Homeಮುಖಪುಟವಿಶ್ವ ಭೂಮಿ ದಿನ; ಪ್ರಾಜೆಕ್ಟ್ ಟೈಗರ್: ಹುಲಿ ಸಂರಕ್ಷಣೆಯ ಹಾದಿಯಲ್ಲಿ ಐವತ್ತು ವರ್ಷಗಳು

ವಿಶ್ವ ಭೂಮಿ ದಿನ; ಪ್ರಾಜೆಕ್ಟ್ ಟೈಗರ್: ಹುಲಿ ಸಂರಕ್ಷಣೆಯ ಹಾದಿಯಲ್ಲಿ ಐವತ್ತು ವರ್ಷಗಳು

- Advertisement -
- Advertisement -

ಭೂಮಿಯ ಮೇಲಿನ ಜೀವವೈವಿಧ್ಯದ ಆರನೇ ಮಹಾ ಅವಸಾನವು ಈಗಾಗಲೇ ಜಾರಿಯಲ್ಲಿದೆ ಎಂದು ಅನೇಕ ವೈಜ್ಞಾನಿಕ ವರದಿಗಳು ಎಚ್ಚರಿಕೆ ನೀಡಿವೆ. ಈ ಮುಂಚೆ ಉಂಟಾದ ಜೀವಿಗಳ ವಿನಾಶ ಮತ್ತು ಈಗ ನಡೆಯುತ್ತಿರುವ ಜೀವಿಗಳ ವಿನಾಶಕ್ಕೆ ಕೆಲವು ಮೂಲಭೂತ ವ್ಯತ್ಯಾಸಗಳಿವೆ. ಈ ಮುಂಚೆ ಉಂಟಾದ ಐದು ಮಹಾ ವಿನಾಶಗಳು ಪ್ರಕೃತಿಯಲ್ಲಿನ ಬದಲಾವಣೆಯಿಂದ ಉಂಟಾಗಿದ್ದಂತವು, ಆದರೆ ಪ್ರಸ್ತುತ ನಡೆಯುತ್ತಿರುವ ವಿನಾಶವು ಮಾನವಜನ್ಯ ಚಟುವಟಿಕೆಗಳಿಂದ ಉಂಟಾಗುತ್ತಿದೆ. ಕಳೆದ ಕೆಲ ಶತಮಾನ ಅಥವಾ ದಶಕಗಳಲ್ಲಿ ನೈಸರ್ಗಿಕ ಆವಾಸ ಮತ್ತು ಜೀವ ವೈವಿಧ್ಯಗಳನ್ನು ಕಳೆದುಕೊಳ್ಳುತ್ತಿರುವ ವೇಗವು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಹೊಂದಿಕೊಳ್ಳಲು ನಮ್ಮ ಸಹಜೀವಿಗಳಿಗೆ ಸಾಧ್ಯವಾಗುತ್ತಲೇ ಇಲ್ಲ. ಇದರ ಪರಿಣಾಮವಾಗಿ ಪ್ರತಿಯೊಂದು ಜೀವಿಯೂ ಅಳಿದುಳಿದ ಆವಾಸದಲ್ಲಿಯೇ ಹೊಂದಿಕೊಂಡು ಬದುಕಲೇಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿವೆ.

