Homeಮುಖಪುಟಮೌನಕ್ಕೆ ಶರಣಾದ ಯುಪಿ ಮತದಾರರು, ಆತಂಕದಲ್ಲಿ ಅಭ್ಯರ್ಥಿಗಳು

ಮೌನಕ್ಕೆ ಶರಣಾದ ಯುಪಿ ಮತದಾರರು, ಆತಂಕದಲ್ಲಿ ಅಭ್ಯರ್ಥಿಗಳು

- Advertisement -
- Advertisement -

2019ರವರೆಗೆ ಹೋಟೆಲ್‌ ಅಥವಾ ಗಲ್ಲಿ ಬದಿಯ ಚಾ ಮಾರುವ ಅಂಗಡಿಯಲ್ಲಿ ಮೌನವಾಗಿ ಕುಳಿತು ಸುತ್ತಮುತ್ತಲ ಜನರ ಸಂಭಾಷಣೆ ಆಲಿಸಿದರೆ ಚುನಾವಣೆ ಫಲಿತಾಂಶವನ್ನು ಅಂದಾಜಿಸಬಹುದಾಗಿತ್ತು. ಆದರೆ ಪ್ರಸಕ್ತ ಉತ್ತರಪ್ರದೇಶ ಚುನಾವಣೆಯ ಪರಿಸ್ಥಿತಿಯನ್ನು ಊಹಿಸುವುದು ಅಷ್ಟು ಸರಳವಲ್ಲ.

ಸಾಮಾನ್ಯವಾಗಿ ಜನರ ಮನಸ್ಥಿತಿ, ಅಭ್ಯರ್ಥಿಗಳ ವ್ಯಕ್ತಿತ್ವ, ಆಯಾ ಕ್ಷೇತ್ರದ ಜನರ ನಿರೀಕ್ಷೆಗಳು ಮತ್ತು ಜಾತಿ ಅಂಶ ಈ ಎಲ್ಲ ಆಯಾಮಗಳಲ್ಲಿ ಮೌಲ್ಯಮಾಪನ ಮಾಡಿದಲ್ಲಿ ಚುನಾವಣಾ ಫಲಿತಾಂಶದ ಚಿತ್ರಣ ಗ್ರಹಿಸಬಹುದಾಗಿತ್ತು. ಮನೆಗಳು ಮತ್ತು ಅಂಗಡಿಗಳ ಮೇಲೆ ಹಾರಾಡುವ ಬಾವುಟಗಳ ಸಂಖ್ಯೆ ನೋಡಿಯೇ ಆ ಪ್ರದೇಶದಲ್ಲಿ ಜನಪ್ರಿಯರಾದವರು ಯಾರು, ಯಾವ ಪಕ್ಷ ಪ್ರಾಬಲ್ಯ ಹೊಂದಿದೆ ಎಂಬ ಸ್ಪಷ್ಟ ಚಿತ್ರಣ ಲಭ್ಯವಾಗುತ್ತಿತ್ತು. ಯಾರು ಹೆಚ್ಚು ಪ್ರಚುರದಲ್ಲಿ ಇಲ್ಲವೆಂಬ ಮಾಹಿತಿಯನ್ನು ಅಂದಾಜಿಸಬಹುದಾಗಿತ್ತು. ಆದರೆ ಇಂದು ಕೋವಿಡ್ ಸನ್ನಿವೇಶದ ಬದಲಾದ ಕಾಲಘಟ್ಟದಲ್ಲಿ ಜನರು ಸಹ ಬದಲಾಗಿದ್ದಾರೆ.

ಚಹಾ ಮಳಿಗೆ ಮತ್ತು ತಿನಿಸು ಅಂಗಡಿಗಳ ಮುಂದೆ ಜನಸಂದಣಿ ಇದೆಯಾದರೂ, ಹವಾಮಾನ ಮತ್ತಿತರ ಸಂಭಾಷಣೆ ನಡೆಯುತ್ತಿದೆ. ಜನರು ರಾಜಕೀಯ ವಿಚಾರಗಳನ್ನು ತಮ್ಮ ಚರ್ಚೆಗಳಿಂದ ಹೊರಗಿಟ್ಟಿದ್ದಾರೆ. “ಪ್ರಸ್ತುತ ಜನರು ಬುದ್ಧಿವಂತರಾಗಿದ್ದಾರೆ. ತಮ್ಮ ರಾಜಕೀಯ ಆದ್ಯತೆಗಳನ್ನು ವ್ಯಕ್ತಪಡಿಸಿದರೆ ತಾವು ಒಂದು ಪಕ್ಷ/ಪಂಗಡದ ಉದ್ದೇಶಗಳಿಗೆ ಗುರಿಯಾಗುತ್ತೇವೆ ಎಂಬ ಅರಿವಾಗಿದೆ. ಹೀಗಾಗಿ ಅವರು ಅಪರಿಚಿತರೊಂದಿಗೆ ಮಾತನಾಡಲು ಬಯಸುವುದಿಲ್ಲ. ಟಿವಿ ಚಾನೆಲ್‌ಗಳ ಸಿಬ್ಬಂದಿಯನ್ನು ನೋಡಿದಾಗ ಜನರು, ಆಡಳಿತ ಪಕ್ಷದ ಪರವಾಗಿ ಜಾಣ್ಮೆಯಿಂದ ಮಾತನಾಡುತ್ತಾರೆ. ಏಕೆಂದರೆ ಅದು ಪ್ರಸಾರವಾಗುತ್ತದೆಂಬುದು ಅವರಿಗೆ ತಿಳಿದಿದೆ” ಎಂದು ರಾಜಕೀಯ ಕಾರ್ಯಕರ್ತರೊಬ್ಬರು ಹೊಸ ಪರಿಸ್ಥಿತಿಯನ್ನು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿರಿ: ವಿಶ್ಲೇಷಣೆ: ಆದಿತ್ಯನಾಥ್‌ ವಿರುದ್ಧ ರಾವಣ್ ಸ್ಪರ್ಧೆಯ ಲೆಕ್ಕಾಚಾರಗಳೇನು?

