Homeಮುಖಪುಟ'ದಕ್ಷಿಣದ ಸಿನಿಮಾಗಳೆಂದರೆ ಕೇವಲ KGF, RRR, ಪುಷ್ಪ ಅಷ್ಟೇ ಅಲ್ಲ' ಎಂದು ಬಾಲಿವುಡ್‌ಗೆ ಮನವರಿಕೆ...

‘ದಕ್ಷಿಣದ ಸಿನಿಮಾಗಳೆಂದರೆ ಕೇವಲ KGF, RRR, ಪುಷ್ಪ ಅಷ್ಟೇ ಅಲ್ಲ’ ಎಂದು ಬಾಲಿವುಡ್‌ಗೆ ಮನವರಿಕೆ ಮಾಡುವಲ್ಲಿ‌ ನಾವು ಸೋತೆವೆ?

- Advertisement -
- Advertisement -

‘ಪುಷ್ಪ’, ‘ಆರ್‌‌ಆರ್‌‌ಆರ್’, ‘ಕೆಜಿಎಫ್- 2’ ಸಿನಿಮಾಗಳ ಯಶಸ್ಸಿನ ಹಿನ್ನೆಲೆಯಲ್ಲಿ ಬಾಲಿವುಡ್ ಮಂದಿ ಒತ್ತಡಕ್ಕೊಳಗಾಗಿದ್ದಾರೆಂಬ ಚರ್ಚೆ ನಡೆಯುತ್ತಿದೆ‌. ‘ಹಿಂದಿ ರಾಷ್ಟ್ರೀಯ ಭಾಷೆ’ ಎಂಬ ಹೇಳಿಕೆಗಳನ್ನು ನೋಡಿದರೆ ಬಾಲಿವುಡ್ ತಾರೆಗಳು ಭಯಗೊಂಡಿರುವುದು ನಿಜವೂ ಅನಿಸುತ್ತಿದೆ. ಇದೆಲ್ಲದರ ಹೊರತಾಗಿ ಯಶಸ್ವಿ ಸಿನಿಮಾವೆಂದರೆ ಏನೆಂದು ನಾವು ಕೇಳಿಕೊಳ್ಳುವ ಅಗತ್ಯವೂ ಇದೆ. ‘ಪ್ಯಾನ್‌ ಇಂಡಿಯಾ’ ಹಾಗೂ ‘ಹಣ ಗಳಿಕೆ’ಯ ಮಾನದಂಡಗಳಾಚೆಯ ಯಶಸ್ಸುಗಳನ್ನೂ ಮನಗಾಣಬೇಕಿದೆ.

