ಬಿಜೆಪಿ ಆಡಳಿತದಲ್ಲಿ ನಡೆದಿರುವ ಹಲವು ಅಕ್ರಮಗಳ ಕುರಿತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿ ಹೇಳಿರುವುದನ್ನು ಉಲ್ಲೇಖಿಸಿ, ಪ್ರಧಾನಿ ನರೇಂದ್ರ ಮೋದಿಯವರು ಯಾಕೆ ಮೌನವಾಗಿದ್ದಾರೆ ಎಂದು ಕಾಂಗ್ರೆಸ್ ಬುಧವಾರ ತರಾಟೆ ತಗೆದುಕೊಂಡಿದೆ.
ನೂರಾರು ಕೋಟಿ ಮೊತ್ತದ ಏಳು ಹಗರಣಗಳಲ್ಲಿ ಮೋದಿ ಸರ್ಕಾರ ಭಾಗಿಯಾಗಿದೆ ಎಂದು ವಿರೋಧ ಪಕ್ಷ ಆರೋಪಿಸಿದೆ.
ಭಾರತ್ಮಾಲಾ ಯೋಜನೆಯಲ್ಲಿನ ಅಕ್ರಮಗಳಗಳ ಬಗ್ಗೆ ಸಿಎಜಿ ನೀಡಿದ ವರದಿಯನ್ನು ಎತ್ತಿ ತೋರಿಸಿರುವ ಕಾಂಗ್ರೆಸ್, ದ್ವಾರಕಾ ಎಕ್ಸ್ಪ್ರೆಸ್ವೇ ನಿರ್ಮಾಣ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಟೋಲ್ ನಿಯಮಗಳ ಉಲ್ಲಂಘನೆ, ಆಯುಷ್ಮಾನ್ ಭಾರತ್ ಯೋಜನೆ ಮತ್ತು ಅಯೋಧ್ಯೆ ಅಭಿವೃದ್ಧಿ ಯೋಜನೆಯಲ್ಲಿ ಗುತ್ತಿಗೆದಾರರಿಗೆ ಅನಗತ್ಯ ಲಾಭ ಮಾಡಲಾಗಿದೆ ಎಂದು ಆರೋಪಿಸಿದೆ.
मोदी सरकार के 7 बड़े घोटालों का CAG ने किया खुलासा-
1. भारतमाला प्रोजेक्ट की बिडिंग में फर्जीवाड़ा
2. द्वारका एक्सप्रेस-वे में 1 किमी. सड़क बनाने में 250 करोड़ खर्च
3. टोल नियमों का उल्लंघन कर NHAI ने जनता से वसूले 132 करोड़
4. आयुष्मान भारत योजना के 7.5 लाख लाभार्थी एक ही नंबर… pic.twitter.com/jd5cseTv9S— Congress (@INCIndia) August 16, 2023
”ಸಿಎಜಿ ನಿಮ್ಮ ಮೂಗಿನ ನೇರಕ್ಕೆ ಬಯಲಿಗೆಳೆಯುತ್ತಿರುವ ಹಗರಣಗಳ ಬಗ್ಗೆ ನೀವು [ಮೋದಿ] ಮೌನ ಮುರಿಯುತ್ತೀರಾ?” ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ಪ್ರಶ್ನಿಸಿದ್ದಾರೆ.
”ನೀವು CCEA [ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ] ಅಧ್ಯಕ್ಷರಾಗಿರುವಿರಿ, ನೀವು ಭಾರತಮಾಲಾ ಯೋಜನೆಯ ಬಗ್ಗೆ ನಿಮ್ಮ ಬಾಯಿ ಮುಚ್ಚಿಕೊಂಡಿದ್ದೀರಾ ಏಕೆ? ಅಲ್ಲಿ ನಿರ್ಮಾಣ ವೆಚ್ಚವು ಕಿಮೀಗೆ 15.37 ಕೋಟಿಯಿಂದ 32 ಕೋಟಿಗೆ ದ್ವಿಗುಣಗೊಂಡಿದೆ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರದ ಪ್ರಮುಖ ರಸ್ತೆ ಅಭಿವೃದ್ಧಿ ಯೋಜನೆಯಾದ ಭಾರತಮಾಲಾ ಯೋಜನೆಯಲ್ಲಿ, ಟೆಂಡರ್ ಪ್ರಕ್ರಿಯೆಯೂ ದೋಷಪೂರಿತವಾಗಿದೆ ಎಂದು ಶ್ರೀನಾಟೆ ಆರೋಪಿಸಿದರು.
