Homeಕರ್ನಾಟಕಸಿದ್ದರಾಮಯ್ಯ ವಿರುದ್ಧ ದ್ವೇಷ ಹರಡುತ್ತಿರುವ ಕನ್ನಡ ಮಾಧ್ಯಮಗಳು: ಜನಾಕ್ರೋಶ

ಸಿದ್ದರಾಮಯ್ಯ ವಿರುದ್ಧ ದ್ವೇಷ ಹರಡುತ್ತಿರುವ ಕನ್ನಡ ಮಾಧ್ಯಮಗಳು: ಜನಾಕ್ರೋಶ

- Advertisement -
- Advertisement -

“ಜೈನ ಧರ್ಮದವರು, ಕೆಲವು ಹಿಂದೂ ಮಹಿಳೆಯರು ತಲೆ ಮೇಲೆ ಸೆರಗು ಹಾಕಲ್ವಾ, ಸ್ವಾಮೀಜಿಗಳು ತಲೆ ಮೇಲೆ ಬಟ್ಟೆ ಸಾಕಲ್ವಾ, ಮುಸ್ಲಿಂ ಹೆಣ್ಣುಮಕ್ಕಳು ತಲೆ ಮೇಲೆ ದುಪ್ಪಟ ಹಾಕಿಕೊಂಡರೆ ನಿಮಗೇನು ತೊಂದರೆ. ಈ ವಿವಾದವನ್ನು ಸೃಷ್ಟಿಸಿದ್ದೇ ಬಿಜೆಪಿ. ಎರಡು ಧರ್ಮದವರನ್ನು ಕರೆದು ಬಗೆಹರಿಸಬಹುದಿತ್ತಲ್ಲ” ಎಂದು ಹೇಳುವ ಮೂಲಕ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯನವರು ವಿವಾದ ಸೃಷ್ಟಿಸಿದ್ದಾರೆಂದು ಬಿಂಬಿಸಲಾಗುತ್ತಿದೆ.

‘ಹಿಜಾಬ್ ಸಮರ್ಥಿಸುವ ಭರದಲ್ಲಿ ಸಿದ್ದರಾಯ್ಯ ಲೂಸ್ ಟಾಕ್‌’ ಎಂದು ಮಾಧ್ಯಮಗಳು ಬಿಂಬಿಸಿ, ಸಿದ್ದರಾಮಯ್ಯನವರ ವಿರುದ್ಧ ಜನರನ್ನು ಎತ್ತಿಕಟ್ಟಲು ಯತ್ನಿಸುತ್ತಿರುವುದನ್ನು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರಶ್ನೆ ಎತ್ತಿರುವ ಪತ್ರಕರ್ತ ಆದಿತ್ಯ ಭಾರದ್ವಾಜ್‌, “ಸಿದ್ಧರಾಮಯ್ಯನವರೇನೋ ಆಡಬಾರದ ಮಾತಾಡಿದ್ದಾರೆ ಎಂಬಂತೆ ನಮ್ಮ ಮಾಧ್ಯಮಗಳು, ಬಿಜೆಪಿ ಮತ್ತು ಸ್ವತಃ ಕಾಂಗ್ರೆಸ್ ಆಡುತ್ತಿದೆ. ಈ ಪಾಟಿ ಹಿಂದುತ್ವವನ್ನು ಒಪ್ಪಿಯೇ ರಾಜಕಾರಣ ಮಾಡುವುದಾದರೆ ಬಿಜೆಪಿಗೂ ಕಾಂಗ್ರೆಸ್ಸಿಗೂ ಫರಕ್ಕೇನು?” ಎಂದು ಕೇಳಿದ್ದಾರೆ.

