Homeಕರ್ನಾಟಕಧರ್ಮಸ್ಥಳದ ನಿರ್ಭಯಾ ಪ್ರಕರಣ: ಧರ್ಮ ಸಂಸ್ಥಾನದ ಪಾರುಪತ್ಯಗಾರ ವೀರೇಂದ್ರ ಹೆಗ್ಗಡೆ ಹತಾಶರಾದರೆ?

ಧರ್ಮಸ್ಥಳದ ನಿರ್ಭಯಾ ಪ್ರಕರಣ: ಧರ್ಮ ಸಂಸ್ಥಾನದ ಪಾರುಪತ್ಯಗಾರ ವೀರೇಂದ್ರ ಹೆಗ್ಗಡೆ ಹತಾಶರಾದರೆ?

ಎಲ್ಲೆಲ್ಲೋ ಆಗುವ ಅನ್ಯಾಯ-ಅನಾಚಾರದ ಬಗ್ಗೆ ಸಹಾನುಭೂತಿಯ-ಮಾನವೀತೆಯ ವ್ಯಾಖ್ಯಾನ ಮಾಡುವ “ಖಾವಂದರು” ತಮ್ಮ ನರೆಮನೆಯಲ್ಲೇ ಆಗಿರುವ ದುರಂತದ ಬಗ್ಗೆ ಏಕೆ ದಿವ್ಯ ಮೌನದಲ್ಲಿದ್ದಾರೆ?

- Advertisement -
- Advertisement -

“ನಮ್ಮ ಅಭಿಮಾನಿಗಳು ಏನನ್ನು ಮಾಡಲಿಕ್ಕೂ ಸಿದ್ಧರಿದ್ಧಾರೆ…. ಆದರೆ ನಾವೇ ಬೇಡವೆಂದು ತಡೆದಿದ್ದೇವೆ….”- ಇದು ಧರ್ಮಸ್ಥಳ ದೇವಳದ “ಧರ್ಮ ದಂಡ”ಧಾರಿ- ಬಿಜೆಪಿ ರಾಜ್ಯಸಭಾ ಸಂಸದ ವೀರೇಂದ್ರ ಹೆಗ್ಗಡೆ, ಅಮಾಯಕ ಹುಡುಗಿ ಸೌಜನ್ಯ ಗೌಡ ಅತ್ಯಾಚಾರ-ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಿದ “ಪ್ರವಚನ”ದ ಒಂದು ಅಣಿಮುತ್ತು!

ಸತ್ಯ-ಧರ್ಮ-ನ್ಯಾಯದ ಧರ್ಮಸ್ಥಳ ಮಂಜುನಾಥ ದೇವರ ಅಪರಾವತಾರವೆಂದೇ ಅಪಾರ ಭಕ್ತಾದಿಗಳು ನಂಬಿರುವ “ಧರ್ಮಾಧಿಕಾರಿ” ವೀರೇಂದ್ರ ಹೆಗ್ಗಡೆ ಬಾಯಿಂದ ಕಳಪೆ ರಾಜಕೀಯ ಪುಢಾರಿ ಶೈಲಿಯಲ್ಲಿ ಮಾತುಗಳು ಹೊರಬರುತ್ತಿರುವುದು ಸಾಮಾಜಿಕ-ಧಾರ್ಮಿಕ-ರಾಜಕೀಯ ವಲಯದಲ್ಲಿ ಅನೇಕ ಅಚ್ಚರಿ-ಅನುಮಾನದ ಚರ್ಚೆಗಳನ್ನು ಹುಟ್ಟುಹಾಕಿಬಿಟ್ಟಿದೆ. ಬರ್ಬರ ಬಲಾತ್ಕಾರ ಮತ್ತು ಹತ್ಯೆಗೀಡಾಗಿದ್ದ ಅಮಾಯಕ ಹುಡುಗಿ ಸೌಜನ್ಯ ಗೌಡ ಪ್ರಕರಣದಲ್ಲಿ ಸಿಬಿಐ ಫಿಕ್ಸ್ ಮಾಡಿದ್ದ ಸಂತೋಷ್ ರಾವ್ ನಿರ್ದೋಷಿಯೆಂದು ತೀರ್ಪು ಬಂದ ಬಳಿಕ ಭುಗಿಲೆದ್ದಿರುವ ಮರುತನಿಖೆ ಒತ್ತಾಯದ ಆಕ್ರೋಶ, ಕೂಗು, ಪ್ರತಿಭಟನೆಗಳ ಹಿನ್ನಲೆಯಲ್ಲಿ ದೈವಾಂಶ ಸಂಭೂತ ಇಮೇಜಿನ ವೀರೇಂದ್ರ ಹಗ್ಗಡೆ ನಡೆ-ನುಡಿಗೆ ಮಹತ್ವ ಬಂದಿದೆ.

