Homeಮುಖಪುಟಮೌನಕ್ಕೆ ಶರಣಾದ ಯುಪಿ ಮತದಾರರು, ಆತಂಕದಲ್ಲಿ ಅಭ್ಯರ್ಥಿಗಳು

ಮೌನಕ್ಕೆ ಶರಣಾದ ಯುಪಿ ಮತದಾರರು, ಆತಂಕದಲ್ಲಿ ಅಭ್ಯರ್ಥಿಗಳು

- Advertisement -
- Advertisement -

2019ರವರೆಗೆ ಹೋಟೆಲ್‌ ಅಥವಾ ಗಲ್ಲಿ ಬದಿಯ ಚಾ ಮಾರುವ ಅಂಗಡಿಯಲ್ಲಿ ಮೌನವಾಗಿ ಕುಳಿತು ಸುತ್ತಮುತ್ತಲ ಜನರ ಸಂಭಾಷಣೆ ಆಲಿಸಿದರೆ ಚುನಾವಣೆ ಫಲಿತಾಂಶವನ್ನು ಅಂದಾಜಿಸಬಹುದಾಗಿತ್ತು. ಆದರೆ ಪ್ರಸಕ್ತ ಉತ್ತರಪ್ರದೇಶ ಚುನಾವಣೆಯ ಪರಿಸ್ಥಿತಿಯನ್ನು ಊಹಿಸುವುದು ಅಷ್ಟು ಸರಳವಲ್ಲ.

ಸಾಮಾನ್ಯವಾಗಿ ಜನರ ಮನಸ್ಥಿತಿ, ಅಭ್ಯರ್ಥಿಗಳ ವ್ಯಕ್ತಿತ್ವ, ಆಯಾ ಕ್ಷೇತ್ರದ ಜನರ ನಿರೀಕ್ಷೆಗಳು ಮತ್ತು ಜಾತಿ ಅಂಶ ಈ ಎಲ್ಲ ಆಯಾಮಗಳಲ್ಲಿ ಮೌಲ್ಯಮಾಪನ ಮಾಡಿದಲ್ಲಿ ಚುನಾವಣಾ ಫಲಿತಾಂಶದ ಚಿತ್ರಣ ಗ್ರಹಿಸಬಹುದಾಗಿತ್ತು. ಮನೆಗಳು ಮತ್ತು ಅಂಗಡಿಗಳ ಮೇಲೆ ಹಾರಾಡುವ ಬಾವುಟಗಳ ಸಂಖ್ಯೆ ನೋಡಿಯೇ ಆ ಪ್ರದೇಶದಲ್ಲಿ ಜನಪ್ರಿಯರಾದವರು ಯಾರು, ಯಾವ ಪಕ್ಷ ಪ್ರಾಬಲ್ಯ ಹೊಂದಿದೆ ಎಂಬ ಸ್ಪಷ್ಟ ಚಿತ್ರಣ ಲಭ್ಯವಾಗುತ್ತಿತ್ತು. ಯಾರು ಹೆಚ್ಚು ಪ್ರಚುರದಲ್ಲಿ ಇಲ್ಲವೆಂಬ ಮಾಹಿತಿಯನ್ನು ಅಂದಾಜಿಸಬಹುದಾಗಿತ್ತು. ಆದರೆ ಇಂದು ಕೋವಿಡ್ ಸನ್ನಿವೇಶದ ಬದಲಾದ ಕಾಲಘಟ್ಟದಲ್ಲಿ ಜನರು ಸಹ ಬದಲಾಗಿದ್ದಾರೆ.

ಚಹಾ ಮಳಿಗೆ ಮತ್ತು ತಿನಿಸು ಅಂಗಡಿಗಳ ಮುಂದೆ ಜನಸಂದಣಿ ಇದೆಯಾದರೂ, ಹವಾಮಾನ ಮತ್ತಿತರ ಸಂಭಾಷಣೆ ನಡೆಯುತ್ತಿದೆ. ಜನರು ರಾಜಕೀಯ ವಿಚಾರಗಳನ್ನು ತಮ್ಮ ಚರ್ಚೆಗಳಿಂದ ಹೊರಗಿಟ್ಟಿದ್ದಾರೆ. “ಪ್ರಸ್ತುತ ಜನರು ಬುದ್ಧಿವಂತರಾಗಿದ್ದಾರೆ. ತಮ್ಮ ರಾಜಕೀಯ ಆದ್ಯತೆಗಳನ್ನು ವ್ಯಕ್ತಪಡಿಸಿದರೆ ತಾವು ಒಂದು ಪಕ್ಷ/ಪಂಗಡದ ಉದ್ದೇಶಗಳಿಗೆ ಗುರಿಯಾಗುತ್ತೇವೆ ಎಂಬ ಅರಿವಾಗಿದೆ. ಹೀಗಾಗಿ ಅವರು ಅಪರಿಚಿತರೊಂದಿಗೆ ಮಾತನಾಡಲು ಬಯಸುವುದಿಲ್ಲ. ಟಿವಿ ಚಾನೆಲ್‌ಗಳ ಸಿಬ್ಬಂದಿಯನ್ನು ನೋಡಿದಾಗ ಜನರು, ಆಡಳಿತ ಪಕ್ಷದ ಪರವಾಗಿ ಜಾಣ್ಮೆಯಿಂದ ಮಾತನಾಡುತ್ತಾರೆ. ಏಕೆಂದರೆ ಅದು ಪ್ರಸಾರವಾಗುತ್ತದೆಂಬುದು ಅವರಿಗೆ ತಿಳಿದಿದೆ” ಎಂದು ರಾಜಕೀಯ ಕಾರ್ಯಕರ್ತರೊಬ್ಬರು ಹೊಸ ಪರಿಸ್ಥಿತಿಯನ್ನು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿರಿ: ವಿಶ್ಲೇಷಣೆ: ಆದಿತ್ಯನಾಥ್‌ ವಿರುದ್ಧ ರಾವಣ್ ಸ್ಪರ್ಧೆಯ ಲೆಕ್ಕಾಚಾರಗಳೇನು?

ಸ್ಮಾರ್ಟ್ ಮತದಾರರು

ಲಕ್ನೋದ ಹೊರವಲಯದ ಬಕ್ಷಿ ಕಾ ತಲಾಬ್‌ನ ‘ಸ್ಮಾರ್ಟ್’ ಮತದಾರರಲ್ಲಿ ಒಬ್ಬರಾದ ವೃತ್ತಿಯಲ್ಲಿ ಚಾಲಕರಾಗಿರುವ ಠಾಕೂರ್ ಸಿಂಗ್, ತಮ್ಮ ಠಾಕೂರ್ ಗುರುತನ್ನು ಬಹಳ ದೃಢವಾಗಿ ಪ್ರತಿಪಾದಿಸುತ್ತಾರೆ. ಇನ್ನೊಬ್ಬ ಚಾಲಕ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಾ ವಿಷಾದ ವ್ಯಕ್ತಪಡಿಸುತ್ತಲೇ, “ಗೆಲ್ಲುವುದು ಯೋಗಿ ಆದಿತ್ಯನಾಥ್‌ರೇ. ಆದರೆ ಸರ್ಕಾರ ಬದಲಾದರೆ ಪರಿಸ್ಥಿತಿ ಬದಲಾಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅಭಿಪ್ರಾಯಪಟ್ಟರು. ಆದರೆ ಟಿವಿ ವಾಹಿನಿಗಳ ಸಿಬ್ಬಂದಿ ಬಂದ ತಕ್ಷಣ ವಿಷಯ ಬದಲಿಸಿ, ಬೀಡಾಡಿ ದನಗಳ ಅಪಾಯದಿಂದ ಎರಡು ಬೆಳೆಗಳನ್ನು ಕಳೆದುಕೊಂಡ ವಿವರ ತಿಳಿಸಿದರು. ಇದಕ್ಕಿದ್ದಂತೆ ಅಭಿಪ್ರಾಯ ಬದಲಾವಣೆ ಮಾಡಿರುವುದೇಕೆ ಎಂದು ಪ್ರಶ್ನಿಸಿದರೆ, ಅವರು ಮುಗುಳ್ನಕ್ಕು “ಇದೇ ಅಲ್ಲವೇ ರಾಜಕೀಯ” ಎಂದು ಉತ್ತರಿಸಿದರು.

ಬಾರಾಬಂಕಿಯಲ್ಲಿ, ಯೋಗಿ ಅವರ ಕಟ್ಟಾ ಅಭಿಮಾನಿಗಳೆನ್ನಿಸಿಕೊಂಡ ಹಲವರಿದ್ದು, ಅವರಾರೂ ವಾಸ್ತವದಲ್ಲಿ ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಸಭೆಗಳನ್ನು ನೋಡಲು ಆಸಕ್ತಿ ತೋರಿಸುತ್ತಿಲ್ಲ. ಬದಲಾಗಿ ವೆಬ್‌ಸರಣಿಗಳನ್ನು ನೋಡುತ್ತಾರೆ. ಇತ್ತೀಚೆಗೆ ಸ್ಮಾರ್ಟ್‌ಫೋನ್ ಕೊಂಡಿರುವ ಅಂಗಡಿ ನಡೆಸುತ್ತಿರುವ ಅಕ್ಷಯ್ ರಾವತ್ ಎಂಬ ಯುವಕನಿಗಂತೂ ರಾಜಕೀಯ ರ್‍ಯಾಲಿಗಳ ಬಗ್ಗೆ ಗಮನವೇ ಇಲ್ಲ. ರಾಜಕೀಯ ಕುರಿತ ವಾಟ್ಸಪ್ ಗುಂಪಿನಲ್ಲಿ ಭಾಗಿಯಾಗುವುದಿಲ್ಲ ಹಾಗೂ ಚರ್ಚೆಯನ್ನೂ ನಡೆಸುವುದಿಲ್ಲ. ಮೊಬೈಲ್ ಫೋನ್‌ಗೆ ಹಾಕಿರುವ ದೈನಂದಿನ ಡೇಟಾ ರೀಚಾರ್ಜ್ನಲ್ಲಿ ವೆಬ್ ಸರಣಿ ನೋಡುತ್ತಿರುವುದಾಗಿ ಅವರು ಹೇಳುತ್ತಾರೆ.

