ನರೇಂದ್ರ ಮೋದಿ ನೇತೃತ್ವದ ಘನ ಸರ್ಕಾರ ನೋಟು ಅಮಾನ್ಯೀಕರಣ ಮಾಡಿ ಇಂದಿಗೆ 4 ವರ್ಷಗಳು ತುಂಬಿದೆ. ಹಳೆಯ ನೋಟುಗಳನ್ನು ಅಮಾನ್ಯ ಮಾಡಿದ ಘಟನೆ ಹಳತಾಗಿರಬಹುದು, ಆದರೆ ಅದರ ಪರಿಣಾಮಗಳು ಇನ್ನೂ ಮಾಸಿಲ್ಲ. ಕಪ್ಪ ಹಣ ಇಟ್ಟುಕೊಂಡಿರುವ ಕುಳಗಳಿಗೆ ಕಷ್ಟವಾಗಲಿದೆ ಎಂದು ಹೇಳಿಕೊಂಡು ಜಾರಿ ಮಾಡಿದ ಈ ‘ಡಿಮೊನೋಟೈಸೇಷನ್’, ಮಧ್ಯಮವರ್ಗ ಮತ್ತು ಕೆಳವರ್ಗದ ಬಡವರ ಬದುಕನ್ನು ಬೀದಿಗೆಳೆದಿತ್ತು.
ಈಗಾಗಲೇ ಬೀದಿಯಲ್ಲಿದ್ದ ಜನರಂತೂ ಇನ್ನೂ ಸಂಕಷ್ಟಕ್ಕೆ ಸಿಲುಕಬೇಕಾಯಿತು. ಇವರೆಲ್ಲಾ ಒಂದೊತ್ತು ಕೂಳಿಗೂ ಕಾಸಿಲ್ಲದೇ ಪರದಾಡುತ್ತಿರುವಾಗ ನಿಜವಾಗಿಯೂ ಕಪ್ಪು ಹಣ ಇಟ್ಟಿದ್ದವರು ರಾಜಾರೋಷವಾಗಿ 500 ಕೋಟಿ ಖರ್ಚು ಮಾಡಿ ಮದುವೆ, ಸಮಾರಂಭ ಮಾಡಿದರು. ಇನ್ನೂ ಕೆಲವರ ಮನೆಯಲ್ಲಿ ಕಂತೆ ಕಂತೆ ಹೊಸ ನೊಟುಗಳೇ ಪತ್ತೆಯಾದವು. ಈ ಕಾರಣಕ್ಕೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ವಿರೋಧ ಮತ್ತು ಟೀಕೆಗೆ ಗುರಿಯಾಗಿತ್ತು. ಜೊತೆಗೆ ಇದರಿಂದ ಭಾರತದ ಆರ್ಥಿಕತೆ ಬಲಗೊಳ್ಳುತ್ತದೆ, ಕಪ್ಪು ಹಣ ಹೊರಬರುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿ ಬೆಂಬಲಿಸುವವರೂ ಇದ್ದರು.
ಇದನ್ನೂ ಓದಿ: ನೋಟು ನಿಷೇಧದಿಂದ ಉದ್ಯಮಿಯೊಬ್ಬ ಟೀ ಮಾರುವ ಪರಿಸ್ಥಿತಿಗೆ ಬಂದ ಕಥೆ…
ಆದರೆ ಆಗ, ‘ಇದರಿಂದಾದ ಸಮಸ್ಯೆಗಳು ಇನ್ನು 50 ದಿನಗಳಲ್ಲಿ ಬಗೆಹರಿಯದಿದ್ದರೆ ನನ್ನನ್ನು ಜೀವಂತ ಸುಟ್ಟುಬಿಡಿ’ ಎಂದು ಪ್ರಧಾನಿಗಳು ಸ್ಫೋಟಕ ಹೇಳಿಕೆ ನೀಡಿದ್ದರು. ಆಗ ಜನ ನಂಬಿದರು. ಈಗ 4 ವರ್ಷಗಳು ಕಳೆದಿವೆ. ಆದರೆ ಬಡವರು ಇನ್ನಷ್ಟು ಬಡವರಾಗಿದ್ದು ಬಿಟ್ಟರೆ ಇದರಿಂದ ಎಳ್ಳಷ್ಟೂ ಉಪಯೋಗವಾಗಲಿಲ್ಲ ಎಂದು ಆರ್ಥಿಕ ತಜ್ಞರೇ ಹೇಳುತ್ತಾರೆ.
ನೋಟು ಅಮಾನ್ಯೀಕರಣ ಮಾಡಿದ ಈ ದಿನವನ್ನು ಅಂದಿನಿಂದಲೂ ಪ್ರತಿವರ್ಷವೂ ಕರಾಳದಿನವನ್ನಾಗಿ ನೆನಪಿಸಿಕೊಳ್ಳಲಾಗುತ್ತಿದೆ. ಇದರ ಭಾಗವಾಗಿಯೇ ಇಂದು ಟ್ವಿಟ್ಟರ್ನಲ್ಲಿ #DeMonetisation, #Black_Day_India_Economy, #SpeakUpAgainstDeMoDisaster ಎಂದು ಟ್ರೆಂಡಿಂಗ್ ಆಗುತ್ತಿದೆ.
ಇದನ್ನೂ ಓದಿ: ‘ನೋಟು ನಿಷೇಧದಿಂದ ಭಾರತದ ಆರ್ಥಿಕತೆಗೆ ಬಹುದೊಡ್ಡ ಪೆಟ್ಟು’: ನೊಬೆಲ್ ಪುರಸ್ಕೃತೆ ಎಸ್ತಾರ್ ಡುಫ್ಲೋ
ಈ ಹ್ಯಾಶ್ಟ್ಯಾಗ್ಗಳನ್ನು ಬಳಸಿ ಸಾವಿರಾರು ಜನ ಟ್ವೀಟ್ ಮಾಡಿದ್ದು, ಅಮಾನ್ಯೀಕರಣದ ಸಂದರ್ಭದಲ್ಲಿ ಜನತೆ ಅನುಭವಿಸಿದ ಸಂಕಷ್ಟಗಳನ್ನು ನೆನಪಿಸುವ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ವಿಜಯ್ ಪ್ರಕಾಶ್ ಎಂಬುವವರು ಟ್ವೀಟ್ ಮಾಡಿ, “ಇದುವರೆಗೂ ಜಗತ್ತು ಕಂಡರಿಯದ ಮೋದಿ ನಿರ್ಮಿತ ಅಮಾನ್ಯೀಕರಣ ವಿಕೋಪದ 4 ನೇ ವರ್ಷದ ವಾರ್ಷಿಕೋತ್ಸವವನ್ನು ನಮ್ಮ ದೇಶ ಆಚರಿಸುತ್ತಿದೆ” ಎಂದು ಬರೆದಿದ್ದಾರೆ.
As Our Nation Celebrates 4th Anniversary Of, One Of The Biggest Modi-made Disasters The World Ever Seen; #DeMonetisation Disaster#नोटबंदी_काला_दिवस #Black_Day_India_Economy pic.twitter.com/Y63e8ZyVh0
— Vijay Prakash ( बेबाक विजय ) (@VijayPrakashJi) November 8, 2020
ಇದನ್ನೂ ಓದಿ: ಮತದಾರರ ಆಲೋಚನಾ ಶಕ್ತಿಯನ್ನು ಕಸಿದುಕೊಂಡ ಮೋದಿ: ಎಚ್ ಎಸ್ ದೊರೆಸ್ವಾಮಿ
ಆಮ್ ಆದ್ಮಿ ಪಕ್ಷ ಟ್ವೀಟ್ ಮಾಡಿ, “ನೆನಪಿಸಿಕೊಳ್ಳಿ, ನವೆಂಬರ್ 8ನ್ನು ನೆನಪಿಸಿಕೊಳ್ಳಿ” ಎಂದು, ‘ಶ್ರೀಮಂತರು ಮಾತ್ರ ಅಳುತ್ತಾರೆ ಎಂದು ಅವರು ಹೇಳಿದ್ದರು’ ಎನ್ನುವ ಶೀರ್ಷಿಕೆಯಿರುವ ವೃದ್ಧರೊಬ್ಬರು ಅಳುತ್ತಿರುವ ಚಿತ್ರವನ್ನು ಹಂಚಿಕೊಂಡಿದೆ.
"Remember, remember the 8th of November"#DeMonetisation pic.twitter.com/jGy4VEy3j0
— AAP (@AamAadmiParty) November 8, 2020
ರೋಹನ್ ಗುಪ್ತಾ ಟ್ವೀಟ್ ಮಾಡಿ, “ಡಿಮೊನೋಟೈಸೇಷನ್ ಯಶಸ್ವಿಯಾಗಿದ್ದರೆ ಮೋದಿ ಸರ್ಕಾರ ಅದನ್ನು ಏಕೆ ಸಂಭ್ರಮಿಸುತ್ತಿಲ್ಲ?” ಎಂದು ಪ್ರಶ್ನಿಸಿದ್ದಾರೆ.
If #Demonetisation was a success why Modi Govt is not celebrating it ?#SpeakUpAgainstDeMoDisaster
— Rohan Gupta (@rohanrgupta) November 8, 2020
ಇದನ್ನೂ ಓದಿ: ಮೋದಿಯ ಈ ಮೂರು ವೈಫಲ್ಯಗಳ ಕುರಿತು ಹಾರ್ವಡ್ ಬ್ಯುಸಿನೆಸ್ ಸ್ಕೂಲ್ ಅಧ್ಯಯನ ಮಾಡುತ್ತದೆ: ರಾಹುಲ್
ಹೀಗೆ ಸಾವಿರಾರು ಜನರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಆದರೆ ಇಂದಿಗೂ ಇದನ್ನು ಸುಳ್ಳು ಅಂಕಿ ಅಂಶಗಳ ಮೂಲಕ ಸಮರ್ಥಿಸಿಕೊಳ್ಳುವವರಿದ್ದಾರೆ ಎಂದರೆ ಇದಕ್ಕಿಂತಲೂ ದುಸ್ಥಿತಿ ಬೇರೊಂದಿಲ್ಲ.
ನೋಟು ಅಮಾನ್ಯೀಕರಣದ ಫಲಿತಾಂಶಗಳ ವರದಿ ನೀಡಿದ ಆರ್ಬಿಐ 99.3% ನೋಟುಗಳು ಬ್ಯಾಂಕಿಗೆ ಬಂದಿದೆ ಎಂದು ಹೇಳಿತ್ತು. ಅಂದರೆ ಕಪ್ಪು ಹಣ ಎಲ್ಲಿ ಸಂಗ್ರಹವಾಗಿದೆ? ಅದು ಯಾಕೆ ಹೊರಬರಲಿಲ್ಲ? ಇದಕ್ಕೆ ಕಾರಣವೇನು ಎನ್ನುವ ಯಾವ ಪ್ರಶ್ನೆಗಳಿಗೂ ನಮ್ಮ ಬಳಿ ಉತ್ತರವಿಲ್ಲ. ಭ್ರಷ್ಟಾಚಾರ ನಿಂತಿದೆಯೇ? ಭಯೋತ್ಪಾದನೆ ನಿಗ್ರಹವಾಗಿದೆಯೇ? ಎಂದರೆ, ಇಲ್ಲ ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎನ್ನುವುದಕ್ಕೆ ನಮ್ಮ ಮುಂದೆ ಸಾಕಷ್ಟು ಉದಾಹರಣೆಗಳಿವೆ.
ಇದನ್ನೂ ಓದಿ: ಇಂದಿನ ಆಡಳಿತಕ್ಕೆ ಹೋಲಿಸಿದರೆ ತುರ್ತು ಪರಿಸ್ಥಿತಿ ಏನೇನೂ ಅಲ್ಲ: ಪಿ. ಸಾಯಿನಾಥ್