ಸುಮಾರು 11 ವರ್ಷದ ಹಿಂದೆ ಧರ್ಮಸ್ಥಳದ ಬಳಿಯ ಪಾಂಗಾಳದ ಒಕ್ಕಲಿಗ ಸಮುದಾಯದ ಹದಿನೇಳು ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಗೌಡ ಮೃತ ಶರೀರ ರೇಪ್-ಮರ್ಡರ್ ಆಗಿರುವ ಸ್ಥಿತಿಯಲ್ಲಿ ದೊರೆತಿತ್ತು. ಆರಂಭದಿಂದಲೂ ಈ ಅಮಾನುಷ ಪಾತಕದ ತನಿಖೆ ಅದ್ಯಾಕೋ ಪಾರದರ್ಶಕ-ಪ್ರಾಮಾಣಿಕವಾಗಿ ನಡೆಯುತ್ತಿಲ್ಲ; ತನಿಖಾಧಿಕಾರಿ ಪೊಲೀಸರ ಮತ್ತು ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರ ವರ್ತನೆ “ಯಾರನ್ನೋ” ರಕ್ಷಿಸಲು ಹುನ್ನಾರದಲ್ಲಿ ತೊಡಗಿರುವಂತಿದೆ ಎಂಬ ಶಂಕೆ ಆರಂಭದಲ್ಲೇ ಸಾರ್ವಜನಿಕರಲ್ಲಿ ಹಟ್ಟುಹಾಕಿತ್ತು. ಧರ್ಮಸ್ಥಳದಲ್ಲಿ ಅಂಡಲೆಯುತ್ತಿದ್ದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಸಂತೋಷ್ ರಾವ್ ಎಂಬ ಯಾತ್ರಿಕನನ್ನು ಅತ್ಯಾಚಾರಿಯೆಂದು ಕೇಸುಹಾಕಿ 11 ವರ್ಷ ಯಮಯಾತನೆಕೊಟ್ಟು ಕಾಡಲಾಗಿತ್ತು. ಸೌಜನ್ಯಳನ್ನು ಹೆತ್ತವರೇ ಈತ ಆರೋಪಿಯಾಗಲು ಸಾಧ್ಯವಿಲ್ಲ; ನಮಗೆ ಧರ್ಮಸ್ಥಳದ ದೇಗುಲದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಪರಿವಾರದ ಮೂರ್ನಾಲ್ಕು ತರುಣರ ಮೇಲೆ ಅನುಮಾವಿದೆ ಎಂದು ಹೇಳಿದರೂ ಪೊಲೀಸರು ಪ್ರಜ್ಞಾಪೂರ್ವಕವಾಗಿ ಕಡೆಗಣಿಸಿದ್ದರು. ಈಗ ಒಂದು ತಿಂಗಳ ಹಿಂದೆ ಸಿಬಿಐ ನ್ಯಾಯಾಲಯವೇ ಸಂತೋಷ್ ರಾವ್ ನಿರಪರಾಧಿ ಎಂದು ತೀರ್ಪು ಕೊಟ್ಟಿದೆ.