ಇವೆಲ್ಲ ವಿದ್ಯಮಾನಗಳು ಸಾಮಾನ್ಯವಾಗಿ ನಮಗೆ ಮತ್ತು ನಮ್ಮನ್ನು ಆಳುವವರ ಗಮನಕ್ಕೆ ಬರುವುದು ತೀರಾ ವಿರಳ. ಆದರೆ ನಮ್ಮ ದೇಶದಲ್ಲಿ ಮತ್ತು ವಿಶ್ವದ ಇತರ ದೇಶಗಳಲ್ಲಿ ಹುಲಿಯ ಸಂತತಿಯು ಅವಸಾನದ ಕಡೆಗೆ ಹೋಗುತ್ತಿದ್ದುದನ್ನು ಗಮನಕ್ಕೆ ತೆಗೆದುಕೊಂಡು ಹುಲಿಗಳನ್ನು ಸಂರಕ್ಷಿಸಲೇಬೇಕೆಂಬ ನಿಟ್ಟಿನಲ್ಲಿ ಐವತ್ತು ವರ್ಷಗಳ ಹಿಂದೆ ಅಂದಿನ ಪ್ರಧಾನಿ ದಿ. ಇಂದಿರಾ ಗಾಂಧಿಯವರ ಕಾಳಜಿಯಿಂದ ರೂಪಿಸಲಾದ ಹುಲಿ ಯೋಜನೆ ಅಥವಾ ಪ್ರಾಜೆಕ್ಟ್ ಟೈಗರ್ ಎಂಬುದು ಇದಕ್ಕೆ ಒಂದು ಅಪವಾದ ಎಂದೇ ಹೇಳಬೇಕು. ಇದು ಖಂಡಿತವಾಗಿಯೂ ವನ್ಯಜೀವಿ ಸಂರಕ್ಷಣೆಯಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದ ಸಂರಕ್ಷಣಾ ಯೋಜನೆ. ಈ ಯಶಸ್ಸು ಹಾಗೇ ಬರಲಿಲ್ಲ; ಈ ಯೋಜನೆಯು ಅನೇಕ ಏರಿಳಿತಗಳನ್ನು ಕಂಡು, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಮತ್ತು ವನ್ಯಜೀವಿ ವಿಜ್ಞಾನಿಗಳ ಪ್ರಯತ್ನದಿಂದ ಈ ಒಂದು ಹಂತಕ್ಕೆ ಬಂದು ನಿಂತಿದೆ ಮತ್ತು ಅದರ ಪರಿಣಾಮವಾಗಿ ಹುಲಿಗಳ ಗಣತಿ ಮತ್ತು ಸಂರಕ್ಷಣೆಯ ವರದಿಗಳಲ್ಲಿ ಕೊಂಚ ನಿಖರತೆ ಬಂದಿದೆಯಾದರೂ ಸಾಗುವ ಹಾದಿ ಇನ್ನೂ ದೂರವಿದೆ.

ಎಪ್ಪತ್ತರ ದಶಕದಲ್ಲಿ ಹುಲಿಗಳ ಸಂರಕ್ಷಣೆಗೆ ನಮ್ಮ ನಾಡಿನ ಬಂಡೀಪುರವೂ ಸೇರಿದಂತೆ ಒಂಬತ್ತು ಸಂರಕ್ಷಿತ ಪ್ರದೇಶಗಳನ್ನು ಘೋಷಿಸಲಾಯಿತು ಮತ್ತು ಆ ಪ್ರದೇಶಗಳ ಸಂರಕ್ಷಣೆಗೆ ಕಾನೂನುಗಳನ್ನೂ ಜಾರಿಗೆ ತರಲಾಯಿತು. ಆದರೆ ಹುಲಿಗಳಂತಹ ವನ್ಯಜೀವಿಗಳ ಸಂರಕ್ಷಣೆಗೆ ಇದಷ್ಟೇ ಸಾಲದು. ಅಂತಾರಾಷ್ಟ್ರೀಯ ಕಳ್ಳ ಮಾರುಕಟ್ಟೆಯಲ್ಲಿ ಹುಲಿಯ ಚರ್ಮ ಮತ್ತು ದೇಹದ ಅಂಗಾಂಗಗಳಿಗೆ ಭಾರೀ ಬೆಲೆಯಿರುವ ಕಾರಣ ಕಳ್ಳ ಬೇಟೆಗಾರರಿಂದ ವನ್ಯಜೀವಿಗಳನ್ನು ಸದಾ ರಕ್ಷಿಸಿಕೊಳ್ಳಬೇಕಾಗಿತ್ತು. ಅಷ್ಟೇ ಅಲ್ಲದೆ ಅರಣ್ಯಪ್ರದೇಶಗಳ ಮತ್ತು ಇಲ್ಲಿ ವಾಸಿಸುವ ಹುಲಿ ಮತ್ತಿತರ ವನ್ಯಜೀವಿಗಳ ಸ್ಥಿತಿಗತಿಯ ನಿಖರ ಅಧ್ಯಯನ ನಡೆಸಬೇಕಾಗಿತ್ತು. ಇವೆಲ್ಲವೂ ಯೋಜನೆಯ ಯಶಸ್ಸು ಮತ್ತು ಮುಂದೆ ಸಾಗಬೇಕಾದ ದಾರಿಯ ಕುರಿತು ತಿಳಿಸಿಕೊಡಲಿದ್ದವು. ಆದರೆ ಕೆಲ ರಾಜ್ಯಗಳಲ್ಲಿ ನಿರೀಕ್ಷೆಗೆ ತಕ್ಕಷ್ಟು ತಳಮಟ್ಟದ ಸಂರಕ್ಷಣೆಯ ಮತ್ತು ಸಿಬ್ಬಂದಿಗಳಿಗೆ ಆಧುನಿಕ ಸೌಲಭ್ಯದ ಕೊರತೆಯಿಂದಾಗಿ ಸಂಘಟಿತ ಕಳ್ಳ ಬೇಟೆಗಾರರ ಗುಂಪುಗಳು ಅವ್ಯಾಹತವಾಗಿ ಹುಲಿಗಳ ಬೇಟೆಯನ್ನು ಮುಂದುವರಿಸಿದರು. ಚೀನಾ ಮತ್ತು ಟಿಬೆಟ್‌ಗಳಲ್ಲಿ ಹುಲಿಯ ಚರ್ಮ ಮತ್ತು ಅಂಗಾಂಗಗಳಿಗೆ ಭಾರೀ ಬೇಡಿಕೆ ಇದ್ದಿದ್ದರಿಂದ ಈ ಕಳ್ಳ ಬೇಟೆಯು ಭಾರಿ ಲಾಭದಾಯಕವಾಗಿಯೂ ಇತ್ತು.

ಇದನ್ನೂ ಓದಿ: ಮೋದಿ ಜಂಗಲ್ ಸಫಾರಿ ಅಣಕಿಸುವ ವಿಡಿಯೋ ಮಾಡಿದ ಹಾಸ್ಯನಟನಿಗೆ ನೋಟಿಸ್; 11 ಸಾವಿರ ದಂಡ

ಇವೆಲ್ಲಾ ಕುಕೃತ್ಯಗಳಿಗೆ ಅನುಕೂಲವಾಗುವಂತೆ ಹುಲಿ ಗಣತಿ ಮತ್ತು ಹುಲಿ ಬೇಟೆಯಾಡುವ ಪ್ರಾಣಿಗಳ ಗಣತಿಗೆ ಆಯಾ ಅರಣ್ಯ ಇಲಾಖೆಗಳ ಬಳಿ ಯಾವುದೇ ವೈಜ್ಞಾನಿಕ ವಿಧಾನಗಳೂ ಇರಲಿಲ್ಲ. ತೀರಾ ಇತ್ತೀಚಿನವರೆಗೂ ನಮ್ಮ ದೇಶದಲ್ಲಿ ಹುಲಿಗಳನ್ನು ಅವುಗಳ ಹೆಜ್ಜೆ ಗುರುತಿನ ಆಧಾರದ ಮೇಲೆ ಎಣಿಕೆ ಮಾಡುತ್ತಿದ್ದರು. ಇದೊಂದು ಅವೈಜ್ಞಾನಿಕ ಮತ್ತು ತುಂಬಾ ಲೋಪದೋಷಗಳಿಂದ ಕೂಡಿದ ವಿಧಾನವಾಗಿತ್ತು. ಈ ವಿಧಾನವನ್ನು ಬಳಸಿ ತಪ್ಪುತಪ್ಪಾಗಿ ಹುಲಿಗಳ ಸಂಖ್ಯೆಗಳನ್ನು ಪ್ರಕಟಿಸಲಾಗುತ್ತಿತ್ತು. ಹಾಗಾಗಿ ಹುಲಿಗಳ ಸಂಖ್ಯೆಯಲ್ಲಿ ನಿಧಾನವಾಗಿ ಇಳಿಮುಖವಾಗುತ್ತಿರುವುದು ಯಾರ ಗಮನಕ್ಕೂ ಬರಲೇ ಇಲ್ಲ ಹಾಗಾಗಿ ಅವುಗಳ ರಕ್ಷಣೆಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳುವ ಪ್ರಮೇಯವೂ ಮುಂದಾಗಲಿಲ್ಲ. ಇದು ಯಾವ ಮಟ್ಟಕ್ಕೆ ನಡೆಯಿತು ಎಂದರೆ ರಾಜಸ್ಥಾನದ ಸರಿಸ್ಕಾ ಮತ್ತು ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಂದೇ ಒಂದು ಹುಲಿಯೂ ಇಲ್ಲದಂತೆ ಬೇಟೆಯಾಡಲಾಯಿತು. ಅಲ್ಲಿ ಹುಲಿಗಳ ಅಧ್ಯಯನ ಮಾಡುತ್ತಿದ್ದ ವಿಜ್ಞಾನಿಗಳು ಇದನ್ನು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸಿದರೂ ಅವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಿ ಅವರ ಬಾಯಿ ಮುಚ್ಚಿಸಲಾಯಿತು. ದಶಕಗಳ ಕಾಲ ನಡೆದ ಅವೈಜ್ಞಾನಿಕ ಎಣಿಕೆ ಮತ್ತು ವಿಪರೀತವಾಗಿ ಹೆಚ್ಚಿದ ಕಳ್ಳ ಬೇಟೆಯಿಂದಾಗಿ ಹುಲಿಗಳ ಸಂಖ್ಯೆ ಮುಂಚೆ ಎಲ್ಲಿತ್ತೋ ಮರಳಿ ಅಲ್ಲಿಯೇ ಬಂದು ತಲುಪಿತು. ಆಗ ಎಚ್ಚೆತ್ತ ಅಂದಿನ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಸರಿಸ್ಕಾ ಮತ್ತು ಪನ್ನಾ ಹಗರಣಗಳನ್ನು ಸಿಬಿಐ ತನಿಖೆಗೆ ವಹಿಸಿತು ಮತ್ತು ಹುಲಿ ಯೋಜನೆಯನ್ನು ರದ್ದುಗೊಳಿಸಿ ಅದಕ್ಕೆ ಪರ್ಯಾಯವಾಗಿ ರಾಷ್ಟ್ರೀಯ ಹುಲಿ ಪ್ರಾಧಿಕಾರವನ್ನು ಸ್ಥಾಪಿಸಿತು.

