Homeಮುಖಪುಟಭಿಲ್ ಸಮುದಾಯ ಬೆಳೆಸಿದ ಬಾಓಬಾಬ್ ಮರಗಳು

ಭಿಲ್ ಸಮುದಾಯ ಬೆಳೆಸಿದ ಬಾಓಬಾಬ್ ಮರಗಳು

- Advertisement -
- Advertisement -

ಬೃಹದಾಕಾರವಾಗಿ ಬೆಳೆಯುವ ಬಾಓಬಾಬ್ ಅಥವಾ ಕನ್ನಡದಲ್ಲಿ ದೊಡ್ಡ ಹುಣಸೆ, ಆನೆ ಹುಣಸೆ ಎಂದು ಕರೆಯಲ್ಪಡುವ ಮರಗಳು ತಮ್ಮ ವಿಚಿತ್ರವಾದ ಆಕಾರದಿಂದ ಎಲ್ಲರ ಗಮನವನ್ನೂ ಸೆಳೆಯುತ್ತವೆ. ಆಗಾಗ ಪತ್ರಿಕೆಗಳ ಲೇಖನಗಳಲ್ಲಿ ಅಥವಾ ಸಾಕ್ಷ್ಯಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಈ ಮರಗಳು ಮತ್ತೆ ಸುದ್ದಿಯಲ್ಲಿವೆ. ಮಧ್ಯಪ್ರದೇಶದ ಭಿಲ್ ಬುಡಕಟ್ಟು ಜನರು ವಾಸವಿರುವ ಮಂಡು ಎಂಬ ಊರು ಬಹುಶಃ ಭಾರತದಲ್ಲಿಯೇ ಅತಿ ಹೆಚ್ಚು ಬಾಓಬಾಬ್ ಮರಗಳನ್ನು ಹೊಂದಿದ ಪ್ರದೇಶವಾಗಿದೆ. ಈ ಪ್ರದೇಶದಿಂದ ಹನ್ನೊಂದು ಬಾಓಬಾಬ್ ಮರಗಳನ್ನು ಹೈದರಾಬಾದಿನ ಒಂದು ಸಸ್ಯಶಾಸ್ತ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗುತ್ತಿತ್ತು. ಆ ಉದ್ಯಾನವು, ’ಈ ಮರಗಳನ್ನು ಸಂರಕ್ಷಿಸಬೇಕಾಗಿದೆ ಹಾಗಾಗಿ ಅವುಗಳನ್ನು ಕಳುಹಿಸಿಕೊಡಿ’ ಎಂದು ಮಧ್ಯಪ್ರದೇಶದ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿತ್ತು. ಅದರ ಅಂಗವಾಗಿಯೇ ಈ ಕಾರ್ಯಾಚರಣೆ ನಡೆಯುತ್ತಿತ್ತು. ಶತಮಾನಗಳಿಂದ ಈ ಮರಗಳ ಜೊತೆಗೇ ಸಹಜೀವನ ನಡೆಸಿರುವ ಭಿಲ್ ಬುಡಕಟ್ಟು ಜನ, ಈ ಹಠಾತ್ ಸ್ಥಳಾಂತರದಿಂದ ಸಹಜವಾಗಿಯೇ ಕೋಪಗೊಂಡಿದ್ದರು. ಯಾರಾದರೂ ಮರಗಳನ್ನು ಸಂರಕ್ಷಿಸುವದಿದ್ದರೆ ಅವುಗಳ ಸಸಿಗಳನ್ನು ತೆಗೆದುಕೊಂಡು ಹೋಗುತ್ತಾರೆ, ಆದರೆ ಈ ದೊಡ್ಡ ಮರಗಳನ್ನು ತೆಗೆದುಕೊಂಡು ಹೋಗುವ ಉದ್ದೇಶವಾದರೂ ಏನು ಎಂಬುದು ಅವರ ಪ್ರಶ್ನೆಯಾಗಿತ್ತು, ಅಲ್ಲದೆ, ತಲೆಮಾರುಗಳಿಂದ ಈ ಮರಗಳ ಜೊತೆಯೇ ಬದುಕಿ ಬಂದಿರುವ ತಮಗೆ, ಮುಂಬರುವ ದಿನಗಳಲ್ಲಿ ಎಲ್ಲಿ ಇವುಗಳ ಮೇಲಿನ ಹಕ್ಕು ತಪ್ಪಿಹೋಗುವುದೋ ಎಂಬ ಭಯವೂ ಕಾರಣವಿದ್ದಿತು. ಕಡೆಗೆ ಸರ್ಕಾರಿ ಅಧಿಕಾರಿಗಳು ಜನರನ್ನು ಶಾಂತಗೊಳಿಸಿ ಅವರಿಗೂ ಅನುಕೂಲವಾಗುವಂತೆ ಈ ಮರಗಳಿಗೆ ಭೌಗೋಳಿಕ ಸೂಚಿಯನ್ನು ಅಥವಾ ಜಿಯಾಗ್ರಫಿಕಲ್ ಇಂಡಿಕೇಷನ್(ಜಿಐ) ಟ್ಯಾಗ್‌ಅನ್ನು ಕೊಡಲು ಪ್ರಯತ್ನಿಸುವುದಾಗಿ ಹೇಳಿತು. ಸಾವಿರಾರು ವರ್ಷಗಳಿಂದ ನಾವು ರಕ್ಷಿಸಿಕೊಂಡು ಬಂದಿರುವ ಈ ಮರಗಳಿಗೆ ಜಿಐ ಟ್ಯಾಗ್‌ನ ಹಂಗು ಈಗೇಕೆ ಎಂಬ ಪ್ರಶ್ನೆಯೂ ಜನರಲ್ಲಿ ಮೂಡದಿರಲಿಲ್ಲ. ಜಿಐ ಟ್ಯಾಗ್‌ಅನ್ನು ಯಾವುದೇ ಪ್ರದೇಶದ ವಿಶೇಷ ಉತ್ಪನ್ನ, ತಿನಿಸು ಅಥವಾ ಸ್ಥಳೀಯವಾಗಿ ಬೆಳೆಯುವ ಸಸ್ಯ ಅಥವಾ ಬೆಳೆಗಳಿಗೆ ಕೊಡಲಾಗುತ್ತದೆ. ಉದಾಹರಣೆಗೆ ಕರ್ನಾಟಕದ ಬ್ಯಾಡಗಿ ಮೆಣಸಿನಕಾಯಿ, ಮೊಳಕಾಲ್ಮೂರು ಸೀರೆ, ಧಾರವಾಡ ಪೇಢಾ, ಚನ್ನಪಟ್ಟಣದ ಗೊಂಬೆ, ನಂಜನಗೂಡಿನ ರಸಬಾಳೆ ಮತ್ತು ಮೈಸೂರು ಸಿಲ್ಕ್ ಮುಂತಾದವಕ್ಕೆ ಜಿಐ ಟ್ಯಾಗ್ ಕೊಡಲಾಗಿದೆ. ಇದರಿಂದಾಗಿ ಆಯಾ ಉತ್ಪನ್ನಕ್ಕೆ ಮಾನ್ಯತೆಯು ದೊರಕಿ ಅದರ ಮಾರುಕಟ್ಟೆಯೂ ವಿಸ್ತರಿಸುತ್ತದೆ ಮತ್ತು ನಕಲಿಯ ವಿರುದ್ಧ ರಕ್ಷಣೆಯೂ ದೊರೆಯುತ್ತದೆ. ಆದರೆ ಭಾರತದ ಮೂಲದ್ದೇ ಅಲ್ಲದ ಮತ್ತು ಭಾರತದ ಇತರೆಡೆಗಳಲ್ಲಿಯೂ ಇರುವ ಈ ಮರಗಳಿಗೆ ಹೇಗೆ ಜಿಐ ಪಡೆಯುತ್ತಾರೆ ಎಂಬುದೂ ಸೂಕ್ತ ಪ್ರಶ್ನೆಯೇ ಆಗಿದೆ.

