Homeನಾನು ಗೌರಿಓದುಗರ ಪ್ರತಿಕ್ರಿಯೆ-ಸ್ಪಷ್ಟೀಕರಣ; ಸೂಕ್ತ ಉಲ್ಲೇಖಗಳನ್ನು ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು

ಓದುಗರ ಪ್ರತಿಕ್ರಿಯೆ-ಸ್ಪಷ್ಟೀಕರಣ; ಸೂಕ್ತ ಉಲ್ಲೇಖಗಳನ್ನು ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು

- Advertisement -
- Advertisement -

ಸೂಕ್ತ ಉಲ್ಲೇಖಗಳನ್ನು ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು..: ಪ್ರತಿಭಾ ನಂದಕುಮಾರ್

ಕಳೆದ ಸಂಚಿಕೆಯಲ್ಲಿ ಪ್ರಕಟವಾದ ಮಾತು ಮರೆತ ಭಾರತದ ಅಂಕಣದ ’ಕರ್ನಾಟಕದಲ್ಲಿ ಅಸ್ಪೃಶ್ಯತೆ’ (ಇಲ್ಲಿ ಕ್ಲಿಕ್ ಮಾಡಿ) ಬರಹಕ್ಕೆ ಸಂಬಂಧಿಸಿದಂತೆ ಕವಿ-ಬರಹಗಾರ್ತಿ ಪ್ರತಿಭಾ ನಂದಕುಮಾರ್ ಹೀಗೆ ಪ್ರತಿಕ್ರಿಯಿಸಿದ್ದರು: “ಹಲವು ಹೇಳಿಕೆಗಳಿಗೆ ಸೂಕ್ತ ಉಲ್ಲೇಖಗಳನ್ನು (ರೆಫೆರೆನ್ಸ್) ಕೊಟ್ಟಿದ್ದರೆ ಸ್ಪಷ್ಟವಾಗುತ್ತಿತ್ತು. ಉದಾಹರಣೆಗೆ ’ಮಾದಿಗರ ಗಲ್ಲೇಬಾನಿ (ಚಪ್ಪಲಿ ತೊಳೆದ ನೀರು) ನೀರಿಲ್ಲದೆ ಬ್ರಾಹ್ಮಣರ ಹೆಣ್ಣು ಮಕ್ಕಳ ಮದುವೆಯಾಗುತ್ತಿರಲಿಲ್ಲ’ ಇದು ಎಲ್ಲಿ ಹೇಳಿದೆ?

