Homeಪುಸ್ತಕ ವಿಮರ್ಶೆ’ನದಿಯೊಂದು ನಿದ್ರಿಸಿದಾಗ’: ವಿಶಿಷ್ಟ ಆಚರಣೆಗಳು, ನಂಬಿಕೆಗಳು, ಪೂರ್ವಜರ ಆರಾಧನೆಯೇ ಕಾಪಾಡುವ ಬುಡಕಟ್ಟು ಚಿತ್ರಣ

’ನದಿಯೊಂದು ನಿದ್ರಿಸಿದಾಗ’: ವಿಶಿಷ್ಟ ಆಚರಣೆಗಳು, ನಂಬಿಕೆಗಳು, ಪೂರ್ವಜರ ಆರಾಧನೆಯೇ ಕಾಪಾಡುವ ಬುಡಕಟ್ಟು ಚಿತ್ರಣ

- Advertisement -
- Advertisement -

ನಾಗಲ್ಯಾಂಡ್ ಲೇಖಕಿ ಈಸ್ಟರೀನ್ ಕೀರೆಯವರ ’ನದಿಯೊಂದು ನಿದ್ರಿಸಿದಾಗ’ ಕಾದಂಬರಿ ಓದಿದೆ. 2015ನೇ ಸಾಲಿನ ದ ಹಿಂದೂ (ಪತ್ರಿಕೆ) ಸಾಹಿತ್ಯ ಪ್ರಶಸ್ತಿಯನ್ನ ಪಡೆದುಕೊಂಡ ಕೃತಿ ಮಾಂತ್ರಿಕ ವಾಸ್ತವವಾದವನ್ನು ಬಳಸಿಕೊಂಡು ನಾಗಲ್ಯಾಂಡ್ ಬುಡಕಟ್ಟು ಜನಾಂಗದ ಕಠಿಣ ಬದುಕನ್ನ ಸರಳ ನಿರೂಪಣೆಯ ಮೂಲಕ ತೋರಿಸಿಕೊಟ್ಟಿದೆ. ಬುಡಕಟ್ಟು ಜನಾಂಗ ಎಂದಾಗ ನೆನಪಿಗೆ ಬಂದಿದ್ದು ಪಂಜಾಬಿ ಲೇಖಕ ಹಾಗೂ ಚಳವಳಿಯ ಸಂಗಾತಿ ಸತ್ನಾಮ್ ಬರೆದಿರುವ ಪ್ರವಾಸಕಥನದ ದಾಟಿಯಲ್ಲಿರುವ ’ಜಂಗಲ್ ನಾಮಾ’ ಪುಸ್ತಕ. ಆದಿವಾಸಿ ಸಮುದಾಯಗಳು ನಾಗರಿಕ ಜಗತ್ತಿನೊಂದಿಗೆ ದೂರವಿದ್ದು ಬದುಕುವ ಪರಿ ಅಚ್ಚರಿಯಾದದ್ದು. ಶಿಕ್ಷಣ ಮತ್ತು ಅನೇಕ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿ ಆದಿವಾಸಿಗಳೂ ಕಾಡಿನಲ್ಲೇ ತಮ್ಮ ಬದುಕನ್ನ ಕಟ್ಟಿಕೊಂಡಿದ್ದಾರೆ; ಆಧುನೀಕರಣದ ಹೆಸರಲ್ಲಿ ಕಾಡನ್ನ ಮತ್ತು ಬದುಕನ್ನ ನಾಶಮಾಡುವ ಬಂಡವಾಳಶಾಹಿಗಳ ಕ್ರೂರತೆಯನ್ನ ’ಜಂಗಲ್ ನಾಮಾ’ ಅತ್ಯಂತ ಅಚ್ಚುಕಟ್ಟಾಗಿ ಚಿತ್ರಿಸಿದೆ. ಕೊನೆಗೆ ಸರಕಾರದಿಂದ ಬೇಸತ್ತು ಚಳವಳಿಗೆ ಕಾಲಿಡುವ ಚಿತ್ರಣವನ್ನು ಹಂತಹಂತವಾಗಿ ಕಟ್ಟಿಕೊಡುತ್ತದೆ.