ಸಂತೋಷ್ ರಾವ್ ನಿರ್ದೋಷಿಯಾದರೆ ಪಾತಕಿಗಳು ಯಾರು? ಲೋಕಲ್ ಪೊಲೀಸರ, ಸಿಓಡಿ-ಸಿಬಿಐನಂಥ ಉನ್ನತ ಪೊಲೀಸ್ ಏಜೆನ್ಸಿಗಳಿಂದಲೂ ಏಕೆ ಅಪರಾಧಿಗಳನ್ನು ಹಿಡಿಯಲು ಸಾಧ್ಯವಾಗಗಿಲ್ಲ? ಸಿಒಡಿ ಮತ್ತು ಸಿಬಿಐ ಪೊಲೀಸರ ಕೈ ಕಟ್ಟಿಹಾಕಿದವರು ಯಾರು? ಸೌಜನ್ಯಳ ತಂದೆ ಚಂದಪ್ಪ ಗೌಡರು, ‘ಸಿಬಿಐ ನ್ಯಾಯಾಲಯದಲ್ಲಿ ಮಲ್ಲಿಕ್ ಜೈನ್, ಧೀರಜ್ ಕೆಲ್ಲ ಮತ್ತು ಉದಯ್ ಜೈನ್‌ರನ್ನು ವಿಚಾರಣೆಗೆ ಒಳಪಡಿಸಬೇಕು; ನನಗಿವರ ಮೇಲೆ ಅನುಮಾನವಿದೆ’ ಎಂದು ಹೇಳಿದರೂ ಸಿಬಿಐ ಉದಾಸೀನ ಮಾಡಿತು ಏಕೆ? ಈ ಶಂಕಿತರೆಲ್ಲ ಸಾಮಾಜಿಕ-ರಾಜಕೀಯ ಮತ್ತು ಧಾರ್ಮಿಕ ವಲಯದಲ್ಲಿ ದೇವಮಾನವ ವರ್ಚಸ್ಸು ಹೊಂದಿರುವ ವೀರೇಂದ್ರ ಹೆಗ್ಗಡೆಗೆ ಒಂದಲ್ಲ ಒಂದು ರೀತಿಯಲ್ಲಿ ನಿಕಟವಾಗಿರುವ ಅವರ ಜೈನ ಪರಿವಾರದ ಕುಲಕಂಠೀರವರೆಂದೇ? ಎಂಬಿತ್ಯಾದಿ ಜಿಜ್ಞಾಸೆ ಸಿಬಿಐ ನ್ಯಾಯಾಲಯದ ತೀರ್ಪು ಬಂದ ಮರುಗಳಿಗೆಯಿಂದಲೆ ಸಹಜವಾಗಿಯೇ ಸಾರ್ವಜನಿಕರಲ್ಲಿ ಶುರುವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸಂಸದ ವೀರೇಂದ್ರ ಹೆಗ್ಗಡೆ ಹಸ್ತಕ್ಷೇಪವನ್ನು ಅರೋಪಿಸಿಯೂ ಚರ್ಚೆಗಳು ಭುಗಿಲೆದ್ದವು.

