Homeಮುಖಪುಟ“ಡಿವೈಡ್ ಆಂಡ್ ರೂಲ್ ಪಾಲಿಸಿ”ಯ ಜನಕರು ವೈದಿಕರೇ ಹೊರತು ಬ್ರಿಟಿಶರಲ್ಲ.

“ಡಿವೈಡ್ ಆಂಡ್ ರೂಲ್ ಪಾಲಿಸಿ”ಯ ಜನಕರು ವೈದಿಕರೇ ಹೊರತು ಬ್ರಿಟಿಶರಲ್ಲ.

- Advertisement -
- Advertisement -

ಒಂದು ಪತ್ರ

ಮಾನ್ಯರೇ,
“ಡಿವೈಡ್ ಆಂಡ್ ರೂಲ್ ಪಾಲಿಸಿ” ಅರ್ಥಾತ್ ವಿಭಜಿಸಿ ಆಳು ಎಂಬ ರಾಜನೀತಿ ಬ್ರಿಟಿಷರದ್ದು ಎಂಬ ಆರೋಪ ಯಾವಾಗಲೂ ಕೇಳಿ ಬರುತ್ತದೆ. ಆದರೆ ಮೂಲತಃ “ವಿಭಜಿಸಿ ಆಳು” ಎಂಬ ಕುತ್ಸಿತ ನೀತಿಯ ಜನಕರು ವೈದಿಕರೇ ಹೊರತು ಬ್ರಿಟಿಶರಲ್ಲ.

ಮೂರು ಸಾವಿರ ವರ್ಷಗಳ ಹಿಂದೆ ವೈದಿಕರು ಇದೇ ಡಿವೈಡ್ & ರೂಲ್ ಪಾಲಿಸಿ ಸಮಾಜದಲ್ಲಿ ಬಿತ್ತಲು “ವರ್ಣ” ಗಳನ್ನು ನಯವಾಗಿ ಸೃಷ್ಟಿಸಿ ಜಾರಿಗೊಳಿಸಿದರು. ನಂತರ ಕುಲಕಸುಬು ಆಧಾರದಲ್ಲಿ ಜಾತಿ-ಉಪಜಾತಿಗಳನ್ನು ಹುಟ್ಟು ಹಾಕಿ ಮೇಲು-ಕೀಳು ಎಂಬ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆ ಜಾರಿಗೆ ತಂದು ಜಾತಿ-ಜಾತಿಯೊಳಗೆ ಪಂಥ-ಪಂಥ ಗಳೊಳಗೆ ದ್ವೇಷ ಹುಟ್ಟಿಸಿ ತಮ್ಮ ಬೇಳೆ ಬೇಯಿಸಿಕೊಂಡರು.

ವೈದಿಕರು ತಾವೇ ಚಿತ್ರವಿಚಿತ್ರ ಮನುಷ್ಯ ಮತ್ತು ಪ್ರಾಣಿ ರೂಪದ ದೇವರ ಕಲ್ಪನೆ ಹುಟ್ಟು ಹಾಕಿ ಕೊನೆಗೆ ಆ ದೇವರೊಳಗೂ ಮೇಲು-ಕೀಳು ಹೆಣ್ಣು-ಗಂಡು ಎಂಬ ವಿಭಜನೆ ಮಾಡಿ, ಆ ವಿಚಿತ್ರ ಸ್ವರೂಪದ ದೇವರುಗಳ ಹೆಸರಲ್ಲಿ ಜನರು ತಮ್ಮ ತಮ್ಮಲ್ಲೇ ಕಚ್ಚಾಡುವಂತೆ ಷಡ್ಯಂತ್ರ ರಚಿಸಿ ಯಶಸ್ವಿಯಾದರು. ಎಲ್ಲಾ ಬಿಟ್ಟು ದೇವಸ್ಥಾನದ ಆನೆಯ ಹಣೆಗೆ ಯಾವ ವಿನ್ಯಾಸದ ನಾಮ ಹಾಕಬೇಕು ಎಂಬ ಬಗ್ಗೆಯೂ ಒಮ್ಮತ ಹುಟ್ಟದಂತಹಾ ಮಾನಸಿಕತೆ ಸಮಾಜದಲ್ಲಿ ಹುಟ್ಟು ಹಾಕಿದವರೂ ಈ ವೈದಿಕರೇ!

ಬ್ರಿಟಿಷರು ಭಾರತಕ್ಕೆ ಬಂದಾಗ ಅವರು ಇಂತಹಾ 6200 ಜಾತಿಗಳಿರುವ ವೈದಿಕ ಧರ್ಮ ನೋಡಿ ಆಘಾತಗೊಂಡರು ಹಾಗೂ ಕೇವಲ 3% ಇರುವ ಬ್ರಾಹ್ಮಣರು ಜಾತಿ-ಉಪಜಾತಿ- ವರ್ಗ-ಪಂಥಗಳ ಮೂಲಕ 97% ಜನರನ್ನು ಮಾನಸಿಕ ದಾಸ್ಯಕ್ಕೆ ಒಳಪಡಿಸಿಕೊಂಡು ಸಮಾಜವನ್ನು ತಮ್ಮ ಮುಷ್ಟಿಯಲ್ಲಿ ಇಟ್ಟಿಕೊಂಡಿರುವುದನ್ನು ಕಂಡು ಬುದ್ದಿವಂತ ಬ್ರಿಟಿಷರು ತಾವೂ ಅದನ್ನೇ ಅನುಸರಿಸಿ ಹಿಂದೂ-ಮುಸ್ಲಿಂ ಒಡಕು ಹುಟ್ಟು ಹಾಕಿದರು. ಈ ಒಡಕನ್ನೇ ಸಂಘ ಪರಿವಾರ ಇಂದು ಬಂಡವಾಳ ಮಾಡಿಕೊಂಡು ಮತ್ತೆ ಮತ್ತೆ ಅಧಿಕಾರಕ್ಕೆ ಬರುತ್ತಿರುವುದು.

ಹಳೆಯದರೊಂದಿಗೆ ಆಧುನಿಕತೆ ಸಹಾ ಇರಲಿ ಎಂಬಂತೆ ಬಿ‌ಜೆ‌ಪಿಯವರಿಂದ ಇವಿಎಂ ತಿರುಚಾಟ ಸಹಾ ನಡೆಯುತ್ತಿದೆ ಬಿಡಿ. ಆದರೆ ಈ ಇವಿಎಂ ತಿರುಚಾಟದ ವಿರುದ್ಧ ಯಾರೂ ದನಿ ಎತ್ತದಂತೆ ಕಾಂಗ್ರೆಸ್ಸಿನೊಳಗಿನ ಆರೆಸ್ಸೆಸ್ಸಿಗರು ತಡೆಯುತ್ತಿದ್ದಾರೆ. ಹಾಗಾಗಿ ಬಿ‌ಜೆ‌ಪಿಯ ಇವಿಎಂ ವಂಚನೆಯ ವಿರುದ್ಧದ ಹೋರಾಟವೂ ಜಾತಿಯ ಸ್ವರೂಪ ಪಡೆದು ಈಗ ಚುನಾವಣೆಯಲ್ಲಿ ಮತಪತ್ರ/ ಬ್ಯಾಲೆಟ್ ಪೇಪರ್ ಮರಳಿ ತರುವುದಕ್ಕಾಗಿ ನಡೆಯುತ್ತಿರುವ ಹೋರಾಟ ಕೇವಲ ದಲಿತ ಸಂಘಟನೆಗಳಿಗೆ ಮಾತ್ರ ಸೀಮಿತವಾಗುವಂತೆ ಎಲ್ಲಾ ವಿರೋಧ ಪಕ್ಷಗಳ ಒಳಗೆ ತೂರಿಕೊಂಡಿರುವ ಆರೆಸ್ಸೆಸ್ಸಿಗರು ನೋಡಿಕೊಂಡಿದ್ದಾರೆ. ಈ ರೀತಿ ವಿರೋಧ ಪಕ್ಷದೊಳಗೂ ಈ ವೈದಿಕರ ಡಿವೈಡ್ ಆಂಡ್ ರೂಲ್ ನೀತಿ ಯಶಸ್ವಿಯಾಗಿ ಅನುಷ್ಟಾನಗೊಂಡಿದೆ. ಇದಕ್ಕೆಲ್ಲಾ ಬ್ರಿಟಿಷರನ್ನು ದೂರಲು ಸಾಧ್ಯವೇ!

ತಮ್ಮ ವಿಶ್ವಾಸಿ,
ಪ್ರವೀಣ್ ಎಸ್ ಶೆಟ್ಟಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...

SIR ತಂದಿಟ್ಟ ಸಂಕಷ್ಟ : ದಾಖಲೆ ಹೊಂದಿಸಲು ಅಲೆಮಾರಿಗಳ ಅಲೆದಾಟ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಭಾಗವಾಗಿ ಅನ್‌ಮ್ಯಾಪ್ಡ್ ಮತ್ತು ಅನಾಮಲಿಸ್ ಮತದಾರರಿಗೆ ನೋಟಿಸ್ ನೀಡಿ, ದಾಖಲೆಗಳ ಪರಿಶೀಲನೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ 23,45,428 ಅನ್‌ ಮ್ಯಾಪ್ಡ್ (ಪ್ರೊಜೆನಿ ಮ್ಯಾಪಿಂಗ್...

ಸಚಿವ ಸತೀಶ್ ಜಾರಕಿಹೊಳಿ, ಪುತ್ರಿ ಪ್ರಿಯಾಂಕಾ ನಿವಾಸಗಳ ಮೇಲೆ ಇಡಿ ದಾಳಿ: 18ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ

ಕರ್ನಾಟಕದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಪುತ್ರಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಸೇರಿದ ನಿವಾಸಗಳು ಮತ್ತು ಆಸ್ತಿಪಾಸ್ತಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ)...

ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ 2 ದಿನ ಪೊಲೀಸ್ ಕಸ್ಟಡಿಗೆ

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿ ಸಜಾ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಜೈಲಿನ ಅವರ ಕೊಠಡಿಯಲ್ಲಿ ಅಕ್ರಮವಾಗಿ ಮೊಬೈಲ್...

ರಾಜ್ಯದಲ್ಲಿ ಅವಧಿ ಮೀರಿದ ಆಹಾರ ಪೂರೈಕೆಯ ಬೃಹತ್ ದಂಧೆ: ₹1.43 ಕೋಟಿಯ ಉತ್ಪನ್ನಗಳು ಜಪ್ತಿ

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಸಾರ್ವಜನಿಕರಿಗೆ ಅವಧಿ ಮೀರಿದ ಹಾಗೂ ಕಳಪೆ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದ್ದ ಬೃಹತ್ ದಂಧೆಯನ್ನು ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ...

ಭಾರತೀಯ ಮಹಿಳೆಯನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ ಪ್ರಕರಣ : 2 ಲಕ್ಷ ರೂ. ಪರಿಹಾರ ಪಾವತಿಸಲು ಅಸ್ಸಾಂ ಸರ್ಕಾರಕ್ಕೆ ಗುವಾಹಟಿ ಹೈಕೋರ್ಟ್ ಆದೇಶ

ಪಶ್ಚಿಮ ಬಂಗಾಳ ಮೂಲದ ಮುಸ್ಲಿಂ ಮಹಿಳೆಯೊಬ್ಬರಿಗೆ ವಿದೇಶಿಯರ ನ್ಯಾಯಾಧಿಕರಣದ (ಫಾರಿನರ್ಸ್ ಟ್ರಿಬ್ಯೂನಲ್) ಆದೇಶವನ್ನು ಪ್ರಶ್ನಿಸಲು ಯಾವುದೇ ಅವಕಾಶ ನೀಡದೆ, ಅವರನ್ನು ಬಾಂಗ್ಲಾ ಗಡಿಯಾಚೆಗೆ ತಳ್ಳಿದ್ದಕ್ಕಾಗಿ ಮಧ್ಯಂತರ ಪರಿಹಾರವಾಗಿ ಆಕೆಯ ಪತಿಗೆ 2 ಲಕ್ಷ...

ಮಂಡಿಯ ಐಐಟಿ ಕ್ಯಾಂಪಸ್‌ನಲ್ಲಿ ‘ಶೂದ್ರರು ಮೇಲ್ವರ್ಗಗಳ ಸೇವಕರು’ ಎಂಬ ವರ್ಣ ಶ್ರೇಣೀಕರಣ ಚಿತ್ರಣ: ಜಾತಿ ವಿವಾದದ ನಂತರ ತನಿಖೆಗೆ ಆದೇಶ

ಮಂಡಿ: ಶೂದ್ರರನ್ನು ‘ಉನ್ನತ ವರ್ಗಗಳಿಗೆ ಸೇವೆ ಸಲ್ಲಿಸಲು ಉದ್ದೇಶಿಸಿರುವವರು’ ಎಂದು ಬಿಂಬಿಸುವ ಪೋಸ್ಟರ್‌ವೊಂದು ಹಿಮಾಚಲ ಪ್ರದೇಶದ ಐಐಟಿ ಮಂಡಿಯಲ್ಲಿ ಜಾತಿ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಸಂಸ್ಥೆ ತನಿಖೆಗೆ ಆದೇಶಿಸಿದೆ. ಸೆಪ್ಟೆಂಬರ್ 4ರಂದು...