Homeಕರ್ನಾಟಕಫೇಸ್‌ಬುಕ್‌ನಿಂದ ‘ಪ್ರತಿಧ್ವನಿ.ಕಾಂ’ ವೆಬ್‌ಸೈಟ್‌‌ಗೆ ತಡೆ; ಕಾಣದ ಕೈಗಳ ಷಢ್ಯಂತ್ರ ಎಂದು ಆಕ್ರೋಶ

ಫೇಸ್‌ಬುಕ್‌ನಿಂದ ‘ಪ್ರತಿಧ್ವನಿ.ಕಾಂ’ ವೆಬ್‌ಸೈಟ್‌‌ಗೆ ತಡೆ; ಕಾಣದ ಕೈಗಳ ಷಢ್ಯಂತ್ರ ಎಂದು ಆಕ್ರೋಶ

- Advertisement -
- Advertisement -

ಸ್ವಯಂ ಸೇವಾ ಸಂಸ್ಥೆಯಾದ ‘ಟ್ರುಥ್ ಪ್ರೊ ಫೌಂಡೇಶನ್‌ ಇಂಡಿಯಾ’ ಮೂಲಕ ಕಳೆದ ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಪ್ರತಿಧ್ವನಿ.ಕಾಂ ಸುದ್ದಿ ಪೋರ್ಟಲ್‌ ಅನ್ನು ಫೇಸ್‌ಬುಕ್ ಶುಕ್ರವಾರದಂದು ಏಕಾಏಕಿ ತಡೆ ಹಿಡಿದಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರುವ ಪ್ರತಿಧ್ವನಿ.ಕಾಂ, “ಪ್ರತಿಧ್ವನಿ ವಿರುದ್ಧ ಷಢ್ಯಂತ್ರ ರೂಪಿಸಿದ್ದು, ಕಳೆದ ಕೆಲವು ತಿಂಗಳಿಂದ ಪ್ರತಿಧ್ವನಿಯ ಧ್ವನಿ ಅಡಗಿಸಲು ಕಾಣದ ಕೈಗಳು ನಡೆಸುತ್ತಿರುವ ಪ್ರಯತ್ನ ಇದಾಗಿದೆ” ಎಂದು ಹೇಳಿದೆ.

ಫೇಸ್‌ಬುಕ್ ಪ್ರತಿಧ್ವನಿ ವೆಬ್‌ಸೈಟ್‌‌ನ ಎಲ್ಲಾ ಸುದ್ದಿಗಳನ್ನು ವೆಬ್‌ಸೈಟ್‌ನ ಪೇಜ್‌ನಿಂದ ಈಗಾಗಲೆ ಡಿಲೀಟ್‌ ಮಾಡಿದೆ. ಅಷ್ಟೆ ಅಲ್ಲದೆ, ವೆಬ್‌ಸೈಟ್‌ನ ಸುದ್ದಿಗಳನ್ನು ಹಂಚಿಕೊಂಡಿದ್ದ ಇತರ ವ್ಯಕ್ತಿಗಳ ಪೋಸ್ಟ್‌ಗಳನ್ನೂ ಅದು ತೆಗೆದು ಹಾಕಿದೆ. ಜೊತೆಗೆ ಪ್ರತಿಧ್ವನಿ ವೆಬ್‌ಸೈಟ್‌ನ ಯಾವುದೇ ಹೊಸ ಸುದ್ದಿಗಳನ್ನೂ ಹಂಚಲು ಕೂಡಾ ಫೇಸ್‌ಬುಕ್ ಅನುಮತಿ ನೀಡುತ್ತಿಲ್ಲ ಎಂದು ಪ್ರತಿಧ್ವನಿ ಅಸಮಾಧಾನ ವ್ಯಕ್ತಪಡಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಕಳೆದ ಎರಡು ತಿಂಗಳಿಂದ ನಮ್ಮ ಅಧಿಕೃತ ಮೇಲ್ ಐಡಿ ಹ್ಯಾಕ್ ಮಾಡಿ ನಮ್ಮ ಡೇಟಾವನ್ನು ಕದಿಯಲಾಯ್ತು. ಇದರಿಂದಾಗಿ ಸಂಸ್ಥೆಯಲ್ಲಿ ಬಳಸಲಾಗುವ ಎಲ್ಲಾ ಕಂಪ್ಯೂಟರ್ ಜೊತೆಗೆ ಸಿಬ್ಬಂದಿಯ ಮೊಬೈಲ್‌ಗಳು ಸಹ ಸಂಪೂರ್ಣ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದ್ದವು. ಕೆಲವು ಮೊಬೈಲ್ ಆನ್ ಆದರೂ ಅದರಲ್ಲಿದ್ದ ಡೇಟಾ ಕಾಣೆಯಾಗಿದ್ದವು” ಎಂದು ಪ್ರತಿಧ್ವನಿ ತಂಡ ಹೇಳಿದೆ.

