Homeನ್ಯಾಯ ಪಥಧರ್ಮಾಂಧ ಮುಸ್ಲಿಂ ಪ್ರಭುತ್ವಗಳು ಮತ್ತು ಪಶ್ಚಿಮದ ದೇಶಗಳ ಇಸ್ಲಮಾಫೋಬಿಯಾದ ನಡುವೆ..

ಧರ್ಮಾಂಧ ಮುಸ್ಲಿಂ ಪ್ರಭುತ್ವಗಳು ಮತ್ತು ಪಶ್ಚಿಮದ ದೇಶಗಳ ಇಸ್ಲಮಾಫೋಬಿಯಾದ ನಡುವೆ..

- Advertisement -
- Advertisement -

ಭಾರತ ಮೂಲದ ಬ್ರಿಟಿಷ್ ಲೇಖಕ ಸಲ್ಮಾನ್ ರಶ್ದಿ ಅವರ ಮೇಲೆ ಕಳೆದ ವಾರ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಯಿತು. ಚೂರಿಯಿಂದ ಹತ್ತಾರು ಬಾರಿ ಇರಿದ ಹದಿ ಮಟಾರ್ ಎಂಬ ವ್ಯಕ್ತಿ 24 ವರ್ಷದವನು. ಅಂದರೆ ರಶ್ದಿ ತಮ್ಮ ವಿವಾದಾತ್ಮಕ ಕಾದಂಬರಿ ’ದ ಸಟಾನಿಕ್ ವರ್ಸಸ್ ಬರೆದಾಗ ಈ ಹಲ್ಲೆಕೋರ ಇನ್ನೂ ಹುಟ್ಟಿರಲಿಲ್ಲ. ಈ ವ್ಯಕ್ತಿಯ ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳ ಪ್ರಕಾರ ಇರಾನಿನ ’ಶಿಯಾ ತೀವ್ರವಾದದ’ ಅನುಯಾಯಿಯಾಗಿರಬಹುದೆಂಬ ಪ್ರಾಥಮಿಕ ವರದಿಗಳನ್ನು ಹಲವು ಮಾಧ್ಯಮಗಳು ಪ್ರಕಟಿಸಿವೆ.

ಸಲ್ಮಾನ್ ರಶ್ದಿ 1988ರಲ್ಲಿ ’ದ ಸಟಾನಿಕ್ ವರ್ಸಸ್ ಕಾದಂಬರಿ ಬರೆದಾಗ ಅದು ಇಸ್ಲಾಂ ಧರ್ಮವನ್ನು ಅವಮಾನಿಸುತ್ತದೆ ಎಂಬ ಕಾರಣಕ್ಕೆ ಅಂದಿನ ಇರಾನಿನ ಪರಮೋಚ್ಚ ಮುಖಂಡ ಅಯಾತೊಲ್ಲ ಖೊಮೇನಿ ರಶ್ದಿ ವಿರುದ್ಧ ಫತ್ವಾ ಹೊರಡಿಸಿದ್ದ. ಈ ಫತ್ವಾ ಎಂತಹ ಗಂಭೀರ ತಿರುವು ಪಡೆದಿತ್ತೆಂದರೆ ರಶ್ದಿ ತಲೆಮರೆಸಿಕೊಂಡು ಬದುಕಬೇಕಾಯಿತು. ’ಈ ಕಾದಂಬರಿಯ ಯಾವುದೇ ಭಾಷೆಯ ಪ್ರಕಾಶಕನನ್ನು ಹುಡುಕಿ ಕೊಲ್ಲಿ, ನಿಮಗೆ ಸ್ವರ್ಗದ ಬಾಗಿಲು ತೆಗೆಯುತ್ತದೆ’ ಎಂಬ ಕರೆ ಕೊಟ್ಟಿದ್ದಲ್ಲದೆ ಮಿಲಿಯನ್ ಡಾಲರ್ ಮೊತ್ತದ ದೊಡ್ಡ ಬಹುಮಾನವನ್ನೂ ಘೋಷಿಸಿದ್ದ. ಜಪಾನಿ ಅನುವಾದಕನನ್ನು1991ರಲ್ಲಿ ಮತಾಂಧರು ಕೊಂದುಹಾಕಿದ್ದರ ಜೊತೆಗೆ ಹಲವು ಹಲ್ಲೆಗಳು ನಡೆದುಹೋದವು. ಫತ್ವಾ ಹೊರಡಿಸಿದ್ದ ಖೊಮೇನಿ ಕೂಡ 1989ರಲ್ಲಿ ಮರಣ ಹೊಂದಿದ. ಈ ಫತ್ವಾ ಕಾರಣಕ್ಕೆ ಹಾಗೂ ಮುಂದುವರಿದು ನಡೆದ ಕೆಲವು ಘಟನೆಗಳಿಂದ ಇರಾನ್ ಮತ್ತು ಪಶ್ಚಿಮ ದೇಶಗಳ ಸಂಬಂಧ ತೀವ್ರಮಟ್ಟದಲ್ಲಿ ಹಳಸಿಹೋಗಿತ್ತು.

