ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯಿಂದಾಗಿ ತಮ್ಮ ಕಂಪನಿಗಳನ್ನು ಕರ್ನಾಟಕದಿಂದ ತಮಿಳುನಾಡಿಗೆ ಬದಲಾಯಿಸಲು ಬಯಸುವ ಉದ್ಯೋಗದಾತರಿಗೆ ತಾವು ಅವಕಾಶ ಕಲ್ಪಿಸಲು ಕೆಲಸ ಮಾಡುವುದಾಗಿ ತಮಿಳುನಾಡು ವಿತ್ತ ಸಚಿವ ಪಳನಿವೇಲ್ ತ್ಯಾಗರಾಜನ್ ಅವರು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಆಕ್ರಮಣಕಾರಿ ಹಿಂದುತ್ವ ರೂಪುಗೊಳ್ಳುವುದು ತುಂಬಾ ತ್ರಾಸದಾಯಕವಾಗಿದೆ ಎಂದು ಹೇಳಿರುವ ಅವರು, “ರಾಜ್ಯವು 100 ವರ್ಷಗಳ ಹಿಂದೆಯೆ ಧರ್ಮಗಳನ್ನು ಪ್ರಜಾಪ್ರಭುತ್ವಗೊಳಿಸಿದ್ದು, ಅದರ ಮೌಲ್ಯಗಳಿಗೆ ಯಾವುದೇ ರೀತಿಯ ಮೂಲಭೂತವಾದಗಳು ಅಡ್ಡಿಪಡಿಸಲು ಸಾಧ್ಯವಿಲ್ಲ” ರಾಜ್ಯವು 100 ವರ್ಷಗಳ ಹಿಂದೆಯೆ ತನ್ನ ನಂಬಿಕೆಯನ್ನು ಪ್ರಜಾಪ್ರಭುತ್ವಗೊಳಿಸಿದ್ದು, ಅದರ ಮೌಲ್ಯಗಳಿಗೆ ಯಾವುದೇ ರೀತಿಯ ಮೂಲಭೂತವಾದಗಳು ಅಡ್ಡಿಪಡಿಸಲು ಸಾಧ್ಯವಿಲ್ಲಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನೇತೃತ್ವದಲ್ಲಿ ಡಿಎಂಕೆ ನಾಯಕರು ವಿಶ್ವದೆಲ್ಲೆಡೆಯಿಂದ ರಾಜ್ಯಕ್ಕೆ ಬಂಡವಾಳವನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
ಇತ್ತೀಚಿನ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ತ್ಯಾಗರಾಜನ್ ಅವರು, ಸರಕು ಮತ್ತು ಸೇವಾ ತೆರಿಗೆಯ ದೋಷಯುಕ್ತ ಅನುಷ್ಠಾನ ಮತ್ತು ಸಂಸ್ಥೆಗಳ ಮೇಲೆ ಒಕ್ಕೂಟ ಸರ್ಕಾರದ ಹೆಚ್ಚುತ್ತಿರುವ ನಿಯಂತ್ರಣದ ಕುರಿತು ಕಳವಳ ವ್ಯಕ್ತಪಡಿಸಿದ್ದಾಗಿ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೋಮು ದ್ವೇಷ ಹೆಚ್ಚುತ್ತಿರುವ ಹಿನ್ನಲೆ: ರಾಜ್ಯ ಮಟ್ಟದ ಸೌಹಾರ್ದ ಸಮಾವೇಶಕ್ಕೆ ಸಜ್ಜಾಗುತ್ತಿರುವ ಉಡುಪಿ!
“ಒಕ್ಕೂಟ ಸರ್ಕಾರದ ಈ ನಡೆ ದೇಶದಲ್ಲಿ ಭೀಕರ ಪರಿಣಾಮಗಳಿಗೆ ಕಾರಣವಾಗಬಹುದು” ಎಂದು ತ್ಯಾಗರಾಜನ್ ಎಚ್ಚರಿಸಿದ್ದು, “ತಮಿಳುನಾಡು ಸರ್ಕಾರವು ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಮೇಲೆ ನಿಗಾ ಇರಿಸಿದೆ. ಪ್ರತಿ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ” ಎಂದು ಹೇಳಿದ್ದಾರೆ.
“ತಮಿಳುನಾಡನ್ನು ವೈವಿಧ್ಯಗೊಳಿಸಲು ಬಯಸುವ ಐಟಿ ಕಂಪನಿಗಳು ಬೃಹತ್ ಆಸಕ್ತಿಯಿಂದ ಇದೆ. ಜೊತೆಗೆ ನಾವು ಕೂಡಾ ಈಗಾಗಲೇ ರೇಸ್ನಲ್ಲಿದ್ದೇವೆ. ಇಂತಹ ಕಂಪೆನಿಗಳನ್ನು ಸಕ್ರಿಯವಾಗಿ ಬೆಳೆಸುವ ಜನರು ನಮ್ಮೊಂದಿಗೆ ಇದ್ದಾರೆ. ನಮ್ಮ ಸರ್ಕಾರವು ಈ ಬಗ್ಗೆ ಕೆಲಸ ಮಾಡುತ್ತಿದೆ” ಎಂದು ಅವರು ಹೇಳಿದ್ದಾರೆ.