ಆದರೆ ’ನದಿಯೊಂದು ನಿದ್ರಿಸುವಾಗ’ ಕಾದಂಬರಿಯಲ್ಲಿ ಇಲ್ಲಿನ ಜನಾಂಗ ಕೇವಲ ತಮ್ಮ ನಂಬಿಕೆಯೊಂದಿಗೆ ಜೀವಿಸುವ ಚಿತ್ರಣವಿದೆ. ತಮ್ಮನ್ನು ಲೆಕ್ಕಿಸದ, ನಿರ್ಲಕ್ಷಿಸಿದ ಅಲ್ಲಿನ ಆಡಳಿತದ ವಿರುದ್ಧ ಯಾವುದೇ ಪ್ರತಿರೋಧ ನಮಗೆ ಕಾಣಸಿಗುವುದಿಲ್ಲ; ಕಾದಂಬರಿ ಚಲಿಸುವ ದಿಕ್ಕು ಬೇರೆಯೇ ತರಹದ್ದಾಗಿರುವುದರಿಂದ ಪ್ರತಿರೋಧದ ಪ್ರಶ್ನೆಯೇ ಏಳುವುದಿಲ್ಲ. ಕಾದಂಬರಿಯ ಆರಂಭದಲ್ಲಿ ವೀಲಿ ನಿದ್ರಿಸುವ ನದಿಯ ಕನಸನ್ನು ಕಾಣುತ್ತಾನೆ. ಕಾಲಜ್ಞಾನಿಯ ಮಾತಿನಂತೆ ನದಿ ನಿದ್ರಿಸುವಾಗ ನದಿಯ ಮಧ್ಯಭಾಗದಲ್ಲಿ ಮುಳುಗಿ ಹೃದಯದ ಕಲ್ಲನ್ನು ಎತ್ತಿತಂದರೆ ಅದು ಹಣ, ಒಡವೆ, ಆಕಳು ಮತ್ತು ಸುಂದರವಾದ ಹುಡುಗಿಯನ್ನು ಕೊಡುತ್ತದೆಂಬುದು ಕಥಾನಾಯಕ ವೀಲಿಯ ನಂಬಿಕೆ ಮಾತ್ರವಲ್ಲದೇ ಆ ಜನಾಂಗದ ಪ್ರತಿಯೊಬ್ಬರ ನಂಬಿಕೆ. ನಿದ್ರಿಸುವ ನದಿಯನ್ನು ಹುಡುಕುತ್ತಾ ಹೋಗುವ ಕಥಾನಾಯಕನ ಪ್ರಯಾಣದ ಮೂಲಕ, ಯಾವುದೇ ಮೂಲಭೂತ ಅಥವಾ ಆಧುನಿಕ ಸೌಕರ್ಯಗಳಿಲ್ಲದ ಕಾಡಿನ ಹಾಡಿಗಳಲ್ಲಿ ಬುಡಕಟ್ಟು ಸಂಸ್ಕೃತಿಗಳು ಬದುಕನ್ನ ಕಟ್ಟಿಕೊಂಡ ರೀತಿಯನ್ನ ಲೇಖಕಿ ಅತಿ ಸರಳವಾಗಿ ಕಟ್ಟಿಕೊಡುತ್ತಾರೆ.

ಈಸ್ಟರೀನ್ ಕೀರೆ

ಕಾಡಿನ ಜೀವನ ವಿಧಾನ, ಸಾಂಸ್ಕೃತಿಕ ಚೆಲುವಿನಲ್ಲಿ ಭಾಗಿಯಾಗುವುದು, ಮರುಗುವುದು, ಭಯಗೊಳ್ಳುವುದು ಹಾಗೂ ಕೆಲವೊಮ್ಮೆ ಆಶ್ಚರ್ಯಚಕಿತರಾಗುವುದಕ್ಕೆ ಈ ಕೃತಿ ಓದುಗನಿಗೆ ಅವಕಾಶ ನೀಡುತ್ತದೆ; ಆದರೆ, ಉಳ್ಳವನ ಮತ್ತು ಇಲ್ಲದವನ ನಡುವಿನ ಅಂತರ, ಬುಡಕಟ್ಟು ಸಮುದಾಯಗಳ ಬದುಕಿನ ಲೌಖಿಕ ಬಡತನ, ಇವರ ಇಂತಹ ಬದುಕಿಗೆ ಕಾರಣರಾದವರು ಯಾರು ಎಂಬ ವಿಮರ್ಶೆಗೆ ಓದುಗ ಮುಂದಾಗಲು ಬಿಡುವುದಿಲ್ಲ. ಕೃತಿಯ ನಡುವೆ ಕೆಲವೊಂದು ಭಯಾನಕ ಸಂಗತಿಗಳು ಓದುಗನಲ್ಲಿ ದಿಗಿಲು ಹುಟ್ಟಿಸುತ್ತವೆ. ಆತ್ಮದ ಹುಲಿಯೊಂದಿಗೆ ನಡೆಯುವ ಸೆಣಸಾಟ, ಮತ್ತೊಮ್ಮೆ ಕ್ಷುಲ್ಲಕ ಕಾರಣವೊಂದಕ್ಕೆ ಬೇಟೆಗಾರ ಪೇಹುವಿನ ಕೊಲೆ, ನೇಪಾಳಿ ದಂಪತಿಗಳ ಕೊಲೆ, ಕೊನೆಗೆ ವೀಲಿಯ ಸಾವು ಈ ತರಹದ ಭಯಾನಕ ಸಂಗತಿಗಳು ಓದುಗನಿಗೆ ಶಾಕ್ ನೀಡಿ ನೆನಪಲ್ಲಿ ಅಚ್ಚಳಿಯದೇ ಉಳಿಯುತ್ತವೆ. ವೀಲಿಗೆ ಕಾಡಿನಲ್ಲಿ ಹಂತಹಂತವಾಗಿ ಆಶ್ರಯ ನೀಡಿ, ಸಹಾಯ ಮಾಡಿ ಮುಂದಿನ ಪ್ರಯಾಣಕ್ಕೆ ಅಣಿಮಾಡಿಕೊಡುವ ಮಾನವೀಯತೆ ಮತ್ತು ಕರುಣೆ ತುಂಬಿದ ಕುಟುಂಬಗಳು ಕೂಡ ಇಲ್ಲಿ ಕಾಣಸಿಗುತ್ತವೆ.

ಇದನ್ನೂ ಓದಿ: ಸರಮಾಗೋನ ’ಕುರುಡು’ ಕಾದಂಬರಿ: ನಾವು ಕಟ್ಟಿದ ಸ್ವರ್ಗ ದಿಢೀರನೆ ಕುಸಿದಾಗ..!

ನಾಗರಿಕ ಜಗತ್ತು ಯಾವುದನ್ನು ಮೂಢನಂಬಿಕೆಯೆಂದು, ಅತಿಮಾನುಷವೆಂದು ಭಾವಿಸಿದೆಯೋ ಅದನ್ನು ಮಾಂತ್ರಿಕತೆಯ ಮೂಲಕ ವಾಸ್ತವವಾಗಿಸಿದ್ದಾರೆ ಕೀರೆ. ಕರ್ಪ್ಯೂಮಿಯಾ ಹಳ್ಳಿಯಿಂದ ಬಂದಂತಹ ಹೆಂಗಸರು ಶಾಪಗ್ರಸ್ತರು; ಬುಡಕಟ್ಟು ಜನಾಂಗದೊಳಗಡೆನೇ ತಿರಸ್ಕೃತಗೊಂಡು ಕಾಡಿನಲ್ಲಿ ಅವಿವಾಹಿತರಾಗಿ ಬದುಕವಂತಹ ಜನಾಂಗವಿದು. ಇವರಿಗೇನಾದರೂ ಸಿಟ್ಟು ಬಂದು ಬೆರಳು ತೋರಿಸಿದರೆ ಅನರ್ಥ ಸಂಭವಿಸುತ್ತೆಂದು ಅಲ್ಲಿನ ಜನರ ಬಲವಾದ ನಂಬಿಕೆ. ಇವರನ್ನು ದೂರ ಇಟ್ಟ ಜನ ತಮಗೆ ಏನಾದರೂ ಕಾಯಿಲೆ ಬಂದರೆ ಕರ್ಪ್ಯೂಮಿಯಾ ಮಹಿಳೆಯರ ಹತ್ತಿರ ಹೋಗಿ ಉಡುಗೊರೆಯ ರೂಪದಲ್ಲಿ ದವಸ ಧಾನ್ಯಗಳನ್ನು ನೀಡಿ ಗುಣವಾಗುತ್ತಾರೆ. ಏಟಿಯೆಂಬ ಪಾತ್ರ ಕೂಡ ತಿರಸ್ಕೃತಗೊಂಡ ಒಂದು ಕರ್ಪ್ಯೂಮಿಯಾ ಸಮುದಾಯದಿಂದ ಬಂದವಳು. ಅವಳು ತಮ್ಮ ಜನಾಂಗದ ಪೂರ್ವಜರ ದುಷ್ಕೃತ್ಯದಿಂದ, ಮಾನಸಿಕವಾಗಿ, ದೈಹಿಕವಾಗಿ ಹಿಂಸೆಗೆ ಒಳಪಟ್ಟಿದ್ದಾಳೆ; ಪೂರ್ವಗ್ರಹದಿಂದ ನಾವು ಯಾರನ್ನು ಮನುಷ್ಯರಲ್ಲವೆಂದು ಒಪ್ಪಿಕೊಂಡಿದ್ದೇವೆಯೋ ಅಂಥವಳನ್ನು “ನೀವು ಮನುಷ್ಯರೇ” ಎಂದು ವೀಲಿಯ ಮೂಲಕ ತೋರಿಸಿಕೊಡುವುದರಲ್ಲಿ ಕಾದಂಬರಿ ಗೆಲ್ಲುತ್ತದೆ. ಅವಳ ಮೂಢನಂಬಿಕೆಯಿಂದ, ಏಟಿಯನ್ನು ಪಾರು ಮಾಡಿದ ವೀಲಿಗೆ, ಸಂಪತ್ತು ನೀಡುತ್ತದೆ ಎಂದು ಹೃದಯದ ಕಲ್ಲನ್ನು ಹುಡುಕಲು ಹೋಗುವುದು ಕೂಡ ಮೂಢನಂಬಿಕೆಯ ಭಾಗವೇ ಇರಬಹುದೆಂದು ಹೊಳೆಯುವುದಿಲ್ಲ. ಅದು ಅವರ ಬದುಕಿನ ಭಾಗವಾಗಿರುವುದರಿಂದ ನಂಬಿಕೆಯನ್ನ ಮತ್ತು ಮೂಢನಂಬಿಕೆಯನ್ನು ಬೇರ್ಪಡಿಸುವ ಗೋಜಿಗೆ ಹೋಗಿಲ್ಲ; ಹಾಗೆ ಮಾಡಿದರೆ ಪೂರ್ವಜರಿಗೆ ಅನ್ಯಾಯವೆಸಗಿ ಘೋರ ಅಪರಾಧ ಮಾಡಿದಂತಾಗುತ್ತದೆ ಎನ್ನುವದು ಅವರ ಅಭಿಪ್ರಾಯ. ಅದೇ ಈ ಕಾದಂಬರಿಯ ವಿಶೇಷ ವೈರುಧ್ಯ ಅನ್ನಿಸಿಬಿಡುತ್ತದೆ.

ರವಿಕುಮಾರ್ ಹಂಪಿ

ಮನುಷ್ಯತ್ವವುಳ್ಳ ಹಾಗೂ ಸದಾ ಒಳ್ಳೆಯದನ್ನೇ ಯೋಚನೆ ಮಾಡುವಂತಹ ವ್ಯಕ್ತಿ ವೀಲಿ. ಏಟಿಯನ್ನು ಅಂಚಿನಿಂದ ಮುಖ್ಯವಾಹಿನಿಗೆ ತರುವಲ್ಲಿ ಅವಳ ಬದುಕಿನಲ್ಲಾಗುವ ಬದಲಾವಣೆಗೆ ವೀಲಿಯ ಪಾತ್ರ ತುಂಬಾ ಮುಖ್ಯವಾದುದು. ಹೀಗಾಗಿ ಏಟಿಯು ವೀಲಿಗೆ ಯಾವರೀತಿ ಋಣ ಸಂದಾಯ ಮಾಡಬೇಕೆಂದು ತಿಳಿಯದೇ ಹೆಂಡತಿಯಾಗಬೇಕೋ? ವಯಸ್ಸಿನ ಅಂತರ ಲೆಕ್ಕಹಾಕಿ ಮಗಳಾಗಬೇಕೋ? ಎಂಬ ಗೊಂದಲಕ್ಕೆ ಸಿಕ್ಕ ಏಟಿ ವೀಲಿಯ ಆಸೆಯಂತೆ ಕೊನೆಗೆ ಮಗಳಾಗಿಯೇ ಉಳಿಯುತ್ತಾಳೆ.

ಒಟ್ಟಿನಲ್ಲಿ ಕಾದಂಬರಿ ನಾಯಕ ಲೌಖಿಕ ಬದುಕನ್ನ ಅಲೌಖಿಕತೆಯಲ್ಲಿ ಹುಡುಕುವವನು. ಈ ಕಾದಂಬರಿಯಲ್ಲಿ ಬರುವ ಸಮುದಾಯದ ವಿಶಿಷ್ಟ ಆಚರಣೆಗಳು, ನಂಬಿಕೆಗಳು, ಪೂರ್ವಜರ ಆರಾಧನೆ- ಅವೇ ಅವರನ್ನ ಬದುಕಿನುದ್ದಕ್ಕೂ ಮುನ್ನಡೆಸುತ್ತವೆ. ಕಾಡಿನಲ್ಲಿನ ಸಸ್ಯಗಳು, ಪ್ರಾಣಿಗಳು, ಎಂದೂ ಬತ್ತದ ನದಿ, ನದಿಮೀನುಗಳು ಇದ್ದರೆ ಸಾಕು ಒಂದು ಶತಮಾನವನ್ನು ಯಾವುದೇ ತಾಪತ್ರಯವಿಲ್ಲದೇ ನೂಕುವರು ಅವರು. ವಿಶೇಷ ಹಾಗೂ ಸರಳ ನಿರೂಪಣೆಯ ಕ್ರಮದಿಂದಾಗಿ ಓದಿನಲ್ಲಿ ಎಲ್ಲೂ ತೊಡಕು ಮತ್ತು ಗೊಂದಲಗಳಾಗುವುದಿಲ್ಲ. ಕಾದಂಬರಿ ಜೊತೆಗೆ ನಾವು ಕೂಡ ಕಾಡು ಸುತ್ತಿದಂತೆ ಭಾಸವಾಗುತ್ತದೆ. ಬೇರೆ ರಾಜ್ಯದ ಕಾದಂಬರಿಯನ್ನು ಕನ್ನಡಕ್ಕೆ ತರುವಲ್ಲಿ ರವಿ ಹಂಪಿಯವರು ಯಶಸ್ವಿಯಾಗಿದ್ದಾರೆ..

ನದಿಯೊಂದು ನಿದ್ರಿಸಿದಾಗ
ಕಾದಂಬರಿ-ಅನುವಾದ
ಮೂಲ: ವೆನ್ ದ ರಿವರ್ ಸ್ಲೀಪ್ಸ್
(ಈಸ್ಟರೀನ್ ಕೀರೆ)
ಅನುವಾದ: ರವಿ ಹಂಪಿ
ಪ್ರಕಾಶನ: ವೈಷ್ಣವಿ ಪ್ರಕಾಶನ

ಅಮರೇಶ ಗಿಣಿವಾರ

ಅಮರೇಶ ಗಿಣಿವಾರ
ಕಥೆಗಾರ- ಕವಿ ಅಮರೇಶ ಗಿಣಿವಾರ ಅವರು ಸಿಂಧನೂರಿನ ಗಿಣಿವಾರದವರು. ಅವರ ’ಹಿಂಡೆಕುಳ್ಳು’ ಕತೆಗೆ ’ಸಂಗಾತ’ ಯುವ ಕತಾ ಸ್ಫರ್ಧೆಯಲ್ಲಿ ಬಹುಮಾನ ಲಭಿಸಿದೆ. ’ಬಯಲು’ ಕವನ ಸಂಕಲನ, ’ಬಾಂಗ್ಲಾದ ಹಕ್ಕಿಗಳು’ ಅವರ ಇತ್ತೀಚಿನ ಕಥಾಸಂಕಲನ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...