Homeಕರ್ನಾಟಕಮೌಢ್ಯದ ವಕ್ತಾರರಾದ ವಿಜ್ಞಾನಿ, ಕೋಮುವಾದ ಅಪ್ಪಿಕೊಂಡ ಸಾಹಿತಿ, ವಿದ್ಯಾರ್ಥಿಸ್ನೇಹಿಯಾದ ರಾಜಕಾರಣಿ... ಯಾರು ಗೊತ್ತೆ?

ಮೌಢ್ಯದ ವಕ್ತಾರರಾದ ವಿಜ್ಞಾನಿ, ಕೋಮುವಾದ ಅಪ್ಪಿಕೊಂಡ ಸಾಹಿತಿ, ವಿದ್ಯಾರ್ಥಿಸ್ನೇಹಿಯಾದ ರಾಜಕಾರಣಿ… ಯಾರು ಗೊತ್ತೆ?

- Advertisement -
- Advertisement -

ಈ ವಾರ ಸಂಭವಿಸಿದ ಮೂವರು ಗಣ್ಯರ ವಿಶೇಷ ನಡೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇಲ್ಲಿ ಒಂದು ವೈರುಧ್ಯವಿದೆ. ಸಾಮಾನ್ಯವಾಗಿ, ಅದರಲ್ಲು ಬಿರುಸಿನ ರಾಜಕೀಯ ಚಟುವಟಿಕೆ ನಡೆದಿರುವ ಹೊತ್ತಿನಲ್ಲಿ ರಾಜಕಾರಣ ಬದಿಗಿಟ್ಟು ವಿದ್ಯಾರ್ಥಿಗಳ ಜೊತೆ ರಾಜಕಾರಣಿ ನಿಂತರೆ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸಲು ಯತ್ನಿಸಬೇಕಾದ ವಿಜ್ಞಾನಿ ಮೂಢನಂಬಿಕೆಯನ್ನು ವೈಭವಿಕರಿಸಿದರು. ಇತ್ತೀಚಿಗಷ್ಟೇ ಅತ್ಯಾಚಾರ ಪ್ರಕರಣದಲ್ಲಿ ಹೆಸರು ಉಲ್ಲೇಖಿಸಲ್ಪಟ್ಟಿರುವ ವಿದ್ಯಾರ್ಥಿ ಸಂಘಟನೆಯನ್ನು ಪ್ರಮೋಟ್ ಮಾಡಲು ‘ಪ್ರಗತಿಪರ’ ಸಾಹಿತಿ ಹೊರಟರು… ಇದನ್ನು ವಿವರಿಸುವ ಮೂರು ತುಣುಕುಗಳಲ್ಲಿ ಇವೆ:.

1. ದೇವಸ್ಥಾನದೊಳ್ ಚಂದ್ರಯಾನ್: ಇಸ್ರೋ ಮುಖ್ಯಸ್ಥರ ಟೆಂಪಲ್‍ರನ್!
ಅಯ್ಯ ತನ್ನ ತಾನರಿಯಬೇಕಲ್ಲದೇ,
ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರಲ್ಲಿ
ಕೇಳಲುಂಟೇ ಚೆನ್ನಮಲ್ಲಿಕಾರ್ಜುನಾ,
ನೀನರಿವಾಗಿ ಎನಗೆ ಮುಂದುದೋರಿದ ಕಾರಣ
ನಿಮ್ಮಿಂದ ನಿಮ್ಮನರಿವೆನು
-ಅಕ್ಕಮಹಾದೇವಿ

