Homeಮುಖಪುಟವಿಶ್ಲೇಷಣೆ: 100 ವರ್ಷಗಳಷ್ಟು ಹಳೆಯದಾದ ‘ಚಿಂತಾಮಣಿ’ ನಾಟಕವನ್ನು ಆಂಧ್ರ ಸರ್ಕಾರ ನಿಷೇಧಿಸಿದ್ದೇಕೆ?

ವಿಶ್ಲೇಷಣೆ: 100 ವರ್ಷಗಳಷ್ಟು ಹಳೆಯದಾದ ‘ಚಿಂತಾಮಣಿ’ ನಾಟಕವನ್ನು ಆಂಧ್ರ ಸರ್ಕಾರ ನಿಷೇಧಿಸಿದ್ದೇಕೆ?

- Advertisement -
- Advertisement -

ಜನಪ್ರಿಯ ನಾಟಕವಾದ`ಚಿಂತಾಮಣಿ’ಯನ್ನು ಆಂಧ್ರಪ್ರದೇಶ ಸರ್ಕಾರ ಜನವರಿ 17ರಂದು ರಾಜ್ಯಾದ್ಯಂತ ನಿಷೇಧಿಸಿ ಆದೇಶ ಹೊರಡಿಸಿದೆ. ಈ ನಾಟಕವು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಚಾಲ್ತಿಯಲ್ಲಿದೆ.

100 ವರ್ಷಗಳಷ್ಟು ಹಳೆಯದಾದ ನಾಟಕವನ್ನು ಆರ್ಯ ವೈಶ್ಯ ಸಮುದಾಯವು ವಿರೋಧಿಸಿದ ನಂತರ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದು ತಮ್ಮ ಸಮುದಾಯದ ಕುರಿತು ಆಕ್ಷೇಪಾರ್ಹ ವಿಷಯವನ್ನು ಒಳಗೊಂಡಿದೆ ಎಂದು ಆರ್ಯವೈಶ್ಯ ಸಮುದಾಯ ಆರೋಪಿಸಿದೆ. ಈ ನಾಟಕವನ್ನು ನಿಷೇಧಿಸಬೇಕೆಂದು 2020ರಿಂದಲೂ ಸಮುದಾಯವು ಒತ್ತಾಯಿಸುತ್ತಿತ್ತು. ವೈಶ್ಯ ಸಮುದಾಯದ ವ್ಯಾಪಾರಿ ಸುಬ್ಬಿ ಸೆಟ್ಟಿಯ ಪಾತ್ರವನ್ನು ನಾಟಕದಲ್ಲಿ ಅಪಹಾಸ್ಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ವೇಶ್ಯಾಗೃಹಕ್ಕೆ ನಿಯಮಿತವಾಗಿ ಭೇಟಿ ನೀಡುವ ದುಷ್ಕೃತ್ಯದಿಂದಾಗಿ ತನ್ನೆಲ್ಲ ಸಂಪತ್ತನ್ನು ಕಳೆದುಕೊಳ್ಳುವ ಹಾಸ್ಯ ಪ್ರಧಾನ ಪಾತ್ರವಾಗಿ ಸುಬ್ಬಿಸೆಟ್ಟಿಯನ್ನು ಇಲ್ಲಿ ಚಿತ್ರಿಸಲಾಗಿದೆ ಎಂಬುದು ಸಮುದಾಯದ ಆಕ್ಷೇಪ.

ಸರ್ಕಾರದ ನಿರ್ಧಾರದಿಂದ ಸಂತೋಷಗೊಂಡಿರುವ ಆಂಧ್ರಪ್ರದೇಶ ಆರ್ಯ-ವೈಶ್ಯ ಮಹಾಸಭಾದ ಅಧ್ಯಕ್ಷ ಎಂ. ದ್ವಾರಕಾನಾಥ್, “ಹಲವು ವರ್ಷಗಳಿಂದ ನಮ್ಮ ಸಮುದಾಯವು ನಾಟಕವನ್ನು ಆಕ್ಷೇಪಿಸುತ್ತಿದೆ. ಆದರೆ ಯಾವುದೇ ಸರ್ಕಾರವು ಇದನ್ನು ಗಮನಿಸಿರಲಿಲ್ಲ. ಈಗಿನ ಸರ್ಕಾರ ನಾಟಕವನ್ನು ಪರಿಶೀಲಿಸಿ ಸರಿಯಾದ ನಿರ್ಧಾರ ಕೈಗೊಂಡಿದೆ” ಎಂದಿದ್ದಾರೆ.

ನಾಟಕದ ಆಕ್ಷೇಪಣೆಗಳನ್ನು ವಿವರಿಸಿದ ಅವರು, ನಾಟಕವು ನಮ್ಮ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದರು. ಸುಬ್ಬಿ ಸೆಟ್ಟಿ ಪಾತ್ರವನ್ನು ಉಲ್ಲೇಖಿಸಿದ ಅವರು, “ನಮ್ಮನ್ನು ಕಪ್ಪಗಿನ, ಕುಳ್ಳಗಿನ ಮತ್ತು ತಮಾಷೆಯಾಗಿ ಮಾತನಾಡುವ ಜನರೆಂದು ತೋರಿಸಲಾಗಿದೆ. ಇದು 100 ವರ್ಷಗಳ ಹಿಂದೆ ಸ್ವೀಕಾರಾರ್ಹವಾಗಿರಬಹುದು, ಆದರೆ ಇನ್ನು ಮುಂದೆ ಅಲ್ಲ. ಇದು ಈಗ ಅಪರಾಧವಾಗಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ವಿಶ್ಲೇಷಣೆ: ಆದಿತ್ಯನಾಥ್‌‌ ಅಯೋಧ್ಯೆಯಲ್ಲಿ ಸ್ಪರ್ಧಿಸುವ ಕನಸು ಭಗ್ನವಾಗಿದ್ದೇಕೆ?

“ಸುಬ್ಬಿ ಸೆಟ್ಟಿ ಪಾತ್ರವನ್ನು ತೆಗೆದುಹಾಕಲು, ಕೆಲವು ಬದಲಾವಣೆಗಳನ್ನು ಮಾಡಲು ಮತ್ತು ನಾಟಕವನ್ನು ಮುಂದುವರಿಸಲು ಅವಕಾಶ ಮಾಡಿಕೊಡಲು ಕಲಾವಿದರನ್ನು ಏಕೆ ಕೇಳಬಾರದು ಎಂದು ಕೆಲವರು ಕೇಳುತ್ತಿದ್ದಾರೆ … ಆದರೆ ಇಡೀ ನಾಟಕವು ಸುಬ್ಬಿಯ ಪಾತ್ರವನ್ನು ಆಧರಿಸಿದೆ” ಎಂದಿದ್ದಾರೆ.

ಸಮಾಜ ಸುಧಾರಕ ಕಲ್ಲಕೂರಿ ನಾರಾಯಣ ರಾವ್ ಅವರು 1920ರಲ್ಲಿ ಬರೆದ ಈ ನಾಟಕವು ಕೃಷ್ಣನ ಮೇಲಿನ ಭಕ್ತಿಯಿಂದ ಮುಕ್ತಿಯನ್ನು ಪಡೆಯುವ ‘ಚಿಂತಾಮಣಿ’ ಎಂಬ ವೇಶ್ಯೆಯ ಕುರಿತ್ತಾದ್ದಾಗಿದೆ.

“ಮೂಲತಃ, ನಾಟಕವನ್ನು ಸಾಮಾಜಿಕ ಸಂದೇಶದೊಂದಿಗೆ ಸುಧಾರಣಾ ಭಾಗವಾಗಿ ಬರೆಯಲಾಗಿದೆ. ಆದರೆ ನಂತರದಲ್ಲಿ ಈ ನಾಟಕವನ್ನು ಹೆಚ್ಚು ಮನರಂಜನೆಗಾಗಿ ಹಲವಾರು ರೂಪಾಂತರಗಳನ್ನು ಮಾಡಲಾಯಿತು. ವಿಶೇಷವಾಗಿ ‘ರೆಕಾರ್ಡಿಂಗ್ ಡ್ಯಾನ್ಸ್’ (ಜಾನಪದ ನೃತ್ಯದಿಂದ ಕವಲೊಡೆದ ಕಾಮಪ್ರಚೋದಕ ಮನರಂಜನೆ) ಪ್ರವೇಶದ ನಂತರ, ನಾಟಕವು ಸಂಪೂರ್ಣವಾಗಿ ಅಸಭ್ಯವಾಗಿ ಹೊರಹೊಮ್ಮಿತು” ಎಂದು ಹೈದರಾಬಾದ್ ವಿಶ್ವವಿದ್ಯಾಲಯದ ಪ್ರಗತಿಪರ ಥಿಯೇಟರ್ ಗ್ರೂಪ್‌ನ ಸ್ಥಾಪಕ ಸದಸ್ಯ ಶೇಕ್ ಜಾನ್ ಬಶೀರ್ ವಿಶ್ಲೇಷಿಸುತ್ತಾರೆ.

“ಗ್ರಾಮೀಣ ಹಬ್ಬಗಳ ಸಮಯದಲ್ಲಿ ಜನಸಾಮಾನ್ಯರನ್ನು ಆಕರ್ಷಿಸಲು, ನಾಟಕದಲ್ಲಿ ಹಲವಾರು ಲೈಂಗಿಕ ಒಳನೋಟಗಳು ಮತ್ತು ಲೈಂಗಿಕ ಉಲ್ಲೇಖಗಳನ್ನು ನಾಟಕದ ಗುಂಪುಗಳು ಸೇರಿಸಿ, ನಾಟಕದ ನಿಜವಾದ ಉದ್ದೇಶವನ್ನು ಅಪವಿತ್ರಗೊಳಿಸಿದ್ದಾರೆ” ಎಂದು ಬಶೀರ್ ಉಲ್ಲೇಖಿಸಿದ್ದಾರೆ.

ಆದರೆ, ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಶೀರ್‌, “ಸೆನ್ಸಾರ್ಶಿಪ್ ಅನ್ನು ಎಂದಿಗೂ ಪ್ರೋತ್ಸಾಹಿಸಬಾರದು. ಕಲೆಯ ಮೂಲಕ ವ್ಯಕ್ತಪಡಿಸಿದ ಭಿನ್ನಾಭಿಪ್ರಾಯವನ್ನು ಮೊಟಕುಗೊಳಿಸಲು ನಾಟಕೀಯ ಪ್ರದರ್ಶನಗಳ ಕಾಯಿದೆಯನ್ನು 1876​ರಲ್ಲಿ ಬ್ರಿಟಿಷರು ಪರಿಚಯಿಸಿದರು. ಪ್ರಸ್ತುತ ಆಂಧ್ರ ಸರ್ಕಾರದ ನಿರ್ಧಾರವನ್ನು ಅದರ ವಿಸ್ತರಣೆಯಾಗಿ ನೋಡಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾಟಕದ ಮೇಲೆ ನಿಷೇಧ ಹೇರುವ ಬದಲು ಸರ್ಕಾರವು ಬದಲಾವಣೆಗಳನ್ನು ಕೇಳಬೇಕಿತ್ತು ಎಂದು ಕೆಲವರು ವಾದಿಸಿದ್ದಾರೆ. ನಾಟಕಕಾರ ಮತ್ತು ನಟ ಗೋವಡ ವೆಂಕಟ್ `ದಿ ಹಿಂದೂ’ ಉಲ್ಲೇಖಿಸಿ, “ಎಲ್ಲಾ ನಾಟಕಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ಒಳಗೊಂಡಿರುತ್ತವೆ. ನಾಟಕದಲ್ಲಿ ಕೆಲವು ಪಾತ್ರಗಳನ್ನು ಮಾತ್ರ ಎತ್ತಿ ತೋರಿಸುವುದು ಸರಿಯಲ್ಲ” ಎಂದಿದ್ದಾರೆ. “ಒಂದು ಪಾತ್ರವನ್ನು ತೆಗೆದುಹಾಕಲು ಅಥವಾ ಆಕ್ಷೇಪಾರ್ಹ ಸಂಭಾಷಣೆಗಳನ್ನು ಸಂಪಾದಿಸಲು ಸರ್ಕಾರಕ್ಕೆ ಹಕ್ಕಿದೆ. ಆದರೆ ಐತಿಹಾಸಿಕ ನಾಟಕದ ಮೇಲೆ ನಿಷೇಧ ಹೇರುವುದು ಸರಿಯಲ್ಲ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ನಿರ್ಧಾರವು ನ್ಯಾಯಾಲಯಲ್ಲಿ ನಿಲ್ಲುವುದಿಲ್ಲ ಎಂದು ಅಭಿಪ್ರಾಯಪಡುವ ಸಮಾಜ ವಿಜ್ಞಾನಿ ಕಾಂಚ ಐಲಯ್ಯ ಶೆಫರ್ಡ್, “ಸಂತ್ರಸ್ತ ಕಲಾವಿದರು ಹೈಕೋರ್ಟ್‌ನ ಮೊರೆ ಹೋಗಬೇಕು” ಎಂದು ಒತ್ತಾಯಿಸಿದ್ದಾರೆ. “ಇದನ್ನು ನಾವು ಉತ್ತೇಜಿಸಬಾರದು. ನಿಮಗೆ ನಾಟಕ ಅಥವಾ ಚಲನಚಿತ್ರ ಇಷ್ಟವಾಗದಿದ್ದರೆ, ಅದನ್ನು ನೋಡಬೇಡಿ. ನಿಮಗೆ ಪುಸ್ತಕ ಇಷ್ಟವಾಗದಿದ್ದರೆ, ಅದನ್ನು ಓದಬೇಡಿ. ನಿಷೇಧವು ನಮ್ಮ ಪ್ರಧಾನ ಉದ್ದೇಶವಾಗಬಾರದು” ಎಂದು ಕಾಂಶ ಐಲಯ್ಯ ಪ್ರತಿಕ್ರಿಯಿಸಿದ್ದಾರೆ.

ಕಾಂಚ ಐಲಯ್ಯ ಅವರ ‘ಸಾಮಾಜಿಕ ಸ್ಮಗ್ಮರಲು: ಕೊಮಟೊಲ್ಲು’ ಕೃತಿಯನ್ನು ಬ್ಯಾನ್‌ ಮಾಡಬೇಕೆಂಬ ವಿರೋಧ ಕೇಳಿಬಂದಿದ್ದಾಗ ಐಲಯ್ಯ ಅವರು ಈ ಹಿಂದೆ ‘ಬನಿಯಾಸ್’ ಎಂದು ಕರೆಯಲ್ಪಡುವ ವೈಶ್ಯರ ಬಲವಾದ ವಿರೋಧವನ್ನು ಎದುರಿಸಿದ್ದರು. ‘ಸಾಮಾಜಿಕ ಕಳ್ಳಸಾಗಾಣಿಕೆದಾರರು: ವೈಶ್ಯರು’ ಎಂಬ ಶೀರ್ಷಿಕೆಯ ಪುಸ್ತಕ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ ವೈಶ್ಯರು, ಕಾಂಚ ಐಲಯ್ಯ ಅವರಿಗೆ ಕೊಲೆ ಬೆದರಿಕೆ ಹಾಕಿದ್ದರು, ಅವರ ಪ್ರತಿಕೃತಿ ಮತ್ತು ಪುಸ್ತಕಗಳನ್ನು ಸುಟ್ಟುಹಾಕಿದ್ದರು. ವಿವಿಧ ರೀತಿಯ ಕಿರುಕುಳಗಳನ್ನು ನೀಡಿದ್ದರು.

ಈ ಹಿಂದೆ ವೈಶ್ಯ ಸಮುದಾಯದಿಂದ ತಮಗಾದ ತೊಂದರೆಯನ್ನು ಉಲ್ಲೇಖಿಸಿದ ಕಾಂಚ ಐಲಯ್ಯ, “ಮೂಲಭೂತವಾಗಿ ಬಂಡವಾಳದ ಮೇಲೆ ಏಕಸ್ವಾಮ್ಯ ಸಾಧಿಸಿರುವ ವೈಶ್ಯರು ತಮ್ಮ ಜಾತಿಯ ಶಕ್ತಿಯಿಂದಾಗಿ ಸರ್ಕಾರದ ಮೇಲೆ ಪ್ರಭಾವ ಬೀರಿದ್ದಾರೆ” ಎಂದು ಅಭಿಪ್ರಾಯಪಡುತ್ತಾರೆ. “ವೈಶ್ಯರು ಬಹಳ ಶ್ರೀಮಂತ ಸಮುದಾಯ. ಆದ್ದರಿಂದ ಪ್ರತಿಯೊಬ್ಬ ರಾಜಕಾರಣಿಯೂ ವೈಶ್ಯರ ಕುರಿತು ಒಳ್ಳೆಯ ಪುಸ್ತಕಗಳು ಇರಬೇಕೆಂದು ಬಯಸುತ್ತಾರೆ. ಸರ್ಕಾರಗಳು ವೈಶ್ಯರನ್ನು ಸಂತೋಷಪಡಿಸಲು ಬಯಸುವುದು ಮತಕ್ಕಾಗಿ ಅಲ್ಲ, ಅವರ ಹಣಕ್ಕಾಗಿ” ಎಂದಿದ್ದಾರೆ.

ಮೂಲ: ‘ದಿ ವೈರ್‌’ (ಲೇಖಕ: ಬಾಲಕೃಷ್ಣ ಗಣೇಶನ್)


ಇದನ್ನೂ ಓದಿರಿ: ವಿಶ್ಲೇಷಣೆ: ಆದಿತ್ಯನಾಥ್‌ ವಿರುದ್ಧ ರಾವಣ್ ಸ್ಪರ್ಧೆಯ ಲೆಕ್ಕಾಚಾರಗಳೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...