Homeಅಂಕಣಗಳುಸ್ವಾಮೀಜಿಗಳ ಅವಾಂತರಗಳು ಇನ್ನೂ ಮುಂದಿವೆಯಂತಲ್ಲಾ!

ಸ್ವಾಮೀಜಿಗಳ ಅವಾಂತರಗಳು ಇನ್ನೂ ಮುಂದಿವೆಯಂತಲ್ಲಾ!

- Advertisement -
- Advertisement -

| ಯಾಹೂ |

ಹಿಂದೂ ಧರ್ಮಕ್ಕಂಟಿದ ಜಾತಿ ಎಂಬ ಶಾಪದ ಕಾಯಿಲೆ ಉಲ್ಬಣಿಸಿದೆಯಂತಲ್ಲಾ. ಒಂದು ಕಲಸಿದ ಪದಾರ್ಥ ಶೇಖರಗೊಂಡ ತುದಿ, ಕುತುರೆ ಎನ್ನಿಸಿಕೊಳ್ಳುತ್ತದೆ. ಜಾತಿಗಳ ಮೇಲೆ ಕುಳಿತ ಸ್ವಾಮಿಗಳೂ ಈ ಕುತುರೆಯೇ, ಅದಕ್ಕೆ ಯಾವಾಗಲೂ ಊಧ್ರ್ವ ಮುಖವಿರಬೇಕು. ಒಳ್ಳೆ ಭಾಷೆ, ನಡವಳಿಕೆ ಬಹಳ ಮುಖ್ಯ. ಅದರಲ್ಲೂ ಭಾಷೆ ಬಸವಣ್ಣ ಹೇಳಿದಂತೆ ಸ್ಪಟಿಕದ ಸಲಾಕೆಯಂತಿರಬೇಕು. ಕಬ್ಬಿಣದ ರಾಡು ಅಥವಾ ಚೂರಿಯಂತಿರಬಾರದು. ಆದರೆ, ಈ ಆಧುನಿಕ ಯುಗದ ಸ್ವಾಮಿಗಳನ್ನು ನೋಡಿದರೆ, ಬಗಲಲ್ಲಿ ಚೂರಿ ಇಟ್ಟುಕೊಂಡವರಂತೆ ಕಾಣುತ್ತಾರಲ್ಲಾ. ಈಚೆಗೆ ವಾಲ್ಮೀಕಿ ಜನಾಂಗ ಮೀಸಲಾತಿ ಬೇಡಿಕೆಗಾಗಿ ಸಂಘಟಿತಗೊಂಡು, ನೂರಾರು ಮೈಲಿ ಕಾಲ್ನಡಿಗೆ ಮಾಡಿ ಬೆಂಗಳೂರು ತಲುಪಿತು. ಸಾವಿರಾರು ಜನರ ತಲೆ ನೋಡಿದ ಪ್ರಸನ್ನಾನಂದ ಪುರಿಯವರ ತಲೆ ತಿರುಗಿತು. ನಾಲಿಗೆ ಹೊರಳಿತು, “ನಮ್ಮ ಜನಾಂಗದ 17 ಶಾಸಕರು ಕೈಕೊಟ್ಟರೆ ಕುಮಾರಸ್ವಾಮಿ ಗೊಟಕ್ ಅಂತಾರೆ, ಇಲ್ಲಿಗೆ ಕುಮಾರಸ್ವಾಮಿನೂ ಬರಬೇಕು, ಅವರಪ್ಪನೂ ಬರಬೇಕು ಎಂದರು”. ಅಲ್ಲಿಗೆ ಪಾದಯಾತ್ರೆಯ ಸಾಧನೆ ಗೊಟಕ್ ಅಂತು. ಕುಂಬಾರನಿಗೆ ನೂರು ದಿವಸ, ದೊಣ್ಣೆ ನಾಯಕನಿಗೆ ಮೂರು ನಿಮಿಷ ಎಂಬಂತೆ ಮಾಡಿದ ಪ್ರಸನ್ನಾನಂದ ಪುರಿ ಸ್ವಾಮಿಗೆ ಯಾರಾದರೂ `ಪ್ರಸನ್ನ’ ಅಂದರೇನೆಂದು ಹೇಳಿಕೊಡಬೇಕಾಗಿದೆಯಲ್ಲಾ, ಥೂತ್ತೇರಿ!

ಈ ಸ್ವಾಮಿಗಳ ಅವಾಂತರಗಳು ಇನ್ನ ಭವಿಷ್ಯದಲ್ಲಿ ಭೀಕರವಾಗಿವೆಯಂತಲ್ಲಾ. ಹವ್ಯಕ ಜನಾಂಗದ ವಿದ್ವಾಂಸರನ್ನ ಕೇಳಿದರೆ, ನಮ್ಮ ಜನಾಂಗದ ಗುರುಗಳ ಸಾಧನೆ ಯಾರಿಂದಲೂ ಸಾಧ್ಯವಿಲ್ಲ ಬಿಡಿ. ಅವರು ಮಾಡಿದ್ದು ರೇಪಲ್ಲ ಒಪ್ಪಿತ ಸಂಭೋಗ ಎಂಬ ಕೋರ್ಟ್ ತೀರ್ಪನ್ನೇ ಮಠೋಪಜೀವಿಗಳು “ಹುರ್ರೇ ನಮ್ಮ ಸ್ವಾಮಿಗಳು ರೇಪು ಮಾಡಿಲ್ಲವಂತೆ ಬರೀ ಸಂಭೋಗವಂತೆ” ಎಂದು ಪಟಾಕಿ ಸಿಡಿಸಿ ಮಲೆನಾಡೇ ಮಾರ್ದನಿಗೊಳ್ಳುವಂತೆ ಮಾಡಿದರು. ಅದಷ್ಟೇ ಅಲ್ಲ, ಸ್ವಾಮಿಗಳಾದವರಿಗೆ ಸಂಭೋಗ ಕಡ್ಡಾಯ; ಅದರಲ್ಲಿ ಯಾವ ಅಪಮಾನವೂ ಇಲ್ಲ, ಅಂಜಿಕೆಯೂ ಇಲ್ಲ ಎಂಬಂತೆ ಕುಣಿದು ಕುಪ್ಪಳಿಸಿವೆ. ಸ್ವಾಮಿಗಳ ಹಿಂಬಾಲಕರ ಎದುರು ನೈತಿಕತೆ ಉಳಿಸಿಕೊಂಡ ಜನ ನೆಮ್ಮದಿಯಿಂದ ಬದುಕುವುದೇ ದುಸ್ತರವಾಗಿದೆ. ಅಂತೂ ನಮ್ಮ ರಘುಪತಿ ರಾಘವನ ಸಾಧನೆ ಸರಿಗಟ್ಟುವ ಸ್ವಾಮಿ ಇನ್ನು ಬರಲಾರ ಎಂದರಲ್ಲಾ. “ಸ್ವಲ್ಪ ಇರಿ ಉಡುಪಿಯ ಮಠೋಪಜೀವಿಗಳ ಬಗ್ಗೆ ಏನು ಹೇಳತ್ತೀರಿ” ಎಂದಾಗ, ಉಡುಪಿ ಬಿಡಿ ಅಲ್ಲಿ ವ್ಯಭಿಚಾರ ಕಡ್ಡಾಯ, ಮಕ್ಕಳಾದರೆ ಅಲ್ಲಿ ಇಲ್ಲಿ ಬಿಟ್ಟು ಓದಿಸಬಹುದು. ಇಂತದೊಂದು ಆಪಾದನೆಗೆ ಬಲರಾಮನ ಗೋವಿನಂತಹ ಪೇಜಾವರರೇ ಗುರಿಯಾಗಿರುವಾಗ ಉಳಿದವರ ಬಗ್ಗೆ ಮಾತನಾಡುವುದೇ ಮಹಾಪರಾಧ ಎಂದರಲ್ಲಾ, ಥೂತ್ತೇರಿ!!

ಇನ್ನ ಸಿದ್ದರಾಮಯ್ಯನ ಅಭಿಮಾನಿ ಸ್ವಾಮಿಯೊಬ್ಬರು ಆಗಾಗ್ಗೆ ಸುದ್ದಿ ಮಾಡುತ್ತಲೇ ಇರುತ್ತಾರೆ. ಅದಕ್ಕೂ ಮೊದಲು `ಆ ಸಿದ್ದರಾಮಯ್ಯ ನನಗೆ ಬರೀ ನಮಸ್ಕಾರ ಮಾಡುತ್ತಾನೆಯೇ ಹೊರತು, ಕಾಲಿಗೆ ಬೀಳುವುದಿಲ್ಲ’ ಎಂದು ಗುಟುರು ಹಾಕಿದ್ದ ಆ ಗುರುಗಳು, `ಸಿದ್ದು ಮತ್ತೆ ಮುಖ್ಯಮಂತ್ರಿಯಾಗಬೇಕು. ನನ್ನ ಆಶೀರ್ವಾದ ಸದಾ ಅವರ ಜೊತೆಯಲ್ಲಿರುತ್ತದೆ’ ಎಂದಿದ್ದರು. ಈ ಆಶೀರ್ವಾದ ಅಂದರೇನು, ಅದು ಸದಾ ಜೊತೆಯಲ್ಲಿರಬೇಕಾದರೆ ಅದರ ಆಕಾರ ಏನು ಎಂಬುದನ್ನು ಗುರುಗಳು ವಿವರಿಸಿಲ್ಲ. ಏಕೆಂದರೆ ಅವರಾಡಿದ ಮಾತನ್ನೇ ಭಕ್ತಾದಿಗಳು ತಮಗೆ ತಿಳಿದಂತೆ ಅರ್ಥೈಸಿಕೊಳ್ಳಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಸದರಿ ಗುರುಗಳು ಕುರಿ ರಾಷ್ಟ್ರೀಯ ಪ್ರಾಣಿ. ಅದರ ಹತ್ಯೆ ನಿಲ್ಲಿಸಿ ಗೌರವ ಸಲ್ಲಿಸಬೇಕೆಂದು ಕರೆಕೊಟ್ಟಿದ್ದರು. ಈ ವಿಷಯವಾಗಿ ಕುರಿಗಳ ಕಡೆಯಿಂದ ಯಾವ ಬೆಂಬಲ ಬರದಿದ್ದರೂ, ಕುರಿ ಕೂದು ಧರ್ಮ ಸುಲಿದು ದುಗ್ಗಾಣಿಗೆ ತೆಗೆದುಕೊಂಡು ಹೋಗುವ ಸಾಬರು, ಬೋಟಿಪ್ರಿಯರು, ಚಾಪೀಸ್ ಭಕ್ಷುಗಳು, ಕೈಮಾಕಾಂಕ್ಷಿಗಳು ಮತ್ತೆ ತಲೆಕಾಲು ಸೂಪಿನ ವ್ಯಸನಿಗಳು ಒಕ್ಕೊರಲಿನಿಂದ ಪ್ರತಿಭಟಿಸಿದಾಗ ಕುರಿಗಳೇ ತಲೆಯಲ್ಲಾಡಿಸಿ ಬೆಂಬಲ ಸೂಚಿಸಿದವಲ್ಲಾ, ಥೂತ್ತೇರಿ!!!

ಜಗದ್ಗುರುಗಳೇ ದಿಕ್ಕು ತಪ್ಪಿದ ಭಾಷೆ ಬಳಸಿ, ಅಸಂಬದ್ದ ಮಾತನಾಡುತ್ತಿರುವಾಗ, ಇನ್ನ ಅವರ ಕಾಲಿಗೆ ಬೀಳುತ್ತಿರುವ ರಾಜಕಾರಣಿಗಳ ಮಾತು ಕೇಳಬೇಕೆ, ಅದರಲ್ಲೂ ನಮ್ಮ ಈಶ್ವರಪ್ಪನ ನಾಲಿಗೆಯಂತೂ ಬಳ್ಳಾರಿ ಜಾಲಿ ಮುಳ್ಳಿನಂತೆ. ಎಷ್ಟೇ ಆಗಲಿ ಅಲ್ಲಿಂದಲೇ ಶಿವಮೊಗ್ಗದ ಕಡೆ ಹೋದವರಲ್ಲವೇ. ಆದರೂ ಕಲೆ, ಸಾಹಿತ್ಯ, ಸಂಗೀತ, ಸಂಸ್ಕøತಿಗಳನ್ನ ಪೋಷಿಸಿಕೊಂಡು ಬರುತ್ತಿರುವ ಆ ಶಿವಮೊಗ್ಗದ ಸಂಸ್ಕøತಿಯ ಕಿಂಚಿತ್ ಸ್ಪರ್ಶವೂ ತಮ್ಮ ಮೇಲಾಗದಂತೆ ಎಚ್ಚರಿಕೆ ವಹಿಸಿ ಮೇಲೇರಿದ ಈಶ್ವರಪ್ಪನ ಒರಿಜಿನಾಲಿಟಿಯನ್ನ ಮೆಚ್ಚಲೇಬೇಕಂತಲ್ಲಾ. ಯಾರೇ ಆಗಲಿ ತಮ್ಮ ಮೂಲ ಸಂಸ್ಕøತಿ ಬಿಟ್ಟುಕೊಟ್ಟರೆ ವ್ಯಕ್ತಿತ್ವವೇ ನಾಶವಾಗಿ ಹೋದಂತೆ, ಇದನ್ನ ಇಟ್ಟುಕೊಂಡರೆ “ಪಾಪ ಅವನೆಡ್ತಿ ಸರಿಯಿಲ್ಲ ಇನ್ನೇನು ಮಾಡ್ತನೆ” ಎನ್ನುತ್ತಾರೆ. ಯಾರಾದರೂ ಹೆಣ್ಣು ಮಗಳು ರೇಪಿಗೆ ಒಳಗಾದರೆ “ಕೇಳಿದ ಕೂಡ್ಳೆ ಕೊಟ್ಟಿದ್ರೆ ರೇಪ್ಯಾಕಾಗದು” ಎನ್ನುತ್ತಾರೆ. ಹಾಗೆಯೇ “ಮಂತ್ರಿಯಾಗಿ ಇಷ್ಟು ಆಸ್ತಿ ಮಾಡಿಕೊಂಡಿರಲ್ಲಾ” ಎಂದರೆ, ಮಿನಿಸ್ಟರಾಗಿ ಪಾರ್ಟಿ ಜನಗಳನ್ನ ಸಾಕಬೇಕಲ್ಲ ಏಣು ಮಾಡ್ಳಿ ಎಂದು ಇನ್ನ ಅಂದಿಲ್ಲವಂತಲ್ಲಾ, ಥೂತ್ತೇರಿ!!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...