Homeನ್ಯಾಯ ಪಥಶಿವಮೊಗ್ಗ ಕೊತಕೊತ ನಿಗಿನಿಗಿ ನಿಜವೆ!

ಶಿವಮೊಗ್ಗ ಕೊತಕೊತ ನಿಗಿನಿಗಿ ನಿಜವೆ!

- Advertisement -
- Advertisement -

ಈ ವಿಷಮ ಸಮಯದಲ್ಲಿ ಶಿವಮೊಗ್ಗ ಕಡೆಯಿಂದ ಬಂದ ಸುದ್ದಿಗಳು ಶಾನೆ ಕುತೂಹಲಕರವಾಗಿವೆಯಲ್ಲಾ. ಸ್ವಾತಂತ್ರ್ಯ ದಿನಾಚರಣೆಗೆ ಮುನ್ನವೇ ಮುನಿಸಿಪಾಲಿಟಿಯವರು ಬಿದಿರುದಬ್ಬೆ ಮತ್ತು ಖಾದಿಯಲ್ಲದ ನಿಗಿನಿಗಿ ಬಾವುಟ ಹಂಚಿದರು. ಜಿಲ್ಲಾ ಮೈದಾನವಲ್ಲದೆ ಶಾಲಾ ಕಾಲೇಜಿನ ದಿಕ್ಕಿನಿಂದ ದೇಶ ಘೋಷಣೆಗಳು ಮಕ್ಕಳ ಗಂಟಲಿಂದ ಮುಗಿಲು ಮುಟ್ಟಿದವು. ಅಷ್ಟರಲ್ಲಿ ಬಿಜೆಪಿಗಳ ಕಡೆಯವರು ಆಳೆತ್ತರದ ಸಾವರ್ಕರ್ ಪ್ಲೆಕ್ಸ್ ತಂದು ಅಮೀರ್ ಅಹಮದ್ ಸರ್ಕಲ್ಲಲ್ಲಿ ಇಟ್ಟರು. ಟಿಪ್ಪು ಅಭಿಮಾನಿಗಳು ಅದನ್ನ ಕಿತ್ತೆಸೆದರು. ಅವರ ದೃಷ್ಟಿಯಲ್ಲಿ ಟಿಪ್ಪು ಸ್ವಾತಂತ್ರ ಹೋರಾಟಗಾರನಲ್ಲದಿದ್ದರೆ ಸಾವರ್ಕರನು ಸ್ವಾತಂತ್ರ ಹೋರಾಟಗಾರನಲ್ಲ ಎಂಬುದು. ಇದಕ್ಕೂ ಮೊದಲೆ ಶಿವಮೊಗ್ಗದ ಮಾಲ್‌ನಲ್ಲಿ ಅಳವಡಿಸಿದ ಸಾವರಕರನ ಫೋಟೋ ವಿರುದ್ಧ ದೇಶಪ್ರೇಮಿಯೊಬ್ಬ ಪ್ರತಿಭಟಿಸಿದ್ದ. ಇದೇ ಪ್ರತಿಭಟನೆ ಅಮೀರ್ ಅಹಮದ್ ಸರ್ಕಲ್ಲಿಗೂ ಮರುದಿನ ವ್ಯಾಪಿಸಿದ್ದರಿಂದ ಸೆಕ್ಷನ್ 144 ಜಾರಿಯಾಗಿತ್ತು. ಇತ್ತ ಕುವೆಂಪು ರಂಗಮಂದಿರದಲ್ಲಿ ನಾಟಕ ಆಡಲು ಬಣ್ಣ ಬಳಿದುಕೊಂಡು ಕೂತಿದ್ದವರಿಗೆ ಸೆಕ್ಷನ್ 144 ಜಾರಿಯಾಗಿದೆ ಮನೆಗೆ ಹೋಗಿ ಎಂಬ ಅಪ್ಪಣೆ ಬಂತು. ನಾಟಕ ನೋಡಲು ಬಂದಿದ್ದವರೆಲ್ಲಾ, ಈಶ್ವರಪ್ಪ ಮನೆಗೆ ಹೋಗದ ಹೊರತು ಶಿವಮೊಗ್ಗಕ್ಕೆ ನೆಮ್ಮದಿಯಿಲ್ಲ ಎಂದು ಗೊಣಗಿಕೊಂಡು, ಮತಾಂಧ ಮೆದುಳಲ್ಲಿ ಕಲೆ, ಸಾಹಿತ್ಯ, ಸಂಗೀತಕ್ಕೆ ಜಾಗವಿರುವುದಿಲ್ಲ ಎಂದು ಮಾತನಾಡಿಕೊಂಡು ಮನೆಸೇರಿದರಂತಲ್ಲಾ, ಥೂತ್ತೇರಿ.
****

