Homeಕರ್ನಾಟಕಹಿಂಗಿದ್ದ ನಮ್ಮ ರಾಮಣ್ಣ-6; "ಮದುವಿಗೆ ಬಂದ ನಮ್ಮನ್ನು ಚನ್ನಾಗಿ ಮಾತನಾಡಿಸಿದ್ನೆ ವರತೂ, ರಾಜಕಾರಣಿಗಳನ್ನ ಹೋಗಿ ಮಾತಾಡಸಲಿಲ್ಲ"

ಹಿಂಗಿದ್ದ ನಮ್ಮ ರಾಮಣ್ಣ-6; “ಮದುವಿಗೆ ಬಂದ ನಮ್ಮನ್ನು ಚನ್ನಾಗಿ ಮಾತನಾಡಿಸಿದ್ನೆ ವರತೂ, ರಾಜಕಾರಣಿಗಳನ್ನ ಹೋಗಿ ಮಾತಾಡಸಲಿಲ್ಲ”

- Advertisement -
- Advertisement -

ನಮ್ಮ ಕಡೆ ಅಡ್ಳುದಮ್ಮ ಅಂತರೆ ನೋಡು, ಅಂಗೆ ಆ ಕಡೆ ಮಾಡ್ಳುದಮ್ಮಗಳಿರತವೆ. ಅವು ಗಂಡಿನ ಸರ್ವೆಂಟ್ ತರ ಇರತವೆ. ತಮಾಸಿ ಮಾಡಿ ಹೆಣ್ಣು ಗಂಡಿನ ನಡುವೆ ಸಲಿಗೆ ಬ್ಯೆಳಿಯಂಗೆ ಮಾಡ್ತಿರತವೆ. ಪಾಪ ಹೆಣ್ಣು ಕೊಟ್ಟೋರು ಈ ಅಡ್ಳುದಮ್ಮಗಳಿಗೂ ನೋವಾಗದಂಗೆ ನ್ಯಡಕಬೇಕು. ಮದುವಿಗೆ ಮಾಡಿದ್ದ ತಿಂಡಿ ತೀರ್ಥನ್ಯಲ್ಲ ಈ ಅಡ್ಳುದಮ್ಮಗಳು ಸವಿರಿ ಬಿಸಾಕ್ತವೆ. ಅಂತದೊಂದು ತಾತ್ಕಾಲಿಕ ಸವಲತ್ತು. ನಮಿಗ್ಯಲ್ಲ ಸಿಕ್ತು. ಹೆಣ್ಣಿನ ಕಡೆಲೂ ಅಡ್ಳುದಂಗಿರು ಇರತಿದ್ವು. ಅವುರ್‍ಯಲ್ಲ ಹೆಣ್ಣಿನ ಗೆಳತಿರು. ಅವುರನ್ಯಲ್ಲ ರೇಗಿಸಿಗಂಡು ಚುಡಾಯಿಸಿಗಂಡಿರದು ಚಂದ, ಆದ್ರೆ ಹಳ್ಳಿ ಹುಡುಗಿರು. ನಾವು ಪಟ್ಟಣದಲ್ಲಿ ಓದಿದೋರು, ನಮ್ಮ ಜೊತೆ ಹಳ್ಳಿ ಮಾತು ಹಾಡು ಹೇಳಕ್ಕೆ ಅಂಜಿಕಂಡು ಸುಮ್ಮನಿದ್ರು. ಅದೇ ಅವುರ ತರನೆ ಹಳ್ಳಿ ಹುಡುಗರಾದ್ರೆ ಆ ಮಜನೆ ಬ್ಯಾರೆ.