“ಸೈಬರ್ ಪೊಲೀಸರಿಗೆ ದೂರು ನೀಡಿದರೂ ಸಹ ಇದುವರೆಗೂ ಯಾವುದೇ ಪ್ರಯೋಜನ ಆಗಿಲ್ಲ. ತಾಂತ್ರಿಕ ವರ್ಗದವರ ಸಹಾಯದಿಂದ ಎಲ್ಲವನ್ನು ಮತ್ತೊಮ್ಮೆ ರೀಸೆಟ್ ಮಾಡಿ ಕೆಲಸ ಆರಂಭಿಸಿದರೆ, ಯೂಟ್ಯೂಬ್ ಬ್ಲಾಕ್ ಮಾಡಲಾಯಿತು. ಕಳೆದ ಸೋಮವಾರವಷ್ಟೇ ಈ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಆದರೆ ಈಗ ಫೇಸ್ ಬುಕ್ ಸಮಸ್ಯೆ ಕಾಡಲಾರಂಭಿಸಿದೆ. ಈಗ ನಮ್ಮ ವೆಬ್‌ಸೈಟ್ ಲಿಂಕ್ ಅನ್ನು ಫೇಸ್‌‌‌ಬುಕ್‌ನಿಂದ ಬ್ಲಾಕ್‌‌ ಮಾಡಲಾಗಿದೆ” ಎಂದು ತಂಡವೂ ಹೇಳಿದೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಪ್ರತಿಧ್ವನಿ ಸಂಸ್ಥಾಪಕರಾದ ಶಿವಕುಮಾರ್‌ ಸಿದ್ದಪ್ಪ,“ವೆಬ್‌ಸೈಟ್‌ನ ಯಾವುದೇ ಕಂಟೆಂಟ್‌ ಅನ್ನು ಫೇಸ್‌ಬುಕ್‌ಗೆ ಹಂಚಲು ಬಿಡುತ್ತಿಲ್ಲ. ಕೆಲವೊಂದು ವಿಡಿಯೊಗಳನ್ನು ಕೂಡಾ ತೆಗೆದು ಹಾಕಿದ್ದಾರೆ. ನಮ್ಮನ್ನು ದೂರ ಇಡಲು ಬೇಕಾಗಿ ಉದ್ದೇಶಪೂರ್ವಕವಾಗಿ ಫೇಸ್‌ಬುಕ್ ಇದನ್ನು ಮಾಡುತ್ತಿದೆ. ಈ ಹಿಂದೆ ನಿಯಮ ಉಲ್ಲಂಘನೆ ಆದರೆ ನೋಟಿಸ್ ನೀಡುತ್ತಿದ್ದರು. ಆದರೆ ಈಗ ಏಕಾಏಕಿ ಎಲ್ಲವನ್ನೂ ತೆಗೆದಿದ್ದಾರೆ. ನಮ್ಮ ಹೆಚ್ಚಿನ ಓದುಗರು ಫೇಸ್‌ಬುಕ್‌ ಮೂಲಕವೇ ಬರುತ್ತಾರೆ. ಅಲ್ಲಿ ನಮ್ಮನ್ನು ತಡೆಹಿಡಿದು ಅವರಿಗೆ ತಲುಪದಂತೆ ಮಾಡಲಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ: ನೂಪುರ್ ಶರ್ಮಾ, ಪತ್ರಕರ್ತೆ ಸಬಾ ನಖ್ವಿ ಸೇರಿದಂತೆ ಹಲವರ ವಿರುದ್ಧ ಪ್ರಕರಣ

“ಈ ತೊಂದರೆಯ ಬಗ್ಗೆ ನಮ್ಮ ತಾಂತ್ರಿತ ತಂಡ ಫೇಸ್‌ಬುಕ್‌ಗೆ ದೂರು ನೀಡಿದ್ದಾರೆ. ಅವರು ರಿವೀವ್ ಮಾಡಲು 48 ಗಂಟೆ ಕೇಳಿದ್ದಾರೆ. ಇಲ್ಲಿಯೆ ನೋಡಿ, ಅವರಿಗೆ ರಿವೀವ್ ಮಾಡಲು 48 ಗಂಟೆಗಳು ಬೇಕು. ಆದರೆ ತೆಗೆದು ಹಾಕಲು ಯಾವುದೇ ಸಮಯ ನೀಡಿಲ್ಲ. ಅದೂ ಕೂಡಾ ಯಾವುದೇ ನೋಟಿಸ್ ನೀಡದೆ ಎಲ್ಲವನ್ನೂ ತೆಗೆದು ಹಾಕಿದ್ದಾರೆ. ಅವರು ರಿವೀವ್‌ ಮಾಡಲು 48 ಗಂಟೆಗಳು ತೆಗೆದುಕೊಂಡ ಹಾಗೆ ನಮಗೆ ಕೂಡಾ ಒಂದು ಅವಕಾಶ ನೀಡಬೇಕಿತ್ತಲ್ಲವೆ. ಎಲ್ಲಾ ನಿಯಮಗಳನ್ನು ಮೀರಿ ಬರೆಯುವ ಎಷ್ಟೊ ವೆಬ್‌ಸೈಟ್‌ಗಳು ಫೇಸ್‌ಬುಕ್‌ನಲ್ಲಿ ಹಲವಾರು ಇವೆ. ಸರ್ಕಾರದ ಪರವಾಗಿ ಬರೆಯುವ ಅವುಗಳನ್ನು ಫೇಸ್‌ಬುಕ್‌ ಏನು ಮಾಡುವುದೆ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆಗಾಗಿ ನಾನುಗೌರಿ.ಕಾಂ ಫೇಸ್‌ಬುಕ್ ಪ್ರತಿನಿಧಿಗಳಿಗೆ ಸಂಪರ್ಕಿಸಿತ್ತಾದರೂ, ಅವರು ಸಂಪರ್ಕಕ್ಕೆ ಸಿಗಲಿಲ್ಲ. ಅವರ ಪ್ರತಿಕ್ರಿಯೆ ಸಿಕ್ಕ ತಕ್ಷಣವೇ ಅದನ್ನು ಅಪ್‌ಡೇಟ್‌ ಮಾಡುತ್ತೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...

ದೆಹಲಿ| ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಎಂಸಿಡಿ

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಮೊಘಲರ ಕಾಲದ ಐತಿಹಾಸಿಕ ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ನಿರ್ಮಾಣಗಳನ್ನು ಸಮೀಕ್ಷೆ ಮಾಡಿ, ಒತ್ತುವರಿಯನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೋಮವಾರ (ಆ.31) ಪ್ರಾರಂಭಿಸಿದೆ...

ವೆನೆಜುವೆಲಾ ಮತ್ತೆ ಎದ್ದು ನಿಲ್ಲಲಿದೆ: ಬಂಧನದಲ್ಲಿರುವ ವೆನೆಜುವೆಲಾ ಮಾಜಿ ಅಧ್ಯಕ್ಷ ಮಡುರೊ ಮೊದಲ ಫೋಟೋ ಹಂಚಿಕೆ

ಜನವರಿಯಲ್ಲಿ ಅಮೆರಿಕ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ, ಅಮೆರಿಕದ ಬಂಧನ ಕೇಂದ್ರದಿಂದ ತಮ್ಮ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಡುರೊ ಅವರ ಫೋಟೋಗಳು ಹೊರಬಂದಿರುವುದು...

‘ಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ...

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು 'ಶುದ್ಧೀಕರಣ' ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ...

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...