Homeಅಂಕಣಗಳುಮಾತು ಮರೆತ ಭಾರತ; ಕಿಲ್ವೇನ್ಮಣಿ ಫೈಲ್: ಸ್ವತಂತ್ರ ಭಾರತದ ಭೀಕರ ಹತ್ಯಾಕಾಂಡ

ಮಾತು ಮರೆತ ಭಾರತ; ಕಿಲ್ವೇನ್ಮಣಿ ಫೈಲ್: ಸ್ವತಂತ್ರ ಭಾರತದ ಭೀಕರ ಹತ್ಯಾಕಾಂಡ

- Advertisement -
- Advertisement -

1947ರ ಆಗಸ್ಟ್ 15ರಂದು ಭಾರತ ದೇಶವು ಬ್ರಿಟಿಷರಿಂದ ಸ್ವತಂತ್ರವಾಯಿತು. ಭಾರತೀಯರು ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಿ ಪಡೆದರು. 1950 ಜನವರಿ 26ರಂದು ಭಾರತದ ಸಂವಿಧಾನವು ಜಾರಿಗೊಂಡಿತು. ಅದು ಸಮಸ್ತ ಭಾರತೀಯರಿಗೂ ಮೂಲಭೂತ ಹಕ್ಕುಗಳನ್ನು ಖಾತ್ರಿಗೊಳಿಸಿತು. ಅದು ಸರ್ವ ಭಾರತೀಯರಿಗೂ ಸ್ವಾತಂತ್ರ್ಯ, ಸಮಾನತೆಯನ್ನು ಜಾರಿಗೊಳಿಸುವ ಜವಾಬ್ದಾರಿಯನ್ನು ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ಹೆಗಲ ಮೇಲೆ ಹೇರಿತು. ಬ್ರಿಟಿಷರಿಂದ ರಾಜಕೀಯ ಸ್ವಾತಂತ್ರ್ಯ ಗಳಿಸಿಕೊಂಡ ಭಾರತವು ನಂತರದ ದಿನಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ತನ್ನೆಲ್ಲಾ ಜನತೆಗೆ ಖಾತ್ರಿಗೊಳಿಸಲು ಸೋತಿದೆ. ಅದಕ್ಕೆ ಸ್ಪಷ್ಟ ನಿದರ್ಶನ ಹಿಂದೂ ಮೇಲ್ಜಾತಿಗಳು ದಲಿತರ ಮೇಲೆ ನಡೆಸುವ ದೌರ್ಜನ್ಯಗಳಾಗಿವೆ.

ಸ್ವತಂತ್ರ ಭಾರತಕ್ಕೆ 20 ವರ್ಷಗಳಾಗಿತ್ತು. ಅಷ್ಟರಲ್ಲಿಯೇ ಅತ್ಯಂತ ಭೀಕರ ದಲಿತರ ಹತ್ಯಾಕಾಂಡ ತಮಿಳುನಾಡಿನ ಕಿಲ್ವೇನ್ಮಣಿಯಲ್ಲಿ ನಡೆಯಿತು. ಅದಕ್ಕೂ ಮೊದಲು ಅದೆಷ್ಟು ದೌರ್ಜನ್ಯಗಳಾಗಿದ್ದವೋ ಕಾಣೆ. ಅವುಗಳೆಲ್ಲ ಭಾರತದ ಇತಿಹಾಸದಲ್ಲಿ ಸಮಾಧಿಯಾಗಿ ಹೋಗಿವೆ. ಆದರೆ 1968 ಡಿಸೆಂಬರ್ 25ರಂದು ಕಿಲ್ವೇನ್ಮಣಿಯಲ್ಲಿ ನಡೆದದ್ದು ಅಕ್ಷರಶಃ ನರಮೇಧ.

60ರ ದಶಕ ಭಾರತದ ಭೂಹೋರಾಟಗಳ ಕಾಲಘಟ್ಟ ಎಂದೇ ಹೇಳಬಹುದು. ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದ ಎಡಪಂಥೀಯ ಸಂಘಟನೆಗಳು ಭೂರಹಿತ ಕೂಲಿ ಕಾರ್ಮಿಕರಿಗೆ
ಭೂಹಂಚಿಕೆ ಮಾಡುವಂತೆ ದೇಶಾದ್ಯಂತ ಹೋರಾಟ ರೂಪಿಸಿದ್ದವು. ಮಹಾರಾಷ್ಟ್ರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಅನುಯಾಯಿ ದಾದಾಸಾಹೇಬ್ ಗಾಯಕ್ವಾಡ್ ಸಹ ಭೂಹೋರಾಟ ಆರಂಭಿಸಿದ್ದು ಇದೇ ಕಾಲಘಟ್ಟದಲ್ಲಿ. ಬ್ರಿಟಿಷರಿಂದ ಭಾರತ ಸ್ವತಂತ್ರಗೊಂಡು 20 ವರ್ಷಗಳು ಕಳೆದಿದ್ದರೂ ಬೃಹತ್ ದೇವಾಲಯಗಳು ಹಾಗೂ ಮೇಲ್ಜಾತಿ ಭೂಮಾಲೀಕರು ಸಾವಿರಾರು ಎಕರೆಗಟ್ಟಲೆ ಭೂಮಿಯನ್ನು ವಶದಲ್ಲಿಟ್ಟುಕೊಂಡಿದ್ದರು. ಅಂದಿನ ಎಲ್ಲಾ ರಾಜಕೀಯ ಪಕ್ಷಗಳೂ ಭೂಮಾಲೀಕರ ಅಂಗಳವಾಗಿದ್ದ ಕಾರಣ ಅವರ ವಿರುದ್ಧ ತಿರುಗಿ ಬೀಳುವವರಿರಲಿಲ್ಲ. ಆದರೆ ಸೈದ್ಧಾಂತಿಕವಾಗಿ ಕೃಷಿಕೂಲಿಗಳ ಪರವಾಗಿಯೇ ಕೆಲಸ ಮಾಡುತ್ತಿದ್ದ ಕಮ್ಯುನಿಸ್ಟ್ ಸಂಘಟನೆಗಳು ಮಾತ್ರ ಭೂಹೋರಾಟವನ್ನೇ ಪ್ರಮುಖ ಕಾರ್ಯಕ್ರಮವನ್ನಾಗಿ ಮಾಡಿಕೊಂಡವು. ಇದರ ಪರಿಣಾಮವಾಗಿ ಹಳ್ಳಿಗಳಲ್ಲಿ ಕೃಷಿಕೂಲಿಗಳಾಗಿ ದುಡಿಯುತ್ತಿದ್ದ ದಲಿತರನ್ನು ಸಂಘಟಿಸಿದರು. ಇದೇ ರೀತಿಯಲ್ಲಿಯೇ ಅವಿಭಜಿತ ತಂಜಾವೂರು ಜಿಲ್ಲೆಯಲ್ಲಿಯೂ ಹಲವು ಸಂಘಟನೆಗಳಾದವು.

ತಮಿಳುನಾಡಿನ ಕಿಲ್ವೇನ್ಮಣಿ ದಲಿತ ಕೃಷಿಕೂಲಿಗಳೂ ಸಹ ಸಂಘಟನೆಯೊಂದನ್ನು ಸ್ಥಾಪಿಸಿಕೊಂಡರು. ಇದಕ್ಕೆ ತಕ್ಕಂತೆ ಹಸಿರು ಕ್ರಾಂತಿಯೂ ಸಹ ಭಾರತದಲ್ಲಿ ಮನೆಮಾತಾಗಿತ್ತು. ಈ ಸಂಘಟನೆಯ ಮೂಲಕ ಕೂಲಿ ದರವನ್ನು ಹೆಚ್ಚು ಮಾಡಲು ಭೂಮಾಲೀಕರನ್ನು ಆಗ್ರಹಿಸುತ್ತಿದ್ದರು. ಇದಕ್ಕೆ ವಿರುದ್ಧವಾಗಿ ಭೂಮಾಲೀಕರೂ ಸಹ ಭತ್ತ ಉತ್ಪಾದನೆ ಸಂಘಟನೆಯನ್ನು ಸ್ಥಾಪಿಸಿಕೊಂಡು ಒಗ್ಗಟ್ಟಾದರು. ಅಲ್ಲಿಂದ ಈ ಎರಡು ಸಂಘಟನೆಗಳ ನಡುವೆ ಆಗಾಗ ಸಂಘರ್ಷ ನಡೆಯುತ್ತಲೇ ಇತ್ತು. ಕೃಷಿ ಕೂಲಿಕಾರರು ತಮ್ಮ ಕೂಲಿ ದರವನ್ನು ಹೆಚ್ಚು ಮಾಡಿಸಿಕೊಳ್ಳಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು. ಭೂಮಾಲೀಕರು ಕೃಷಿ ಕೂಲಿಗಳನ್ನು ಹದ್ದುಬಸ್ತಿನಲ್ಲಿಡುವ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದರು.

1968ನೇ ಇಸವಿಯ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಬೆಳೆ ಕೊಯ್ಲು ಸಮಯ ಬಂದಾಗ ಕೃಷಿಕೂಲಿಗಳ ಸಂಘಟನೆಯು ಭೂಮಾಲೀಕರು ಕೂಲಿ ದರ ಹೆಚ್ಚು ಮಾಡದಿದ್ದರೆ ಕೆಲಸಕ್ಕೆ ಬರುವುದಿಲ್ಲವೆಂದು ಘೋಷಿಸಿತು. ಎಂದಿನಂತೆ ಭೂಮಾಲೀಕರು ಕೃಷಿಕೂಲಿಗಳನ್ನು ವಿಭಜಿಸಿ ತಮ್ಮ ಆಟವನ್ನು ಆಡಲು ಮುಂದಾದರಾದರೂ ಈ ಬಾರಿ ಸಂಘಟನೆಯ ಕಾರಣಕ್ಕಾಗಿ ಒಬ್ಬ/ಳು ಕೃಷಿಕೂಲಿಯೂ ಅಲ್ಲಾಡಲಿಲ್ಲ. ಈ ಬೆಳವಣಿಗೆ ಭೂಮಾಲೀಕರ ಪಿತ್ತ ನೆತ್ತಿಗೇರಿಸಿತ್ತು. ಆದರೂ ಪಕ್ಕದ ಊರಿನ ಕೃಷಿಕೂಲಿಗಳನ್ನು ಕರೆಸಿ ಕೊಯ್ಲು ಮಾಡಿಸಿಕೊಳ್ಳುವಲ್ಲಿ ಮೇಲ್ಜಾತಿ ಭೂಮಾಲೀಕರು ಯಶಸ್ವಿಯಾದರು. ಈ ಘಟನೆ ಎರಡೂ ಪಾಳೆಯದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತ್ತು.

ಇಂತಹ ಪರಿಸ್ಥಿತಿಯಲ್ಲಿ ಕಿಲ್ವೇನ್ಮಣಿಯ ಕಿರಾಣಿ ಅಂಗಡಿಯ ಮಾಲೀಕನೊಬ್ಬನನ್ನು ಭೂಮಾಲೀಕರ ಬೆಂಬಲಿಗರು ಅಪಹರಣ ಮಾಡಿದರು. ಇದಕ್ಕೆ ಮುಖ್ಯ ಕಾರಣ ಭೂಮಾಲೀಕರು ದಲಿತ ಕೃಷಿಕೂಲಿಗಳನ್ನು ಬಹಿಷ್ಕಾರ ಹಾಕಿದ್ದರೂ ಅವರಿಗೆ ಆ ಅಂಗಡಿಯ ಮಾಲೀಕ ದವಸ ಧಾನ್ಯಗಳನ್ನು ನೀಡಿದ್ದು. ಹೀಗೆ ಅಪಹರಣಗೊಂಡ ವ್ಯಕ್ತಿಯನ್ನು ಬಿಡಿಸಿಕೊಂಡು ಬರಲು ತೆರಳಿದ ಕೃಷಿ ಕೂಲಿಗಳ ಹಾಗೂ ಭೂಮಾಲೀಕರ ಗೂಂಡಾಗಳ ನಡುವೆ ಸಂಘರ್ಷವೇರ್ಪಟ್ಟು ಭೂಮಾಲೀಕರ ಬೆಂಬಲಿಗನೊಬ್ಬ ಅದರಲ್ಲಿ ಹತ್ಯೆಯಾದನು. ಈ ಘಟನೆ ಕಿಲ್ವೇನ್ಮಣಿಯ ಹತ್ಯಾಕಾಂಡಕ್ಕೆ ತಕ್ಷಣದ ಕಾರಣವಾಯಿತು. ಆದರೆ ಮೇಲ್ಜಾತಿ ಭೂಮಾಲೀಕರಲ್ಲಿದ್ದ ’ಸ್ವಾಭಿಮಾನಿ ದಲಿತ’ರ ಮೇಲಿನ ಸಿಟ್ಟು ಅದಕ್ಕೆ ಶಾಶ್ವತ ಕಾರಣವಾಗಿತ್ತು.

1968 ಡಿಸೆಂಬರ್ 25ನೇ ತಾರೀಖಿನಂದು ರಾತ್ರಿ ಹತ್ತು ಗಂಟೆಯ ಸಮಯಕ್ಕೆ ಲಾರಿಗಳಲ್ಲಿ ಬಂದ ಸುಮಾರು 200 ಭೂಮಾಲೀಕರ ಗೂಂಡಾಗಳು ದಲಿತ ಕೇರಿಯನ್ನು ಸುತ್ತುವರಿದು ನಿಂತರು. ಕೇರಿಯಿಂದ ಒಂದು ಸೊಳ್ಳೆಯೂ ಹೊರಹೋಗದಂತೆ ದಿಗ್ಭಂಧನ ವಿಧಿಸಿದರು. ಇಬ್ಬರು ಕೃಷಿಕೂಲಿಗಳನ್ನು ಗುರಿಮಾಡಿ ಬಂದೂಕಿನಿಂದ ಸುಟ್ಟು ಗಾಯಗೊಳಿಸಲಾಯಿತು. ಈ ಸದ್ದು ತಿಳಿದು ಹೊರಬಂದ ದಲಿತರ ಕೈಯಲ್ಲಿದ್ದ ಆಯುಧ ಕೇವಲ ಕಲ್ಲುಗಳು ಮಾತ್ರ. ಒಂದೆಡೆ ದಲಿತ ಯುವಕರು ಹಾಗೂ ವಯಸ್ಕರು ಕಲ್ಲುಗಳನ್ನು ತೂರುತ್ತಾ ಭೂಮಾಲೀಕರ ಗೂಂಡಾಗಳನ್ನು ಹಿಂದೆ ಸರಿಸುತ್ತಿದ್ದರೆ ಭೂಮಾಲೀಕರ ಗೂಂಡಾಗಳು ದಲಿತರು ಗುಂಪುಗಟ್ಟಿದ್ದ ಸ್ಥಳವನ್ನು ಹುಡುಕುತ್ತಿದ್ದರು. ಸುರಕ್ಷತೆಗಾಗಿ ಹೆಂಗಸರು, ವಯಸ್ಸಾದ ಮುದುಕ, ಮುದುಕಿಯರು ಹಾಗೂ ಮಕ್ಕಳನ್ನು ತನ್ನೊಡಲಲ್ಲಿ ತುಂಬಿಕೊಂಡಿದ್ದ ಗುಡಿಸಲು ಆ ಪಾಪಿಗಳ ಕಣ್ಣಿಗೆ ಬಿದ್ದೇಬಿಟ್ಟಿತು. ಆ ಗುಡಿಸಿಲಿನ ಸುತ್ತ ನೆರೆದ ದುಷ್ಕರ್ಮಿಗಳು ಗುಡಿಸಲಿಗೆ ಬೆಂಕಿ ಇಟ್ಟೇಬಿಟ್ಟರು. ಬೆಂಕಿಯ ತಾಪ ತಾಳಲಾರದೇ ಹೊರಬಂದ ಇಬ್ಬರು ಮುದುಕರನ್ನು ಕತ್ತರಿಸಿ ಮತ್ತೆ ಗುಡಿಸಿಲಿನೊಳಕ್ಕೆ ಎಸೆದರು. ಮಕ್ಕಳಾದರೂ ಬದುಕಿಕೊಳ್ಳಲೆಂದು ಗುಡಿಸಿಲಿನೊಳಗಿದ್ದ ಹೆಂಗಸರು ಇಬ್ಬರು ಮಕ್ಕಳನ್ನು ಹೊರಹಾಕಿದರು. ಆದರೆ ಒಂದೇ ಕ್ಷಣದಲ್ಲಿ ಮತ್ತೆ ಆ ಮಕ್ಕಳಿಬ್ಬರನ್ನೂ ಧಗಧಗನೆ ಉರಿಯುತ್ತಿರುವ ಗುಡಿಸಿಲಿನೊಳಕ್ಕೆ ಎಸೆಯಲಾಯಿತು. ಕೆಲವೇ ಕ್ಷಣಗಳಲ್ಲಿ ಆ ಗುಡಿಸಲು ಸುಟ್ಟು ಭಸ್ಮವಾಯಿತು. ಅದರಲ್ಲಿದ್ದ 5 ಮುದುಕರು, 16 ಮಹಿಳೆಯರು ಹಾಗೂ 23 ಮಕ್ಕಳೂ ಸೇರಿ 44 ಜನ ದಲಿತರು ಸುಟ್ಟು ಕರಕಲಾಗಿದ್ದರು.

ಇಂತಹ ನರಮೇಧ ನಡೆಸಿದ ಮೇಲೆ ಆ ದುಷ್ಕರ್ಮಿಗಳು ನೇರವಾಗಿ ಹೋದದ್ದು ಪೊಲೀಸ್ ಸ್ಟೇಷನ್ನಿಗೆ. ಅಲ್ಲಿ ತಮಗೆ ರಕ್ಷಣೆ ಬೇಕೆಂದು ಪೊಲೀಸ್ ಸೆಕ್ಯುರಿಟಿ ಪಡೆದರು. ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಅಣ್ಣಾದೊರೈ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದಾಗಿ ಭರವಸೆ ನೀಡಿದರು. ಭೂಮಾಲೀಕರನ್ನು ಹಾಗೂ ದುಷ್ಕರ್ಮಿಗಳನ್ನು ಜೈಲಿಗೆ ಅಟ್ಟಲಾಯಿತು. 10 ಜನರಿಗೆ 10 ವರ್ಷಗಳ ಕಾಲ ಶಿಕ್ಷೆಯನ್ನು ಸೆಷನ್ ಕೋರ್ಟ್ ವಿಧಿಸಿತು. ಅದರಲ್ಲಿ ಭೂಮಾಲೀಕರ ನಾಯಕ ಗೋಪಾಲಕೃಷ್ಣನ್ ನಾಯ್ಡು ಸಹ ಸೇರಿದ್ದನು. ಆದರೆ 1975ರಲ್ಲಿ ಸಾಕ್ಷಿಗಳ ಕೊರತೆಯ ಕಾರಣ ನೀಡಿ ಮದ್ರಾಸ್ ಹೈ ಕೋರ್ಟ್ ನಾಯ್ಡುಗೆ ವಿಧಿಸಿದ್ದ ಶಿಕ್ಷೆಯನ್ನು ರದ್ದುಗೊಳಿಸಿ ಬಿಡುಗಡೆಗೊಳಿಸಿತು. ನ್ಯಾಯಾಲಯದ ಶಿಕ್ಷೆಯಿಂದ ತಪ್ಪಿಸಿಕೊಂಡ ನಾಯ್ಡುವನ್ನು 1980ರಲ್ಲಿ ಪ್ರತೀಕಾರವಾಗಿ ಕೊಲೆ ಮಾಡಲಾಯಿತು.

ಕಿಲ್ವೇನ್ಮಣಿ ಘಟನೆಯು ಭಾರತದ ಭೂಹೋರಾಟಗಳ ಧಿಕ್ಕನ್ನು ಬದಲಾಯಿಸಿತು. ದೇಶಾದ್ಯಂತ ಹಲವು ಕಡೆ ನೂರಾರು ಭೂಹೋರಾಟಗಳು ನಡೆದವು. ವಿಪರ್ಯಾಸವೆಂದರೆ ಪ್ರತಿ ಬಾರಿಯೂ ಈ ದೇಶದಲ್ಲಿ ಒಂದು ಹುಲ್ಲುಕಡ್ಡಿಯು ಪ್ರಗತಿಪರವಾಗಿ ಅಲುಗಾಡಬೇಕೆಂದರೆ ದಲಿತರ ಮಾರಣ ಹೋಮವೇ ನಡೆಯಬೇಕಲ್ಲ!

ಕಿಲ್ವೇನ್ಮಣಿ ಘಟನೆ ಅಧರಿಸಿ ಹಲವು ಕಾದಂಬರಿಗಳು ಬಂದಿವೆ. ಸಿನೆಮಾಗಳನ್ನು ಮಾಡಲಾಗಿದೆ. ಇತ್ತೀಚೆಗೆ ತಮಿಳಿನಲ್ಲಿ ತೆರೆಕಂಡ ಅಸುರನ್ ಸಿನೆಮಾದಲ್ಲಿ ಕಿಲ್ವೇನ್ಮಣಿ ಹೋಲುವ ಘಟನೆಯೂ ಸೇರಿದೆ. ಅರವಿಂದನ್ ಸಿನೆಮಾದ ಪ್ರಮುಖ ಕಥೆ ಕಿಲ್ವೇನ್ಮಣಿ.

ಕೋಮುವಾದದ ಫೈಲ್ಸ್‌ಗಳೇ ಸದ್ದು ಮಾಡುತ್ತಿರುವ ಈ ಕಾಲಘಟ್ಟದಲ್ಲಿ ದಲಿತ್ ಫೈಲ್ಸ್‌ಗಳನ್ನು ಪರಿಗಣಿಸುವುದೇ ಈ ಮೇಲ್ಜಾತಿ ಹಿಂದೂ ಸಮಾಜ?


ಇದನ್ನೂ ಓದಿ: ಮಾತು ಮರೆತ ಭಾರತ; ದಲಿತ್ ಫೈಲ್ಸ್: ಸ್ವಾತಂತ್ರ್ಯದ ಹೊಸ್ತಿಲಲ್ಲಿ ಸಾಸನೂರು ಹತ್ಯಾಕಾಂಡ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...