Homeಕರ್ನಾಟಕವಿಧಾನಸಭೆಗೆ ಯಡಿಯೂರಪ್ಪ ವಿದಾಯ: ಶಿಕಾರಿಪುರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಬಹುದೆ?

ವಿಧಾನಸಭೆಗೆ ಯಡಿಯೂರಪ್ಪ ವಿದಾಯ: ಶಿಕಾರಿಪುರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಬಹುದೆ?

ಬಿ.ವೈ ವಿಜಯೇಂದ್ರರಿಗೆ ಪೈಪೋಟಿ ಕೊಡಲು ಸಜ್ಜಾಗಿದ್ದಾರೆ ಸಾದಲಿಂಗಾಯಿತ ಸಮುದಾಯದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಾಗರಾಜಗೌಡ...

- Advertisement -
- Advertisement -

ಶಿಕಾರಿಪುರ ಕ್ಷೇತ್ರವನ್ನು ಮಾಜಿ ಮುಖ್ಯಮಂತ್ರಿ ಬಿಜೆಪಿ ಪಕ್ಷದ ಯಡಿಯೂರಪ್ಪ ತಮ್ಮ ಮಗ ವಿಜಯೇಂದ್ರರಿಗೆ ಬಿಟ್ಟುಕೊಡುವ ಘೋಷಣೆ ಮಾಡಿದ ಕ್ಷಣದಿಂದ ಇಲ್ಲಿನ ಚಟುವಟಿಕೆಗಳು ತೀವ್ರಗೊಂಡಿದೆ. ಈ ನಡುವೆ ಟಿಕೆಟ್ ಆಕಾಂಕ್ಷಿಗಳು ಎರಡು ಲಕ್ಷ ರೂಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಕಾಂಗ್ರೆಸ್ ಸುತ್ತೋಲೆ ಹೊರಡಿಸಿದ ಮೇಲೆ ಶಿಕಾರಿಪುರದಿಂದ ಬಳ್ಳಿಗಾವಿಯ ಪುಷ್ಪ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಇವರ ಪತಿ ಪಿ.ಓ ಶಿವಕುಮಾರ್ ಎಂಬ ನಿವೃತ್ತ ಪೊಲೀಸ್ ಅಧಿಕಾರಿ. ಪುಷ್ಪ ಅವರ ಮಾವ ಕಡೂರು ಕ್ಷೇತ್ರದ ಶಾಸಕರಾಗಿದ್ದ ಓಂಕಾರ ಮೂರ್ತಿಯವರು. ಪಿ.ಓ ಶಿವಕುಮಾರ್ ತಮ್ಮ ಬಹುಪಾಲು ಸರ್ವಿಸ್‌ಅನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದವರು. ಆಳುವ ಪಕ್ಷದ ನಿಷ್ಠಾವಂತ ಸೇವಕರಾದ ಇವರು ಯಡಿಯೂರಪ್ಪನವರಿಗೆ ಹಿಂದಿನಿಂದಲೂ ನಿಷ್ಠರು. ಚುನಾವಣಾ ಖರ್ಚಿಗೆ ಬೇಕಾದಕ್ಕಿಂತಲೂ ಹೆಚ್ಚಿನ ಹಣವೂ ಇವರ ಬಳಿ ಇದೆ. ಆದರೆ, ಪುಷ್ಪರ ಚುನಾವಣಾ ಖರ್ಚನ್ನು ಯಡಿಯೂರಪ್ಪನವರೇ ನಿಭಾಯಿಸಬಲ್ಲರು. ಕುತೂಹಲವೆಂದರೆ ಪುಷ್ಪ ಸಾದಲಿಂಗಾಯಿತ ಸಮುದಾಯದವರೇ ಕೂಡ. ಅವರು ಕಾಂಗ್ರೆಸ್ ಕ್ಯಾಂಡಿಡೇಟ್ ಆಗಲು ಯಡಿಯೂರಪ್ಪನವರೇ ಸಂಚು ಮಾಡಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ, ಮಗನನ್ನು ಸುಲಭವಾಗಿ ಗೆಲ್ಲಿಸಿಕೊಳ್ಳಲು, ಕಾಂಗ್ರೆಸ್‌ನಿಂದ ದುರ್ಬಲ ಕ್ಯಾಂಡಿಡೇಟ್ ನಿಲ್ಲಿಸಿ ಅಖಾಡ ನಿರ್ಮಿಸುವ ಚಾಣಾಕ್ಷತನ ಯಡಿಯೂರಪ್ಪನವರದು ಎಂಬ ಗುಲ್ಲಿದೆ. ಹೇಗಿದ್ದರೂ ಸಿದ್ದರಾಮಯ್ಯ ಯಡಿಯೂರಪ್ಪನವರ ನಡುವೆ ಸಂಬಂಧ ಚೆನ್ನಾಗಿದೆ; ಇನ್ನು ಡಿ.ಕೆ ಶಿವಕುಮಾರರೊಡನೆ ವ್ಯಾವಹಾರಿಕ ಸಂಬಂಧವೂ ಇದೆಯಂತೆ. ಆದ್ದರಿಂದ ಕಾಂಗ್ರೆಸ್‌ನಿಂದ ದುರ್ಬಲವಾದ ಅಭ್ಯರ್ಥಿ ನಿಲ್ಲಿಸುತ್ತಾರೆಂಬುದು ಶಿಕಾರಿಪುರದ ಜನಗಳ ಊಹೆ.

ಶಿಕಾರಿಪುರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕುರುಬ ಜನಾಂಗದ ಗೋಣಿ ಮಾಲತೇಶ್ ಶಕ್ತಿವಂತ ಅಭ್ಯರ್ಥಿಯಾದರೂ ವಿಜಯೇಂದ್ರ ಎದುರು ಗೆಲ್ಲಲಾಗುವುದಿಲ್ಲ. ಗೆಲ್ಲಬೇಕಾದರೆ ಇಲ್ಲಿನ ಬಹುಸಂಖ್ಯಾತರಾದ ಸಾದಲಿಂಗಾಯಿತರ ಓಟು ಪಡೆಯಬೇಕು. ಸಾದರು ತಮ್ಮ ಜನಾಂಗದ ಅಭ್ಯರ್ಥಿಯನ್ನು ಬಿಟ್ಟು ಇತರರಿಗೆ ಓಟು ಮಾಡಿದ ಇತಿಹಾಸವಿಲ್ಲ. ಈ ಹಿಂದೆ ಅಂತಹದೊಂದು ಇತಿಹಾಸ ಜರುಗುವುದಿತ್ತು. ಯಡಿಯೂರಪ್ಪ ಎದುರು ನಿಂತಿದ್ದ ನಗರದ ಮಹದೇವಪ್ಪ (1989-ಪಕ್ಷೇತರ ಅಭ್ಯರ್ಥಿ) ಕಡಿಮೆ ಅಂತರದಿಂದ (2274 ಮತಗಳು) ಸೋತರು. ಕಾಂಗ್ರೆಸ್‌ನವರು ಅಂದು ಮಹದೇವಪ್ಪನವರಿಗೆ ಸಹಾಯ ಮಾಡಿದ್ದರೆ ಗೆದ್ದುಬಿಡುತ್ತಿದ್ದರು. ಅದೊಂದು ಇತಿಹಾಸವಾಗಿ ದಾಖಲಾಗುತ್ತಿತ್ತು. ಅದಾಗಲಿಲ್ಲ. ಆದರೆ, ಆ ನಂತರ ಇನ್ನೊಂದು ಪ್ರಯೋಗವನ್ನು ಬಂಗಾರಪ್ಪ ಮಾಡಿದರು.