ಬಾಲಿವುಡ್‌ಗೆ ದಕ್ಷಿಣದ ಸಿನಿಮಾಗಳು ಸೆಡ್ಡು ಹೊಡೆದಿವೆ ಎಂಬ ಚರ್ಚೆಗೆ ಬಳಕೆಯಾಗುತ್ತಿರುವ ಈ ಮೂರೂ ಸಿನಿಮಾಗಳು ಏನನ್ನು ಹೇಳಲು ಹೊರಟಿವೆ? ಇವುಗಳ ಯಶಸ್ಸು ಪ್ರತಿನಿಧಿಸುತ್ತಿರುವುದೇನೂ ಎಂಬುದೂ ಮುಖ್ಯವಲ್ಲವೆ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಪುಷ್ಪ’ ಮಾಫಿಯಾಗಳು ಮೇಲುಗೈ ಸಾಧಿಸುವ ಕಥೆಯುಳ್ಳ ಸಿನಿಮಾ, ಹಿಂದುತ್ವವನ್ನು ಜನರ ತಲೆಯೊಳಗೆ ತರುಕಲು ಯತ್ನಿಸಿರುವ ಸಿನಿಮಾ ‘ಆರ್‌ಆರ್‌ಆರ್‌’, ಬಿಲ್ಡಪ್ ಹಾಗೂ ಹೆಣ್ಣನ್ನು ಸರಕು ಎಂಬಂತೆ ಚಿತ್ರಿಸಿದ ಸಿನಿಮಾ ಕೆಜಿಎಫ್‌. ಇಂಥವುಗಳಿಗೆ ಭಾರೀ ಹಣ ತೆತ್ತು ಸಿನಿಮಾ ನೋಡಿದ ಪ್ರೇಕ್ಷಕ ಬಯಸಿದ್ದಾದರೂ ಏನು? ಇವುಗಳನ್ನೆಲ್ಲ ‘ಮನರಂಜನೆ’ ಎನ್ನಲು ಸಾಧ್ಯವೇ? ಇಂತಹ ಸಿನಿಮಾಗಳು ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ತಲುಪಿದರೆ ಮುಂಬರುವ ಪ್ರಯೋಗಗಳು ಹೇಗಿರುತ್ತವೆ? ಈ ಮೂರು ಸಿನಿಮಾಗಳಾಚೆಗೆ ದಕ್ಷಿಣ ಭಾರತದ ಚಿತ್ರರಂಗ ಹಿಡಿದಿರುವ ಹೊಸತನದ ಹಾದಿ ಮಸುಕಾಗಿ ಮತ್ತದೇ ಸವಕಲು ಮಾದರಿಗೆ ನಾವು ಹೊರಳುತ್ತೇವೆಯೇ?

ದಕ್ಷಿಣ ಭಾರತದತ್ತ ಬಾಲಿವುಡ್ ತಿರುಗಿ ನೋಡಲೇಬೇಕಾದ ಸಾಕಷ್ಟು ಉತ್ಕೃಷ್ಟ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಬರುತ್ತಿವೆ. ಕೋವಿಡ್ ನಡುವೆ ಬಂದ ‘ಆಕ್ಟ್ 1978’, ‘ಅರಿಷಡ್ವರ್ಗ’ ಕನ್ನಡದ ಮಟ್ಟಿಗೆ ಗುರುತಿಸಬಹುದಾದ ಪ್ರಯೋಗಗಳು. ಆದರೆ ತಮಿಳು ಹಾಗೂ ಮಲಯಾಳಂನಲ್ಲಿ ದೊಡ್ಡ ಪಟ್ಟಿಯೇ ಇವೆ. ‘ಸರಪಟ್ಟ ಪರಂಬರೈ’ ಥರದ ಸಿನಿಮಾ ಓಟಿಟಿಗೆ ಬಂತು. ಅದು ಏನಾದರೂ ಚಿತ್ರಮಂದಿರದಲ್ಲಿ ತೆರೆ ಕಂಡಿದಿದ್ದರೆ ಪ್ರೇಕ್ಷಕನಿಗೆ ಸಿಗುತ್ತಿದ್ದ ಫೀಲ್‌ ಉತ್ಕೃಷ್ಟವಾಗಿರುತ್ತಿತ್ತು. ‘ಸೂರರೈ ಪೊಟ್ರು’ ‘ಜೈ ಭೀಮ್’ ಸಿನಿಮಾಗಳು ಚಿತ್ರಮಂದಿರದಲ್ಲಿ ತೆರೆಕಂಡಿದ್ದರೆ ‘ಪ್ಯಾನ್‌ ಇಂಡಿಯಾ’ ಮಾನದಂಡಕ್ಕೆ ಒಳಪಡುತ್ತಿದ್ದವೇನೋ!

ಇದನ್ನೂ ಓದಿರಿ: ಠಾಣಾಕ್ಕಾರನ್‌: ಬ್ರಿಟಿಷ್‌ ಕಾಲದ ಪೊಲೀಸ್‌ ಪಳೆಯುಳಿಕೆ ಮತ್ತು ವರ್ತಮಾನದ ಕ್ರಾಂತಿ

ಕೋವಿಡ್ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಭಾರತೀಯರು ಅತಿ ಹೆಚ್ಚು ನೋಡಿದ್ದು ಮಲಯಾಳಂ ಸಿನಿಮಾಗಳನ್ನು. ದೈತ್ಯ ಕಲಾವಿದ ಫಹಾದ್ ಫಾಸಿಲ್ ಅವರ ‘ಸಿ ಯೂ ಸೂನ್’, ‘ಇರುಳ್’, ‘ಜೋಜಿ’, ‘ಮಾಲಿಕ್’ ಒಟಿಟಿಗೆ ಬಂದವು. ಒಂದು ರೀತಿಯಲ್ಲಿ ಹೇಳುವುದಾದರೆ ಫಾಸಿಲ್, ಓಟಿಟಿಯ ಏಕಚಕ್ರಾಧಿಪತಿಯಂತೆ ಮೆರೆದರು. ಒಟಿಟಿಯಲ್ಲಿ ಬಂದ ‘ನಾಯಟ್ಟು’, ‘ಮಾಲಿಕ್’‌, ‘ಗ್ರೇಟ್ ಇಂಡಿಯನ್‌ ಕಿಚನ್’, ‘ಹೋಮ್’, ‘ಕುರುತಿ’, ‘ದೃಶ್ಯಂ2’ ಮೊದಲಾದ ಸಿನಿಮಾಗಳು ಹೊಸ ಚರ್ಚೆಯನ್ನೇ ಹುಟ್ಟು ಹಾಕಿದವು. ಕೋವಿಡ್‌ ಸೋಂಕಿನ ಭೀತಿಯಿಂದಾಗಿ ಮನೆಯೊಳಗೆ ಕುಳಿತ ಜನರನ್ನು ರಂಜಿಸಿದ್ದು, ಚಿಂತನೆಗೆ ಹಚ್ಚಿದ್ದು ಓಟಿಟಿಯಲ್ಲಿ ಬಂದ ಈ ಸಿನಿಮಾಗಳೆಂದರೆ ತಪ್ಪಾಗದು.

ತಮಿಳಿನಲ್ಲಿ 2021, 2022ನೇ ಇಸವಿಯಲ್ಲಿ ಬಿಡುಗಡೆಯಾದ ‘ಮಂಡೇಲಾ’, ‘ಕರ್ಣನ್’, ‘ಸಾರ್ಪಟ್ಟ ಪರಂಬರೈ’, ‘ಜೈ ಭೀಮ್’, ‘ರೈಟರ್’, ‘ಠಾಣಾಕ್ಕಾರನ್’ ಸಿನಿಮಾಗಳು ಕಥೆ ಹಾಗೂ ಉತ್ಕೃಷ್ಟತೆಯ ದೃಷ್ಟಿಯಿಂದ ಅದ್ಭುತವಾದ ಪ್ರಯೋಗಗಳು. ‘ರೈಟರ್‌’ ಹಾಗೂ ‘ಕರ್ಣನ್’ ಕೆಲಕಾಲ ಥೇಟರ್‌ನಲ್ಲಿಯೂ ಪ್ರದರ್ಶನ ಕಂಡವು.

ಇತ್ತೀಚಿಗೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಈಗ ಒಟಿಟಿಗೂ ಬಂದಿರುವ ‘ಪಡ’ ಎಂಬ ಮಲಯಾಳಂ ಸಿನಿಮಾ ನೈಜ ಘಟನೆಯನ್ನು ಆಧರಿಸಿ ಮೂಡಿಬಂದಿದೆ. ಆದಿವಾಸಿಗಳ ಬೆಟ್ಟದಂತ ನೋವಿಗೆ ಕನ್ನಡಿ ಹಿಡಿದಿದೆ. ಅಹಿಂಸಾತ್ಮಕವಾದರೂ ಮಿಲಿಟೆಂಟ್ ಪ್ರತಿರೋಧಕ್ಕೆ ಇಳಿದ ಹೋರಾಟಗಾರರು ಎದುರಿಸಿದ ಪ್ರಭುತ್ವದ ಕಿರುಕುಳವನ್ನು ತೆರೆದಿಟ್ಟಿದೆ.

