Homeಕರ್ನಾಟಕನಮ್ಮ ಸಚಿವರಿವರು; ಮಂಡ್ಯಕ್ಕೊಬ್ಬ ಸಮರ್ಥನಾಯಕ ಎನ್. ಚಲುವರಾಯಸ್ವಾಮಿ

ನಮ್ಮ ಸಚಿವರಿವರು; ಮಂಡ್ಯಕ್ಕೊಬ್ಬ ಸಮರ್ಥನಾಯಕ ಎನ್. ಚಲುವರಾಯಸ್ವಾಮಿ

- Advertisement -
- Advertisement -

ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಕೃಷಿ ಮಂತ್ರಿ ಎನ್. ಚಲುವರಾಯಸ್ವಾಮಿ ಸರಕಾರ ರಚನೆಯಾದ ಒಂದೇ ವಾರಕ್ಕೆ ಸಕ್ಕರೆ ಕಾರ್ಖಾನೆಗೆ ಐವತ್ತು ಕೋಟಿ ಹಣ ಬಿಡುಗಡೆ ಮಾಡಿಸಿ ತಾವೊಬ್ಬ ಸಮರ್ಥ ಮಂತ್ರಿ ಎಂಬ ಭರವಸೆಯನ್ನು ಮೂಡಿಸುವತ್ತ ಮುಂದಡಿಯಿಟ್ಟಿದ್ದಾರೆ!

ಮಂಡ್ಯ ಜಿಲ್ಲಾಪಂಚಾಯ್ತಿಗೆ ಆಯ್ಕೆಯಾಗುವುದರ ಮುಖಾಂತರ ರಾಜಕೀಯ ಪ್ರವೇಶ ಪಡೆದ ಚಲುವರಾಯಸ್ವಾಮಿ ಅಂದು ಜಿಲ್ಲಾ ಮಂತ್ರಿಯಾಗಿದ್ದ ಎಸ್.ಡಿ ಜಯರಾಮರ ಬೆಂಬಲದಿಂದ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರಾಗಿ ನಾಗಮಂಗಲ ಕ್ಷೇತ್ರದ ಕೆಲಸಗಳನ್ನು ಮಾಡುತ್ತ ಜನಪ್ರಿಯತೆ ಗಳಿಸತೊಡಗಿದರು. ಸಹಜವಾಗಿ ಅಂದಿನ ಶಾಸಕರು ಮತ್ತು ಬಿಡಿಎ ಛೇರ್ಮನ್ ಆಗಿದ್ದ ಶಿವರಾಮೇಗೌಡರು ತನ್ನ ಪ್ರತಿಸ್ಪರ್ಧಿಯ ವಿಷಯವಾಗಿ ಹೆಚ್ಚು ಪ್ರಚಾರ ಕೊಡತೊಡಗಿದರು; ಅದಾಗಲೇ ವಕೀಲ ಮತ್ತು ಪತ್ರಕರ್ತ ಗಂಗಾಧರಮೂರ್ತಿ ಕೊಲೆ ಆಪಾದನೆಯಿಂದ ಬಿಡುಗಡೆಯಾಗಿದ್ದ ಶಿವರಾಮೇಗೌಡರು ಹೊಸ ಹುಮ್ಮಸ್ಸಿನಿಂದ ನಾನು ಅಂತಹವನಲ್ಲ ಎಂದು ಸಾಬೀತುಮಾಡುವ ಭರದಲ್ಲಿ ಚಲುವರಾಯಸ್ವಾಮಿಗೇ ಹೆಚ್ಚು ಪ್ರಚಾರಕೊಟ್ಟರು. ಜನಕ್ಕೆ ಚಲುವರಾಯಸ್ವಾಮಿ ಹೇಗಿರಬಹುದೆಂಬ ಕುತೂಹಲ ಜಾಸ್ತಿಯಾಗಿ ತಮ್ಮ ಊರಿನ ಹಬ್ಬ, ಕ್ರೀಡೆ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕರೆಯತೊಡಗಿದರು; ಆಗ ಜನರಿಗೆ ತಮ್ಮ ನಾಯಕನಾಗಲು ಈತನೇ ಸರಿ ಅನ್ನಿಸತೊಡಗಿತು. ಮುಂದೆ 1999ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧಿಸಿ ಶೀವರಾಮೇಗೌಡರ ಎದುರು 16 ಸಾವಿರ ಮತಗಳ ಮುನ್ನಡೆಯಿಂದ ಗೆದ್ದರು. ಆಗ ಕುಮಾರಸ್ವಾಮಿ ದೇವೇಗೌಡರಾದಿಯಾಗಿ ಸೋತು ಹೋಗಿದ್ದರಿಂದ ಚಲುವರಾಯಸ್ವಾಮಿ ಮಂಡ್ಯ ಜಿಲ್ಲೆ ಗುರುತಿಸುವ ನಾಯಕರಾಗಿ ಬೆಳೆಯತೊಡಗಿದ್ದರು.

ವಿರೋಧ ಪಕ್ಷದಲ್ಲಿದ್ದುಕೊಂಡೇ ಎಸ್‌ಎಂ ಕೃಷ್ಣರ ಸರಕಾರದಿಂದ ತಾಲೂಕಿಗೆ ಬೇಕಾದ ಕೆಲಸ ಮಾಡುತ್ತ ಐದು ವರ್ಷ ತುಂಬಿಸಿದಾಗ ಮತ್ತೆ ಚುನಾವಣೆ ಬಂತು. 2004ರಲ್ಲಿ ಮತ್ತೆ ಗೆದ್ದ ಚಲುವರಾಯಸ್ವಾಮಿ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಆರೋಗ್ಯ ಸಚಿವರಾದರು. ಆಗ ಮಂಡ್ಯ ಜಿಲ್ಲೆಗೆ ಮೆಡಿಕಲ್ ಕಾಲೇಜು ತಂದುದಲ್ಲದೆ ನಾಗಮಂಗಲದ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಿ ಸುಮಾರು ಐದು ಊರುಗಳಿಗೆ ಪ್ರಾಥಮಿಕ ಆರೋಗ್ಯದ ಘಟಕಗಳನ್ನು ತಂದರು. ಇದರ ಜೊತೆಗೆ ರಾಜ್ಯದ ಇನ್ನಿತರ ಕಡೆಯ ಜವಾಬ್ದಾರಿಯನ್ನು ನೋಡಬೇಕಿದ್ದುದರಿಂದ ಆರೋಗ್ಯ ಇಲಾಖೆಯನ್ನು ಸುಸ್ಥಿತಿಗೆ ತರುವ ಸಮಯದಲ್ಲಿ ಸಮ್ಮಿಶ್ರ ಸರಕಾರವೇ ಹೈಜಾಕಾದಂತಾಗಿ ಧರ್ಮಸಿಂಗ್ ಮನೆಗೆ ಹೋದರು. ಬಹುಶಃ ಕರ್ನಾಟಕದ ರಾಜಕಾರಣ ತನ್ನ ಪಥವನ್ನು ಬದಲಿಸಿಕೊಂಡು ಪತನದ ಹಾದಿ ಹಿಡಿಯಲು ಇದೇ ಕಾರಣ. ಕುಮಾರಸ್ವಾಮಿಯವರು ಬಿಜೆಪಿಗಳೊಟ್ಟಿಗೆ ಸರಕಾರ ಮಾಡಿದರು.

ದೇವೇಗೌಡ

ಆಗ ಕುಮಾರಸ್ವಾಮಿ ಸುತ್ತ ಸಮರ್ಥರ ದಂಡೇ ನೆರೆದಿತ್ತು; ಜಮೀರ್ ಅಹಮದ್, ಬಾಲಕೃಷ್ಣ, ಚಲುವರಾಯಸ್ವಾಮಿ ಹೀಗೆ; ಇವರೆಲ್ಲಾ ತಮ್ಮ ಮಗನನ್ನು ಮೀರಿಸುವ ನಾಯಕರಾಗಿ ಹೊರಹೊಮ್ಮುತ್ತಿದ್ದಂತೆ ಕಂಡಿದ್ದರಿಂದ ಆತಂಕಗೊಂಡ ದೇವೇಗೌಡರು ಮಗನೊಂದಿಗೆ ರಾಜಿಯಾಗಿ ಅಧಿಕಾರದ ಸೂತ್ರ ಕೈಗೆ ತೆಗೆದುಕೊಳ್ಳತೊಡಗಿದರು. ಚಲುವರಾಯಸ್ವಾಮಿ ಆಗ ಸಾರಿಗೆ ಸಚಿವರಾಗಿದ್ದರು. ಆಗಾಗಲೇ ನಾಗಮಂಗಲಕ್ಕೆ ಕೆಎಸ್‌ಆರ್‌ಟಿಸಿ ಡಿಪೋ ತಂದು ಆರ್‌ಟಿಓ ಆಫೀಸ್ ತೆರೆದಿದ್ದರು ಮತ್ತು ಬಸ್ಸನ್ನೇ ನೋಡದಂತಹ ಹಳ್ಳಿಗಳಿಗೂ ಬಸ್ಸು ಹೋಗಿ ಬರುವಂತೆ ಮಾಡಿದ್ದರು. ಕೆ.ಇ.ಬಿಯ ಇ.ಇ ಆಫೀಸು (ಎಕ್ಸೆಕ್ಯುಟಿವ್ ಇಂಜಿನಿಯರ್ ಆಫೀಸು) ಪಾಂಡವಪುರದಲ್ಲಿತ್ತು. ಅದನ್ನು ನಾಗಮಂಗಲಕ್ಕೂ ತಂದರು.

ಆಗ ಅಸಿಸ್ಟೆಂಟ್ ಕಮೀಷನರ್ ಕಚೇರಿ ಪಾಂಡವಪುರದಲ್ಲಿದ್ದು ನಾಗಮಂಗಲ ಪ್ರಾಂತ್ಯದ ಜನ ತಮ್ಮ ವ್ಯಾಜ್ಯಗಳ ಇತ್ಯರ್ಥಕ್ಕೆ ಪಾಂಡವಪುರಕ್ಕೆ ಅಲೆಯಬೇಕಾಗಿತ್ತು. ಚಲುವರಾಯಸ್ವಾಮಿಯವರು ಎ.ಸಿ. ಕಚೇರಿಯೇ ವಾರಕ್ಕೊಮ್ಮೆ ನಾಗಮಂಗಲಕ್ಕೆ ಬಂದು ಕೆಲಸ ಮಾಡುವಂತೆ ಮಾಡಿದರು. ಅಲ್ಲದೆ ತಾಲೂಕಿನ ದೊಡ್ಡ ಊರುಗಳಿಗೆ ಹೈಸ್ಕೂಲು ತಂದರು. ಅಷ್ಟರಲ್ಲಿ ಇವರುಗಳ ಇಲಾಖೆಯ ಕೆಲಸಗಳಿಗೆ ಅಡೆತಡೆಗಳು ಶುರುವಾದವು. ಗೌಡರಿಗೆ ಚಲುವರಾಯಸ್ವಾಮಿ ಎಲ್ಲೋ ತಮ್ಮ ಮಗನನ್ನೇ ಒವರ್‌ಟೇಕ್ ಮಾಡುವಂತೆ ಕಂಡಿತು; ಹಾಗಾಗಿ ದೇವೇಗೌಡರ ಅಭಿಮಾನಿಗಳು ಮತ್ತು ರೇವಣ್ಣನ ಹಿಂಬಾಲಕರು ಮುಂದಿನ 2008ರ ಚುನಾವಣೆಯಲ್ಲಿ ಚಲುವರಾಯಸ್ವಾಮಿ ವಿರುದ್ಧ ಕೆಲಸ ಮಾಡಿದ್ದರು ಎಂಬ ಮಾತು ಜನಜನಿತವಾಗಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಹಿಂದೆ ಮುಂದೆ ಪಹರೆ ವಾಹನದ ನಡುವೆ ಸೈರನ್ ಮೊಳಗಿಸಿಕೊಂಡು ಹೋಗುವ ಮಂತ್ರಿ ಬಗ್ಗೆ ನಿಷ್ಕಾರಣದ ತಾತ್ಸಾರ ಬೆಳೆದುಕೊಂಡಿದ್ದು ಒಂದು ಕಾರಣವಾಗಿ ಆ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಸೋತರು. ಇಷ್ಟೊಂದು ಕೆಲಸ ಮಾಡಿಯೂ ಜನ ಸೋಲಿಸಿದರಲ್ಲಾ ಎಂಬ ನಿರಾಶೆಗೆ ಚಲುವರಾಯಸ್ವಾಮಿ ಒಳಗಾಗಿದ್ದರು. ಬೇರೆ ಕಾರಣಗಳೂ ಇದ್ದವು. ಆ ಕಾರಣಗಳು ಮುಂದೆ ಬೃಹದಾಕಾರವಾಗಿ ಎದ್ದುನಿಂತು ದೇವೇಗೌಡರು ನಾಗಮಂಗಲ ಕ್ಷೇತ್ರದ ದೇವಸ್ಥಾನ ಉದ್ಘಾಟನೆ, ತಿಥಿ, ಮದುವೆಗೆಲ್ಲಾ ಬಂದು ಚಲುವರಾಯಸ್ವಾಮಿಯನ್ನು ಮೂಲೆಗುಂಪು ಮಾಡಲು ಶತಾಯಗತಾಯ ಪ್ರಯತ್ನಿಸಿದರು. ಆಗ ಬೆಂಗಳೂರಿನ ಎಚ್‌ಎಎಲ್ ಕಾರ್ಖಾನೆ ನೌಕರರ ವಸತಿ ನಿರ್ಮಾಣದ ಸೊಸೈಟಿಯಲ್ಲಿ ಹೆಸರು ಮಾಡಿದ್ದ ಸುರೇಶ್‌ಗೌಡರು ಬಂದು ಚಲುವರಾಯಸ್ವಾಮಿ ಎದುರು ನಿಂತು ಗೆದ್ದರು. 2013ರಲ್ಲಿ ಚಲುವರಾಯಸ್ವಾಮಿ ಮತ್ತೆ ಜೆಡಿಎಸ್‌ನಿಂದ ಗೆದ್ದರೂ ಆಗ ಕಾಂಗ್ರೆಸ್ ಸರ್ಕಾರ ಬಂತು. ಮುಂದೆ ಅದುಲುಬದಲಾಗಿ ಸುರೇಶ್‌ಗೌಡ ಜನತಾದಳಕ್ಕೆ ಹೋದರೆ ಚಲುವರಾಯಸ್ವಾಮಿ ಕಾಂಗ್ರೆಸ್‌ಗೆ ಹೋದರು.

ಇದನ್ನೂ ಓದಿ: ನಮ್ಮ ಸಚಿವರಿವರು; ಸರಳ ರಾಜಕಾರಣಿ ರಹೀಂ ಖಾನ್ ಪೌರಾಡಳಿತ ಸಚಿವ ಮತ್ತು ಹಜ್ ಮುಖ್ಯಸ್ಥ

ನಂತರ 2018ರ ಚುನಾವಣೆಯಲ್ಲಿ ಸುರೇಶ್‌ಗೌಡರು ದಾಖಲೆಯ ನಲವತ್ತೇಳುವರೆ ಸಾವಿರ ಲೀಡನಲ್ಲಿ ಗೆದ್ದರು. ಚಲುವರಾಯಸ್ವಾಮಿ ಗೌಡರಿಗೆ ದ್ರೋಹ ಬಗೆದು ಕಾಂಗ್ರೆಸ್ಸಿಗೆ ಹೋದರೆಂದು ದೇವೇಗೌಡರ ಕಡೆಯವರು ಮತದಾರರನ್ನು ಕೆರಳಿಸಿ ಗೆಲುವು ಸಾಧಿಸಿದ್ದರು. ಮುಂದೆ ಸಮ್ಮಿಶ್ರ ಸರಕಾರ ಬಂತು; 80 ಸೀಟು ಗೆದ್ದಿದ್ದ ಕಾಂಗ್ರೆಸ್ ಮೂವತ್ತು ಚಿಲ್ಲರೆ ಸೀಟು ಗೆದ್ದಿದ್ದ ದಳಕ್ಕೆ ಸಪೋರ್ಟಟು ಮಾಡಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿತ್ತು. ಚಲುವರಾಯಸ್ವಾಮಿಯವರನ್ನು ಮೂಲೆಗುಂಪು ಮಾಡಿ ಮಂಡ್ಯವನ್ನು ಕೈಗೆ ತೆಗೆದುಕೊಳ್ಳುವ ಪ್ಲಾನ್ ಮಾಡಿದ ದೇವೇಗೌಡರು ಮತ್ತು ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿಯವರನ್ನು ಲೋಕಸಭಾ ಅಭ್ಯರ್ಥಿಯನ್ನಾಗಿಸಿದರು. ಅವರಗೂ ಓಟು ಕೇಳುವಂತಹ ಸ್ಥಿತಿ ಚಲುವರಾಯಸ್ವಾಮಿಗೆ ಬಂತು. ಆದರೆ ಮಂಡ್ಯದ ಕಾಂಗ್ರೆಸ್ಸಿಗರು ಮೈತ್ರಿ ಅಭ್ಯರ್ಥಿಯಾದ ನಿಖಿಲ್‌ಗೆ ಕೆಲಸ ಮಾಡುವುದರ ಬದಲು ಸುಮಲತಾಗೆ ವರ್ಕ್ ಮಾಡಿದ್ದರಿಂದ ನಿಖಿಲ್ ಒಂದೂಕಾಲು ಲಕ್ಷದ ಅಂತರದಿಂದ ಸೋತರು. ಇದರಲ್ಲಿ ಚಲುವರಾಯಸ್ವಾಮಿ ಶ್ರಮವೂ ಇತ್ತು.

