Homeಅಂಕಣಗಳುದಶಕದ ನಂತರ ಗೆದ್ದ ಅಗ್ರಹಾರದ ಜಟ್ಟಿ!

ದಶಕದ ನಂತರ ಗೆದ್ದ ಅಗ್ರಹಾರದ ಜಟ್ಟಿ!

- Advertisement -
- Advertisement -

ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಅಗ್ರಹಾರ ಕೃಷ್ಣಮೂರ್ತಿ ಅಮಾನತುರದ್ದಾಗಿದೆ. ಬರೋಬ್ಬರಿ ಒಂದು ದಶಕ ನಡೆದ ಕುಸ್ತಿಯಲ್ಲಿ ಈ ಜಟ್ಟಿ ಜಯಗಳಿಸಿದ್ದಾರಲ್ಲಾ.

ಅಗ್ರಹಾರದಿಂದ ಬಂದವನಿರಬೇಕು; ಗೋದಿ ಮುದ್ದೆಯಂತಿದ್ದ ಆಕಾರ ಬೇರೆ; ಕೃಷ್ಣಮೂರ್ತಿ ಹೆಸರು, ಈತ ಭೂಸುರೋತ್ತಮನಾದ ವಿಪ್ರನೇ ಇರಬೇಕು ಎಂದು ನಮ್ಮ ಜಾತಿ ಮನಸ್ಸುಗಳಿಗೆ ಸಾಕ್ಷಿಯೊದಗಿಸಿತ್ತು. ಆಗ ನಮಗೆ ಅಗ್ರಹಾರಗಳನ್ನ ಕಂಡರೆ ಆಗುತ್ತಿರಲಿಲ್ಲ. ನಮಗೇ ಏನು, ನಾಯಿ ಹಂದಿಗಳಿಗೂ ಹಿಡಿಸುತ್ತಿರಲಿಲ್ಲ. ಕಾರಣ ಅಲ್ಲಿನ ಅಂಗಳದಲ್ಲಿ ಯಾವ ಮೂಳೆಯೂ ಸಿಗುತ್ತಿರಲಿಲ್ಲ. ಇನ್ನ ಹಂದಿಗಳಿಗಂತೂ ತೊಳೆದು ಎಸೆದಂತಹ ಇಸ್ತ್ರಿ ಎಲೆಯಿಂದ ಏನೂ ಪ್ರಯೋಜನವಾಗದೆ ವಾಪಸ್ಸು ಬರುತ್ತಿದ್ದವು. ಇಂತಹ ನಮ್ಮ ಪೂರ್ವಾಗ್ರಹದ ಕಾಲದಲ್ಲಿ ಲಂಕೇಶರ ಎದುರು ಪ್ರಕಾಶ್ ಬೆಳವಾಡಿಯಿಂದ ಹಿಡಿದು ಮಹಾಬಲ, ಸತ್ಯ, ಸದಾಶಿವ ಇವರೆಲ್ಲ ಕುಳಿತು ಬ್ರಾಹ್ಮಣದ ಟೀಕೆಯನ್ನು ಅನುಮಾನ ಬರದಂತೆ ಸಹಿಸಿಕೊಳ್ಳುತ್ತಿದ್ದರು. ಅಂತವರ ಪೈಕಿ ಅಗ್ರಹಾರದ ಕೃಷ್ಣಮೂರ್ತಿಯೂ ಎಂದು ನಂಬಿದ್ದೆವು. ಲಂಕೇಶರ ವಿಶೇಷ ಪ್ರೀತಿಗೆ ಪಾತ್ರವಾಗಿ ನಮ್ಮಲ್ಲೊಂದಿಷ್ಟು ಅಸಹನೆ ಮೂಡುತ್ತಿರುವಾಗಲೆ ಕೃಷ್ಣಮೂರ್ತಿ ಅಗ್ರಹಾರದಿಂದ ಬಂದ ಅಸಾಮಿಯಲ್ಲ, ಅರಮನೆ ಎದುರು ಮಹಾರಾಜರ ಸಮ್ಮುಖದಲ್ಲಿ ಮುಷ್ಠಿಯಿಂದ ಎದುರಾಳಿಯ ವಿರುದ್ಧ ಹೋರಾಡುವವರೆಂದು ಗೊತ್ತಾಗಿ ಹೋಯ್ತಲ್ಲಾ, ಥೂತ್ತೇರಿ.

*****

ಉನ್ನತ ಸ್ಥಾನಕ್ಕೆ ಹೋದಮೇಲೂ ವಿಪ್ರೋತ್ತಮರು ತಾವು ತಯಾರಾದ ಅಗ್ರಹಾರಕ್ಕೆ ಬಂದು ಹೋಗುವಂತೆ ಕೃಷ್ಣಮೂರ್ತಿ ಲಂಕೇಶರ ವಟಾರಕ್ಕೆ ಬಂದು ಹೋಗುತ್ತಿದ್ದರು. ಆಗ ಚೆನೈನಲ್ಲಿದ್ದ ಪ್ರಾದೇಶಿಕ ಕೇಂದ್ರ ಸಾಹಿತ್ಯ ಅಕಾಡೆಮಿ ಕಚೇರಿಯನ್ನ ಬೆಂಗಳೂರಿಗೆ ತಂದರು. ಸಾಹಿತ್ಯ ಪರಿಷತ್ ಕಾರ್ಯಕ್ರಮಗಳಿಗೆ ಹಣ ಕೊಟ್ಟರು, ಪುಸ್ತಕ ಕೊಟ್ಟರು. ಜರಗನಹಳ್ಳಿ ಶಿವಶಂಕರ್, ಲಂಕೇಶ್ ಶಿಷ್ಯ ದಳವಾಯಿಗೆ ಅಕಾಡೆಮಿ ಪುಸ್ತಕ ಕೊಟ್ಟರು. ದಳವಾಯಿಯಂತೂ ಹೋದವನು ಮತ್ತೆ ಬರಲೇ ಇಲ್ಲ. ತಮ್ಮ ಭಾಷೆ ಮತ್ತು ಪ್ರಾದೇಶಿಕ ಕಾಳಜಿಯ ಬಗ್ಗೆ ಪಕ್ಷಪಾತದ ಆಪಾದನೆ ಬಂದು ಅಗ್ರಹಾರ ತನಿಖೆ ಎದುರಿಸುವ ಸಮಯದಲ್ಲಿ ಫಲಾನುಭವಿಗಳ್ಯಾರೂ ಸಹಾಯಕ್ಕೆ ಬರಲಿಲ್ಲ. ತನಿಖಾಧಿಕಾರಿಗಳಿಗೆ ಒಂದು ಮನವಿಯನ್ನೂ ಕೊಡಲಿಲ್ಲ. ಇಂತಹ ಸಮಯದಲ್ಲಿ ಕವಿ ಸಿ.ಪ.ಶೆಟ್ಟಿಯ ಹಠದಿಂದಾಗಿ ಅಗ್ರಹಾರ ಅಮಾನತುಗೊಂಡರಂತಲ್ಲಾ, ಥೂತ್ತೇರಿ.

*****

ಕನ್ನಡದ ಕೆಲಸಕ್ಕಾಗಿ ಕನ್ನಡಿಗನಿಂದಲೇ ತೊಂದರೆಗೆ ಸಿಕ್ಕಿಕೊಂಡ ಅಗ್ರಹಾರ ಈ ಒಂದು ದಶಕದಲ್ಲಿ ಅರಾಮವಾಗಿಯೇ ಇದ್ದರು. ಪ್ರೆಸ್‌ಕ್ಲಬ್ಬಿನ ಗೆಳೆಯರ ಪಾರ್ಟಿಯ ಬಿಲ್ಲನ್ನು ತಾವೇ ಕೊಡುತ್ತಿದ್ದರು. ನಿವೃತ್ತಿಯ ಸವಲತ್ತುಗಳು ಸಿಗದಿದ್ದರೂ ಬೇಸರ ಮಾಡಿಕೊಳ್ಳದೆ ನಾನೊಬ್ಬ ಕಳಂಕ ಹೊತ್ತವನೆಂದು ಅರಾಮವಾಗಿಯೇ ಹೇಳುತ್ತಿದ್ದರು. ಈ ಜಟ್ಟಿಯ ವಿರುದ್ಧ ಹಠ ಸಾಧಿಸಿದ ಸಿ.ಪ.ಶೆಟ್ಟಿಯ ಒಂದು ಪ್ರಸಂಗ ಹೇಳುವುದಾದರೆ ನಮ್ಮ ಸಂಸ್ಕೃತಿ ಮತ್ತು ರಾಜಕಾರಣದ ನಡುವಿನ ಸೇತುವೆಯಂತಿದ್ದ ಎಂ.ಪಿ. ಪ್ರಕಾಶ್ ಅವರು ಸಿ.ಪ.ಶೆಟ್ಟರ ಕವಿತ್ವಕ್ಕೆ ಮಾರುಹೋಗಿ ಹೂವಿನಡಗಲಿಗೆ ಕರೆದು ಸನ್ಮಾನ ಮಾಡಿದರು. ಜರಿಪೇಟ ಜಗಮಗಿಸುವ ಶಾಲು ಪರಿಮಳ ಭರಿತ ಹಾರ ಹಾಕಿಸಿಕೊಂಡ ಸಿ.ಪ.ಶೆಟ್ಟಿ ’ಈ ಸನ್ಮಾನದ ಗೌರವ ಏನದಾವಲ್ಲ ಇವು ಭಾಳ ವೆಚ್ಚದವು, ಅದಕ ನಾನು ಈ ಸಭೆ ಮುಗಿಯೂ ಮಟ್ಟ ಇವನ್ನ ತೆಗೆಯೂದಿಲ್ಲ, ಹಾಗೇ ಕುಂದರತೀನಿ’ ಎಂದು ಹಾಗೇ ಕುಂತರು. ಆದರೆ ಅವರ ಅಕ್ಕಪಕ್ಕದಲ್ಲಿದ್ದ ಗೌರವಾನ್ವಿತರು ಹಾಗೆ ಮಾಡದೆ ಸನ್ಮಾನಕ್ಕೆ ಗೌರವ ತೋರಿದರು. ಸಭೆ ಗಂಟೆಗಟ್ಟಲೆ ಮುಂದುವರಿದಾಗ ಸಿ.ಪ.ಶೆಟ್ಟರು ಹಾಸ್ಯಸ್ಪದ ವ್ಯಕ್ತಿಯಂತೆ ಕಂಡರಂತಲ್ಲಾ, ಥೂತ್ತೇರಿ.

*****

ಈಗ ಕಾಲ ಬದಲಾಗಿದೆ. ಮುಂದೆ ಅಗ್ರಹಾರನಂತಹ ಕಾರ್ಯದರ್ಶಿ ಸಿ.ಪ.ಶೆಟ್ಟಿಯಂತಹ ಕವಿ ಎಲ್ಲವೂ ಅಪ್ರಸ್ತುತವಾಗಿರುವಂತಹ ಪ್ರಳಯ ಅರಂಭಗೊಂಡಿದೆಯಂತಲ್ಲಾ. ಈವರೆಗಿನ ಕನ್ನಡ ಸಾಹಿತ್ಯಕ್ಕೆ ಬದಲು ರಾಷ್ಟ್ರೋತ್ಥಾನ ಸಾಹಿತ್ಯ ಕನ್ನಡಿಗರ ಮೇಲೆ ಹೇರುವ ಸೂಚನೆಯಾಗಿ, ನಮ್ಮ ಮಕ್ಕಳು ಓದುವ ಪಠ್ಯ ಪುಸ್ತಕದೊಳಕ್ಕೆ ಹೆಡಗೇವಾರ್, ಗೋಳವಲ್‌ಕರ್, ದೀನದಯಾಳು, ಹೊ.ವೆ. ಶೇಷಾದ್ರಿ, ಸಾವರ್ಕರ್ ಸೇರಲಿದ್ದಾರಂತಲ್ಲಾ. ಇದು ಹಾಳುಬಿದ್ದು ಹೋಗಲಿ, ಲಂಕೇಶ್ ನಮ್ಮವರು ಎಂದು ಜಗಳ ಮಾಡುತ್ತಿದ್ದ ಅವರ ಒಂದು ಬಳಗ ಲಂಕೇಶರ ಪಾಠವನ್ನೆ ಕೈಬಿಟ್ಟ ಲಾಟಿ ವೀರರ ಬಗ್ಗೆ ಚಕಾರವೆತ್ತಿಲ್ಲವಂತಲ್ಲಾ. ಇದಕ್ಕೂ ಕಾರಣವಿದೆ. ಲಂಕೇಶ್ ಎಂದೂ ತನ್ನ ಜಾತಿ ಬಗ್ಗೆ ಹೇಳಿಕೊಳ್ಳಲಿಲ್ಲ, ಸ್ವಜಾತಿಯವರಿಗೆ ಸಹಾಯ ಮಾಡಲಿಲ್ಲ, ಹತ್ತಿರವೂ ಸೇರಿಸಲಿಲ್ಲ. ಅದ್ದರಿಂದ ಇವರ ಮೌನ ಸಹಜವಾದುದೆ. ಆದರೆ ಲಂಕೇಶ್ ಸೃಷ್ಟಿಸಿ ಹೋಗಿದ್ದ ಜನ ಈಗ ಮೌನಿಗಳಾಗಿರುವ ಬಗ್ಗೆ ಕೇಳಿದಾಗ “ನೋಡ್ರಿ ಹೆಡಗೆವಾರಲ್ಲ, ಪೆಟ್ಟಿಗೆವಾರನ್ನ ಪಠ್ಯಕ್ಕೆ ಸೇರಿಸಿದರೂ ಏನೂ ಆಗಲ್ಲ. 1969-70ನೇ ಇಸವಿಲಿ ಸರ್ ಎಂ. ವಿಶ್ವೇಶ್ವರಯ್ಯನವರ ಬಗ್ಗೆ ಎರಡೂ ವರ್ಷ ಪಠ್ಯ ಪುಸ್ತಕ ಮಾಡಿದ್ರು, ಏನಾಯ್ತು ಯಾವನಾದ್ರು ಒಬ್ಬ ಇಂಜಿನಿಯರ್ ಬಂದನೇ? ವಿಶ್ವೇಶ್ವರಯ್ಯನವರ ವಿಷಯ ಹೇಳುನೂ, ಅಂಗೆ ಈ ಹೆಡಗೆವಾರ್ ಲಾಟಿ ಲಡ್ಡಿದದು ಹೋಗುತ್ತೆ” ಎಂದರಲ್ಲಾ ಥೂತ್ತೇರಿ.


ಇದನ್ನೂ ಓದಿ:  ಎರಡೂವರೆ ಸಾವಿರ ಕೋಟಿ ಹುಣಸಿ ಪಿಕ್ಕ ಅನಕೊಂಡಿರೇನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...