ರಾಮಣ್ಣನ ಮದುವೆಲಿ ಇಡೀ ದೇಶಿಹಳ್ಳಿನೆ ಭಾಗವಯಿಸಿದಂಗಿತ್ತು. ಪುಟ್ಟಲಿಂಗೇಗೌಡ್ರ ಮನೆ ಮುಂದೆನೆ ಚಪ್ಪರ ಹಾಕಿ ಹಳ್ಳಿ ಸಂಪ್ರದಾಯದಂಗೆ ಮದುವೆ ಮಾಡಿದ್ದು. ಶಾಸ್ತ್ರಗಳು ಚಾಚೂ ತಪ್ಪದಂಗೆ ನ್ಯಡದೊ. ಆ ಶಾಸ್ತ್ರಗಳನ್ನ ನೋಡಿದ್ರೆ ಇನ್ನೋಸೆಂಟ್ ಹೆಣ್ಣುಗಂಡನ್ನ ಒಂದು ಮಾಡಕ್ಕೆ ಅಂತ ಮಾಡಿರವು ಕಣಯ್ಯ. ಹೆಣ್ಣುಗಂಡಿನ ಕೈ ಹಿಡಿಸದು ಒಟ್ಟಿಗಂಟಾಕದು, ಶಾಸ್ತ್ರದ ನೀರು ತರದು, ಹೂವಿನ ಚೆಂಡಾಟ ಆಡದು, ಮಗ ತೂಗದು, ನೀನು ಯಾವ ಶಾಸ್ತ್ರನೆ ನೋಡು, ಹೆಣ್ಣು ಗಂಡಿನ ಮನಸ್ಸನ್ನು ಒಂದು ಮಾಡೊ ಹುನ್ನಾರನೆ ಇರದು. ಮುಂದೆ ಜೊತೆಯಾಗಿ ಬದುಕಕ್ಕೆ ಏನೇನು ಬೇಕೊ ಅದರ ಟ್ರೇನಿಂಗು ಮದುವೆಲೆ ನ್ಯಡದೋಗದು. ಇವು ನಮ್ಮ ರಾಮಣ್ಣನ ಮದುವೆ ಕಾಲದಲ್ಲೂ ಒಸಿ ಇದ್ದೊ. ರಾಮಣ್ಣ ಕೋಲೆ ಬಸವನಂಗೆ ಆರಾಮಾಗಿ ಯಲ್ಲಾ ಶಾಸ್ತ್ರಕ್ಕೂ ತೆಲೆಯೊಡ್ಡಿದ್ದ. ಮದುವಿಗೆ ಬಂದ ನಮ್ಮನ್ನು ಚನ್ನಾಗಿ ಮಾತನಾಡಿಸಿದ್ನೆ ವರತೂ, ರಾಜಕಾರಣಿಗಳನ್ನ ಹೋಗಿ ಮಾತಾಡಸಲಿಲ್ಲ. ಅವರ ಮಾವನ ಕಡೆ ಕರಿಗೆ ಎಸ್.ಎಮ್ ಕೃಷ್ಣ ಬಂದಿದ್ರು. ರಾಮಣ್ಣನಿಗೆ ಅದೇನು ವಿಶೇಷ ಅನ್ನಿಸಲಿಲ್ಲ. ಮದುವೆ ಎಂಜಾಯ್ ಮಾಡದ್ರಲ್ಲಿ ಮುಳುಗಿದ್ದ.