ಇಸ್ರೋ ಮುಖ್ಯಸ್ಥರು ವಿದ್ಯಾದೀಶತೀರ್ಥ ಸ್ವಾಮಿಯವರ ಮುಂದೆ ಕುಳಿತ ಚಿತ್ರ ನೋಡಿದಾಗ ಅಕ್ಕನ ಈ ವಚನ ನೆನಪಾಗಿತು.. ‘ಅನ್ಯರ’ ಮುಂದೆ ತಲೆಬಾಗಿ ಅವರು ತಮ್ಮ ಅರಿವಿಗಷ್ಟೇ ಅಲ್ಲ, ಇಸ್ರೋದ ‘ಅರಿವು’, ಅದರ ಸಾಧನೆ-ಶ್ರೇಯಸ್ಸುಗಳಿಗೇ ಕಳಂಕ ತಂದಿದ್ದಾರೆ.
ಜುಲೈ 15ರಂದು ಇಸ್ರೋದ ಬಹು ಮಹತ್ತರ ‘ಚಂದ್ರಯಾನ-2’ ಆರಂಭಗೊಳ್ಳಲಿದ್ದು, ಅದರ ಯಶಸ್ಸಿಗಾಗಿ ಇಸ್ರೊ ಮುಖ್ಯಸ್ಥ ಶಿವನ್ ಅವರು ಜುಲೈ 7ರಂದು ದೇವಸ್ಥಾನಗಳನ್ನು ಸುತ್ತಿ ದೇವರ, ಸ್ವಾಮೀಜಿಗಳ ಆಶೀರ್ವಾದ ಪಡೆದರು. ಇಂಥದ್ದನ್ನು ನಮ್ಮ ರಾಜಕಾರಣಿಗಳು ಮಾಡಿದಾಗ ಟೆಂಪಲ್ ರನ್ ಎನ್ನುವ ಮಾಧ್ಯಮಗಳು ಇದಕ್ಕೆ ಮಾತ್ರ ಚಕಾರ ಎತ್ತಿಲ್ಲ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಅವರು ವಿದ್ಯಾದೀಶತೀರ್ಥ ಸ್ವಾಮಿಯವರ ಮುಂದೆ ನಮ್ರತೆಯಿಂದ ತಲೆಬಾಗಿ ಚಂದ್ರಯಾನ ಯಶಸ್ವಿಗೆ ಆಶೀರ್ವಾದ ಪಡೆಯುವ ಮೂಲಕ ತಮ್ಮ ಘನ ಹುದ್ದೆಗೆ ಅವಮಾನ ಮಾಡಿದ್ದಾರೆ. ಕೊಲ್ಲೂರು ಮೂಕಾಂಬಿಕಾ ಮಠಕ್ಕೂ ಭೇಟಿ ನೀಡಿ ಚಂದ್ರಯಾನ ಯಶಸ್ಸಿಗೆ ಪೂಜೆ ಸಲ್ಲಿಸಿದ್ದಾರೆ.

ಸಾವಿರಾರು ವಿಜ್ಞಾನಿಗಳು ಮತ್ತು ಇಂಜಿನಿಯರ್‍ ಗಳ ಅವಿರತ ಶ್ರವನ್ನು ಶಿವನ್ ಅವಮಾನಿಸಿದ್ದಾರೆ. ಈ ಹಿಂದೆಯೂ ಹಲವು ಇಸ್ರೋ ಅಧ್ಯಕ್ಷರು ಉಪಗ್ರಹಗಳ ಪ್ರತಿಕೃತಿಗಳನ್ನು ತಿರುಪತಿ ತಿಮ್ಮಪ್ಪನ ಮುಂದೆ ಇಟ್ಟು ಪೂಜೆ ಮಾಡಿಸಿ ಇಂತಹ ಮೂರ್ಖತನ ಮೆರದಿದ್ದರು. ಜನರಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಇಂತಹ ನಡೆ ತಪ್ಪು ಸಂದೇಶಗಳನ್ನು ರವಾನೆ ಮಡುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದ ಇಂಹ ವಿಜ್ಞಾನಿಗಳು ಮೂಢನಂಬಿಕೆಗಳ ವಕ್ತಾರರಂತೆ ವರ್ತಿಸುವುದು ಅಕ್ಷಮ್ಯ.

ರಾಜಸ್ಥಾನದಲ್ಲಿ ವೈದ್ಯ ಸಂಘದ ಕಾರ್ಯಕ್ರಮದಲ್ಲಿ ಮುಂದಿನ ಸಾಲಿನಲ್ಲಿ ಮಹಿಳೆಯರು ಕುಳಿತಿದ್ದಕ್ಕೆ ಕೋಪಗೊಂಡ ಸ್ವಾಮೀಜಿಯೊಬ್ಬ ಕಾರ್ಯಕ್ರಮ ಬಹಿಷ್ಕರಿಸಿ ನಡೆದಿದ್ದಾನೆ. ಆತನ ಸ್ತ್ರೀದ್ವೇಷಿ ಗುಣ ಗೊತ್ತಿದ್ದರೂ ಆತನ್ನು ಕಾರ್ಯಕ್ರಮಕ್ಕೆ ವೈದ್ಯರು ಕರೆಯುತ್ತಾರೆಂದರೆ?

2. ‘ಕಾಡುಕುದುರೆ’ಗಳ ಸಂಗದಲ್ಲಿ ಕಂಬಾರರು!
ಸೃಜನಶೀಲ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಠ ಸ್ಥಾನ ಗಳಿಸಿರುವ ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರರು ಎಬಿವಿಪಿಯ ಸದಸ್ಯತ್ವ ಪಡೆದು, ಆ ಸಂಘಟನೆಯ ಸದಸ್ಯತ್ವ ಅಭಿಯಾನದ ಬ್ರ್ಯಾಂಡ್ ಅಂಬಾಸೆಡರ್ ಆಗಿದ್ದಾರೆ. ಕಂಬಾರ ಬ್ರಾಹ್ಮಣಶಾಹಿಯ ಆರಾಧಕರಲ್ಲ ನಿಜ. ಆದರೆ ಅಧಿಕಾರ, ಸ್ಥಾನಮಾನಕ್ಕಾಗಿ ಏನನ್ನು ಮಾಡಬಲ್ಲರು ಎಂಬುದು ಪದೇಪದೇ ಸಾಬೀತಾಗಿದೆ. ಅವರು ಮೊದಲ ಸಲ ಕನ್ನಡ ವಿವಿಯ ಕುಲಪತಿಯಾಗುವಾಗ ಅಂದಿನ ಮುಖ್ಯಮಂತ್ರಿ ಬಂಗಾರಪ್ಪರ ಎದುರು ತಳ ಸಮುದಾಯದ ಸಾಹಿತಿಯಾಗಿ (ಕನ್ನಡ ವಿವಿಯ ಕುಲಪತಿಯಾಗುವ ಎಲ್ಲ ಅರ್ಹತೆಗಳು ಅವರಿದ್ದರೂ), ಅಲ್ಲಿ ಎರಡನೇ ಅವಧಿಗೆ ವಿಸ್ತರಣೇ ಮಾಡಿಕೊಳ್ಳುವಾಗ ಅಂದಿನ ಮುಖ್ಯಮಂತ್ರಿ ಜೆ.ಎಚ್ ಪಟೇಲರ ಎದುರು ಸಮಾಜವಾದಿ ಸಾಹಿತಿಯಾಗಿ ತಮ್ಮನ್ನು ಪ್ರಸ್ತುತಪಡಿಸಿಕೊಂಡಿದ್ದರು.

 

ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಮತ್ತು ಇಲ್ಲೂ ಅದೇ ಸರ್ಕಾರ ಬರಬಹುದಾದ್ದರಿಂದ ಆ ಪಕ್ಷದ ವಿದ್ಯಾರ್ಥಿ ಸಂಘಟನೆ ವಕ್ತಾರರಾಗುವ ಮೂಲಕ ಸಾಹಿತ್ಯಾಸಕ್ತರಲ್ಲಿ ಅಸಹ್ಯ ಮೂಡಿಸಿದ್ದಾರೆ. ಇತ್ತೀಚೆಗಷ್ಟೇ ಅತ್ಯಾಚಾರ ಪ್ರಕರಣದಲ್ಲಿ ಹೆಸರು ತಗಲು ಹಾಕಿಸಿಕೊಂಡಿರುವ, ಕೋಮುವಾದಿ ಸಿದ್ದಾಂತಗಳ ವಿದ್ಯಾರ್ಥಿ ಸಂಘಟನೆಯ ಸದಸ್ಯರಾಗುವ ಮೂಲಕ ಅವರು ಯಾವ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೋ?

3. ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿಯಾದ ರಾಜಕಾರಣಿ
ಸಮಾಜಕ್ಕೆ ಆದರ್ಶವಾಗಬೇಕಿದ್ದ ವಿಜ್ಞಾನಿ ಮತ್ತು ಸಾಹಿತಿ ತಪ್ಪು ನಡೆಗಳನ್ನು ಇಟ್ಟ ಈ ಸಂದರ್ಭದಲ್ಲಿ ರಾಜಧಾನಿಯ ಮಹತ್ವದ ರಾಜಕೀಯ ಚಟುವಟಿಕೆಗಳನ್ನು ಬದಿಗೆ ಸರಿಸಿ, ವಿದ್ಯಾರ್ಥಿಗಳೊಂದಿಗೆ ಒಂದು ದಿನವನ್ನು ಕಳೆಯುವ ಮೂಲಕ ಎಚ್.ಕೆ. ಪಾಟೀಲರು ಆದರ್ಶದ ನಡೆ ಇಟ್ಟಿದ್ದಾರೆ. ಗ್ರಾಮೀಣಾಭಿವೃದ್ಧಿ ವಿ.ವಿಯ ಸ್ನಾತಕೋತ್ತರ ವಿದ್ಯಾರ್ಥಿಗಳ ಮೊದಲ ಬ್ಯಾಚಿನ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದೇ ಬೆಂಗಳೂರಿನಿಂದ ಗದಗಿಗೆ ಬಂದು ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿಯಾಗಿ, ಗ್ರಾಮೀಣ ಭಾರತದ ಅಭಿವೃದ್ಧಿ ಅಗತ್ಯತೆಯ ಕುರಿತು ಮಾತಾಡಿದ್ದಾರೆ, ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರೆಲ್ಲೂ ರಾಜಕಾರಣದ ವಿಷಯ ಪ್ರಸ್ತಾಪಿಸದೇ ಘನತೆ ಮೆರೆದಿದ್ದಾರೆ.

ಇವತ್ತು ರಾಜಕಾರಣಿಗಳೆಲ್ಲ ಪಕ್ಷ ರಾಜಕಾರಣದಲ್ಲಿ ಮುಳುಗಿರುವ ‘ಅಧಿಕಾರದ ಅಮಲಿನ’ ಸಂದರ್ಭದಲ್ಲಿ ಎಚ್. ಕೆ. ಪಾಟೀಲ ವಿದ್ಯಾರ್ಥಿಗಳ ಜೊತೆ ಇದ್ದುದು ಆದರ್ಶಪ್ರಾಯವಾದರೆ, ಶಿವನ್ ಮತ್ತು ಕಂಬಾರ ಮಾತ್ರ ವಿದ್ಯಾರ್ಥಿಗಳಿಗೆ ತಪ್ಪು ಸಂದೇಶ ರವಾನಿಸುವ ಮೂಲಕ ಸಣ್ಣವರಾಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್...

ರಾಜ್ಯದಲ್ಲಿ ಅವಧಿ ಮೀರಿದ ಆಹಾರ ಪೂರೈಕೆಯ ಬೃಹತ್ ದಂಧೆ: ₹1.43 ಕೋಟಿಯ ಉತ್ಪನ್ನಗಳು ಜಪ್ತಿ

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...

ಭಾರತೀಯ ಮಹಿಳೆಯನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ ಪ್ರಕರಣ : 2 ಲಕ್ಷ ರೂ. ಪರಿಹಾರ ಪಾವತಿಸಲು ಅಸ್ಸಾಂ ಸರ್ಕಾರಕ್ಕೆ ಗುವಾಹಟಿ ಹೈಕೋರ್ಟ್ ಆದೇಶ

ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಮಹಿಳೆಯೊಬ್ಬರಿಗೆ ವಿದೇಶಿಯರ ನ್ಯಾಯಾಧಿಕರಣದ (ಫಾರಿನರ್ಸ್ ಟ್ರಿಬ್ಯೂನಲ್) ಆದೇಶವನ್ನು ಪ್ರಶ್ನಿಸಲು ಯಾವುದೇ ಅವಕಾಶ ನೀಡದೆ, ಅವರನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದಕ್ಕಾಗಿ ಮಧ್ಯಂತರ ಪರಿಹಾರವಾಗಿ ಆಕೆಯ ಪತಿಗೆ 2 ಲಕ್ಷ...

ಮಂಡಿಯ ಐಐಟಿ ಕ್ಯಾಂಪಸ್‌ನಲ್ಲಿ ‘ಶೂದ್ರರು ಮೇಲ್ವರ್ಗಗಳ ಸೇವಕರು’ ಎಂಬ ವರ್ಣ ಶ್ರೇಣೀಕರಣ ಚಿತ್ರಣ: ಜಾತಿ ವಿವಾದದ ನಂತರ ತನಿಖೆಗೆ ಆದೇಶ

ಮಂಡಿ: ಶೂದ್ರರನ್ನು ‘ಉನ್ನತ ವರ್ಗಗಳಿಗೆ ಸೇವೆ ಸಲ್ಲಿಸಲು ಉದ್ದೇಶಿಸಿರುವವರು’ ಎಂದು ಬಿಂಬಿಸುವ ಪೋಸ್ಟರ್‌ವೊಂದು ಹಿಮಾಚಲ ಪ್ರದೇಶದ ಐಐಟಿ ಮಂಡಿಯಲ್ಲಿ ಜಾತಿ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಸಂಸ್ಥೆ ತನಿಖೆಗೆ ಆದೇಶಿಸಿದೆ. ಸೆಪ್ಟೆಂಬರ್ 4ರಂದು...

ಎಸ್ಐಆರ್ ಬಳಿಕ ಮಣಿಪುರ, ಸಿಕ್ಕಿಂ, ಮಿಜೋರಾಂನಲ್ಲಿ 2.24 ಲಕ್ಷ ಮತದಾರರ ಹೆಸರು ಕಡಿತ: ಸಿಕ್ಕಿಂನಲ್ಲಿ ಶೇ.11.15ರಷ್ಟು ಇಳಿಕೆ 

ನವದೆಹಲಿ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಬಳಿಕ ಈಶಾನ್ಯ ಭಾರತದ ಮಣಿಪುರ, ಸಿಕ್ಕಿಂ ಮತ್ತು ಮಿಜೋರಾಂ ರಾಜ್ಯಗಳ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ಕಂಡುಬಂದಿದೆ. ಈ ಮೂರು ರಾಜ್ಯಗಳಲ್ಲಿ...

ಜೆಎನ್‌ಯು ಪ್ರೊಫೆಸರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ : 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಂದ ದೂರು

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆಂತರಿಕ ದೂರುಗಳ ಸಮಿತಿಯು (ಐಸಿಸಿ), ಸುಮಾರು ಹನ್ನೊಂದು ವಿದ್ಯಾರ್ಥಿನಿಯರು ಪ್ರೊಫೆಸರ್ ಒಬ್ಬರ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳ ಕುರಿತು ಪ್ರಸ್ತುತ ತನಿಖೆ ನಡೆಸುತ್ತಿದೆ ಎಂದು...

ಹಿಂದೂ ಧಾರ್ಮಿಕ ಸಂಘಟನೆ ನಿಯೋಗದ ಭೇಟಿ ವೇಳೆ ಮಹಿಳಾ ಸಿಬ್ಬಂದಿಯನ್ನು ದೂರವಿಟ್ಟ ಆರೋಪ; ಈಫೆಲ್ ಟವರ್‌ನಲ್ಲಿ ನೌಕರರ ಮುಷ್ಕರ

ಹಿಂದೂ ಧಾರ್ಮಿಕ ಸಂಘಟನೆ ಬಿಎಪಿಎಸ್ (BAPS) ನಿಯೋಗದ ಭೇಟಿಯ ವೇಳೆ ಮಹಿಳಾ ಸಿಬ್ಬಂದಿಯನ್ನು ಕೆಲಸದ ಸ್ಥಳಗಳಿಂದ ದೂರವಿಡಲಾಗಿತ್ತು ಎಂಬ ಆರೋಪ ಫ್ರಾನ್ಸ್‌ನಲ್ಲಿ ವಿವಾದಕ್ಕೆ ಕಾರಣವಾಗಿದೆ. ಘಟನೆಯನ್ನು ಖಂಡಿಸಿ ಈಫೆಲ್ ಟವರ್‌ನ ಸಿಬ್ಬಂದಿ ಸೋಮವಾರ...

KPSC ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ: CID ತನಿಖೆಯಲ್ಲಿ ರೂ. 12 ಕೋಟಿಗೂ ಅಧಿಕ ಡೀಲ್ ಬಯಲು!

ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಐಡಿ (CID) ತನಿಖೆಯಲ್ಲಿ ಸಾಲು ಸಾಲು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಒಟ್ಟು 24 ಅಭ್ಯರ್ಥಿಗಳು ಹಣ...

ದೆಹಲಿಯಲ್ಲಿ ಮಣಿಪುರದ ಸಂಗೀತಗಾರನ ಗುಂಪು ಹತ್ಯೆ : ಎಂಟು ಜನರ ಬಂಧನ

ದೆಹಲಿಯ ಆಶ್ರಮ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಣಿಪುರದ ಸಂಗೀತಗಾರ ಚೊಂಗ್ಥಾಮ್ ವಿಕ್ರಮ್ ಸಿಂಗ್ ಅವರು ಭಾನುವಾರ (ಸೆ.6) ರಾತ್ರಿ ಗುಂಪೊಂದರಿಂದ ಕಲ್ಲು ತೂರಾಟ ಅಥವಾ ಹಲ್ಲೆಗೆ ಒಳಗಾಗಿ, ಅದರಿಂದ ಉಂಟಾದ ಗಂಭೀರ ಗಾಯಗಳಿಂದಾಗಿ ಸೋಮವಾರ...

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...