ಆರಂಭದಿಂದಲೂ ಸೌಜನ್ಯ ಸಾವಿಗೆ ನ್ಯಾಯ ಕೊಡಿಸುವ ಹೋರಾಟ ಕಟ್ಟಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತಾಯ್ತಂದೆ, ಪ್ರಾಸಿಕ್ಯೂಶನ್ ವಿರುದ್ದ ವಾದಿಸಿದ್ದ ವಕೀಲರುಗಳು, ಪ್ರಕರಣದ ಲೋಪ-ದೋಷ, ಸಿಬಿಐ-ಸಿಓಡಿ ಮತ್ತು ಲೋಕಲ್ ಪೊಲೀಸರು-ಮರಣೋತ್ತರ ಪರೀಕ್ಷೆ ಮಾಡಿದ್ದ ವೈದ್ಯರು ಅಡಿಗಡಿಗೆ ಸಾಕ್ಷ್ಯ ನಾಶಮಾಡಿದ ಪರಿ, ತನ್ಮೂಲಕ ತನಿಖೆಯ ನಾಟಕವಾಡಿ ಅಸಲಿ ಪಾಪಿಗಳು ಪಾರಾಗಲು ಅವಕಾಶ ಕಲ್ಪಿಸಿದ್ದನ್ನು ಮಾಧ್ಯಮದ ಮೂಲಕ ಜನರ ಮುಂದಿಟ್ಟರು. ವಿವಿಧ ಸಂಘಟನೆಗಳು ಪ್ರಕರಣದ ಮರು ತನಿಖೆ ಆಗಬೇಕೇಂದು ಬೀದಿಗಿಳಿದವು. ಸೌಜನ್ಯ ತಾಯ್ತಂದೆಯಂತೂ, ‘ಈಗಾಗಿರುವುದು ಪಕ್ಕಾ ನಕಲಿ ತನಿಖೆ; ತಕ್ಷಣ ಪ್ರಾಮಾಣಿಕ-ನಿಷ್ಠುರ ಮರುತನಿಖೆ ಆಗಬೇಕು’ ಎಂಬ ಬೇಡಿಕೆ ಮುಂದಿಟ್ಟರು. ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶು ಬೆಳ್ತಂಗಡಿಯಲ್ಲಿ ಓಡಾಡಿ ಸೌಜನ್ಯಳಿ ಪ್ರಕರಣಕ್ಕೆ ನ್ಯಾಯ ಕೊಡಿಸುವ ಗಂಭೀರ ಪ್ರಯತ್ನಕ್ಕೆ ಶುರುವಿಟ್ಟುಕೊಂಡರು. ಮೈಸೂರಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ನಂತರ ಹೋರಾಟದ ಕಿಚ್ಚು ರಾಜ್ಯದಾದ್ಯಂತ ಹಬ್ಬುವ ಲಕ್ಷಣ ಕಾಣತೊಡಗಿದೆ.

ಅನಾಯಾಸವಾಗಿ ಕೋಟಿಕೋಟಿ ರೂ ಹರಿದು ಬರುವ ಧರ್ಮಸ್ಥಳ ದೇವಳದ ಉಸ್ತುವಾರಿ ಪರಿವಾರದ ಯಜಮಾನ ವೀರೇಂದ್ರ ಹೆಗ್ಗಡೆ ಸಹಜವಾಗಿಯೇ ಸಂಶಯದ ಕೇಂದ್ರಬಿಂದುವಾದರು. ಎಲ್ಲೆಲ್ಲೋ ಆಗುವ ಅನ್ಯಾಯ-ಅನಾಚಾರದ ಬಗ್ಗೆ ಸಹಾನುಭೂತಿಯ-ಮಾನವೀತೆಯ ವ್ಯಾಖ್ಯಾನ ಮಾಡುವ “ಖಾವಂದರು” ತಮ್ಮ ನರೆಮನೆಯಲ್ಲೇ ಆಗಿರುವ ದುರಂತದ ಬಗ್ಗೆ ಏಕೆ ದಿವ್ಯ ಮೌನದಲ್ಲಿದ್ದಾರೆ? ದೊಡ್ಡ ಜನಾಂದೋಲನವೇ ಸೌಜನ್ಯಳಿಗಾಗಿ ನಡೆಯುತ್ತಿದ್ದರೂ ಹೆಗ್ಗಡೆಯವರೇಕೆ ಭಾಗವಹಿಸುತ್ತಿಲ್ಲ? ಹೆಗ್ಗಡಯವರೇಕೆ ಇಂದಿಗೂ ಸೌಜನ್ಯಳ ಮನೆಗೆ ಹೋಗಿ ನಾಲ್ಕು ಸಾಂತ್ವನದ ಮಾತಾಡುವ ಮನಸ್ಸು ಮಾಡುತ್ತಿಲ್ಲ? ಸೌಜನ್ಯಳ ಹೆತ್ತವರ ಒಡಲ ಸಂಕಟವೇಕೆ ಹೆಗ್ಗಡೆಯವರಿಗೆ ಅರ್ಥವಾಗುತ್ತಿಲ್ಲ? ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರತೊಡಗಿತು.

