Homeಮುಖಪುಟಮಣಿಪುರ; ರಾಷ್ಟ್ರೀಯ ಏಕತೆಯ ಸವಾಲಿಗೆ ರಾಷ್ಟ್ರೀಯತೆ ಕಣ್‌ಮುಚ್ಚಿರುವುದೇಕೆ?

ಮಣಿಪುರ; ರಾಷ್ಟ್ರೀಯ ಏಕತೆಯ ಸವಾಲಿಗೆ ರಾಷ್ಟ್ರೀಯತೆ ಕಣ್‌ಮುಚ್ಚಿರುವುದೇಕೆ?

- Advertisement -
- Advertisement -

ಕುಟುಂಬದ ಮುಖ್ಯಸ್ಥನ ಮೊದಲ ಹೊಣೆಗಾರಿಕೆ, ತನ್ನ ಕುಟುಂಬವನ್ನು ಒಗ್ಗಟ್ಟಾಗಿ ಇಟ್ಟುಕೊಳ್ಳುವುದು ಮತ್ತು ಪಕ್ಕದ ಮನೆಯವರನ್ನು ವಿಚಾರಿಸಿಕೊಳ್ಳುವುದು ಹಾಗೂ ಓಣಿಯಲ್ಲಿ ಡಂಗುರ ಬಾರಿಸುವ ಸರದಿ ನಂತರವೇ ಬರುತ್ತೆ. ಇದೇ ರೀತಿಯಲ್ಲಿ ದೇಶದ ನಾಯಕತ್ವದ ಮೊದಲ ಹೊಣೆಗಾರಿಕೆ, ದೇಶದ ಎಲ್ಲಾ ಪ್ರದೇಶಗಳ, ವರ್ಗಗಳ ಹಾಗೂ ಸಮುದಾಯಗಳ ಏಕತೆಯನ್ನು ಖಚಿತಪಡಿಸುವುದು, ವೈಮನಸ್ಸು ಹುಟ್ಟುಕೊಳ್ಳಲು ಬಿಡದೇ, ಅಕಸ್ಮಾತ್ ಪರಸ್ಪರ ಆತಂಕ ಅಥವಾ ಜಗಳಗಳ ಮೊದಲ ಚಿಹ್ನೆ ಕಾಣಿಸಿದರೆ ಕೂಡಲೇ ಅದನ್ನು ಸರಿಪಡಿಸುವುದು. ಟಿವಿ ಸ್ಟುಡಿಯೋಗಳಲ್ಲಿ ಕುಳಿತುಕೊಂಡು ನೆರೆಯ ದೇಶದ ಮೇಲೆ ಗಾಳಿಯ ತಲವಾರನ್ನು ಝಳಪಿಸುವುದು ರಾಷ್ಟ್ರೀಯತೆಯ ಕುರುಹಲ್ಲ. ನಿಜವಾದ ರಾಷ್ಟ್ರೀಯತೆ ಸದ್ದುಗದ್ದಲವಿಲ್ಲದೇ ರಾಷ್ಟ್ರೀಯ ಏಕತೆಯಲ್ಲಿ ಕಂಡುಬಂದ ಎಲ್ಲಾ ಬಿರುಕುಗಳನ್ನು ಮುಚ್ಚುವುದು, ಎಲ್ಲಾ ವಿವಾದಗಳಲ್ಲಿ ನ್ಯಾಯ ಮತ್ತು ಸಮನ್ವಯ ಸಾಧಿಸುವುದು, ದೇಶವನ್ನು ತನ್ನೊಳಗಿನಿಂದಲೇ ಗಟ್ಟಿಗೊಳಿಸುವುದು. ರಾಷ್ಟ್ರದ ರೂಪದಲ್ಲಿರುವ ಮನೆಯಲ್ಲಿ ಹತ್ತಿಕೊಂಡ ಬೆಂಕಿಯನ್ನು ನೋಡಿ ಮುಖ ಬೇರೆಡೆ ತಿರುಗಿಸುವುದು ಅಥವಾ ಅದರಲ್ಲಿ ಪೆಟ್ರೋಲ್ ಚಿಮುಕಿಸುವುದು- ಅದು ಮತ್ತೇನೇ ಆಗಿರಲಿ ರಾಷ್ಟ್ರೀಯತೆಯಂತೂ ಆಗಲು ಸಾಧ್ಯವಿಲ್ಲ.

