Homeಚಳವಳಿಕ್ರಾಂತಿಕಾರಿ ಗುಣಸ್ವಭಾವ: ಭಾಗ-2; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

ಕ್ರಾಂತಿಕಾರಿ ಗುಣಸ್ವಭಾವ: ಭಾಗ-2; ಕ್ರಾಂತಿಯನ್ನು ಹೇಗೆ ವ್ಯಾಖ್ಯಾನಿಸಬಹುದು?

- Advertisement -
- Advertisement -

ನಾವು ಒಂದು ಕ್ರಾಂತಿಯನ್ನು ಪದಕೋಶದ ಅರ್ಥದಲ್ಲಿ- ಸರಳವಾಗಿ, ಈಗಿರುವ ಸರಕಾರವನ್ನು ಶಾಂತಿಯುತವಾಗಿ ಅಥವಾ ಹಿಂಸಾತ್ಮಕವಾಗಿ ಕಿತ್ತೆಸೆಯುವುದು ಮತ್ತದರ ಜಾಗದಲ್ಲಿ ಹೊಸ ಸರಕಾರವೊಂದನ್ನು ಸ್ಥಾಪಿಸುವುದು ಎಂದು ಹೇಳುವುದರ ಮೂಲಕ ವ್ಯಾಖ್ಯಾನಿಸಬಹುದು. ಖಂಡಿತವಾಗಿಯೂ ಇದೊಂದು ಬಹಳ ಔಪಚಾರಿಕ ರಾಜಕೀಯ ವ್ಯಾಖ್ಯಾನವಾದರೂ, ನಿರ್ದಿಷ್ಟವಾಗಿ ಅಷ್ಟೇನೂ ಅರ್ಥಪೂರ್ಣವಲ್ಲ. ನಾವು ಒಂದು ರೀತಿಯ ಹೆಚ್ಚು ಮಾರ್ಕ್ಸ್‌ವಾದಿ ಅರ್ಥದಲ್ಲಿ ಒಂದು ಕ್ರಾಂತಿಯನ್ನು, ಅಸ್ತಿತ್ವದಲ್ಲಿರುವ ವ್ಯವಸ್ಥೆಯೊಂದನ್ನು ಹೆಚ್ಚು ಪ್ರಗತಿಪರವಾದ ವ್ಯವಸ್ಥೆಯಿಂದ ಬದಲಿಸುವುದು ಎಂದು ವ್ಯಾಖ್ಯಾನಿಸಬಹುದು. ಖಂಡಿತವಾಗಿಯೂ ಇಲ್ಲಿ ಪ್ರಶ್ನೆಯೊಂದು ಯಾವಾಗಲೂ ಏಳುತ್ತದೆ; ಏನೆಂದರೆ, ಯಾವುದು “ಐತಿಹಾಸಿಕವಾಗಿ ಹೆಚ್ಚು ಪ್ರಗತಿಪರ” ಎಂಬುದನ್ನು ನಿರ್ಧರಿಸುವವರು ಯಾರು ಎಂಬುದು. ಸಾಮಾನ್ಯವಾಗಿ- ಕನಿಷ್ಟ ಪಕ್ಷ ತಮ್ಮತಮ್ಮ ದೇಶದಲ್ಲಾದರೂ- ಅದು ಗೆದ್ದವರೇ ಆಗಿರುತ್ತಾರೆ.

ಅಂತಿಮವಾಗಿ, ಒಂದು ಕ್ರಾಂತಿಯನ್ನು ಕ್ರಾಂತಿಕಾರಿ ಗುಣಸ್ವಭಾವ ಹೊಂದಿರುವವರ ನೇತೃತ್ವವಿರುವ, ಕ್ರಾಂತಿಕಾರಿ ಗುಣಸ್ವಭಾವದ ಜನರನ್ನು ಆಕರ್ಷಿಸುವ ಒಂದು ರಾಜಕೀಯ ಚಳವಳಿ ಎಂದು ಹೇಳುವ ಮೂಲಕ ನಾವು ಮನಃಶಾಸ್ತ್ರೀಯ ಅರ್ಥದಲ್ಲಿ ವ್ಯಾಖ್ಯಾನಿಸಬಹುದು.

