Homeಚಳವಳಿದೌರ್ಜನ್ಯ ಶೋಷಣೆಗಳ ಸುಗ್ಗಿ! ಕಬ್ಬು ಕಟಾವು ಕೂಲಿಗಾರರ ಜೀತವಿಮುಕ್ತಿಯೆಂದು?

ದೌರ್ಜನ್ಯ ಶೋಷಣೆಗಳ ಸುಗ್ಗಿ! ಕಬ್ಬು ಕಟಾವು ಕೂಲಿಗಾರರ ಜೀತವಿಮುಕ್ತಿಯೆಂದು?

ದೌರ್ಜನ್ಯ ಸಹಿಸಲಾರದೆ ಮಹಾರಾಷ್ಟ್ರದ ಜಿರ್ನಿಯಾ ತಾಲೂಕಿನ ಖಾರ್ಗೊನೆಯಿಂದ ಓಡಿ ಹೋದ ಒಂದಷ್ಟು ಕೂಲಿಕಾರರು ತಮ್ಮೂರು ತಲುಪಿ 6 ಹುಡುಗಿಯರ ಮೇಲೆ ಸತತವಾಗಿ ಅತ್ಯಾಚಾರ ನಡೆಯುತ್ತಿದ್ದ ಕತೆಗಳನ್ನು ಹೇಳಿಕೊಂಡಿದ್ದಾರೆ.

- Advertisement -
- Advertisement -

ಕಬ್ಬು ಕಟಾವಿಗೆ ಬಂತೆಂದರೆ ಗುತ್ತಿಗೆದಾರರಿಗದು ದುಡ್ಡಿನ ಸುಗ್ಗಿಯ ಸಮಯ. ಪುಣೆ ಬೆಳಗಾವಿ, ಪುಣೆ ಸೊಲ್ಲಾಪುರ ರೋಡುಗಳು ತುಂಬಿದ ಟ್ರ್ಯಾಕ್ಟರುಗಳಿಂದ ಗುಡುಗುಡಿಸುತ್ತವೆ. ಆ ಟ್ರ್ಯಾಕ್ಟರುಗಳಲ್ಲಿ ಮನೆಯ ಎಲ್ಲಾ ಸಾಮಾನುಗಳು, ಹಾಸಿಗೆ ಹೊದಿಕೆ, ಗುಡಾರ, ಪ್ಲಾಸ್ಟಿಕ್ ಹೊದಿಕೆಗಳು, ಅವನ್ನು ನಿಲ್ಲಿಸುವ ಕಂಬಗಳು. . . ಮಕ್ಕಳು ಮರಿಗಳು, ಮನೆಯ ಎಲ್ಲಾ ಸದಸ್ಯರುಗಳು. ಹೊರಡುವುದೆಲ್ಲಿಗೆ? ಸಾಂಗ್ಲಿ, ಸಾತಾರ, ಕೊಲ್ಲಾಪುರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಕಬ್ಬಿನ ಗದ್ದೆಗಳಿಗೆ. ನೋಡ ನೋಡುವಷ್ಟರಲ್ಲಿ ಗದ್ದೆಗಳಲ್ಲಿ ಕಂಬಗಳು ಎದ್ದು ನಿಲ್ಲುತ್ತವೆ, ಪ್ಲಾಸ್ಟಿಕ್ ಹೊದಿಕೆಯ ಮುಸುಕು ಹಾಕಿಕೊಂಡು ಅವು ಮನೆಗಳೆನಿಸುತ್ತವೆ. ಮನೆಯ ಸಾಮಾನು, ಹಾಸಿಗೆ ಹೊದಿಕೆ ಮಕ್ಕಳೆಲ್ಲ ಟ್ರ್ಯಾಕ್ಟರ್ ಇಳಿದು ಆ ಮನೆಯೊಳಗೆ ತುಂಬಿಕೊಳ್ಳುತ್ತವೆ. ಮುಂದಿನ ಎರಡು ತಿಂಗಳು ಇದೇ ಅವರ ಮನೆ, ಇದೇ ಅವರ ಊರು.