ಮುಂದುವರಿದು, “ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲಿ ತಲೆ ಮೇಲೆ ಬಟ್ಟೆ ಹೊದೆಯುವ ಆಚಾರ, ಪರಿಪಾಠ ಇದೆ. ಅದನ್ನೇ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಅವರು ಹೇಳಿದ್ದರಲ್ಲಿ ಸ್ವಾಮೀಜಿಗಳಿಗೆ ಅಪಮಾನಕರವಾದದ್ದೇನಿದೆ ಅಂತ ಎಷ್ಟೇ ತಲೆ ಕೆರೆದುಕೊಂಡರೂ ಹುಣ್ಣಾಯಿತೇ ಹೊರತು ಅರ್ಥವಾಗಲಿಲ್ಲ! ಈ ರಾಜ್ಯದಲ್ಲಿಂದು ಸ್ವಾಮೀಜಿಗಳ ಪ್ರಸ್ತಾಪವೇ ಮಾಡುವ ಹಾಗಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯನವರು ಮಾತಾಡಿದ ಕೆಲವೇ ನಿಮಿಷಗಳಲ್ಲಿ ನಮ್ಮ ಟಿವಿ ವಾಹಿನಿಗಳು ರಣಹದ್ದುಗಳಂತೆ ಮುಗಿಬಿದ್ದವು, ಸಿದ್ದರಾಮಯ್ಯರಿಂದ ಹಿಂದೂಗಳಿಗೆ, ಸ್ವಾಮೀಜಿಗಳಿಗೆ ಅಪಮಾನ, ಹಿಜಾಬ್ ಬೆಂಕಿಗೆ ಸಿದ್ದರಾಮಯ್ಯರಿಂದ ಪೆಟ್ರೋಲ್, ತುಪ್ಪ ಅಂತ ಅರಚಾಡಿದವು. ನಿರೀಕ್ಷೆಯಂತೆ ಹಿಂದೂಗಳ ಪ್ರತಿನಿಧಿಯಾಗಿ ಪ್ರಮೋದ್ ಮುತಾಲಿಕ್ ಥರದವರನ್ನು ಕರೆಸಿ ರಾಡಿ ಎಬ್ಬಿಸಿದರು. As a Hindu I feel deeply insulted to be represented by Pramod Muthalik and the likes. ಬಿಜೆಪಿಯ ಸಮಸ್ತ ನಾಯಕರೂ ಹಿಂದೂಗಳಿಗೆ ಆದ ಅಪಮಾನ ಎಂದು ಹುಯಿಲೆಬ್ಬಿಸಿದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಒಂದು ದಿನದ ಹಿಂದೆ ಹುಟ್ಟೂರು ಸಿದ್ದರಾಮಯ್ಯನ ಹುಂಡಿ ಜಾತ್ರೆಯಲ್ಲಿ ಮೈಮರೆತು ವೀರಮಕ್ಕಳ ಕುಣಿತ ಆಡುತ್ತಿದ್ದ ಸಿದ್ದರಾಮಯ್ಯ ಹಿಂದೂ ವಿರೋಧಿ ಆಗಿಬಿಟ್ಟರು! ಇನ್ನು ಇತ್ತ ಬ್ರಾಹ್ಮಣ್ಯ, ಹಿಂದುತ್ವದ ಮಾಧ್ಯಮಗಳು, ಬಿಜೆಪಿ ಅವರ ಮೇಲೆ ಕ್ರೂರ ದಾಳಿ ನಡೆಸಿದರೆ ಕಾಂಗ್ರೆಸ್ಸು ಅವರನ್ನು ಏಕಾಕಿ ಮಾಡಿಬಿಡ್ತು. ಸಿದ್ದರಾಮಯ್ಯನವರು ನೀಡುತ್ತಿರುವ ಸ್ಪಷ್ಟೀಕರಣ, ಅವರ ಬಾಡಿ ಲಾಂಗ್ವೇಜ್ ನೋಡಿ ನಿಜಕ್ಕೂ ಅಯ್ಯೋ ಎನಿಸಿತು. ಎಲ್ಲಿಗೆ ಬಂತು ಕರ್ನಾಟಕ? ಎಂದು ವಿಷಾದಿಸಿದ್ದಾರೆ.