ಸಾದಲಿಂಗಾಯಿತರ ಮಹಾಲಿಂಗಪ್ಪನವರನ್ನು (1999-ಕಾಂಗ್ರೆಸ್) ಗೆಲ್ಲಿಸಿ ಎಸ್‌ಎಂ ಕೃಷ್ಣರಿಗೆ ವಿರೋಧ ಪಕ್ಷವೇ ಇಲ್ಲದಂತೆ ಮಾಡಿದ್ದರು. ಈಗ ಕಾಲ ಸರಿದಿದೆ; ಮತದಾರ ಹಳೆ ಕ್ಯಾಂಡಿಡೇಟ್‌ಗಳನ್ನ ಗುಜರಿಗೆ ಹಾಕಿ ಹೊಸ ಮುಖಗಳಿಗಾಗಿ ಹಂಬಲಿಸುತ್ತಿದ್ದಾರೆ. ಇಂತಹ ವೇಳೆಯಲ್ಲಿ ಯಡಿಯೂರಪ್ಪ ಭ್ರಷ್ಟ ಆರೋಪಗಳನ್ನು ಹಾಸುಹೊದ್ದಿರುವ ವಿಜಯೇಂದ್ರರನ್ನು ಶಿಕಾರಿಪುರಕ್ಕೆ ತಂದಿದ್ದಾರೆ. ಯಡಿಯೂರಪ್ಪ ಶಿಕಾರಿಪುರಕ್ಕೆ ತಂದಿರುವ ಕಟ್ಟಡಗಳನ್ನ ನೋಡಿದರೆ ವಿಜಯೇಂದ್ರ ಅನಾಯಾಸವಾಗಿ ಗೆಲ್ಲಬಹುದು. ಆದರೆ ಅದಾಗುವುದಿಲ್ಲ ಏಕೆಂದರೆ ವಿಜಯೇಂದ್ರ ಶಾಸಕ, ಮಂತ್ರಿ ಇದ್ಯಾವುದೂ ಆಗದೆ ಭ್ರಷ್ಟತೆಯ ಆರೋಪ ಹೊತ್ತಿದ್ದಾರೆ. ನಲವತ್ತು ಪರಸೆಂಟ್ ಕಮಿಷನ್ ದೂರು ಇವರ ಕೈಗೂ ಅಂಟಿದೆ. ಅದಕ್ಕಿಂತಲೂ ಸರಕಾರದ ಮಟ್ಟದ ಬಹುದೊಡ್ಡ ಹಗರಣಗಳಲ್ಲೂ ಇವರ ಹೆಸರು ಕೇಳಿಬಂದಿದೆ. ಕ್ಷೇತ್ರದ ಅನುದಾನಕ್ಕಾಗಿ ಶಾಸಕರು ಇವರೆದುರು ಕೈಕಟ್ಟಿ ವಿಧೇಯತೆಯಿಂದ ನಿಂತ ಉದಾಹರಣೆಗಳಿವೆ. ಆದ್ದರಿಂದ ಇವರ ಗೆಲುವು ಸ್ವಪಕ್ಷೀಯರಿಗೇ ಬೇಕಿಲ್ಲ. ಇನ್ನು ಕ್ಷೇತ್ರದ ಮತದಾರರ ಅಭಿಪ್ರಾಯ ಕೇಳಿದರೆ, ’ಎಲ್ಲೊ ಹೋಗುತ್ತಿದ್ದವರು ಇಲ್ಲಿ ಇಳಿದುಹೋಗಬಲ್ಲರೇ ಹೊರತು ಶಿಕಾರಿಪುರಕ್ಕೂ ಇವರಿಗೂ ಸಂಬಂಧ ಬೆಳೆಯಲಾರದು’ ಎನ್ನುತ್ತಾರೆ.

ನಾಗರಾಜಗೌಡ

ಯಡಿಯೂರಪ್ಪ ಕ್ಷೇತ್ರಕ್ಕೆ ಮಂಜೂರು ಮಾಡಿದ ಕಾರ್ಯಕ್ರಮಗಳು, ಒಂದು ಪಾರ್ಟಿ ಮತ್ತು ಒಂದು ವರ್ಗಕ್ಕೆ ಸೀಮಿತವಾಗಿ ಹಂಚಿಕೆಯಾಗಿದೆ. ಅದರಲ್ಲೂ ಲಂಚ ನಡೆದಿದೆಯೆಂದ ಆರೋಪವಿದೆ; ಗಂಗಾಕಲ್ಯಾಣದಂತಹ ಕಾರ್ಯಕ್ರಮದಲ್ಲೂ ಕೂಡ. ಯಡಿಯೂರಪ್ಪನವರ ಬಗ್ಗೆ ನೀವೆಂತಹ ಆಪಾದನೆ ಮಾಡಿದರೂ ಅದವರಿಗೆ ತಾಗುವುದಿಲ್ಲ. ಏಕೆಂದರೆ ಅವರ ರಾಜಕಾರಣದ ಹಿನ್ನೆಲೆಯೇ ಹಾಗಿದೆ. ಶಿಕಾರಿಪುರ, ಶಿವಮೊಗ್ಗ, ಬೆಂಗಳೂರಿನಿಂದ ಹಿಡಿದು ವಿದೇಶದವರೆಗೂ ಅವರ ಆಸ್ತಿ ಬೆಳೆದಿದೆ. ಆದ್ದರಿಂದ ನಮ್ಮ ಕಷ್ಟಸುಖದ ವಿಷಯಕ್ಕೆ ಸ್ಥಳೀಯ ನಾಯಕ ಬೇಕು ಎಂಬುದು ಸ್ಥಳೀಯರ ವಾದ. ಅದಕ್ಕಾಗಿ ಸ್ಥಳೀಯವಾಗಿ ನಾಗರಾಜಗೌಡ ಎಂಬ ಯುವಕನನ್ನು ಪ್ರಜ್ಞಾವಂತ ಮತದಾರರು ಮುಂದುಮಾಡಿದ್ದಾರೆ.

ನಾಗರಾಜಗೌಡ ಸಾದಲಿಂಗಾಯಿತ ಸಮುದಾಯದವರಾಗಿದ್ದು ಮೂರು ಬಾರಿ ಕೌನ್ಸಿಲರ್ ಆಗಿದ್ದರು; ಈಗ ಕಾಂಗ್ರೆಸ್ಸಿನ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ನಾಗರಾಜಗೌಡರ ತಂದೆ ಹಾಗೂ ಚಿಕ್ಕಪ್ಪ ಶಾಂತವೀರಪ್ಪಗೌಡ ಯಡಿಯೂರಪ್ಪನವರ ಜೊತೆಯಲ್ಲೇ ರಾಜಕಾರಣ ಮಾಡಿದವರು; ಮತ್ತು ಅವರ ಸಂಚುಗಳಿಗೆ ಬಲಿಯಾದವರು ಎಂದು ಆರೋಪಿಸಲಾಗುತ್ತದೆ. ಈಗ ತಮ್ಮ ಮಗನನ್ನೇ ತಂದು ಪ್ರತಿಷ್ಠಾಪಿಸುವುದರ ವಿರುದ್ಧ ಇವರೆಲ್ಲಾ ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೊಡಬೇಕಾದರೆ ಕ್ಷೇತ್ರದ ಸಮೀಕ್ಷೆ ಮಾಡಿ ಜನಾಭಿಪ್ರಾಯ ಸಂಗ್ರಹಿಸುತ್ತದೆ ಎಂಬ ಸುದ್ದಿಯಿಂದ ಸೌಮ್ಯ ಸ್ವಭಾವದ ನಾಗರಾಜಗೌಡ ಈಗಾಗಲೇ ಕ್ಷೇತ್ರ ಸುತ್ತಿ ಸಮೀಕ್ಷಕರ ತೀರ್ಪಿಗಾಗಿ ಕಾಯುತ್ತಿದ್ದಾರೆ. ಶಿಕಾರಿಪುರದಲ್ಲಿ ಸಾದಲಿಂಗಾಯಿತರು, ಕುರುಬರು ಮತ್ತು ಮುಸ್ಲಿಮರು ಒಮ್ಮುಖವಾಗಿ ಮತಚಲಾಯಿಸಿದರೆ ಸಾಕು ಆ ಅಭ್ಯರ್ಥಿ ಗೆಲುವು ಸಲೀಸಾದಂತೆಯೇ!

ಇದನ್ನೂ ಓದಿ: ವಿಚಾರಕ್ರಾಂತಿಗೆ ಆಹ್ವಾನ: ಆಗ- ಈಗ

ಯಡಿಯೂರಪ್ಪರ ಬಗೆಗಿನ ಭ್ರಮನಿರಸನಕ್ಕೆ ಕಾರಣಗಳಿವೆ; ಅವರ ಅಧಿಕಾರಾವಧಿಯಲ್ಲಿ ಬೃಹತ್ ಕಟ್ಟಡಗಳು ಬಂದಿವೆ. ರಸ್ತೆ ಅಗಲೀಕರಣಗೊಂಡಿದೆ. ಆಸ್ಪತ್ರೆ ಕಟ್ಟಡವೂ ಇದೆ. ಕಲೆ ಸಾಹಿತ್ಯ ಸಂಗೀತದಿಂದ ದೂರವಿರುವ ಯಡಿಯರಪ್ಪನವರಿಗೂ ಇವುಗಳಿಗೆ ಸಂಬಂಧಿಸಿದ ಮಂದಿರಗಳಿಗೂ ಸಂಬಂಧವಿಲ್ಲ, ಹಾಗಾಗಿ ಇವೆಲ್ಲಾ ಹಾಳುಬಿದ್ದಿವೆ. ಅಲ್ಲದೆ, ಯಡಿಯೂರಪ್ಪ ರೈತರನ್ನು ಮುಂದಿಟ್ಟುಕೊಂಡು ಮಾಡಿದ ಚಳವಳಿ ಮಣ್ಣು ಸೇರಿದೆ; ಯಾವ ಬಗರ್ ಹುಕುಂ ರೈತರನ್ನ ಸಂಘಟಿಸಿ ಒಮ್ಮೆ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಜಾಥ ತೆಗೆದರೋ, ಅವರೇ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದಾಗ ರೈತರ ಕಡೆ ತಿರುಗಿಯೂ ನೋಡಲಿಲ್ಲ. ಆಗ ರೈತನಾಯಕ ಕಡಿದಾಳು ಶಾಮಣ್ಣನವರ ನೇತೃತ್ವದಲ್ಲಿ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಕಾಲ್ನಡಿಗೆಯಲ್ಲ ರೈತರ ಜಾಥ ನಡೆಯಿತು. ಈಗೇನಾಗಿದೆ ಎಂದರೆ ಬಗರ್ ಹುಕುಂ ರೈತರು ಒಕ್ಕಲೇಳುವಂತಾಗಿದೆ. ಇವರನ್ನು ಭೂಗಳ್ಳರು ಎಂದು ಪಟ್ಟಿಮಾಡಿ ನೋಟಿಸ್ ಜಾರಿಮಾಡಲು ತಯಾರಿ ನಡೆದಿತ್ತು. ಆದರೆ ರಾಜಕೀಯ ಕಾರಣಕ್ಕಾಗಿ ಅಪ್ಪಮಕ್ಕಳು ತಡೆಹಿಡಿಸಿದ್ದಾರೆ. ಈ ತಾತ್ಕಾಲಿಕ ತಡೆಯಿದ್ದರೂ ರೈತರ ಭಯವೇನೂ ಕಮ್ಮಿಯಾಗಿಲ್ಲ. ಇದು ಯಡಿಯೂರಪ್ಪನವರ ಮಗನ ಮೇಲೆ ಪರಿಣಾಮ ಬೀರುವುದು ಗ್ಯಾರಂಟಿ. ಶರಾವತಿ ಮುಳುಗಡೆಯ ರೈತರೂ ಇಲ್ಲಿದ್ದಾರೆ. ಅಲ್ಲಿ ಹತ್ತು ಎಕರೆ ಕಳೆದುಕೊಂಡವರು ಇಲ್ಲಿ ಎರಡು ಎಕರೆ ಮಾಲೀಕರು; ಅದೂ ಸರಕಾರಿ ಭೂಮಿ. ಮತ್ತು ಕೂಡ್ಲಿ ಶೃಂಗೇರಿ ಮಠದ ಆರುನೂರು ಎಕರೆ ಭೂಮಿಯಲ್ಲಿ ಸಂತ್ರಸ್ತರು ಬಗರ್ ಹುಕುಂ ಬೇಸಾಯ ಮಾಡುತ್ತಿದ್ದಾರೆ. ಶಿಕಾರಿಪುರ ಫಲವತ್ತಾದ ಭೂಪ್ರದೇಶ. ಇಲ್ಲಿ ಭೂಮಿ ನೀಡಿದರೆ ಸಾಕು, ಎರಡು ಎಕರೆಯಲ್ಲಿ ಬೇಕಾದರೂ ಜೀವಿಸಬಹುದು; ಆದರೆ ಅದಕ್ಕೂ ಸಂಚಕಾರ ಬಂದಿದೆ. ತಮ್ಮ ಬಹುದೀರ್ಘ ರಾಜಕಾರಣಕ್ಕೆ ಇಲ್ಲಿನ ರೈತರನ್ನು ಬಳಸಿಕೊಂಡು ಮೇಲೆ ಬಂದು ನಾಲ್ಕು ಬಾರಿ ಮುಖ್ಯಮಂತ್ರಿಯಾದ ಯಡಿಯೂರಪ್ಪ ತಮ್ಮ ಬಗರ್ ಹುಕುಂ ಕ್ಷೇತ್ರಕ್ಕೆ ವಾರಸುದಾರನನ್ನು ಸ್ಥಾಪಿಸಿ, ಆತನ ಖಾತೆಗೆ ಶಿಕಾರಿಪುರ ಕ್ಷೇತ್ರವನ್ನು ಸೇರಿಸುವ ಸಂಚಿನ ವಿರುದ್ಧ ಇಲ್ಲಿನ ಮತದಾರ ಸಿಡಿದೆದ್ದಿದ್ದಾನೆ. ಈ ಸಮಯದಲ್ಲಿ ಕಾಂಗ್ರೆಸ್ ಎಚ್ಚರಿಕೆಯಿಂದ ನಡೆದುಕೊಳ್ಳಬಹುದಾಗಿದೆ; ಏಕೆಂದರೆ ವಿಜಯೇಂದ್ರ ಮತ್ತು ನಾಗರಾಜಗೌಡ ನಡುವೆ ನೇರಾನೇರ ಸ್ಪರ್ಧೆ ಏರ್ಪಟ್ಟರೆ, ಮಧ್ಯೆ ಒಬ್ಬ ಸೋಲುವ ನಾಮಕಾವಸ್ಥೆಯ ಅಭ್ಯರ್ಥಿಯನ್ನು ಹಾಕಲು ಕುಮಾರಸ್ವಾಮಿ ಸಿದ್ಧವಾಗುವ ಸಾಧ್ಯತೆಯಿದೆ.

ಶಿಕಾರಿಪುರದ ಸಂಪೂರ್ಣ ಸಮೀಕ್ಷೆ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಶಿಕಾರಿಪುರ: ಯಡಿಯೂರಪ್ಪ ಸಂಸ್ಥಾನದಲ್ಲಿ ಬಿಜೆಪಿಯೇ ಕಾಣೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...