ಈಗ ಇರಾನ್ ಸರ್ಕಾರದ ವಕ್ತಾರ ರಶ್ದಿ ಮೇಲಿನ ದಾಳಿಗೆ ತನ್ನ ಪಾತ್ರವೇನಿಲ್ಲ ಎಂದು ಹೇಳಿದ್ದರೂ, ಈಗಲೂ ಈ ದಾಳಿಗೆ ರಶ್ದಿ ಮತ್ತು ಬೆಂಬಲಿಗರೇ ಕಾರಣ – ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಮಾಡಿದ ಅವಹೇಳನಕ್ಕೆ ತಂದ ಶಾಸ್ತಿ ಎಂಬರ್ಥದಲ್ಲಿ ಮಾತನಾಡಿದ್ದಾರೆ; ದಾಳಿಯನ್ನು ಖಂಡಿಸುವ ಗೋಜಿಗೂ ಹೋಗಿಲ್ಲ. ಇದು ಜಗತ್ತಿನಾದ್ಯಂತ ಧರ್ಮಾಧಾರಿತ ಪ್ರಭುತ್ವವನ್ನು ಕಟ್ಟಿಕೊಂಡಿರುವವರು ಮತ್ತು ಆ ದಾರಿಯಲ್ಲಿರುವವರು ವರ್ತಿಸುವ ಸಾಮಾನ್ಯ ಆದರೆ ಕ್ರೂರ ರೀತಿ. ಹೊರಗಿನ ಶತ್ರುಗಳನ್ನು ಕಲ್ಪಿಸಿಕೊಳ್ಳುವುದಷ್ಟೇ ಅಲ್ಲದೆ ತಮ್ಮದೇ ನೆಲದಲ್ಲಿ ತಮ್ಮದೇ ಜನರನ್ನು ಈ ಪ್ರಭುತ್ವಗಳು ದಮನಿಸುತ್ತಿರುವುದಕ್ಕೆ ಸಾವಿರಾರು ಉದಾಹರಣೆಗಳಿವೆ. ಇರಾನ್‌ನಲ್ಲಿ ಇತ್ತೀಚೆಗೆ ಖ್ಯಾತ ಚಿತ್ರ ನಿರ್ದೇಶಕ ಜಫರ್ ಫನಾಹಿಯವರನ್ನು ಆರು ವರ್ಷಗಳ ಸೆರೆಮೆನೆವಾಸಕ್ಕೆ ಗುರಿಪಡಿಸಿದ್ದು ಚರ್ಚೆಯಾಗಿತ್ತು. ಇದಕ್ಕೆ ಮುಖ್ಯ ಕಾರಣ ಪ್ರಭುತ್ವದ ದಮನಕಾರಿ ನೀತಿಗಳನ್ನು ಕಲೆಯ ಮೂಲಕ ಅವರು ವಿಶ್ಲೇಷಿಸಿದ್ದು.

ಇದು ಯಾವುದೋ ಬಿಡಿ ಉದಾಹರಣೆಯೇನಲ್ಲ. ಸೌದಿ ಅರೇಬಿಯಾ ಪತ್ರಕರ್ತ ಜಮಾಲ್ ಖಶ್ಶೋಗಿಯವರನ್ನು ಟರ್ಕಿಯ ರಾಯಭಾರ ಕಚೇರಿಯಲ್ಲಿ ಹತ್ಯೆಗಯ್ಯಲಾಗಿತ್ತು. ಈ ಹತ್ಯೆಯಲ್ಲಿ ಸೌದಿ ರಾಜನ ಪಾತ್ರವಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಮುಸ್ಲಿಂ ಪ್ರಭುತ್ವಗಳು ’ಧರ್ಮ ರಕ್ಷಣೆ’ಯ ಹೆಸರಿನಲ್ಲಿ ಜನಸಾಮಾನ್ಯರನ್ನು ದಾರಿತಪ್ಪಿಸುವ ಕೆಲಸವನ್ನು ಒಂದು ಕಡೆಗೆ ಮತ್ತು ದಿಟ್ಟ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರನ್ನು ದಮನಗೊಳಿಸುವುದನ್ನ ಮತ್ತೊಂದೆಡೆ ಎಗ್ಗಿಲ್ಲದೆ ಮಾಡಿಕೊಂಡುಬರುತ್ತಿವೆ. ಹೀಗಿದ್ದರೂ ಇಂತಹ ಮುಸ್ಲಿಂ ಪ್ರಭುತ್ವಗಳು 24 ವರ್ಷದ ದಾಳಿಕೋರ ಹದಿ ಮಟಾರ್‌ನಂತಹವರನ್ನು ಪ್ರಭಾವಿಸುತ್ತಿರುವುದು ದುರಂತ. ಆದರೆ ಇದಕ್ಕೆ ಪಶ್ಚಿಮ ದೇಶಗಳ ಯುದ್ಧ ನೀತಿಗಳು ಮತ್ತು ಅಲ್ಲಿನ ಸಮಾಜಗಳಲ್ಲಿ ತೀವ್ರತಮವಾಗಿ ಬೆಳೆದಿರುವ ಇಸ್ಲಮಾಫೋಬಿಯಾ ಕೂಡ ಕಾರಣವೆಂಬುದನ್ನು ಮರೆಯುವಂತಿಲ್ಲ.

ನ್ಯಾಟೋ ದೇಶಗಳು ಆಫ್ಘಾನಿಸ್ಥಾನ, ಸಿರಿಯಾ ದೇಶಗಳಲ್ಲಿ ನಡೆಸಿದ ಯುದ್ಧಗಳು, ಇರಾನ್, ಪ್ಯಾಲೆಸ್ಟೀನ್‌ಗಳಲ್ಲಿ ನಡೆಸಿರುವ ಹಸ್ತಕ್ಷೇಪ ಈ ಎಲ್ಲಾ ಕಾರಣಗಳಿಂದ ಅಸಂಖ್ಯಾತ ಮುಸ್ಲಿಮರನ್ನು ತಮ್ಮ ತಾಯ್ನಾಡಿನಿಂದ ಒಕ್ಕಲೆಬ್ಬಿಸುವಂತೆ ಮಾಡಿತು. ಪಶ್ಚಿಮದ ದೇಶಗಳು ನಡೆಸಿದ ಯುದ್ಧಗಳ ಕಾರಣದಿಂದಾಗಿ ೨೦-೨೧ನೇ ಶತಮಾನ ಹಲವು ಮಾನವ ವಲಸೆಗಳಿಗೆ ಕಾರಣವಾಯಿತು. ಈ ವಲಸೆಗಳನ್ನು ಪಶ್ಚಿಮ ದೇಶಗಳ ಬಲಪಂಥೀಯ ಮುಖಂಡರು ತಮ್ಮ ಕೀಳುಮಟ್ಟದ ರಾಜಕಾರಣಕ್ಕೆ ಬಳಸಿಕೊಂಡು ಜನರಲ್ಲಿ ಇಸ್ಲಮಾಫೋಬಿಯಾ ಬಿತ್ತಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡರು. ಜಾರ್ಜ್ ಬುಷ್, ಟ್ರಂಪ್‌ನಂತಹ ಪಾಪ್ಯುಲಿಸ್ಟ್ ಮುಖಂಡರು ಅದಕ್ಕೆ ಧಾರಾಕಾರವಾಗಿ ನೀರೆರೆದರು. ಇವೆಲ್ಲವೂ ಸಮಸ್ಯೆಗಳನ್ನು ಸಂಕೀರ್ಣಗೊಳಿಸಿವೆ. ಜನಸಾಮಾನ್ಯರಿಗೆ ತಿಳಿವಳಿಕೆಯ ಕಡೆಗೆ ನಡೆಯುವ ಹಾದಿಯನ್ನು ದುರ್ಗಮಗೊಳಿಸಿದೆ. ಒಂದು ಕಡೆಗೆ ಮುಸ್ಲಿಂ ಪ್ರಭುತ್ವಗಳು ತಮ್ಮ ಧಾರ್ಮಿಕ ತೀವ್ರವಾದವನ್ನು ಪ್ರಶ್ನಿಸಿಕೊಂಡು-ತೊರೆದು ಜನಪರ ನೀತಿಗಳೆಡೆಗೆ ಮುಖ ಮಾಡಬೇಕಿದ್ದರೆ, ಲಿಬರಲ್ ದೇಶಗಳು ಎಂದು ಕರೆದುಕೊಂಡು ಯುದ್ಧನೀತಿಗಳನ್ನು ಎಗ್ಗಿಲ್ಲದೆ ಅನುಸರಿಸಿ ಇಸ್ಲಮಾಫೋಬಿಯಾ ಪೋಷಿಸುವ ದೇಶಗಳು ಕೂಡ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ತಮ್ಮ ನೀತಿಗಳನ್ನು ಬದಲಿಸಿಕೊಳ್ಳಬೇಕಿದೆ. ತಾವು ಯುದ್ಧಗೈದಿರುವ ರಾಷ್ಟ್ರಗಳ ಭರವಸೆಯನ್ನು ಮರಳಿ ಪಡೆಯಲು ಕೆಲಸ ಮಾಡಬೇಕಿದೆ.