ಈ ಬಾಓಬಾಬ್ ಮರಗಳು ನಮ್ಮ ಕರ್ನಾಟಕದಲ್ಲಿಯೂ ಇವೆ. ಮೊದಲು ಸವಣೂರಿನ ಇವುಗಳದ್ದೇ ಹೆಸರಿನ ದೊಡ್ಡಹುಣಸೆ ಮಠದ ಆವರಣದಲ್ಲಿರುವ ಮೂರೇ ಮರಗಳು ಮಾತ್ರ ರಾಜ್ಯದಲ್ಲಿವೆ ಎಂದು ತಿಳಿಯಲಾಗಿತ್ತು; ಆದರೆ ಇವು ಬೆಂಗಳೂರಿನ ಲಾಲ್‌ಬಾಗ್ ಒಳಗೊಂಡಂತೆ ನಾಡಿನ ಬೇರೆ ಪ್ರದೇಶದಲ್ಲಿಯೂ ಇವೆ. ನಾನು ಕೆಲ ವರ್ಷಗಳ ಹಿಂದೆ ನನ್ನ ತಂದೆಯ ಜೊತೆ ಬೆಳಗಾವಿ ಜಿಲ್ಲೆಯ ಗಡಿ ಭಾಗದ ಒಂದು ಹಳ್ಳಿಗೆ ಭೇಟಿ ನೀಡಿದ್ದೆ. ಅಲ್ಲಿ ದೊಡ್ಡಹುಣಸೆ ಮರ ಇದೆ ಎಂದು ಪರಿಚಿತರೊಬ್ಬರಿಂದ ತಿಳಿದ ಸುದ್ದಿಯೇ ಈ ಭೇಟಿಗೆ ಕಾರಣವಾಗಿತ್ತು. ಆ ಮರವು ಸವಣೂರಿನ ಮರದಷ್ಟು ದೊಡ್ಡದಲ್ಲದಿದ್ದರೂ ಸುಮಾರು 42 ಅಡಿಗಳಷ್ಟು ಸುತ್ತಳತೆ ಹೊಂದಿದ ದೊಡ್ಡ ಮರವೇ ಆಗಿತ್ತು. ಈ ಮರವಷ್ಟೇ ಅಲ್ಲದೆ ಆ ಊರಿನ ಹೆಸರೂ ಅಚ್ಚರಿದಾಯಕವಾಗಿಯೇ ಇದೆ. ಬೊಳಶ್ಯಾನ ಹಟ್ಟಿ ಎಂಬ ಆ ಊರಿಗೆ ಆ ಹೆಸರು ಬರಲು ಕಾರಣ ಒಬ್ಬ ಸೂಫಿ ಸಂತ ಎಂದು ಹೇಳಲಾಗುತ್ತದೆ. ಶತಮಾನಗಳ ಹಿಂದೆ ಬುಲ್ಲೆಷಾ ಎಂಬ ಸಂತನೇ ಆ ಮರವನ್ನು ನೆಟ್ಟಿದ್ದು ಎಂದು ಹೇಳಲಾಗುತ್ತದೆ. ಈ ಪ್ರತೀತಿಯ ಕುರಿತು ಸಾಕ್ಷಿಯನ್ನು ಹುಡುಕಬೇಕಷ್ಟೆ. ಇದಷ್ಟೇ ಅಲ್ಲದೆ ಬೆಳಗಾವಿ ಜಿಲ್ಲೆಯ ನಿಡಸೋಸಿಯ ವಿರಕ್ತ ಮಠದಲ್ಲಿಯೂ ಬಾಓಬಾಬ್ ಮರವಿದೆ. ಇನ್ನು ಸವಣೂರಿನಲ್ಲಿರುವ ಮರಗಳು ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಮರಗಳಾಗಿವೆ. ಇವು ಸುಮಾರು 18 ಮೀಟರ್ ಸುತ್ತಳತೆ ಹೊಂದಿದ್ದು, ಸಾವಿರಾರು ವರ್ಷದಷ್ಟು ಹಳೆಯವಾಗಿವೆ. ಇವುಗಳು ಭಾರತಕ್ಕೆ ಬಂದದ್ದು ಬಹುಶಃ ಅರಬ್ ವ್ಯಾಪಾರಿಗಳಿಂದಲೇ ಇರಬೇಕು. ನಮ್ಮ ನಾಡಿನ ಮರಗಳಿಗೆ ಸೂಫಿ ಸಂತರ ನಂಟು ಇದ್ದರೆ, ಮಧ್ಯ ಪ್ರದೇಶದಲ್ಲಿ ಇವುಗಳಿಗೆ ಖೋರಾಸಾನಿ ಇಮ್ಲಿ (ಹುಣಸೆ) ಎಂದು ಕರೆಯುತ್ತಾರೆ. ಖೋರಾಸಾನ್ ಎಂಬುದು ಇರಾನಿನ ಒಂದು ಪ್ರದೇಶವಾಗಿದೆ.

ಇದನ್ನೂ ಓದಿ: ವಿಶ್ವ ಭೂಮಿ ದಿನ; ಪ್ರಾಜೆಕ್ಟ್ ಟೈಗರ್: ಹುಲಿ ಸಂರಕ್ಷಣೆಯ ಹಾದಿಯಲ್ಲಿ ಐವತ್ತು ವರ್ಷಗಳು

ಈ ಮರಗಳ ಮೂಲ ಆಫ್ರಿಕಾ ಖಂಡವಾಗಿದ್ದು ಒಟ್ಟು ಒಂಭತ್ತು ಪ್ರಬೇಧಗಳು ಕಂಡುಬರುತ್ತವೆ. ಅದರಲ್ಲಿಯ ಆರು ಪ್ರಬೇಧಗಳು ಮಡಗಾಸ್ಕರ್ ದ್ವೀಪದಲ್ಲಿ ಕಂಡುಬಂದರೆ ಎರಡು ಪ್ರಬೇಧಗಳು ಆಫ್ರಿಕಾದ ಮುಖ್ಯ ಭೂಮಿಯಲ್ಲಿ (mainland) ಕಂಡುಬರುತ್ತವೆ. ಇನ್ನುಳಿದ ಒಂದು ಪ್ರಬೇಧವು ದೂರದ ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ. ಇದು ಅಲ್ಲಿ ಹೇಗೆ ಹೋಯಿತು ಎಂಬುದೇ ಸೋಜಿಗ. ಇದು ಭೂಖಂಡಗಳು ಬೇರ್ಪಟ್ಟಾಗ (continental drift) ಒಂದು ಪ್ರಬೇಧ ಅಲ್ಲಿ ವಿಕಾಸ ಹೊಂದಿರಬಹುದು; ಇಲ್ಲವೇ 70000 ವರ್ಷಗಳ ಹಿಂದೆ ಆಫ್ರಿಕಾದಿಂದ ಉಂಟಾದ ಮಾನವ ವಲಸೆಯ ಕಾರಣದಿಂದಾಗಿಯೂ ಅಲ್ಲಿ ಬಾಓಬಾಬ್ ಮರಗಳು ಪಸರಿಸಿ ಹೊಸ ಪ್ರಬೇಧವಾಗಿ ವಿಕಾಸವಾಗಿರಬಹುದು. ಇವುಗಳಲ್ಲಿ ನಮ್ಮ ದೇಶದಲ್ಲಿ ಕಂಡುಬರುವ ಮರಗಳು adansonia digitata ಎಂಬ ಬಾಓಬಾಬ್ ಮರಗಳ ಪ್ರಬೇಧಕ್ಕೆ ಸೇರಿವೆ. ಇವುಗಳ ಎಲೆಯ ಐದು ಕವಲುಗಳನ್ನು ಹೊಂದಿದ್ದು ಅವು ಕೈನ ಐದು ಬೆರಳುಗಳಂತೆ ಕಾಣುತ್ತವೆ, ಲ್ಯಾಟಿನ್ ಭಾಷೆಯಲ್ಲಿ ಡಿಜಿಟ್ ಅಂದರೆ ಬೆರಳು, ಹಾಗಾಗಿ ಇವಕ್ಕೆ digitata ಎಂಬ ಹೆಸರನ್ನು ಕೊಡಲಾಗಿದೆ.

