Homeಕರ್ನಾಟಕಹಿಂಗಿದ್ದ ನಮ್ಮ ರಾಮಣ್ಣ-6; "ಮದುವಿಗೆ ಬಂದ ನಮ್ಮನ್ನು ಚನ್ನಾಗಿ ಮಾತನಾಡಿಸಿದ್ನೆ ವರತೂ, ರಾಜಕಾರಣಿಗಳನ್ನ ಹೋಗಿ ಮಾತಾಡಸಲಿಲ್ಲ"

ಹಿಂಗಿದ್ದ ನಮ್ಮ ರಾಮಣ್ಣ-6; “ಮದುವಿಗೆ ಬಂದ ನಮ್ಮನ್ನು ಚನ್ನಾಗಿ ಮಾತನಾಡಿಸಿದ್ನೆ ವರತೂ, ರಾಜಕಾರಣಿಗಳನ್ನ ಹೋಗಿ ಮಾತಾಡಸಲಿಲ್ಲ”

- Advertisement -
- Advertisement -

ನಮ್ಮ ಕಡೆ ಅಡ್ಳುದಮ್ಮ ಅಂತರೆ ನೋಡು, ಅಂಗೆ ಆ ಕಡೆ ಮಾಡ್ಳುದಮ್ಮಗಳಿರತವೆ. ಅವು ಗಂಡಿನ ಸರ್ವೆಂಟ್ ತರ ಇರತವೆ. ತಮಾಸಿ ಮಾಡಿ ಹೆಣ್ಣು ಗಂಡಿನ ನಡುವೆ ಸಲಿಗೆ ಬ್ಯೆಳಿಯಂಗೆ ಮಾಡ್ತಿರತವೆ. ಪಾಪ ಹೆಣ್ಣು ಕೊಟ್ಟೋರು ಈ ಅಡ್ಳುದಮ್ಮಗಳಿಗೂ ನೋವಾಗದಂಗೆ ನ್ಯಡಕಬೇಕು. ಮದುವಿಗೆ ಮಾಡಿದ್ದ ತಿಂಡಿ ತೀರ್ಥನ್ಯಲ್ಲ ಈ ಅಡ್ಳುದಮ್ಮಗಳು ಸವಿರಿ ಬಿಸಾಕ್ತವೆ. ಅಂತದೊಂದು ತಾತ್ಕಾಲಿಕ ಸವಲತ್ತು. ನಮಿಗ್ಯಲ್ಲ ಸಿಕ್ತು. ಹೆಣ್ಣಿನ ಕಡೆಲೂ ಅಡ್ಳುದಂಗಿರು ಇರತಿದ್ವು. ಅವುರ್‍ಯಲ್ಲ ಹೆಣ್ಣಿನ ಗೆಳತಿರು. ಅವುರನ್ಯಲ್ಲ ರೇಗಿಸಿಗಂಡು ಚುಡಾಯಿಸಿಗಂಡಿರದು ಚಂದ, ಆದ್ರೆ ಹಳ್ಳಿ ಹುಡುಗಿರು. ನಾವು ಪಟ್ಟಣದಲ್ಲಿ ಓದಿದೋರು, ನಮ್ಮ ಜೊತೆ ಹಳ್ಳಿ ಮಾತು ಹಾಡು ಹೇಳಕ್ಕೆ ಅಂಜಿಕಂಡು ಸುಮ್ಮನಿದ್ರು. ಅದೇ ಅವುರ ತರನೆ ಹಳ್ಳಿ ಹುಡುಗರಾದ್ರೆ ಆ ಮಜನೆ ಬ್ಯಾರೆ.

ರಾಮಣ್ಣನ ಮದುವೆಲಿ ಇಡೀ ದೇಶಿಹಳ್ಳಿನೆ ಭಾಗವಯಿಸಿದಂಗಿತ್ತು. ಪುಟ್ಟಲಿಂಗೇಗೌಡ್ರ ಮನೆ ಮುಂದೆನೆ ಚಪ್ಪರ ಹಾಕಿ ಹಳ್ಳಿ ಸಂಪ್ರದಾಯದಂಗೆ ಮದುವೆ ಮಾಡಿದ್ದು. ಶಾಸ್ತ್ರಗಳು ಚಾಚೂ ತಪ್ಪದಂಗೆ ನ್ಯಡದೊ. ಆ ಶಾಸ್ತ್ರಗಳನ್ನ ನೋಡಿದ್ರೆ ಇನ್ನೋಸೆಂಟ್ ಹೆಣ್ಣುಗಂಡನ್ನ ಒಂದು ಮಾಡಕ್ಕೆ ಅಂತ ಮಾಡಿರವು ಕಣಯ್ಯ. ಹೆಣ್ಣುಗಂಡಿನ ಕೈ ಹಿಡಿಸದು ಒಟ್ಟಿಗಂಟಾಕದು, ಶಾಸ್ತ್ರದ ನೀರು ತರದು, ಹೂವಿನ ಚೆಂಡಾಟ ಆಡದು, ಮಗ ತೂಗದು, ನೀನು ಯಾವ ಶಾಸ್ತ್ರನೆ ನೋಡು, ಹೆಣ್ಣು ಗಂಡಿನ ಮನಸ್ಸನ್ನು ಒಂದು ಮಾಡೊ ಹುನ್ನಾರನೆ ಇರದು. ಮುಂದೆ ಜೊತೆಯಾಗಿ ಬದುಕಕ್ಕೆ ಏನೇನು ಬೇಕೊ ಅದರ ಟ್ರೇನಿಂಗು ಮದುವೆಲೆ ನ್ಯಡದೋಗದು. ಇವು ನಮ್ಮ ರಾಮಣ್ಣನ ಮದುವೆ ಕಾಲದಲ್ಲೂ ಒಸಿ ಇದ್ದೊ. ರಾಮಣ್ಣ ಕೋಲೆ ಬಸವನಂಗೆ ಆರಾಮಾಗಿ ಯಲ್ಲಾ ಶಾಸ್ತ್ರಕ್ಕೂ ತೆಲೆಯೊಡ್ಡಿದ್ದ. ಮದುವಿಗೆ ಬಂದ ನಮ್ಮನ್ನು ಚನ್ನಾಗಿ ಮಾತನಾಡಿಸಿದ್ನೆ ವರತೂ, ರಾಜಕಾರಣಿಗಳನ್ನ ಹೋಗಿ ಮಾತಾಡಸಲಿಲ್ಲ. ಅವರ ಮಾವನ ಕಡೆ ಕರಿಗೆ ಎಸ್.ಎಮ್ ಕೃಷ್ಣ ಬಂದಿದ್ರು. ರಾಮಣ್ಣನಿಗೆ ಅದೇನು ವಿಶೇಷ ಅನ್ನಿಸಲಿಲ್ಲ. ಮದುವೆ ಎಂಜಾಯ್ ಮಾಡದ್ರಲ್ಲಿ ಮುಳುಗಿದ್ದ.

ನಿಜವಾಗ್ಲು ಚಂದ್ರೇಗೌಡ, ಮದುವೆನ ಅಂತದೊಂದು ಸಂಭ್ರಮದ ಏಜಲ್ಲೆ ಆಗಿಬುಡಬೇಕು. ಮದುವೆ ವಯಸ್ಸು ಮೀರಿದಾಗ ಅಂತ ಯಾವ ಸಂಭ್ರಮನೂ ಇರದಿಲ್ಲ ಕಣಯ್ಯ. ನಾವ್ಯಲ್ಲ ಅಂತ ಏಜಲ್ಲೆ ಮದಿವಾಗಿದ್ದು. ಆಗಿನ ಮದುವೆ ಬ್ಯಾಸಗೆಲೆ ನ್ಯಡದ್ರು, ಸೋಬನ ಮಾಡಿಕೊಡತಿದ್ದುದ್ದು ಕಾರಬ್ಬಕ್ಕೆ ಇಲ್ಲ ಗೌರಿಹಬ್ಬಕೆ. ಅಲ್ಲಿವರಿಗೂ ಹುಡುಗಿಯ ಕರಕಂಡು ಬಂದು ಕರಕಂಡೋಗರು. ಒಂದು ದಿನ ಗಂಡನ ಜೊತೆ ಕಳಿಸಿಬುಡೋರು. ಆ ಗಂಡನಿಂದೆ ಬರುವ ಒಂದು ಹುಡುಗಿ ಮನಸ ಅಧ್ಯಯನ ಮಾಡಿ ಬರದಿರೋನು ಲಂಕೇಶ ಒಬ್ಬನೆ ಕಣಯ್ಯ. ಅವುನ ಲೇಖನ ನೋಡಿ ನಾನು ದಂಗುಬಡದೋದೆ. ಅತ್ತೆ ಮಾವ ನಾದಿನಿ ಮೈದುನ ಇವುರಾರು ಸರಿಯಾಗಿ ಪರಿಚಯವಿಲ್ಲದ ಅಪರಿಚಿತ ಜಾಗಕ್ಕೆ ಒಂದು ಮುಗ್ದ ಹೆಣ್ಣು ಬಂದು ಸೇರಿಕೊಂಡ ನಂತರ ಹೊಂದಿಕಳಕ್ಕೆ ಹೋರಾಡದಿದಿಯಲ್ಲ ಆ ಮನಸ್ಸಿನ ಒತ್ತಡ ಬರದಿರೋನು ಲಂಕೇಶ್. ಆಗ ಯಳೆ ಹುಡುಗಿ ಮಾಡಿಬುಡೋರು. ಅವುರು ಒಬ್ಬರಿಗೊಬ್ಬರು ಅರತುಗೊಂಡು ಬಾಳಕ್ಕೆ ತಯಾರಾಗೋರು. ಈ ನಡುವಿನ ಚಟುವಟಿಕೆ ಬಾಳ ಚನ್ನಾಗಿರವು. ನಮ್ಮಣ್ಣನೂ ಓದುವಾಗ್ಲೆ ಮದಿವಾದೋರು. ಅವುರು ಬ್ಯಾರೆ ಕಾಲೇಜು. ಇವುರ ಬ್ಯಾರೆ ಕಾಲೇಜು. ಆದ್ರು ಭೇಟಿಯಾಗಿ ಮಾತಾಡಿದೋರಲ್ಲ. ಯಾರಿಗಾರ ಗೊತ್ತಾದ್ರೇನು ಗತಿ ಅನ್ನೋ ಕಾಲ ಅದು. ಆ ಟೈಮಲ್ಲಿ ನಮ್ಮಣ್ಣನ ಫ್ರೆಂಡು ಹೆಡತಿ ನೋಡಿಕೊಂಡು ಬತ್ತಿನಿ ಅಂತ ಊರಿಗೋಗ್ತಿದ್ನಂತೆ. ಅಲ್ಲಿಂದ ಬಂದು ಭಾಳ ಖುಷಿಯಾಗಿದ್ನಂತೆ. ಏನೋ ನ್ಯಡದಿರಬೇಕು ಅಂತ ನಮ್ಮಣಾರು ’ಏನಪ್ಪ ವಿಶೇಷ ಅಂದ್ರಂತೆ. ಅದಕವುನು ಒಂದು ದೊಡ್ಡ ಪ್ರಕರಣ ಹೇಳೋನಂಗೆ ತಯಾರಾಗಿ ’ಅವುಳು ನೀರು ಕೊಡಕ್ಕೆ ಅಂತ ಬಂದ್ಲು. ಅತ್ತಗಿತ್ತಗೆ ನೋಡಿ ಅವುಳ ಕೈನೆ ಮುಟ್ಟಿಬುಟ್ಟಿ’ ಅಂತ ನಗಾಡಿದನಂತೆ. ಅಂತಕಾಲ ಅದು. ಅಂತದೊಂದು ಕಾಲದಲ್ಲಿ ಮದಿವಾಗಿದ್ದ ರಾಮಣ್ಣ. ಇವತ್ತೆ ಸೋಬನ ಮಾಡಿಕೊಡಿ ಅನ್ನೊ ಮಾತ ಹೆಣ್ಣಿನ ಕಡಿಯೋರಿಗೆ ತಲುಪಿಸಿದ್ದ. ಹೆಣ್ಣಿನ ತಂದೆ ಪುಟ್ಟಲಿಂಗಯ್ಯನಿಗೆ ಗಾಬರಿಯಾಗಿತ್ತು. ಇದವುರು ನ್ಯಡಿಸಿಕೊಡಕ್ಕಾಗದ ಮಾತಾಗಿತ್ತು. ಯಾಕಂದ್ರೆ ನಾನಾಗ್ಲೆ ಹೇಳಿದಂಗೆ, ಮದುವೆಯಾದ ಯರಡು ಮೂರು ತಿಂಗಳಿಗೆ ಸೋಬನ ಮಾಡಿಕೊಡತಿದ್ದ ಕಾಲ ಅದು. ಯಳೆ ಹುಡುಗಿರು ಊಟ ಉಣ್ಣಬೇಕು, ಬಲ್ತಗಬೇಕು ಅಂತ ನಂಬಿಕಂಡಿದ್ದ ಕಾಲದಲ್ಲಿ ರಾಮಣ್ಣ ಇವತ್ತೇ ಸೋಬನ ಮಾಡಿಕೊಡಿ ಅಂದಿದ್ದ. ಅವುನು ಹಳ್ಳಿಲಿ ವಲ ಉಳೊ ಒರಟುಡುಗಲ್ಲ. ಮೈಸೂರಲ್ಲಿ ಎಂ.ಬಿ.ಬಿ.ಎಸ್. ಮುಗಿಸಿ ಡಾಕ್ಟರಾಗಿ ಒದ್ತಾಯಿರೋರು. ಇಂಥೊನಿಗೆ ವಾಪಸ್ಸು ಉತ್ತರ ಹೇಳಕ್ಕಾಗದ ಪುಟ್ಟಲಿಂಗೇಗೌಡ್ರು ಯಲ್ಲೇಗೌಡ್ರತ್ರಕ್ಕೋಗಿ ಗಂಡಿಗೆ ಸಮಾಧಾನ ಮಾಡಕ್ಕೇಳಿದ್ರು. ಇಂತ ವಿಷಯನ ಯಲ್ಲೇಗೌಡ್ರು ರಾಮಣ್ಣನಿಗೇಳಕ್ಕೂ ಅಂಜಿಕಂಡ್ರು. ಕಡಿಗೆ ರಾಮಣ್ಣ ತುಂಬ ಗೌರವ ಕೊಡತಿದ್ದ ಹಲಗೂರು ಪುಟ್ಟಸ್ವಾಮಿಗೌಡ್ರಿಗೇಳಿ “ಅವುರ ಸಂಪ್ರದಾಯದಲ್ಲಿ ಮದುವೆ ದಿನವೇ ಸೋಬನ ಮಾಡಿಕೊಡದಿಲ್ಲವಂತೆ, ಅದಕೆ ಆದ ಒಂದು ದಿನ ಶಾಸ್ತ್ರ ಇಟ್ಟಗತ್ತರಂತೆ. ಅಂತ ಹೇಳಪ್ಪ” ಅಂದು ಕಳಿಸಿದ್ರು.

ಪುಡಸಾಮಿಗೌಡ್ರು ರಾಮಣ್ಣತ್ರಕೋಗಿ ಪಿಸುಮಾತಲ್ಲಿ “ರಾಮಣ್ಣ ನಿಮ್ಮಪ್ಪ ಗೌರಿಹಬ್ಬಕೆ ಸೋಬನ ಮಾಡಿಕಳನ ಅಂತ ಹೇಳ್ತರೆ. ಅಂಗೆ ಆಗ್ಲಿ ತಗೂ” ಅಂದ್ರು. ಪುಟ್ಟಸ್ವಾಮಿಗೌಡನ ಮಾತಿಗೆ ಎದುರುತ್ತರ ಕೊಡದಂಗಿದ್ದ ರಾಮಣ್ಣ, ಅ ಕಡೆ ತಿರುಗಿ ನೋಡದಂಗೆ “ನನ್ನ ಕಷ್ಟ ನಮ್ಮಪನಿಗೇನು ಗೊತ್ತಾದದೂ” ಅಂದ. ಇದು ತಮಾಸಿಯಾಗಿ ಕಂಡ್ರೂ ರಾಮಣ್ಣನಂತ ತರುಣರ ಲೈಂಗಿಕ ಸಮಸ್ಯೆಯ ಒತ್ತಡದ ಅರಿವಾಯ್ತು. ಇದು ಪುಟ್ಟಸ್ವಾಮಿಗೌಡನಿಗೂ ಗೊತ್ತಾಗಿ, ಆತ ಮುಂದುವರದು ಮಾತಾಡಕ್ಕೆ ಹೆದರಿದ. ಕಡಿಗೆ “ನೋಡಿ ಇದು ಅವುರವುರ ಸ್ವಂತ ವಿಚಾರ. ಇದನ್ನ ತೀರ್ಮಾನ ಮಾಡಿಕಳರು ಹುಡುಗ ಹುಡುಗಿ ಕಡಿಯೋರು. ಇದರೊಳಗೆ ನಮಿಗ್ಯಾವ ಕ್ಯಲಸನೂ ಇಲ್ಲ ಅಂದ. ಪುಟ್ಟಸ್ವಾಮಿಗೌಡನ ಮಾತು ನಮಗೆಲ್ಲಾ ಸಮಂಜಸವಾಗಿ ಕಂಡಿದ್ರಿಂದ ಹ್ವರಡಕ್ಕೆ ತಯಾರಾದೊ. ರಾಮಣ್ಣ ಹಟ ಸಾಧಿಸಿ ಗೆದ್ದ ಖುಷಿಲಿ ಎಲ್ಲರ ಕೈ ಕುಲುಕುತ್ತ “ಇರಿ ಹೊಗುವುರಿ” ಅಂದ.