ಅದು, ಖಂಡಿತವಾಗಿಯೂ, ಅಂತಾ ಉತ್ತಮ ವ್ಯಾಖ್ಯಾನವೇನಲ್ಲವಾದರೂ, ಈ ಪ್ರಬಂಧದ ನಿಲುವಿನಿಂದ ನೋಡಿದಲ್ಲಿ, ಒಂದು ಉಪಯುಕ್ತ ಹೇಳಿಕೆಯಾಗಿದ್ದು, ಈಗ ಚರ್ಚಿಸಲಿರುವ ಪ್ರಶ್ನೆಯ ಮೇಲೆ ಎಲ್ಲಾ ಒತ್ತನ್ನು ನೀಡುತ್ತದೆ: ಅದೆಂದರೆ, ಯಾವುದು ಕ್ರಾಂತಿಕಾರಿ ಗುಣಸ್ವಭಾವ?

“ಕ್ರಾಂತಿಕಾರಿ ಗುಣಸ್ವಭಾವ”ದ ಅತ್ಯಂತ ಮೂಲಭೂತ ಗುಣಲಕ್ಷಣ ಎಂದರೆ, ಆತ ಸ್ವತಂತ್ರ ಮತ್ತು ಮುಕ್ತ. ಸ್ವಾತಂತ್ರ್ಯ ಎಂದರೆ, ಮೇಲಿರುವ ಬಲಶಾಲಿಗಳಿಗೆ ಸಹವಾಸದ ನಿಷ್ಠೆಯ ಮತ್ತು ನಾನು ಹಿಂದೆ ಸರ್ವಾಧಿಕಾರಿ ಗುಣಸ್ವಭಾವದ ಕುರಿತು ಮಾತನಾಡುವಾಗ ವಿವರಿಸಿದ ತಮಗಿಂತ ಕೆಳಗಿರುವ ಬಲಹೀನರ ಬಗೆಗಿನ ನಿಷ್ಠೆಯ ತದ್ವಿರುದ್ಧವಾದದ್ದು ಎಂದು ಮನಗಾಣುವುದು ಸುಲಭ.

ಆದರೆ, ಇದು “ಮುಕ್ತತೆ” ಮತ್ತು “ಸ್ವಾತಂತ್ರ್ಯ” (ಇಂಡಿಪೆಂಡೆನ್ಸ್ ಮತ್ತು ಫ್ರೀಡಂ) ಎಂದರೆ ಏನು ಎಂಬುದನ್ನು ಸಾಕಷ್ಟು ಸ್ಪಷ್ಟಪಡಿಸುವುದಿಲ್ಲ. ಸಮಸ್ಯೆ ಇರುವುದು ನಿರ್ದಿಷ್ಟವಾಗಿ “ಫ್ರೀಡಂ” ಮತ್ತು “ಇಂಡಿಪೆಂಡೆನ್ಸ್” ಎಂಬ ಪದಗಳನ್ನು ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ಪ್ರತಿಯೊಬ್ಬರೂ ಮುಕ್ತರು ಮತ್ತು ಸ್ವತಂತ್ರರು ಎಂಬ ಅರ್ಥದಲ್ಲಿ ಬಳಸಲಾಗುತ್ತಿದೆ. (ಕನ್ನಡದಲ್ಲಿ ಎರಡೂ ಪದಗಳನ್ನು ಹೆಚ್ಚು ಕಡಿಮೆ ಒಂದೇ ಅರ್ಥದಲ್ಲಿ ಬಳಸಲಾಗುತ್ತಿದೆ- ಅನುವಾದಕನ ಟಿಪ್ಪಣಿ). ಈ ಎರಡೂ ಪದಗಳ ಪರಿಕಲ್ಪನೆಯ ಬೇರು ಇರುವುದು ಊಳಿಗಮಾನ್ಯ (ಫ್ಯೂಡಲ್) ವ್ಯವಸ್ಥೆಯ ವಿರುದ್ಧ ಮಧ್ಯಮ ವರ್ಗದ ಕ್ರಾಂತಿಯಲ್ಲಿ ಮತ್ತು ಅವುಗಳನ್ನು ಪ್ರಭುತ್ವಗಳ ತದ್ವಿರುದ್ಧವಾಗಿ ಇಟ್ಟು ನೋಡುವುದರಿಂದ ಅವು ಹೊಸ ಶಕ್ತಿಯನ್ನು ಪಡೆದುಕೊಂಡಿವೆ.