देश में मोदी विरोधी एक संस्था है। यह इंटरनेशनल साजिश में शामिल है। इस संस्था का नाम है- CAG
इस संस्था ने मोदी सरकार के 7 बड़े घोटालों का पर्दाफाश किया है।
मोदी जी को तत्काल इस संस्था पर ताला लगवाना चाहिए और रिपोर्ट निकालने वालों को जेल भेजने का काम करना चाहिए।… pic.twitter.com/JYVAd05fV3
— Congress (@INCIndia) August 16, 2023
”ಸಲ್ಲಿಕೆಯಾದ ವಿವರವಾದ ಯೋಜನಾ ವರದಿ ಇಲ್ಲ.. ಎಸ್ಕ್ರೊ ಖಾತೆಯಿಂದ 3,500 ಕೋಟಿ ರೂಪಾಯಿಗಳ ಹಣವನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಸುರಕ್ಷತಾ ಸಲಹೆಗಾರರನ್ನು ನೇಮಿಸಲಾಗಿಲ್ಲ” ಎಂದು ಹೇಳಿದ್ದಾರೆ.
ದೆಹಲಿ-ಗುರುಗ್ರಾಮ್ ಗಡಿಯಲ್ಲಿನ ದ್ವಾರಕಾ ಎಕ್ಸ್ಪ್ರೆಸ್ವೇ ಯೋಜನೆಯಲ್ಲಿ ಅಕ್ರಮಗಳು ನಡೆದಿವೆ. CCEA ಅನುಮೋದನೆ ಮಾಡಿದ ಪ್ರತಿ ಕಿಮೀ ವೆಚ್ಚ 18.20 ಕೋಟಿ ವೆಚ್ಚಕ್ಕೆ ಬದಲಾಗಿ ಎಕ್ಸ್ಪ್ರೆಸ್ವೇ ನ್ನು ಪ್ರತಿ ಕಿಮೀಗೆ 250.77 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಅವರು ಆರೋಪಿಸಿದರು.
PM मोदी से हमारे सवाल :
• PM मोदी घोटालों पर चुप्पी तोड़ेंगे या नहीं?
• क्या सड़क परिवहन और राजमार्ग मंत्रालय और मंत्री पर कोई कार्रवाई होगी?
• आयुष्मान भारत के लाभार्थियों का पैसा किसने गबन किया?
• ग्रामीण विकास मंत्रालय ने पेंशन स्कीम का पैसा अन्य योजनाओं के प्रचार में… pic.twitter.com/Jr2GIXyo55— Congress (@INCIndia) August 16, 2023
ಸಿಎಜಿಯ ಎಕ್ಸ್ಪ್ರೆಸ್ವೇಯ ಆಡಿಟ್ ವರದಿಯಲ್ಲಿ, ಭಾರತ ಮಾಲಾ ಪರಿಯೋಜನಾ ಹಂತ-1 ರ ಅಡಿಯಲ್ಲಿ ನಿರ್ಮಿಸಲಾದ ದ್ವಾರಕಾ ಹೆದ್ದಾರಿಯ ವೆಚ್ಚವು 2017ರಲ್ಲಿ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಅನುಮೋದಿಸಿದ ಮೊತ್ತವನ್ನು 14 ಪಟ್ಟು ಮೀರಿದೆ ಎಂದು ತಿಳಿಸಿದೆ.
”500 ಕೋಟಿ ರೂ. ವೆಚ್ಚದಲ್ಲಿ ಮಂಗಳಯಾನ [ಮಾರ್ಸ್ ಆರ್ಬಿಟರ್ ಮಿಷನ್] ಹೋಗಬಹುದಿತ್ತು… NHAIನ [ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ] ಐದು ಟೋಲ್ ಪ್ಲಾಜಾಗಳನ್ನು ಮಾತ್ರ ಆಡಿಟ್ ಮಾಡಿದಾಗ ದೇಶದ ಸಾಮಾನ್ಯ ನಾಗರಿಕರನ್ನು 132 ಕೋಟಿ ರೂಪಾಯಿ ಲೂಟಿ ಮಾಡಿರುವುದು ಗೊತ್ತಾಗಿದೆ. ಒಂದು ವೇಳೆ ಇಡೀ ದೇಶದ ಪ್ರತಿಯೊಂದು ಟೋಲ್ ಪ್ಲಾಜಾವನ್ನು ಲೆಕ್ಕಪರಿಶೋಧನೆ ಮಾಡಿದರೆ, ಈ ಹಗರಣದ ಮೊತ್ತ ಎಷ್ಟಾಗಬಹುದು?” ಎಂದು ಶ್ರೀನಾಟೆ ಪ್ರಶ್ನೆ ಮಾಡಿದ್ದಾರೆ.
ಇನ್ನು ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಲ್ಲಿ ಸುಮಾರು 7.5 ಲಕ್ಷ ಫಲಾನುಭವಿಗಳು ಒಂದೇ ಸೆಲ್ಫೋನ್ ಸಂಖ್ಯೆ – 9999999999 ಅಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿ ಹೇಳಿರುವುದನ್ನು ಕಾಂಗ್ರೆಸ್ ಉಲ್ಲೇಖಿಸಿದೆ.
ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು ಬಡ ಜನರಿಗೆ ಆರೋಗ್ಯ ವಿಮೆಗಾಗಿ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದೆ.
”ಏಳೂವರೆ ಲಕ್ಷ ಫಲಾನುಭವಿಗಳು, ಒಂದು ಫೋನ್ ಸಂಖ್ಯೆಯೊಂದಿಗೆ ನೋಂದಾಯಿಸಲಾಗಿದೆ, ಆದರೆ ಅಷ್ಟೆ ಅಲ್ಲ, ಸಾವನ್ನಪ್ಪಿದ 88,000ಕ್ಕೂ ಹೆಚ್ಚು ಜನರಿಗೂ ಹಣ ನೀಡಲಾಗಿದೆ. ಹಾಗಾದರೆ ಆ ಹಣ ಯಾರಿಗೆ ಹೋಗಿದೆ..? ಇದೊಂದು ದೊಡ್ಡ ಪ್ರಶ್ನೆಯಾಗಿದೆ” ಎಂದು ಶ್ರೀನಾಟೆ ಹೇಳಿದ್ದಾರೆ.
ಇದನ್ನೂ ಓದಿ: ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಬೃಹತ್ ಹಗರಣ: ಸಿಎಜಿ ವರದಿಯಲ್ಲಿ ಬಹಿರಂಗ
ಉತ್ತರ ಪ್ರದೇಶದ ಅಯೋಧ್ಯೆ ಅಭಿವೃದ್ಧಿ ಯೋಜನೆಯಲ್ಲಿನ ಅಕ್ರಮಗಳ ಬಗ್ಗೆ ಹೇಳುವುದಾದರೆ ಅಲ್ಲಿ ನೋಂದಾಯಿತವಲ್ಲದ ಗುತ್ತಿಗೆದಾರರಿಗೆ ಹಣವನ್ನು ನೀಡಲಾಗಿದೆ ಎಂದು ಹೇಳಿದೆ.
”ನೋಂದಣಿ ಮಾಡದ ಗುತ್ತಿಗೆದಾರರಿಗೆ ಹಣವನ್ನು ನೀಡಲಾಗಿದೆ. ಆ ಜನರು ಯಾರು? ಅವರು ಏನು ಮಾಡುತ್ತಿದ್ದಾರೆ? ಟೆಂಡರ್ ಪ್ರಕ್ರಿಯೆಯು ದೋಷಪೂರಿತವಾಗಿದ್ದು ಹೇಗೆ?” ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯವು 19 ರಾಜ್ಯಗಳಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಪ್ರಚಾರ ಮಾಡುವ ಹೋರ್ಡಿಂಗ್ಗಳನ್ನು ಹಾಕಲು ಬಡವರು, ದೈಹಿಕವಾಗಿ ಅಂಗವಿಕಲರು, ವಿಧವೆಯರು ಮತ್ತು ಹಿರಿಯ ನಾಗರಿಕರಿಗೆ ಪಿಂಚಣಿ ಹಣವನ್ನು ಬಳಸಲಾಗಿದೆ ಎಂದು ಶ್ರೀನಾಟೆ ಹೇಳಿದ್ದಾರೆ.
”ದೋಷಪೂರಿತ ಎಂಜಿನ್ ವಿನ್ಯಾಸಕ್ಕಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅನ್ನು ಸಹ ಎಳೆಯಲಾಗಿದೆ, ಇದು ಸುಮಾರು 154 ಕೋಟಿ ರೂಪಾಯಿಗಳ ನಷ್ಟಕ್ಕೆ ಕಾರಣವಾಗಿದೆ” ಎಂದು ಅವರು ಹೇಳಿದರು.
”ಇದು ಬೊಕ್ಕಸವನ್ನು ಲೂಟಿ ಮಾಡುತ್ತಿದೆ; ಇದು ಭಾರತದ ಜನರನ್ನು ಲೂಟಿ ಮಾಡುತ್ತಿದೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಆದರೆ ಕ್ರಮ ಕೈಗೊಳ್ಳುವ ಮೊದಲು, ಪ್ರಧಾನಿಯವರು ಈ ದೇಶಕ್ಕೆ ಹೇಳಬೇಕಾಗಿದೆ, ಬಡವರಿಗೆ, ದೈಹಿಕವಾಗಿ ವಿಕಲಚೇತನರಿಗೆ, ವೃದ್ಧರಿಗೆ ಮತ್ತು ವಿಧವೆಯರಿಗೆ ಉದ್ದೇಶಿಸಲಾದ ಯೋಜನೆಗಳ ಹಣವನ್ನು ಅನಗತ್ಯವಾಗಿ ಬಳಸಲು ಏಕೆ ಅನುಮತಿಸುತ್ತಿದ್ದಾರೆ?” ಎನ್ನುವುದನ್ನು ಎಂದು ಪ್ರಧಾನಿಗೆ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಟೆ ತರಾಟೆ ತೆಗೆದುಕೊಮಡಿದ್ದಾರೆ.