“ಇದ್ಯಾಕಿಂಗೆ ಮಾಡಿದೆ ನೀನೂ” ಅಂದೆ.

“ನಾನೇನು ಮಾಡಿದುನ್ಲ” ಅಂದ.

“ಮದುವೆ ದಿನವೇ ಸೋಬನ ಮಾಡಿಕೊಡಿ ಅಂದ್ಯಲ್ಲ ಸರಿನೆ?”

“ಪೂಜೆ ಮಾಡಕ್ಲ ಮದುವಾಗದು. ದೇವಾನು ದೇವತೆಗಳ್ಯಲ್ಲ ಮದುವೆ ಒಂದಿನ ಸೋಬನ ಒಂದಿನ ಅಂತ ಕಾಯ್ತಿದ್ರೇನ್ಲ” ಅಂದ.

“ನೀನ್ಯಾವು ದೇವತೆನಪ್ಪ” ಅಂದೆ.

“ಸುಮ್ಮನೆ ನಡಿಲ ಕಂಡಿವ್ನಿ” ಅಂದ. ಎಲ್ಲರೂ ನಗಾಡಿದ್ರು. ನನ್ನ ಜೀವನದಲ್ಲಿ ರಾಮಣ್ಣನ ಮದುವೆ ಒಳ್ಳೆ ನೆನೆಪಾಗ್ಯದೆ.

ರಾಮಣ್ಣ ಮದುವೆ ಮುಗಿಸಿಗಂಡು ಮೈಸೂರಿಗೆ ಬಂದ. ಆಗಿನ ಮದುವೆ ಗಂಡುಗಳು ವಸಿ ದಿನ ಕಾಲಿನ ನಡು ಬೆರಳಿಗೆ ಬೆಳ್ಳಿ ರಿಂಗ್ ಹಾಕಿರೋರು. ಕತ್ತಲಿ ಚೈನು ಕಿವಿಲಿ ಅತ್ತಕಡಕುಯಲ್ಲಿ ಇರವು. ನಮ್ಮ ರಾಮಣ್ಣನಿಗೆ ಅವೇನು ಇರಲಿಲ್ಲ. ಮದುವೆಯಾದ ಮ್ಯಾಲೆ ರಾಮಣ್ಣನಲ್ಲಿ ಒಂದು ಉತ್ಸಾಹದ ಚಟುವಟಿಕೆ ಗಮನಿಸಿದೆ. ತುಂಬ ಖುಷಿಯಾಗಿ ಊರಿಗೋಗನು. ಹಾಸ್ಟಲಲ್ಲೇ ಇರತಿರಲಿಲ್ಲ. ಒಂದು ಸತಿ ಊರಿಂದ ಬಂದಾಗ ಯಂತದೊ ಟಾನಿಕ್ ಬಾಟ್ಳಿ ತಂದಿದ್ದ.

“ಇದೇನು ಬಾಟ್ಲಿನೊ” ಅಂತ ಕೇಳಿದೆ.

“ಪಾಸ್ ಪೊರ್ಮಿನ್ ಕಲ” ಅಂದ.

“ಅದ್ಯಂತದೊ” ಅಂದೆ.

“ಸೇಬಿನ ರಸದಲ್ಲಿ ಮಾಡಿರೊ ಟಾನಿಕ್ಕು ಕಲ” ಅಂದ.

“ಅದ್ಯಾಕ್ ತಗತಿಯೋ ಮೆಡಿಕಲಿ ಅಪ್ರುವಲ್ಲಾಗಿಲ್ಲ” ಅಂದೆ.

“ತಾಕತ್ತಿಗೆ ಕಲಾ” ಅಂದ.

“ಯಾವ ಡಾಕ್ಟರೇಳೀದ್ರು ನಿಂಗೇ, ಒಹೊಹೊ. ಪತ್ರಿಕೆಲಿ ಅಡವಿಟೀಜ್ ಬಂದಿತ್ತಲ್ಲಾ ಅದನೋಡಿ ತಗಂಡೆ ಅನ್ನು. ಅಂತವುನ್ಯಲ್ಲ ಕುಡಿಬ್ಯಾಡ. ಅದರ ಬದ್ಲು ಬಾಡು ಒಳ್ಳೆ ಹಣ್ಣು ಹಂಪಲು ತಿನ್ನ” ಅಂದೆ.

“ನಿನಿಗೇನು ಗೊತ್ತು ಸುಮ್ಮನೆ ಕೂತಗಲ. ಇನ್ನ ಡಾಕ್ಟರೋತ್ತ ಅವುನೆ, ಆಗಲೆ ಡಾಕ್ಟರಾಡಿದಂಗಾಡ್ತನೆ. ಸುಮ್ಮಸುಮ್ಮನೆ ಅಡವಿಟೇಜ್ ಕೊಟ್ಟಾರ್ಲ. ಸೇಬಿನ ರಸಕಲ ಅದು. ಯಾವತ್ತಾರ ಕುಡದಿದ್ದಿಯಾ. ನಿನಿಗ್ಯಾಕ್ ಬೇಕು ಅವ್ಯಲ್ಲ ಸುಮ್‌ಕಿರು” ಅಂದ. ನಾನು ನಗಾಡಿಕಂಡು ಸುಮ್ಮನಾದೆ. ಹಾಸ್ಟಲಲ್ಲಿ ಅವುನ್ಯಾವತ್ತೂ ಲೀಡ್ರ ತರ ಇರಲಿಲ್ಲ. ಒಂಥರ ಯಲೆಮರೆ ಕಾಯಂಗಿರತಿದ್ದ. ಜನಗಳ ಜೊತೆ ಇರದು ಬುಟ್ರೆ ಮಂಚೂಣಿಲಿ ಕಾಣಿಸಿಗಳ್ತಿರಲಿಲ್ಲ. ಇದು ಬರಹಗಾರನಾದವನ ನಡವಳಿಕೆ ಇರಬಹುದು. ಅವುನ ಪ್ರಿಯವಾದ ಕೆಲಸದಲ್ಲಿ ವಾಕ್ ಮಾಡದು ಒಂದು. ಒಂದಿನ ವಾಕ್ ಬತ್ತಿದೋನು ಇದ್ದಕಿದ್ದಗೆ ಕಾಣದಂಗಾದ. ಇವುನ್ಯತ್ತಗೋದ ಅಂತ ಹುಡುಕದ್ರಲ್ಲಿ ಪ್ರತ್ಯಕ್ಷಾದ. ಆಗ ನಮ್ಮ ಜೊತೆ ಪುಟ್ಟಸ್ವಾಮಿಗೌಡನೂ ಇದ್ದ. “ಇದೆಲ್ಲಿಗೋಗಿದ್ದೊ” ಅಂದೆ. ನನ್ನ ಫ್ರೆಂಡಿಗೆ ಉಷಾರಿರಲಿಲ್ಲ ಕಲ. ಒಂದಿಷ್ಟು ದುಡ್ಡುಕೊಟ್ಟು ಬಂದೆ” ಅಂದ.

“ಅದ್ನ ಹೇಳಿಬುಟ್ಟೆ ಹೋಗಬವುದಿತ್ತಪ್ಪ” ಅಂದೆ. “ಯಲ್ಲಾನು ಹೇಳಿಬುಟ್ಟಿ ಮಾಡಕ್ಕಾದತ್ಲೆ” ಅಂದ. ಕಷ್ಟದಲ್ಲಿದ್ದವುರೆ ಸಹಾಯ ಮಾಡದು ಅವನ ಜನ್ಮದಲ್ಲೇ ಬಂದ ಗುಣ ಆಗಿತ್ತು. ಅವುನಿನ್ನು ಸಂಬಳ ತಗಿತಿರಲಿಲ್ಲ, ಆದ್ರು ಓದೊ ದುಡ್ಡಲ್ಲೇ ಸಹಾಯ ಮಾಡತಿದ್ದ.

ಹೇಳ್ದವ್ರು: ಡಾ. ಕಮಲಾಕ್ಷಣ್ಣ
ಬರ್ಕಂಡವ್ರು: ಬಿ ಚಂದ್ರೇಗೌಡ


ಇದನ್ನೂ ಓದಿ: ಹಿಂಗಿದ್ದ ನಮ್ಮ ರಾಮಣ್ಣ: ಭಾಗ-5; “ಏನೊ ಒಂದು ವಳ್ಳೆ ಪಾರ್ಟಿ ಮಾಡಿ ಮೀನು ತಿನ್ನನ ಅಂದ್ರೆ ಅದ್ಕೂ ಕಲ್ಲಾಕಿದೆ”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...