Homeಕರ್ನಾಟಕಜಿಂದಾಲ್‍ಗೆ ಭೂಮಿ: ಕೊಟ್ಟರೋ, ಬಿಟ್ಟರೊ? ಈಗೇನಾಗುತ್ತಿದೆ ಗೊತ್ತೆ?

ಜಿಂದಾಲ್‍ಗೆ ಭೂಮಿ: ಕೊಟ್ಟರೋ, ಬಿಟ್ಟರೊ? ಈಗೇನಾಗುತ್ತಿದೆ ಗೊತ್ತೆ?

ಬೆಂಗಳೂರಿನ ರಾಚೇನಹಳ್ಳಿಯಲ್ಲಿ ಡಿನೋಟಿಫೈ ಆದ ಭೂಮಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪದ ಹತ್ತಿರದ ಸಂಬಂಧಿ 40 ಲಕ್ಷಕ್ಕೆ ಖರೀದಿಸಿ ನಂತರ ಜಿಂದಾಲ್‍ನ ಅಂಗಸಂಸ್ಥೆ ಸೌಥ್ ವೆಸ್ಟ್ ಮೈನಿಂಗ್ ಕಂಪನಿಗೆ 20 ಕೋಟಿ ರೂ.ಗೆ ಮಾರಿದ್ದರು.

- Advertisement -
- Advertisement -

| ಮಲ್ಲನಗೌಡರ್ |

ಜಿಂದಾಲ್‍ಗೆ ಭೂಮಿ ಮಾರುವ ಸರ್ಕಾರದ ನಡೆ ವಿರುದ್ಧ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿಯನ್ನು ಬಿಜೆಪಿ ನಡೆಸಿದೆ. ರಾಜ್ಯ ಸರ್ಕಾರ ಸಚಿವ ಸಂಪುಟದ ಉಪಸಮಿತಿಯ ಮೊರೆ ಹೋಗಿದೆ. ಇದರ ನಡುವೆ ಹಿಂದಿನ ದಶಕದ ‘ಗಣಿ ವೈಭವದ’ ಕತೆಗಳು ಪರಸ್ಪರ ಆರೋಪಾಧನೆಯಲ್ಲಿ ಜಿಟಿಜಿಟಿ ಮಳೆಯ ರೂಪದಲ್ಲಿ ಪ್ರಚಲಿತಕ್ಕೆ ಬಂದಿವೆ. ಆದರೆ, ಅಕ್ರಮ ಅದಿರಿನ ವ್ಯವಹಾರದ ಕಡತಗಳ ಮೇಲಿನ ಧೂಳು ಕೊಡವಲೂ ಯಾರದೂ ಒತಾಯ್ತವೇ ಇಲ್ಲ…

ಆಡಳಿತ ಮತ್ತು ವಿಪಕ್ಷಗಳು ಈಗ ಜೊಂದಾಲ್ ಭೂಮಿ ಪ್ರಕರಣದಲ್ಲಿ ಎಚ್ಚರಿಕೆಯ ನಡೆಯನ್ನೇ ಇಡುತ್ತಿವೆ. ಇದರ ವಿರುದ್ಧ ರಾಜ್ಯಾದ್ಯಂತ ಬಿರುಗಾಳಿಯಂತಹ ಪ್ರತಿಭಟನೆ ಮಾಡಬೇಕಿದ್ದ ಬಿಜೆಪಿ ಬೆಂಗಳೂರಿನ ಸರ್ಕಲ್‍ವೊಂದರಲ್ಲಿ ಹಾಸು ಹೊದ್ದಿ ಮಲಗಿ ಎದ್ದು ಹೋಗಿದೆ. ಸರ್ಕಾರ ಉಪಸಮಿತಿ ಎಂಬ ಜಿಟಿಜಿಟಿ ಮಳೆ ಉದುರಿಸಿ ಕಾಲ ತಳ್ಳಲು ಹೊರಟಿದೆ. ಜಿಂದಾಲ್ ಗೆ ಭೂಮಿ ಕೊಡುವುದನ್ನು ವಿರೋಧಿಸಿ ಬಳ್ಳಾರಿಗೆ ಪಾದಯಾತ್ರೆ ಮಾಡುವುದಿಲ್ಲ, ನಮ್ಮ ಹೋರಾಟ ಇಷ್ಟೇ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ. ಭಾರಿ ಬಿರುಗಾಳಿ ಎಬ್ಬಿಸಲು ಯಾರಿಗೂ ಮನಸ್ಸಿಲ್ಲ. ಈ ಬಿರುಗಾಳಿ ಬಳ್ಳಾರಿಯ ಅಕ್ರಮ ಗಣಿ ಕಡತಗಳ ಮೇಲೆ ವ್ಯವಸ್ಥೆಯೇ ಕೃತಕವಾಗಿ ಹರಡಿರುವ ಧೂಳನ್ನು ಹುಡಿ ಎಬ್ಬಿಸಿ ಬಿಡುತ್ತದೋ ಎಂಬ ಭಯ!

ಸಿಎಂ ಪ್ರಚೋದನೆ: ಯಡಿಯೂರಪ್ಪಗೆ ‘ಪ್ರೇರಣೆ’
ಚನ್ನಪಟ್ಟಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜಿಂದಾಲ್ ಜೊತೆ ಲೀಸ್ ಕಮ್ ಸೇಲ್ ಒಪ್ಪಂದ ಮಾಡಿಕೊಂಡಿದ್ದು ಯಡಿಯೂರಪ್ಪ ಅವಧಿಯಲ್ಲಿ. ಈಗ ಅವರೇ ಸೇಲ್ ಬೇಡ ಎನ್ನುತ್ತಿದ್ದಾರೆ… ಯಡಿಯೂರಪ್ಪ ಜಿಂದಾಲ್‍ನಿಂದ 20 ಕೋಟಿ ಪಡೆದಿದ್ದರು..’ ಎಂದು ಹೇಳಿದ ಕೂಡಲೇ ಅಹೋರಾತ್ರಿಯೇ ‘ಪ್ರೇರಣೆ’ಗೊಂಡ ಯಡಿಯೂರಪ್ಪ, ಆ ಪ್ರಕರಣದಲ್ಲಿ ಸಿಬಿಐ ಕೋರ್ಟು ತನಗೆ ಕ್ಲೀನ್‍ಚಿಟ್ ನೀಡಿದೆ’ ಎಂದು ಪ್ರತ್ಯುತ್ತರ ನೀಡಿದ್ದಾರೆ. ಆದರೆ 2016ರಲ್ಲಿ ಸಿಬಿಐ ಕೋರ್ಟು ಈ ಪ್ರಕರಣದಲ್ಲಿ ಯಡಿಯೂರಪ್ಪ, ಅವರ ಮಗ ರಾಘವೇಂದ್ರ ಮತ್ತು ಅಳಿಯ ಸೋಹಲ್‍ರನ್ನು ಮುಕ್ತಿಗೊಳಿಸಿತ್ತು. ಪ್ರಾಸಿಕ್ಯೂಷನ್ ಸರಿಯಾದ ಸಾಕ್ಷ್ಯ ಒದಗಿಸಿಲ್ಲ ಎಂಬುದು ಕೋರ್ಟಿನ ವಿವರಣೆಯಾಗಿತ್ತು. ತಮ್ಮ ಅಧಿಕಾರ ಬಳಸಿ ಯಡಿಯೂರಪ್ಪ ಜಿಂದಾಲ್‍ಗೆ ಫೆವರ್ ಮಾಡಿದರು ಅಥವಾ ಜಿಂದಾಲ್ ಆ ಕಾರಣಕ್ಕೆ ಪ್ರೇರಣಾಕ್ಕೆ 20 ಕೋಟಿ ದೇಣಿಗೆ ನೀಡಿತ್ತು ಎಂಬುದಕ್ಕೆ ಆಧಾರಗಳಿಲ್ಲ ಎಂಬುದಷ್ಟೇ ಅದರ ಸಾರಾಂಶವಾಗಿತ್ತು.