ಇದನ್ನೂ ಓದಿರಿ: ಪ್ರತಿ ಭಾರತೀಯನೂ ನೋಡಬೇಕಾದ ಸಿನಿಮಾವಿದು: ನಟ ಕಿರಣ್‌ ವಿಡಿಯೊಕ್ಕೆ ಜನರು ಫಿದಾ

ಆದಿತ್ಯ ಭಾರದ್ವಾಜ್ ಅವರಂತೆಯೇ ಅನೇಕ ನಾಗರಿಕರು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ನಾಗರಾಜ್‌ ಮೂರ್ತಿಗೌಡ ಅವರು, “ಈ ಮಾಧ್ಯಮಗಳು ಕಳೆದ ಏಳು ವರ್ಷದಿಂದ ನಿರಂತರವಾಗಿ ಬಿಜೆಪಿ ಪರವಾಗಿ ಮತ್ತು ಸಿದ್ದರಾಮಯ್ಯರ ವಿರುದ್ದ ನಿರಂತರವಾಗಿ ಸುಳ್ಳುಗಳನ್ನು ಹೇಳುತ್ತಿವೆ. ಈ ಸುಳ್ಳುಗಳಿಂದ ಮಾಧ್ಯಮಗಳಿಗೆ ಹೊಟ್ಟೆ ತುಂಬಾ ಅನ್ನ ಸಿಗಬಹುದು ಆದ್ರೆ ಬಡ ಜನತೆಯ ಹೊಟ್ಟೆಗೆ ತಣ್ಣಿರು ಬಟ್ಟೆ ಅಷ್ಟೇ ಸಿಕ್ಕಿದೆ…” ಎಂದು ಟೀಕಿಸಿದ್ದಾರೆ.

“ಮಾಧ್ಯಮಗಳು ಮೊದಲಿನಿಂದಲೂ ಇವರು ವಿರುದ್ಧ ನಿರಂತರವಾಗಿ ಸುಳ್ಳುಗಳನ್ನ ಹೇಳಿ ಅಪಪ್ರಚಾರ ಮಾಡುತ್ತಿವೆ ಇದೇನು ಹೊಸತಲ್ಲ ಮುಂದೇಯೂ ಮಾಡುತ್ತವೆ ಆದ್ರೆ ಜನರು ಮಾಧ್ಯಮಗಳನ್ನು Boycott ಮಾಡಬೇಕು ಅಷ್ಟೇ” ಎಂದು ಅಭಿಪ್ರಾಯಪಟ್ಟಿದ್ದಾರೆ.

ರವಿಕುಮಾರ್‌ ನರಭೋಳಿ ಅವರು, “ವಿಷಯ ಇಷ್ಟೊಂದು ಗಂಭೀರತೆ ಪಡೆದುಕೊಳ್ಳುತ್ತಿರುವುದೇ ಕೆಲ ಮಾಧ್ಯಮದ ಅತಿರಂಜಕತೆಯ ವರದಿಗಳಿಂದಾಗಿ. ಟಿವಿಗಳಲ್ಲಿ ಹದಿನೈದು‌ ದಿನ ಸುದ್ದಿ ಪ್ರಸಾರವಾಗದೇ ಇದ್ದರೆ ವಾತಾವರಣ ತಾನಾಗೆ ತಿಳಿಯಾಗುತ್ತದೆ” ಎಂದಿದ್ದಾರೆ.

“ಒಬ್ಬ ಜನಪರ ಇರುವ ನಾಯಕನನ್ನ ಹೇಗೆಲ್ಲ ಅವಮಾನಿಸಿ ಅಪಪ್ರಚಾರ ಮಾಡಿ ಸೋಲಿಸಬಹುದು. ಅಷ್ಟನ್ನು ಕಳೆದ ಚುನಾವಣೆಯಲ್ಲಿ ಮಾಡಿವೆ. ಇದರಿಂದ ಸಿದ್ದರಾಮಯ್ಯರವರಿಗೆ ಒಂದು ಚೂರು ಅನ್ಯಾಯ ಆಗಿಲ್ಲ. ಅನ್ಯಾಯ ಆಗಿರೋದು ಈ ರಾಜ್ಯದ ಬಡವರಿಗೆ, ನಿರ್ಗತಿಕರಿಗೆ, ಧೀನ ದಲಿತರಿಗೆ ಮತ್ತು ರಾಜ್ಯದ ಒಟ್ಟಾರೆ ಬಡವರಿಗೆ. ರಾಜ್ಯ ಅಭಿವೃದ್ಧಿ ಬಗ್ಗೆ ಈ ಮಾಧ್ಯಮಗಳು ಒಂದು ದಿನಾನು ಚರ್ಚೆ ಮಾಡ್ತಿಲ್ಲ. ದಿನ ಬೆಳಾಗದರೆ ಹಿಜಾಬ್, ಧರ್ಮ, ಮಂದಿರ, ಮಸೀದಿ, ಚರ್ಚ್, ಮುಸ್ಲಿಂ, ಮಠ, ಮಠಾಧೀಶರ ಬಗ್ಗೆ ಚರ್ಚೆ ಮಾಡಿ ಜನರನ್ನ ದಿಕ್ಕು ತಪ್ಪಿಸಿ ರಾಜ್ಯ ಮತ್ತು ದೇಶವನ್ನ ಹಾಳು ಮಾಡುತ್ತಿವೆ” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿರಿಯ ಪತ್ರಕರ್ತ ಶಶಿಧರ್‌ ಭಟ್‌ ಅವರು, “ಮಠಾಧಿಪತಿಗಳು ತಲೆಯ ಮೇಲೆ ಬಟ್ಟೆ ಹಾಕಿ ಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದು ತಪ್ಪೆ? ಮುಸ್ಲಿಮರು ಕಪ್ಪು ಬಟ್ಟೆ ಹಿಜಾಬ್‌ಗೆ ಬಳಸಿದರೆ ಹಿಂದೂಗಳು ಕೇಸರಿ ಬಳಸುತ್ತಾರೆ ಎರಡೂ ಒಂದೇ ಅಲ್ಲವೆ? ಬಿಜೆಪಿ ಮಾಧ್ಯಮಗಳ ಪ್ರಕಾರ ಇದು ಘೋರ ಅಪರಾಧ! ಸಿದ್ದರಾಮಯ್ಯ ಅವರ ವಿರುದ್ಧ ತಿರುಗಿ ಬಿದ್ದ ಗೋದಿ ಮೀಡಿಯಾ.. ಬಿಜೆಪಿ ನಾಯಕರು ಕೆಲವು ಋಷಿಕುಮಾರ್ ಸ್ವಾಮಿಯಂತಹ ಸ್ವಾಮೀಜಿಗಳು” ಎಂಬ ಅಂಶಗಳನ್ನು ಒಳಗೊಂಡು ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಯುವ ಕಾಂಗ್ರೆಸ್ ಮುಖಂಡ ಸುನಿಲ್‌ ಬೋಸ್‌ ಈ ಕುರಿತು ವಿಸ್ತೃತವಾಗಿ ಬರೆದಿದ್ದಾರೆ. “ಸಿದ್ದರಾಮಯ್ಯನವರ ವಿಷಯದಲ್ಲಿ ಕೆಲವೊಂದು ಮಾಧ್ಯಮಗಳಿಗೆ ಸಮೂಹ ಸನ್ನಿ ಹಿಡಿದಿದೆ. ನಾನು ಸೂಕ್ಷ್ಮವಾಗಿ ಗ್ರಹಿಸಿದಂತೆ ಮಾಧ್ಯಮಗಳು ಬೆಲೆ ಏರಿಕೆ, ಲಾಕ್ ಡೌನ್ ಸಂಕಷ್ಟಗಳು ಇತ್ಯಾದಿಗಳಿಂದ ಜನ ಸಾಮಾನ್ಯರಿಗೆ ಸರ್ಕಾರದ ದುರಾಡಳಿತದಿಂದ ಆಗುತ್ತಿರುವ ತೊಂದರೆಗಳನ್ನು ಪ್ರಶ್ನಿಸದೇ ಸೀದಾ ಸಿದ್ದರಾಮಯ್ಯ ಅವರ ಬಳಿಗೆ ಬಂದು ತಮಗೆ ಬೇಕಾದ ಪ್ರಶ್ನೆಗಳನ್ನು ಕೇಳಿ, ಅದಕ್ಕೆ ಸಿದ್ದರಾಮಯ್ಯ ಅವರಿಂದ ಬರುವ ಉತ್ತರವನ್ನು ಅವರಿಗೆ ಬೇಕಾದಂತೆ ಬಳಸಿಕೊಳ್ಳುತ್ತಿರುವುದು ಅತ್ಯಂತ ಸ್ಪಷ್ಟವಾಗಿದೆ” ಎಂದಿದ್ದಾರೆ.

ಇದನ್ನೂ ಓದಿರಿ: ಹಿಂದೂ ದೇವಾಲಯಗಳ ಬಳಿ ಮುಸ್ಲಿಮರ ವ್ಯಾಪಾರಕ್ಕೆ ನಿಷೇಧ; ಕಾನೂನು ಏನು ಹೇಳುತ್ತದೆ?

“ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ/ಪ್ರಜಾಪ್ರಭುತ್ವದ ಕಾವಲುಗಾರ ಎಂದು ಹೇಳುತ್ತಾರೆ. ಆದರೆ ಇವರು ಕಾಂಗ್ರೆಸ್ ನವರನ್ನು ಕೇಳುವ ಪ್ರಶ್ನೆಗಳನ್ನು ಗಮನಿಸಿದರೆ ಇವರು ಮಾಧ್ಯಮ ಕಚೇರಿಗಳಿಂದ ಬರುತ್ತಾರೋ ಇಲ್ಲವೇ ಬಿಜೆಪಿ ಕಚೇರಿಯಿಂದ ಬರುತ್ತಾರೋ ಎಂದು ಗೊಂದಲವಾಗುತ್ತಿದೆ” ಎಂದು ವ್ಯಂಗ್ಯವಾಡಿದ್ದಾರೆ.

“2018ರ ಸಂದರ್ಭದಲ್ಲಿ ಉತ್ತಮ ಆಡಳಿತಕ್ಕೆ ವಿರುದ್ಧವಾಗಿ ಧರ್ಮದ ಹೆಸರಲ್ಲಿ ದೊಡ್ಡ ಮಟ್ಟದ ಅಪ ಪ್ರಚಾರ ನಡೆಸುವಾಗಲೂ ಅವರಿಗೆ ಯಾವುದೇ ರೀತಿಯಲ್ಲಿ ಅಡೆ ತಡೆ ಉಂಟು ಮಾಡದೇ ಮಾಧ್ಯಮ ಸ್ವಾತಂತ್ರ್ಯ ಗೌರವಿಸಲಾಗಿತ್ತು. ಒಂದು ವೇಳೆ ನಮಗೆ ಮಾಡಿದಂತೆ ಈಗಿ‌ನ ಬಿಜೆಪಿಯ ಸರ್ವಾಧಿಕಾರಿ ಮನಸ್ಥಿತಿಯ ಪರಿಸ್ಥಿತಿಯಲ್ಲಿ ಮಾಧ್ಯಮಗಳು ಅವರ ವಿರುದ್ಧ ದನಿ ಎತ್ತಿದರೆ ಮಾಧ್ಯಮಗಳಿಗೆ ಉಳಿಗಾಲ ಉಂಟೇ?” ಎಂದು ಪ್ರಶ್ನಿಸಿದ್ದಾರೆ.

ಇದೇ ರೀತಿಯ ಹಲವಾರು ಬರಹಗಳು, ಕಟು ಟೀಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಮಾಧ್ಯಮಗಳು ವಿರೋಧ ಪಕ್ಷದ ವಿರೋಧ ಪಕ್ಷಗಳಂತೆ ವರ್ತಿಸುತ್ತಿರುವುದನ್ನು ಜನರು ಗುರುತಿಸುತ್ತಿದ್ದಾರೆ.


ಇದನ್ನೂ ಓದಿರಿ: ಸಾಂವಿಧಾನಿಕ ಜವಾಬ್ದಾರಿ ಮರೆತ ಮಾಧ್ಯಮಗಳು: ಎಚ್‌.ಸಿ.ಮಹದೇವಪ್ಪ ಛಡಿಯೇಟು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...