ಇದನ್ನೂ ಓದಿ: ಅನುವಾದ; ಕ್ರಾಂತಿಕಾರಿ ಗುಣಸ್ವಭಾವ-ಎರಿಕ್ ಫ್ರಾಮ್ ; ಭಾಗ-1

ಊಳಿಗಮಾನ್ಯ ಮತ್ತು ರಾಜಾಡಳಿತದ ಸರ್ವಾಧಿಕಾರದ ವ್ಯವಸ್ಥೆಯ ಕಾಲದಲ್ಲಿ, ವ್ಯಕ್ತಿಯು ಮುಕ್ತನಾಗಲೀ, ಸ್ವತಂತ್ರನಾಗಲೀ ಆಗಿರಲಿಲ್ಲ. ಆತ ತನಗಿಂತಲೂ ಮೇಲಿನವರ ಸಾಂಪ್ರದಾಯಿಕ ಅಥವಾ ನಿರಂಕುಶ ನಿಯಮ, ಕಾನೂನು ಮತ್ತು ಆಜ್ಞೆಗಳಿಗೆ ಅಧೀನನಾಗಿದ್ದ. ಯೂರೋಪ್ ಮತ್ತು ಅಮೆರಿಕಾದಲ್ಲಿ ಬೂರ್ಜ್ವಾ (bourgeois, ಮಧ್ಯಮ ವರ್ಗ) ಕ್ರಾಂತಿಗಳು ವ್ಯಕ್ತಿಗೆ ರಾಜಕೀಯ ಮುಕ್ತತೆ ಮತ್ತು ಸ್ವಾತಂತ್ರ್ಯವನ್ನು ತಂದುಕೊಟ್ಟವು.

ಈ ಸ್ವಾತಂತ್ರ್ಯವು “ಒಂದದಿಂದ ಸ್ವಾತಂತ್ರ್ಯ” ಆಗಿತ್ತು. ಅಂದರೆ, ರಾಜಕೀಯ ಅಧಿಕಾರಸ್ಥರಿಂದ ಸ್ವಾತಂತ್ರ್ಯ ಆಗಿತ್ತು. ಇಂದಿನ ಕೈಗಾರಿಕಾವಾದವು ಹೊಸ ರೀತಿಯ ಅಧಿಕಾರಶಾಹಿಗಳಲ್ಲಿ ಸಾಮಾನ್ಯರಿಗೆ ಹೊಸ ರೀತಿಯ ಅವಲಂಬನೆಗಳನ್ನು ಸೃಷ್ಟಿಸಿದ್ದರೂ, ಇದೊಂದು ಪ್ರಮುಖ ಬೆಳವಣಿಗೆಯಾಗಿತ್ತು, ಏಕೆಂದರೆ ಇದಕ್ಕೆ ವ್ಯತಿರಿಕ್ತವಾಗಿ ಕೈಗಾರಿಕಾವಾದವು ಹತ್ತೊಂಭತ್ತನೇ ಶತಮಾನದಲ್ಲಿ ವ್ಯಾಪಾರಿಗಳಿಗೆ ಅನಿಯಮಿತ ಅವಕಾಶ ಮತ್ತು ಸ್ವಾತಂತ್ರ್ಯವನ್ನು ಒದಗಿಸಿತ್ತು.

ಏನಿದ್ದರೂ, ಮುಕ್ತತೆ ಮತ್ತು ಸ್ವಾತಂತ್ರ್ಯದ ಸಮಸ್ಯೆಯು ಮೇಲೆ ಹೇಳಿದ ಅರ್ಥದ ಮುಕ್ತತೆ ಮತ್ತು ಸ್ವಾತಂತ್ರ್ಯಕ್ಕಿಂತ ಹೆಚ್ಚು ಆಳವಾಗಿದೆ. ವಾಸ್ತವದಲ್ಲಿ, ಸ್ವಾತಂತ್ರ್ಯದ ಸಮಸ್ಯೆಯು ಮಾನವ ಅಭಿವೃದ್ಧಿಯ ಆತ್ಯಂತ ಮೂಲಭೂತ ಅಂಶಗಳಲ್ಲಿ ಒಂದು- ನಾವು ಅದನ್ನು ಅದರ ಸಂಪೂರ್ಣ ಆಳ ಮತ್ತು ಅಗಲದಲ್ಲಿ ನೋಡಿದಲ್ಲಿ ಮಾತ್ರ.

ಆಗ ತಾನೇ ಹುಟ್ಟಿದ ಶಿಶು ತನ್ನ ಪರಿಸರದೊಂದಿಗೆ ಒಂದಾಗಿರುತ್ತದೆ. ಅದಕ್ಕೆ ಹೊರಗಿನ ಪ್ರಪಂಚವು ಆಗಿನ್ನೂ, ತನ್ನಿಂದ ಪ್ರತ್ಯೇಕವಾದ ಒಂದು ವಾಸ್ತವವಾಗಿ ಅಸ್ತಿತ್ವದಲ್ಲಿ ಇರುವುದಿಲ್ಲ. ಆಗಲೂ ಕೂಡಾ ಶಿಶುವು ತನ್ನಿಂದ ಹೊರಗಿರುವ ವಸ್ತುಗಳನ್ನು ಗುರುತಿಸಬಲ್ಲದು. ಹಾಗಿದ್ದೂ, ಅದು ಇನ್ನೂ ಬಹಳ ಕಾಲ ಅಸಹಾಯಕವಾಗಿರುತ್ತದೆ ಮತ್ತು ತನ್ನ ತಂದೆ, ತಾಯಿಯ ನೆರವಿಲ್ಲದೆ ಬದುಕಿ ಉಳಿಯಲಾರದು. ಇತರ ಎಳೆಯ ಪ್ರಾಣಿಗಳಿಗೆ ವ್ಯತಿರಿಕ್ತವಾಗಿ, ಮಾನವನ ಈ ದೀರ್ಘಕಾಲದ ಅಸಹಾಯಕತೆಯು ಅದರ ಬೆಳವಣಿಗೆಗೆ ಒಂದು ತಳಹದಿಯಾಗಿದ್ದರೂ, ಅದು ಅದಕ್ಕೆ ಅಧಿಕಾರವನ್ನು ಅವಲಂಬಿಸಿರಲು ಮತ್ತು ಅಧಿಕಾರಕ್ಕೆ ಭಯಪಡಲು ಕಲಿಸುತ್ತದೆ.

ಸಾಮಾನ್ಯವಾಗಿ ಹುಟ್ಟಿನಿಂದ ಪ್ರೌಢಾವಸ್ಥೆಯ ತನಕದ ವರ್ಷಗಳಲ್ಲಿ ಅಧಿಕಾರವನ್ನು ಪ್ರತಿನಿಧಿಸುವವರು ಹೆತ್ತವರಾಗಿರುತ್ತಾರೆ ಮತ್ತು ಅದು ಇಬ್ಬಗೆಯ ಆಯಾಮಗಳನ್ನು ಹೊಂದಿರುತ್ತದೆ: ನೆರವಾಗುವುದು ಮತ್ತು ಶಿಕ್ಷಿಸುವುದು. ಒಬ್ಬ ಎಳೆಯ ವ್ಯಕ್ತಿ ಪ್ರೌಢಾವಸ್ಥೆಗೆ ತಲಪುವ ಕಾಲದ ಆಸುಪಾಸಿನಲ್ಲಿ ತನ್ನನ್ನು ತಾನೇ ರಕ್ಷಿಸಿಕೊಳ್ಳಬಲ್ಲಂತ ಅಭಿವೃದ್ಧಿಯ ಹಂತ ತಲಪಿರುತ್ತಾನೆ (ಖಂಡಿತವಾಗಿಯೂ, ಸರಳ ಬೇಸಾಯಗಾರ ಸಮಾಜಗಳಲ್ಲಿ.) ಮತ್ತು ಇನ್ನೂ ತನ್ನ ಸಾಮಾಜಿಕ ಅಸ್ತಿತ್ವಕ್ಕಾಗಿ ಹೆತ್ತವರ ಋಣದಲ್ಲಿ ಇರಬೇಕಾದ ಅಗತ್ಯವಿರುವುದಿಲ್ಲ. ಆತ ಆರ್ಥಿಕವಾಗಿ ಅವರಿಂದ ಸ್ವತಂತ್ರನಾಗಿರಬಹುದು. ಹಲವು ಪ್ರಾಚೀನ ಸಮಾಜಗಳಲ್ಲಿ ಈ ಸ್ವಾತಂತ್ರ್ಯವನ್ನು (ಮುಖ್ಯವಾಗಿ ತಾಯಿಯಿಂದ) ದೀಕ್ಷೆಯ ವಿಧಿವಿಧಾನಗಳ ಮೂಲಕ ಅಭಿವ್ಯಕ್ತಿಸಲಾಗುತ್ತದೆ. ಆದರೆ, ಅವು ತನ್ನ ಕುಲದ ಮೇಲಿನ ಅಥವಾ ಅದರ ಗಂಡು ಅಂಶದ ಮೇಲಿನ ಅವಲಂಬನೆಯನ್ನು ಮುಟ್ಟಲು ಹೋಗುವುದಿಲ್ಲ. ಲೈಂಗಿಕವಾಗಿ ಪ್ರೌಢವಾಗುವುದು ಕೂಡಾ ಹೆತ್ತವರಿಂದ ಬಿಡುಗಡೆಯ ಪ್ರಕ್ರಿಯೆಯನ್ನು ಮುನ್ನಡೆಸುವ ಇನ್ನೊಂದು ಅಂಶವಾಗಿದೆ. ಲೈಂಗಿಕ ಬಯಕೆ ಮತ್ತು ಲೈಂಗಿಕ ತೃಪ್ತಿಯು ಒಬ್ಬ ವ್ಯಕ್ತಿಯನ್ನು ತನ್ನ ಕುಟುಂಬದ ಹೊರಗಿನವರ ಜೊತೆಗೆ ಕಟ್ಟಿಹಾಕುತ್ತದೆ. ಸ್ವತಃ ಲೈಂಗಿಕ ಕ್ರಿಯೆಯಲ್ಲಿ ಮಾತ್ರ- ತಂದೆಯಾಗಲೀ, ತಾಯಿಯಾಗಲೀ ನೆರವಾಗಲು ಸಾಧ್ಯವಿಲ್ಲ ಮತ್ತು ಇದರಲ್ಲಿ ಯುವ ವ್ಯಕ್ತಿ ತನ್ನ ದಾರಿ ಹುಡುಕಿಕೊಳ್ಳುತ್ತಾನೆ.

ಇದನ್ನೂ ಓದಿ: EWS: ದಲಿತ-ಶೂದ್ರರ ಮೀಸಲಾತಿಯ ಕ್ರಾಂತಿಗೆ ಬ್ರಾಹ್ಮಣ್ಯದ ಪ್ರತಿಕ್ರಾಂತಿ

ಪ್ರೌಢಾವಸ್ಥೆಗೆ ತಲಪಿದ ನಂತರದ ಐದು ಅಥವಾ ಹತ್ತು ವರ್ಷಗಳ ತನಕ ಲೈಂಗಿಕ ತೃಪ್ತಿಯನ್ನು ಮುಂದೂಡಲಾಗುವ ಸಮಾಜಗಳಲ್ಲಿ ಕೂಡಾ, ಎಚ್ಚೆತ್ತ ಲೈಂಗಿಕ ಬಯಕೆಯು ಸ್ವಾತಂತ್ರ್ಯಕ್ಕಾಗಿ ಹಂಬಲವನ್ನು ಹುಟ್ಟಿಸುತ್ತದೆ ಮತ್ತು ಹೆತ್ತವರ ಮತ್ತು ಸಾಮಾಜಿಕ ಅಧಿಕಾರಗಳ ಜೊತೆಗೆ ಸಂಘರ್ಷಗಳನ್ನುಂಟುಮಾಡುತ್ತದೆ. ಸಹಜ ವ್ಯಕ್ತಿಗಳು ಪ್ರೌಢಾವಸ್ಥೆಯ ನಂತರದ ಈ ವರ್ಷಗಳಲ್ಲಿ ಈ ಮಟ್ಟದ ಸ್ವಾತಂತ್ರ್ಯವನ್ನು ಪಡೆಯುತ್ತಾರೆ. ಆದರೆ, ಆತ ಸ್ವಂತ ಸಂಪಾದನೆ ಮಾಡಿ ಜೀವನ ನಡೆಸಿದರೂ, ಮದುವೆಯಾಗಿ ಸ್ವಂತ ಮಕ್ಕಳನ್ನು ಸಾಕಿದರೂ, ಆತ ನಿಜವಾಗಿಯೂ ಮುಕ್ತ ಮತ್ತು ಸ್ವತಂತ್ರನಾಗುವುದಿಲ್ಲ.

ಅವನು ಇನ್ನೂ ಬಹುತೇಕ ಅಸಹಾಯಕನಾದ ಮತ್ತು ತನ್ನನ್ನು ರಕ್ಷಿಸಿಕೊಳ್ಳಲು, ತನಗೊಂದು ಖಾತರಿ, ಸ್ಥಿರತೆ ನೀಡುವಂತ ಅಧಿಕಾರವನ್ನು ಹುಡುಕಲು ಯತ್ನಿಸುತ್ತಿರುವ ಒಬ್ಬ ವಯಸ್ಕ ವ್ಯಕ್ತಿ ಮಾತ್ರ. ಈ ಸಹಾಯಕ್ಕೆ ಬದಲಾಗಿ ನೀಡುವ ಬೆಲೆಯಾಗಿ- ಆತ ತನ್ನನ್ನು ಅವರ (ಅಧಿಕಾರಸ್ಥರ) ಅವಲಂಬಿತನನ್ನಾಗಿ ಮಾಡಿಕೊಳ್ಳುತ್ತಾನೆ, ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾನೆ ಮತ್ತು ತನ್ನ ಬೆಳವಣಿಗೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತಾನೆ. ಅವನು ತನ್ನ ಯೋಚನೆ, ಚಿಂತನೆಗಳನ್ನು ಅವರಿಂದ ಎರವಲು ಪಡೆಯುತ್ತಾನೆ- ತನ್ನ ಭಾವನೆಗಳು, ತನ್ನ ಗುರಿಗಳು, ತನ್ನ ಮೌಲ್ಯಗಳನ್ನು ಕೂಡಾ; ಯೋಚನೆ ಮಾಡುತ್ತಿರುವುದು, ಭಾವನೆಗಳನ್ನು ಹೊಂದಿರುವುದು ತಾನೇ ಮತ್ತು ತನ್ನ ನಿರ್ಧಾರಗಳನ್ನು ತಾನೇ ಮಾಡುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಬದುಕುತ್ತಿದ್ದರೂ ಕೂಡಾ.

(ಮುಂದುವರಿಯುತ್ತದೆ…)

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಎರಿಕ್ ಫ್ರಾಮ್

ಎರಿಕ್ ಫ್ರಾಮ್
20ನೇ ಶತಮಾನದ ಖ್ಯಾತ ಚಿಂತಕ ಮತ್ತು ಸಾಮಾಜಿಕ ಮನಃಶಾಸ್ತ್ರಜ್ಞ. ’ದ ಆರ್ಟ್ ಆಫ್ ಲವಿಂಗ್’, ’ಎಸ್ಕೇಪ್ ಫ್ರಂ ಫ್ರೀಡಂ’ ಅವರ ಪುಸ್ತಕಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...