Homeಕರ್ನಾಟಕಮೈತ್ರಿ ಕಡೆಯಿಂದ ಎರಡು ಅಸ್ತ್ರ: ಶಾಸಕತ್ವದ ಅನರ್ಹತೆ, ಸಚಿವಗಿರಿಯ ಆಮಿಷ!

ಮೈತ್ರಿ ಕಡೆಯಿಂದ ಎರಡು ಅಸ್ತ್ರ: ಶಾಸಕತ್ವದ ಅನರ್ಹತೆ, ಸಚಿವಗಿರಿಯ ಆಮಿಷ!

- Advertisement -
- Advertisement -

ಸರ್ಕಾರ ಬೀಳುವ ಎಲ್ಲ ಲಕ್ಷಣಗಳು ಮೋಲ್ನೋಟಕ್ಕೆ ಮುಖಕ್ಕೆ ಹೊಡೆಯುತ್ತಿರುವ ವೇಳೆಯೂ, ಮೈತ್ರಿ ಸರ್ಕಾರದ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕೊನೆ ಹಂತದ ರಕ್ಷಣೆಗೆ ಎಂಬಂತೆ ಎರಡು ಅಸ್ತ್ರಗಳನ್ನು 3 ಗಂಟೆ ಸುಮಾರಿಗೆ ಹೊರಬಿಟ್ಟಿದ್ದಾರೆ.

ಒಂದು, ರಾಜಿನಾಮೆ ನೀಡಿದ್ದೇವೆ ಎಂದು ಬಿಜೆಪಿ ಬಣದ ಜೊತೆ ಹೋಗಲು ಸಜ್ಜಾಗಿರುವ ಶಾಸಕರನ್ನು ಕಾನೂನಿನ ಅಸ್ತ್ರದಿಂದ ಬೆದರಿಸುವುದು. ಇನ್ನೊಂದು ನೀವು ಬಂದರೆ ನಿಮಗೆ ಸಚಿವಗಿರಿ (ಪರೋಕ್ಷವಾಗಿ ಇತರೆ ಸವಲತ್ತೂ ಸೇರಿ) ನೀಡುತ್ತೇವೆ ಎಂಬ ಪ್ರೀತಿಯ ಆಮಿಷ!

ಹಲವು ಕಾನೂನು ತಜ್ಞರೊಂದಿಗೆ ಚರ್ಚಿಸಿ ಸಂವಿಧಾನದ ಶೆಡ್ಯೂಲ್ 10ರ ಪ್ಯಾರಾ 2ರ ಮೊರೆ ಹೋಗಿರುವ ಮೈತ್ರಿ ಬಣದ ನಾಯಕರು ಸೆಕ್ಷನ್ 164-1ಬಿ ಅಡಿ ಭಿನ್ನಮತದ ಬಾವುಟ ಹಾರಿಸಿರುವ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್‍ಗೆ ದೂರು ನೀಡಲು ಸಜ್ಜಾಗಿದ್ದಾರೆ.

ಅಂತಹ ಸಂದೇಶವೊಂದನ್ನು ತೇಲಿ ಬಿಡುವ ಮೂಲಕ ಮುಂಬೈನ ಸೋಫಿಟೆಲ್ ಹೊಟೆಲ್‍ನಲ್ಲಿ ಕುಳಿತು ಕರ್ನಾಟಕದ ರಾಜಕೀಯ ಬೆಳವಣೆಗಳನ್ನು ಟಿವಿಯ ಮೂಲಕ ವೀಕ್ಷಿಸುತ್ತಿರುವ ಅತೃಪ್ತರಿಗೆ ಕಾನೂನಾತ್ಮಕ ಕ್ರಮದ ಗುಮ್ಮವನ್ನು ತೋರಿಸಿದ್ದಾರೆ. ಅಲ್ಲಿರುವ ಶಾಸಕರಿಗೆ ‘ಹಾಗೆಲ್ಲ ಮಾಡಲು ಆಗುವುದಿಲ್ಲ’ ಎಂದು ಬಿಜೆಪಿ ಅಭಯ ನೀಡುತ್ತಿರಬಹುದು. ಆದರೆ, ಕಳೆದ ವರ್ಷವಷ್ಟೇ ಹೆಚ್ಚೂ ಕಡಿಮೆ ಇದೇ ಮಾದರಿಯಲ್ಲಿ, ಇಂಥದ್ದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿ 18 ಶಾಸಕರನ್ನು ಅನರ್ಹಗೊಳಿಸಿದ್ದು, ಅದನ್ನು ಅಲ್ಲಿನ ಕೋರ್ಟ್ ಮಾನ್ಯ ಮಾಡಿದ್ದು ಇನ್ನೂ ಹಚ್ಚ ಹಸಿರಾಗಿರುವಾಗ, ಅತೃಪ್ತ ಶಾಸಕರಲ್ಲಿ ಒಂದು ಅಳುಕಂತೂ ಮೂಡಿರಲು ಸಾಧ್ಯ.

ಈ ಸೆಕ್ಷನ್ ಅಳವಡಿಕೆ ಈಗಿನ ಸಂದರ್ಭದಲ್ಲಿ ಸಾಧ್ಯವೇ ಇಲ್ಲವೇ ಎಂಬುದು ಚರ್ಚೆಯ ವಿಷಯವೇ. ಆದರೆ ಸ್ಪೀಕರ್‍ಗೆ ಮನವರಿಕೆ ಮಾಡಲು, ಅದಕ್ಕೆ ತಕ್ಕ ಪುರಾವೆ ಒದಗಿಸಲು ಮೈತ್ರಿಬಣ ಯಶಸ್ವಿಯಾದರೆ, ರಾಜಿನಾಮೆ ಕೊಟ್ಟಿದ್ದೇವೆ ಎನ್ನುತ್ತಿರುವ ಶಾಸಕರ ಸದಸ್ಯತ್ವದ ಮೇಲೆ ತೂಗುಗತ್ತಿ ಗ್ಯಾರಂಟಿ. ಏಕೆಂದರೆ ಈಗ ಶಾಸಕರು ಸದನಕ್ಕೆ ರಾಜಿನಾಮೆ ಸಲ್ಲಿಸಿದ್ದಾರಷ್ಟೇ. ಅದೂ ಕೂಡ, ಇದನ್ನು ಅಂಗೀಕರಿಸುವ ಅಂತಿಮ ಅಧಿಕಾರವುಳ್ಳ ಸ್ಪೀಕರ್ ಕೈಗೆ ಅಧಿಕೃತವಾಗಿ ರಾಜಿನಾಮೆ ಪತ್ರಗಳು ತಲುಪಿಲ್ಲ. ಇದು ತಾಂತ್ರಿಕ ವಿಷಯವಾಗಿದ್ದರಿಮದ ಸ್ಪೀಕರ್ ವಿವೇಚನೆಯ ಮೇಲೆಯೇ ನಿಂತಿದೆ. ಈ ಅತೃಪ್ತರು ಪಕ್ಷಕ್ಕೆ ಇನ್ನೂ ರಾಜಿನಾಮೆ ನೀಡದೇ ಇರುವುದರಿಂದ ಉಭಯ ಪಕ್ಷಗಳು ಪಕ್ಷಾಂತರ ನಿಷೇಧ ಕಾನೂನಿನ ಅಡಿ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಳ್ಳಬಹುದು. ಈ ಶಾಸಕರು ಬೇರೆ ಪಕ್ಷದೊಂದಿಗೆ ಗುರುತಿಸಿಕೊಂಡು ಮೂಲ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂದು ನಿರೂಪಿಸಬೇಕು. ಇದು ಈಗಿನ ಪರಿಸ್ಥಿಯಲ್ಲಿ ಕೊಂಚ ಕಷ್ಟವಾದರೂ, ಶಾಸಕರಲ್ಲಿ ಮಾತ್ರ ಭಯ ಹುಟ್ಟಿಸಲು ಸಫಲವಾಗಿರಬಹುದು.

ಮೈತ್ರಿಯ ಉಭಯ ಪಕ್ಷಗಳು ಶಾಸಕಾಂಗ ಪಕ್ಷದ ಸಭೆ ಕರೆದು ವಿಪ್ ಜಾರಿ ಮಾಡಿದರೆ ಹಾಜರಾಗದ ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್‍ಗೆ ದೂರು ನೀಡಬಹುದು. ಅಷ್ಟರ ಮಟ್ಟಿಗೆ ಕಾನೂನಾತ್ಮಕ ಮೊದಲ ಅಸ್ತ್ರ ಶಾಸಕರಲ್ಲಿ ದಿಗಿಲು ಹುಟ್ಟಿಸುವಲ್ಲಿ ಸಫಲವಾಗಬಹುದು.

ಇನ್ನು ಎರಡನೇ ಅಸ್ತ್ರ ಬೆದರಿಕೆಯದ್ದಲ್ಲ, ಬದಲಿಗೆ ತಮ್ಮದೇ ಶಾಸಕರನ್ನು ರಮಿಸುವಂತದ್ದು. ಬನ್ನಿ ಬನ್ನಿ ಇಲ್ಲಿ ಸಚಿವ ಸಂಪುಟದ ಎಲ್ಲ ಸ್ಥಾನಗಳು ಖಾಲಿಯಿವೆ. ನಿಮಗೆಲ್ಲರಿಗೂ ಅವಕಾಶವಿದೆ ಎಂದು ಪ್ರತಿ ಆಹ್ವಾನ ನೀಡಲಾಗಿದೆ. ಅದಕ್ಕಾಗಿ ಎಲ್ಲ ಸಚಿವರ ರಾಜಿನಾಮೆ ಪಡೆದಿರುವುದಾಗಿ ಉಭಯ ಪಕ್ಷಗಳ ನಾಯಕರು ಅಧಿಕೃತವಾಗಿ ಘೋಷಿಸಿದ್ದಾರೆ.

ಮೊದಲ ಅಸ್ತ್ರಕ್ಕೆ ಬೆದರಿ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಕೆ. ಆರ್ ಪೇಟೆಯ ಶಾಸಕ ನಾರಾಯಣಗೌಡ ಥರದ ವೈಯಕ್ತಿಕ ವರ್ಚಸಿಲ್ಲದ ಶಾಸಕರು ಶರಣಾಗಿ ಹೇಗೂ ಸಚಿವ ಸ್ಥಾನ ಸಿಗಲಿದೆ ಎಂದು ಮಣಿಯಬಹುದು ಎಂದು ಮೈತ್ರಿ ಬಣ ಅಂದಾಜಿಸಿದೆ. ಸಚಿವರಾಗಲೆಂದೇ ಭಿನ್ನಮತ ಸಾರಿರುವ ರಾಮಲಿಂಗಾರೆಡ್ಡಿ, ಎಸ್‍ಟಿ ಸೋಮಶೇಖರ್, ಬೈರತಿ ಬಸವರಾಜ, ರಮೇಶ ಜಾರಕಿಹೊಳಿ ಥರದವರು ಖುಷಿಯಿಂದ ವಾಪಸ್ ಬರಬಹದೆಂಬ ನಿರೀಕ್ಷೆ ಮೈತ್ರಿಬಣದ್ದು.

ಆದರೆ ಇದೆಲ್ಲವು ಅಷ್ಟು ಸರಳವಾಗಿಲ್ಲ. ಸಂಕೀರ್ಣ ಕಾನೂನನ್ನು ಹೇಗೆ ಬಳಸಬಹುದು ಎಂಬ ಬಗ್ಗೆ ಕಾನೂನು ತಜ್ಞರಲ್ಲೇ ಭಿನ್ನಾಭಿಪ್ರಾಯ ಇವೆ. ಬಿಜೆಪಿ ಕೂಡ ಕಾನೂನು ಪಂಡಿತರೊಂದಿಗೆ ಸಮಾಲೋಚನೆ ನಡೆಸಿದ್ದು ಯಾವುದೇ ಅಪಾಯವಿಲ್ಲ ಎಂಬ ಭರವಸೆಯನ್ನು ನೀಡಲು ಸಫಲವಾದರೆ ಮಾತ್ರ ಅತೃಪ್ರಲ್ಲಿ ಧೈರ್ಯ ಬರಬಹುದು.

2006 ಮತ್ತು 2008ರ ಹಗ್ಗಜಗಾಟ ಮರುಕಳಿಸುವ ಎಲ್ಲ ಲಕ್ಷಣಗಳಿವೆ. ಸದ್ಯ ರಾಜಿನಾಮೆ ಕೊಟ್ಟ ಶಾಸಕರನ್ನು ಹೊರತುಪಡಿಸಿದರೆ ಬಿಜೆಪಿ ಸಂಖ್ಯೆ 106 ( ಪಕ್ಷೇತರ ನಾಗೇಶ ಸೇರಿದರೆ 107) ಇದ್ದರೆ ಮೈತ್ರ ಬಣದ ಸಂಖ್ಯೆ 104 ಇದೆ. ಈ ಲೆಕ್ಕಾಚಾರದಲ್ಲಿ ಕತ್ತಿಯಂಚಿನ ಸರಳ ಬಹುಮತವಷ್ಟೇ ಈಗ ಬಿಜೆಪಿಗೆ ಸಿಗುತ್ತದೆ. 104 ಸದಸ್ಯರನ್ನು ಹೊಂದಿರುವ ಮೈತ್ರಿ ಬಣವು ಆಪರೇಷನ್ ಶುರು ಮಾಡಿದರೆ ಮತ್ತೆ ಡೋಲಾಯಮಾನವೇ! 3 ಗಂಟೆಯ ನಂತರದ ಈ ಬೆಳವಣಿಗೆ ಈ ಅಧಿಕಾರದ ಆಟಕ್ಕೆ ಹೊಸ ತಿರುವನ್ನಂತೂ ನೀಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...