಭಿನಂದನೆಗಳು..!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...