ಸ್ಮಾರ್ಟ್ ಮತದಾರರು

ಲಕ್ನೋದ ಹೊರವಲಯದ ಬಕ್ಷಿ ಕಾ ತಲಾಬ್‌ನ ‘ಸ್ಮಾರ್ಟ್’ ಮತದಾರರಲ್ಲಿ ಒಬ್ಬರಾದ ವೃತ್ತಿಯಲ್ಲಿ ಚಾಲಕರಾಗಿರುವ ಠಾಕೂರ್ ಸಿಂಗ್, ತಮ್ಮ ಠಾಕೂರ್ ಗುರುತನ್ನು ಬಹಳ ದೃಢವಾಗಿ ಪ್ರತಿಪಾದಿಸುತ್ತಾರೆ. ಇನ್ನೊಬ್ಬ ಚಾಲಕ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಾ ವಿಷಾದ ವ್ಯಕ್ತಪಡಿಸುತ್ತಲೇ, “ಗೆಲ್ಲುವುದು ಯೋಗಿ ಆದಿತ್ಯನಾಥ್‌ರೇ. ಆದರೆ ಸರ್ಕಾರ ಬದಲಾದರೆ ಪರಿಸ್ಥಿತಿ ಬದಲಾಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅಭಿಪ್ರಾಯಪಟ್ಟರು. ಆದರೆ ಟಿವಿ ವಾಹಿನಿಗಳ ಸಿಬ್ಬಂದಿ ಬಂದ ತಕ್ಷಣ ವಿಷಯ ಬದಲಿಸಿ, ಬೀಡಾಡಿ ದನಗಳ ಅಪಾಯದಿಂದ ಎರಡು ಬೆಳೆಗಳನ್ನು ಕಳೆದುಕೊಂಡ ವಿವರ ತಿಳಿಸಿದರು. ಇದಕ್ಕಿದ್ದಂತೆ ಅಭಿಪ್ರಾಯ ಬದಲಾವಣೆ ಮಾಡಿರುವುದೇಕೆ ಎಂದು ಪ್ರಶ್ನಿಸಿದರೆ, ಅವರು ಮುಗುಳ್ನಕ್ಕು “ಇದೇ ಅಲ್ಲವೇ ರಾಜಕೀಯ” ಎಂದು ಉತ್ತರಿಸಿದರು.

ಬಾರಾಬಂಕಿಯಲ್ಲಿ, ಯೋಗಿ ಅವರ ಕಟ್ಟಾ ಅಭಿಮಾನಿಗಳೆನ್ನಿಸಿಕೊಂಡ ಹಲವರಿದ್ದು, ಅವರಾರೂ ವಾಸ್ತವದಲ್ಲಿ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಸಭೆಗಳನ್ನು ನೋಡಲು ಆಸಕ್ತಿ ತೋರಿಸುತ್ತಿಲ್ಲ. ಬದಲಾಗಿ ವೆಬ್‌ಸರಣಿಗಳನ್ನು ನೋಡುತ್ತಾರೆ. ಇತ್ತೀಚೆಗೆ ಸ್ಮಾರ್ಟ್‌ಫೋನ್ ಕೊಂಡಿರುವ ಅಂಗಡಿ ನಡೆಸುತ್ತಿರುವ ಅಕ್ಷಯ್ ರಾವತ್ ಎಂಬ ಯುವಕನಿಗಂತೂ ರಾಜಕೀಯ ರ್‍ಯಾಲಿಗಳ ಬಗ್ಗೆ ಗಮನವೇ ಇಲ್ಲ. ರಾಜಕೀಯ ಕುರಿತ ವಾಟ್ಸಪ್ ಗುಂಪಿನಲ್ಲಿ ಭಾಗಿಯಾಗುವುದಿಲ್ಲ ಹಾಗೂ ಚರ್ಚೆಯನ್ನೂ ನಡೆಸುವುದಿಲ್ಲ. ಮೊಬೈಲ್ ಫೋನ್‌ಗೆ ಹಾಕಿರುವ ದೈನಂದಿನ ಡೇಟಾ ರೀಚಾರ್ಜ್ನಲ್ಲಿ ವೆಬ್ ಸರಣಿ ನೋಡುತ್ತಿರುವುದಾಗಿ ಅವರು ಹೇಳುತ್ತಾರೆ.

ವಿವಿಧ ರಾಜಕಾರಣಿಗಳು ಎತ್ತಿರುವ ಸಮಸ್ಯೆಗಳು ಮತ್ತು ಅವುಗಳ ಪರಿಣಾಮದ ಹಿನ್ನೆಲೆಯಲ್ಲಿ ಆಯ್ಕೆ ಬಗ್ಗೆ ಕೇಳಿದರೆ, “ಯಾರಿಗೆ ಓಟು ಹಾಕುತ್ತೇವೋ ಎನ್ನುವುದು ನಮಗೆ ತಿಳಿದಿದೆ. ಭಾಷಣದಿಂದ ಏನಾಗಲಿದೆ?” ಎಂದು ಉತ್ತರಿಸುತ್ತಾರೆ.

ಕೆಲ ಕ್ಷೇತ್ರಗಳಲ್ಲಿ ಮತದಾರರ ಮೌನದಿಂದಾಗಿ ಅಭ್ಯರ್ಥಿಗಳಲ್ಲಿ ನಡುಕ ಕಂಡುಬಂದಿದೆ. ಅಯೋಧ್ಯೆಯ ಮತದಾರರು, ಮುಂದಿನ ಸರ್ಕಾರ ರಚನೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ರಾಮಮಂದಿರದ ಬಗ್ಗೆ ಮೆಚ್ಚುಗೆ ಅಥವಾ ವಿರೋಧವನ್ನೂ ಸೂಚಿಸುವುದಿಲ್ಲ. ಅಲ್ಲದೆ ನಗರದ ಸೌಂದರ್ಯೀಕರಣಕ್ಕಾಗಿ ನೂರಾರು ಮನೆ ಮತ್ತು ಅಂಗಡಿಗಳನ್ನು ನೆಲಸಮಗೊಳಿಸಿದ್ದರ ಬಗ್ಗೆಯೂ ಮಾತನಾಡುವುದಿಲ್ಲ.

ಅಂಗಡಿ ನೆಲಸಮಗೊಂಡವರ ಪಟ್ಟಿಯಲ್ಲಿರುವ ಜಗತ್ ನರೈನ್ ತಿವಾರಿ ಎಂಬುವವರು, ಚುನಾವಣೆ ಬಗ್ಗೆ ಮೌನವಹಿಸಿದ್ದಾರೆ. 25 ವರ್ಷಗಳಿಂದ ರಾಮ ಮಂದಿರಕ್ಕೆ ಪ್ರತಿ ದಿನ ಭೇಟಿ ನೀಡುವ ಅವರು, ಚುನಾವಣೆ ಬಗ್ಗೆ ಮಾತನಾಡಲು ನಿರಾಕರಿಸುತ್ತಾರೆ. ಏನಾಗುತ್ತೋ ನೋಡೋಣ” ಎಂದಷ್ಟೇ ಹೇಳಿದರು.

ಮತದಾರರ ಈ ಧೋರಣೆಯೇ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದ್ದು, ಕಾನ್ಪುರದ ಬಿಜೆಪಿ ಅಭ್ಯರ್ಥಿಯೊಬ್ಬರು, “ಮತದಾರರ ಮನಸ್ಥಿತಿಯನ್ನು ಊಹಿಸುವುದು ನಮಗೆ ತುಂಬಾ ಕಷ್ಟವಾಗಿದೆ. ನಾನು ಮನೆ-ಮನೆ ಪ್ರಚಾರ ಮಾಡಲು ಹೋದಾಗ, ಮತದಾರರು ಸ್ವಾಗತಿಸಲೂ ಇಲ್ಲ ಅಥವಾ ಪ್ರತಿಕೂಲವಾಗಿಯೂ ಇರಲಿಲ್ಲ. ಹೀಗಾಗಿ ಅವರ ಮನಸ್ಥಿತಿಯನ್ನು ನಿರ್ಣಯಿಸಲು ಸಾಧ್ಯವಿಲ್ಲ. ಈ ಮೊದಲು, ಬಹಿರಂಗ ಪ್ರಚಾರ ಜನಸಂದಣಿಯ ಮನಸ್ಥಿತಿಯನ್ನು ಊಹಿಸಬಹುದಾಗಿತ್ತು. ಈಗ ಅದೂ ಸಾಧ್ಯವಿಲ್ಲ” ಎಂದರು.

ಕೃಪೆ: ಉಮೀದ್‌.ಕಾಮ್‌
ಅನುವಾದ: ಸೋಮಶೇಖರ್‌ ಚಲ್ಯ


ಇದನ್ನೂ ಓದಿರಿ: ವಿಶ್ಲೇಷಣೆ: 100 ವರ್ಷಗಳಷ್ಟು ಹಳೆಯದಾದ ‘ಚಿಂತಾಮಣಿ’ ನಾಟಕವನ್ನು ಆಂಧ್ರ ಸರ್ಕಾರ ನಿಷೇಧಿಸಿದ್ದೇಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...