ನಿಜವಾಗ್ಲು ಚಂದ್ರೇಗೌಡ, ಮದುವೆನ ಅಂತದೊಂದು ಸಂಭ್ರಮದ ಏಜಲ್ಲೆ ಆಗಿಬುಡಬೇಕು. ಮದುವೆ ವಯಸ್ಸು ಮೀರಿದಾಗ ಅಂತ ಯಾವ ಸಂಭ್ರಮನೂ ಇರದಿಲ್ಲ ಕಣಯ್ಯ. ನಾವ್ಯಲ್ಲ ಅಂತ ಏಜಲ್ಲೆ ಮದಿವಾಗಿದ್ದು. ಆಗಿನ ಮದುವೆ ಬ್ಯಾಸಗೆಲೆ ನ್ಯಡದ್ರು, ಸೋಬನ ಮಾಡಿಕೊಡತಿದ್ದುದ್ದು ಕಾರಬ್ಬಕ್ಕೆ ಇಲ್ಲ ಗೌರಿಹಬ್ಬಕೆ. ಅಲ್ಲಿವರಿಗೂ ಹುಡುಗಿಯ ಕರಕಂಡು ಬಂದು ಕರಕಂಡೋಗರು. ಒಂದು ದಿನ ಗಂಡನ ಜೊತೆ ಕಳಿಸಿಬುಡೋರು. ಆ ಗಂಡನಿಂದೆ ಬರುವ ಒಂದು ಹುಡುಗಿ ಮನಸ ಅಧ್ಯಯನ ಮಾಡಿ ಬರದಿರೋನು ಲಂಕೇಶ ಒಬ್ಬನೆ ಕಣಯ್ಯ. ಅವುನ ಲೇಖನ ನೋಡಿ ನಾನು ದಂಗುಬಡದೋದೆ. ಅತ್ತೆ ಮಾವ ನಾದಿನಿ ಮೈದುನ ಇವುರಾರು ಸರಿಯಾಗಿ ಪರಿಚಯವಿಲ್ಲದ ಅಪರಿಚಿತ ಜಾಗಕ್ಕೆ ಒಂದು ಮುಗ್ದ ಹೆಣ್ಣು ಬಂದು ಸೇರಿಕೊಂಡ ನಂತರ ಹೊಂದಿಕಳಕ್ಕೆ ಹೋರಾಡದಿದಿಯಲ್ಲ ಆ ಮನಸ್ಸಿನ ಒತ್ತಡ ಬರದಿರೋನು ಲಂಕೇಶ್. ಆಗ ಯಳೆ ಹುಡುಗಿ ಮಾಡಿಬುಡೋರು. ಅವುರು ಒಬ್ಬರಿಗೊಬ್ಬರು ಅರತುಗೊಂಡು ಬಾಳಕ್ಕೆ ತಯಾರಾಗೋರು. ಈ ನಡುವಿನ ಚಟುವಟಿಕೆ ಬಾಳ ಚನ್ನಾಗಿರವು. ನಮ್ಮಣ್ಣನೂ ಓದುವಾಗ್ಲೆ ಮದಿವಾದೋರು. ಅವುರು ಬ್ಯಾರೆ ಕಾಲೇಜು. ಇವುರ ಬ್ಯಾರೆ ಕಾಲೇಜು. ಆದ್ರು ಭೇಟಿಯಾಗಿ ಮಾತಾಡಿದೋರಲ್ಲ. ಯಾರಿಗಾರ ಗೊತ್ತಾದ್ರೇನು ಗತಿ ಅನ್ನೋ ಕಾಲ ಅದು. ಆ ಟೈಮಲ್ಲಿ ನಮ್ಮಣ್ಣನ ಫ್ರೆಂಡು ಹೆಡತಿ ನೋಡಿಕೊಂಡು ಬತ್ತಿನಿ ಅಂತ ಊರಿಗೋಗ್ತಿದ್ನಂತೆ. ಅಲ್ಲಿಂದ ಬಂದು ಭಾಳ ಖುಷಿಯಾಗಿದ್ನಂತೆ. ಏನೋ ನ್ಯಡದಿರಬೇಕು ಅಂತ ನಮ್ಮಣಾರು ’ಏನಪ್ಪ ವಿಶೇಷ ಅಂದ್ರಂತೆ. ಅದಕವುನು ಒಂದು ದೊಡ್ಡ ಪ್ರಕರಣ ಹೇಳೋನಂಗೆ ತಯಾರಾಗಿ ’ಅವುಳು ನೀರು ಕೊಡಕ್ಕೆ ಅಂತ ಬಂದ್ಲು. ಅತ್ತಗಿತ್ತಗೆ ನೋಡಿ ಅವುಳ ಕೈನೆ ಮುಟ್ಟಿಬುಟ್ಟಿ’ ಅಂತ ನಗಾಡಿದನಂತೆ. ಅಂತಕಾಲ ಅದು. ಅಂತದೊಂದು ಕಾಲದಲ್ಲಿ ಮದಿವಾಗಿದ್ದ ರಾಮಣ್ಣ. ಇವತ್ತೆ ಸೋಬನ ಮಾಡಿಕೊಡಿ ಅನ್ನೊ ಮಾತ ಹೆಣ್ಣಿನ ಕಡಿಯೋರಿಗೆ ತಲುಪಿಸಿದ್ದ. ಹೆಣ್ಣಿನ ತಂದೆ ಪುಟ್ಟಲಿಂಗಯ್ಯನಿಗೆ ಗಾಬರಿಯಾಗಿತ್ತು. ಇದವುರು ನ್ಯಡಿಸಿಕೊಡಕ್ಕಾಗದ ಮಾತಾಗಿತ್ತು. ಯಾಕಂದ್ರೆ ನಾನಾಗ್ಲೆ ಹೇಳಿದಂಗೆ, ಮದುವೆಯಾದ ಯರಡು ಮೂರು ತಿಂಗಳಿಗೆ ಸೋಬನ ಮಾಡಿಕೊಡತಿದ್ದ ಕಾಲ ಅದು. ಯಳೆ ಹುಡುಗಿರು ಊಟ ಉಣ್ಣಬೇಕು, ಬಲ್ತಗಬೇಕು ಅಂತ ನಂಬಿಕಂಡಿದ್ದ ಕಾಲದಲ್ಲಿ ರಾಮಣ್ಣ ಇವತ್ತೇ ಸೋಬನ ಮಾಡಿಕೊಡಿ ಅಂದಿದ್ದ. ಅವುನು ಹಳ್ಳಿಲಿ ವಲ ಉಳೊ ಒರಟುಡುಗಲ್ಲ. ಮೈಸೂರಲ್ಲಿ ಎಂ.ಬಿ.ಬಿ.ಎಸ್. ಮುಗಿಸಿ ಡಾಕ್ಟರಾಗಿ ಒದ್ತಾಯಿರೋರು. ಇಂಥೊನಿಗೆ ವಾಪಸ್ಸು ಉತ್ತರ ಹೇಳಕ್ಕಾಗದ ಪುಟ್ಟಲಿಂಗೇಗೌಡ್ರು ಯಲ್ಲೇಗೌಡ್ರತ್ರಕ್ಕೋಗಿ ಗಂಡಿಗೆ ಸಮಾಧಾನ ಮಾಡಕ್ಕೇಳಿದ್ರು. ಇಂತ ವಿಷಯನ ಯಲ್ಲೇಗೌಡ್ರು ರಾಮಣ್ಣನಿಗೇಳಕ್ಕೂ ಅಂಜಿಕಂಡ್ರು. ಕಡಿಗೆ ರಾಮಣ್ಣ ತುಂಬ ಗೌರವ ಕೊಡತಿದ್ದ ಹಲಗೂರು ಪುಟ್ಟಸ್ವಾಮಿಗೌಡ್ರಿಗೇಳಿ “ಅವುರ ಸಂಪ್ರದಾಯದಲ್ಲಿ ಮದುವೆ ದಿನವೇ ಸೋಬನ ಮಾಡಿಕೊಡದಿಲ್ಲವಂತೆ, ಅದಕೆ ಆದ ಒಂದು ದಿನ ಶಾಸ್ತ್ರ ಇಟ್ಟಗತ್ತರಂತೆ. ಅಂತ ಹೇಳಪ್ಪ” ಅಂದು ಕಳಿಸಿದ್ರು.

ಪುಡಸಾಮಿಗೌಡ್ರು ರಾಮಣ್ಣತ್ರಕೋಗಿ ಪಿಸುಮಾತಲ್ಲಿ “ರಾಮಣ್ಣ ನಿಮ್ಮಪ್ಪ ಗೌರಿಹಬ್ಬಕೆ ಸೋಬನ ಮಾಡಿಕಳನ ಅಂತ ಹೇಳ್ತರೆ. ಅಂಗೆ ಆಗ್ಲಿ ತಗೂ” ಅಂದ್ರು. ಪುಟ್ಟಸ್ವಾಮಿಗೌಡನ ಮಾತಿಗೆ ಎದುರುತ್ತರ ಕೊಡದಂಗಿದ್ದ ರಾಮಣ್ಣ, ಅ ಕಡೆ ತಿರುಗಿ ನೋಡದಂಗೆ “ನನ್ನ ಕಷ್ಟ ನಮ್ಮಪನಿಗೇನು ಗೊತ್ತಾದದೂ” ಅಂದ. ಇದು ತಮಾಸಿಯಾಗಿ ಕಂಡ್ರೂ ರಾಮಣ್ಣನಂತ ತರುಣರ ಲೈಂಗಿಕ ಸಮಸ್ಯೆಯ ಒತ್ತಡದ ಅರಿವಾಯ್ತು. ಇದು ಪುಟ್ಟಸ್ವಾಮಿಗೌಡನಿಗೂ ಗೊತ್ತಾಗಿ, ಆತ ಮುಂದುವರದು ಮಾತಾಡಕ್ಕೆ ಹೆದರಿದ. ಕಡಿಗೆ “ನೋಡಿ ಇದು ಅವುರವುರ ಸ್ವಂತ ವಿಚಾರ. ಇದನ್ನ ತೀರ್ಮಾನ ಮಾಡಿಕಳರು ಹುಡುಗ ಹುಡುಗಿ ಕಡಿಯೋರು. ಇದರೊಳಗೆ ನಮಿಗ್ಯಾವ ಕ್ಯಲಸನೂ ಇಲ್ಲ ಅಂದ. ಪುಟ್ಟಸ್ವಾಮಿಗೌಡನ ಮಾತು ನಮಗೆಲ್ಲಾ ಸಮಂಜಸವಾಗಿ ಕಂಡಿದ್ರಿಂದ ಹ್ವರಡಕ್ಕೆ ತಯಾರಾದೊ. ರಾಮಣ್ಣ ಹಟ ಸಾಧಿಸಿ ಗೆದ್ದ ಖುಷಿಲಿ ಎಲ್ಲರ ಕೈ ಕುಲುಕುತ್ತ “ಇರಿ ಹೊಗುವುರಿ” ಅಂದ.

“ಇದ್ಯಾಕಿಂಗೆ ಮಾಡಿದೆ ನೀನೂ” ಅಂದೆ.

“ನಾನೇನು ಮಾಡಿದುನ್ಲ” ಅಂದ.

“ಮದುವೆ ದಿನವೇ ಸೋಬನ ಮಾಡಿಕೊಡಿ ಅಂದ್ಯಲ್ಲ ಸರಿನೆ?”

“ಪೂಜೆ ಮಾಡಕ್ಲ ಮದುವಾಗದು. ದೇವಾನು ದೇವತೆಗಳ್ಯಲ್ಲ ಮದುವೆ ಒಂದಿನ ಸೋಬನ ಒಂದಿನ ಅಂತ ಕಾಯ್ತಿದ್ರೇನ್ಲ” ಅಂದ.

“ನೀನ್ಯಾವು ದೇವತೆನಪ್ಪ” ಅಂದೆ.

“ಸುಮ್ಮನೆ ನಡಿಲ ಕಂಡಿವ್ನಿ” ಅಂದ. ಎಲ್ಲರೂ ನಗಾಡಿದ್ರು. ನನ್ನ ಜೀವನದಲ್ಲಿ ರಾಮಣ್ಣನ ಮದುವೆ ಒಳ್ಳೆ ನೆನೆಪಾಗ್ಯದೆ.

ರಾಮಣ್ಣ ಮದುವೆ ಮುಗಿಸಿಗಂಡು ಮೈಸೂರಿಗೆ ಬಂದ. ಆಗಿನ ಮದುವೆ ಗಂಡುಗಳು ವಸಿ ದಿನ ಕಾಲಿನ ನಡು ಬೆರಳಿಗೆ ಬೆಳ್ಳಿ ರಿಂಗ್ ಹಾಕಿರೋರು. ಕತ್ತಲಿ ಚೈನು ಕಿವಿಲಿ ಅತ್ತಕಡಕುಯಲ್ಲಿ ಇರವು. ನಮ್ಮ ರಾಮಣ್ಣನಿಗೆ ಅವೇನು ಇರಲಿಲ್ಲ. ಮದುವೆಯಾದ ಮ್ಯಾಲೆ ರಾಮಣ್ಣನಲ್ಲಿ ಒಂದು ಉತ್ಸಾಹದ ಚಟುವಟಿಕೆ ಗಮನಿಸಿದೆ. ತುಂಬ ಖುಷಿಯಾಗಿ ಊರಿಗೋಗನು. ಹಾಸ್ಟಲಲ್ಲೇ ಇರತಿರಲಿಲ್ಲ. ಒಂದು ಸತಿ ಊರಿಂದ ಬಂದಾಗ ಯಂತದೊ ಟಾನಿಕ್ ಬಾಟ್ಳಿ ತಂದಿದ್ದ.

“ಇದೇನು ಬಾಟ್ಲಿನೊ” ಅಂತ ಕೇಳಿದೆ.

“ಪಾಸ್ ಪೊರ್ಮಿನ್ ಕಲ” ಅಂದ.

“ಅದ್ಯಂತದೊ” ಅಂದೆ.

“ಸೇಬಿನ ರಸದಲ್ಲಿ ಮಾಡಿರೊ ಟಾನಿಕ್ಕು ಕಲ” ಅಂದ.

“ಅದ್ಯಾಕ್ ತಗತಿಯೋ ಮೆಡಿಕಲಿ ಅಪ್ರುವಲ್ಲಾಗಿಲ್ಲ” ಅಂದೆ.

“ತಾಕತ್ತಿಗೆ ಕಲಾ” ಅಂದ.

“ಯಾವ ಡಾಕ್ಟರೇಳೀದ್ರು ನಿಂಗೇ, ಒಹೊಹೊ. ಪತ್ರಿಕೆಲಿ ಅಡವಿಟೀಜ್ ಬಂದಿತ್ತಲ್ಲಾ ಅದನೋಡಿ ತಗಂಡೆ ಅನ್ನು. ಅಂತವುನ್ಯಲ್ಲ ಕುಡಿಬ್ಯಾಡ. ಅದರ ಬದ್ಲು ಬಾಡು ಒಳ್ಳೆ ಹಣ್ಣು ಹಂಪಲು ತಿನ್ನ” ಅಂದೆ.

“ನಿನಿಗೇನು ಗೊತ್ತು ಸುಮ್ಮನೆ ಕೂತಗಲ. ಇನ್ನ ಡಾಕ್ಟರೋತ್ತ ಅವುನೆ, ಆಗಲೆ ಡಾಕ್ಟರಾಡಿದಂಗಾಡ್ತನೆ. ಸುಮ್ಮಸುಮ್ಮನೆ ಅಡವಿಟೇಜ್ ಕೊಟ್ಟಾರ್ಲ. ಸೇಬಿನ ರಸಕಲ ಅದು. ಯಾವತ್ತಾರ ಕುಡದಿದ್ದಿಯಾ. ನಿನಿಗ್ಯಾಕ್ ಬೇಕು ಅವ್ಯಲ್ಲ ಸುಮ್‌ಕಿರು” ಅಂದ. ನಾನು ನಗಾಡಿಕಂಡು ಸುಮ್ಮನಾದೆ. ಹಾಸ್ಟಲಲ್ಲಿ ಅವುನ್ಯಾವತ್ತೂ ಲೀಡ್ರ ತರ ಇರಲಿಲ್ಲ. ಒಂಥರ ಯಲೆಮರೆ ಕಾಯಂಗಿರತಿದ್ದ. ಜನಗಳ ಜೊತೆ ಇರದು ಬುಟ್ರೆ ಮಂಚೂಣಿಲಿ ಕಾಣಿಸಿಗಳ್ತಿರಲಿಲ್ಲ. ಇದು ಬರಹಗಾರನಾದವನ ನಡವಳಿಕೆ ಇರಬಹುದು. ಅವುನ ಪ್ರಿಯವಾದ ಕೆಲಸದಲ್ಲಿ ವಾಕ್ ಮಾಡದು ಒಂದು. ಒಂದಿನ ವಾಕ್ ಬತ್ತಿದೋನು ಇದ್ದಕಿದ್ದಗೆ ಕಾಣದಂಗಾದ. ಇವುನ್ಯತ್ತಗೋದ ಅಂತ ಹುಡುಕದ್ರಲ್ಲಿ ಪ್ರತ್ಯಕ್ಷಾದ. ಆಗ ನಮ್ಮ ಜೊತೆ ಪುಟ್ಟಸ್ವಾಮಿಗೌಡನೂ ಇದ್ದ. “ಇದೆಲ್ಲಿಗೋಗಿದ್ದೊ” ಅಂದೆ. ನನ್ನ ಫ್ರೆಂಡಿಗೆ ಉಷಾರಿರಲಿಲ್ಲ ಕಲ. ಒಂದಿಷ್ಟು ದುಡ್ಡುಕೊಟ್ಟು ಬಂದೆ” ಅಂದ.

“ಅದ್ನ ಹೇಳಿಬುಟ್ಟೆ ಹೋಗಬವುದಿತ್ತಪ್ಪ” ಅಂದೆ. “ಯಲ್ಲಾನು ಹೇಳಿಬುಟ್ಟಿ ಮಾಡಕ್ಕಾದತ್ಲೆ” ಅಂದ. ಕಷ್ಟದಲ್ಲಿದ್ದವುರೆ ಸಹಾಯ ಮಾಡದು ಅವನ ಜನ್ಮದಲ್ಲೇ ಬಂದ ಗುಣ ಆಗಿತ್ತು. ಅವುನಿನ್ನು ಸಂಬಳ ತಗಿತಿರಲಿಲ್ಲ, ಆದ್ರು ಓದೊ ದುಡ್ಡಲ್ಲೇ ಸಹಾಯ ಮಾಡತಿದ್ದ.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ: ಭಾಗ-5; “ಏನೊ ಒಂದು ವಳ್ಳೆ ಪಾರ್ಟಿ ಮಾಡಿ ಮೀನು ತಿನ್ನನ ಅಂದ್ರೆ ಅದ್ಕೂ ಕಲ್ಲಾಕಿದೆ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...