Homeಕರ್ನಾಟಕ‘ನನ್ನಪ್ಪ ಒಬ್ಬ ಪರಿಪೂರ್ಣ ಕಮ್ಯುನಿಸ್ಟ್’: ಕ್ರಾಂತಿಕಾರಿ ‘ಚೆ’ ಮಗಳು ಅಲಿಡಾ ಗುವೆರಾ

‘ನನ್ನಪ್ಪ ಒಬ್ಬ ಪರಿಪೂರ್ಣ ಕಮ್ಯುನಿಸ್ಟ್’: ಕ್ರಾಂತಿಕಾರಿ ‘ಚೆ’ ಮಗಳು ಅಲಿಡಾ ಗುವೆರಾ

- Advertisement -
- Advertisement -

‘ಚೆ’ ಎಷ್ಟು ಕ್ರಾಂತಿಕಾರಿಯು ಅಷ್ಟೆ ರೊಮ್ಯಾಂಟಿಕ್ ಕೂಡಾ ಆಗಿದ್ದರು. ಮನುಕುಲವನ್ನು ಪ್ರೀತಿಸುವ ಸಾಮರ್ಥ್ಯ ಇದ್ದರೆ ಮಾತ್ರ ಅವರು ಸಮರ್ಥ ವ್ಯಕ್ತಿ ಎಂದೆಣಿಸಿಕೊಳ್ಳಬಹುದು. ನನ್ನಪ್ಪ ಒಬ್ಬ ಪರಿಪೂರ್ಣ ಕಮ್ಯುನಿಸ್ಟ್ ಎಂದು ಕ್ರಾಂತಿಕಾರಿ ಚೆ ಗೆವಾರ ಅವರ ಮಗಳು, ಮಕ್ಕಳ ವೈದ್ಯೆ, ಮಾನವ ಹಕ್ಕುಗಳ ಹೋರಾಟಗಾರ್ತಿ ಡಾ. ಅಲಿಡಾ ಗೆವಾರ ಅಭಿಪ್ರಾಯಪಟ್ಟರು. ಅವರು ಗುರುವಾರ ಸಂಜೆ ಬೆಂಗಳೂರಿನಲ್ಲಿ ನಡೆದ ‘ಪ್ರಗತಿಪರ ಸಂಘಟನೆಗಳು’ ಹಾಗೂ ‘ಕ್ಯೂಬಾ ಸೌಹಾರ್ದತಾ ಸಮಿತಿ’ ಆಯೋಜಿಸಿದ್ದ ‘ನಾಗರೀಕ ಸನ್ಮಾನ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ತಂದೆ ಚೆ ಗೆವೆರಾ ಅವರ ಒಡನಾಟವನ್ನು ಸ್ಮರಿಸಿದ ಅಲಿಡಾ ಗುವೆರಾ,“ನನ್ನ ತಂದೆ ಕವನಗಳೆಂದರೆ ಬಹಳ ಪ್ರೀತಿ. ಕವಿತೆಗಳನ್ನು ಹಾಡುತ್ತಿದ್ದರು ಮತ್ತು ಬರೆಯುತ್ತಿದ್ದರು. ಅವರ ಬರಹಗಳಿಗೆ ಅವರೇ ವಿಮರ್ಶಕರೂ ಆಗಿರುತ್ತಿದ್ದರು. ಹಾಗಾಗಿ ಅವರು ಅವರೇ ಬರೆದ ಕವಿತೆಗಳನ್ನು ಓದುತ್ತಿರಲಿಲ್ಲ. ಆದರೆ ರಾತ್ರಿ ಹೊತ್ತಿನಲ್ಲಿ ನನ್ನ ತಾಯಿಗಾಗಿ ನನ್ನ ತಂದೆ ಚೆ ಗುವೆರಾ ಕವಿತೆಗಳನ್ನು ಓದುತ್ತಿದ್ದರು. ಅಪ್ಪ ಕ್ರಾಂತಿಗಾಗಿ ಕಾಂಗೋಗೆ ಹೊರಡುವಾಗ ನನ್ನ ತಾಯಿಗಾಗಿ ಅವರೇ ವಾಚನ ಮಾಡಿದ ಕವನಗಳನ್ನು ರೆಕಾರ್ಡ್ ಮಾಡಿ ಕೊಟ್ಟು ಹೋಗಿದ್ದರು” ಎಂದು ತಂದೆಯನ್ನು ನೆನಪಿಸಿಕೊಂಡರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ನಿಜವಾದ ಕ್ರಾಂತಿಯಲ್ಲಿ ಯಾವತ್ತೂ ಕೂಡಾ ಪುರುಷ ಮತ್ತು‌ ಮಹಿಳೆ ಸಮಾನವಾಗಿ ಒಳಗೊಂಡಿರಬೇಕು. ಕ್ರಾಂತಿಯಲ್ಲಿ ಪುರುಷ ಮತ್ತು ಮಹಿಳೆಯರ ಸಮಾನ ಪಾಲುದಾರಿಕೆ ಇರಬೇಕು ಎಂದು ತಂದೆ ಚೆಗುವೆರಾ ನಂಬಿದ್ದರು” ಎಂದು ಅವರು ಹೇಳಿದರು.

ಸದ್ಯದ ಕ್ಯೂಬಾ ಸ್ಥಿತಿಗಳನ್ನು ವಿವರಿಸಿದ ಅವರು,“ಕೋವಿಡ್ ಸಾಂಕ್ರಾಮಿಕದಿಂದಾಗಿ ಕಳೆದ ಎರಡು ವರ್ಷಗಳಿಂದ ಕ್ಯೂಬಾ ದೊಡ್ಡ ಪ್ರಮಾಣದಲ್ಲಿ ಅರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಸಂಪನ್ಮೂಲಗಳ ಕೊರತೆ ಎದುರಾಗಿದೆ. ಅಲ್ಲಿನ ಸರ್ಕಾರ ಚೇತರಿಕೆಗಾಗಿ ಶ್ರಮಿಸುತ್ತಿದೆ” ಎಂದು ತಿಳಿಸಿದರು.

“ಚೆ ಗುವೆರಾ ಎಷ್ಟು ಕ್ರಾಂತಿಕಾರಿಯೋ ಅಷ್ಟೆ ರೊಮ್ಯಾಂಟಿಕ್ ಕೂಡಾ ಆಗಿದ್ದರು. ಹೇಗೆ ಪ್ರೀತಿಸಬೇಕು ಎಂದು ಅವರು ತಿಳಿದಿದ್ದರು. ಹೇಗೆ ಒಬ್ಬ ವ್ಯಕ್ತಿ ತನ್ನ ಮಗಳು ಮತ್ತು ಪತ್ನಿಯ ಜೊತೆ ಬದುಕುತ್ತಲೇ, ಅವರನ್ನೂ ಕ್ರಾಂತಿಯ ಭಾಗವಾಗಿಸಿಕೊಂಡು ಜಗತ್ತಿಗಾಗಿ ಹೇಗೆ ಹೋರಾಡಬೇಕು ಎಂದು ತಿಳಿಸಿಕೊಟ್ಟರು. ಮನುಕುಲವನ್ನು ಪ್ರೀತಿಸುವ ಸಾಮರ್ಥ್ಯ ಇದ್ದರೆ ಮಾತ್ರ ಅವರು ಸಮರ್ಥ ವ್ಯಕ್ತಿ. ನನ್ನಪ್ಪ ಚೆಗುವೆರಾ ಒಬ್ಬ ಪರಿಪೂರ್ಣ ಕಮ್ಯುನಿಸ್ಟ್” ಎಂದು ಅವರು ಹೆಮ್ಮೆಪಟ್ಟುಕೊಂಡರು

“ನಾವು ಮಾತನಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಸರಿಯಾದುದನ್ನೇ ಹೇಳಿದರೂ ಹೇಗೆ ಹೇಳಬೇಕು ಎಂಬ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಮಾಹಿತಿಗಳ ತಿರುಚುವಿಕೆ ಮತ್ತು ತಪ್ಪಾಗಿ ಪ್ರಸಾರ ಮಾಡುವಿಕೆಯೂ ಈಗಿನ ಮನುಕುಲವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ಒಂದು” ಎಂದು ಹೇಳಿದ ಅವರು ‘ಚೆ’ ಹೇಳದ ಮಾತುಗಳನ್ನು ಅವರ ಹೆಸರಿನಲ್ಲಿ ಹರಿದಾಡಿದ ಘಟನೆಯೊಂದನ್ನು ಹಂಚಿಕೊಂಡರು.

“ಭಾರತ ಮತ್ತು ಕ್ಯೂಬಾ ಭಾವನಾತ್ಮಕವಾಗಿ ದೂರವೇನಿಲ್ಲ. ಭಾರತದ ಜನರು ಕ್ಯೂಬಾ ಬೆಂಬಲಕ್ಕೆ ನಿಂತಿದ್ದರು. ಈಗಲೂ ಭಾರತ-ಕ್ಯೂಬಾ ಜೊತೆಯಲ್ಲೇ ಇದ್ದೇವೆ. ಇದೇ ಭಾರತ-ಕ್ಯೂಬಾ ಸೌಂದರ್ಯ. ‘ಭಾರತ-ಕ್ಯೂಬಾ ಭಾವನಾತ್ಮಕ ಒಗ್ಗಟ್ಟು’ ಎನ್ನುವುದು ಮಾನವತೆಯ ಸೌಂದರ್ಯವಾಗಿದೆ ಎಂದು ನಾನು ನಂಬಿದ್ದೇನೆ” ಎಂದು ಅವರು ಹೇಳಿದರು.

“ಎರಡು ವರ್ಷ ಕೊರೋನಾ ಸಾಂಕ್ರಾಮಿಕ ರೋಗದಿಂದ ನಾವು ಕಷ್ಟಕ್ಕೀಡಾದೆವು. ಕ್ಯೂಬಾ ಆಗ ಆರ್ಥಿಕತೆಯಿಂದಲೂ ಬಳಲಿತ್ತು. ಆದರೆ ನಾವು ಜನರ ಬದುಕನ್ನು ರಕ್ಷಣೆ ಮಾಡಲೇಬೇಕಿತ್ತು ಮತ್ತು ಅದನ್ನು ನಾವು ಮಾಡಿದೆವು ಕೂಡ. ಗಂಭೀರ ಆರ್ಥಿಕ‌ ಸಮಸ್ಯೆ ಎದುರಾದಾಗಲೂ ಅದನ್ನು ನಿಭಾಯಿಸಿದೆವು. ನಾವು ಬಹಿಷ್ಕಾರದ ಬಗ್ಗೆ ಸುಲಭವಾಗಿ ಮಾತಾಡಬಹುದು‌. ಆದರೆ ಬಹಿಷ್ಕಾರವನ್ನೇ ಬದುಕುವುದು ಅಷ್ಟು ಸುಲಭವಲ್ಲ. ನಮ್ಮಲ್ಲಿದ್ದ ಎಲ್ಲಾ ಅನುದಾನವನ್ನು ನಾವು ನಾಗರಿಕರಿಗಾಗಿ ಬಳಸಿದ್ದೇವೆ” ಎಂದು ತಿಳಿಸಿದರು.

“ಜಗತ್ತಿನ ದುರಂತ ಏನೆಂದರೆ ಎಲ್ಲಾ ಜೀವರಕ್ಷಕ ಔಷಧಿಗಳ ಪೇಟೆಂಟ್ ಅಮೇರಿಕಾದ ಬಳಿ ಇದೆ. ನಾವು ಹಣ ಕೊಟ್ಟರೂ ಅಮೇರಿಕಾ ನಮಗೆ ಔಷಧಿಗಳನ್ನು ಕೊಡುವುದಿಲ್ಲ. ಬೇರೆ ಯಾರಾದರೂ ಕೊಂಡು, ಅವರ ಬಳಿ ನಾವು ಕೊಂಡರೆ ಅವರಿಗೂ ಅಮೇರಿಕಾ ತೊಂದರೆ ಕೊಡುತ್ತದೆ. ಅದಕ್ಕೆ ನಾವು ಉಪಾಯವಾಗಿ ಕನಿಷ್ಠ ಐದು ದೇಶದ ಕೈದಾಟಿದ ಮೇಲೆ ಅವರಿಂದ ನಾವು ಔಷಧಿ ಕೊಳ್ಳುವ ವ್ಯವಸ್ಥೆ ಮಾಡಿದೆವು. ಆಗ ಔಷದಿಯ ಬೆಲೆ ಐದು ಪಟ್ಟು ಹೆಚ್ಚಾಗುತ್ತದೆ. ಇಷ್ಟಾದರೂ ನಾವು ನಮ್ಮ ಜನರಿಗೆ ಸಂಪೂರ್ಣ ಉಚಿತವಾದ ವೈದ್ಯಕೀಯ ಸೌಲಭ್ಯ ಕೊಡುತ್ತೇವೆ” ಎಂದು ಅವರು ಹೇಳಿದರು.

“ನಮ್ಮ ವಿಜ್ಞಾನಿಗಳು ಕ್ಯೂಬಾದಲ್ಲಿ ಒಟ್ಟು ಐದು ಬಗೆಯ ಕೋವಿಡ್ ವ್ಯಾಕ್ಸಿನ್‌ಗಳನ್ನು ಕಂಡುಹಿಡಿದರು. ಆದರೆ ಅದಕ್ಕೆ ಬೇಕಾದ ಸಿರಿಂಜ್‌ಗಳ ಮೇಲೂ ಅಮೇರಿಕಾ ನಿರ್ಬಂಧ ಹೇರಿತ್ತು. ಕಡೆಗೆ ನಾವು ಮೂಗಿನ ಹೊಳ್ಳೆಗಳ ಮೂಲಕ ವ್ಯಾಕ್ಸಿನ್ ಅನ್ನು ಜನರಿಗೆ ನೀಡಿ ಯಶಸ್ಸು ಗಳಿಸಿದೆವು. ಇದೀಗ ಕ್ಯೂಬಾ ಮತ್ತೊಂದು ಹೊಸ ವ್ಯಾಕ್ಸಿನ್ ಕಂಡು ಹಿಡಿದಿದ್ದು, ಅದನ್ನೂ ಕೂಡಾ ಮೂಗಿನ ಮೂಲಕ ಕೊಡಲಾಗುತ್ತದೆ. ಹಾಗಾಗಿ ನಮಗೆ ಅಮೇರಿಕಾದ ಸಿರೀಂಜು ಅಗತ್ಯವಿಲ್ಲ” ಎಂದು ಹೇಳಿದರು.

“ಕ್ಯೂಬಾ ಜೊತೆಗೆ ಕೇರಳ ತನ್ನ ಬೆಂಬಲವನ್ನು ನೀಡಿತು. ಕ್ಯೂಬಾ ಒಂದು ದೇಶವಾಗಿ ಕೇರಳದ ಜೊತೆ ಜೊತೆಗೆ ಸಾಗುತ್ತಿದ್ದೇವೆ. ಇದಕ್ಕೆ ನಾವು ಒಗ್ಗಟ್ಟು ಎನ್ನುತ್ತೇವೆ. ಆಯುರ್ವೇದಿಕೆ ಮೆಡಿಸಿನ್ ಗಳನ್ನು ಕ್ಯೂಬಾದಲ್ಲಿ ಅಭಿವೃದ್ದಿಪಡಿಸಲು ಕೇರಳದ ಸಹಕಾರ ನೀಡಿದೆ. ಕೇರಳ ಮತ್ತು ಕ್ಯೂಬಾದ ಮನೋಧರ್ಮ ಒಂದೇ ಆಗಿದೆ. ಹಾಗಾಗಿ ಕೇರಳ ಮತ್ತು ಕ್ಯೂಬಾದಲ್ಲಿ ಒಂದೇ ರೀತಿಯ ಯೋಜನೆ ಮತ್ತು ಯೋಚನೆಗಳಿವೆ. ಕ್ಯೂಬಾ ಮತ್ತು ಕೇರಳದ ಈ ಸಂಬಂಧದಿಂದ ಜಗತ್ತು ಕಲಿಯುವಂತದ್ದು ಬಹಳ ಇದೆ” ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ, ಅಲಿಡಾ ಗೆವಾರ ಅವರ ಪುತ್ರಿ ಅರ್ಥಶಾಸ್ತ್ರಜ್ಞೆ ಎಸ್ತೆಫಾನಿಯಾ, ಹಿರಿಯ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ, ಕೇರಳದ ಮಾಜಿ ಸಚಿವ, ಕ್ಯೂಬಾ ಸೌಹಾರ್ದ ಸಮಿತಿ ಅಧ್ಯಕ್ಷ ಎಂ.ಎ. ಬೇಬಿ, ನಿವೃತ್ತ ನ್ಯಾಯಮೂರ್ತಿ ಎಚ್.ಎಸ್. ನಾಗಮೋಹನ ದಾಸ್, ದಲಿತ ಹಕ್ಕುಗಳ ಹೋರಾಟಗಾರ ಹಿರಿಯ ಮುಖಂಡ ಮಾವಳ್ಳಿ ಶಂಕರ್, ಹಿರಿಯ ಪತ್ರಕರ್ತೆ ಡಾ. ವಿಜಯಾ, ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ, ಸಿಪಿಐ ಮುಖಂಡ ಸಿದ್ದನಗೌಡ ಪಾಟೀಲ್, ಹಿರಿಯ ವಿಧ್ವಾಂಸ ಜಿ. ರಾಮಕೃಷ್ಣ, ಸಿಪಿಐಎಂಎಲ್‌‌ ನಾಯಕಿ ಮೈತ್ರೇಯಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬಹುತ್ವ ನಾಶ ಮಾಡಲು ಹೊರಟವರಿಗೆ ‘ಚೆ’ ಅಭಿಮಾನಿಗಳು ಉತ್ತರಿಸುತ್ತೇವೆ: ಪ್ರೊ. ಬರಗೂರು ರಾಮಚಂದ್ರಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...