ಪ್ರತಿಭಾ ನಂದಕುಮಾರ್

ಮಹಾಭಾರತದಲ್ಲಿ ಕರ್ಣನು ಶಲ್ಯನನ್ನು ಹೀಯಾಳಿಸುವಾಗ ಮಾದ್ರಕರ ಹೆಂಗಸರ ಬಗ್ಗೆ ಕೀಳಾಗಿ ವರ್ಣಿಸುತ್ತಾನೆ. ಆದರೆ ಅಲ್ಲಿ ಅಸ್ಪೃಶ್ಯತೆಯ ಪ್ರಸ್ತಾಪವಿಲ್ಲ. ಮಾದ್ರಕ-ಮಾದ್ರ ರಾಜ್ಯ-ಮಾದ್ರಿ-ಅವಳ ಅಣ್ಣ ಶಲ್ಯ. ಭೀಷ್ಮ ಮಾದ್ರ ರಾಜ್ಯಕ್ಕೆ ಹೋಗಿ ಮಾದ್ರಿಯನ್ನು ಪಾಂಡುವಿಗೆ ವಧುವಾಗಲು ಕೋರಿದಾಗ ಶಲ್ಯ ’ಪಾಣಿಗ್ರಹಣ ತಮ್ಮಲ್ಲಿಲ್ಲ ’ತೆರ’ ಕೊಟ್ಟು ಕರೆದುಕೊಂಡು ಹೋಗು’ ಎಂದಾಗ ಭೀಷ್ಮ ಹಣ, ಚಿನ್ನ, ಆನೆ, ಕುದುರೆ ಇತ್ಯಾದಿ ಕೊಟ್ಟು ಅವಳನ್ನು ಕರೆದುಕೊಂಡು ಹೋಗುತ್ತಾನೆ. ಮಾದ್ರಕರು ಮಾದರುಗಳಾದರೆ (ಕರ್ಣನ ಹೀಯಾಳಿಕೆ ಅರ್ಥೈಸಿ) ಭೀಷ್ಮ ಪಾಂಡುವಿಗೆ ಮಾದ್ರಿಯನ್ನು ಮದುವೆಯಾಗಿಸಿದ ಅಂದರೆ ಅಲ್ಲಿ ವರ್ಣ ಸಂಕರ ಇರಲಿಲ್ಲ ಎಂದರ್ಥವೇ? ಉತ್ತರದಲ್ಲಿ ಮಹಾಭಾರತದ ಕಾಲಕ್ಕೆ (ಆಗಿನ ಆರ್ಯರ ಪದ್ಧತಿಯಂತೆ) ಅಸ್ಪೃಶ್ಯತೆ ಇರಲಿಲ್ಲ ಅಂದರೆ ಅಲ್ಲಿಂದ ದಕ್ಷಿಣಕ್ಕೆ ಬಂದ ’ಬ್ರಾಹ್ಮಣ ಪುರೋಹಿತರು ತಮ್ಮೊಂದಿಗೆ ಚಾತುರ್ವರ್ಣ ಧರ್ಮವನ್ನು ಹೊತ್ತುಕೊಂಡು ಹೋದರು ಹಾಗೂ ವಿಸ್ತರಿಸಿದರು. ಈ ಭಾಗವಾಗಿಯೇ ಕರ್ನಾಟಕಕ್ಕೂ ವರ್ಣವ್ಯವಸ್ಥೆ ಕಾಲಿಟ್ಟಿತು. ಅದರೊಂದಿಗೆ ಜಾತಿಪದ್ಧತಿ, ಅಸ್ಪೃಶ್ಯತೆಯೂ ಕಾಲಿಟ್ಟಿತು’ ಎನ್ನುವುದನ್ನು ಅರ್ಥೈಸುವಲ್ಲಿ ಸ್ವಲ್ಪ ಗೊಂದಲ ಇದೆ.

ಚಾತುರ್ವರ್ಣ ಪರಿಪಾಲಿಸದ ಶಲ್ಯ ವಂಶಸ್ಥರನ್ನು ಅಸ್ಪೃಶ್ಯರು ಎನ್ನಲಾಗುವುದಿಲ್ಲ: ಸಾಕ್ಯ ಸಮಗಾರ

ಪ್ರಶ್ನೆ 1. ’ಮಾದಿಗರ ಗಲ್ಲೇಬಾನಿ ನೀರಿಲ್ಲದೆ ಬ್ರಾಹ್ಮಣರ ಮಕ್ಕಳ ಮದುವೆಯಾಗುತ್ತಿರಲಿಲ್ಲ’ ಇದು ಎಲ್ಲಿ ಹೇಳಿದೆ?
ಸ್ಪಷ್ಟೀಕರಣ: ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಪ್ರಖ್ಯಾತ ಸಂಸ್ಕೃತಿ ಚಿಂತಕ ಹಾಗೂ ಕವಿ ಕೆ. ಬಿ. ಸಿದ್ದಯ್ಯನವರು ತಮ್ಮ ಗಲ್ಲೇಬಾನಿ ಖಂಡಕಾವ್ಯಕ್ಕೆ ಮುನ್ನುಡಿ ಬರೆಯುತ್ತಾ ಹೀಗೆ ಉಲ್ಲೇಖಿಸುತ್ತಾರೆ. ’ಈ (ಗಲ್ಲೇಬಾನಿ) ನೀರನ್ನು ಶಾಸ್ತ್ರದ ನೀರು ಎಂದು ಕರೆಯುತ್ತಾರೆ. ವಿಪ್ರ ಬಂಧುಗಳು ಅವರಲ್ಲಿ ನಡೆಯುವ ವಿವಾಹ ಸಂದರ್ಭದಲ್ಲಿ ನವವಧುವರರ ನೆತ್ತಿಯ ಮೇಲೆ ’ಶಾಸ್ತ್ರದ ನೀರ’ನ್ನು ಚುಮುಕಿಸಿ, ಅರುಂಧತಿ ನಕ್ಷತ್ರ ದರ್ಶನ ಮಾಡಿಸಿದರೆ ಶುಭವಾಗುತ್ತದೆ ಎಂದು ಕಲ್ಲುನೀರು ಕರಗೋ ಹೊತ್ತಿನಲ್ಲಿ ಕಾಡಿಬೇಡಿ ’ಗಲ್ಲೇಬಾನಿ’ ನೀರನ್ನು ಚಮ್ಮಾರನ ಅನುಗ್ರಹದಿಂದ ಪಡೆದುಕೊಳ್ಳುತ್ತಾರೆಂಬುದು ಜನಪದರ ನಾಲಿಗೆ ಮೇಲಿನ ಸೋಜಿಗದ ಸಂಗತಿಯಾಗಿದೆ’ ಎನ್ನುತ್ತಾರೆ.

ಡಾ. ಎಂ. ಚಿದಾನಂದ ಮೂರ್ತಿಯವರು ಬರೆದಿರುವ ’ಮಧ್ಯಕಾಲೀನ ಕರ್ನಾಟಕ ಮತ್ತು ಅಸ್ಪೃಶ್ಯತೆ’ ಕೃತಿಯಲ್ಲಿ ’ಚಪ್ಪಲಿ ಹೊಲಿಯಲು ಅದ್ದುವ ನೀರನ್ನು ಪವಿತ್ರವೆಂದು ಭಾವಿಸುವ ಹೊಲೆಯರು ಅದು ಬ್ರಾಹ್ಮಣರ ಕೈಗೆ ಹೋಗದಂತೆ ಎಚ್ಚರ ವಹಿಸುತ್ತಾರೆ’ ಎಂದು ಬರೆಯುತ್ತಾ ಮುಂದುವರೆದು ’ಕೆಲವೆಡೆ ಬ್ರಾಹ್ಮಣರು ತಮ್ಮ ಮದುವೆಯ ದಿನ ರಾತ್ರಿ ಗುಟ್ಟಾಗಿ ಹೊಲೆಗೇರಿಗೆ ಬಂದು ’ಸುರೆಬಾನಿ’ ನೀರನ್ನು (ಚಪ್ಪಲಿ ಅದ್ದಿದ ನೀರನ್ನು) ತೆಗೆದುಕೊಂಡು ಹೋಗುತ್ತಾರೆ ಎಂಬ ವದಂತಿಗಳಿವೆ’ ಎನ್ನುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಕೆಲವು ಬ್ರಾಹ್ಮಣರನ್ನು ’ಮಧ್ಯಾಹ್ನದ ಮಾದಿಗ’ರೆಂದು ಹಾಗೂ ಮೈಸೂರು ಜಿಲ್ಲೆಯ ಕೆಲವು ಬ್ರಾಹ್ಮಣರನ್ನು ’ಮಧ್ಯಾಹ್ನದ ಹೊಲೆಯ’ರೆಂದು ಕರೆಯುವ ವಾಡಿಕೆ ಇದೆ. ಇದಕ್ಕೂ ಮೂಲಕಾರಣ ಗಲ್ಲೇಬಾನಿಯ ನೀರನ್ನು ಬ್ರಾಹ್ಮಣರು ಕೊಂಡೊಯ್ಯುವುದಾಗಿದೆ.