ಇದನ್ನೂ ಓದಿರಿ: NFDC ಜತೆಗೆ ಇತರ ಸರ್ಕಾರಿ ಸಿನಿಮಾ ಸಂಸ್ಥೆಗಳ ವಿಲೀನ – ಅಪಾಯಗಳೇನು?

ಪೃಥ್ವಿರಾಜ್ ಸುಕುಮಾರನ್‌, ಸೂರಜ್ ವೆಂಜರಮೂಡು ಥರದ ಅದ್ಭುತ ನಟರು ಅಭಿನಯಿಸಿರುವ ‘ಜನಗಣಮನ’ (ಮಲಯಾಳಂ) ಸಿನಿಮಾ ಮೊನ್ನೆಯಷ್ಟೇ ಅಂದರೆ ಏಪ್ರಿಲ್‌ 28ರಂದು ಚಿತ್ರಮಂದಿರಗಳಿಗೆ ಬಂದಿದೆ. ಪ್ರಕರಣವೊಂದರ ಸುತ್ತ ಮಾಧ್ಯಮ ಹಾಗೂ ರಾಜಕಾರಣಿಗಳು ಸೃಷ್ಟಿಸುವ ಸಮೂಹ ಸನ್ನಿ, ವಾಸ್ತವಗಳಿಗೆ ಮಾಬ್‌ ಕುರುಡಾಗುವ ಪರಿಯನ್ನು ಈ ಸಿನಿಮಾ ಮನವರಿಕೆ ಮಾಡಿಕೊಟ್ಟಿದೆ. #FuckFascism ಎನ್ನುವಷ್ಟು ಧೈರ್ಯ ಮಲಯಾಳಿಗರಿಗಿದೆ. ಕ್ಯಾಂಪಸ್‌ಗಳ ಮೇಲೆ ಕೇಸರಿಧಾರಿಗಳು ದಾಳಿ ಮಾಡುತ್ತಿರುವುದರಿಂದ ಶೈಕ್ಷಣಿಕ ಹಾಗೂ ಡೆಮಾಕ್ರಟಿಕ್ ವ್ಯವಸ್ಥೆ ದಮನವಾಗುತ್ತಿರುವ ಸೂಕ್ಷ್ಮಗಳನ್ನು ಕಥೆಯೊಳಗೆ ತರಲಾಗಿದೆ.

ಇಷ್ಟೆಲ್ಲ ಅದ್ಭುತ ಸಿನಿಮಾಗಳು ದಕ್ಷಿಣ ಭಾರತದಲ್ಲಿಯೇ ಕಳೆದೆರಡು ವರ್ಷಗಳಲ್ಲಿ ಬಂದಿವೆ. ಪ್ರಾದೇಶಿಕ ಅಸ್ಮಿತೆಯೊಂದಿಗೆ ಜಾಗತಿಕ ಹಾಗೂ ರಾಷ್ಟ್ರೀಯ ವಿದ್ಯಮಾನಗಳೊಂದಿಗೆ ಮುಖಾಮುಖಿಯಾಗಿವೆ. ಹೊಸ ಆಲೋಚನೆಯನ್ನು ಹುಟ್ಟಿಹಾಕಿ, ಪ್ರಭುತ್ವದ ಮತೀಯ ತಾರತಮ್ಯವನ್ನು ಪ್ರಶ್ನಿಸಿವೆ. ಹೀಗಿರುವಾಗ ಬಾಲಿವುಡ್‌ v/s ದಕ್ಷಿಣ ಭಾರತದ ಚಿತ್ರರಂಗದ ಚರ್ಚೆಗೆ ಬಳಕೆಯಾಗುತ್ತಿರುವ ಸಿನಿಮಾಗಳ್ಯಾವುವು? ನಮ್ಮಲ್ಲಿ ಅದ್ಬುತ ಪ್ರಯೋಗಗಳು ನಡೆಸುತ್ತಿದ್ದರೂ ನಾವು ಬಾಲಿವುಡ್‌ಗೆ ಚಾಲೆಂಜ್ ಮಾಡುತ್ತಿರುವುದು ಯಾವ ರೀತಿಯ ಸಿನಿಮಾಗಳ ಮೂಲಕ? ನಮ್ಮ‌ ದೃಷ್ಟಿಕೋನ ಬದಲಾಗುವ ಅವಶ್ಯಕತೆ ಇದೆ ಅಲ್ಲವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

6 COMMENTS

  1. ಕೆ.ಜಿ.ಎಫ್, ಪುಷ್ಪ, RRR ಸಿನಿಮಾಗಳು ಅದೋಗತಿಗೆ ಇಳಿದಿರುವ ನಮ್ಮ ಸಂವೇದನೆಗಳ ಪ್ರತೀಕ ಅಷ್ಟೆ.

  2. Act 1978, ಅರಿಷಡ್ವರ್ಗ, ಸೂರರೈ ಪೊಟ್ರು, ಜೈ ಭೀಮ್ ಚಿತ್ರ ಸರಿ ಇಲ್ಲ ಅಂತ ಹೇಳಿದವರು ಯಾರು. ಆ ಚಿತ್ರಗಳೂ ಚೆನ್ನಾಗಿವೆ. ಆದರೆ ಭಾರತೀಯ ಚಿತ್ರರಂಗ ಎಂದರೆ ಕೇವಲ ಹಿಂದಿ ಚಿತ್ರಗಳು ಉಳಿದ ಎಲ್ಲಾ ಭಾರತೀಯ ಚಿತ್ರಗಳು ಕೇವಲ ಪ್ರಾದೇಶಿಕ ಚಿತ್ರಗಳು ಎಂಬ ಭ್ರಮೆ, ಭಾರತದೊಳಗೆ ಹಾಗೂ ಭಾರತದ ಆಚೆ ಇದ್ದ ಪರಸ್ಥಿತಿಯಲ್ಲಿ ತೆರೆಕಂಡು ಇಡೀ ಭಾರತೀಯ ಹಾಗೂ ವಿದೇಶಿಯ ಚಿತ್ರರಂಗಗಳು ಕಣ್ಣು ಬಾಯಿ ಬಿಟ್ಟು ನೋಡೋ ಹಾಗೆ ಮಾಡಿದ್ದು rrr, kgf ಸರಣಿ, ಪುಷ್ಪ ಚಿತ್ರಗಳು, ಎಂದರೆ ಯಾವದೇ ಅತಿಶಯೋಕ್ತಿ ಆಗಲಿಕ್ಕಿಲ್ಲ. ಒಂದು ಚಿತ್ರ ಸಾವಿರಾರು ಕೋಟಿ ಗಳಿಸುತ್ತದೆ ಆದರೆ ಅದು ಹಾಲಿವುಡ್ ಚಿತವಾಗಿದ್ದರೆ ಅಂಥ ಚಿತ ಭಾರತೀಯರು ನಿರ್ಮಾಣ ಮಾಡುವದಿಲ್ಲ ಅಂತ ನಾವೇ ಬೊಬ್ಬೆ ಹಾಕ್ತಿವಿ. ಭಾರತೀಯ ,ಅದರಲ್ಲೂ ಸೌತ್ ಚಿತ್ರಗಳು ಆ ಕಮಾಲ್ ಮಾಡಿದರೆ ಅದನ್ನು ಕೂಡ ನಾವು ಸಹಿಸುವದಿಲ್ಲ.. ಇದೇ ನೋಡಿ ಕೆಲವು ವಿಚಾರವಂತರ ಮನೋಸ್ಥಿತಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...