ವಿವಿಧ ರಾಜಕಾರಣಿಗಳು ಎತ್ತಿರುವ ಸಮಸ್ಯೆಗಳು ಮತ್ತು ಅವುಗಳ ಪರಿಣಾಮದ ಹಿನ್ನೆಲೆಯಲ್ಲಿ ಆಯ್ಕೆ ಬಗ್ಗೆ ಕೇಳಿದರೆ, “ಯಾರಿಗೆ ಓಟು ಹಾಕುತ್ತೇವೋ ಎನ್ನುವುದು ನಮಗೆ ತಿಳಿದಿದೆ. ಭಾಷಣದಿಂದ ಏನಾಗಲಿದೆ?” ಎಂದು ಉತ್ತರಿಸುತ್ತಾರೆ.

ಕೆಲ ಕ್ಷೇತ್ರಗಳಲ್ಲಿ ಮತದಾರರ ಮೌನದಿಂದಾಗಿ ಅಭ್ಯರ್ಥಿಗಳಲ್ಲಿ ನಡುಕ ಕಂಡುಬಂದಿದೆ. ಅಯೋಧ್ಯೆಯ ಮತದಾರರು, ಮುಂದಿನ ಸರ್ಕಾರ ರಚನೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ರಾಮಮಂದಿರದ ಬಗ್ಗೆ ಮೆಚ್ಚುಗೆ ಅಥವಾ ವಿರೋಧವನ್ನೂ ಸೂಚಿಸುವುದಿಲ್ಲ. ಅಲ್ಲದೆ ನಗರದ ಸೌಂದರ್ಯೀಕರಣಕ್ಕಾಗಿ ನೂರಾರು ಮನೆ ಮತ್ತು ಅಂಗಡಿಗಳನ್ನು ನೆಲಸಮಗೊಳಿಸಿದ್ದರ ಬಗ್ಗೆಯೂ ಮಾತನಾಡುವುದಿಲ್ಲ.

ಅಂಗಡಿ ನೆಲಸಮಗೊಂಡವರ ಪಟ್ಟಿಯಲ್ಲಿರುವ ಜಗತ್ ನರೈನ್ ತಿವಾರಿ ಎಂಬುವವರು, ಚುನಾವಣೆ ಬಗ್ಗೆ ಮೌನವಹಿಸಿದ್ದಾರೆ. 25 ವರ್ಷಗಳಿಂದ ರಾಮ ಮಂದಿರಕ್ಕೆ ಪ್ರತಿ ದಿನ ಭೇಟಿ ನೀಡುವ ಅವರು, ಚುನಾವಣೆ ಬಗ್ಗೆ ಮಾತನಾಡಲು ನಿರಾಕರಿಸುತ್ತಾರೆ. ಏನಾಗುತ್ತೋ ನೋಡೋಣ” ಎಂದಷ್ಟೇ ಹೇಳಿದರು.

ಮತದಾರರ ಈ ಧೋರಣೆಯೇ ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದ್ದು, ಕಾನ್ಪುರದ ಬಿಜೆಪಿ ಅಭ್ಯರ್ಥಿಯೊಬ್ಬರು, “ಮತದಾರರ ಮನಸ್ಥಿತಿಯನ್ನು ಊಹಿಸುವುದು ನಮಗೆ ತುಂಬಾ ಕಷ್ಟವಾಗಿದೆ. ನಾನು ಮನೆ-ಮನೆ ಪ್ರಚಾರ ಮಾಡಲು ಹೋದಾಗ, ಮತದಾರರು ಸ್ವಾಗತಿಸಲೂ ಇಲ್ಲ ಅಥವಾ ಪ್ರತಿಕೂಲವಾಗಿಯೂ ಇರಲಿಲ್ಲ. ಹೀಗಾಗಿ ಅವರ ಮನಸ್ಥಿತಿಯನ್ನು ನಿರ್ಣಯಿಸಲು ಸಾಧ್ಯವಿಲ್ಲ. ಈ ಮೊದಲು, ಬಹಿರಂಗ ಪ್ರಚಾರ ಜನಸಂದಣಿಯ ಮನಸ್ಥಿತಿಯನ್ನು ಊಹಿಸಬಹುದಾಗಿತ್ತು. ಈಗ ಅದೂ ಸಾಧ್ಯವಿಲ್ಲ” ಎಂದರು.

ಕೃಪೆ: ಉಮೀದ್‌.ಕಾಮ್‌
ಅನುವಾದ: ಸೋಮಶೇಖರ್‌ ಚಲ್ಯ


ಇದನ್ನೂ ಓದಿರಿ: ವಿಶ್ಲೇಷಣೆ: 100 ವರ್ಷಗಳಷ್ಟು ಹಳೆಯದಾದ ‘ಚಿಂತಾಮಣಿ’ ನಾಟಕವನ್ನು ಆಂಧ್ರ ಸರ್ಕಾರ ನಿಷೇಧಿಸಿದ್ದೇಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...