ಕೆ. ಬಿ. ಸಿದ್ದಯ್ಯ

ಈ ಜನಪದ ಸ್ಮೃತಿಯ ಮೂಲ ಹಿಡಿದು ಹೊರಟಾಗ ಅದು ವಚನ ಚಳವಳಿಯ ಹರಳಯ್ಯ ದಂಪತಿ ಮತ್ತು ಬ್ರಾಹ್ಮಣ ಮಧುವರಸ ಪ್ರಸಂಗಕ್ಕೆ ಹೋಗಿ ನಿಲ್ಲುತ್ತದೆ. ಬಸವಣ್ಣನವರು ಹರಳಯ್ಯರಿಗೆ ಶರಣುಶರಣಾರ್ಥಿ ಎಂದುದನ್ನು ಋಣವೆಂದು ತಿಳಿದ ಹರಳಯ್ಯನ ತನ್ನ ಮಡದಿಗೆ ಹೋಗಿ ಈ ವಿಚಾರ ತಿಳಿಸಿದಾಗ ಇಬ್ಬರ ತೊಡೆ ಚರ್ಮದಿಂದ ಬಸವಣ್ಣನಿಗೆ ಚಪ್ಪಲಿ ಮಾಡಿಕೊಡಬೇಕೆಂಬ ತೀರ್ಮಾನಕ್ಕೆ ಬರುತ್ತಾರೆ ಹಾಗೂ ಹಾಗೆಯೇ ಮಾಡುತ್ತಾರೆ. ಹರಳಯ್ಯ ದಂಪತಿಗಳು ಅದನ್ನು ಹೊತ್ತು ಬಸವಣ್ಣನ ಬಳಿಗೆ ತೆರಳುವಾಗ ದಾರಿಯಲ್ಲಿ ಕಂಡ ಮಧುವರಸ ಆ ಚಪ್ಪಲಿಗಳನ್ನು ಬಲವಂತದಿಂದ ಕಸಿದು ಮೆಟ್ಟಿಕೊಳ್ಳುತ್ತಾನೆ. ತಕ್ಷಣವೇ ಆ ಚಪ್ಪಲಿಗಳು ಬೆಂಕಿಯಂತೆ ಉರಿಯಲಾರಂಭಿಸುತ್ತವೆ. ಉರಿಚಮ್ಮಾಳಿಗೆ ಆಗುತ್ತವೆ. ಚಪ್ಪಲಿಗಳನ್ನು ತೆಗೆದರೂ ಆ ಮೈ ಉರಿ ಕಾಣೆಯಾಗದೆ ತೀವ್ರವಾಗುತ್ತದೆ. ಅದೆಷ್ಟೇ ಔಷಧೋಪಚಾರ, ಪೂಜೆಗಳನ್ನು ಮಾಡಿದರೂ ಉರಿ ಕಡಿಮೆಯೇ ಆಗುವುದಿಲ್ಲ. ಕಡೆಗೆ ಹರಳಯ್ಯನ ಮನೆಯ ಮಗಳು ಗಲ್ಲೇಬಾನಿಯ ನೀರನ್ನು ಮಧುವರಸ ಮೈಮೇಲೆ ಸುರಿದಾಗ ಉರಿ ಕಡಿಮೆಯಾಗುತ್ತದೆ. ಅಂದಿನಿಂದ ಬ್ರಾಹ್ಮಣರಿಗೆ ಗಲ್ಲೇಬಾನಿಯ ನೀರು ಪವಿತ್ರ ಎಂಬ ಜಾನಪದ ಕತೆ ಜನಮಾನಸದಲ್ಲಿ ಬೆರೆತುಹೋಗಿದೆ. ಇದಕ್ಕೆ ಮಂಟೆಸ್ವಾಮಿ ಹಾಗೂ ಮಲೆ ಮಹದೇಶ್ವರ ಕಾವ್ಯಗಳೇ ಸಾಕ್ಷಿ.

ಇನ್ನು ಪುರಾಣಗಳನ್ನು ಶೋಧಿಸಿದಾಗ ವಸಿಷ್ಠ ತಾನು ಮದುವೆಯಾಗುವ ಹುಡುಗಿಯನ್ನು ಹುಡುಕಿಕೊಂಡು ಬರುವುದು ಮಾದಿಗರ ಕೇರಿಗೆಯೇ. ಅವನು ಮಾದಿಗ ಅರುಂಧತಿಯ ಮನೆಗೆ ಬರುತ್ತಾನೆ. ಅವಳ ಮೂಲ ಹೆಸರು ಆರಂಜ್ಯೋತಿ. ಅವಳು ಗಲ್ಲೇಬಾನಿಯ ನೀರಿನಿಂದ ಆತನನ್ನು ಪರಿಶುದ್ಧಗೊಳಿಸುತ್ತಾಳೆ ಹಾಗೂ ವಿವಾಹವಾಗುತ್ತಾಳೆ. ಇದರ ಬಗ್ಗೆ ಸಂಸ್ಕೃತಿ ಚಿಂತಕ ವಡ್ಡಗೆರೆ ನಾಗರಾಜರವರು ಸಂಪೂರ್ಣ ಅಧ್ಯಯನ ಮಾಡಿದ್ದಾರೆ.