ಸಲ್ಮಾನ್ ರಶ್ದಿ ಪಶ್ಚಿಮ ದೇಶಗಳ ಯುದ್ಧಗಳನ್ನು ತಾವು ಇಸ್ಲಾಂಅನ್ನು ಟೀಕಿಸಿದ ಮಟ್ಟಕ್ಕೆ ವಿರೋಧಿಸಿರಲಿಲ್ಲವೇ? ಬಹುಶಃ ಉತ್ತರ ಹೌದಿರಬಹುದು. ಆದರೆ ಅದು ಅವರ ಮೇಲಿನ ಹಲ್ಲೆಗೆ ಅಥವಾ ಅವರ ಕೊಲೆಗೆ ಹಾತೊರೆಯುವುದಕ್ಕೆ ಕಾರಣವಾಗಬಾರದು. ಕಾದಂಬರಿಕಾರರಾಗಿ ತಮ್ಮದೇ ಆದ ಅನ್ವೇಷಣೆಯಲ್ಲಿದ್ದ ರಶ್ದಿಯವರ ದೃಷ್ಟಿಕೋನವನ್ನು ವಿಚಾರಗಳ ಮೂಲಕ ಎದುರಿಸುವ ಅಗತ್ಯವಿತ್ತು ಅದನ್ನು ವಿರೋಧಿಸುವವರಿಗೆ. ಆ ಮೂಲಕವೇ ಅಮೆರಿಕ-ಯುಕೆಯಂತಹ ಪ್ರಭುತ್ವ ನಡೆಸಿರುವ ದೌರ್ಜನ್ಯಗಳ ಬಗ್ಗೆ ಗಮನ ಸೆಳೆದು ಕೆಲವರನ್ನಾದರೂ ಬದಲಿಸುವ ಪ್ರಯತ್ನ ಮಾಡಬೇಕಿತ್ತು. ಈ ಮಾರ್ಗದ ಬದಲು ಹಲ್ಲೆ-ಹತ್ಯೆಗಳ ಮೂಲಕ ಧ್ವನಿಯನ್ನು ಅಡಗಿಸುವ ಮಾರ್ಗ ಯಾವುದೇ ಕಾಲಕ್ಕೂ ವಿವೇಕಕ್ಕೆ ಎಡೆಮಾಡಿಕೊಡುವುದಿಲ್ಲ.

ಸಲ್ಮಾನ ರಶ್ದಿ ಶೀಘ್ರ ಗುಣಮುಖರಾಗಲಿ ಮತ್ತು ಮತಾಂಧ ಮುಸ್ಲಿಂ ಪ್ರಭುತ್ವಗಳನ್ನು ಮತ್ತೆ ಪ್ರಶ್ನೆಸುವಂತಾಗಲಿ. ಹಾಗೆಯೇ ಇಸ್ಲಮಾಫೋಬಿಯಾಕ್ಕೆ ಕಾರಣವಾಗಿರುವ ಪಶ್ಚಿಮದ ಸಮಾಜಗಳಿಗೂ ವಿವೇಕ ಮೂಡಬೇಕಿದೆ.

  • ಗುರುಪ್ರಸಾದ್ ಡಿ ಎನ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...