ತಮಿಳುನಾಡು ಹೂಡಿಕೆಯಲ್ಲಿ 53% ರಷ್ಟು ಏರಿಕೆ ಕಂಡಿದೆ. ಹಣಕಾಸು ಹೂಡಿಕೆದಾರರು ಮತ್ತು ಕಾರ್ಪೊರೇಟ್ಗಳನ್ನು ಆಕರ್ಷಿಸಲು ರಾಜ್ಯ ಸರ್ಕಾರವು ಮುಂದಿನ ಆರು ತಿಂಗಳೊಳಗೆ ವಿವಿಧ ದೇಶಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದ ಸ್ಟಾಲಿನ್ ಅವರು, ಇತ್ತೀಚೆಗೆ ವಾಣಿಜ್ಯ ಮುಖ್ಯಸ್ಥರನ್ನು ಭೇಟಿ ಮಾಡಲು ದುಬೈಗೆ ಭೇಟಿ ನೀಡಿದ್ದರು. 6,100 ಕೋಟಿ ರೂಪಾಯಿ ಮೌಲ್ಯದ ಒಪ್ಪಂದ ಪತ್ರಗಳಿಗೆ ಸಹಿ ಹಾಕಲಾಗಿದ್ದು, ಇದರಿಂದಾಗಿ ತಮಿಳುನಾಡಿನಲ್ಲಿ 14,000 ಉದ್ಯೋಗಳು ಸೃಷ್ಟಿಯಾಗಲಿದೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.
ತಮಿಳುನಾಡಿನಲ್ಲಿ ಬಿಜೆಪಿ ಆಕ್ರಮಣಕಾರಿ ರಾಜಕೀಯಕ್ಕೆ ಪ್ರಯತ್ನಿಸುತ್ತಿದೆ. ಆದರೆ ಸಚಿವ ತ್ಯಾಗರಾಜನ್ ಅವರು ಹಿಂದುತ್ವದ ವಿಸ್ತರಣೆಗೆ ತಮಿಳುನಾಡು ದೊಡ್ಡ ಸವಾಲನ್ನು ಒಡ್ಡುತ್ತದೆ ಎಂದು ಹೇಳಿದ್ದಾರೆ.
“ತಮಿಳುನಾಡಿನಲ್ಲಿ ಹಿಂದುತ್ವ ಬೆಳೆದರೆ, ಅದು ನಮ್ಮ ಜಾತ್ಯತೀತ ಪ್ರಜಾಪ್ರಭುತ್ವಕ್ಕೆ ಅಂತಿಮ ಮೊಳೆಯಾಗುತ್ತದೆ. ಈ ರೀತಿಯ ಪರಿಸ್ಥಿತಿ ರಾಜ್ಯದಲ್ಲಿ ಎಂದಿಗೂ ಸಂಭವಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ. ತಮಿಳುನಾಡು ದೇಶದಲ್ಲೇ ಅತ್ಯಂತ ಶ್ರದ್ಧಾಭಕ್ತಿಯ ರಾಜ್ಯವಾಗಿದ್ದು, ಹಿಂದುತ್ವದ ಕಾರಣದಿಂದಲ್ಲ. ನಾವು ಬಹಳ ಹಿಂದೆಯೇ ಧರ್ಮವನ್ನು ಪ್ರಜಾಪ್ರಭುತ್ವಗೊಳಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
“ಇಲ್ಲಿನ ದೇವಸ್ಥಾನಗಳಲ್ಲಿ ಯಾರು ಬೇಕಾದರೂ ಟ್ರಸ್ಟಿ ಆಗಬಹುದು, ಯಾರು ಬೇಕಾದರೂ ದೇವಸ್ಥಾನ ಕಟ್ಟಬಹುದು ಮತ್ತು ಅದನ್ನು ನೋಡಿಕೊಳ್ಳಬಹುದು. ನಾವು ನೂರು ವರ್ಷಗಳ ಹಿಂದೆ ಇಂತಹ ಸಮಸ್ಯೆಗಳನ್ನು ಪರಿಹರಿಸಿದ್ದೇವೆ. ಇತ್ತೀಚಿನ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ಪ್ರಕಾರ ನಮ್ಮ ಸಂಸ್ಕೃತಿ 3,000 ವರ್ಷಗಳಷ್ಟು ಹಳೆಯದು. ನಾವು ಯಾವಾಗಲೂ ಯಾವುದೇ ರೀತಿಯ ಮೂಲಭೂತವಾದದಿಂದ ದೂರವಿದ್ದೇವೆ” ಎಂದು ತ್ಯಾಗರಾಜನ್ ಹೇಳಿದ್ದಾರೆ.
ಕೆಟ್ಟ ನೀತಿಗಳು ದೇಶದ ಮೇಲೆ ಶಾಶ್ವತವಾದ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದ ಅವರು, ಟರ್ಕಿ ಮತ್ತು ಶ್ರೀಲಂಕಾದಂತಹ ದೇಶಗಳು ಅವುಗಳ ತೀವ್ರತೆಯನ್ನು ಎದುರಿಸಿದ್ದು, ಇದು ಇತರರು ಕಲಿಯುವಂತಹ ಉದಾಹರಣೆಗಳಾಗಿವೆ ಎಂದು ತ್ಯಾಗರಾಜನ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಸಮಾಜದಲ್ಲಿ ಕಲಹ ಸೃಷ್ಟಿಸುವವರು ಸ್ವಾಮೀಜಿ ಎನಿಸಿಕೊಳ್ಳಲು ಸಾಧ್ಯವಿಲ್ಲ: ಗದುಗಿನ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಅಭಿಮತ


