Homeಮುಖಪುಟವಿಮರ್ಶಾತ್ಮಕ ಯೋಚನೆಯ ಜೊತೆಗೆ ಸೃಜನಾತ್ಮಕ ಲಹರಿ ಇದ್ದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಖಚಿತ

ವಿಮರ್ಶಾತ್ಮಕ ಯೋಚನೆಯ ಜೊತೆಗೆ ಸೃಜನಾತ್ಮಕ ಲಹರಿ ಇದ್ದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಖಚಿತ

- Advertisement -
- Advertisement -

| ಜಿ. ಆರ್. ವಿದ್ಯಾರಣ್ಯ |

ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಲು ನಮಗೆ ಎರಡು ವಿಧವಾದ ಯೋಚನಾಲಹರಿಯ ಅವಶ್ಯಕತೆ ಇರುತ್ತದೆ. ಮೊದಲನೆಯದು ವಿಮರ್ಶಾತ್ಮಕ ಯೋಚನೆ (ಕ್ರಿಟಿಕಲ್ ಥಿಂಕಿಂಗ್), ಎರಡನೆಯದು ಸೃಜನಾತ್ಮಕ ಯೋಚನೆ (ಕ್ರಿಯೇಟಿವ್ ಥಿಂಕಿಂಗ್). ವಿಮರ್ಶಾತ್ಮಕ ಯೋಚನೆ ನಮ್ಮ ಬುದ್ಧಿಮಟ್ಟ, ತರಬೇತಿ, ಕಟ್ಟುಪಾಡು, ಪರಂಪರೆ ಇವುಗಳನ್ನು ಅವಲಂಬಿಸಿದ್ದು, ಮುಖ್ಯವಾಗಿ ಒಂದೇ ರೀತಿಯಲ್ಲಿ,ಹಾಕಿದ ಹಾದಿಯಲ್ಲೇಸಾಗುತ್ತದೆ. ದಿನನಿತ್ಯದ ಕೆಲಸಕ್ಕೆ ನಾವು ಇದನ್ನು ಬಳಸುತ್ತೇವೆ. ಸರಿಯಾಗಿ ಮಾಡುತ್ತಿರುವ ಕೆಲಸವನ್ನೇ ಇನ್ನೊಂದು ವಿಧವಾಗಿ ಮಾಡಬಹುದೇ ಎಂದು ಯೋಚಿಸಲೂ ಸಹ ನಾವು ಹೆಚ್ಚಾಗಿ ಪ್ರಯತ್ನ ಪಡುವುದಿಲ್ಲ. ಅನಿರೀಕ್ಷಿತ ಸಮಸ್ಯೆಯೊಂದು ಉದ್ಭವಿಸಿದಾಗ ಅದರ ಪರಿಹಾರಕ್ಕೂನಮ್ಮ ಸಾಧಾರಣ ವಿಮರ್ಶಾತ್ಮಕ ಯೋಚನೆಯನ್ನೇ ಬಳಸುತ್ತೇವೆಯೇ ಹೊರತು, ಇದನ್ನು ವಿಭಿನ್ನವಾಗಿ ಯೋಚಿಸಿ ಪರಿಹರಿಸಬಹುದೇ ಎಂದು ಚಿಂತಿಸುವುದಿಲ್ಲ.

ಹಾಗಾದರೆ ನಾವು ಸೃಜನಾತ್ಮಕವಾಗಿ ಯೋಚಿಸುವುದು ಯಾವಾಗ? ಹೆಚ್ಚಾಗಿ ಸೃಜನಾತ್ಮಕ ಯೋಚನೆಗಳು ನಾವು ಸಮಸ್ಯೆಯ ಬಗ್ಗೆ ಯೋಚಿಸದೇ ಇರುವಂತಹ ಸಮಯದಲ್ಲಿ ದಿಢೀರನೇ ಹೊಳೆದವುಗಳಾಗಿರುತ್ತವೆ. ಇದನ್ನು ಮೆದುಳಿನ ಬಲಬದಿಯ ಯೋಚನೆ ಎಂದೂ ಹೇಳುತ್ತಾರೆ. ಈ ಮಿಂಚಿನಂತಹ ಉಪಯುಕ್ತ ಯೋಚನೆಗಳು ತಾವಾಗಿಯೇ ಬರಬೇಕೇ ಅಥವಾ ಅವನ್ನು ನಮಗೆ ಬೇಕಾದ ಸಮಯದಲ್ಲಿ ಹೊಳೆಯುವಂತೆ ಮಾಡಬಹುದೇ? ನಮ್ಮ ಎಲ್ಲಾ ಯೋಚನೆಗಳು ವಿಮರ್ಶಾತ್ಮಕವಾಗಿರುವುದಿಲ್ಲ ಎಂದ ಮಾತ್ರಕ್ಕೆ ಅವು ಸೃಜನಾತ್ಮಕವಾಗಿರುತ್ತವೆ ಎಂದೂ ಇಲ್ಲ. ತಲೆಯ ಗಾಲಿಗಳು ಅವಿರತವಾಗಿ ಸುತ್ತುತ್ತಿರುವಾಗ ಕೆಲವು ಮೂರ್ಖತನದ ಯೋಚನೆಗಳಾದರೆ, ಕೆಲವು ವಿಮರ್ಶಾತ್ಮಕ ಮತ್ತು ಒಂದೋ-ಎರಡೋ ಸೃಜನಾತ್ಮಕವಾಗಿರಬಹುದು. ಇದಕ್ಕೆ ಮುಖ್ಯ ಕಾರಣ ನಾವು ಕೇವಲ ಸಮಸ್ಯೆಯನ್ನು ಎರಡೇ ಆಯಾಮದ ಚೌಕಟ್ಟಿನಲ್ಲಿ ನೋಡುತ್ತಿರುತ್ತೇವೆ. ಹಾಗಾದರೆ ನಾವು ತ್ರಿ-ಪರಿಮಾಣ (3-ಡೈಮೆನ್ಷನ್) ನಲ್ಲಿ ಯೋಚಿಸಲು ಸಾಧ್ಯವೇ?

ಮೇಲಿನ ಚಿತ್ರ ನೋಡಿ. ಇದರಲ್ಲಿ ಮೂರು ಬೆಂಕಿಕಡ್ದಿಗಳನ್ನು ಜೋಡಿಸಿ ಒಂದು ತ್ರಿಕೋನ (ತ್ರಿಭುಜ) ನಿರ್ಮಿಸಲಾಗಿದೆ. ಬದಿಯಲ್ಲಿರುವ ಮೂರು ಕಡ್ಡಿಗಳನ್ನು ಈ ತ್ರಿಕೋನಕ್ಕೆ ಸೇರಿಸಿ ಒಟ್ಟು ನಾಲ್ಕು ಸಮಭುಜ ತ್ರಿಕೋನ ನಿರ್ಮಿಸಲು ಸಾಧ್ಯವೇ, ಯೋಚಿಸಿ.

ಮೊದಲೇ ತಿಳಿಸಿದಂತೆ ನಮ್ಮ ಸಾಮಾನ್ಯ ವಿಮರ್ಶಾತ್ಮಕ ಯೋಚನಾಲಹರಿ ನಮ್ಮ ಬುದ್ಧಿಮಟ್ಟ, ತರಬೇತಿ, ಕಟ್ಟುಪಾಡು, ಪರಂಪರೆ ಇವುಗಳ ಚೌಕಟ್ಟಿನಲ್ಲಿ ಬಂಧಿತಗೊಂಡು,ಚೌಕಟ್ಟಿನ ಹೊರಗೆ (ಔಟ್ ಆಫ್ ದಿ ಬಾಕ್ಸ್) ಸೃಜನಾತ್ಮಕವಾಗಿ ಥಟ್ಟನೆ ಯೋಚಿಸಲು ಬಿಡುವುದಿಲ್ಲ.

ಕೆಳಗೆ ಚಿತ್ರದಲ್ಲಿ ಇರುವ ಬಣ್ಣ-ಬಣ್ಣದ ಇಟ್ಟಿಗೆಗಳ ಬಣ್ಣವನ್ನು ಮೇಲಿಂದ ಕೆಳಗೆ ಗಟ್ಟಿಯಾಗಿ ಹೇಳುತ್ತಾ ಹೋಗಿ.

ಸುಲಭವಾಗಿ ಓದಿದಿರಿ, ಅಲ್ಲವೇ?

 

ಈಗ ಕೆಳಗೆ ಚಿತ್ರ-3 ರಲ್ಲಿರುವ ಬಣ್ಣಗಳ ಹೆಸರು ಹೇಳಿ (ಬಣ್ಣದ ಹೆಸರು, ಏನು ಬರೆದಿದೆ ಅದಲ್ಲ – ಮೊದಲನೆಯದು ತಿಳಿನೀಲಿ, ಕೆಂಪು ಅಲ್ಲ).

ನೋಡಿದಿರಾ, ನಮ್ಮ ಬುದ್ಧಿ ನಮಗೆ ಹೇಗೆ ಮೋಸ ಮಾಡುತ್ತದೆ ಎಂದು. ಈ ರೀತಿಯ ಬುದ್ಧಿ ವರ್ಧಕ ವ್ಯಾಯಾಮಗಳಿಂದ ನಮ್ಮ ಯೋಚನಾಲಹರಿಯನ್ನು ಬೇಕೆಂದಾಗ ಸೃಜನಾತ್ಮಕವಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಸಾಕಷ್ಟು ಪರಿಶ್ರಮ ಬೇಕು. ಒಂದೇ ದಿನದಲ್ಲಿ ಆಗುವ ಕೆಲಸವಲ್ಲ.

ಈಗ ಮತ್ತೆ ಬೆಂಕಿ ಕಡ್ಡಿಯ ಸಮಸ್ಯೆಗೆ ಬರೋಣ. ನಿಮ್ಮ ಯೋಚನಾಲಹರಿ ವಿಮರ್ಶಾತ್ಮಕವಾಗಿದ್ದಲ್ಲಿ ನಿಮ್ಮ ಉತ್ತರ ಬಹುಶಃ ಕೆಳಕಂಡ ಚಿತ್ರ-4 ರಂತೆ ಇರಬಹುದು.

ಆದರೆ ಉತ್ತರ ತಪ್ಪು ಏಕೆಂದರೆ ಕಡ್ಡಿಗಳು ಒಂದೇ ಉದ್ದವಾಗಿರುವುದರಿಂದ ತ್ರಿಕೋನಗಳು ಸರಿಯಾಗಿ  ಸಮಭುಜ ತ್ರಿಕೋನವಾಗಿರುವುದಿಲ್ಲ.

ಆದರೆ ನಿಮ್ಮ ಯೋಚನಾಲಹರಿ ತ್ರಿಪರಿಣಾಮ (3-ಡೈಮೆನ್ಷನಲ್) ಆಗಿದ್ದಲ್ಲಿ ನಿಮ್ಮ ಉತ್ತರ ಬಹುಶಃ ಚಿತ್ರ-5 ರಂತೆ ಕಾಣಬಹುದು. ಇದು ಸರಿಯಾದ  ಉತ್ತರ.

ಸೃಜನಾತ್ಮಕ ಯೋಚನೆ ಪ್ರತಿ ಬಾರಿ ಸರಿಯಾಗಿರಲೇಬೇಕು ಎಂದೇನಿಲ್ಲ, ಹಾಗಾಗಿ ಉತ್ತರ ಚಿತ್ರ-6 ರಂತೆಯೂ ಇರಬಹುದು.ಉತ್ತರ ಸರಿ ಎಂದು ಎಲ್ಲರಿಗೂ ಅನಿಸದಿದ್ದರೂಸಹ ಇದು ಸಮರ್ಪಕ ಉತ್ತರ.

ಇಂತಹ ಉತ್ತರಕ್ಕೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ದೊರೆಯುತ್ತದೆ. ಸೃಜನಾತ್ಮಕ ಯೋಚನಾಲಹರಿಯನ್ನು ಹೊಂದಿರುವ ಯುವಕರಿಗೆ ಕೆಲಸ ನೀಡಲು ಕಂಪನಿಗಳು ಹಾತೊರೆಯುತ್ತಿರುತ್ತವೆ. ನಮಗೆ ವಿಮರ್ಶಾತ್ಮಕ ಯೋಚನೆಯೂ ಬೇಕು ಆದರೆ ಸೃಜನಾತ್ಮಕ ಲಹರಿಯೂ ಇರಬೇಕು. ಎರಡನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸುಲಭವಾಗುತ್ತದೆ.

ನೀವೂ ಸಹ ಹೀಗೆ ಬೇಕೆಂದಾಗ ಸೃಜನಾತ್ಮಕವಾಗಿ ಯೋಚಿಸಲು ಕಲಿತಲ್ಲಿ, ನಿಮಗೆ ಕೆಲಸದ ಸಮಸ್ಯೆಯಾಗಲೀ, ನಿಮ್ಮ ಕಂಪನಿಯಲ್ಲಿ ಒಳ್ಳೆಯ ಸ್ಥಾನಮಾನಕ್ಕಾಗಲೀ ಎಂದೂ ತೊಂದರೆ ಇರುವುದಿಲ್ಲ. ಪ್ರಯತ್ನಿಸುತ್ತೀರಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕಾರ : ಆಯುಷ್ ಮಲಿಕ್‌ರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ತಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ಮತ್ತು ಆ ನಂತರ ತನ್ನ ತಂದೆಯೇ ತನಗೆ ಬೆದರಿಕೆ ಹಾಕಿ, ಕಾನೂನುಬಾಹಿರವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆರೋಪಿಸಿದ್ದ ಆಯುಷ್ ಮಲಿಕ್ ಎಂಬ 31 ವರ್ಷದ ಯುವಕನನ್ನು...

ಬಿಜ್ನೋರ್‌ನಲ್ಲಿ ಮುಸ್ಲಿಂ ಶಿಕ್ಷಕನ ಗುಂಡಿಕ್ಕಿ ಹತ್ಯೆ: ‘ಲವ್ ಜಿಹಾದ್’ ಆರೋಪ; ವೈಯಕ್ತಿಕ ದ್ವೇಷದ ಬಗ್ಗೆಯೂ ಪೊಲೀಸರಿಂದ ತನಿಖೆ 

ಬಿಜ್ನೋರ್: ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ 43 ವರ್ಷದ ಮುಸ್ಲಿಂ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬರನ್ನು ರೈತನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಶಿಕ್ಷಕ ನೌಶಾದ್ ಅಹ್ಮದ್ ಅವರು ‘ಲವ್ ಜಿಹಾದ್’...