ಎಲ್ಲಿಯ ಜನರಿವರು? ಎಳೆ ಹಿಡಿದು ಹುಡುಕುತ್ತ ಹೋದರೆ ದಾರ ಅತ್ತ ಸಾಂಗ್ಲಿ ಸಾತಾರ ದಾಟಿ ದೂರದ ಮಧ್ಯಪ್ರದೇಶದವರೆಗೂ ಸಾಗುತ್ತದೆ. ದೇಶ ಭಾಷೆ ಗೊತ್ತಿಲ್ಲದ ಈ ಜಾಗಕ್ಕೆ ಕಬ್ಬು ಕಡಿಯಲು ಬಂದಿಳಿದ ಈ ಕುಟುಂಬಗಳಿಗೆ ಗೊತ್ತಿರುವುದೊಂದೇ, ದುಡಿತ ದುಡಿತ ದುಡಿತ. . .

ಮಹಾರಾಷ್ಟ್ರ ಕರ್ನಾಟಕಗಳಲ್ಲಿ ಕಬ್ಬು ಬೆಳೆಗಾರರಿಗೆ ನಿಶ್ಚಿಂತೆ. ಲಾರಿ ತಂದು ಕೂಲಿಕಾರರನ್ನು ತಂದು ಫ್ಯಾಕ್ಟರಿಗಳವರು ತಾವೇ ಕಬ್ಬು ಕೊಯ್ದು, ಸುಲಿಸಿ ಒಯ್ಯುತ್ತಾರೆ ಎಂದು. ಆದರೆ ಆ ಫ್ಯಾಕ್ಟರಿಗಳು ಎಲ್ಲಿಂದ ಕೂಲಿಕಾರರನ್ನು ತರುತ್ತಾರೆ, ಹೇಗೆ ತರುತ್ತಾರೆ, ಹೇಗೆ ಅವರನ್ನು ನಡೆಸಿಕೊಳ್ಳುತ್ತಾರೆ ಕಲ್ಪನೆಯೂ ಇಲ್ಲ. ಹೆಚ್ಚಾಗಿ ಮಂತ್ರಿ ಮಹೋದಯರುಗಳ ಒಡೆತನದಲ್ಲಿಯೇ ಇರುವ ಮಹಾರಾಷ್ಟ್ರ ಕರ್ನಾಟಕದ ಈ ಶುಗರ್ ಫ್ಯಾಕ್ಟರಿಗಳು ಅಕ್ರಮ ಗುತ್ತಿಗೆದಾರರ ಮೂಲಕ ಅತೀವ ಬಡತನ ಇರುವಂತಹ ಮಧ್ಯಪ್ರದೇಶದ ಗುಡ್ಡಗಾಡು ಜನರಿಗೆ ಮಳೆಗಾಲವಿನ್ನೂ ಮುಗಿಯುವ ಮೊದಲೇ ಮೂವತ್ತು-ನಲವತ್ತು ಸಾವಿರಗಳ ಆಮಿಷವೊಡ್ಡಿ ಬಲೆ ಹಾಕುತ್ತಾರೆ. ಉದ್ಯೋಗವಿಲ್ಲದೆ ಹಸಿವೆಯಿಂದ ಕಂಗೆಟ್ಟಿರುವ ಬುಡಕಟ್ಟು ಸಮುದಾಯಗಳಿಗೆ ಸಾಲ ಕೊಡುವವನೇ ದೇವರು. ಒಳ್ಳೆಯ ಉದ್ಯೋಗ, ಉತ್ತಮ ವೇತನ, ಉತ್ತಮ ಪರಿಸರ ಎಂದೆಲ್ಲಾ ಹುರಿದುಂಬಿಸಿ ಆ ಮುಗ್ಧರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾನೆ ಗುತ್ತಿಗೆದಾರ. ಎಂತೆಂಥವರು ಹೇಗೆ ಹೇಗೆ ದೂರದೂರಿಗೆ ಉದ್ಯೋಗಕ್ಕಾಗಿ ಹೋಗಿರುತ್ತಾರೆ ಎಂಬ ಕಲ್ಪನೆ ಎಲ್ಲರಿಗೂ ಲಾಕ್‌ಡೌನ್ ಅವಧಿಯಲ್ಲಿ ಬಂದಿರಲಿಕ್ಕೆ ಸಾಕು. ಅಂದಿಗೂ ಇಂದಿಗೂ ಕೂಲಿಕಾರರ ಪರಿಸ್ಥಿತಿ ಯಾವುದೇ ರೀತಿಯಲ್ಲಿ ಬದಲಾಗಿಲ್ಲ. ಉದ್ಯೋಗ ಭದ್ರತೆ, ಜೀವನ ಭದ್ರತೆ, ಸಾಮಾಜಿಕ ಭದ್ರತೆ, ಆಹಾರ ಭದ್ರತೆ ಎಲ್ಲವೂ ಕಾನೂನಿನ ಪುಸ್ತಕಗಳಲ್ಲಿಯೇ ಅವಿತುಕೊಂಡಿರುವಾಗ ಈ ಜನರ ಬದುಕು ಇನ್ನೂ ಎಪ್ಪತ್ತು ವರ್ಷಗಳಾದರೂ ಕತ್ತಲಲ್ಲಿಯೇ!

ಅಕ್ಟೋಬರ್‌ದಿಂದ ತಾವು ಕಬ್ಬಿನ ಹೊಲಗಳಲ್ಲಿ ಕೆಲಸ ಮಾಡಲು ಬರುತ್ತೇವೆಂದು ಹೇಳಿ ಕೂಲಿಕಾರರು ಸಾಲ ಸ್ವೀಕರಿಸಿದವರು ಹೇಳಿದ ವೇಳೆಗೆ ಹೇಳಿದ ಜಾಗದಲ್ಲಿ ಹಾಜರಾಗುತ್ತಾರೆ. ಬೆಳಗಿನ ಜಾವ 5 ರಿಂದ ಸಂಜೆಯವರೆಗೆ ಕಬ್ಬು ಕಟಾವು, ಆ ನಂತರ ಕತ್ತಲಲ್ಲಿಯೇ ಲಾರಿಗೆ ಹೇರುವ ಕೆಲಸ. ದಿನಕ್ಕೆ ಎರಡು ಜನರ ಕೆಲಸ, ಎರಡು ದಿನದ ಕೆಲಸ ಮಾಡಿದರೂ ಕನಿಷ್ಟ ಕೂಲಿಯ ಹೆಸರಿಲ್ಲ. ಗುತ್ತಿಗೆದಾರನ ಕೃಪಾಕಟಾಕ್ಷವಿದ್ದರೆ ಕೂಲಿ. ಸಂಬಳ ಹೇಳದಿದ್ದರೂ ಆತ ಹೇಳಿದಷ್ಟು ಕೆಲಸ, ಆತ ಸಾಕು ಎಂದೆನ್ನುವವರೆಗೆ ಕೆಲಸ. ಈ ಗುತ್ತಿಗೆದಾರರ ಬಳಿ ಲೈಸೆನ್ಸ್ ಇಲ್ಲ. ಅಂತರರಾಜ್ಯ ಕೂಲಿಕಾರರಿಗೆ ಸಂಬಂಧಿಸಿದ ಕಾನೂನಿನ ಪಾಲನೆ ಇಲ್ಲ. ಕೆಲಸಗಾರರ ನೋಂದಣಿ ಇಲ್ಲ. ಅತ್ಯಾಚಾರದಿಂದ ಹಿಡಿದು ಎಲ್ಲಾ ರೀತಿಯ ದೌರ್ಜನ್ಯ ನಡೆಯುವುದಿಲ್ಲಿ.

ದೌರ್ಜನ್ಯ ಸಹಿಸಲಾರದೆ ಮಹಾರಾಷ್ಟ್ರದ ಜಿರ್ನಿಯಾ ತಾಲೂಕಿನ ಖಾರ್ಗೊನೆಯಿಂದ ಓಡಿ ಹೋದ ಒಂದಷ್ಟು ಕೂಲಿಕಾರರು ತಮ್ಮೂರು ತಲುಪಿ 6 ಹುಡುಗಿಯರ ಮೇಲೆ ಸತತವಾಗಿ ಅತ್ಯಾಚಾರ ನಡೆಯುತ್ತಿದ್ದ ಕತೆಗಳನ್ನು ಹೇಳಿಕೊಂಡಾಗಲೇ ಏನು ನಡೆಯುತ್ತಿದೆ ಎಂಬುದು ಸುತ್ತಲಿನವರಿಗೆ ಅರಿವು. `ನಮ್ಮ ಲೆಕ್ಕ ಪತ್ರ ಮಾಡಿಕೊಡಿ ನಾವು ಹೋಗುತ್ತೇವೆ’ ಎಂದಾಗ ನಾಲ್ವರನ್ನು ನಿರಾಣಿ ಶುಗರ್ಸ್ ಫ್ಯಾಕ್ಟರಿಯಲ್ಲಿ ಲಾಕಪ್‌ನಲ್ಲಿಡಲಾಯಿತೆಂದು ಈ ಕೂಲಿಕಾರರೇ ಹೇಳುತ್ತಾರೆ. ಮಧ್ಯಪ್ರದೇಶದ ಬರ್ವಾನಿಯ `ಜಾಗೃತ ಆದಿವಾಸಿ ದಲಿತ ಸಂಘಟನೆ’ಗೆ ತಿಳಿಸಿದಾಗ ಅವರು ಅಲ್ಲಿನ ಪೊಲೀಸ್ ಸಹಾಯದಿಂದ ಬೆಳಗಾವಿ ಜಿಲ್ಲಾಡಳಿತಕ್ಕೆ ಸಂಪರ್ಕಿಸಿ ಈ ಕೂಲಿಕಾರರ ಬಿಡುಗಡೆಗೆ ಪ್ರಯತ್ನ ಮಾಡಿದರು. ಬೆಳಗಾವಿ, ಬಾಗಲಕೋಟೆ, ಪುಣೆ, ಸಾತಾರಾ, ಜಿಲ್ಲೆಗಳಲ್ಲಿ ಹರಡಿ ಹೋಗಿರುವ ಕೂಲಿಕಾರರನ್ನು ರಕ್ಷಿಸಲು ಮಧ್ಯಪ್ರದೇಶದ ಜಾಗೃತ ಆದಿವಾಸಿ ಸಂಘಟನೆ ಮತ್ತು ಬೆಳಗಾವಿಯ ಸ್ಥಳೀಯ ಸಂಘಟನೆ, ಪಿಯುಸಿಎಲ್ ಎಲ್ಲವೂ ಸತತ ಪ್ರಯತ್ನ ಮಾಡಿ 250 ಕೂಲಿಕಾರರನ್ನು ಜೀತಮುಕ್ತಗೊಳಿಸಿದ್ದಾರೆ.

ಅವಧಿ ಮೀರಿ ಕೆಲಸ ಮಾಡಿಸುವುದು, ಸಂಬಳ ಕೊಡದೆ ಕೆಲಸ ಮಾಡಿಸುವುದು, ಸಾಲ ಕೊಟ್ಟು ಕನಿಷ್ಟ ಕೂಲಿಗಿಂತಲೂ ಕಡಿಮೆ ಸಂಬಳ ಕೊಡುವುದು ಇವೆಲ್ಲವೂ ಜೀತ (ವಿಮುಕ್ತಿ) ಕಾನೂನಿನ ಪ್ರಕಾರ ಜೀತವೆನಿಸಿಕೊಳ್ಳುತ್ತವೆ. ಬುಡಕಟ್ಟು ಜನರನ್ನು ಒತ್ತಾಯದಿಂದ ದುಡಿಸಿಕೊಳ್ಳುವುದು, ದೌರ್ಜನ್ಯವೆಸಗುವುದು ಎಸ್‌ಸಿ, ಎಸ್ಟಿ ದೌರ್ಜನ್ಯ (ತಡೆ) ಕಾನೂನಿನಡಿ ಅಪರಾಧವಾಗುತ್ತದೆ. 1979ರ ಅಂತರರಾಜ್ಯ ವಲಸೆ ಕಾನೂನಿನಡಿಯಲ್ಲಿ ಈ ರೀತಿ ಕೆಲಸಗಾರರನ್ನು ಒಯ್ಯುವವ ಲೈಸೆನ್ಸ್ ಇರುವ ಗುತ್ತಿಗೆದಾರನಾಗಿರಬೇಕಲ್ಲದೆ ಆ ಕೂಲಿಕಾರರನ್ನು ಎರಡೂ ರಾಜ್ಯಗಳಲ್ಲಿ ನೋಂದಣಿ ಮಾಡಿಸಿರಬೇಕು. ತಾವು ಎಲ್ಲಿ, ಏನು ಕೆಲಸ ಮಾಡುತ್ತಿದ್ದೇವೆ, ನಿಯಮಿತವಾಗಿ ಕನಿಷ್ಟ ಕೂಲಿಗಿಂತ ಹೆಚ್ಚು ಹಣವನ್ನು ಕೂಲಿಯಾಗಿ ಪಡೆಯುತ್ತಿದ್ದೇವೆ, ಜೀವನ ಸೌಲಭ್ಯಗಳೆಲ್ಲ ಇವೆ ಎಂದು ಹೇಳುವಂಥ ಪಾಸ್ ಬುಕ್ ಒಂದನ್ನು ಕೂಲಿಕಾರರಿಗೆ ಕೊಟ್ಟಿರಬೇಕು. ಇವೊಂದನ್ನೂ ಮಾಡದ ಈ ಗುತ್ತಿಗೆದಾರರು ಮಾನವ ಕಳ್ಳಸಾಗಾಣಿಕೆಯಲ್ಲಿ ನಿರತರಾಗಿರುವಂತೇ ಅಪರಾಧಿಗಳು.
ಜೀತಕ್ಕೊಳಪಟ್ಟ ಕೂಲಿಕಾರರನ್ನು ಬಿಡುಗಡೆಗೊಳಿಸಿ ಸೂಕ್ತ ರಕ್ಷಣೆ ಮತ್ತು ಪುನರ್ವಸತಿ ಒದಗಿಸಬೇಕೆಂದು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕೂಡ ಜಿಲ್ಲಾ ನ್ಯಾಯಾಧೀಶರುಗಳಿಗೆ ಸೂಕ್ತವಾದ ಆದೇಶಗಳನ್ನು ಕೊಟ್ಟಿದೆ. ಆದಾಗ್ಯೂ ಇನ್ನೂವರೆಗೆ ಯಾವುದೇ ನ್ಯಾಯಾಲಯ ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಅಘಾತಕಾರಿ ವಿಚಾರ.

ಮಧ್ಯ ಪ್ರದೇಶದ ಸರಕಾರ ಬ್ರಿಟಿಷರ ವಿರುದ್ಧ ಹೋರಾಡಿದ ಬುಡಕಟ್ಟು ಮುಂದಾಳು ಬಿರ್ಸಾ ಅವರ ಜಯಂತಿ ಅಂಗವಾಗಿ 23 ಕೋಟಿ ಖರ್ಚು ಮಾಡಿ ಬುಡಕಟ್ಟು ವೀರರನ್ನು ಸ್ಮರಿಸಿದೆ. ಆದರೆ ಇದೇ ಸರಕಾರ ತನ್ನಲ್ಲಿರುವ ಅಪಾರ ಸಂಖ್ಯೆಯ ಬುಡಕಟ್ಟು ಜನರ ಹಸಿವು, ದೈನೇಸಿ ಸ್ಥಿತಿಯಲ್ಲಿ ಬದಲಾವಣೆ ತರಲು ಏನೂ ಮಾಡುತ್ತಿಲ್ಲ. ಪೊಲೀಸರು ಮತ್ತು ಆಡಳಿತದ ನಿಷ್ಕ್ರಿಯತೆ ಆದಿವಾಸಿಗಳಿಗೆ ಹೊಸದೇನೂ ಅಲ್ಲ. ನರ್ಮದಾ ಹೋರಾಟದ ದಿನಗಳಿಂದಲೂ ನೋಡುತ್ತಲೇ ಬರುತ್ತಿದ್ದೇವೆ ಅದನ್ನು. ಆದರೂ ಎದೆಗುಂದದ ಆದಿವಾಸಿಗಳು ತಮ್ಮ ಸಂಘಟನೆಯ ಮೂಲಕ ಅಕ್ರಮ ಗುತ್ತಿಗೆದಾರರನ್ನು ಜೈಲಿಗಟ್ಟುವ ದಿಶೆಯಲ್ಲಿ ಮುಂದುವರೆಯುತ್ತಿದ್ದಾರೆ.
ಸರಕಾರ ಬೃಹತ್ ಅಣೆಕಟ್ಟು ಕಟ್ಟುತ್ತದೆ. ಆದಿವಾಸಿಗಳ ಜೀವನವನ್ನು ಮುಳುಗಿಸುತ್ತದೆ. ಜಲಾಶಯದಿಂದ ನೀರು ಹರಿಸಿ ಕಬ್ಬು ಬೆಳೆಯುವಂತೆ ರೈತರನ್ನು ಪ್ರೋತ್ಸಾಹಿಸಲಾಗುತ್ತದೆ. ಮಂತ್ರಿ ಮಹೋದಯರುಗಳ ಸಕ್ಕರೆ ಕಾರ್ಖಾನೆಗಳೇಳುತ್ತವೆ. ಜೋಳ, ಗೋಧಿ, ಭತ್ತ ಬೆಳೆಗಳ ಜಾಗದಲ್ಲಿ ಎದ್ದು ನಿಂತ ಕಬ್ಬು. ಅತ್ತ ಭೂಮಿ ಕಳೆದುಕೊಂಡು, ಪುನರ್ವಸತಿ ಇಲ್ಲದೆಯೇ, ಉದ್ಯೋಗವೂ ಇಲ್ಲದೆಯೇ ಹಸಿವಿನಿಂದ ಕಂಗೆಟ್ಟುಹೋದ ಬುಡಕಟ್ಟು ಜನರು. ಅವರನ್ನು ಕೂಲಿಕಾರರನ್ನಾಗಿ ಬಳಸಿಕೊಳ್ಳಲು ಅದೇ ಫ್ಯಾಕ್ಟರಿಗಳಿಂದ ಅಕ್ರಮ ಗುತ್ತಿಗೆದಾರರು. ವೃತ್ತ ಪೂರ್ಣಗೊಂಡಿತಲ್ಲವೇ?

  • ಶಾರದಾ ಗೋಪಾಲ

(ಶಾರದಾ ಮಹಿಳಾಪರ ಕಾಳಜಿಯ ಚಿಂತಕಿ, ಬರಹಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ. ಆಹಾರದ ಹಕ್ಕಿಗಾಗಿ ಆಂದೋಲನ, ಜನಾರೋಗ್ಯದ ಪ್ರಯತ್ನಗಳಲ್ಲಿ ಗಂಭೀರವಾಗಿ ದಶಕಗಳಿಂದ ತೊಡಗಿಸಿಕೊಂಡವರು. ಎಲ್ಲ ಸಮಾಜಮುಖಿ ಚಟುವಟಿಕೆಗಳ ಒಡನಾಡಿ. ಪ್ರಸ್ತುತ ಧಾರವಾಡದಲ್ಲಿ ನೆಲೆಸಿದ್ದಾರೆ.)


ಇದನ್ನೂ ಓದಿ: ಹಿಜಾಬ್-ಕೇಸರಿ ವಿಚಾರ: ಎರಡೂ ಕಡೆಯ ವಿದ್ಯಾರ್ಥಿಗಳೆ ಬಲಿಪಶುಗಳು – ದೇವನೂರು ಮಹಾದೇವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...