ಶಿವಮೊಗ್ಗದ ಸ್ಥಿತಿ ಕುರಿತು ದೂರದೂರಿನ ಜನಗಳು ಅಲ್ಲಿ ಏನೋ ಆಗಬಾರದ್ದು ಆಗುತ್ತಿದೆ ಎಂದು ಆತಂಕಗೊಂಡಿರುವುದು ಸಹಜವಂತಲ್ಲಾ. ಏಕೆಂದರೆ ಟಿವಿ ಮಾಧ್ಯಮಗಳು ಶಿವಮೊಗ್ಗದ ನಿಗಿನಿಗಿ ಶಿವಮೊಗ್ಗ ಕೊತಕೊತ. ಬೂದಿ ಮುಚ್ಚಿದ ಕೆಂಡ ಶಿವಮೊಗ್ಗ, ಆತಂಕದಲ್ಲಿ ಶಿವಮೊಗ್ಗ ಎಂಬ ಅಬ್ಬರಿಸುತ್ತಿರುವುದನ್ನು ಕೇಳಿ ಹೊರಬಂದು ನೋಡಿದರೆ ಆ ಮಲೆನಾಡಿನ ಹೆಮ್ಮೆಯ ನಗರ ಕಾಡಿನಷ್ಟೇ ಪ್ರಶಾಂತವಾಗಿದ್ದು ಆ ಊರಿನ ಜನಗಳಿಗೆ ಅಚ್ಚರಿ ಮೂಡಿಸಿದೆಯಂತಲ್ಲಾ. ಹಾಗಾದರೆ ಟಿವಿಯವರು ಅರಚುತ್ತಿರುವ ನಿಗಿನಿಗಿ ಕೊತಕೊತ ಎಲ್ಲಿದೆ ಎಂದು ನೋಡಲಾಗಿ ಅದು ಟಿವಿಯವರ ಹೊಟ್ಟೆಪಾಡಿನ ಸದ್ದೆಂಬುದು ಅರಿವಾಗಿ ಶಿವಮೊಗ್ಗದ ಜನ ಬಿದ್ದುಬಿದ್ದು ನಕ್ಕರಂತಲ್ಲಾ. ಮುಖ್ಯವಾಗಿ ಟಿವಿಯವರು ಈವರೆಗೂ ತೋರುತ್ತಿರುವುದು ಅಮೀರ್ ಅಹಮದ್ ಸರ್ಕಲ್ಲಿನಲ್ಲಿ ಪ್ಲೆಕ್ಸ್ ಕಿತ್ತಾಕಿದ ಕಿತ್ತಾಟವನ್ನು. ಅದು ಬಿಟ್ಟರೆ ಎಲ್ಲ ಬಡಾವಣೆಗಳಲ್ಲೂ ಕೂಡ, ಅದೆಲ್ಲೊ ದೂರದಲ್ಲಿ ನಡೆದ ಈಶ್ವರಪ್ಪನ ಕಡೆಯವರು ಮತ್ತು ಕೆಲ ಕಿಡಿಗೇಡಿ ಮುಸ್ಲಿಮರ ಪುಂಡಾಟ ಎನ್ನುತ್ತ ಗೋಬಿ ಮಂಚೂರಿ, ಪಾನಿಪೂರಿ, ಇಡ್ಲಿ ಗಾಡಿಯವರೆಲ್ಲಾ ತಮ್ಮ ಜೀವನಾಧಾರದ ಆ ದಿನದ ಸಾಮಗ್ರಿಯನ್ನ ಚರಂಡಿಗೆ ಸುರಿಯುತ್ತ ಶಾಪ ಹಾಕುತ್ತಿದ್ದಾರಂತಲ್ಲಾ. ಪೊಲೀಸರಿಗೆ ಸಂಬಳ ಬರುತ್ತದೆ, ರಾಜಕಾರಣಿಗಳ ಖಜಾನೆಗೆ ರಾಜ ಕಾಲುವೆಗಳೆ ಇವೆ. ಇವರೆಲ್ಲಾ ಆ ದಿನ ದುಡಿದು ಅದರಲ್ಲಧ ಪಿಗ್ಮಿ ಕಟ್ಟಿ ಉಳಿದುದರಲ್ಲಿ ಜೀವನದ ಗಾಡಿ ಎಳೆಯುವವರಾಗಿದ್ದರೆ ಎಷ್ಟು ಚೆನ್ನಾಗಿತ್ತು ಎಂಬುದು ದುಡಿದು ತಿನ್ನುವವರ ಅಳಲಾಗಿದೆಯಂತಲ್ಲಾ, ಥೂತ್ತೇರಿ.


*****

ಶಿವಮೊಗ್ಗ ಜಿಲ್ಲೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಭದ್ರಾವತಿಯ ಚೂರಿ ಇರಿತದ ವಿಷಯದಲ್ಲಿ ಚೂರಿ ಹಾಕಿದವನು ಮತ್ತು ಹಾಕಿಸಿಕೊಂಡವನು ಜೊತೆಯಲ್ಲಿ ಕುಳಿತು ಜೂಜಾಡುತ್ತಿರುವ ಫೋಟೋ ತೋರಿಸಿದ ಶಾಸಕ ಸಂಗಮೇಶ್ ಇದು ಮತೀಯ ಗಲಭೆ ಎಂದಾದರೆ ನಾನು ಶಾಸಕ ಸ್ಥಾನ ಬಿಡುತ್ತೇನೆ ಎಂದರೂ ಬಿಜೆಪಿಗಳು ಬಿಡುತ್ತಿಲ್ಲವಂತಲ್ಲಾ. ಯಾವತ್ತೂ ಸತ್ಯ ಸಂಗತಿಗಳ ವಿರುದ್ಧವೇ ಹೋರಾಡುವ ಪ್ರವೃತ್ತಿ ಬೆಳೆಸಿಕೊಂಡ ಫಲವಾಗಿ ಮಡಿಕೇರಿಯಲ್ಲಿ ಸಿದ್ದರಾಮಯ್ಯ ಕಳಲೆ ತಿಂದಿದ್ದು ಎಂದು ಗೊತ್ತಾಗಿದ್ದರು ಅದು ಕೋಳಿ ಎಂದು ಕೂಗುತ್ತಿವೆಯಂತಲ್ಲಾ. ಇದನ್ನ ಕೇಳಿಸಿಕೊಂಡ ಕೊಡಗಿನ ಜನ ಒಳಗೊಳಗೇ ನಗುತ್ತ ಆ ಸಿದ್ದರಾಮಯ್ಯ ಏನು ತಿಂದರೆ ನಮಗೇನು ನಮ್ಮ ಸಂಸ್ಕೃತಿಯಲ್ಲೇ ಮಾಂಸ ಮಡ್ಡಿ ಹಾಸುಹೊಕ್ಕಾಗಿದೆ, ಅದರಲ್ಲೂ ನಮ್ಮ ಪ್ರಿಯ ಆಹಾರವಾದ ವರಹ ಮಾಂಸ ಭಕ್ಷಣೆ ಮಾಡಿಲ್ಲವಲ್ಲಾ, ಅಷ್ಟಕ್ಕೂ ಈಗಿನ ಕೋಳಿ ಹಿಂದಿನ ಕೋಳಿಯಂತಲ್ಲಾ ಎಂದರಂತಲ್ಲಾ. ಸಿದ್ದರಾಮಯ್ಯ ತಿಂದ ಮಾಂಸದ ಬಗ್ಗೆ ತೀರಾ ತಲೆಕೆಡಿಸಿಕೊಂಡಿರುವ ಬಿಜೆಪಿಗಳು ಮತ್ತು ಟಿವಿ ಜನರನ್ನ ಕುರಿತೇ ನಮ್ಮ ಸರ್ವಜ್ಞ ಶತಮಾನದ ಹಿಂದೆಯೇ ವಚನ ಕಟ್ಟಿದ್ದಾನೆ. ಅದೇನೆಂದರೆ ಬಾಡ ತಿಂಬಾತಂಗೆ ಆವೇನು ಆಡೇನು ಕಾಡಬಡನರಿಯೇನು ಮನೆಯ ನಾಯೇನು ಸರ್ವಜ್ಞ. ಅದರಂತೆ ಸಿದ್ದು ಏನು ತಿಂದರೆ ಬಿಜೆಪಿಗಳಿಗೇನೋ ಬೋಪಯ್ಯ ಎನ್ನುವಂತಾಗಿದೆಯಲ್ಲಾ, ಥೂತ್ತೇರಿ॒

ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...