ತದನಂತರ ಹುಲಿ ಗಣತಿಗೆ ವೈಜ್ಞಾನಿಕವಾದ ಕ್ಯಾಮೆರಾ ಟ್ರ್ಯಾಪ್ ವಿಧಾನವನ್ನು ಬಳಸಿ ಹುಲಿಗಳ ಎಣಿಕೆ ಮಾಡಲಾಯಿತು, ಹೆಚ್ಚಿನ ಪ್ರದೇಶಗಳನ್ನು ವನ್ಯಜೀವಿಧಾಮ ಮತ್ತು ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಗೆ ಸೇರಿಸಲಾಯಿತು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗೆ ಹೆಚ್ಚಿನ ತರಬೇತಿ ಮತ್ತು ಆಧುನಿಕ ಸಲಕರಣೆಗಳನ್ನು ಒದಗಿಸಲಾಯಿತು. ಅದಲ್ಲದೆ ಅರಣ್ಯದಲ್ಲಿ ನೇರವಾಗಿ ಗಸ್ತು ತಿರುಗಿ ಅರಣ್ಯ ರಕ್ಷಣೆ ಮಾಡುವ ಕೆಳ ಹಂತದ ಸಿಬ್ಬಂದಿಯ ಶ್ರಮದ ಕಾರಣದಿಂದಾಗಿ ನಾವು ಇತ್ತೀಚಿಗೆ ಹುಲಿಗಳ ಸಂಖ್ಯೆಯಲ್ಲಿ ಏರಿಕೆಯನ್ನು ಕಾಣುತ್ತಿದ್ದೇವೆ.

ಸರಿ, ಹುಲಿಗಳ ಸಂಖ್ಯೆಯಲ್ಲಿ ಏರಿಕೆಯಾಯಿತು, ಇನ್ನೇನು ಎಲ್ಲ ಸರಿಯಾಯಿತು ಎಂದು ಕೂರಬಹುದೇ? ಖಂಡಿತ ಇಲ್ಲ. ಹುಲಿಗಳು ವಿಶಾಲ ಪ್ರದೇಶದಲ್ಲಿ ಸಂಚರಿಸುವ ಮತ್ತು ತಮ್ಮದೇ ಆದ ವ್ಯಾಪ್ತಿಯನ್ನು ಹೊಂದಿರುವ ಪ್ರಾಣಿಗಳು. ಅದರಲ್ಲೂ ಗಂಡು ಹುಲಿಗಳು ತಮ್ಮ ಪ್ರದೇಶದಲ್ಲಿ ಇತರ ಗಂಡು ಹುಲಿಗಳನ್ನು ಬರಲು ಬಿಡುವುದಿಲ್ಲ; ಅದಕ್ಕಾಗಿ ಹುಲಿಗಳ ನಡುವೆ ಮಾರಣಾಂತಿಕ ಹೋರಾಟಗಳೇ ನಡೆಯುತ್ತವೆ. ಆಗ ವಯಸ್ಸಾದ ಹುಲಿಗಳು ಮತ್ತು ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ ಗಂಡು ಹುಲಿಗಳು ತಮಗಾಗಿ ಬೇರೆ ಪ್ರದೇಶಗಳನ್ನು ಆರಿಸಿಕೊಳ್ಳಬೇಕಾಗಿ ಬರುತ್ತದೆ. ಆಗ ಅವು ಕಾಡಂಚಿನ ಜನವಸತಿ ಪ್ರದೇಶಕ್ಕೆ ಬಂದು ಮಾನವ ಹುಲಿ ಸಂಘರ್ಷಕ್ಕೆ ಕಾರಣವಾಗುತ್ತವೆ. ಮುಂಚೆ ಒಂದಕ್ಕೊಂದು ಹೊಂದಿಕೊಂಡು ಅಖಂಡವಾಗಿದ್ದ ಕಾಡನ್ನು ನಾವು ರಸ್ತೆ, ಆಣೆಕಟ್ಟು ಮತ್ತು ಗಣಿಗಾರಿಕೆ ಮುಂತಾದ ಅಭಿವೃದ್ಧಿ ಯೋಜನೆಗಳಿಗಾಗಿ ಛಿದ್ರೀಕರಿಸಿ, ಸಣ್ಣಸಣ್ಣ ದ್ವೀಪಗಳನ್ನಾಗಿಸಿದ್ದೇವೆ; ಇದು ಪ್ರಾಣಿಗಳ ಸಂಚಾರ ಮತ್ತು ಆಂತರಿಕ ವಲಸೆಗೆ ಅಡ್ಡಿಯಾಗಿದೆ. ಹೀಗಾಗಿ ಕರ್ನಾಟಕದ ಬಂಡೀಪುರ ಮತ್ತು ನಾಗರಹೊಳೆ ಸಂರಕ್ಷಿತ ಪ್ರದೇಶದ ಸುತ್ತ, ಉತ್ತರ ಭಾರತದ ಕಾರ್ಬೆಟ್ ಮತ್ತು ಪಿಲಿಭಿತ್ ಹುಲಿ ಸಂರಕ್ಷಿತ ಪ್ರದೇಶ ಮತ್ತು ಬಂಗಾಲದ ಸುಂದರ್‌ಬನ್ ಕಾಡಿನ ಅಂಚಿನಲ್ಲಿ ಮಾನವ ಹುಲಿ ಸಂಘರ್ಷ ಗಣನೀಯವಾಗಿ ಏರಿದೆ.

ನಾವು ಕೇವಲ ಹುಲಿಗಳ ಸಂಖ್ಯೆಯಲ್ಲಿನ ಏರಿಕೆಯನ್ನು ತೋರಿಸಿ ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವ ಬದಲು, ಹುಲಿಗಳನ್ನು ಒಳಗೊಂಡು ಒಟ್ಟಾರೆ ಪರಿಸರ ವ್ಯವಸ್ಥೆ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಒಂದು ದೀರ್ಘಾವಧಿಯ ಯೋಜನೆಯನ್ನು ರೂಪಿಸುವ ಅಗತ್ಯವಿದೆ. ಇದು ಈಗಾಗಲೇ ಛಿದ್ರಗೊಂಡ ಅರಣ್ಯಗಳ ಜೋಡಣೆ, ಪರಿಸರ ಸೂಕ್ಷ್ಮ ವಲಯದ ಘೋಷಣೆ, ಈಗಾಗಲೇ ಇರುವ ವನ್ಯಜೀವಿಗಳ ವಲಸೆ ಹಾದಿಗಳು ಮತ್ತು ಕಾರಿಡಾರ್‌ಗಳ ರಕ್ಷಣೆ ಮುಂತಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇದು ಕೇವಲ ವನ್ಯಜೀವಿಗಳ ರಕ್ಷೆಣೆಗೆ ಮಾತ್ರವಲ್ಲ, ನಮ್ಮ ಮುಂದಿನ ಭವಿಷ್ಯದ ದೃಷ್ಟಿಯಿಂದಲೂ ತುರ್ತಾಗಿ ಮಾಡಬೇಕಾದ ಕೆಲಸ. ಇಲ್ಲಿ ನಾವು ನೈಸರ್ಗಿಕ ಭೂಪ್ರದೇಶಗಳನ್ನು ಮತ್ತು ಅದರ ಸುತ್ತ ಬದುಕು ಕಟ್ಟಿಕೊಂಡ ಜನರ ಹಿತಾಸಕ್ತಿಯನ್ನೂ ಗಮನಿಸಿ, ಲಕ್ಷಾಂತರ ವರ್ಷಗಳಿಂದ ಬೆಳೆದು ಬಂದ ಪರಿಸರ ವ್ಯವಸ್ಥೆ ಮುಂದೆಯೂ ಕೂಡ ಉಳಿಯುವಂತೆ ಸಮಗ್ರವಾದ ಕ್ರಿಯಾಯೋಜನೆಯನ್ನು ರೂಪಿಸಲೇಬೇಕಾಗಿದೆ. ಇಲ್ಲವಾದರೆ ಇಲ್ಲಿ ವನ್ಯಜೀವಿಗಳಿಗೂ ನೆಮ್ಮದಿಯಿಲ್ಲ ಮತ್ತು ಅದರ ಸುತ್ತ ಬದುಕುವ ಜನರಿಗೂ ನೆಮ್ಮದಿಯಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈಗಾಗಲೇ ಅಂತಹ ಪರಿಣಾಮಗಳನ್ನು ನೋಡಿದ್ದೇವೆ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...