ಈ ಮರವು ನೈಸರ್ಗಿಕವಾಗಿ ಒಣ ಕುರುಚಲು ಅಥವಾ ಮರುಭೂಮಿ ಪ್ರದೇಶದಲ್ಲಿ ಬೆಳೆಯುತ್ತದೆ. ಈ ಮರ ತನ್ನ ಗಾತ್ರ ಮತ್ತು ಆಕೃತಿಯಿಂದ ಗಮನ ಸೆಳೆಯುವುದು ಮಾತ್ರವಲ್ಲ, ಮರುಭೂಮಿ ಜನರ ಜೀವನಾಡಿಯಾಗಿದೆ. ಈ ಮರವನ್ನು ಜೀವದಾಯಿ ಮರವೆಂದೂ ಕರೆಯುತ್ತಾರೆ. ಇದು ಮಳೆ ಕಡಿಮೆಯಿರುವ ಒಣ ಪ್ರದೇಶದಲ್ಲಿ ಬೆಳೆಯುವದರಿಂದ, ಅಲ್ಲಿ ಮಳೆ ಬಂದ ಸಂದರ್ಭದಲ್ಲಿ ಅದು ತನ್ನ ಕಾಂಡದೊಳಗೆ ಸಾವಿರಾರು ಗ್ಯಾಲನ್‌ಗಳಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಬಿರುಬೇಸಿಗೆಯ ಕಾಲದಲ್ಲಿ ಪ್ರಾಣಿಪಕ್ಷಿಗಳು ಮತ್ತು ಅಲ್ಲಿನ ಜನರು ಈ ನೀರನ್ನು ಉಪಯೋಗಿಸುತ್ತಾರೆ. ಇದೇ ತರಹದ ವ್ಯವಸ್ಥೆಯನ್ನು ನಮ್ಮದೇ ನಾಡಿನ ಮತ್ತಿ ಮರವೂ ಮಾಡಿಕೊಂಡಿದೆ. ನಮ್ಮ ನಾಡಿನ ಸೋಲಿಗರು ಮತ್ತಿತರ ಮೂಲನಿವಾಸಿಗಳಿಗೆ ಇದು ಚಿರಪರಿಚಿತ. ಅಷ್ಟೇ ಅಲ್ಲದೆ ಈ ಮರದ ಹಣ್ಣು ಪೋಷಕಾಂಶಗಳ ಆಗರ. ಈ ಹಣ್ಣಿನಲ್ಲಿ ಇರುವಷ್ಟು ವಿಟಮಿನ್ ’ಸಿ’, ಬೇರೆ ಯಾವ ಹಣ್ಣಿನಲ್ಲಿಯೂ ಇಲ್ಲ. ಮುಂಚೆ ಸಮುದ್ರಯಾನ ಮಾಡುವವರು ವಿಟಮಿನ್ ’ಸಿ’ನ ಕೊರತೆಯಿಂದ ಉಂಟಾಗುವ ಸ್ಕರ್ವಿ ರೋಗದಿಂದ ರಕ್ಷಿಸಿಕೊಳ್ಳಲು ಈ ಮರದ ಹಣ್ಣನ್ನೇ ಉಪಯೋಗಿಸುತ್ತಿದ್ದರು. ಬಹುಶಃ ಇದೇ ಕಾರಣಕ್ಕೆ ಸಮುದ್ರಯಾನಿಗಳು ಈ ಮರದ ಬೀಜವನ್ನು ಎಲ್ಲೆಡೆ ಪ್ರಸಾರ ಮಾಡಿರಬಹುದು. ಇನ್ನೊಂದು ವಿಷಯವನ್ನು ಗಮನಿಸುವುದಾದರೆ ಎಲ್ಲೆಲ್ಲಿ ಗುಲಾಮರ ವ್ಯಾಪಾರ ನಡೆಯುತ್ತಿತ್ತೋ ಆ ಎಲ್ಲ ಮಾರ್ಗಗಳಲ್ಲಿ ಮತ್ತು ದೇಶಗಳಲ್ಲಿ ಈ ಮರಗಳು ಕಂಡುಬರುತ್ತವೆ. ಬಹುಶಃ ನಮ್ಮ ದೇಶದಲ್ಲೂ ಸಿದ್ದಿಗಳ ಆಗಮನ ಮತ್ತು ಈ ಮರಗಳ ಪ್ರಸರಣಕ್ಕೆ ಒಂದಕ್ಕೊಂದು ಸಂಬಂಧವಿದ್ದಿರಬಹುದು. ಈ ಮರಗಳು ಸಾವಿರಾರು ವರ್ಷಗಳ ಇತಿಹಾಸವನ್ನು ತಮ್ಮೊಳಗೆ ಇರಿಸಿಕೊಂಡು ಇನ್ನೂ ನಿಂತಿವೆ. ಇನ್ನು ಇಂತಹ ಮರಗಳ ರಕ್ಷಣೆಯ ಕುರಿತು ಹೇಳಬಹುದಾದರೆ, ಅವುಗಳನ್ನು ನಮ್ಮ ದೇಶದಲ್ಲಿ ಸ್ಮಾರಕ ವೃಕ್ಷವಾಗಿ ಉಳಿಸಿಕೊಳ್ಳಬಹುದು, ಆದರೆ ಬಹುಮುಖ್ಯವಾಗಿ, ಅವುಗಳ ನೈಸರ್ಗಿಕ ಅವಾಸದಲ್ಲಿ ಅವುಗಳ ರಕ್ಷಣೆ ಆಗಬೇಕಿದೆ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಯಚೂರಿನಲ್ಲಿ ದಲಿತರ ಸರಣಿ ಕೊಲೆ: ಸಂತ್ರಸ್ತರ ಮನೆಗೆ ಸಚಿವ ಕೆ.ಎಚ್. ಮುನಿಯಪ್ಪ ಭೇಟಿ

ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ದಲಿತರ ಮೇಲಿನ ಸರಣಿ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳು ಜನಾಕ್ರೋಶಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ...

ಪೆಂಗ್ವಿನ್ ಇಂಡಿಯಾ ಹಿಂದೆ ಸರಿದ ನಂತರ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್’ ಅನ್ನು ಪ್ರಕಟಿಸಲಿರುವ ‘ಹಾರ್ಪರ್‌ಕಾಲಿನ್ಸ್’ 

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಇದೀಗ ಭಾರತದಲ್ಲಿ ಹಾರ್ಪರ್‌ಕಾಲಿನ್ಸ್ ಇಂಡಿಯಾ ಮೂಲಕ ಪ್ರಕಟವಾಗಲಿದೆ. ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ...

ಜೈಲಿನಲ್ಲಿ ಕಂಬಿ ಎಣಿಸುತ್ತಿರುವ 25 ಕ್ರಿಮಿನಲ್‌ಗಳು, ದೆಹಲಿಯ ಜಂತರ್-ಮಂತರ್‌ಗೆ ಬರುಲು ಹೇಗೆ ಸಾಧ? ತನಿಖಾ ವರದಿಯಲ್ಲಿ ಬಯಲಾಯ್ತು ಪೊಲೀಸರ ಕುತಂತ್ರ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ವಿರೋಧಿ ಪ್ರತಿಭಟನೆ ವೇಳೆ ದೆಹಲಿ ಪೊಲೀಸರು ಬಳಸಿದ್ದ ‘ಅಟೋಮೇಟೆಡ್ ಫೇಶಿಯಲ್ ರೆಕಗ್ನಿಷನ್ ಸಿಸ್ಟಮ್’ (AFRS - ಮುಖಚರ್ಯೆ ಗುರುತಿಸುವ ತಂತ್ರಜ್ಞಾನ) ಗಂಭೀರ...

ಪಶ್ಚಿಮ ಬಂಗಾಳ: ವರ್ಷದಲ್ಲಿ 1,000 ಆರ್‌ಎಸ್‌ಎಸ್‌ ಶಾಲೆ: ಶಿಕ್ಷಣ ವ್ಯವಸ್ಥೆಯನ್ನೇ ‘ರಾಷ್ಟ್ರೀಯತಾವಾದಿ’ಗೊಳಿಸುವುದಾಗಿ ಘೋಷಿಸಿದ ಸುವೇಂದು ಅಧಿಕಾರಿ

ಕೋಲ್ಕತ್ತಾ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶೈಕ್ಷಣಿಕ ವಿಭಾಗವಾಗಿರುವ ವಿದ್ಯಾ ಭಾರತಿಯ ಶಾಲೆಗಳ ಸಂಖ್ಯೆಯನ್ನು ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಘೋಷಿಸಿದ್ದಾರೆ. ರಾಜ್ಯದ ಪ್ರತಿಯೊಂದು ಜಿಲ್ಲೆ, ಪುರಸಭೆ...

SIR ನ್ಯಾಯಸಮ್ಮತವಾಗಿಲ್ಲ ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ಆತಂಕ

ಭಾರತೀಯ ಚುನಾವಣಾ ಆಯೋಗವು (ಇಸಿಐ) ದೇಶಾದ್ಯಂತ ಕೈಗೊಂಡಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ಶಾಸನಾತ್ಮಕವಾಗಿ ಕಾನೂನುಬದ್ಧವಾಗಿದ್ದರೂ, ನೈತಿಕವಾಗಿ ನ್ಯಾಯಸಮ್ಮತವಾಗಿಲ್ಲ ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ತೀವ್ರ...

ಜಂತರ್ ಮಂತರ್ ಹಲ್ಲೆ: ‘ತಲೆಬುರುಡೆ ಒಡೆದೆ, ಜೈಲಿಗೆ ಹೋಗಲಿಲ್ಲ; ಕಪಿಲ್ ಮಿಶ್ರಾ ನನ್ನ ಅಣ್ಣ’: ಬಿಜೆಪಿ ಬೆಂಬಲದ ಬಗ್ಗೆ ದಾಳಿ ಆರೋಪಿ ಬಹಿರಂಗ ಹೇಳಿಕೆ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರಿಯ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣ ಇದೀಗ ರಾಜಕೀಯ ವಿವಾದದ ಕೇಂದ್ರವಾಗಿದೆ. ಪ್ರಕರಣದ ಆರೋಪಿಯಾಗಿರುವ ಸ್ವತಃ ಬಲಪಂಥೀಯ ಹಾಗೂ ಹಿಂದೂತ್ವ ಕಾರ್ಯಕರ್ತ...

