Homeಕರ್ನಾಟಕ‘ನನ್ನಪ್ಪ ಒಬ್ಬ ಪರಿಪೂರ್ಣ ಕಮ್ಯುನಿಸ್ಟ್’: ಕ್ರಾಂತಿಕಾರಿ ‘ಚೆ’ ಮಗಳು ಅಲಿಡಾ ಗುವೆರಾ

‘ನನ್ನಪ್ಪ ಒಬ್ಬ ಪರಿಪೂರ್ಣ ಕಮ್ಯುನಿಸ್ಟ್’: ಕ್ರಾಂತಿಕಾರಿ ‘ಚೆ’ ಮಗಳು ಅಲಿಡಾ ಗುವೆರಾ

- Advertisement -
- Advertisement -

‘ಚೆ’ ಎಷ್ಟು ಕ್ರಾಂತಿಕಾರಿಯು ಅಷ್ಟೆ ರೊಮ್ಯಾಂಟಿಕ್ ಕೂಡಾ ಆಗಿದ್ದರು. ಮನುಕುಲವನ್ನು ಪ್ರೀತಿಸುವ ಸಾಮರ್ಥ್ಯ ಇದ್ದರೆ ಮಾತ್ರ ಅವರು ಸಮರ್ಥ ವ್ಯಕ್ತಿ ಎಂದೆಣಿಸಿಕೊಳ್ಳಬಹುದು. ನನ್ನಪ್ಪ ಒಬ್ಬ ಪರಿಪೂರ್ಣ ಕಮ್ಯುನಿಸ್ಟ್ ಎಂದು ಕ್ರಾಂತಿಕಾರಿ ಚೆ ಗೆವಾರ ಅವರ ಮಗಳು, ಮಕ್ಕಳ ವೈದ್ಯೆ, ಮಾನವ ಹಕ್ಕುಗಳ ಹೋರಾಟಗಾರ್ತಿ ಡಾ. ಅಲಿಡಾ ಗೆವಾರ ಅಭಿಪ್ರಾಯಪಟ್ಟರು. ಅವರು ಗುರುವಾರ ಸಂಜೆ ಬೆಂಗಳೂರಿನಲ್ಲಿ ನಡೆದ ‘ಪ್ರಗತಿಪರ ಸಂಘಟನೆಗಳು’ ಹಾಗೂ ‘ಕ್ಯೂಬಾ ಸೌಹಾರ್ದತಾ ಸಮಿತಿ’ ಆಯೋಜಿಸಿದ್ದ ‘ನಾಗರೀಕ ಸನ್ಮಾನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ತಂದೆ ಚೆ ಗೆವೆರಾ ಅವರ ಒಡನಾಟವನ್ನು ಸ್ಮರಿಸಿದ ಅಲಿಡಾ ಗುವೆರಾ,“ನನ್ನ ತಂದೆ ಕವನಗಳೆಂದರೆ ಬಹಳ ಪ್ರೀತಿ. ಕವಿತೆಗಳನ್ನು ಹಾಡುತ್ತಿದ್ದರು ಮತ್ತು ಬರೆಯುತ್ತಿದ್ದರು. ಅವರ ಬರಹಗಳಿಗೆ ಅವರೇ ವಿಮರ್ಶಕರೂ ಆಗಿರುತ್ತಿದ್ದರು. ಹಾಗಾಗಿ ಅವರು ಅವರೇ ಬರೆದ ಕವಿತೆಗಳನ್ನು ಓದುತ್ತಿರಲಿಲ್ಲ. ಆದರೆ ರಾತ್ರಿ ಹೊತ್ತಿನಲ್ಲಿ ನನ್ನ ತಾಯಿಗಾಗಿ ನನ್ನ ತಂದೆ ಚೆ ಗುವೆರಾ ಕವಿತೆಗಳನ್ನು ಓದುತ್ತಿದ್ದರು. ಅಪ್ಪ ಕ್ರಾಂತಿಗಾಗಿ ಕಾಂಗೋಗೆ ಹೊರಡುವಾಗ ನನ್ನ ತಾಯಿಗಾಗಿ ಅವರೇ ವಾಚನ ಮಾಡಿದ ಕವನಗಳನ್ನು ರೆಕಾರ್ಡ್ ಮಾಡಿ ಕೊಟ್ಟು ಹೋಗಿದ್ದರು” ಎಂದು ತಂದೆಯನ್ನು ನೆನಪಿಸಿಕೊಂಡರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಿಜವಾದ ಕ್ರಾಂತಿಯಲ್ಲಿ ಯಾವತ್ತೂ ಕೂಡಾ ಪುರುಷ ಮತ್ತು‌ ಮಹಿಳೆ ಸಮಾನವಾಗಿ ಒಳಗೊಂಡಿರಬೇಕು. ಕ್ರಾಂತಿಯಲ್ಲಿ ಪುರುಷ ಮತ್ತು ಮಹಿಳೆಯರ ಸಮಾನ ಪಾಲುದಾರಿಕೆ ಇರಬೇಕು ಎಂದು ತಂದೆ ಚೆಗುವೆರಾ ನಂಬಿದ್ದರು” ಎಂದು ಅವರು ಹೇಳಿದರು.

ಸದ್ಯದ ಕ್ಯೂಬಾ ಸ್ಥಿತಿಗಳನ್ನು ವಿವರಿಸಿದ ಅವರು,“ಕೋವಿಡ್ ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷಗಳಿಂದ ಕ್ಯೂಬಾ ದೊಡ್ಡ ಪ್ರಮಾಣದಲ್ಲಿ ಅರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಸಂಪನ್ಮೂಲಗಳ ಕೊರತೆ ಎದುರಾಗಿದೆ. ಅಲ್ಲಿನ ಸರ್ಕಾರ ಚೇತರಿಕೆಗಾಗಿ ಶ್ರಮಿಸುತ್ತಿದೆ” ಎಂದು ತಿಳಿಸಿದರು.

“ಚೆ ಗುವೆರಾ ಎಷ್ಟು ಕ್ರಾಂತಿಕಾರಿಯೋ ಅಷ್ಟೆ ರೊಮ್ಯಾಂಟಿಕ್ ಕೂಡಾ ಆಗಿದ್ದರು. ಹೇಗೆ ಪ್ರೀತಿಸಬೇಕು ಎಂದು ಅವರು ತಿಳಿದಿದ್ದರು. ಹೇಗೆ ಒಬ್ಬ ವ್ಯಕ್ತಿ ತನ್ನ ಮಗಳು ಮತ್ತು ಪತ್ನಿಯ ಜೊತೆ ಬದುಕುತ್ತಲೇ, ಅವರನ್ನೂ ಕ್ರಾಂತಿಯ ಭಾಗವಾಗಿಸಿಕೊಂಡು ಜಗತ್ತಿಗಾಗಿ ಹೇಗೆ ಹೋರಾಡಬೇಕು ಎಂದು ತಿಳಿಸಿಕೊಟ್ಟರು. ಮನುಕುಲವನ್ನು ಪ್ರೀತಿಸುವ ಸಾಮರ್ಥ್ಯ ಇದ್ದರೆ ಮಾತ್ರ ಅವರು ಸಮರ್ಥ ವ್ಯಕ್ತಿ. ನನ್ನಪ್ಪ ಚೆಗುವೆರಾ ಒಬ್ಬ ಪರಿಪೂರ್ಣ ಕಮ್ಯುನಿಸ್ಟ್” ಎಂದು ಅವರು ಹೆಮ್ಮೆಪಟ್ಟುಕೊಂಡರು

“ನಾವು ಮಾತನಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಸರಿಯಾದುದನ್ನೇ ಹೇಳಿದರೂ ಹೇಗೆ ಹೇಳಬೇಕು ಎಂಬ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಮಾಹಿತಿಗಳ ತಿರುಚುವಿಕೆ ಮತ್ತು ತಪ್ಪಾಗಿ ಪ್ರಸಾರ ಮಾಡುವಿಕೆಯೂ ಈಗಿನ ಮನುಕುಲವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಒಂದು” ಎಂದು ಹೇಳಿದ ಅವರು ‘ಚೆ’ ಹೇಳದ ಮಾತುಗಳನ್ನು ಅವರ ಹೆಸರಿನಲ್ಲಿ ಹರಿದಾಡಿದ ಘಟನೆಯೊಂದನ್ನು ಹಂಚಿಕೊಂಡರು.

“ಭಾರತ ಮತ್ತು ಕ್ಯೂಬಾ ಭಾವನಾತ್ಮಕವಾಗಿ ದೂರವೇನಿಲ್ಲ. ಭಾರತದ ಜನರು ಕ್ಯೂಬಾ ಬೆಂಬಲಕ್ಕೆ ನಿಂತಿದ್ದರು. ಈಗಲೂ ಭಾರತ-ಕ್ಯೂಬಾ ಜೊತೆಯಲ್ಲೇ ಇದ್ದೇವೆ. ಇದೇ ಭಾರತ-ಕ್ಯೂಬಾ ಸೌಂದರ್ಯ. ‘ಭಾರತ-ಕ್ಯೂಬಾ ಭಾವನಾತ್ಮಕ ಒಗ್ಗಟ್ಟು’ ಎನ್ನುವುದು ಮಾನವತೆಯ ಸೌಂದರ್ಯವಾಗಿದೆ ಎಂದು ನಾನು ನಂಬಿದ್ದೇನೆ” ಎಂದು ಅವರು ಹೇಳಿದರು.

“ಎರಡು ವರ್ಷ ಕೊರೋನಾ ಸಾಂಕ್ರಾಮಿಕ ರೋಗದಿಂದ ನಾವು ಕಷ್ಟಕ್ಕೀಡಾದೆವು. ಕ್ಯೂಬಾ ಆಗ ಆರ್ಥಿಕತೆಯಿಂದಲೂ ಬಳಲಿತ್ತು. ಆದರೆ ನಾವು ಜನರ ಬದುಕನ್ನು ರಕ್ಷಣೆ ಮಾಡಲೇಬೇಕಿತ್ತು ಮತ್ತು ಅದನ್ನು ನಾವು ಮಾಡಿದೆವು ಕೂಡ. ಗಂಭೀರ ಆರ್ಥಿಕ‌ ಸಮಸ್ಯೆ ಎದುರಾದಾಗಲೂ ಅದನ್ನು ನಿಭಾಯಿಸಿದೆವು. ನಾವು ಬಹಿಷ್ಕಾರದ ಬಗ್ಗೆ ಸುಲಭವಾಗಿ ಮಾತಾಡಬಹುದು‌. ಆದರೆ ಬಹಿಷ್ಕಾರವನ್ನೇ ಬದುಕುವುದು ಅಷ್ಟು ಸುಲಭವಲ್ಲ. ನಮ್ಮಲ್ಲಿದ್ದ ಎಲ್ಲಾ ಅನುದಾನವನ್ನು ನಾವು ನಾಗರಿಕರಿಗಾಗಿ ಬಳಸಿದ್ದೇವೆ” ಎಂದು ತಿಳಿಸಿದರು.

“ಜಗತ್ತಿನ ದುರಂತ ಏನೆಂದರೆ ಎಲ್ಲಾ ಜೀವರಕ್ಷಕ ಔಷಧಿಗಳ ಪೇಟೆಂಟ್ ಅಮೇರಿಕಾದ ಬಳಿ ಇದೆ. ನಾವು ಹಣ ಕೊಟ್ಟರೂ ಅಮೇರಿಕಾ ನಮಗೆ ಔಷಧಿಗಳನ್ನು ಕೊಡುವುದಿಲ್ಲ. ಬೇರೆ ಯಾರಾದರೂ ಕೊಂಡು, ಅವರ ಬಳಿ ನಾವು ಕೊಂಡರೆ ಅವರಿಗೂ ಅಮೇರಿಕಾ ತೊಂದರೆ ಕೊಡುತ್ತದೆ. ಅದಕ್ಕೆ ನಾವು ಉಪಾಯವಾಗಿ ಕನಿಷ್ಠ ಐದು ದೇಶದ ಕೈದಾಟಿದ ಮೇಲೆ ಅವರಿಂದ ನಾವು ಔಷಧಿ ಕೊಳ್ಳುವ ವ್ಯವಸ್ಥೆ ಮಾಡಿದೆವು. ಆಗ ಔಷದಿಯ ಬೆಲೆ ಐದು ಪಟ್ಟು ಹೆಚ್ಚಾಗುತ್ತದೆ. ಇಷ್ಟಾದರೂ ನಾವು ನಮ್ಮ ಜನರಿಗೆ ಸಂಪೂರ್ಣ ಉಚಿತವಾದ ವೈದ್ಯಕೀಯ ಸೌಲಭ್ಯ ಕೊಡುತ್ತೇವೆ” ಎಂದು ಅವರು ಹೇಳಿದರು.

“ನಮ್ಮ ವಿಜ್ಞಾನಿಗಳು ಕ್ಯೂಬಾದಲ್ಲಿ ಒಟ್ಟು ಐದು ಬಗೆಯ ಕೋವಿಡ್ ವ್ಯಾಕ್ಸಿನ್‌ಗಳನ್ನು ಕಂಡುಹಿಡಿದರು. ಆದರೆ ಅದಕ್ಕೆ ಬೇಕಾದ ಸಿರಿಂಜ್‌ಗಳ ಮೇಲೂ ಅಮೇರಿಕಾ ನಿರ್ಬಂಧ ಹೇರಿತ್ತು. ಕಡೆಗೆ ನಾವು ಮೂಗಿನ ಹೊಳ್ಳೆಗಳ ಮೂಲಕ ವ್ಯಾಕ್ಸಿನ್ ಅನ್ನು ಜನರಿಗೆ ನೀಡಿ ಯಶಸ್ಸು ಗಳಿಸಿದೆವು. ಇದೀಗ ಕ್ಯೂಬಾ ಮತ್ತೊಂದು ಹೊಸ ವ್ಯಾಕ್ಸಿನ್ ಕಂಡು ಹಿಡಿದಿದ್ದು, ಅದನ್ನೂ ಕೂಡಾ ಮೂಗಿನ ಮೂಲಕ ಕೊಡಲಾಗುತ್ತದೆ. ಹಾಗಾಗಿ ನಮಗೆ ಅಮೇರಿಕಾದ ಸಿರೀಂಜು ಅಗತ್ಯವಿಲ್ಲ” ಎಂದು ಹೇಳಿದರು.

“ಕ್ಯೂಬಾ ಜೊತೆಗೆ ಕೇರಳ ತನ್ನ ಬೆಂಬಲವನ್ನು ನೀಡಿತು. ಕ್ಯೂಬಾ ಒಂದು ದೇಶವಾಗಿ ಕೇರಳದ ಜೊತೆ ಜೊತೆಗೆ ಸಾಗುತ್ತಿದ್ದೇವೆ. ಇದಕ್ಕೆ ನಾವು ಒಗ್ಗಟ್ಟು ಎನ್ನುತ್ತೇವೆ. ಆಯುರ್ವೇದಿಕೆ ಮೆಡಿಸಿನ್ ಗಳನ್ನು ಕ್ಯೂಬಾದಲ್ಲಿ ಅಭಿವೃದ್ದಿಪಡಿಸಲು ಕೇರಳದ ಸಹಕಾರ ನೀಡಿದೆ. ಕೇರಳ ಮತ್ತು ಕ್ಯೂಬಾದ ಮನೋಧರ್ಮ ಒಂದೇ ಆಗಿದೆ. ಹಾಗಾಗಿ ಕೇರಳ ಮತ್ತು ಕ್ಯೂಬಾದಲ್ಲಿ ಒಂದೇ ರೀತಿಯ ಯೋಜನೆ ಮತ್ತು ಯೋಚನೆಗಳಿವೆ. ಕ್ಯೂಬಾ ಮತ್ತು ಕೇರಳದ ಈ ಸಂಬಂಧದಿಂದ ಜಗತ್ತು ಕಲಿಯುವಂತದ್ದು ಬಹಳ ಇದೆ” ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ, ಅಲಿಡಾ ಗೆವಾರ ಅವರ ಪುತ್ರಿ ಅರ್ಥಶಾಸ್ತ್ರಜ್ಞೆ ಎಸ್ತೆಫಾನಿಯಾ, ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ಕೇರಳದ ಮಾಜಿ ಸಚಿವ, ಕ್ಯೂಬಾ ಸೌಹಾರ್ದ ಸಮಿತಿ ಅಧ್ಯಕ್ಷ ಎಂ.ಎ. ಬೇಬಿ, ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ನಾಗಮೋಹನ ದಾಸ್, ದಲಿತ ಹಕ್ಕುಗಳ ಹೋರಾಟಗಾರ ಹಿರಿಯ ಮುಖಂಡ ಮಾವಳ್ಳಿ ಶಂಕರ್, ಹಿರಿಯ ಪತ್ರಕರ್ತೆ ಡಾ. ವಿಜಯಾ, ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ, ಸಿಪಿಐ ಮುಖಂಡ ಸಿದ್ದನಗೌಡ ಪಾಟೀಲ್, ಹಿರಿಯ ವಿಧ್ವಾಂಸ ಜಿ. ರಾಮಕೃಷ್ಣ, ಸಿಪಿಐಎಂಎಲ್‌‌ ನಾಯಕಿ ಮೈತ್ರೇಯಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬಹುತ್ವ ನಾಶ ಮಾಡಲು ಹೊರಟವರಿಗೆ ‘ಚೆ’ ಅಭಿಮಾನಿಗಳು ಉತ್ತರಿಸುತ್ತೇವೆ: ಪ್ರೊ. ಬರಗೂರು ರಾಮಚಂದ್ರಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...