ಕುತೂಹಲಕಾರಿ ಎಂದರೆ 1891ರ ಬ್ರಿಟಿಷ್ ಭಾರತದ ಮೊದಲ ಜನಗಣತಿಯಲ್ಲಿ ಮೈಸೂರಿನ ಮಾದಿಗರು ತಮ್ಮನ್ನು ’ಮಾತಂಗ ಬ್ರಾಹ್ಮಣರು’ ಎಂದು ಘೋಷಿಸಿಕೊಂಡಿರುವುದು ಸಹ ಇಲ್ಲಿ ಉಲ್ಲೇಖಾರ್ಹ (ದಕ್ಷಿಣ ಭಾರತದ ಜಾತಿ ಬುಡಕಟ್ಟುಗಳು – ಸಂಪುಟ 4 – ಎಡ್ಗರ್ ಥರ್ಸ್ಟನ್/ಕೆ. ರಂಗಾಚಾರಿ)

ಡಾ. ಎಂ. ಚಿದಾನಂದ ಮೂರ್ತಿ

ಒಟ್ಟಾರೆ ಚರ್ಮವನ್ನು ಹದಮಾಡಿ ಚಪ್ಪಲಿಯನ್ನು ಅದ್ದುವ ನೀರು ಪವಿತ್ರ. ಇದರಿಂದ ಬ್ರಾಹ್ಮಣರೂ ಪವಿತ್ರವಾಗುತ್ತಾರೆ ಎಂಬುದು ಐತಿಹ್ಯ. ಯಾವ ಕಾಯಕವೂ ಉಚ್ಚವಲ್ಲ, ನೀಚವಲ್ಲ ಎಂಬ ಸತ್ಯವನ್ನು ಸಾರುತ್ತದೆ ಈ ಆಚರಣೆ.

ಪ್ರಶ್ನೆ 2. ಮಹಾಭಾರತದ ಶಲ್ಯ ಮಾದಿಗನಲ್ಲವೇ?

ಸ್ಪಷ್ಟೀಕರಣ: ಅಲ್ಲ. ಮಹಾಭಾರತವು ರಾಮಾಯಣಕ್ಕಿಂತಲೂ ಹಿಂದಿನ ಮಹಾಕಾವ್ಯವಾಗಿದೆ. ರಾಮಾಯಣ ಬರೆದ ಕಾಲಘಟ್ಟದಲ್ಲಿಯೇ ಅಸ್ಪೃಶ್ಯತೆ ಕಂಡುಬರದೇ ಇರುವಾಗ ಮಹಾಭಾರತದಲ್ಲಿ ಅಸ್ಪೃಶ್ಯತೆಯ ಇರುವಿಕೆ ಸಾಧ್ಯವಿಲ್ಲ. ಮುಂದುವರೆದು, ಕರ್ಣನನ್ನೇ ಕ್ಷತ್ರಿಯನೆಂದು ಒಪ್ಪಿಕೊಳ್ಳದ ಪಾಂಡವರು ಶಲ್ಯನ ಸೋದರಿ ಮಾದ್ರಿಯನ್ನು ಪಾಂಡುರಾಜನಿಗೆ ವಿವಾಹವಾಗಿಸಲು ಸಾಧ್ಯವಿಲ್ಲ. ಮಾದ್ರಿಯ ಮಕ್ಕಳಾದ ನಕುಲ ಮತ್ತು ಸಹದೇವರಿಂದ ಯಾಗಗಳನ್ನು ನೆರವೇರಿಸಲೂ ಸಾಧ್ಯವಿಲ್ಲ. ಶಲ್ಯ ಕುರುಕ್ಷೇತ್ರದ ಕಡೆಯ ದಿನದ ಯುದ್ಧದಲ್ಲಿ ದಂಡನಾಯಕನಾಗಲೂ ಸಾಧ್ಯವಿಲ್ಲ. ಮಾದ್ರ ರಾಜ್ಯದ ಶಲ್ಯನ ವಂಶಸ್ಥರು ಚಾತುರ್ವರ್ಣ ಪರಿಪಾಲಕರಲ್ಲ ಎಂಬ ಕಾರಣದಿಂದ ಅವರನ್ನು ಅಸ್ಪೃಶ್ಯರೆಂದು ಬಗೆಯುವುದು ಐತಿಹಾಸಿಕವಾಗಿ ತಪ್ಪಾಗುತ್ತದೆ. ಏಕೆಂದರೆ ಅಂತಹ ಚಾತುರ್ವರ್ಣ ಪರಿಪಾಲಿಸದ ನೂರಾರು ರಾಜ್ಯಗಳು ಹಸ್ತಿನಾಪುರದ ಸುತ್ತಲೂ ಇರುತ್ತವೆ. ಇದರಷ್ಟೇ ಸತ್ಯ ಆರ್ಯವರ್ತವನ್ನು ಬಿಟ್ಟು ಮಿಕ್ಕ ಇನ್ನಾವ ಪ್ರಾಚೀನ ಭಾರತದಲ್ಲಿಯೂ ಚಾತುರ್ವರ್ಣ ವ್ಯವಸ್ಥೆ ಇಲ್ಲದಿದ್ದದ್ದು. ಘಟೋತ್ಗಜನದ್ದೂ ಅಂತಹದ್ದೇ ಬುಡಕಟ್ಟಿನ ಪ್ರಾಂತ್ಯ. ಹಾಗಾಗಿ ಕರ್ಣ ಹಾಗೂ ಶಲ್ಯರಿಬ್ಬರ ನಡುವೆ ನಡೆಯುವ ಸಂಭಾಷಣೆ ಒಬ್ಬರನ್ನೊಬ್ಬರೂ ಹೀಗಳೆಯಲಷ್ಟೇ ಆಗಿರುತ್ತದೆ. ಅದಕ್ಕೂ ಅಸ್ಪೃಶ್ಯತೆಗೂ ಸಂಬಂಧವಿಲ್ಲ. ಏಕೆಂದರೆ ಅಸ್ಪೃಶ್ಯತೆ ಕಾಣಿಸಿಕೊಂಡದ್ದು ಕ್ರಿ.ಶ 4ನೇ ಶತಮಾನದಲ್ಲಿ. ಇದರ ಬಗ್ಗೆ ಹೆಚ್ಚು ತಿಳಿಯಲು ದಯಮಾಡಿ ಈ ಅಂಕಣದ ’ಪ್ರಾಚೀನ ಭಾರತದಲ್ಲಿ ಅಸ್ಪೃಶ್ಯತೆ; ಹಾಗೂ ’ಮಧ್ಯಕಾಲೀನ ಭಾರತದಲ್ಲಿ ಅಸ್ಪೃಶ್ಯತೆ’ ಲೇಖನಗಳನ್ನು ಓದಿ.


ಇದನ್ನೂ ಓದಿ: ಮಾತು ಮರೆತ ಭಾರತ; ಅಸ್ಪೃಶ್ಯರು ಪರಿಶಿಷ್ಟ ಜಾತಿಗಳಾಗಿದ್ದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ನಾನೂ ಹಲವಾರು ಬ್ರಾಹ್ಮಣರನ್ನು ಕೇಳಿದೆ. ಯಾರಿಗೂ ಗಲ್ಲೇಬಾನಿಯ ನೀರನ್ನು ಬ್ರಾಹ್ಮಣರ ಮದುವೆಯಲ್ಲಿ ಬಳಸುವ ಬಗ್ಗೆ ಗೊತ್ತಿಲ್ಲ. ಪ್ರಚಲಿತದಲ್ಲಿ ಇಲ್ಲ

LEAVE A REPLY

Please enter your comment!
Please enter your name here

- Advertisment -

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...