ಈ ನಡುವೆ ಧರ್ಮಸ್ಥಳ ಸಂಸ್ಥಾನದಲ್ಲಿ ಭೂಮಿ, ಹೆಣ್ಣು, ಸಂಪತ್ತು ಮತ್ತು ಪಾಳೇಗಾರಿ ಪ್ರತಿಷ್ಠೆಗಾಗಿ ಅತ್ಯಾಚಾರ-ಅನಾಚಾರ-ದೌರ್ಜನ್ಯಗಳು ನಾಲ್ಕೈದು ದಶಕದಿಂದ ನಿರಂತರ-ನಿರಾತಂಕವಾಗಿ ನಡೆಯುತ್ತಿದೆ; ನೂರಾರು ಹೆಣ್ಣುಗಳ ಹೆಣ ನಿಶ್ಯಬ್ದವಾಗಿ ನೇತ್ರಾವತಿ ನದಿಯಲ್ಲಿ ತೇಲಿಹೋಗಿವೆ; ಸೌಜನ್ಯ ಸಾವಿನ ಪೂರ್ವದ 10 ವರ್ಷದಲ್ಲಿ ಧರ್ಮಸ್ಥಳದ ದೇವಸನ್ನಿಧಿಯಲ್ಲಿ 462 ಅಸಹಜ ಸಾವುಗಳಾಗಿವೆ ಎಂದು ಅಧಿಕೃತ ಪೊಲೀಸ್ ದಾಖಲೆಗಳೇ ಹೇಳುತ್ತವೆ. ಇದರಲ್ಲಿ 90ರಷ್ಟು ಹೆಣ್ಣುಮಕ್ಕಳಿದ್ದಾರೆ! ಇದರಲ್ಲಿ ಯಾತ್ರಿಕರು, ಸ್ಥಳೀಯರು ಸೇರಿದ್ದಾರೆ.

ವಿಚಾರವಾದಿ ನರೇಂದ್ರ ನಾಯಕ್ ಧರ್ಮಸ್ಥಳ ಸಂಸ್ಥಾನದ ದೌರ್ಜನ್ಯ-ಅನ್ಯಾಯದ ಬಗೆಗಿನ ಸಂವಾದದಲ್ಲಿ ಸುಮಾರು ಮೂರು ದಶಕದ ಹಿಂದೆ ನಡೆದ ಎರಡು ಮಹಿಳೆಯರ ಹತ್ಯೆ ಸಂಶಯದ ಕಥೆ-ವ್ಯಥೆ ಬಿಚ್ಚಿಟ್ಟಿದ್ದರು! ಧರ್ಮಸ್ಥಳ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಫರ್ಧಿಸದಂತೆ ಕಮ್ಯುನಿಸ್ಟ್ ಮುಂದಾಳಾಗಿದ್ದ ದೇವಾನಂದ ಎನ್ನುವವರಿಗೆ ದೇವಧೂತ ಪರಿವಾರ ತಾಕೀತು ಮಾಡಿತ್ತು. ನಾಸ್ತಿಕನಾದ ಈತ ಪಂಚಾಯ್ತಿ ಮೆಂಬರ್ ಆದರೆ ತೊಂದರೆ ಆಗುತ್ತದೆಂಬ ದೂ(ದು)ರಾಲೋಚನೆ ದೇವಮಾನವ ಪರಿವಾರದಾಗಿತ್ತು ಎಂಬ ಆರೋಪವಿದೆ. ಆ ಮಾರ್ಕ್ಸ್ ವಾದಿ ದೇವದೂತರ ಮಾತಿಗೆ ಸೊಪ್ಪು ಹಾಕಲಿಲ್ಲ. ಮರು ದಿನವೇ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಓದುತ್ತಿದ್ದ ಅವರ ಮಗಳು ಪದ್ಮಲತಾ ನಾಪತ್ತೆಯಾಗುತ್ತಾರೆ. ಸುಮಾರು ಒಂದು ತಿಂಗಳ ಬಳಿಕ ಕೈಗಳನ್ನು ಕಟ್ಟಿದ ಆಕೆಯ ಮೃತದೇಹ ನೇತ್ರಾವತಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಸಿಗುತ್ತದೆ! ತಿಂಗಳಾನುಗಟ್ಟಲೆ ಅತ್ಯಾಚಾರ ನಡೆಸಿ ಕೊನೆಗೆ ಕೊಂದುಹಾಕಲಾಗಿದೆ ಎಂಬ ಮಾತು ಇವತ್ತಿಗೂ ಬೆಳ್ತಂಗಡಿ-ಉಜಿರೆ ಪರಿಸರದಲ್ಲಿ ಕೇಳಿಬರುತ್ತಿದೆ.

ಉಜಿರೆಯಲ್ಲಿ ವೈದ್ಯರಾಗಿದ್ದ ಡಾ.ಹರಳೆ ಎಂಬವರ ಮಡದಿ ವೇದವಲ್ಲಿ ಧರ್ಮಸ್ಥಳ ಸಂಸ್ಥಾನದವರು ನಡೆಸುವ ಹೈಸ್ಕೂಲ್ ಒಂದರಲ್ಲಿ ಶಿಕ್ಷಕಿಯಾಗಿದ್ದರು. ಸೇವಾ ಜ್ಯೇಷ್ಠತೆಯಂತೆ ಅವರಿಗೆ ಮುಖ್ಯೋಪಾಧ್ಯಾಯಿನಿ ಹುದ್ದೆ ಸಿಗುವುದಿತ್ತು. ಅದನ್ನು ಬಿಟ್ಟುಕೊಡುವಂತೆ ಸಂಸ್ಥಾನದ ಮುಖ್ಯ ವ್ಯಕ್ತಿ ಒತ್ತಡ ಹಾಕುತ್ತಿದ್ದನಂತೆ; ತನಗೆ ಬೇಕಾದವರಿಗೆ ಆ ಹುದ್ದೆ ಕೊಡಿಸುವ ಹುನ್ನಾರ ಆತನದಾಗಿತ್ತು. ಆದರೆ ವೇದವಲ್ಲಿ ಅದಕ್ಕೊಪ್ಪಲಿಲ್ಲ. ವೇದವಲ್ಲಿಯನ್ನು ಅವರ ಮನೆಯಲ್ಲೇ ಪೆಟ್ರೋಲ್ ಸರಿದು ಸುಟ್ಟುಹಾಕಲಾಗಿತ್ತು. ಆ ಕೇಸ್ ಮಂಜುನಾಥ ಮತ್ತು ಅಣ್ಣಪ್ಪ ಅರಗಿಸಿಕೊಂಡರೆಂದು ಮಾನವತಾವಾದಿ ನರೇಂದ್ರ ನಾಯಕ್ ಹೇಳುತ್ತಾರೆ. ಈ ಮೂರ್ನಾಲ್ಕು ದಶಕದ ಹಿಂದಿನ ಕ್ರೌರ್ಯ ಕಥನಗಳು ಈಗ ಸೌಜನ್ಯ ಪ್ರಕರಣದೊಂದಿಗೆ ಥಳಕು ಹಾಕಿಕೊಂಡು ಚರ್ಚೆಗಳನ್ನು ಹುಟ್ಟುಹಾಕಿದೆ.

ಸೌಜನ್ಯ ಪ್ರಕರಣದ ನಿಷ್ಠುರ ತನಿಖೆಗಾಗಿ ರಾಜ್ಯದಾದ್ಯಂತ ಹೋರಾಟ ಭುಗಿಲೇಲುತ್ತಿರುವುದರಿಂದ ಸಂಸದ ವೀರೇಂದ್ರ ಹೆಗ್ಗಡೆ ಹತಾಶರಾಗಿದ್ದಾರೆಂದು ಹೋರಾಟಗಾರರು ಹೇಳುತ್ತಾರೆ. ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೊಗಳಿ ಪತ್ರ ಬರೆದಿರುವುದು ಈ ಹೆದರಿಕೆಯ ಭಾಗವಾಗಿಯೇ ನಡೆದಿರುವ ತಂತ್ರಗಾರಿಕೆಯೆಂದು ಹೋರಾಟಗಾರ ತಿಮರೋಡಿ ವ್ಯಾಖ್ಯಾನಿಸುತ್ತಾರೆ. ಒಟ್ಟಿನಲ್ಲಿ ಹೋರಾಟಗಾರರನ್ನು ಬೆದರಿಸುವ ಭಾಷೆ “ದೇವರ” ಬಾಯಿಂದ ಹೊರಬರುತ್ತಿರುವುದು ಸೌಜನ್ಯ ಕೇಸಿನ ಮರುತನಿಖೆಯ ಅನಿವಾರ್ಯತೆ ಹೆಚ್ಚಿಸಿಬಿಟ್ಟಿದೆ.

ಇದನ್ನೂ ಓದಿ: ವೀರೇಂದ್ರ ಹೆಗಡೆ ಬೆಂಬಲಿಗರಿಂದ ಸೌಜನ್ಯ ತಾಯಿ ಮೇಲೆ ಹಲ್ಲೆಗೆ ಯತ್ನ: ದೂರು ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. How many persons are convicted in such cases as a offenders in india..I think almost all cases are same..then why every one are focusing on this only.. what’s the agenda…

LEAVE A REPLY

Please enter your comment!
Please enter your name here

- Advertisment -

SIR: ಚಿಂತಕ ಪರಕಾಲ ಪ್ರಭಾಕರ್‌ಗೆ ಚುನಾವಣಾ ಆಯೋಗದಿಂದ ನೋಟಿಸ್

ಅರ್ಥಶಾಸ್ತ್ರಜ್ಞ, ರಾಜಕೀಯ ವಿಶ್ಲೇಷಕ ಡಾ. ಪರಕಾಲ ಪ್ರಭಾಕರ್ ಅವರಿಗೂ ಈಗ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯಡಿ ಚುನಾವಣಾ ಆಯೋಗದ ನೋಟಿಸ್ ಜಾರಿಯಾಗಿದೆ. ವೋಟರ್ ಐಡಿ ಪರಿಶೀಲನೆಯಲ್ಲಿ ‘Logical Discrepancy’ (ತಾರ್ಕಿಕ ಅಸಂಗತತೆ)...

ಕರ್ನಾಟಕ ಎಸ್‌ಐಆರ್: ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ನೋಟಿಸ್ ನೀಡಿದ ಚುನಾವಣಾ ಆಯೋಗ

ಮಂಗಳೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟ ಸೇವೆಯ ಮೂಲಕ ದೇಶ-ವಿದೇಶಗಳಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ...

SIR ಸೂತ್ರದಿಂದ ಬದಲಾಗುತ್ತಾ ಬೆಂಗಳೂರಿನ 28 ಕ್ಷೇತ್ರಗಳ ಗೆಲುವಿನ ಸಮೀಕರಣ?

ರಾಜ್ಯ ರಾಜಕೀಯದ ಶಕ್ತಿಕೇಂದ್ರವಾದ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಪ್ರಕ್ರಿಯೆಯು ಮಹತ್ವದ ರಾಜಕೀಯ ಮತ್ತು ಆಡಳಿತಾತ್ಮಕ ಚರ್ಚೆಯನ್ನು ಹುಟ್ಟುಹಾಕಿದೆ. ಎಸ್‌ಐಆರ್‌ಗೂ ಮುನ್ನ ನಗರದಲ್ಲಿದ್ದ ಸುಮಾರು 1.03...

ಮಣಿಪುರದಲ್ಲಿ ಹಿಂಸಾಚಾರಕ್ಕೆ 306 ಬಲಿ, 49 ಮಂದಿ ನಾಪತ್ತೆ: ವಿಧಾನಸಭೆಯಲ್ಲಿ ಗೃಹ ಸಚಿವರ ಸ್ಪಷ್ಟನೆ

ಇಂಫಾಲ್: ಮಣಿಪುರದಲ್ಲಿ 2023ರ ಮೇ ತಿಂಗಳಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರಕ್ಕೆ ಮೂರು ವರ್ಷಗಳಿಗೂ ಹೆಚ್ಚು ಕಾಲ ಕಳೆದಿದ್ದರೂ, ಅದರ ಪರಿಣಾಮದಿಂದ ರಾಜ್ಯ ಸಂಪೂರ್ಣವಾಗಿ ಹೊರಬಂದಿಲ್ಲ. ಹಿಂಸಾಚಾರ ಆರಂಭವಾದ ಬಳಿಕ ಇದುವರೆಗೆ ಕನಿಷ್ಠ 306...

ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ನಿಧಿ ದುರ್ಬಳಕೆ; ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷದ ಸಿ.ಸಿ. ರಸ್ತೆ ನಿರ್ಮಾಣ!

ಸಮಾಜ ಕಲ್ಯಾಣ ಇಲಾಖೆಯ 'ಪ್ರಗತಿ ಕಾಲೋನಿ' ಯೋಜನೆಯ ನಿಧಿ ದುರ್ಬಳಕೆಯಾಗಿರುವ ಆರೋಪ ಕೇಳಿಬಂದಿದ್ದು, ಜನವಸತಿಯೇ ಇಲ್ಲದ ಜಾಗದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಿರುವ ಪ್ರಕರಣ ಬೆಂಗಳೂರು...

SIR: ‘ಚುನಾವಣಾ ಆಯೋಗದಿಂದ ನೋಟಿಸ್‌’ ಇಲ್ಲದಿರುವ ದಾಖಲೆಗಳನ್ನು ಎಲ್ಲಿಂದಾ ತರೋದು? ಸಾರ್ವಜನಿಕರ ಪ್ರಶ್ನೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'Logical Discrepancy' (ತಾರ್ಕಿಕ ವ್ಯತ್ಯಾಸ) ಎಂಬ ಸಾಫ್ಟ್‌ವೇರ್ ಆಧಾರಿತ ಪರಿಶೀಲನೆಯು ತಾಂತ್ರಿಕವಾಗಿ ದೋಷರಹಿತವೆಂದು ತೋರಿದರೂ, ವಾಸ್ತವದಲ್ಲಿ ಲಕ್ಷಾಂತರ ನೈಜ...

SIR ರಗಳೆ: ಕೊನೆಗೂ 43.81 ಲಕ್ಷ ಮತದಾರರ ನೋಟಿಸ್ ಪಟ್ಟಿ ಬಹಿರಂಗಪಡಿಸಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗೆ ಗುರಿಯಾಗಿರುವ 43.81 ಲಕ್ಷ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಕೊನೆಗೂ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ...

‘ಆರ್‌ಎಸ್‌ಎಸ್‌ ಅಡಗಿಕೊಂಡಿದೆ’: ಮೋಹನ್ ಭಾಗವತ್‌ ಯುಕೆ ಭೇಟಿ ವಿರೋಧಿಸಿ ಲಂಡನ್‌ನಲ್ಲಿ ಪ್ರತಿಭಟನೆ

ಲಂಡನ್: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ಯುನೈಟೆಡ್ ಕಿಂಗ್‌ಡಮ್‌ ಭೇಟಿಯನ್ನು ವಿರೋಧಿಸಿ ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ. ಭಾಗವತ್ ಅವರ ಯುಕೆ ಪ್ರವಾಸದ...

ಪಂಚಾಯಿತಿಯಲ್ಲಿ ಅಸ್ಪೃಶ್ಯತೆ ಆಚರಣೆ-ಪ್ರತ್ಯೇಕ ಟೀ ಲೋಟ; ಆತ್ಮಹತ್ಯೆಗೆ ಯತ್ನಿಸಿದ ಪೌರಕಾರ್ಮಿಕ ಮಹಿಳೆ

ಕೆಲಸದ ಸ್ಥಳದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಆಚರಣೆಯಿಂದ ಮನನೊಂದ 37 ವರ್ಷದ ದಲಿತ ನೈರ್ಮಲ್ಯ ಕಾರ್ಮಿಕರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಮೇಲೂರು ಸಮೀಪದ ಕಂಬೂರ್ ಪಂಚಾಯತ್‌ನಲ್ಲಿ ಬೆಳಕಿಗೆ ಬಂದಿದೆ. ...

ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

"ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ...