ಪ್ರವಾದಿ ಮೊಹಮ್ಮದ್ರವರನ್ನು ನಿಂದಿಸಿದ್ದ ಬಿಜೆಪಿಯ ಉಚ್ಛಾಟಿತ ನಾಯಕಿ ನೂಪುರ್ ಶರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ, ಅವರ ವಿರುದ್ಧ ಮೌಖಿಕ ಹೇಳಿಕೆ ನೀಡಿದ್ದ ನ್ಯಾಯಾಧೀಶರಿಗೆ ವಯಕ್ತಿಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ.
ಜಸ್ಟಿಸ್ ಸೂರ್ಯಕಾಂತ್ ಮತ್ತು ಜಸ್ಟಿಸ್ ಜೆ.ಪಿ ಪರ್ದಿವಾಲ ಅವರಿದ್ದ ಪೀಠವು ಎಲ್ಲಾ ಎಫ್ಐಆರ್ಗಳನ್ನು ಒಂದೇ ಎಂದು ಪರಿಗಣಿಸಿ ವಿಚಾರಣೆ ನಡೆಸುವಂತೆ ನೂಪುರ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. “ದೇಶದಲ್ಲಿ ಉಂಟಾದ ಉದ್ವಿಗ್ನ ವಾತಾವರಣಕ್ಕೆ ನೂಪುರ್ ಶರ್ಮಾ ಒಬ್ಬರೆ ಕಾರಣವಾಗಿದ್ದಾರೆ, ಹಿಡಿತವಿಲ್ಲದ ನಾಲಿಗೆಯಿಂದ ರಾಷ್ಟ್ರಕ್ಕೆ ಬೆಂಕಿ ಹಚ್ಚಿದೆ” ಎಂದು ಕಿಡಿಕಾರಿತ್ತು.
ಅದಾದ ನಂತರ ಅವರಿಬ್ಬರಿಗೂ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಬಂದಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನ್ಯಾಯಾಧೀಶ ಪರ್ದಿವಾಲರವರು “ನ್ಯಾಯಾಧೀಶರು ತಮ್ಮ ತೀರ್ಪುಗಳಿಗಾಗಿ ವೈಯಕ್ತಿಕ ದಾಳಿಗೆ ಒಳಗಾಗುವುದು ಅಪಾಯಕಾರಿ ಸನ್ನಿವೇಶಕ್ಕೆ ಕಾರಣವಾಗುತ್ತವೆ. ಆಗ ನ್ಯಾಯಾಧೀಶರು ಕಾನೂನು ಏನು ಯೋಚಿಸುತ್ತದೆ ಎಂಬುದರ ಬದಲಿಗೆ ಮಾಧ್ಯಮಗಳು ಏನು ಯೋಚಿಸುತ್ತವೆ ಎಂಬುದರ ಕುರಿತು ಯೋಚಿಸಬೇಕಾಗುತ್ತದೆ. ಇದು ಕಾನೂನಿನ ನಿಯಮಕ್ಕೆ ಹಾನಿ ಮಾಡುತ್ತದೆ” ಎಂದಿದ್ದಾರೆ.
ನ್ಯಾಯಾಧೀಶರ ವಿರುದ್ಧ ರಚನಾತ್ಮಕ ವಿಮರ್ಶಾತ್ಮಕ ಮೌಲ್ಯಮಾಪನಕ್ಕಿಂತ ಹೆಚ್ಚಾಗಿ ವೈಯಕ್ತೀಕರಿಸಿದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ನ್ಯಾಯಾಂಗ ಸಂಸ್ಥೆಗೆ ಹಾನಿ ಮತ್ತು ಅದರ ಘನತೆಯನ್ನು ಕಡಿಮೆ ಮಾಡುತ್ತದೆ. ತೀರ್ಪುಗಳ ಪರಿಹಾರವು ಸಾಮಾಜಿಕ ಮಾಧ್ಯಮದಲ್ಲಿ ಅಲ್ಲ ಆದರೆ ಶ್ರೇಣಿಯ ಉನ್ನತ ನ್ಯಾಯಾಲಯಗಳಲ್ಲಿದೆ ಎಂದಿದ್ದಾರೆ.
ಸಂವಿಧಾನದ ಅಡಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ದೇಶದಾದ್ಯಂತ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಇನ್ನೊಂದೆಡೆ ಸುಪ್ರೀಂ ವಿರುದ್ಧ ನಾಲಿಗೆ ಹರಿಯಬಿಟ್ಟಿದ್ದಕ್ಕಾಗಿ OPIndia ಮತ್ತು ಅದರ ಸಂಪಾದಕಿ ನೂಪುರ್ ಜೆ ಶರ್ಮಾ ವಿರುದ್ಧ ಟಿಎಂಸಿ ಮುಖಂಡ ಸಾಕೇತ್ ಗೋಖಲೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿ ಮುಖವಾಣಿ OPIndia ಮತ್ತು ಅದರ ಸಂಪಾದಕಿ ನೂಪುರ್ ಜೆ ಶರ್ಮಾ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಕೋರಿ ಭಾರತದ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ರವರಿಗೆ ಪತ್ರ ಬರೆಯಲಾಗಿದೆ.
ಇದನ್ನೂ ಓದಿ: ಸುಪ್ರೀಂ ಕೋರ್ಟ್ಗೆ ಅವಮಾನ – OPIndia, ನೂಪುರ್ ಜೆ ಶರ್ಮಾ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ
ಜುಲೈ 1 ರಂದು OPIndia ದ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ “ಸುಪ್ರೀಂ ಕೋರ್ಟ್ ಇಸ್ಲಾಂ ಧರ್ಮೀಯರಂತೆ ಮಾತನಾಡುತ್ತದೆ, ಇಸ್ಲಾಮಿಕ್ ಮತಾಂಧರಿಂದ ಹಿಂದೂ ವ್ಯಕ್ತಿಯ ಶಿರಚ್ಛೇದಕ್ಕೆ ನೂಪುರ್ ಶರ್ಮಾ ಅವರ ‘ಸಡಿಲ ನಾಲಿಗೆ’ಯನ್ನು ದೂರುವ ಮೂಲಕ ಕೆಟ್ಟ ವಿಚಾರಣೆ ನಡೆಸುತ್ತದೆ. ಸುಪ್ರೀಂ ಕೋರ್ಟ್ ಷರಿಯಾವನ್ನು ಅನುಸರಿಸುತ್ತದೆಯೇ?” ಎಂದು ಟ್ವೀಟ್ ಮಾಡುವ ಮೂಲಕ ಅವಮಾನ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.



ಸತ್ಯ ಹೇಳಿದಾಗ ವೈಯುಕ್ತಿಕವಾಗಿ ದಾಳಿ ಮಾಡೋದು ಈ ಪ್ರಕರಣದಲ್ಲಿ ಹಲವು ಮತಾಂಧರ ಕುಕೃತ್ಯವಾಗಿದೆ,ಮಾನ್ಯ ನ್ಯಾಯಮೂರ್ತಿಗಳೇ,ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ತಾವು ಸಂವಿಧಾನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದ್ದೀರಿ, ತಾವು ದೇಶದ ಸಂವಿಧಾನಕ್ಕೆ ಉತ್ತರದಾಯಿಗಳೇ ಹೊರತು ಇಂತಹ ಮತಾಂಧ ಕಿಡಗೇಡಿ ಗಳಿಗಲ್ಲ.
ಮೊದಲು ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದು ಆಲ್ಟ ನ್ಯೂಸ್ ನ ಜುಬೇರ್ ನನ್ನ ಗೆಲ್ಲಿಗೇರಿಸುವ ಕೆಲಸ ಮಾಡಬೇಕು ,ಅದುಬಿಟ್ಟು ಇಸ್ಲಾಮ್ ನಲ್ಲಿನ ನೈಜ ಅಂಶಗಳ ಬಗ್ಗೆ ಮಾತನಾಡಿದ ನೂಪುರ್ ಶರ್ಮ ಬಗ್ಗೆ ಮೌಖಿಕ ಸೂಚನೆ ನೀಡುವ ಮೊದಲು ಯೋಚಿಸಬೇಕು
ಮೊದಲು ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದು ಆಲ್ಟ ನ್ಯೂಸ್ ನ ಜುಬೇರ್ ನನ್ನ ಗೆಲ್ಲಿಗೇರಿಸುವ ಕೆಲಸ ಮಾಡಬೇಕು ,ಅದುಬಿಟ್ಟು ಭಶೀರರ ಧರ್ಮದ ನೈಜ ಅಂಶಗಳ ಬಗ್ಗೆ ಮಾತನಾಡಿದ ನೂಪುರ್ ಶರ್ಮ ಬಗ್ಗೆ ಮೌಖಿಕ ಸೂಚನೆ ನೀಡುವ ಮೊದಲು ಯೋಚಿಸಬೇಕು
ನ್ಯಾಯಧೀಶರೆ ನೀವು ತಲೆ ಕೆಡಿಸಿಕೊಳ್ಳಬೇಡಿ ಅವುಗಳು ಹೇಸಿಗೆ ತಿನ್ನೋ ಜಾತಿಗೆ ಸೇರಿವೆ ಏನೇ ಬೊಗಳಿದರು ನೀವು ಸಂವಿದಾನಾತ್ಮಕ ತೀರ್ಪು ಕೊಡಿ. ಕೆಲವು ಹುಚ್ಚು ನಾಯಿಗಳು ಅಂತೂ ಒಂದು ಧರ್ಮದ ಬಗ್ಗೆ ಹಗುರವಾಗಿ ಮಾತಾಡಿದ್ರೆ ಅವ್ರಿಗೆ ಹೀರೋ ಅಂತ ಸ್ವೀಕಾರ ಮಾಡತವರೇ. ಹೇಸಿಗೆಯಲ್ಲಿನ ಹುಳುಗಳು ಅದರ ಆಚೆ ಬರಲು ಇಷ್ಟ ಪಡೋದಿಲ್ಲ. ಈ ಹಲ್ಕಟ್ ಸೂ.. ಮ ###ನೆಟ್ಟಗೆ ಅವರ ಅವರ ಧರ್ಮ ಗ್ರಂಥಗಳು ಓದಿದರೆ ಸಾಕು ಬೇರೆ ಧರ್ಮ ಗ್ರಂಥ ಓದೋದು ಬೇಡ.
ನಮ್ಮ ದೇಶ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ದೇಶ ಉಳಿಯಬೇಕೆಂದರೆ ದೇಶದ ಶ್ರೇಷ್ಠ ನ್ಯಾಯಾಲಯ ನಿಷ್ಪಕ್ಷಪಾತವಾಗಿ ನಿರ್ಭಯವಾಗಿ ದಿಟ್ಟತನದಿಂದ ಕಾರ್ಯ ನಿರ್ವಹಿಸಿದರೆ ಮಾತ್ರ ಸಾದ್ಯ. ಬಿ.ಜೆ.ಪಿ. ಆರ್.ಎಸ್ಸ್.ಎಸ್ಸ್. ರವರ ಕುತಂತ್ರಗಳಿಗೆ ನಾಯಾಧೀಶರಗಳು ಹೆದರ ಬೇಕಾಗಿಲ್ಲ. ದೇಶ ಪ್ರಜೆಗಳು ನಿಮ್ಮ ಜೊತೆ ಇರುತ್ತಾರೆ.