ಇಂದು ಮಣಿಪುರವು ಭಾರತೀಯ ರಾಷ್ಟ್ರೀಯತೆಯನ್ನು ಪರೀಕ್ಷೆಗೆ ಒಡ್ಡುತ್ತಿದೆ. ಭಾರತದ ಈ ಮಣಿ ತುಂಡಾಗುತ್ತಿದೆ. ಭಾರತ ಮಾತೆಯ 120 ಮಕ್ಕಳು ಇನ್ನೊಮ್ಮೆ ಏಳಲಾರದಂತೆ ಮಣ್ಣಿನಲ್ಲಿ ಮಲಗಿಬಿಟ್ಟಿದ್ದಾರೆ. ಸುಮಾರು 45,000 ಮನೆ ಕಳೆದುಕೊಂಡಿದ್ದಾರೆ. ಎರಡು ತಿಂಗಳಿಗಿಂತಲೂ ಹೆಚ್ಚು ಸಮಯವಾಗಿದ್ದರೂ ರಕ್ತ ಚಿಮ್ಮುವುದು ನಿಂತಿಲ್ಲ. ಪರಸ್ಪರ ಶತ್ರುಗಳಾಗಿ ರಕ್ತ ಹರಿಸಲು ನಿಂತಿರುವ ಸಮುದಾಯಗಳು ಸರಕಾರಿ ಶಸ್ತ್ರಾಗಾರಗಳನ್ನು ಲೂಟಿ ಮಾಡಿ, ಆಟೋಮ್ಯಾಟಿಕ್ ರೈಫಲ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆಗಳಲ್ಲಿ ತಿರುಗಾಡುತ್ತಿದ್ದಾರೆ. ಡ್ರೋನ್‌ಗಳಿಂದ ತಮ್ಮ ವಿರೋಧಿ ಬಣಗಳ ಜನರ ಅಡಗುತಾಣಗಳನ್ನು ಹುಡುಕುತ್ತಿದ್ದಾರೆ, ದಾಳಿ ಮಾಡುತ್ತಿದ್ದಾರೆ. ಕೇವಲ ಪೊಲೀಸರಲ್ಲ, ಸೈನ್ಯವೂ ಹತಾಶವಾಗಿದೆ. ಆದರೆ ಈಶಾನ್ಯ ಭಾರತದ ಈ ದುರಂತದ ಬಗ್ಗೆ ದೇಶ ಕಣ್ಮುಚ್ಚಿಕೊಂಡು ಕುಳಿತಿದೆ. ಉಮ್ಮೀದ್ ಫಾಜಲಿ ಅವರ ಮಾತುಗಳಲ್ಲಿ ಹೇಳಬೇಕೆಂದರೆ, “ಗರ್ ಕಯಾಮತ್ ಯೆ ನಹೀಂ ತೊ ಕಯಾಮತ್ ಕ್ಯಾ ಹೈ/ ಶಹರ್ ಜಲತಾ ರಹಾ ಔರ್ ಲೋಗ್ ನ ಘರ್ ಸೆ ನಿಕಲೆ”- “ಇದು ಪ್ರಳಯವಲ್ಲ ಎಂದಾದರೆ ಮತ್ಯಾವುದು ಪ್ರಳಯ/ನಗರ ಉರಿಯುತ್ತಲಿತ್ತು ಹಾಗೂ ಜನರು ಮನೆಯಿಂದ ಹೊರಬರಲಿಲ್ಲ”.

ನರೇಂದ್ರ ಮೋದಿ

ದೇಶಕ್ಕೆ ಈ ಸತ್ಯದ ಅರಿವಿಲ್ಲದೇ ಇರಬಹುದು ಆದರೆ ಇದನ್ನು ನಮ್ಮ ಪ್ರಧಾನಮಂತ್ರಿಗಳಿಂದ ಮರೆಮಾಚಲು ಸಾಧ್ಯವಿಲ್ಲ. ದುರದೃಷ್ಟವೆಂದರೆ ಕಳೆದ ಎರಡು ತಿಂಗಳಿಂದ ನರೇಂದ್ರ ಮೋದಿ ಮಣಿಪುರದ ಸ್ಥಿತಿಯ ಬಗ್ಗೆ ಒಂದು ಮಾತನ್ನೂ ಹೇಳಿಲ್ಲ. ಶಾಂತಿಗಾಗಿ ಒಂದು ಮನವಿಯನ್ನೂ ಮಾಡಿಲ್ಲ. ಎರಡು ಸಾಂತ್ವನದ ಮಾತುಗಳನ್ನೂ ಆಡಿಲ್ಲ. ರಾಷ್ಟ್ರಕ್ಕೆ ಸಂಬೋಧಿಸಿಯೂ ಇದರ ಬಗ್ಗೆ ಮಾತಾಡಿಲ್ಲ. ಅವರ ಮನ್ ಕಿ ಬಾತ್‌ನಲ್ಲಿಯೂ ಮಣಿಪುರದ ಬಗ್ಗೆ ಒಂದು ಪದ ಬಂದಿಲ್ಲ. ಮಣಿಪುರದ ನೋವನ್ನು ಹೇಳಲು ಬಂದ ಪ್ರತಿನಿಧಿಮಂಡಲದೊಂದಿಗೆ ಎರಡು ನಿಮಿಷ ಮಾತನಾಡಲೂ ಪುರುಸೊತ್ತಿಲ್ಲ. ತಮ್ಮ ಪಕ್ಷದ ಮುಖ್ಯಮಂತ್ರಿ ಹಾಗೂ ಈ ಸಮಸ್ಯೆಯ ಮೂಲವಾಗಿರುವ ಬಿರೇನ್ ಸಿಂಗ್‌ರನ್ನು ತೆಗೆದುಹಾಕುವ ಯಾವ ಸಂಕೇತವನ್ನೂ ನೀಡಿಲ್ಲ. ಎರಡು ತಿಂಗಳಿಂದ ಈ ದುರಂತವನ್ನು ಬಗೆಹರಿಸುವಲ್ಲಿ ವಿಫಲವಾದ ದೇಶದ ಗೃಹಸಚಿವರಿಗೆ ಯಾವ ಸಂದೇಶವನ್ನೂ-ಸೂಚನೆಯನ್ನೂ ಕೊಟ್ಟಿಲ್ಲ. ಹಾಗೂ ಈ ಅರಾಜಕತೆಯನ್ನು ನಿಲ್ಲಿಸಲು ಕೇಂದ್ರ ಸರಕಾರಕ್ಕಿರಬೇಕಾದ ಸಾಂವಿಧಾನಿಕ ಹೊಣೆಗಾರಿಕೆ ಯಾವ ಅರಿವೂ ಇದ್ದಂತಿಲ್ಲ. ಒಂದು ವೇಳೆ ನೀವು ಅಥವಾ ನಾನು ಇಂದು ಮಣಿಪುರದ ವಾಸಿಗಳಾಗಿದ್ದರೆ ಖಂಡಿತವಾಗಿಯೂ ದೇಶದ ಪ್ರಧಾನಮಂತ್ರಿ ಎಲ್ಲಿದ್ದಾರೆ ಎಂದು ಹುಡುಕುತ್ತಿದ್ದೆವು. ಅಥವಾ ಈ ದೇಶ ನನ್ನದೇ ಎಂಬ ಪ್ರಶ್ನೆಯನ್ನು ಈ ಪ್ರಕ್ಷುಬ್ದ ಕ್ಷಣಗಳಲ್ಲಿ ಕೇಳುತ್ತಿದ್ದೆವು.

ಇದನ್ನೂ ಓದಿ: ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ: ಗುಂಡಿನ ಚಕಮಕಿಯಲ್ಲಿ ಮೈತಿ ಸಮುದಾಯದ ಇಬ್ಬರ ಸಾವು

ರಾಷ್ಟ್ರೀಯ ಏಕತೆಯ ಬಗ್ಗೆ ಪ್ರಧಾನಮಂತ್ರಿಯವರ ನಿರ್ಲಕ್ಷ್ಯಕ್ಕೆ ಇದು ಮೊದಲನೆಯ ಉದಾಹರಣೆಯೇನೂ ಅಲ್ಲ. ಕಳೆದ ಒಂಬತ್ತು ವರ್ಷಗಳಲ್ಲಿ ಯಾವಾಗೆಲ್ಲ ದೇಶ ಯಾವುದೇ ಭಾಗದಲ್ಲಿ ಇಂತಹ ಸವಾಲುಗಳು ಹುಟ್ಟಿಕೊಂಡವೋ, ಆಗೆಲ್ಲ ಪ್ರಧಾನಮಂತ್ರಿಯವರು ದೇಶದ ಮುಖ್ಯಸ್ಥನ ಜವಾಬ್ದಾರಿ ವಹಿಸುವ ಬದಲಿಗೆ ಮೌನ ತಳೆದಿದ್ದಾರೆ. ಪಂಜಾಬ್ ಮತ್ತು ಹರಿಯಾಣ ನಡುವೆ ಜಲವಿವಾದ ಎದುರಾದಾಗ, ಅದನ್ನು ಬಗೆಹರಿಸುವ ಯಾವ ಪ್ರಯತ್ನವನ್ನೂ ಪ್ರಧಾನಮಂತ್ರಿ ಮಾಡಲಿಲ್ಲ. ತನ್ನನ್ನು ತಾನು ರಾಷ್ಟ್ರೀಯವಾದಿ ಎಂದು ಘೋಷಿಸುವ ಅವರ ಪಕ್ಷವು ಹರಿಯಾಣದಲ್ಲಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸದಲ್ಲಿ ತೊಡಗಿದ್ದಾಗ, ಅತ್ತ ಪಂಜಾಬಿನ ವಿಧಾನಸಭೆಯಲ್ಲಿ ಕುಳಿತ ಅವರ ಶಾಸಕರು ಪಂಜಾಬಿನ ಜನರನ್ನು ಓಲೈಸುವುದಕ್ಕಾಗಿ ತದ್ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಿದ್ದರು. ಪ್ರಧಾನಮಂತ್ರಿಯವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಟ್ಟಿಗೆ ಕೂರಿಸಿ ಈ ವಿಷಯವನ್ನು ಬಗೆಹರಿಸುವ ಪ್ರಯತ್ನವನ್ನೂ ಮಾಡಲಿಲ್ಲ ಹಾಗೂ ತಮ್ಮ ಪಕ್ಷಕ್ಕೆ ಬರಬಹುದಾದ ನಾಲ್ಕೈದು ವೋಟುಗಳ ಆಸೆ ಬಿಟ್ಟು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಲ್ಲಿ ಕೆಲಸ ಮಾಡಬೇಕು ಎಂಬ ಸಲಹೆಯನ್ನೂ ನೀಡಲಿಲ್ಲ. ಕರ್ನಾಟಕ ಮತ್ತು ತಮಿಳನಾಡು ನಡುವಿನ ಕಾವೇರಿ ಜಲವಿವಾದದ ಬಗ್ಗೆಯೂ ಇದೇ ರೀತಿಯ ರಾಜಕೀಯದ ಆಟವನ್ನು ಆಡಲಾಗುತ್ತಿದೆ. ಪ್ರಧಾನಮಂತ್ರಿಗೆ ತಮಿಳನಾಡಿನ ಸೆಂಗೋಲ್‌ಅನ್ನು ರಾಷ್ಟ್ರೀಯ ಪ್ರತೀಕವನ್ನಾಗಿಸುವುದರಲ್ಲಿ ಆಸಕ್ತಿ ಇದೆ ಆದರೆ ತಮಿಳನಾಡಿನ ರೈತರ ಕುಂದುಕೊರತೆಗಳನ್ನು ನೀಗಿಸಲು ಕರ್ನಾಟಕದಲ್ಲಿನ ತಮ್ಮದೇ ಪಕ್ಷದ ಮುಖ್ಯಮಂತ್ರಿಯೊಂದಿಗೆ ಮಾತುಕತೆ ಮಾಡಲು ಯಾವ ಆಸಕ್ತಿಯೂ ಇದ್ದಿಲ್ಲ. ಹರಿಯಾಣದಲ್ಲಿ ಜಾತೀಯ ಹಿಂಸೆ ಆದಾಗ, ಅಲ್ಲಿನ ಅನೇಕ ನಗರಗಳು ಹತ್ತಿಕೊಂಡು ಉರಿದವು, ಸರಕಾರ ಮೌನವಾಗಿತ್ತು, ಪ್ರಧಾನಮಂತ್ರಿ ಏನನ್ನೂ ಹೇಳಲಿಲ್ಲ. ಅವರ ಪಕ್ಷದ ನಾಯಕರು ಈ ಹಿಂಸೆಯಲ್ಲಿ ಮತಗಳ ಲಾಭ ನಷ್ಟದ ತಕ್ಕಡಿ ತೂಗುತ್ತಿದ್ದರು; ಆದರೆ ಪ್ರಧಾನಮಂತ್ರಿಯವರು ಮಾತ್ರ ಈ ಯಾವುದೇ ಒಂದು ಬಿರುಕನ್ನು ಸರಿಪಡಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ.

ರಾಜೀವ್ ಗಾಂಧಿ

ಆದರೆ, ಒಂದು ವೇಳೆ ಮನೆಗೆ ಬೆಂಕಿ ಬಿದ್ದಿದೆ ಹಾಗೂ ಅದರಲ್ಲಿ ಬೇಳೆ ಬೇಯಿಸಿಕೊಳ್ಳುವ ಅವಕಾಶ ಇದೆ ಎಂದಾಗ ಆ ಅವಕಾಶವನ್ನು ಮಾತ್ರ ನರೇಂದ್ರ ಮೋದಿಯವರು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಪ್ರಶ್ನೆ ಏನೆಂದರೆ, ಇದೆಂತಹ ರಾಷ್ಟ್ರೀಯತೆ, ರಾಷ್ಟ್ರವು ಒಡೆದುಹೋಗುತ್ತಿದ್ದರೂ ಅದರ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ವಹಿಸುವ ರಾಷ್ಟ್ರೀಯತೆ ಎಂತಹದ್ದು?

ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಪ್ರಧಾನಮಂತ್ರಿಯಾಗಿದ್ದ ಅವಧಿಯನ್ನು ನೆನಪಿಸುವುದು ಸೂಕ್ತ. 1985ರಲ್ಲಿ ರಾಜೀವ್ ಗಾಂಧಿ ಪ್ರಧಾನಮಂತ್ರಿಯಾದಾಗ ಅವರ ವಯಸ್ಸು, ಅವರ ರಾಜಕೀಯ ತಿಳಿವಳಿಕೆ ಹಾಗೂ ಅನುಭವವು ನರೇಂದ್ರ ಮೋದಿಯವರಿಗೆ ಹೋಲಿಸಿದರೆ ಬಹಳ ಕಡಿಮೆ ಎನ್ನಬಹುದು. ಸಿಖ್ ನರಮೇಧದ ಕಳಂಕವೂ ಅವರ ಪಕ್ಷದ ಮೇಲಿತ್ತು. ಆದರೆ ಈ ಹೊಸ ಮತ್ತು ಅನನುಭವಿ ಪ್ರಧಾನಿಯು ಪಂಜಾಬಿನಲ್ಲಿ ಸಂತ ಲೋಂಗೊವಾಲ್‌ರೊಂದಿಗೆ ಒಪ್ಪಂದ ಮಾಡಿಕೊಂಡರು. ಆಸ್ಸಾಂನಲ್ಲಿ ಏಳು ವರ್ಷಗಳಿಂದ ನಡೆಯುತ್ತಿದ್ದ ಆಂದೋಲನವನ್ನು ಮುಕ್ತಾಯಗೊಳಿಸಿದರು, ತಮ್ಮ ಪಕ್ಷದ ಚುನಾವಣಾ ಸೋಲನ್ನು ಒಪ್ಪಿಕೊಂಡರು. ಮಿಜೋರಾಂನಲ್ಲಂತೂ ಅವರು ತಮ್ಮ ಪಕ್ಷದ ಸರಕಾರವನ್ನು ತೆಗೆದುಹಾಕಿ ವಿದ್ರೋಹಿ ಲಾಲಡೆಂಗ್‌ಅನ್ನು ಮುಖ್ಯಮಂತ್ರಿಯಾಗಿ ನೇಮಿಸಿದರು ಹಾಗೂ ಆ ಗಡಿಪ್ರದೇಶದ ರಾಜ್ಯದಲ್ಲಿ ದೀರ್ಘಕಾಲೀನ ಶಾಂತಿಗೆ ದಾರಿಮಾಡಿಕೊಟ್ಟರು. ತಮ್ಮ ಹೋಲಿಕೆಯನ್ನು ಜವಾಹರಲಾಲ್ ನೆಹರು ಅವರೊಂದಿಗೆ ಮಾಡಲು ಉತ್ಸುಕರಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈ ಹೋಲಿಕೆ ಬಹುಶಃ ಇಷ್ಟವಾಗದೇ ಇರಬಹುದು ಆದರೆ ರಾಷ್ಟ್ರೀಯ ಏಕತೆಗಾಗಿ ರಾಜಕೀಯ ರಿಸ್ಕ್‌ಗಳನ್ನು ತೆಗೆದುಕೊಂಡು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವ ವಿಷಯದಲ್ಲಿ ಸದ್ಯಕ್ಕೆ ರಾಜೀವ್ ಗಾಂಧಿಗಿಂತ ಅವರು ಹಿಂದಿದ್ದಾರೆ. ಈಗ ಅವರು ದೇಶಕ್ಕೆ ಮರಳಿದ್ದು ದೇಶದ ಮುಖ್ಯಸ್ಥನಿಗೆ ಇರಬೇಕಾದ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವ ಕೆಲಸದ ಆರಂಭವನ್ನು ಮಣಿಪುರದಿಂದ ಮಾಡುವವರು ಎಂದು ಆಶಿಸೋಣ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...

ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : ಚಾಲಕ, ಕಂಡಕ್ಟರ್ ಬಂಧನ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಪ್ರಕರಣವನ್ನು ನೆನಪಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ಲೀಪರ್‌ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. indiatoday.in ವರದಿಯ ಪ್ರಕಾರ, ಈ ಘಟನೆಯು ಆಗಸ್ಟ್ 4ರ...

ಜಗತ್ತಿನ ಪ್ರತಿಯೊಬ್ಬರಿಗೂ ಲ್ಯಾಪ್‌ಟಾಪ್ ಕೊಳ್ಳುವಷ್ಟು ಕಪ್ಪು ಹಣ ಪ್ರಪಂಚದಲ್ಲಿದೆ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್

ಅಕ್ರಮ ಹಣ ವರ್ಗಾವಣೆ (Money Laundering) ಮತ್ತು 'ಡಿಜಿಟಲ್ ಅರೆಸ್ಟ್' ನಂತಹ ಆನ್‌ಲೈನ್ ವಂಚನೆಗಳ ಪ್ರಮಾಣದ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ರೀತಿಯ...

ಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣ ಬಹಿರಂಗಪಡಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪೆಟ್ರೋಲ್‌ನಲ್ಲಿ ಬೆರೆಸಲಾಗುವ ಎಥನಾಲ್ ಪ್ರಮಾಣವನ್ನು ಕಡ್ಡಾಯವಾಗಿ ನಮೂದಿಸಬೇಕು ಮತ್ತು ವಾಹನಗಳಿಗೆ ಎಥನಾಲ್ ಮಿಶ್ರಿತ ಇಂಧನದ ಹೊಂದಾಣಿಕೆಯ ಬಗ್ಗೆ ಹೆಚ್ಚಿನ ಪಾರದರ್ಶಕತೆ ತರಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆ...

ದೆಹಲಿ| ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದ ಎಂಸಿಡಿ

ದೆಹಲಿ ಹೈಕೋರ್ಟ್ ನಿರ್ದೇಶನದಂತೆ, ಮೊಘಲರ ಕಾಲದ ಐತಿಹಾಸಿಕ ಜಮಾ ಮಸೀದಿ ಸುತ್ತಮುತ್ತಲಿನ ಅಕ್ರಮ ನಿರ್ಮಾಣಗಳನ್ನು ಸಮೀಕ್ಷೆ ಮಾಡಿ, ಒತ್ತುವರಿಯನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೋಮವಾರ (ಆ.31) ಪ್ರಾರಂಭಿಸಿದೆ...

ವೆನೆಜುವೆಲಾ ಮತ್ತೆ ಎದ್ದು ನಿಲ್ಲಲಿದೆ: ಬಂಧನದಲ್ಲಿರುವ ವೆನೆಜುವೆಲಾ ಮಾಜಿ ಅಧ್ಯಕ್ಷ ಮಡುರೊ ಮೊದಲ ಫೋಟೋ ಹಂಚಿಕೆ

ಜನವರಿಯಲ್ಲಿ ಅಮೆರಿಕ ಪಡೆಗಳಿಂದ ಬಂಧನಕ್ಕೊಳಗಾಗಿದ್ದ ವೆನೆಜುವೆಲಾದ ಮಾಜಿ ಅಧ್ಯಕ್ಷ ನಿಕೋಲಸ್ ಮಡುರೊ, ಅಮೆರಿಕದ ಬಂಧನ ಕೇಂದ್ರದಿಂದ ತಮ್ಮ ಎರಡು ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಬಂಧನದ ಬಳಿಕ ಮಡುರೊ ಅವರ ಫೋಟೋಗಳು ಹೊರಬಂದಿರುವುದು...

‘ಮಹಿಳೆಯರು ಆಭರಣದಂತೆ ಮನೆಯಲ್ಲೇ ಇರಬೇಕು’ ಮುಸ್ಲಿಂ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ...

ಹಲ್ದ್ವಾನಿ ‘ಶುದ್ಧೀಕರಣ’ ವಿವಾದ : ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರ್‍ಯಾಲಿ ನಡೆದ ಸ್ಥಳದಲ್ಲಿ ಬಿಜೆಪಿ ಬೆಂಬಲಿಗರು 'ಶುದ್ಧೀಕರಣ' ನಡೆಸಿದ ವಿವಾದ ಹೊಸ ರಾಜಕೀಯ ಮತ್ತು ಕಾನೂನು ತಿರುವು ಪಡೆದುಕೊಂಡಿದೆ. ಜಾತಿ ನಿಂದನೆಗೆ ಸಂಬಂಧಿಸಿದಂತೆ...

ಜೈಲಿನಲ್ಲಿದ್ದ KPSC ಅಧ್ಯಕ್ಷರ ಭೇಟಿಯಾಗಿದ್ದೇಕೆ HDK? ಪ್ರಿಯಾಂಕ್ ಖರ್ಗೆ ಪ್ರಶ್ನೆ

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ಅವರು ತಾರ್ಕಿಕ ಸ್ಪಷ್ಟನೆ ನೀಡುವ ಬದಲು, ಜಾರಿಕೊಳ್ಳುವ ರೀತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ ಎಂದು...

ನೇಪಾಳ: ಶಿಕ್ಷಕನ ಸಮಯಪ್ರಜ್ಞೆಯಿಂದ ಉಳಿಯಿತು 1643 ಮಕ್ಕಳ ಪ್ರಾಣ

ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 700ರ ಗಡಿ ದಾಟಿದೆ. 2,000ಕ್ಕೂ ಹೆಚ್ಚು ಜನರು ಇಂದಿಗೂ ನಾಪತ್ತೆಯಾಗಿದ್ದು, ರಕ್ಷಣಾ ಪಡೆಗಳು ಅವಿಶ್ರಾಂತವಾಗಿ ಶೋಧ ಕಾರ್ಯ ನಡೆಸುತ್ತಿವೆ. ಪ್ರಕೃತಿ ತನ್ನ...