ದೆಹಲಿ: ‘ಖಾನ್’ ಎಂಬ ಹೆಸರಿನ ಕಾರಣಕ್ಕೆ ಪತ್ರಕರ್ತೆಯರ ಮೇಲೆ ಹಲ್ಲೆ ಆರೋಪ, FIR ದಾಖಲಿಸುವಂತೆ ಸಾಕೇತ್ ಠಾಣೆಯಲ್ಲಿ ಧರಣಿ

ದೆಹಲಿಯ ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯ ಹೊಸ ವಿಭಾಗದ ಉದ್ಘಾಟನಾ ಕಾರ್ಯಕ್ರಮದ ವರದಿಗೆ ತೆರಳಿದ್ದ '4PM ನ್ಯೂಸ್ ನೆಟ್‌ವರ್ಕ್'ನ ಮುಸ್ಲಿಂ ಮಹಿಳಾ ಪತ್ರಕರ್ತೆಯರಾದ ಶಾಹೀನ್ ಖಾನ್ ಮತ್ತು ನಫೀಸಾ ಖಾನ್ ಅವರ ಮೇಲೆ ದಿಲ್ಲಿ...

ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಕ್ಕೆ ದೆಹಲಿ ಪೊಲೀಸರಿಂದ ಬಂಧನ-ಹಲ್ಲೆ: ಇಬ್ಬರು ಪತ್ರಕರ್ತೆಯರ ಆರೋಪ

ಸುದ್ದಿ ಮಾಡುತ್ತಿದ್ದಾಗ ದಕ್ಷಿಣ ದೆಹಲಿಯಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮನ್ನು ವಶಕ್ಕೆ ಪಡೆದು ಥಳಿಸಿದ್ದಾರೆ ಎಂದು ಇಬ್ಬರು ಮುಸ್ಲಿಂ ಸ್ವತಂತ್ರ ಮಹಿಳಾ ಪತ್ರಕರ್ತೆಯರು ಆರೋಪಿಸಿದ್ದಾರೆ. '4 ಪಿಎಮ್ ನ್ಯೂಸ್ ನೆಟ್‌ವರ್ಕ್' (4 PM News...

ತ್ರಿಪುರಾ: ‘ದನ ಕಳ್ಳ’ ಎಂದು, ಖರೀದಿಸಿದ ದನಗಳೊಂದಿಗೆ ಹಿಂತಿರುಗುತ್ತಿದ್ದ ಮುಸ್ಲಿಂ ವ್ಯಾಪಾರಿ ಮೇಲೆ ಗುಂಪು ಹಲ್ಲೆ: 46 ವರ್ಷದ ಜಲೀಲುರ್ ರೆಹಮಾನ್ ಸಾವು

ಅಗರ್ತಲಾ: ಖರೀದಿಸಿದ ಎರಡು ದನಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಮುಸ್ಲಿಂ ದನ ವ್ಯಾಪಾರಿಯೊಬ್ಬರನ್ನು ‘ದನ ಕಳ್ಳ’ ಎಂದು ಆರೋಪಿಸಿ ಗುಂಪೊಂದು ಥಳಿಸಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ತ್ರಿಪುರಾದ ಕಲ್ಯಾಣಪುರ ಪೊಲೀಸ್ ಠಾಣೆ ವ್ಯಾಪ್ತಿಯ...

ಪ್ರಶ್ನಿಸುವವರನ್ನು ‘ದಿಮಾಗಿ ನಕ್ಸಲ್’ ಎಂದು ಕರೆಯುವುದು ಸೂಕ್ಷ್ಮತೆಯಿಲ್ಲದ ನಡವಳಿಕೆ: ಗೀತಾಂಜಲಿ ಅಂಗಮೋ

ಪ್ರಶ್ನೆ ಕೇಳುವ ವ್ಯಕ್ತಿಯನ್ನು ‘ದಿಮಾಗಿ ನಕ್ಸಲ್’ (ಬುದ್ಧಿಜೀವಿ ನಕ್ಸಲರು) ಎಂದು ಕರೆಯುವುದು ಅತ್ಯಂತ ಸೂಕ್ಷ್ಮತೆಯಿಲ್ಲದ ರೀತಿಯಾಗಿದೆ ಎಂದು ಪ್ರಸಿದ್ಧ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ...