Homeದಲಿತ್ ಫೈಲ್ಸ್ಮಾತು ಮರೆತ ಭಾರತ; ಇದು ದಲಿತ ಭಾರತದ ಕಥನ

ಮಾತು ಮರೆತ ಭಾರತ; ಇದು ದಲಿತ ಭಾರತದ ಕಥನ

- Advertisement -
- Advertisement -

ಮಾತು ಮರೆಯುವುದರಲ್ಲಿ ಎರಡು ವಿಧ. ಒಂದು, ಕೊಟ್ಟ ಮಾತು ಮರೆಯುವುದು. ಇನ್ನೊಂದು ಮಾತಾಡಲೇಬೇಕಾದಾಗ ಮಾತಾಡದೇ ಇರುವುದು. ಎರಡು ಸನ್ನಿವೇಶದಲ್ಲಿಯೂ ಸಹ ಮಾತುಗಳನ್ನು ಮರೆಯಲಾಗುತ್ತದೆ. ಮರೆಯುವುದು ಸಹಜವಲ್ಲವೆ? ಹೌದು ಸಹಜ. ಒಮ್ಮೆಯಾದರೆ ಸಹಜ. ಮತ್ತೊಮ್ಮೆಯಾದರೂ ಸಹಜವೆನ್ನೋಣ. ಆದರೆ ಶತಮಾನಗಳ ಕಾಲದ ಮರೆವಿಗೆ ಏನೆನ್ನೋಣ? ಜಾಣ ಮರೆವು ಎಂದುಬಿಡಬಹುದು. ಆದರೆ ಭಾರತದಲ್ಲಿ ಜಾಣ ಮರೆವನ್ನೂ ಮೀರಿಸಿದ ಕ್ರೂರ ಮರೆವಿದೆ. ಈ ಕ್ರೂರ ಮರೆವಿಗೆ ಕಾರಣ ಒಂದು ಭಾರತವಿಲ್ಲದ್ದಾಗಿದೆ. ಇಲ್ಲಿ ನೂರಾರು ಭಾರತಗಳಿವೆ. ಅನ್ಯ ದೇಶಗಳಿಗೆ ಹೋಲಿಸಿಕೊಂಡಾಗ ಇಲ್ಲಿ ಹಲವು ಜಾತಿಗಳಿಂದ ಒಡೆದುಹೋಗಿರುವ ಹಲವು ಭಾರತಗಳಿವೆ. 1950ರಲ್ಲಿ ಸಂವಿಧಾನ ಈ ಭಾರತವನ್ನು ಒಂದು ಮಾಡುವ ಪ್ರಯತ್ನಕ್ಕೆ ಮುಂದಾಯಿತಾದರೂ ಆಳುವ ವರ್ಗ ಇಂದಿಗೂ ಅದು ಸಫಲವಾಗದಂತೆ ನೋಡಿಕೊಂಡು ಮತ್ತಷ್ಟು ಛಿದ್ರಗೊಂಡು ಮತ್ತಷ್ಟು ಭಾರತಗಳಾಗುವಂತೆ ಮಾಡಿದೆ.

ಇಂತಹ ಭಾರತದ ಪ್ರಾಚೀನ ಕಾಲದಲ್ಲಿ ಅಸ್ಪೃಶ್ಯ ಭಾರತವೂ ಇತ್ತು. ಆಧುನಿಕ ಭಾರತದಲ್ಲಿ ಪರಿಶಿಷ್ಟ ಜಾತಿಗಳಾಗಿ ಗುರುತಿಸಿಕೊಂಡು ಇಂದು ದಲಿತ ಭಾರತವಾಗಿದೆ. ಆದರೆ ಅಸ್ಪೃಶ್ಯ ಭಾರತ ಅವರ ಪಾಲಿಗೆ ಇಂದಿಗೂ ಜೀವಂತವಿದೆ. ಸಂವಿಧಾನ ಸಭೆಯಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಿ, ಇನ್ನು ಮುಂದೆ ಮನುಷ್ಯರಾದ ಅಸ್ಪೃಶ್ಯರನ್ನು ದೆವ್ವಗಳಂತೆ ಕಾಡುವುದಿಲ್ಲವೆಂದು ಮಾತು ಕೊಟ್ಟ ದಲಿತೇತರರು ತಾವು ಕೊಟ್ಟ ಮಾತನ್ನು ಉಳಿಸಿಕೊಂಡರೆ? ’ಹಿಂದೂ ನಾವೆಲ್ಲ ಒಂದು’ ಎಂದ ಸ್ವಯಂ ಸೇವಕರು ದಲಿತರನ್ನು ಸಮಾನವಾಗಿ ಕಂಡರೆ? ವಸುದೈವ ಕುಟುಂಬಕಂ ಎಂದ ಸಾಧು ಸಂತರು ದಲಿತರೊಂದಿಗೆ ಕಳ್ಳುಬಳ್ಳಿ ಸಂಬಂಧ ಬೆಳೆಸಿದರೆ? ದ್ವೈತ, ಅದ್ವೈತ್ಯ, ವಿಶಿಷ್ಟಾದ್ವೈತಗಳು ದಲಿತರಿಗೆ ದೇಗುಲ ಪ್ರವೇಶ ನೀಡಿದವೇ? ಆಧ್ಯಾತ್ಮದ ಭಾಗವಾಗಿಸಿಕೊಂಡವೆ? ಆಮ್ ಆದ್ಮಿ ಕೆ ಸಾಥ್ ಅಂದವರು ದಲಿತ ಕೇರಿಗಳನ್ನು ಮುಟ್ಟಿದರೆ? ’ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎಂದವರು ದಲಿತರ ವಿಕಾಸಕ್ಕೆ ಕೈ ಹಾಕಿದರೇ? ಹೀಗೆ ಸಾಲುಸಾಲು ಪ್ರಶ್ನೆಗಳಿಗೆ ಉತ್ತರ ಇಲ್ಲವೆಂದೇ ತೋರುತ್ತಿದೆ.

’ರೀ ಈಗ ಮೊದಲಿನಂತಿಲ್ಲ. ಎಲ್ಲಾ ಬದಲಾಗುತ್ತಿದೆ’ ಎಂದವರ ಮುಂದೆ ಲೆಕ್ಕವಿಲ್ಲದಷ್ಟು ದಲಿತರ ಹೆಣಗಳ ಪಟ್ಟಿ ಇಟ್ಟಾಗ ಮಾತನ್ನೇ ಮರೆತುಬಿಡುತ್ತಾರೆ. ೨೦೨೦ರಲ್ಲಿ ದಲಿತರ ಮೇಲೆ 58,563 ದೌರ್ಜನ್ಯಗಳನ್ನು ಎಸಗಲಾಗಿದೆ. ಸ್ವತಂತ್ರ ಭಾರತ ಲೆಕ್ಕವಿಲ್ಲದಷ್ಟು ದಲಿತರ ಹತ್ಯಾಕಾಂಡಗಳಿಗೆ ನ್ಯಾಯವೇ ಸಿಗದೆ ನರಳುತ್ತಿವೆ. ಪ್ರತಿ ದಿನದ ಪತ್ರಿಕೆಗಳ ಮೂಲೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ವರದಿಯಾಗುತ್ತವೆ. ಇದರಲ್ಲಿ ಕೊಲೆ ಅತ್ಯಾಚಾರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಆದರೂ ದಲಿತೇತರರ ಉತ್ತರ ಸಿದ್ಧವಾಗಿರುತ್ತದೆ. ’ಈಗ ಮೊದಲಿನಂತಲ್ಲ ಬಿಡ್ರಿ’.

ವಾಚ್ ಕಟ್ಟಿದ್ದಕ್ಕೆ, ಮೀಸೆ ಬಿಟ್ಟದ್ದಕ್ಕೆ, ಕುದುರೆ ಹತ್ತಿದ್ದಕ್ಕೆ, ಅಂಬೇಡ್ಕರ್ ರಿಂಗ್‌ಟೋನ್ ಇಟ್ಟುಕೊಂಡಿದ್ದಕ್ಕೆ ದಲಿತರನ್ನ ಕೊಲೆ ಮಾಡಿಬಿಡುವಷ್ಟು ಕ್ರೂರಿಗಳು ಇಂದಿಗೂ ಈ ನೆಲದಲ್ಲಿರುವಾಗ ಭಾರತ ಸ್ವಾತಂತ್ರ್ಯಗೊಂಡಿದೆ ಎಂದು ಹೇಗೆ ಹೇಳುವುದು? ಆಗಿರುವ ಗಾಯಕ್ಕೆ ಮುಲಾಮು ಹಚ್ಚಬೇಕಾದ ಸಮಾಜ ಪದೇಪದೇ ಅದೇ ಗಾಯದ ಮೇಲೆ ಬರೆ ಹಾಕುತ್ತಾ ’ನೋಡು ಈಗ ಹಳೆಯ ಗಾಯ ಕಾಣುತ್ತಿಲ್ಲ’ ಎಂದರೆ ದಲಿತರು ನಂಬಿ ಕೂರಬೇಕೆ? ಕಾಲ ಬದಲಾಗಿದೆ ಹಾಗೂ ಸಮಾಜ ಬದಲಾಗಿದೆ ಎಂದು ಬೊಗಳೆ ಬಿಡುವ ಜಾತಿವಾದಿಗಳಿಗೆ ತಾವು ಮರೆತ ಮಾತುಗಳನ್ನು ನೆನಪಿಸಬೇಕಿದೆ. ಅಷ್ಟೇ ಅಲ್ಲ. ಭಾರತದ ಇತಿಹಾಸದಲ್ಲಿ ದಲಿತರ ಮೇಲೆ ಮೇಲ್ಜಾತಿಗಳು ನಡೆಸಿರುವ ದೌರ್ಜನ್ಯವನ್ನು ನೆನಪಿಸಬೇಕಿದೆ. ಇದರ ಜೊತೆಗೆ ದಲಿತರಲ್ಲಿಯೇ ತಮ್ಮ ಸಹಬಾಂಧವರ ಕೊಲೆಗಳನ್ನು ಮರೆತು ಮೈಮರೆತಿರುವವರಿಗೂ ದಲಿತ ಭಾರತದ ಮೇಲೆ ದಲಿತೇತರ ಭಾರತ ನಡೆಸಿರುವ ಭಯೋತ್ಪಾದನೆಯನ್ನು ನೆನಪಿಸಬೇಕಿದೆ. ಜಾತಿಯೆಂಬ ದೇಶದ್ರೋಹದ ವಿವಿಧ ಮುಖಗಳನ್ನು ಹಾಗೂ ಅದರ ಕ್ರೂರ ಮುಖವನ್ನು ತೋರಿಸಬೇಕಿದೆ.

ಬಹುದೊಡ್ಡ ವಿಸ್ಮೃತಿಯನ್ನು ಭಾರತಕ್ಕೆ ಪರಿಚಯಿಸಿ ಅಲ್ಲೆಲ್ಲ ತುಟಕ್ ಪಿಟಕ್ ಎನ್ನದೆ ಬಾಯಿ-ಮನಸ್ಸುಗಳಿಗೆ ಬೀಗ ಜಡಿದುಕೊಂಡು ಕುಳಿತಿದ್ದ, ಈಗಲೂ ಸುದೀರ್ಘ ಜೀವಂತ ಶವಗಳಾಗಿಯೇ ಉಳಿದಿರುವ ಮೂಳೆ ಮಾಂಸದ ತಡಿಕೆಗಳ ಮುಂದೆ ದಲಿತರ ಸುಟ್ಟ ಬೂದಿ, ಹೆಪ್ಪುಗಟ್ಟಿದ ನೆತ್ತರನ್ನು ತೋರಿಸಬೇಕಿದೆ.

ಅದಕ್ಕಾಗಿಯೇ ಈ ಅಂಕಣ. ಮಾತು ಮರೆತ ಭಾರತ. ಮಹಾಮರೆವಿನಲ್ಲಿ ಮುಳುಗಿ ತೇಲುತ್ತಿರುವ ದಲಿತರಿಗೂ ಹಾಗೂ ದಲಿತೇತರರಿಬ್ಬರಿಗೂ ಸಮರ್ಪಣೆ.

ಸಾಕ್ಯ ಸಮಗಾರ


ಇದನ್ನೂ ಓದಿ: ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...