Homeಕವನಎರಡು ಕವನಗಳು; ದೇವರಿಗೊಂದು ಪತ್ರ & ಶವ ಯಾತ್ರೆ

ಎರಡು ಕವನಗಳು; ದೇವರಿಗೊಂದು ಪತ್ರ & ಶವ ಯಾತ್ರೆ

- Advertisement -
- Advertisement -

ದೇವರಿಗೊಂದು ಪತ್ರ

ಓ ಪ್ರಭುವೆ
ನೀ ನನ್ನ ಅಸ್ಪೃಶ್ಯನನ್ನಾಗಿಸಿದ್ದಕ್ಕೆ
ಕೃತಜ್ಞತೆಗಳು
ಜಗದ ದುಃಖ ಅವಮಾನಗಳ
ಜೊತೆಯಾಗಿಸಿದ್ದಕ್ಕೆ.

ಪಕ್ಕದ ಅಮೆರಿಕಾದೊಳು
ಕರಿಯರ ಕೊಲೆಯಾದಾಗಲೆಲ್ಲ
ಸೋದರರ ಸಾವಿಗಾಗಿ ಅಳುವ
ರುಡಾಲಿಗಳು ನಾವೆ.
ಅನುಮಾನದ ತುಪಾಕಿಗೆ
ಬಲಿಯಾದ ಮೆಕ್ಲಿನ್, ಫ್ಲಾಯ್ಡ್
ಲಾಕಪ್‌ನಲ್ಲಿ ಕೊಲೆಯಾದ ಸ್ಟೀವ್
ಗಲ್ಲಿಗೇರಿದ ಬೆಂಜಮಿನ್
ಇವರೆಲ್ಲ ನನ್ನ ರಕ್ತ ಸಂಬಂಧಿಗಳೆ.

ಪ್ರತಿದಿನ ಬಜಾರಿನೊಳು
ಬಿಕರಿಯಾಗುತ್ತಿರುವ
ಸೂಳೆಯರು ನನ್ನ ಸೋದರಿಯರೆ.

ಓ ಪ್ರಭುವೆ
ಇಲ್ಲಿ! ನಾವು ಎಷ್ಟೊಂದು ಧನ್ಯರು
ಈ ಸಂತೆಯೊಳು
ನಮ್ಮ ಬೆವರಿಗೆ, ಕಣ್ಣೀರಿಗೆ
ಎಷ್ಟೊಂದು ಬೇಡಿಕೆ.
ಸಾವಿನ ಸರತಿಯಲ್ಲಿ
ನಾವು ಕಾಯಬೇಕಿಲ್ಲ
ನಮ್ಮ ಸತ್ತ ಶವವೂಳಲು
ಈ ಭೂಮಿಯ ನೀ ಛಿದ್ರಮಾಡಲಿಲ್ಲ
ಅದಕ್ಕೆ ನಾವು ನಿನಗೆ ಮತ್ತಷ್ಟು ಕೃತಜ್ಞರು.

 

’ಶವ ಯಾತ್ರೆ’

ಶವಯಾತ್ರೆಗೆ ಸಜ್ಜಾಗಿದ್ದ ತಮಟೆಗಳು
ಕುಣಿದು ಕುಪ್ಪಳಿಸುತ್ತಿರುವಂತೆ
ಮಧ್ಯರಾತ್ರಿಯೊಂದು ಕನಸ್ಸು ಬಿತ್ತು.

ತಮಟೆಗಳ ಸದ್ದಡಗಿದ ಮೇಲೆ
ಶವ ಕೇಳಿತು.
ದಯಮಾಡಿ ಭೇದವಿಲ್ಲದ ಜಾಗದಲಿ
ನನಗೊಂದು ಗೋರಿಮಾಡಿ
ಈ ಶವಕ್ಕೊಂದು ಜಾತಿಯಿಲ್ಲದ ಮಸಣ ಹುಡುಕಿ ಎಂದು.

ಕೆಲವರು ನಗುತ್ತಿದ್ದರೆ
ಕೆಲವರು ಮೌನ
ಶವ ಮತ್ತೆ ಕೇಳಿತು.
ಎಲ್ಲಿ ಬಂದೂಕಿನ ಗುಂಡು ಸಿಡಿಯುವುದಿಲ್ಲವೋ
ಹೆಣ್ಣಿನ ಚೀರು ಧ್ವನಿ ಕೇಳುವುದಿಲ್ಲವೋ
ಮುಳ್ಳು ತಂತಿಯ ಗಡಿಗಳಿರುವುದಿಲ್ಲವೊ
ಮನುಷ್ಯರೆಲ್ಲ ಮನುಷ್ಯರೇ
ಆಗಿರುವ ಜಾಗದಲಿ ನನಗೊಂದು ಗೋರಿಮಾಡಿ.

ತಮಟೆಗಳ ಕುಣಿತ ಹೆಚ್ಚಾಯಿತು,
ಶವ ಕೂಗಿಕೊಳ್ಳುತ್ತಲೇ ಇತ್ತು.
ಕಣ್ಣೀರು ಜಾರದ, ಮುಖಬಾಡಿ, ತುಟಿಯೊಣಗಿ
ರಕ್ತದ ಕಲೆ ಇರದ ಜಾಗ ಹುಡುಕಿ.

ಗದ್ದಲ ಮತ್ತಷ್ಟು ಜೋರಾಯಿತು.
ಎಲ್ಲರೂ ಶವಕ್ಕೆ ಸಿಂಗರಿಸಿ
ಹೂತುಹಾಕಲು ಮುಂದಾದರು.

ಕೊನೆಯದಾಗಿ..!
ಅಂತಿಮ ಯಾತ್ರೆಗೆ ಬಂದಿದ್ದ
ಪಾದ್ರಿಯೊಬ್ಬರು
ಭೂಮಿಯ ಮೇಲಿನ ಮನುಷ್ಯರೆಲ್ಲರು
ದೇವರ ಮಕ್ಕಳು
ನಾವೆಲ್ಲರೂ ಸಮಾನರು ಎಂದು
ಶವದ ಎದುರು ಪ್ರಾರ್ಥಿಸಿದರು.


ಇದನ್ನೂ ಓದಿ: ನಿದ್ದೆಯಲ್ಲಿ ಮನುಷ್ಯ…!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...

ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರನ್ನು ವಾಪಸ್ ಕರೆತಂದ ಕೇಂದ್ರ ಸರ್ಕಾರ

ವರ್ಷದ ಹಿಂದೆ, ಅಂದರೆ 2025ರ ಜೂನ್ ತಿಂಗಳಲ್ಲಿ ಬಾಂಗ್ಲಾದೇಶದ ಗಡಿಯಾಚೆಗೆ ತಳ್ಳಿದ್ದ ನಾಲ್ವರು ಭಾರತೀಯರು ಬುಧವಾರ (ಜು.8) ಪಶ್ಚಿಮ ಬಂಗಾಳದ ಬೀರ್‌ಭೂಮ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಹಿಂದಿರುಗಿದ್ದಾರೆ ಎಂದು ವರದಿಯಾಗಿದೆ. ಸುನಾಲಿ...

ಬೆಂಗಳೂರಿನ ಜ್ವಲಂತ ನಾಗರಿಕ ಸಮಸ್ಯೆಗಳ ವಿರುದ್ಧ ಜುಲೈ 12ಕ್ಕೆ ಬೃಹತ್ ‘ಜನಾಕ್ರೋಶ ಸಮಾವೇಶ

ಸಿಲಿಕಾನ್ ಸಿಟಿ ಬೆಂಗಳೂರಿನ ನಾಗರಿಕರು ಪ್ರತಿನಿತ್ಯ ಎದುರಿಸುತ್ತಿರುವ ನರಕಸದೃಶ ಸಮಸ್ಯೆಗಳ ವಿರುದ್ಧ ಮತ್ತು ಆಡಳಿತ ವ್ಯವಸ್ಥೆಯ ಭ್ರಷ್ಟಾಚಾರವನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೃಹತ್ ‘ಜನಾಕ್ರೋಶ ಸಮಾವೇಶ’ವನ್ನು ಹಮ್ಮಿಕೊಂಡಿದೆ. ಈ ‘ಜನಾಕ್ರೋಶ...

ಭೀಕರ ಪ್ರವಾಹಕ್ಕೆ ಕೊಚ್ಚಿಹೋದ 3 ಸಾವಿರ LPG ಸಿಲಿಂಡರ್

ಮಹಾರಾಷ್ಟ್ರದಲ್ಲಿ ವಾರದಿಂದ ಸುರಿಯುತ್ತಿರುವ ಮಳೆ ಇಡೀ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಪ್ರಕೃತಿಯ ವಿಕೋಪದ ನಡುವೆ ರಾಯಗಢ ಜಿಲ್ಲೆಯಿಂದ ಅತ್ಯಂತ ಆಘಾತಕಾರಿ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್...

ಹೈದರಾಬಾದ್‌| ಪವನ್‌ ಕಲ್ಯಾಣ್‌ ಟೀಕಿಸಿದ ಯೂಟ್ಯೂಬರ್ ರಾವಣ್ ಮೇಲೆ ಯುಎಪಿಎ ಕೇಸ್; ನಿವಾಸದಲ್ಲಿ ಪೊಲೀಸರ ಶೋಧ

ತೆಲುಗು ಯೂಟ್ಯೂಬರ್, ಸಾಮಾಜಿಕ ಕಾರ್ಯಕರ್ತ ರಾವಣ್‌ (ಬಚಲಕೂರಿ ಜೋಸೆಫ್) ಅವರನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಬಂಧಿಸಿದ್ದು, ಆಂಧ್ರಪ್ರದೇಶ ಪೊಲೀಸರು ಹೈದರಾಬಾದ್‌ನಲ್ಲಿರುವ ಯೂಟ್ಯೂಬರ್ ರಾವಣ್ ನಿವಾಸದಲ್ಲಿ...

ಬೀದಿಬದಿ ವ್ಯಾಪಾರಿಗಳ ಒಕ್ಕಲೆಬ್ಬಿಸುವಿಕೆ ಖಂಡಿಸಿ ಸರ್ಕಾರದ ವಿರುದ್ದ ಬೃಹತ್ ಪ್ರತಿಭಟನೆ

ಬೆಂಗಳೂರು ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವಿನ ಹೆಸರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ನಡೆಸುತ್ತಿರುವ ಏಕಪಕ್ಷೀಯ ಕಾರ್ಯಾಚರಣೆ ಬಡ ಬೀದಿಬದಿ ವ್ಯಾಪಾರಿಗಳ ಬದುಕನ್ನು ಬೀದಿಗೆ ತಳ್ಳಿದೆ. ಪ್ರಾಧಿಕಾರದ ಈ ಜನವಿರೋಧಿ ‘ಆಪರೇಷನ್’ ಖಂಡಿಸಿ,...

ಬಿಹಾರ| ಹಿಜಾಬ್ ತೆಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಮುಸ್ಲಿಂ ಮಹಿಳೆಗೆ ಒತ್ತಾಯಿಸಿದ ಗುಂಪು

ಪುರುಷರ ಗುಂಪೊಂದು ದಾರಿಯಲ್ಲಿ ಹೋಗುತ್ತಿದ್ದ ಮುಸ್ಲಿಂ ಮಹಿಳೆಯನ್ನು ತಡೆದು ದೌರ್ಜನ್ಯ ಎಸಗಿದ್ದು, ಆಕೆ ಧರಿಸಿದ್ದ ಹಿಜಾಬ್ ತಗೆದು ಹಣೆಗೆ ಸಿಂಧೂರ ಇಟ್ಟುಕೊಳ್ಳುವಂತೆ ಹಿಂದುತ್ವ ಕಿಡಿಗೇಡಿಗಳು ಒತ್ತಾಯಿಸಿರುವ ವಿಡಿಯೊ ವೈರಲ್ ಆಗಿದೆ. ಜುಲೈ 8 ರ...

ಕೃಷಿ ಭೂಮಿ ಉಳಿಸಲು ರೈತ ಸಂಘಟನೆಗಳಿಂದ ಜುಲೈ 11ಕ್ಕೆ ‘ಬಿಡದಿ ಚಲೋ’

ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಜುಲೈ 11 ರಂದು ಬೃಹತ್ ‘ಬಿಡದಿ ಚಲೋ’ ಹಸಿರು ಹೆದ್ದಾರಿ ಪ್ರತಿಭಟನೆಯನ್ನು...

ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ : ಕದನ ವಿರಾಮ ಮುಕ್ತಾಯಗೊಂಡಿದೆ ಎಂದ ಟ್ರಂಪ್

ಮಂಗಳವಾರ ರಾತ್ರಿಯಿಂದ (ಭಾರತೀಯ ಕಾಲಮಾನ) ಅಮೆರಿಕ-ಇರಾನ್ ನಡುವೆ ಮತ್ತೆ ಕಾಳಗ ಶುರುವಾಗಿದ್ದು, ಕದನ ವಿರಾಮ ಮುಕ್ತಾಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟರ್ಕಿಯಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಮಾತನಾಡಿದ ಟ್ರಂಪ್...