Homeಮುಖಪುಟಗುತ್ತಿಗೆದಾರರಿಗೆ 7 ವರ್ಷಗಳಿಂದ ಬಿಲ್ ಪಾವತಿಸದ ಜಿಲ್ಲಾಡಳಿತ; ಕಚೇರಿ ವಸ್ತುಗಳ ಜಪ್ತಿಗೆ ಕೋರ್ಟ್ ಆದೇಶ

ಗುತ್ತಿಗೆದಾರರಿಗೆ 7 ವರ್ಷಗಳಿಂದ ಬಿಲ್ ಪಾವತಿಸದ ಜಿಲ್ಲಾಡಳಿತ; ಕಚೇರಿ ವಸ್ತುಗಳ ಜಪ್ತಿಗೆ ಕೋರ್ಟ್ ಆದೇಶ

ಪ್ರಕರಣವನ್ನು ಆಲಿಸಿದ್ದ ಮೈಸೂರು ಜಿಲ್ಲಾ ನ್ಯಾಯಾಲಯ ಗುತ್ತಿಗೆದಾರರ ಹಣವನ್ನು ಪಾವತಿಸುವಂತೆ ಜಿಲ್ಲಾಡಳಿತ ಕಚೇರಿಗೆ ಸೂಚನೆ ನೀಡಿತ್ತು. ಆದರೆ, ಕೋರ್ಟ್ ಆದೇಶವನ್ನು ಪಾಲಿಸದೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿತ್ತು. ಇದೀಗ ನ್ಯಾಯಾಲಯದ ಆದೇಶ ಉಲ್ಲಂಘನೆ ಹಿನ್ನೆಲೆ ಡಿಸಿ ಕಚೇರಿ ವಸ್ತುಗಳನ್ನು ಜಪ್ತಿ ಮಾಡಲು ಕೋರ್ಟ್ ಆದೇಶಿಸಿದೆ.

- Advertisement -
- Advertisement -

ಮೈಸೂರು (ಜನವರಿ 27); ಗುತ್ತಿಗೆದಾರರಿಗೆ ಮೈಸೂರು ಜಿಲ್ಲಾಡಳಿತ ಕಳೆದ 7 ವರ್ಷದಿಂದ ಬಿಲ್ ಪಾವತಿಸದ ಕಾರಣ ಕಚೇರಿ ವಸ್ತುಗಳನ್ನು ಜಪ್ತಿ ಮಾಡುವಂತೆ ಕೋರ್ಟ್ ಇಂದು ಆದೇಶಿಸಿದೆ.

ಅಟಲ್ ಜಿ. ಜನಸ್ನೇಹಿ ಯೋಜನೆಯ ಅಡಿಯಲ್ಲಿ 2013ರಲ್ಲಿ ಗುತ್ತಿಗೆದಾರ ಜಿಲ್ಲಾಡಳಿತ ಕಚೇರಿಗೆ ಯುಪಿಎಸ್ ಪೂರೈಸಿದ್ದ. ಇದಕ್ಕೆ ಸುಮಾರು 3.98 ಲಕ್ಷ ವೆಚ್ಚ ತಗುಲಿತ್ತು. ಆದರೆ, ಈ ಹಣ ಪಾವತಿಸಬೇಕಿದ್ದ ಹಣ 7 ವರ್ಷವಾದರೂ ಪಾವತಿಸಿರಲಿಲ್ಲ. ಹೀಗಾಗಿ ಗುತ್ತಿಗೆದಾರ ಕೋರ್ಟ್ ಮೊರೆ ಹೋಗಿದ್ದ.

ಪ್ರಕರಣವನ್ನು ಆಲಿಸಿದ್ದ ಮೈಸೂರು ಜಿಲ್ಲಾ ನ್ಯಾಯಾಲಯ ಗುತ್ತಿಗೆದಾರರ ಹಣವನ್ನು ಪಾವತಿಸುವಂತೆ ಜಿಲ್ಲಾಡಳಿತ ಕಚೇರಿಗೆ ಸೂಚನೆ ನೀಡಿತ್ತು. ಆದರೆ, ಕೋರ್ಟ್ ಆದೇಶವನ್ನು ಪಾಲಿಸದೆ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿತ್ತು. ಇದೀಗ ನ್ಯಾಯಾಲಯದ ಆದೇಶ ಉಲ್ಲಂಘನೆ ಹಿನ್ನೆಲೆ ಡಿಸಿ ಕಚೇರಿ ವಸ್ತುಗಳನ್ನು ಜಪ್ತಿ ಮಾಡಲು ಕೋರ್ಟ್ ಆದೇಶಿಸಿದೆ.

ಹೀಗಾಗಿ ಕೋರ್ಟ್ ಆದೇಶದಂತೆ ಜಿಲ್ಲಾಡಳಿತ ಕಚೇರಿಯ ಕುರ್ಚಿ, ಸೋಫಾ ಹಾಗೂ ಕಂಪ್ಯೂಂಟರ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಗುತ್ತಿಗೆದಾರ ಜಪ್ತಿ ಮಾಡಿ ಸಾಗಿಸುತ್ತಿದ್ದಾನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...