Homeಮುಖಪುಟಬಿಜೆಪಿಗೆ ‘ಶರಣಾದ’ ನಾಲ್ವರು ಟಿಡಿಪಿ ಎಂಪಿಗಳು. ಇವರಿಲ್ಲಿಬ್ಬರನ್ನು ‘ಆಂಧ್ರ ಮಲ್ಯಗಳು’ ಎಂದಿತ್ತು ಬಿಜೆಪಿ!

ಬಿಜೆಪಿಗೆ ‘ಶರಣಾದ’ ನಾಲ್ವರು ಟಿಡಿಪಿ ಎಂಪಿಗಳು. ಇವರಿಲ್ಲಿಬ್ಬರನ್ನು ‘ಆಂಧ್ರ ಮಲ್ಯಗಳು’ ಎಂದಿತ್ತು ಬಿಜೆಪಿ!

ಚಂದ್ರಬಾಬು ನಾಯ್ಡು ಎನ್‍ಡಿಎ ಜೊತೆಗಿದ್ದಾಗ ಚೌಧರಿ ಮತ್ತು ರಮೇಶರ ಮೇಲೆ ಯಾವ ಕೇಸುಗಳನ್ನು ಹಾಕಿರಲಿಲ್ಲ. ನಾಯ್ಡು ಎನ್‍ಡಿಎ ತೊರೆದ ನಂತರ ಸಿಬಿಐ, ಇ.ಡಿ ಮತ್ತು ಐಟಿ ಇಲಾಖೆಗಳು ಈ ಇಬ್ಬರು ಎಂಪಿ ಕಂ ಉದ್ಯಮಿಗಳ ಹಿಂದೆ ಬಿದ್ದವು.

- Advertisement -
- Advertisement -

ನಿನ್ನೆಯಷ್ಟೇ ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ಬಿಜೆಪಿ ಸೇರಿದ್ದಾರೆ. ಇದರಲ್ಲಿ ಐ.ಸಿ.ಚೌಧರಿ ಮತ್ತು ಚಿ.ಎಂ ರಮೇಶ ಬಿಜೆಪಿಗೆ ಸೇರಿದ್ದಾರೆ ಎನ್ನುವುದಕ್ಕಿಂತ ಬಿಜೆಪಿಗೆ ಶರಣಾಗಿದ್ದಾರೆ ಅಥವಾ ಬಿಜೆಪಿ ಬ್ಲ್ಯಾಕ್‍ಮೇಲ್ ತಂತ್ರದಿಂದ ಈ ಇಬ್ಬರನ್ನು ಎಳೆದುಕೊಂಡಿದೆ ಎನ್ನುವುದೇ ಸೂಕ್ತ…. ಎನಿ ಹೌ ಥ್ಯಾಂಕ್ಸ್ ಟು ಸಿಬಿಐ, ಐಟಿ, ಇ,ಡಿ…… ತಿನ್ನಲ್ಲ, ತಿನ್ನಲು ಬಿಡಲ್ಲ ಅನ್ನುತ್ತಲೇ ತಿಂದು ಸಿಕ್ಕು ಹಾಕಿಕೊಂಡವರನ್ನು ಅಪ್ಪಿಗೊಳ್ಳುವ ಈ ವಿದ್ಯಾಮಾನ ಇನ್ನಷ್ಟು ವಿಸ್ತರಿಸುವ ಲಕ್ಷಣಗಳಿವೆ.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರ ಟಿಡಿಪಿ ಪಕ್ಷದಿಂದ ಮೂವರು ರಾಜ್ಯಸಭಾ ಸದಸ್ಯರನ್ನು ಬಿಜೆಪಿ ಎಗರಿಸಿದೆ. ವೈ.ಎಸ್ ಚೌಧರಿ, ಸಿಎಂ. ರಮೇಶ, ಗರಿಕಪತಿ ಮೋಹನರಾವ್ ಮತ್ತು ಟಿ.ಜಿ. ವೆಂಕಟೇಶ ಟಿಡಿಪಿ ತೊರೆದು ಅಮಿತ್‍ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. ಇವರಲ್ಲಿ ವೈ.ಎಸ್, ಚೌಧರಿ ಮತ್ತು ಸಿ.ಎಂ. ರಮೇಶ ಉದ್ಯಮಿಗಳೂ ಆಗಿದ್ದು ವಿವಿಧ ಹಣಕಾಸು ಹಗರಣಗಳಲ್ಲಿ ಈಟಿ, ಸಿಬಿಐ ಮತ್ತು ಜಾರಿದಳದ ತನಿಖೆ ಎದುರುಸುತ್ತಿದ್ದಾರೆ.

7-8 ತಿಂಗಳ ಹಿಂದೆಯಷ್ಟೇ ಇವರನ್ನು ‘ಆಂಧ್ರ ಮಲ್ಯ’ಗಳು ಎಂದಿದ್ದ ಬಿಜೆಪಿ ಇವರಿಬ್ಬರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ರಾಜ್ಯಸಭಾದ ಮುಖ್ಯಸ್ಥರಿಗೆ ಪತ್ರ ಬರೆದು ಒತ್ತಾಯಿಸಿತ್ತು. ಈಗಲೂ ಈ ಇಬ್ಬರಿಗೆ ಯಾವ ಕ್ಲೀನ್‍ಚಿಟ್ ಸಿಕ್ಕಿಲ್ಲ. ಆದರೆ ಈ ‘ಆಂಧ್ರ ಮಲ್ಯಗಳನ್ನು’ ಬಿಜೆಪಿ ಸೇರಿಸಿಕೊಂಡಿದೆ. ಗೊತ್ತಿದ್ದೇ ಈ ಇಬ್ಬರು ಇನ್ನು ನಿರಾಳರಾಗಲಿದ್ದಾರೆ..ಸ್ವಲ್ಪದರಲ್ಲೇ ಆರೋಪಮುಕ್ತರೂ ಆಗಲಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ತನ್ನ ಎದುರಾಳಿ ಪಡೆಗಳಿಂದ ಎಂಎಲ್‍ಎ, ಎಂಪಿಗಳನ್ನು ಸೆಳೆಯಲು ಸಿಬಿಐ, ಐಟಿ ಮತ್ತು ಇ,ಡಿ ಇಲಾಖೆಗಳನ್ನು ಬಿಜೆಪಿ ಬಳಸಿಕೊಂಡು ಬಂದಿದ್ದು ಈಗಾಗಲೇ ಕಣ್ಣೆದುರೇ ಇದೆ. 330ರಷ್ಟು ಎನ್‍ಡಿಎ ಬಲವಿದ್ದರೂ ಬಿಜೆಪಿಗೆ ಎಂಪಿಗಳ ಅಗತ್ಯವಿದೆ. ಏಕೆಂದರೆ ಅದಕ್ಕೆ ಈಗ ತುರ್ತಾಗಿ ಬೇಕಿರುವುದು ರಾಜ್ಯಸಭೆಗಳಲ್ಲಿ ಬಹುಮತ ತಲುಪುವುದು. ಸಂಘ ಪರಿವಾರದ ಅಜೆಂಡಾಗಳನ್ನು ಮಸೂದೆ ರೂಪದಲ್ಲಿ ಅಂಗೀಕರಿಸಲು ರಾಜ್ಯಸಭೆಯಲ್ಲು ಬಹುಮತ ಬೇಕು. ಈಗ ಅದು ರಾಜ್ಯಸಭೆಯತ್ತ ಗಮನ ನೀಡಿದೆ. ಮುಂಬರುವ ಹಲವು ವಿಧಾನಸಭೆಗಳಲ್ಲಿ ಭಾರಿ ಪ್ರಮಾಣದಲ್ಲಿ ಗೆದ್ದರೆ, ರಾಜ್ಯಸಭೆಯಲ್ಲಿ ಬಹುಮತ ಪಡೆಯಲು ಸಾಧ್ಯ ಎಂಬ ಗುರಿಯೋಂದಿಗೆ ಅದು ಈಗಲೇ ಮುನ್ನುಗುತ್ತಿದೆ.

ಚಂದ್ರಬಾಬು ನಾಯ್ಡು ಎನ್‍ಡಿಎ ಜೊತೆಗಿದ್ದಾಗ ಚೌಧರಿ ಮತ್ತು ರಮೇಶರ ಮೇಲೆ ಯಾವ ಕೇಸುಗಳನ್ನು ಹಾಕಿರಲಿಲ್ಲ. ನಾಯ್ಡು ಎನ್‍ಡಿಎ ತೊರೆದ ನಂತರ ಸಿಬಿಐ, ಇ.ಡಿ ಮತ್ತು ಐಟಿ ಇಲಾಖೆಗಳು ಈ ಇಬ್ಬರು ಎಂಪಿ ಕಂ ಉದ್ಯಮಿಗಳ ಹಿಂದೆ ಬಿದ್ದವು. ಆಗಲಿಂದಲೂ ಬಿಜೆಪಿ ಸೇರಿ ಪಾರಾಗಲು ಇವರ ಮೇಲೆ ಒತ್ತಡವಿತ್ತು. ಈಗ ಆಂಧ್ರದಲ್ಲಿ ಟಿಡಿಪಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡ ಮೇಲೆ ಈ ಇಬ್ಬರು ತನಿಖೆಯಿಂದ ಪಾರಾಗಲು ಬಿಜೆಪಿ ಸೇರಿದ್ದಾರೆ. ತನ್ನ ವಿರುದ್ಧ ವಿಪಕ್ಷಗಳನ್ನು ಒಗ್ಗೂಡಿಸಲು ಯತ್ನಿಸಿದ್ದ ನಾಯ್ಡು ಮೇಲೇಯೂ ಬಿಜೆಪಿ ಸೇಡು ತೀರಿಸಿಕೊಂಡಿದೆ.

ಆಂಧ್ರ ಮಲ್ಯಗಳ ಅಪ್ಪುಗೆ
ಕಳೆದ ನವಂಬರ್ ನಲ್ಲಿ ಬಿಜೆಪಿ ಎಂಪಿ ಮತ್ತು ವಕ್ತಾರ ಜಿವಿಎಲ್ ನರಸಿಂಹರಾವ್  ಈ ಇಬ್ಬರನ್ನು ‘ಆಂಧ್ರ ಮಲ್ಯಗಳು’ ಎಂದು ಅಪಾದಿಸಿ, ಇವರಿಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಲಿ ಎಂದು ರಾಜ್ಯಸಭಾದ ನೀತಿಸಂಹಿತೆ ಸಮಿತಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಈಗ ಅದೇ ಮಲ್ಯಗಳು ಬಿಜೆಪಿಯ ದೇಶಭಕ್ತರು! ಹಿಂದಿನ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ಅಂದಿನ ವಿಶೇಷಾಧಿಕಾರಿ ರಾಕೇಶ ಅಸ್ಥಾನಾ ನಡುವೆ ನಡಿದಿದ್ದ ಗದ್ದಲದಲ್ಲಿ ಟಿಡಿಪಿಯಲ್ಲಿದ್ದ ರಮೇಶ ಹೆಸರು ಕೇಳಿ ಬಂದಿತ್ತು. ಈತನ ಕಂಪನಿಯೊಂದರ ಮೇಲೆ ಐಟಿ ಇಲಾಖೆ ತನಿಖೆ ನಡೆಸುತ್ತಿತ್ತು. ಟಿಡಪಿಯಲ್ಲಿದ್ದ ಇನ್ನೊಬ್ಬ ಸದಸ್ಯ ಚೌಧರಿ ಮೇಲೆ ಬ್ಯಾಂಕುಗಳಿಗೆ ಮಾಡಿದ ಹಣಕಾಸು ವಂಚನೆಗಾಗಿ ಸಿಬಿಐ ಮತ್ತು ಇ.ಡಿ., ಸಂಸ್ಥೆಗಳು ಕಣ್ಣಿಟ್ಟಿದ್ದವು.

ಕಳೆದ ಅಕ್ಟೋಬರ್‍ನಲ್ಲಿ ರಮೇಶನಿಗೆ ಸಂಬಂಧಿಸಿದ ಕಂಪನಿ ರಿತ್ವಿಕ್ ಪ್ರಾಜೆಕ್ಟ್ಸ್‍ನಲ್ಲಿ ನೂರು ಕೋಟಿ ಮೌಲ್ಯದ ಸಂಶಯಾಸ್ಪದ ವಹಿವಾಟನ್ನು ಐಟಿ ಇಲಾಖೆ ಪತ್ತೆ ಹಚ್ಚಿತ್ತು. ಅದರಲ್ಲಿ ಗುರುತಿಸಲಾಗದ ವಹಿವಾಟಿನಿಂದ 75 ಕೋಟಿಗಳನ್ನು ಮತ್ತು ಸಂಶಯಾಸ್ಪದ 27 ಕೋಟಿಗಳ ಅಪರಾ ತಪರಾ ನಡೆದಿರುವುದನ್ನು ಐಟಿ ಗುರುತಿಸಿತ್ತು. ಕಳೆದ ಅಕ್ಟೋಬರ್ 12ರಂದು ರಮೇಶನ ಕಡಪಾ ಮನೆ ಮತ್ತು ಹೈದರಾಬಾದ್ ಕಚೇರಿ ಮೇಲೆ ಐಟಿ ದಾಳಿ ನಡೆಸಿತ್ತು. ಸಿಬಿಐನ ಅಧಿಕಾರಿಗಳ ಜಗಳದಲ್ಲಿ ಈ ಎಂಪಿ ರಮೇಶನ ವಿಷಯವೂ ಬಂದು, ಈತ ಆ ಅಧಿಕಾರಿಗಳನ್ನು ‘ಫಿಕ್ಸ್’ ಮಾಡಲು ಯತ್ನಿಸಿದ್ದಾನೆ ಎಂದು ಸಾಕ್ಷಿಯೊದು ಆಪಾದಿಸಿತ್ತು.

ಟಿಡಿಪಿ ಮೋದಿ-1 ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವ ಮೊದಲು ಚೌಧರಿ ಎನ್‍ಡಿಎ ಸರ್ಕಾರದಲ್ಲಿ ರಾಜ್ಯ ಸಚಿವರಾಗಿದ್ದರು. ನಂತರ ಈ ಚೌಧರಿಯ ಮೇಲೆ ಸಿಬಿಐ ಮೂರು ಎಫ್‍ಐಆರ್‍ ಗಳನ್ನು ದಾಖಲಿಸಿದೆ. ಚೌಧರಿಗೆ ಸೇರಿದ ವಿದ್ಯುತ್ ತಯಾರಿಸುವ ಬೆಸ್ಟ್ ಕ್ರಾಂಪ್ಟನ್ ಕಂಪನಿಯು ಬ್ಯಾಂಕಿಂಗ್ ವಲಯದಿಂದ 360 ಕೋಟಿ ಸಾಲ ಪಡೆದು ವಂಚಿಸಿದೆ ಎಂದು ಎಫ್‍ಆರ್‍ಐನಲ್ಲೆ ಆರೋಪಿಸಲಾಗಿದೆ. ಸಿಬಿಐ ಮಾಹಿತಿಯ ಆಧಾರದಲ್ಲಿ ಇ.ಡಿ ಕೂಡ ಚೌಧರಿ ಮೇಲೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿದೆ. ಕಳೆದ ಅಕ್ಟೋಬರರ್ 2ರಂದು ಹೈದಾರಾಬಾದ್‍ನ ಚೌಧರಿ ಮನೆ ಮತ್ತು ಕಚೇರಿಗಳ ಮೇಲೆ ದಾಳಿ 12 ವಂಚಕ ಕಂಪನಿಗಳ ಸೀಲ್‍ಗಳು ಮತ್ತು ದಾಖಲೆಗಳನ್ನು ವಶ ಮಾಡಿಕೊಂಡಿತ್ತು. ಚೌಧರಿಯ ಸುಜನಾ ಕಂಪನಿಯ ಮೇಲೂ 5,700 ಕೋಟಿಗಳ ವಂಚನೆಯ ಕುರಿತೂ ಇ.ಡಿ ತನಿಖೆ ನಡೆಸುತ್ತಿದೆ.

ಇಂತಹ ಗಂಭೀರ ಆರೋಪ ಎದುರಿಸುತ್ತಿರುವ ಚೌಧರಿ ಮತ್ತು ರಮೇಶರ ಮೇಲಿನ ತನಿಖೆ ಇನ್ನೂ ಮುಗಿದಿಲ್ಲ. ಆಗ ‘ಆಂಧ್ರ ಮಲ್ಯ’ಗಳಾಗಿದ್ದ ಇವರಿಬ್ಬರೂ ಈಗ ದೇಶಭಕ್ತರಾಗಿ ಬದಲಾಗಿದ್ದಾರೆಯೇ ಎಂಬ ಪ್ರಶ್ನೆಗೆ ‘ಜೈ ಶ್ರೀರಾಮ್’ ಎಂಬ ಉತ್ತರವೇ ಬರಬಹುದೇನೋ?

ಸಿಬಿಐ, ಇಡಿ ಮತ್ತು ಐಟಿ ಇಲಾಖೆಗಳನ್ನು ಬಳಸಿಕೊಂಡು ವಂಚಕ ಜನಪ್ರತಿನಿಧಿಗಳನ್ನು ತನ್ನತ್ತು ಸೆಳೆಯುವ ‘ಮೋಡಸ್ ಆಪರೆಂಡಿ’ಯನ್ನು ಬಿಜೆಪಿ ಅನುಸರಿಸುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಶಾರದಾ ಚಿಟ್ ಹಗರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದ ಟಿಎಂಸಿಯ ಮುಕುಲ್‍ರಾಯ್ ಮತ್ತು ಇತರರನ್ನು ಸೇರಿಸಿಕೊಂಡ ಬಿಜೆಪಿ ನಂತರದಲ್ಲಿ ಅವರನ್ನೇ ಬಳಸಿಕೊಂಡು ಪಶ್ಚಿಮ ಬಂಗಾಳದಲ್ಲಿ ಮಮತ ವಿರುದ್ಧ ತನ್ನ ನೆಲೆಯನ್ನು ಗಟ್ಟಿ ಮಾಡಿಕೊಂಡಿತ್ತು. ಹೀಗೆ ಬಿಜೆಪಿ ಸೇರುವ ಮಲ್ಯಗಳು ತನಿಖೆಗಳಿಂದ ಬಚಾವಾಗುತ್ತಲಿದ್ದಾರೆ, ಮುಂದೆ ಸಂಪೂರ್ಣ ಆರೋಪಮುಕ್ತರೂ ಆಗುತ್ತಾರೆ.

ವಿಜಯ ಮಲ್ಯ, ನೀರವ್ ಮೋದಿ ಬಿಜೆಪಿಗೆ ಸೇರ್ಪಡೆಗೊಂಡರೆ ದೇಶಭಕ್ತರಾಗುವ ಅವಕಾಶಗಳು ಉಂಟೇನೋ?
(ಆಧಾರ: ಇಂಡಿಯನ್ ಎಕ್ಸ್‍ಪ್ರೆಸ್)

ಇದನ್ನು ಓದಿ: ರಿಯಲ್ ಎಸ್ಟೇಟ್ ಹಗರಣದ ಕೇಸಿನಿಂದ ಬಚಾವಾಗಲು ಬಿಜೆಪಿ ಸೇರಿದರಾ ಗೌತಮ್ ಗಂಭೀರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ’: ಪ್ರಿಯಾಂಕ್ ಖರ್ಗೆ

ಬೆಂಗಳೂರು: ‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ’ ಎಂದು ಆರ್.ಎಸ್.ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಗುಡುಗಿದ್ದಾರೆ.  ರಾಜ್ಯದ ಗಮನ‌ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ...

“ಮಾಸ್ಕ್ ಧರಿಸಿದರೂ ಪ್ರಯೋಜನವಿಲ್ಲ”: ದೆಹಲಿ ವಾಯುಮಾಲಿನ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

ದೆಹಲಿಯ ವಾಯುಮಾಲಿನ್ಯ 'ಗಂಭೀರ ಮಟ್ಟ' ತಲುಪಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಮಾಸ್ಕ್‌ ಧರಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ವಕೀಲರು ವರ್ಚುವಲ್ ಮೂಲಕ ನ್ಯಾಯಾಲಯಕ್ಕೆ ಹಾಜರಾದರೆ ಸಾಕು ಎಂದು ಹೇಳಿದೆ. ವಿವಿಧ ಪ್ರಕರಣಗಳಲ್ಲಿ...

ಛತ್ತೀಸ್‌ಗಢ| ಇಬ್ಬರು ಉನ್ನತ ಕಮಾಂಡರ್‌ಗಳು ಸೇರಿದಂತೆ ಆರು ಜನ ಮಾವೋವಾದಿಗಳ ಎನ್‌ಕೌಂಟರ್‌

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನವೆಂಬರ್ 11 ರಂದು ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಆರು ಮಾವೋವಾದಿಗಳಲ್ಲಿ ಮಾವೋವಾದಿ ನಾಯಕಿ, ಹಿರಿಯ ಕಾರ್ಯಕರ್ತ ಪಾಪಾ ರಾವ್ ಅವರ ಪತ್ನಿ ಊರ್ಮಿಳಾ ಮತ್ತು ಬುಚಣ್ಣ...

ಗ್ರೆನೇಡ್ ದಾಳಿಗೆ ಸಂಚು ರೂಪಿಸಿದ್ದ, ಪಾಕ್ ಐಎಸ್ಐ ಬೆಂಬಲಿತ ಗುಂಪು: ವಿದೇಶಿ ಮೂಲದ 10 ಹ್ಯಾಂಡ್ಲರ್‌ಗಳ ಬಂಧನ

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಲುಧಿಯಾನ ಕಮಿಷನರೇಟ್ ಪೊಲೀಸರು, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಬೆಂಬಲಿತ ಗ್ರೆನೇಡ್ ದಾಳಿ ಘಟಕದ 10 ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಅವರಿಂದ ಸ್ಪೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.  ನವೆಂಬರ್...

ಗಾಜಾದಲ್ಲಿ ಮುಂದುವರೆದ ಪ್ಯಾಲೆಸ್ತೀನಿಯನ್ ಮಕ್ಕಳ ಕಾಣೆ ಪ್ರಕರಣ: ಮಕ್ಕಳ ಹಕ್ಕುಗಳ ಗುಂಪು

ಬುಧವಾರ ಪ್ಯಾಲೆಸ್ತೀನಿಯನ್ ಹಕ್ಕುಗಳ ಗುಂಪಿನ ವರದಿಯ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಗಾಜಾದಿಂದ ಕನಿಷ್ಠ ಆರು ಮಕ್ಕಳು ಕಣ್ಮರೆಯಾಗಿದ್ದಾರೆ ಎಂದು 'ಮಕ್ತೂಬ್‌ ಮೀಡಿಯಾ' ವರದಿ ಮಾಡಿದೆ. ಕಾಣೆಯಾದ ಮಕ್ಕಳ ಕುಟುಂಬಗಳು ಈ ಪ್ರದೇಶದಲ್ಲಿನ ತನ್ನ ಮಿಲಿಟರಿ...

ರೂ. 15 ಲಕ್ಷ ಲಂಚ ಪಡೆದ ಪ್ರಕರಣ : ನ್ಯಾಯಾಧೀಶನ ಮೇಲೆ ಕೇಸ್, ಕೋರ್ಟ್ ಗುಮಾಸ್ತ ಅರೆಸ್ಟ್

ವಾಣಿಜ್ಯ ಮೊಕದ್ದಮೆಯೊಂದರಲ್ಲಿ ಅನುಕೂಲಕರ ಆದೇಶವನ್ನು ಪಡೆಯಲು 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಸ್ವೀಕರಿಸಿದ ಆರೋಪದ ಮೇಲೆ ಮುಂಬೈ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಜಗಾಂವ್ ಸಿವಿಲ್ ಮತ್ತು ಸೆಷನ್ಸ್...

ಅಲಿಘರ್| ಶಾಲೆಯಲ್ಲಿ ‘ವಂದೇ ಮಾತರಂ’ ಹಾಡುವುದಕ್ಕೆ ಆಕ್ಷೇಪಿಸಿದ ಶಿಕ್ಷಕನ ಅಮಾನತು

ಉತ್ತರ ಪ್ರದೇಶದ ಶಾಹಪುರ್ ಕುತುಬ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 'ವಂದೇ ಮಾತರಂ' ಹಾಡುವುದನ್ನು ಆಕ್ಷೇಪಿಸಿದ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ರಾಷ್ಟ್ರಗೀತೆಯ ನಂತರ ವಂದೇಮಾತರಂ...

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಕರ್ನಾಟಕ ಹೈಕೋರ್ಟ್ ನ ಕಲಬುರಗಿ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಇದರಿಂದ ತೀವ್ರ ಪ್ರತಿಷ್ಠೆಯ ವಿಷಯವಾಗಿದ್ದ ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನಕ್ಕೆ ದಿನಾಂಕ ನಿಗದಿಯಾಗಿದೆ. ನವೆಂಬರ್ 16ರ‌ ಭಾನುವಾರ...

ಯಡಿಯೂರಪ್ಪ ವಿರುದ್ದದ ಪೋಕ್ಸೋ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಈ ಮೂಲಕ ನ್ಯಾಯಮೂರ್ತಿ ಎಂ.ಐ ಅರುಣ್ ಅವರು, ವಿಚಾರಣಾ ನ್ಯಾಯಾಲಯ ಸಂಜ್ಞೇ (cognisance)ಪರಿಗಣಿಸಿ ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿ...

ಗುಜರಾತ್| ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ; ರೂ.18 ಲಕ್ಷ ದಂಡ

ಗುಜರಾತ್‌ನ ಅಮ್ರೇಲಿಯಲ್ಲಿರುವ ಸೆಷನ್ಸ್ ನ್ಯಾಯಾಲಯವು, ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಗೋ ಕುಟುಂಬಕ್ಕೆ ಸೇರಿದ ಪ್ರಾಣಿಗಳ ಹತ್ಯೆಯನ್ನು ಕಾನೂನು...