Homeಕರ್ನಾಟಕಅತೃಪ್ತರಿಗೆ ‘ಅಪಶಕುನ’, ಬಿಜೆಪಿಗೆ ತಾತ್ಕಾಲಿಕ ಹಿನ್ನಡೆ, ಮೈತ್ರಿಗೆ ಮುಗುಳ್ನಗೆ..

ಅತೃಪ್ತರಿಗೆ ‘ಅಪಶಕುನ’, ಬಿಜೆಪಿಗೆ ತಾತ್ಕಾಲಿಕ ಹಿನ್ನಡೆ, ಮೈತ್ರಿಗೆ ಮುಗುಳ್ನಗೆ..

- Advertisement -
- Advertisement -

ಸರ್ಕಾರ ಬೀಳುತ್ತೋ ಅಥವಾ ಇಲ್ಲವೋ ಎಂಬ ಚರ್ಚೆಯನ್ನು ಇವತ್ತಿನ (ಶುಕ್ರವಾರ) ಮುಂಜಾನೆ 4 ತಾಸುಗಳು ಹೊಸ ಆಯಾಮಕ್ಕೆ ಒಯ್ದುಬಿಟ್ಟಿವೆ. ಅರ್ಜೆಂಟಾಗಿ ಅಧಿಕಾರ ಹಿಡಿಯಬೇಕೆಂದಿದ್ದ ಬಿಜೆಪಿ ಮತ್ತು ಅತೃಪ್ತರಿಗೆ ತಾತ್ಕಾಲಿಕ ಹಿನ್ನಡೆ ಆಗಿದ್ದರೆ, ಒಂದೊಂದು ದಿನ ಸಿಕ್ಕರೂ ಸಾಕು ಎಂದು ಹಪಹಪಿಸುತ್ತಿದ್ದ ಮೈತ್ರಿ ಸರ್ಕಾರದ ಮುಖದಲ್ಲಿ ಮಂದಹಾಸ ಕಾಣಿಸಿತೊಡಗಿದೆ. ಇಲ್ಲೊಂದು ಇಂಟರೆಸ್ಟಿಂಗ್ ಪಾಯಿಂಟ್ ಅಂದರೆ, ತಮ್ಮ ರಾಜಕೀಯದ ಕೊನೆ ಘಟ್ಟದಲ್ಲಿರುವ ಸ್ಪೀಕರ್ ರಮೇಶಕುಮಾರರಿಗೆ ಈ ಒಟ್ಟೂ ಬಿಕ್ಕಟ್ಟು ಸಂವಿಧಾನ ಮತ್ತು ಸಂಸದೀಯ ಪ್ರಕ್ರಿಯೆಗಳ ಕುರಿತ ಅವರ ಜ್ಞಾನವನ್ನು ದೇಶದ ಎದುರು ಇಡಲು ಒಂದು ಅಪೂರ್ವ ಅವಕಾಶವನ್ನು ಒದಗಿಸಿದೆ!

ಸುಪ್ರಿಂಕೋರ್ಟು ಮಂಗಳವಾರಕ್ಕೆ ವಿಚಾರಣೆ ಮುಂದೂಡಿದ್ದು, ಸಂತಾಪ ಕಲಾಪದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಯ ಅಸ್ತ್ರ ಬಿಟ್ಟಿದ್ದು, ಹಿಂದೆಯೇ ವಿಪ್ ಭೂತವನ್ನು ತೇಲಿಬಿಟ್ಟಿದ್ದು-ಇದೆಲ್ಲವೂ ಆಪರೇಷನ್ ಕಮಲ ಎಂಬ ದಂಧೆಯನ್ನು ಅಧಿಕೃತಗೊಳಿಸಲು ಯತ್ನಿಸುತ್ತಿರುವ ಬಿಜೆಪಿಗೆ ಸದ್ಯಕ್ಕೆ ಶಾಕ್ ನೀಡಿದೆ. ಒಟ್ಟಿನಲ್ಲಿ ಅಧಿಕಾರ ಬಿಡಲೇಬಾರದು ಎಂದು ಒದ್ದಾಡುತ್ತಿರುವ ಮೈತ್ರಿ ಸರ್ಕಾರಕ್ಕೆ ರಿಲೀಫ್ ನೀಡಿದೆ.

‘ಈಗಲೇ ರಾಜೀನಾಮೆ ಅಂಗೀಕರಿಸಿ’ ಎಂದು ಸುಪ್ರಿಂಕೋರ್ಟು ಸ್ಪೀಕರ್ ಗೆ ಆದೇಶ ನೀಡಬಹುದು ಎಂದು ಬಿಜೆಪಿಯಷ್ಟೇ ಅಲ್ಲ, ಟಿವಿ ಮಾಧ್ಯಮಗಳು ಮತ್ತು ಅಲ್ಲಿ ಸ್ಪೀಕರ್ ನಾಲೆಡ್ಜ್ ಗಿಂತ ತಮ್ಮದೇ ಜಾಸ್ತಿ ಎಂದೆಲ್ಲ ಪ್ರದರ್ಶನ ಮಾಡಲು ಹೆಣಗಾಡುತ್ತಿರುವ ಕೆಲವು ಪತ್ರಕರ್ತ ಪಂಡಿತರೂ ನಿರೀಕ್ಷೆ ಮಾಡಿದ್ದರು. ಆದರೆ, ಅಲ್ಲಿ ನಡೆದದ್ದೇ ಬೇರೆ. ಅತೃಪ್ತರ ಪರ ಮುಕುಲ್ ರೊಹಟಗಿ ಮಂಡಿಸಿದ ವಾದಕ್ಕೆ ಸ್ಪೀಕರ್ ಪರ ವಾದ ಮಂಡಿಸಿದ ಅಭಿಷೇಕ್ ಸಿಂಘ್ವಿ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಪರ ವಾದ ಮಂಡಿಸಿದ ರಾಹುಲ್ ಧವನ್ ಹಿನ್ನಡೆ ಮಾಡಿದರು. ‘ಈ ಸಂದರ್ಭದಲ್ಲಿ ನಾವು ಸ್ಪೀಕರ್ ಗೆ ನಿರ್ದೇಶನ ಮಾಡಬಾರದೇ’ ಎಂದು ಪ್ರಶ್ನೆ ಮಾಡಿಕೊಂಡ ಸುಪ್ರಿಂಕೋರ್ಟು ವಿಚಾರಣೆಯನ್ನು ಮಂಗಳವಾರದವರೆಗೆ ಮುಂದೂಡಿ, ಅಲ್ಲಿವರೆಗೆ ಯಥಾಸ್ಥಿತಿ ಕಾಪಾಡಲು ಹೇಳುವ ಮೂಲಕ ಮುಂಬೈಯಲ್ಲಿ ಮಜಾ ಮಾಡುತ್ತಿರುವ ಶಾಸಕರಿಗೆ ಆಘಾತವನ್ನು, ವಿಜಯೋತ್ಸಾಹದ ನಿರೀಕ್ಷೆಯಲ್ಲಿ ಸದನಕ್ಕೆ ಬಂದಿದ್ದ ಬಿಜೆಪಿಗೆ ಭರ್ಜರಿ ಶಾಕ್ ಅನ್ನು ನೀಡಿಬಿಟ್ಟಿತು.

ಇದರಿಂದ ಸುಧಾರಿಸಿಕೊಳ್ಳುವ ಮೊದಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಆಶ್ಚರ್ಯಕರ ರೀತಿಯಲ್ಲಿ ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿ, ದಿನಾಂಕ ನಿಗದಿ ಮಾಡಿ ಎಂದಿದ್ದಂತೂ ಬಿಜೆಪಿ ಮತ್ತು ಅತೃಪ್ತರ ಪಾಲಿಗೆ ಒಂದು ರೀತಿಯ ಚಾಲೆಂಜೇ ಆಗಿದೆ.

ಸದ್ಯ ಸದನ ಮುಂದೂಡಿಕೆ ಆಗಿದೆ. ಈಗ ಮತ್ತೊಮ್ಮೆ ವಿಪ್ ಜಾರಿಯಾಗಬಹುದು. ವಿಶ್ವಾಸಮತ ಯಾಚನೆ ನಿಗದಿ ಏಕಾಏಕಿ ಆಗುವಂಥದ್ದಲ್ಲ… ಇಲ್ಲಿ ಸಂಕೀರ್ಣ ಕಾನೂನು ಈ ಸಂದರ್ಭಕ್ಕೆ ಹೇಗೆ ಅಪ್ಲೈ ಆಗುತ್ತದೆ ಎಂಬ ಬಗ್ಗೆ ಗೊಂದಲವಿದೆ….

ಆದರೆ, ಸಿಎಂ ಪರ ವಾದ ಮಂಡಿಸಿದ ರಾಜೀವ್ ಧವನ್ ಇದನ್ನು ಪ್ರಜಾತಂತ್ರಕ್ಕೇ ಅಪಾಯ ಎಂಬ ರೀತಿಯಲ್ಲಿ ವಾದ ಮಂಡಿಸುತ್ತ ಆಪರೇಷನ್ ಕಮಲ ಎಂಬ ದಂಧೆಯ ಅಪಾವಿತ್ರ್ಯತೆಯನ್ನು ನ್ಯಾಯಾಧೀಶರಿಗೆ ಮನವರಿಕೆ ಮಾಡಲು ಯತ್ನಿಸುತ್ತಿದ್ದಾರೆ. ಮಂಗಳವಾರ ಅವರು, ಮತ್ತೆ ರೋಷನ್ ಬೇಗ್-ಐಎಂಎ ಮತ್ತು ಇತರ ಕೆಲವು ಅತೃಪ್ತರು ಭಾಗಿಯಾಗಿರಬಹುದು ಎನ್ನಲಾದ ಭ್ರಷ್ಟಾಚಾರದ ಪ್ರಕರಣಗಳನ್ನು ಸುಪ್ರೀಂ ಮುಂದೆ ಇಡಬಹುದು….

ಅಂತ್ಯದಲ್ಲಿ ಬಿಜೆಪಿ ಇಲ್ಲಿ ಸರ್ಕಾರ ರಚಿಸಬಹುದು, ಆದರೆ ಆಪರೇಷನ್ ಕಮಲ ಎಂಬ ವ್ಯಾಪಾರದ ಮೂಲಕ ಪಕ್ಷಾಂತರ ಕಾಯ್ದೆಯನ್ನೇ ಅಪ್ರಸ್ತುತ ಮಾಡುತ್ತ ಅಧಿಕಾರ ಕಬಳಿಸುತ್ತಿರವ ಬಿಜೆಪಿಯ ನಡೆಯೂ ಸುಪ್ರಿಂನಲ್ಲಿ ಚರ್ಚೆಯಾಗಬಹುದು. ಆ ಮೂಲಕ ರಾಷ್ಟ್ರವ್ಯಾಪಿಯಾಗಿ ಈ ಹೇಯ ದಂಧೆಯ ಅನಾವರಣವಾದರೂ ಆಗಲಿ ಎಂಬುದೇ ಪ್ರಜಾತಂತ್ರವಾದಿಗಳ ಆಶಯ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...