ಸುರೇಶ್‌ಗೌಡ

ಮುಂದೆ ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ನಾಗಮಂಗಲದ ಮುಖಾಂತರ ಹಾದುಹೋಗುವಾಗ ಅದರ ಜವಾಬ್ದಾರಿ ಚಲುವರಾಯಸ್ವಾಮಿ ಮೇಲೆ ಬಿತ್ತು. ಈ ಐತಿಹಾಸಿಕ ಘಟನೆಯನ್ನು ಸಮರ್ಥವಾಗಿ ನಿಭಾಯಿಸಿದ ಚಲುವರಾಯಸ್ವಾಮಿ ರಾಹುಲಗಾಂಧಿಗೆ ಹತ್ತಿರವಾದರು.

ಈ ಬಾರಿ ಚಲುವರಾಯಸ್ವಾಮಿ ಎದುರಿಸಿದ ನಾಗಮಂಗಲದ ಚುನಾವಣೆ ಹಿಂದಿಗಿಂತಲೂ ಬಿರುಸಾಗಿತ್ತು. ಗೆಲ್ಲುವ ಎಲ್ಲ ಸೂಚನೆಗಳಿದ್ದರೂ ಕಡೆ ಗಳಿಗೆಯಲ್ಲಿ ನಾಗಮಂಗಲಕ್ಕೆ ಬಂದು ರೋಡ್‌ಶೋ ಮಾಡಿದ ದೇವೇಗೌಡರು, ಚಲುವರಾಯಸ್ವಾಮಿಯನ್ನು ಸೋಲಿಸಲು ಕರೆಕೊಟ್ಟಿದ್ದಲ್ಲದೆ, ಗದ್ಗರಿತವಾಗಿ ಕೇಳಿಕೊಂಡರು. ಅವರ ಸಭೆಗೆ ಸೇರಿದ್ದ ಜನಸ್ತೋಮ ನೋಡಿದ ಜನರು ಸುರೇಶ್‌ಗೌಡರ ಗೆಲುವಿನ ಬಗ್ಗೆ ಯಾವ ಸಂಶಯವನ್ನು ಇಟ್ಟುಕೊಳ್ಳದೆ ಮನಸ್ಸಿಗೆ ಬಂದಷ್ಟು ಬೆಟ್ ಕಟ್ಟಿ ಸೋತುಹೋದರು. ಬೆಳ್ಳೂರು, ನಾಗಮಂಗಲ ಮತ್ತು ಕೊಪ್ಪ ಹೋಬಳಿ ಚಲುವರಾಯಸ್ವಾಮಿಯವರ ಕೈಹಿಡಿದಿದ್ದರಿಂದ ಅವರು ನಾಲ್ಕುವರೆ ಸಾವಿರ ವೋಟುಗಳ ಅಂತರದಲ್ಲಿ ಗೆದ್ದರು. ಈಗ ಎಲ್ಲ ಅಡೆತಡೆಗಳನ್ನು ನಿಭಾಯಿಸಿಕೊಂಡು ಗೆದ್ದು ಸಚಿವರಾಗಿರುವ ಮಂಡ್ಯ ಜಿಲ್ಲೆಯ ನಾಯಕರಾದ ಚಲುವರಾಯಸ್ವಾಮಿಯನ್ನು ಮಂಡ್ಯದ ಕರ್ನಾಟಕ ಸಂಘ ಸನ್ಮಾನಿಸಿದೆ. ಕೃಷಿ ಸಮಾಜದಿಂದ ಬಂದ ಭೈರೇಗೌಡರ ನಂತರ ಚಲುವರಾಯಸ್ವಾಮಿ ಆ ಇಲಾಖೆಗೆ ಜೀವ ನೀಡಬೇಕಾಗಿದೆ. ನಾಗಮಂಗಲದ ಶಾಸಕರಾಗಿದ್ದ ಚಲುವರಾಯಸ್ವಾಮಿ ಈಗ ಕೃಷಿಮಂತ್ರಿ ಹಾಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವುದರಿಂದ, ಮಂಡ್ಯದಲ್ಲಿ ನಿರ್ವಹಣೆಯಿಲ್ಲದೆ ಹಾಳುಬಿದ್ದಿರುವ ರೈತ ಸಭಾಂಗಣ, ಕಲಾಮಂದಿರ ಇತ್ಯಾದಿ ಸಾಂಸ್ಕೃತಿಕ ವಲಯಗಳ ಪುನಶ್ಚೇತನಕ್ಕೆ ಕೆಲಸ ಮಾಡಿ, ಮಂಡ್ಯವನ್ನು ಅದರ ಗತಕಾಲದ ವೈಭವಕ್ಕೆ ಮರಳಿ ತರಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...