Homeಕರ್ನಾಟಕಸುಳ್ಳು ಜಾತಿ ಪ್ರಮಾಣ ಪತ್ರ: ಶಿಕ್ಷಿಸಲು ಪ್ರತ್ಯೇಕ ಕಾಯ್ದೆಯಾಗಲಿ

ಸುಳ್ಳು ಜಾತಿ ಪ್ರಮಾಣ ಪತ್ರ: ಶಿಕ್ಷಿಸಲು ಪ್ರತ್ಯೇಕ ಕಾಯ್ದೆಯಾಗಲಿ

- Advertisement -
- Advertisement -

ಶಾಸಕ ರೇಣುಕಾಚಾರ್ಯ ಮಗಳು ಹಾಗೂ ಅವರ ತಮ್ಮನ ಮಕ್ಕಳು ಬೇಡ ಜಂಗಮ ಎಂದು ಸುಳ್ಳು ಜಾತಿ ದಾಖಲಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಮೂಲಕ ಸಂವಿಧಾನಬದ್ಧ ಸಾಮಾಜಿಕ ನ್ಯಾಯವನ್ನು ಜಾರಿಗೊಳಿಸಿ ಖಾತ್ರಿಪಡಿಸಿಕೊಳ್ಳಬೇಕಾದ ಶಾಸಕರೇ ಅನ್ಯಾಯಕ್ಕಿಳಿದಿರುವುದು ಹಾಗೂ ಕಾನೂನು ವಿರೋಧಿ ಕಾರ್ಯವೆಸಗಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಕೃತ್ಯ ಅಪರಾಧವೆಂಬುದರಲ್ಲಿ ಎರಡು ಮಾತಿಲ್ಲ.

ಶಾಸಕರು ಆ ಜಾತಿಪ್ರಮಾಣ ಪತ್ರದಿಂದ ಯಾವುದೇ ಸವಲತ್ತು ಪಡೆದಿಲ್ಲವೆಂದು ಸಮಜಾಯಿಷಿ ನೀಡಿದ್ದರೂ ಅಕ್ರಮವೆಸಗಿರುವುದಂತು ಸಾಬೀತಾಗಿದೆ. ಸಾಮಾನ್ಯ ಜನತೆಗೆ ಸಾವಿರ ದಾಖಲೆ ಕೇಳುವ ತಾಲ್ಲೂಕು ಆಡಳಿತ ಅಧಿಕಾರಿ ಶಾಸಕರ ಕುಟುಂಬಕ್ಕೆ ಸುಳ್ಳು ಜಾತಿಪ್ರಮಾಣ ಪತ್ರ ನೀಡಿರುವುದು ಶಿಕ್ಷಾರ್ಹ ಅಪರಾಧವಾಗಿದೆ.

ಎಸ್ಸಿ, ಎಸ್ಟಿ ಮತ್ತು ಒಬಿಸಿಗಳ ಜಾತಿಯನ್ನು ಹೇಳಿಕೊಂಡು ಸುಳ್ಳು ಜಾತಿಪ್ರಮಾಣ ಪತ್ರ ಪಡೆಯುವುದು ಇದೇ ಮೊದಲಲ್ಲ. ಸ್ವತಂತ್ರ ಭಾರತದ ಆರಂಭಿಕ ಕಾಲದಿಂದಲೂ ಈ ಹಾವಳಿ ಹೆಚ್ಚುತ್ತಲೇ ಬಂದಿದೆ. 2018ರಲ್ಲಿ ಇಂತಹುದೇ ಕೃತ್ಯವೆಸಗಿದ ನಾಲ್ವರನ್ನು ಕರ್ನಾಟಕ ಸರ್ಕಾರ ಅಮಾನತು ಮಾಡಿತ್ತು. ಆದರೆ ಈ ಅಪರಾಧಕ್ಕೆ ಸರಿಯಾದ ಕಾನೂನಿನ ನಿರ್ಬಂಧ ಇಲ್ಲದಿರುವ ಕಾರಣ ಇಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ಎಲ್ಲರಿಗೂ ಎದ್ದು ಕಾಣುವ ಶಾಸಕನ ಮಗಳೇ ಈ ಕೆಲಸ ಮಾಡಿರುವಾಗ ಕಾನೂನು ಅದೆಷ್ಟು ಸಡಿಲವಾಗಿದೆ ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ.

2015ರಲ್ಲಿ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗ ಸುಳ್ಳು ಜಾತಿಪ್ರಮಾಣ ಪತ್ರದ ಬಗೆಗಿನ 6 ಲಕ್ಷ ದೂರುಗಳನ್ನು ಸ್ವೀಕರಿಸಿತ್ತು. ಹಿಂದೆ ಸುಪ್ರೀಂಕೋರ್ಟ್‌ನಲ್ಲಿ 50 ಸಾವಿರ ಪ್ರಕರಣಗಳ ಬಗ್ಗೆ ಪ್ರಸ್ತಾಪವಾಗಿತ್ತು. ರಾಜ್ಯಸಭೆಯಲ್ಲಿಯೂ ಇಂತಹುದೇ 1000 ಪ್ರಕರಣಗಳು ಸದ್ದು ಮಾಡಿದ್ದವು. 2020ರಲ್ಲಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯವು ಸುಮಾರು 591 ಸುಳ್ಳು ಜಾತಿಪ್ರಮಾಣ ಪತ್ರಗಳ ಬಗ್ಗೆ ದೂರುಗಳನ್ನು ಪಡೆದಿತ್ತು.

ಅಷ್ಟೂ ಪ್ರಕರಣಗಳಲ್ಲಿ ಮೇಲ್ಜಾತಿಗಳವರು ಪರಿಶಿಷ್ಟರ ಹಾಗೂ ಹಿಂದುಳಿದ ಜಾತಿಗಳ ಪ್ರಮಾಣಪತ್ರ ಪಡೆದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಉದ್ಯೋಗವನ್ನು ಪಡೆದಿದ್ದರು. ಆಶ್ಚರ್ಯವೆಂದರೆ ಅವರಲ್ಲಿನ ಹೆಚ್ಚಿನವರು ಶಿಕ್ಷಣ ಹಾಗೂ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಿಗಳಾಗಿದ್ದರು. ಜೊತೆಗೆ ವಿದ್ಯಾರ್ಥಿವೇತನ ಹಾಗೂ ದಲಿತರ, ಹಿಂದುಳಿದ ಜಾತಿಗಳ ಭೂಮಿ ಪಡೆಯಲೂ ಬಳಸಿಕೊಂಡಿದ್ದರು. ಈ ಪ್ರಕರಣ ವಿಚಾರಣೆಗೆ ಬರುವಷ್ಟರಲ್ಲಿ 12 ಉದ್ಯೋಗಿಗಳು ನಿವೃತ್ತಿಯನ್ನೂ ಹೊಂದಿದ್ದರು. ಹಲವರ ಮೇಲೆ ಪ್ರಕರಣ ದಾಖಲಿಸಲಾಯಿತಾದರೂ ಯಾರನ್ನೂ ಸೇವೆಯಿಂದ ವಜಾಗೊಳಿಸಿದ್ದು ಕಂಡುಬರಲಿಲ್ಲ. ಸಂಬಂಧಪಟ್ಟ ತಹಸಿಲ್ದಾರ್ ಹಾಗೂ ಉದ್ಯೋಗಿಗಳ ನಡುವಿನ ಒಳಒಪ್ಪಂದಗಳು ಹಾಗೂ ಸರ್ಕಾರದ ಬೇಜವಾಬ್ದಾರಿತನದಿಂದ ನ್ಯಾಯ ನೇಣಿಗೇರಿತು.

ಇಂದು ರಾಷ್ಟ್ರೀಯ ಹಾಗೂ ರಾಜ್ಯ ಪರಿಶಿಷ್ಟರ ಆಯೋಗಗಳು, ವಿವಿಧ ರಾಜ್ಯಗಳ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮುಂದೆ ರಾಶಿಗಟ್ಟಲೆ ಸುಳ್ಳು ಜಾತಿಪ್ರಮಾಣ ಪತ್ರ ಪಡೆದ ಪ್ರಕರಣಗಳು ಬಿದ್ದಿವೆ. ಭಾರತದಾದ್ಯಂತ ಇಂತಹ ಕೋಟಿಗಟ್ಟಲೆ ಪ್ರಕರಣಗಳು ಕಂಡುಬರುತ್ತಿವೆ. ಆದರೆ ಸರ್ಕಾರ ಇದಕ್ಕೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ.

ಶಾಸಕನೇ ಇಂತಹ ಕೆಲಸ ಮಾಡಿರುವುದು ಸರ್ಕಾರದ ಮೇಲಿನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ತನ್ನ ಘನತೆಯನ್ನು ಉಳಿಸಿಕೊಳ್ಳಲು ಸರ್ಕಾರ ಈ ಕೂಡಲೇ ಶಾಸಕರನ್ನು ಹಾಗೂ ಸಂಬಂಧಪಟ್ಟ ತಹಸೀಲ್ದಾರರನ್ನು ಅಮಾನತುಗೊಳಿಸಬೇಕಿದೆ. ಬಹುಮುಖ್ಯವಾಗಿ ಇದೇ ಜನವರಿಯಲ್ಲಿ ಕರ್ನಾಟಕ ಹೈಕೋರ್ಟ್ ಅಟ್ರಾಸಿಟಿ ಕಾಯ್ದೆಯನ್ವಯ ಶಿಕ್ಷೆ ನೀಡಲು ಸಾಧ್ಯಲ್ಲವೆಂದು ತೀರ್ಪಿತ್ತಿರುವುದರಿಂದ ಅಟ್ರಾಸಿಟಿ ಕಾಯ್ದೆಯನ್ನು ತಿದ್ದುಪಡಿ ಮಾಡಲು ಒಕ್ಕೂಟ ಸರ್ಕಾರಕ್ಕೆ ಮನವಿ ಸಲ್ಲಿಸಿ ತಿದ್ದುಪಡಿಯಾಗುವವರೆಗೆ ಸುಳ್ಳು ಜಾತಿಪ್ರಮಾಣ ಪತ್ರದ ಅನ್ಯಾಯ ತಡೆಯಲು ಈ ಕೂಡಲೇ ಸುಗ್ರೀವಾಜ್ಞೆಯ ಮೂಲಕ ಕಾಯ್ದೆಯೊಂದನ್ನು ಜಾರಿಗೊಳಿಸಬೇಕಿದೆ. ಬಡವರ ತಟ್ಟೆಗೂ ಕೈ ಹಾಕುವ ಮೋಸಗಾರರಿಗೆ ತಕ್ಕ ಶಿಕ್ಷೆ ವಿಧಿಸಬೇಕಿದೆ.

ಸಿದ್ಧಾರ್ಥ ಎಂ.
ಸಾಮಾಜಿಕ ಕಾರ್ಯಕರ್ತರು


ಇದನ್ನೂ ಓದಿ: ನಕಲಿ ಜಾತಿ ಸರ್ಟಿಫಿಕೇಟ್‌: ಬಿಜೆಪಿ ಶಾಸಕ ರೇಣುಕಾಚಾರ್ಯ ಸಹೋದರನ ವಿರುದ್ಧ ಎಫ್‌ಐಆ‌‌ರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ತಾಯಿ ಲಿಂಗಾಯತ ಆಗಿದ್ದರೂ ಮಕ್ಕಳು ದಲಿತ ಗಂಡನಿಗೆ ಹುಟ್ಟಿದ್ದರೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದ್ದರೆ ಸಿಂಧುತ್ವಕ್ಕೆ ಅಡ್ಡಿಯಿಲ್ಲ ಎಂದೆನಿಸುತ್ತದೆ. ನನ್ನ ಅಭಿಪ್ರಾಯ.

  2. ತಾಯಿ ಲಿಂಗಾಯತ ಆಗಿದ್ದರೂ ಮಕ್ಕಳು ದಲಿತ ಗಂಡನಿಗೆ ಹುಟ್ಟಿದ್ದರೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿದ್ದರೆ ಸಿಂಧುತ್ವಕ್ಕೆ ಅಡ್ಡಿಯಿಲ್ಲ ಎಂದೆನಿಸುತ್ತದೆ. ಇದು ನನ್ನ ಅಭಿಪ್ರಾಯ. ಕಾನೂನು ಏನು ಹೇಳುತ್ತೋ ಗೊತ್ತಿಲ್ಲ.

  3. ಈ ದೇಶದ ಸಂವಿಧಾನದ ಮೂಲವೇ  ಬ್ರಿಟಿಷ್ ರ Govt. of India Act 1935. ಅದರ ಪೂರ್ವದ 1921 ರ ಹೈದರಾಬಾದ್ ನಿಜಾಮರ Depressed Class ಪಟ್ಟಿಯಲ್ಲಿ Jangam ಬರುತ್ತದೆ. 1936 ರ ಭಂಡಾರ ಜಿಲ್ಲೆಗೆ ಸಂಬಂಧಿಸಿದಂತೆ Schedule Caste ಪಟ್ಟಿಯಲ್ಲೂ ಜಂಗಮ ಜಾತಿ ಇರುತ್ತದೆ. ಮರಾಠರ ಆಳ್ವಿಕೆಯಲ್ಲಿ ಮುಂಬೈ ಕರ್ನಾಟಕದ ಪ್ರದೇಶಗಳೂ ಸೇರಿದಂತೆ ಜಂಗಮ ಜಾತಿಯು Beggers ಪಟ್ಟಿಯಲ್ಲಿ, ಮೈಸೂರು ಸಂಸ್ಥಾನದಲ್ಲಿ Inferior Religious Mendicants ಪಟ್ಟಿಯಲ್ಲೂ ಜಂಗಮ ಜಾತಿ ಗುರ್ತಿಸಲ್ಪಟ್ಟಿದೆ. ಜಂಗಮರು ಯಾರು ಎಂಬುದು ಬ್ರಿಟಿಷ್ ಚಿಂತಕ C.P. Brown ಇವರ ಗ್ರಂಥದಲ್ಲಿ ವಿವರಿಸಲ್ಪಟ್ಟಿದೆ. ಇದೆಲ್ಲವೂ ಸ್ವತಂತ್ರ ಪೂರ್ವ ದಾಖಲೆಗಳು. ಇವು ಪ್ರಮಾಣೀಕೃತ ಎಂದು ಮಾನ್ಯ ಸರ್ವೋಚ್ಚ ನ್ಯಾಯಾಲಯ ಹಲವು ತೀರ್ಪುಗಳಲ್ಲಿ ವಿವರಿಸಿದೆ. “Pre-independent Documents are more reliable and they have got Probative Value”  ಎಂದಿದೆ. ಸರ್ಕಾರದ ಈವರೆಗಿನ ಎಲ್ಲ ಸುತ್ತೋಲೆಗಳು ವೀರಶೈವ ಜಂಗಮರೇ ಬೇಡಜಂಗಮರು ಎನ್ನುತ್ತವೆ. ಸೂರ್ಯನಾಥ ಕಾಮತರ ಅಧ್ಯಯನ ವರದಿ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷ್ಯವಾಗಿದೆ.

    ಜಂಗಮರು ಬೇಡಜಂಗಮರಲ್ಲದಿದ್ದರೆ, ಜಂಗಮ ಜಾತಿಯನ್ನು ಕೇಂದ್ರದ OBC ಮತ್ತು ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿಕೊಡಲು ಸಂವಿಧಾನದ ಸದಾಶಯ ಜಾರಿ ವಿರೋಧಿಗಳು ಕ್ರಮವಹಿಸಬೇಕು.

    Article 147 ಅನುಸಾರ ಪ್ರಸ್ತುತ ಸಂವಿಧಾನದ ಜಾರಿಯ ತೊಂದರೆಯಲ್ಲಿ , ಅನುಸರಿಸಲು ದಾರಿ ತೋರಿದೆ. ಅದನ್ನು ಗ್ರಹಿಸಿ.

    ಜಂಗಮ ತನ್ನ ಹಕ್ಕುಗಳಿಂದ ವಂಚಿತನಾಗಿದ್ದು, ಯಾರ ಹಕ್ಕನ್ನೂ ಕಸಿಯುವ ಪ್ರಶ್ನೆ ಉದ್ಭವಿಸಿಯೇ ಇಲ್ಲ.

    ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದಲ್ಲಿ, ಕೇಂದ್ರವು ರಾಜ್ಯಕ್ಕೆ ಪ್ರತಿಕ್ರಿಯಿಸಲು ನಿರ್ದೇಶನ ನೀಡಿದರೂ, 6-7 ತಿಂಗಳಿನಿಂದ ರಾಜ್ಯ ಕೇಂದ್ರಕ್ಕೇ ಪ್ರತಿಕ್ರಿಯಿಸಿಲ್ಲ. ಇನ್ನು ಸಾಮಾನ್ಯರಿಗೆ ಏನು ಉತ್ತರ ಕೊಡುತ್ತಾರೆ..!?

    ಪರಿಶಿಷ್ಟ ಜಾತಿ ಪಟ್ಟಿ ಅನುಸೂಚಿತ ಜಾತಿಗಳ ಪಟ್ಟಿ ಮಾತ್ರವಾಗಿದ್ದು, ಅದಕ್ಕೆ ವಿಪರೀತ ಅರ್ಥವನ್ನು ಮಾನ್ಯ ಸಂವಿಧಾನ ಕೊಟ್ಟಿರುವುದಿಲ್ಲ.

    ಜಂಗಮರು, ಬೇಡಜಂಗಮರಲ್ಲ ಎಂದು ಮಾನ್ಯ ಸುಪ್ರೀಂ ಮುಂದೆ ಹೋಗಿ ವಾದ ಮಂಡಿಸಿದರೆ, ಸುಲಭದಲ್ಲಿ ಸಮಸ್ಯೆ ಪರಿಹಾರವಾಗಬಹುದಲ್ಲವೇ..!?

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...