ಬೆಂಗಳೂರಿನ ರಾಚೇನಹಳ್ಳಿಯಲ್ಲಿ ಡಿನೋಟಿಫೈ ಆದ ಭೂಮಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪದ ಹತ್ತಿರದ ಸಂಬಂಧಿ 40 ಲಕ್ಷಕ್ಕೆ ಖರೀದಿಸಿ ನಂತರ ಜಿಂದಾಲ್‍ನ ಅಂಗಸಂಸ್ಥೆ ಸೌಥ್ ವೆಸ್ಟ್ ಮೈನಿಂಗ್ ಕಂಪನಿಗೆ 20 ಕೋಟಿ ರೂ.ಗೆ ಮಾರಿದ್ದರು. ಯಡಿಯೂರಪ್ಪ ಪುತ್ರ ರಾಘವೇಂದ್ರ ಮತ್ತು ಅಳಿಯ ಸೋಹನ್ ಒಡೆತನದ ಪ್ರೇರಣಾ ಟ್ರಸ್ಟ್‍ಗೆ ಜಿಂದಾಲ್ ದೇಣಿಗೆ ನೀಡಿತ್ತು. ಇದೆಲ್ಲ 2008-11ರ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಡೆದ ಘಟನೆಗಳು.
ಅದಿರು ಧೂಳು ಕೊಡವಲು ಸಿದ್ಧರಿಲ್ಲ!

ಗಣಿ ಅಕ್ರಮಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಿದ್ದರಾಮಯ್ಯ ರಚಿಸಿದ್ದ ಉಪಸಮಿತಿಯ ವರದಿಯ ಶಿಫಾರಸುಗಳನ್ನು ಇಂದಿಗೂ ಜಾರಿಗೆ ತಂದಿಲ್ಲ. ಹತ್ತಾರು ಗಣಿಗಳ್ಳರು ಮತ್ತು 700 ಚಿಲ್ಲರೆ ಅಧಿಕಾರಿಗಳ ಮೇಲೆ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಇದೆಲ್ಲ ಮೂರೂ ಪಕ್ಷಗಳಿಗೂ ಬೇಡವಾದ ಸಂಗತಿಯೇ ಆಗಿದೆ. ಇನ್ನು ಮೈಸೂರ್ ಮಿನರಲ್ಸ್‍ಗೆ (ಎಂಎಂಎಲ್) ಜಿಂದಾಲ್ ವಂಚಿಸಿದ ಕತೆ ಶುರುವಾಗಿದ್ದು 2001ರಿಂದಲೇ. 2001-10ರ ಅವಧಿಯಲ್ಲಿ ಜಿಂದಾಲ್ ಎಂಎಂಎಲ್‍ಗೆ ಕಡಿಮೆ ಪ್ರಿಮಿಯಮ್ ದರದಲ್ಲಿ ಅದಿರನ್ನು ನೀಡಿತ್ತು. ಈ ಅವಧಿಯಲ್ಲಿ 1,059.89 ಕೋಟಿ ಮೌಲ್ಯದ 9.25 ಮಿಲಿಯನ್ ಟನ್ ಅದಿರನ್ನು ಮೈನಿಂಗ್ ಮಾಡಿದ್ದ ಜಿಂದಾಲ್ ಎಂಎಂಎಲ್‍ಗೆ ಕೇವಲ 62.17 ಕೋಟಿ ಪ್ರಿಮಿಯಮ್ ನೀಡಿತ್ತು, ಜಿಂದಾಲ್ ಈ ವ್ಯವಹಾರದಲ್ಲಿ 879.19 ಕೋಟಿ ಅನಾಮತ್ತು ಲಾಭ ಪಡೆದಿತ್ತು ಎಂದು 2013ರಲ್ಲಿ ಸಿಎಜಿ ವರದಿ ಹೇಳಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರವೂ ಕ್ರಮ ಕೈಗೊಳ್ಳಲಿಲ್ಲ, ಎರಡೂ ವಿಪಕ್ಷಗಳಿಗೂ ಇದು ಬೇಕಾಗಿರಲಿಲ್ಲ.

ರಾಜ್ಯ ಅಧೀನದ ಸಂಸ್ಥೆ ಎಂಎಂಎಲ್‍ಗೆ ವಂಚನೆ ಎಂದರೆ ರಾಜ್ಯದ ಬೊಕ್ಕಸಕ್ಕೆ ವಂಚನೆ. ನಮ್ಮದೇ ಸಂಸ್ಥೆಯನ್ನು ತುಳಿದು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವುದೇ ಖಾಸಗೀಕರಣದ ಮೊದಲ ಪಾಠ. ಈ ಪಾಠದ ಅಂತ್ಯದಲ್ಲಿ ಕಿಕ್‍ಬ್ಯಾಕ್ ಪಕ್ಕಾ ಎಂದು ಅಲಿಖಿತ ಸಾಲೂ ಇದೆ! ಒಟ್ಟಿಗೆ ಎಂಎಂಎಲ್‍ಗೆ 1,200 ಕೋಟಿ (ಬಡ್ಡಿ ಸೇರಿದರೆ ಅಂದಾಜು 2 ಸಾವಿರ ಕೋಟಿ) ಹಣವನ್ನು ಜಿಂದಾಲ್‍ನಿಂದ ಕಕ್ಕಿಸುವ ಕೆಲಸಕ್ಕೆ ಯಾರಿಗೂ ಆಸಕ್ತಿಯೇ ಇಲ್ಲವೇ? ಅಷ್ಟು ಹಣ ಸರ್ಕಾರದ ಬೊಕ್ಕಸಕ್ಕೆ ಬಂದರೆ ನೂರಾರು ಅಭಿವೃದ್ದಿ ಕೆಲಸಗಳನ್ನು ಮಾಡಬೇಕಲ್ಲವೇ? ಜಿಂದಾಲ್ ಬಳಿ ಕೊಡಲು ಅಷ್ಟು ಹಣವಿಲ್ಲವೇ? ಆದರೂ 2001ರಿಂದ 2019ರವರೆಗೆ ಈಗಿನ ಕುಮಾರಸ್ವಾಮಿ ಸೇರಿ ಎಂಟು ಮುಖ್ಯಮಂತ್ರಿಗಳು ಆಳಿದ್ದಾರೆ/ಆಳುತ್ತಿದ್ದಾರೆ. ಯಾರಿಗೂ ತಾರ್ಕಿಕ ಅಂತ್ಯಕ್ಕೆ ಹೋಗಲು ಇಷ್ಟವಿಲ್ಲ.

ಜಿಂದಾಲ್‍ಗೆ ಭೂಮಿ ಮಾರಾಟದ ಸುದ್ದಿ ಜಿಟಿ ಜಿಟಿ ಮಳೆಯಲ್ಲಿ ಹಿಂದಕ್ಕೆ ಸರಿಯುತ್ತದೆ, ಉಪ ಸಮಿತಿ ‘ಸಮಾಲೋಚನೆ’ ನಡೆಸುತ್ತದೆ. ಆ ಹೊತ್ತಿಗೆ ಮತ್ತೆ ಆಪರೇಷನ್ ಕಮಲದ 14ನೇ ಅಂಕ ಶುರುವಾಗಿರುತ್ತದೆ. ಗಣಿ ಧೂಳಲ್ಲಿ ಎಲ್ಲ ಮರೆತೇ ಹೋಗುತ್ತದೆ. ದೆಹಲಿಯಲ್ಲಿ ಸಜ್ಜನ್ ಮುಖದಲ್ಲಿ ಸಿಂಚನ ಅರಳುತ್ತದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...